Homeಅಂಕಣಗಳುಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

ಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

- Advertisement -
- Advertisement -

ಸದನದಲ್ಲಿ ಕುಮಾರಣ್ಣನ ಕೂಗಾಟ ನೋಡಿದ ಕರ್ನಾಟಕದ ಜನ ಲೊಚಗರಿದು ಈ ಮಟ್ಟಕ್ಕೆ ಇಳಿಯಿತೇ ಕರ್ನಾಟಕದ ಸಂಸ್ಕೃತಿಯ ಪ್ರತೀಕವಾದ ವಿಧಾನಸೌಧದ ವಾಗ್ವಾದ ಎಂದು ಉದ್ಘಾರ ತೆಗೆದಿದ್ದಾರಲ್ಲಾ. ಕುಮಾರಣ್ಣ ಕೆರಳಿರವುದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಅವರ ಪರಮವೈರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದದು. ಎರಡನೆಯದು ತಮ್ಮ ಅಭಿಮಾನಿಗಳಂತಿದ್ದ ನಾಲ್ಕು ಜನ ಹಿಂಬಾಲಕರು ಈಗ ಸಿದ್ದು ಜೊತೆ ಇರುವುದಲ್ಲದೆ, ಅದರಲ್ಲೊಬ್ಬರು ಕೃಷಿಮಂತ್ರಿಯಾಗಿರುವುದು. ಸಾಮಾನ್ಯ ವ್ಯಕ್ತಿಯಾದ ಕುಮಾರಣ್ಣನಿಗೆ ಇಂತಹ ಅನಾಹುತಗಳನ್ನು ಸಹಿಸಲು ಸಾಧ್ಯವೇ? ಹಾಗಾಗಿ ಆ ಕೃಷಿಮಂತ್ರಿಯ ಕ್ಷೇತ್ರಕ್ಕೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರನ ಸಮಸ್ಯೆಯನ್ನು ಕೈಗೆತ್ತಿಕೊಂಡು ಏನಾದರೂ ಮಾಡಿ ಚಲುವರಾಯಸ್ವಾಮಿ ರಾಜೀನಾಮೆ ಕೊಡಿಸಲು ಯತ್ನಿಸಿದರು. ಆದರೇನು ಇಡೀ ಸದನವೇ ಕುಮಾರಣ್ಣನ ಎದುರು ತಿರುಗಿಬಿದ್ದಾಗ ವಿಧಾನಸಭೆಯ ಗಲಭೆ ಕಲಾಸಿಪಾಳ್ಯದ ಗಲಭೆ ರೂಪ ಪಡೆದುಕೊಂಡಾಗ, ಇನ್ನೂ ಕೆರಳಿದ ಕುಮಾರಣ್ಣ ವಿಧಾನಸೌಧ ನಿಮ್ಮಪ್ಪನದ್ದಲ್ಲ ಎಂದು ಅಬ್ಬರಿಸಿದರಂತಲ್ಲಾ, ಥೂತ್ತೇರಿ.

