Homeಅಂಕಣಗಳುಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

ಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

- Advertisement -
- Advertisement -

ಸದನದಲ್ಲಿ ಕುಮಾರಣ್ಣನ ಕೂಗಾಟ ನೋಡಿದ ಕರ್ನಾಟಕದ ಜನ ಲೊಚಗರಿದು ಈ ಮಟ್ಟಕ್ಕೆ ಇಳಿಯಿತೇ ಕರ್ನಾಟಕದ ಸಂಸ್ಕೃತಿಯ ಪ್ರತೀಕವಾದ ವಿಧಾನಸೌಧದ ವಾಗ್ವಾದ ಎಂದು ಉದ್ಘಾರ ತೆಗೆದಿದ್ದಾರಲ್ಲಾ. ಕುಮಾರಣ್ಣ ಕೆರಳಿರವುದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಅವರ ಪರಮವೈರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದದು. ಎರಡನೆಯದು ತಮ್ಮ ಅಭಿಮಾನಿಗಳಂತಿದ್ದ ನಾಲ್ಕು ಜನ ಹಿಂಬಾಲಕರು ಈಗ ಸಿದ್ದು ಜೊತೆ ಇರುವುದಲ್ಲದೆ, ಅದರಲ್ಲೊಬ್ಬರು ಕೃಷಿಮಂತ್ರಿಯಾಗಿರುವುದು. ಸಾಮಾನ್ಯ ವ್ಯಕ್ತಿಯಾದ ಕುಮಾರಣ್ಣನಿಗೆ ಇಂತಹ ಅನಾಹುತಗಳನ್ನು ಸಹಿಸಲು ಸಾಧ್ಯವೇ? ಹಾಗಾಗಿ ಆ ಕೃಷಿಮಂತ್ರಿಯ ಕ್ಷೇತ್ರಕ್ಕೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರನ ಸಮಸ್ಯೆಯನ್ನು ಕೈಗೆತ್ತಿಕೊಂಡು ಏನಾದರೂ ಮಾಡಿ ಚಲುವರಾಯಸ್ವಾಮಿ ರಾಜೀನಾಮೆ ಕೊಡಿಸಲು ಯತ್ನಿಸಿದರು. ಆದರೇನು ಇಡೀ ಸದನವೇ ಕುಮಾರಣ್ಣನ ಎದುರು ತಿರುಗಿಬಿದ್ದಾಗ ವಿಧಾನಸಭೆಯ ಗಲಭೆ ಕಲಾಸಿಪಾಳ್ಯದ ಗಲಭೆ ರೂಪ ಪಡೆದುಕೊಂಡಾಗ, ಇನ್ನೂ ಕೆರಳಿದ ಕುಮಾರಣ್ಣ ವಿಧಾನಸೌಧ ನಿಮ್ಮಪ್ಪನದ್ದಲ್ಲ ಎಂದು ಅಬ್ಬರಿಸಿದರಂತಲ್ಲಾ, ಥೂತ್ತೇರಿ.

*****

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಣ್ಣನನ್ನು ನಾವು ಸಾಮಾನ್ಯರೆಂದು ಕರೆದುದಕ್ಕೆ ಸ್ಪಷ್ಟನೆ ಕೊಡಬೇಡವೇ! ಮುಖ್ಯವಾಗಿ ಕುಮಾರಣ್ಣ ದೇವೇಗೌಡರ ನಾಲ್ವರು ಮಕ್ಕಳಲ್ಲೊಬ್ಬರು. ವಿದ್ವತ್ತಿನಲ್ಲಿ ಸಾಮಾನ್ಯ ವ್ಯಕ್ತಿ. ಆಡುವ ಮಾತಿನ ಮತ್ತು ಭಾಷಣ ಬಳಕೆ ವಿಷಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ. ಏಕೆಂದರೆ ಅವರ ಮಾತು ಭಾಷಣ ಇತ್ಯಾದಿಗಳಲ್ಲಿ ಕೇವಲ ನಲವತ್ತೈದು ಪದಗಳೇ ಸುತ್ತುತ್ತವೆ. ಈ ಸಾಮಾನ್ಯತನ ಸಮಸ್ಯೆ ಅಲ್ಲವಾದರೂ, ಅವರ ಸುತ್ತ ಸಾಮಾನ್ಯವಾಗಿರುತ್ತಿದ್ದ ಗೆಳೆಯರು ಇವತ್ತು ಯಾರೂ ಅವರ ಬಳಿ ಇಲ್ಲ. ಎಲ್ಲಾ ಹೊರಟುಹೋಗುತ್ತಿದ್ದಾರೆ. ಇಂತಹ ಹತಾಶೆಯ ಸಮಯದಲ್ಲಿ, ತಮ್ಮ ವೈರಿಗಳೆಂದುಕೊಂಡವರು ಈಗ ಅಧಿಕಾರದ ಕುರ್ಚಿ ಮೇಲೆ ಕುಳಿತುಕೊಂಡಿರುವುದು ಸಹಿಸಲಸಾಧ್ಯ ಸಂಗತಿಯಾಗಿಹೋಗಿದೆ. ಇಂತಹ ಸಮಯದಲ್ಲಿ ಕುಮಾರಣ್ಣ ಕೆರಳಿ ಕೆಂಡವಾಗುವುದರ ಬದಲು ಸನ್ನಿವೇಶ ನಿಭಾಯಿಸುವ ಚಾಣಾಕ್ಷತೆ ತೋರಬೇಕಾಗಿದೆಯಲ್ಲಾ, ಥೂತ್ತೇರಿ.

