Homeಅಂಕಣಗಳುಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

ಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

- Advertisement -
- Advertisement -

ಸದನದಲ್ಲಿ ಕುಮಾರಣ್ಣನ ಕೂಗಾಟ ನೋಡಿದ ಕರ್ನಾಟಕದ ಜನ ಲೊಚಗರಿದು ಈ ಮಟ್ಟಕ್ಕೆ ಇಳಿಯಿತೇ ಕರ್ನಾಟಕದ ಸಂಸ್ಕೃತಿಯ ಪ್ರತೀಕವಾದ ವಿಧಾನಸೌಧದ ವಾಗ್ವಾದ ಎಂದು ಉದ್ಘಾರ ತೆಗೆದಿದ್ದಾರಲ್ಲಾ. ಕುಮಾರಣ್ಣ ಕೆರಳಿರವುದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಅವರ ಪರಮವೈರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದದು. ಎರಡನೆಯದು ತಮ್ಮ ಅಭಿಮಾನಿಗಳಂತಿದ್ದ ನಾಲ್ಕು ಜನ ಹಿಂಬಾಲಕರು ಈಗ ಸಿದ್ದು ಜೊತೆ ಇರುವುದಲ್ಲದೆ, ಅದರಲ್ಲೊಬ್ಬರು ಕೃಷಿಮಂತ್ರಿಯಾಗಿರುವುದು. ಸಾಮಾನ್ಯ ವ್ಯಕ್ತಿಯಾದ ಕುಮಾರಣ್ಣನಿಗೆ ಇಂತಹ ಅನಾಹುತಗಳನ್ನು ಸಹಿಸಲು ಸಾಧ್ಯವೇ? ಹಾಗಾಗಿ ಆ ಕೃಷಿಮಂತ್ರಿಯ ಕ್ಷೇತ್ರಕ್ಕೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರನ ಸಮಸ್ಯೆಯನ್ನು ಕೈಗೆತ್ತಿಕೊಂಡು ಏನಾದರೂ ಮಾಡಿ ಚಲುವರಾಯಸ್ವಾಮಿ ರಾಜೀನಾಮೆ ಕೊಡಿಸಲು ಯತ್ನಿಸಿದರು. ಆದರೇನು ಇಡೀ ಸದನವೇ ಕುಮಾರಣ್ಣನ ಎದುರು ತಿರುಗಿಬಿದ್ದಾಗ ವಿಧಾನಸಭೆಯ ಗಲಭೆ ಕಲಾಸಿಪಾಳ್ಯದ ಗಲಭೆ ರೂಪ ಪಡೆದುಕೊಂಡಾಗ, ಇನ್ನೂ ಕೆರಳಿದ ಕುಮಾರಣ್ಣ ವಿಧಾನಸೌಧ ನಿಮ್ಮಪ್ಪನದ್ದಲ್ಲ ಎಂದು ಅಬ್ಬರಿಸಿದರಂತಲ್ಲಾ, ಥೂತ್ತೇರಿ.

*****

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಣ್ಣನನ್ನು ನಾವು ಸಾಮಾನ್ಯರೆಂದು ಕರೆದುದಕ್ಕೆ ಸ್ಪಷ್ಟನೆ ಕೊಡಬೇಡವೇ! ಮುಖ್ಯವಾಗಿ ಕುಮಾರಣ್ಣ ದೇವೇಗೌಡರ ನಾಲ್ವರು ಮಕ್ಕಳಲ್ಲೊಬ್ಬರು. ವಿದ್ವತ್ತಿನಲ್ಲಿ ಸಾಮಾನ್ಯ ವ್ಯಕ್ತಿ. ಆಡುವ ಮಾತಿನ ಮತ್ತು ಭಾಷಣ ಬಳಕೆ ವಿಷಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ. ಏಕೆಂದರೆ ಅವರ ಮಾತು ಭಾಷಣ ಇತ್ಯಾದಿಗಳಲ್ಲಿ ಕೇವಲ ನಲವತ್ತೈದು ಪದಗಳೇ ಸುತ್ತುತ್ತವೆ. ಈ ಸಾಮಾನ್ಯತನ ಸಮಸ್ಯೆ ಅಲ್ಲವಾದರೂ, ಅವರ ಸುತ್ತ ಸಾಮಾನ್ಯವಾಗಿರುತ್ತಿದ್ದ ಗೆಳೆಯರು ಇವತ್ತು ಯಾರೂ ಅವರ ಬಳಿ ಇಲ್ಲ. ಎಲ್ಲಾ ಹೊರಟುಹೋಗುತ್ತಿದ್ದಾರೆ. ಇಂತಹ ಹತಾಶೆಯ ಸಮಯದಲ್ಲಿ, ತಮ್ಮ ವೈರಿಗಳೆಂದುಕೊಂಡವರು ಈಗ ಅಧಿಕಾರದ ಕುರ್ಚಿ ಮೇಲೆ ಕುಳಿತುಕೊಂಡಿರುವುದು ಸಹಿಸಲಸಾಧ್ಯ ಸಂಗತಿಯಾಗಿಹೋಗಿದೆ. ಇಂತಹ ಸಮಯದಲ್ಲಿ ಕುಮಾರಣ್ಣ ಕೆರಳಿ ಕೆಂಡವಾಗುವುದರ ಬದಲು ಸನ್ನಿವೇಶ ನಿಭಾಯಿಸುವ ಚಾಣಾಕ್ಷತೆ ತೋರಬೇಕಾಗಿದೆಯಲ್ಲಾ, ಥೂತ್ತೇರಿ.