*****

ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಕಟ್ಟಿಸಿದ ವಿಧಾನಸೌಧಕ್ಕೆ ಮೆರಗು ಬರಬೇಕಾದರೆ ಅಲ್ಲಿ ಸಾರ್ವಜನಿಕವಾಗಿ ಶಾಸಕರು ಆಡುವ ಎಲ್ಲ ಮಾತನ್ನೂ ಕೇಳುವಂತಿರಬೇಕು ಮತ್ತು ಅದು ತಿಳಿವಳಿಕೆಯಿಂದ ಕೂಡಿರಬೇಕು. ಅಲ್ಲಿ ನಡೆದ ಚರ್ಚೆಯ ಇತಿಹಾಸ ನೋಡಿದರೆ ಮಾನ್ಯ ದೇವೇಗೌಡರು ಅರಸು ಎದುರು ಸಮರ್ಥವಾಗಿ ವಿರೋಧಪಕ್ಷದ ಕೆಲಸ ನಿರ್ವಹಿಸಿದ ದಾಖಲೆ ಸಿಗುತ್ತದೆ. ಅವರೆಂದೂ ಹಗುರ ಭಾಷೆ ಬಳಸಿದವರಲ್ಲ. ಕುಮಾರಣ್ಣ ಹಳೆಯ ದಾಖಲೆಗಳನ್ನ ವಿಧಾನಸೌಧದ ಲೈಬ್ರರಿಯಲ್ಲಿ ಹುಡುಕಿ ಓದಿದರೆ, ಈ ವಿಧಾನಸೌಧ ನಮ್ಮಪ್ಪುಂದೂ ಅಲ್ಲ, ನಿಮ್ಮಪ್ಪುಂದೂ ಅಲ್ಲ ಎಂಬ ಮಾತು ಹೊರಬರಲಾರದಂತಲ್ಲಾ, ಥೂತ್ತೇರಿ.

*****

ವಿಧಾನಸೌಧದ ಒಳಗೆ ಒಂಥರದ ಗಲಭೆ ನಡೆದಿದ್ದರೆ ಹೊರಗಿನ ಗಲಭೆ ತುಂಬ ಅವ್ಯಕ್ತವಾಗಿದೆಯಂತಲ್ಲಾ. ಮುಖ್ಯವಾಗಿ ಹೊಸ ಸರಕಾರ ನೇಮಿಸಲಿರುವ ಅಕಾಡೆಮಿಗಳು, ನಿಗಮ ಮಂಡಲಿಗಳ ಕುರ್ಚಿಯ ಮೇಲೆ ಕೂರುವ ಸಂಚು ನಡೆಸಿರುವ ಜನ, ಅದರಲ್ಲೂ ಸಾಹಿತ್ಯ, ನಾಟಕ, ಪತ್ರಿಕಾ ಅಕಾಡೆಮಿಗಳನ್ನು ಕುರಿತು ಯೋಚಿಸಿರುವ ಜನರಲ್ಲಿ ಇದು ಕಾಣುತ್ತಿದೆಯಂತಲ್ಲ. ಮಂತ್ರಿ ಶಾಸಕರಿಗೆ ಮುತ್ತಿಕೊಂಡಿರುವುದಲ್ಲದೆ ಪ್ರಭಾವಿಗಳು ಮುಖ್ಯಮಂತ್ರಿ ಕಣ್ಣಿಗೆ ಬೀಳಲು ಹರಸಾಹಸ ಪಡುತ್ತಿರುವುದನ್ನು ನೋಡಿದರೆ ಸಾಮಾನ್ಯರಿಗೆ ಕನಿಕರವಾಗುತ್ತಿದೆಯಂತಲ್ಲಾ. ಏಕೆಂದರೆ ಈ ಮೇಧಾವಿಗಳು ಬಿಜೆಪಿ ಸರಕಾರದಲ್ಲಿ ಇದ್ದಾರೊ ಇಲ್ಲವೊ ಎಂಬಂತೆ ಅವಿತುಕೊಂಡಿದ್ದರು. ಬಿಜೆಪಿಗಳು ನೇರವಾಗಿ ಮುಸ್ಲಿಂ ಸಂಸ್ಕೃತಿ ಮೇಲೆ ದಾಳಿ ಮಾಡಿದಾಗ ಪಠ್ಯಪುಸ್ತಕವನ್ನು ತಿದ್ದಿದಾಗ ಮನೆಯೊಳಗಿದ್ದವರು, ಯಾವತ್ತು ಕಾಂಗ್ರೆಸ್ ಅಧಿಕಾರ ಹಿಡಿಯಿತೊ ಆ ಕೂಡಲೇ ವಿಧಾನಸೌಧದ ಕಾರಿಡಾರಿನಲ್ಲಿ ಸುತ್ತುತ್ತಿರುವುದಲ್ಲದೆ ಬಿಜೆಪಿ ಕಾಲದ ಅನಾಹುತಗಳನ್ನು ದನಿ ಎತ್ತರಿಸಿ ಚರ್ಚಿಸುತ್ತಿದ್ದಾರಲ್ಲಾ, ಥೂತ್ತೇರಿ.

*****

ಸರಕಾರ ಈಗ ಮಾಡಬೇಕಾದದ್ದು ಇಷ್ಟೆ. ಈ ಅಕಾಡೆಮಿ ನಿಗಮಮಂಡಲಿಗಳ ನೇಮಕ ನಿಧಾನವಾಗಿ ಆಗಲಿ ಎಂದು ನಿರ್ಧರಿಸುವುದು; ಇವುಗಳಿಗೆ ನೇಮಕ ತಡವಾಗುವುದರಿಂದ ಯಾವ ಅನಾಹುತಗಳೇನೂ ಸಂಭವಿಸುವುದಿಲ್ಲ. ಆ ಸಮಯದಲ್ಲಿ ಕೋಮುವಾದಿ ಸರಕಾರ ಸೃಷ್ಟಿಸಿದ ಸಮಸ್ಯೆಗಳು ಮತ್ತು ದುರಂತಗಳ ವಿರದ್ಧ ಬರೆದವರು, ಪ್ರತಿಭಟಿಸಿದವರು, ಜಾಥ ತೆಗೆದವರು ಇತ್ಯಾದಿ ಜನಗಳ ಇತಿಹಾಸ ತೆಗೆದರೆ ಯೋಗ್ಯರು ಸಿಗಬಹುದು. ಈ ಹಿಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಸ್ಥಾನಮಾನ ಪಡೆದ ಕಾರಣಕ್ಕಾಗಿಯಾದರು ಕೋಮುವಾದ ಮತ್ತು ದ್ವೇಷದ ವಾತಾವರಣದ ವಿರುದ್ಧ ಹೋರಾಡದೆ, ಹೊಟ್ಟೆತುಂಬ ಕುಡಿದುಕೊಂಡು ಕಾಲಹಾಕಿದವರು ಈಗಲೂ ವಿಧಾನಸೌಧದ ಕಾರಿಡಾರಿನಲ್ಲಿ ಹೊಸವೇಶದೊಂದಿಗೆ ಪ್ರತ್ಯಕ್ಷವಾಗಿವೆಯಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮೋದಿಗೂ ಅರ್ಜುನನಿಗೂ ಯಾವ ಸಂಬಂಧ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...