*****

ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಕಟ್ಟಿಸಿದ ವಿಧಾನಸೌಧಕ್ಕೆ ಮೆರಗು ಬರಬೇಕಾದರೆ ಅಲ್ಲಿ ಸಾರ್ವಜನಿಕವಾಗಿ ಶಾಸಕರು ಆಡುವ ಎಲ್ಲ ಮಾತನ್ನೂ ಕೇಳುವಂತಿರಬೇಕು ಮತ್ತು ಅದು ತಿಳಿವಳಿಕೆಯಿಂದ ಕೂಡಿರಬೇಕು. ಅಲ್ಲಿ ನಡೆದ ಚರ್ಚೆಯ ಇತಿಹಾಸ ನೋಡಿದರೆ ಮಾನ್ಯ ದೇವೇಗೌಡರು ಅರಸು ಎದುರು ಸಮರ್ಥವಾಗಿ ವಿರೋಧಪಕ್ಷದ ಕೆಲಸ ನಿರ್ವಹಿಸಿದ ದಾಖಲೆ ಸಿಗುತ್ತದೆ. ಅವರೆಂದೂ ಹಗುರ ಭಾಷೆ ಬಳಸಿದವರಲ್ಲ. ಕುಮಾರಣ್ಣ ಹಳೆಯ ದಾಖಲೆಗಳನ್ನ ವಿಧಾನಸೌಧದ ಲೈಬ್ರರಿಯಲ್ಲಿ ಹುಡುಕಿ ಓದಿದರೆ, ಈ ವಿಧಾನಸೌಧ ನಮ್ಮಪ್ಪುಂದೂ ಅಲ್ಲ, ನಿಮ್ಮಪ್ಪುಂದೂ ಅಲ್ಲ ಎಂಬ ಮಾತು ಹೊರಬರಲಾರದಂತಲ್ಲಾ, ಥೂತ್ತೇರಿ.

*****

ವಿಧಾನಸೌಧದ ಒಳಗೆ ಒಂಥರದ ಗಲಭೆ ನಡೆದಿದ್ದರೆ ಹೊರಗಿನ ಗಲಭೆ ತುಂಬ ಅವ್ಯಕ್ತವಾಗಿದೆಯಂತಲ್ಲಾ. ಮುಖ್ಯವಾಗಿ ಹೊಸ ಸರಕಾರ ನೇಮಿಸಲಿರುವ ಅಕಾಡೆಮಿಗಳು, ನಿಗಮ ಮಂಡಲಿಗಳ ಕುರ್ಚಿಯ ಮೇಲೆ ಕೂರುವ ಸಂಚು ನಡೆಸಿರುವ ಜನ, ಅದರಲ್ಲೂ ಸಾಹಿತ್ಯ, ನಾಟಕ, ಪತ್ರಿಕಾ ಅಕಾಡೆಮಿಗಳನ್ನು ಕುರಿತು ಯೋಚಿಸಿರುವ ಜನರಲ್ಲಿ ಇದು ಕಾಣುತ್ತಿದೆಯಂತಲ್ಲ. ಮಂತ್ರಿ ಶಾಸಕರಿಗೆ ಮುತ್ತಿಕೊಂಡಿರುವುದಲ್ಲದೆ ಪ್ರಭಾವಿಗಳು ಮುಖ್ಯಮಂತ್ರಿ ಕಣ್ಣಿಗೆ ಬೀಳಲು ಹರಸಾಹಸ ಪಡುತ್ತಿರುವುದನ್ನು ನೋಡಿದರೆ ಸಾಮಾನ್ಯರಿಗೆ ಕನಿಕರವಾಗುತ್ತಿದೆಯಂತಲ್ಲಾ. ಏಕೆಂದರೆ ಈ ಮೇಧಾವಿಗಳು ಬಿಜೆಪಿ ಸರಕಾರದಲ್ಲಿ ಇದ್ದಾರೊ ಇಲ್ಲವೊ ಎಂಬಂತೆ ಅವಿತುಕೊಂಡಿದ್ದರು. ಬಿಜೆಪಿಗಳು ನೇರವಾಗಿ ಮುಸ್ಲಿಂ ಸಂಸ್ಕೃತಿ ಮೇಲೆ ದಾಳಿ ಮಾಡಿದಾಗ ಪಠ್ಯಪುಸ್ತಕವನ್ನು ತಿದ್ದಿದಾಗ ಮನೆಯೊಳಗಿದ್ದವರು, ಯಾವತ್ತು ಕಾಂಗ್ರೆಸ್ ಅಧಿಕಾರ ಹಿಡಿಯಿತೊ ಆ ಕೂಡಲೇ ವಿಧಾನಸೌಧದ ಕಾರಿಡಾರಿನಲ್ಲಿ ಸುತ್ತುತ್ತಿರುವುದಲ್ಲದೆ ಬಿಜೆಪಿ ಕಾಲದ ಅನಾಹುತಗಳನ್ನು ದನಿ ಎತ್ತರಿಸಿ ಚರ್ಚಿಸುತ್ತಿದ್ದಾರಲ್ಲಾ, ಥೂತ್ತೇರಿ.

*****

ಸರಕಾರ ಈಗ ಮಾಡಬೇಕಾದದ್ದು ಇಷ್ಟೆ. ಈ ಅಕಾಡೆಮಿ ನಿಗಮಮಂಡಲಿಗಳ ನೇಮಕ ನಿಧಾನವಾಗಿ ಆಗಲಿ ಎಂದು ನಿರ್ಧರಿಸುವುದು; ಇವುಗಳಿಗೆ ನೇಮಕ ತಡವಾಗುವುದರಿಂದ ಯಾವ ಅನಾಹುತಗಳೇನೂ ಸಂಭವಿಸುವುದಿಲ್ಲ. ಆ ಸಮಯದಲ್ಲಿ ಕೋಮುವಾದಿ ಸರಕಾರ ಸೃಷ್ಟಿಸಿದ ಸಮಸ್ಯೆಗಳು ಮತ್ತು ದುರಂತಗಳ ವಿರದ್ಧ ಬರೆದವರು, ಪ್ರತಿಭಟಿಸಿದವರು, ಜಾಥ ತೆಗೆದವರು ಇತ್ಯಾದಿ ಜನಗಳ ಇತಿಹಾಸ ತೆಗೆದರೆ ಯೋಗ್ಯರು ಸಿಗಬಹುದು. ಈ ಹಿಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಸ್ಥಾನಮಾನ ಪಡೆದ ಕಾರಣಕ್ಕಾಗಿಯಾದರು ಕೋಮುವಾದ ಮತ್ತು ದ್ವೇಷದ ವಾತಾವರಣದ ವಿರುದ್ಧ ಹೋರಾಡದೆ, ಹೊಟ್ಟೆತುಂಬ ಕುಡಿದುಕೊಂಡು ಕಾಲಹಾಕಿದವರು ಈಗಲೂ ವಿಧಾನಸೌಧದ ಕಾರಿಡಾರಿನಲ್ಲಿ ಹೊಸವೇಶದೊಂದಿಗೆ ಪ್ರತ್ಯಕ್ಷವಾಗಿವೆಯಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮೋದಿಗೂ ಅರ್ಜುನನಿಗೂ ಯಾವ ಸಂಬಂಧ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...