*****

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಣ್ಣನನ್ನು ನಾವು ಸಾಮಾನ್ಯರೆಂದು ಕರೆದುದಕ್ಕೆ ಸ್ಪಷ್ಟನೆ ಕೊಡಬೇಡವೇ! ಮುಖ್ಯವಾಗಿ ಕುಮಾರಣ್ಣ ದೇವೇಗೌಡರ ನಾಲ್ವರು ಮಕ್ಕಳಲ್ಲೊಬ್ಬರು. ವಿದ್ವತ್ತಿನಲ್ಲಿ ಸಾಮಾನ್ಯ ವ್ಯಕ್ತಿ. ಆಡುವ ಮಾತಿನ ಮತ್ತು ಭಾಷಣ ಬಳಕೆ ವಿಷಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ. ಏಕೆಂದರೆ ಅವರ ಮಾತು ಭಾಷಣ ಇತ್ಯಾದಿಗಳಲ್ಲಿ ಕೇವಲ ನಲವತ್ತೈದು ಪದಗಳೇ ಸುತ್ತುತ್ತವೆ. ಈ ಸಾಮಾನ್ಯತನ ಸಮಸ್ಯೆ ಅಲ್ಲವಾದರೂ, ಅವರ ಸುತ್ತ ಸಾಮಾನ್ಯವಾಗಿರುತ್ತಿದ್ದ ಗೆಳೆಯರು ಇವತ್ತು ಯಾರೂ ಅವರ ಬಳಿ ಇಲ್ಲ. ಎಲ್ಲಾ ಹೊರಟುಹೋಗುತ್ತಿದ್ದಾರೆ. ಇಂತಹ ಹತಾಶೆಯ ಸಮಯದಲ್ಲಿ, ತಮ್ಮ ವೈರಿಗಳೆಂದುಕೊಂಡವರು ಈಗ ಅಧಿಕಾರದ ಕುರ್ಚಿ ಮೇಲೆ ಕುಳಿತುಕೊಂಡಿರುವುದು ಸಹಿಸಲಸಾಧ್ಯ ಸಂಗತಿಯಾಗಿಹೋಗಿದೆ. ಇಂತಹ ಸಮಯದಲ್ಲಿ ಕುಮಾರಣ್ಣ ಕೆರಳಿ ಕೆಂಡವಾಗುವುದರ ಬದಲು ಸನ್ನಿವೇಶ ನಿಭಾಯಿಸುವ ಚಾಣಾಕ್ಷತೆ ತೋರಬೇಕಾಗಿದೆಯಲ್ಲಾ, ಥೂತ್ತೇರಿ.

*****

ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಕಟ್ಟಿಸಿದ ವಿಧಾನಸೌಧಕ್ಕೆ ಮೆರಗು ಬರಬೇಕಾದರೆ ಅಲ್ಲಿ ಸಾರ್ವಜನಿಕವಾಗಿ ಶಾಸಕರು ಆಡುವ ಎಲ್ಲ ಮಾತನ್ನೂ ಕೇಳುವಂತಿರಬೇಕು ಮತ್ತು ಅದು ತಿಳಿವಳಿಕೆಯಿಂದ ಕೂಡಿರಬೇಕು. ಅಲ್ಲಿ ನಡೆದ ಚರ್ಚೆಯ ಇತಿಹಾಸ ನೋಡಿದರೆ ಮಾನ್ಯ ದೇವೇಗೌಡರು ಅರಸು ಎದುರು ಸಮರ್ಥವಾಗಿ ವಿರೋಧಪಕ್ಷದ ಕೆಲಸ ನಿರ್ವಹಿಸಿದ ದಾಖಲೆ ಸಿಗುತ್ತದೆ. ಅವರೆಂದೂ ಹಗುರ ಭಾಷೆ ಬಳಸಿದವರಲ್ಲ. ಕುಮಾರಣ್ಣ ಹಳೆಯ ದಾಖಲೆಗಳನ್ನ ವಿಧಾನಸೌಧದ ಲೈಬ್ರರಿಯಲ್ಲಿ ಹುಡುಕಿ ಓದಿದರೆ, ಈ ವಿಧಾನಸೌಧ ನಮ್ಮಪ್ಪುಂದೂ ಅಲ್ಲ, ನಿಮ್ಮಪ್ಪುಂದೂ ಅಲ್ಲ ಎಂಬ ಮಾತು ಹೊರಬರಲಾರದಂತಲ್ಲಾ, ಥೂತ್ತೇರಿ.

*****

ವಿಧಾನಸೌಧದ ಒಳಗೆ ಒಂಥರದ ಗಲಭೆ ನಡೆದಿದ್ದರೆ ಹೊರಗಿನ ಗಲಭೆ ತುಂಬ ಅವ್ಯಕ್ತವಾಗಿದೆಯಂತಲ್ಲಾ. ಮುಖ್ಯವಾಗಿ ಹೊಸ ಸರಕಾರ ನೇಮಿಸಲಿರುವ ಅಕಾಡೆಮಿಗಳು, ನಿಗಮ ಮಂಡಲಿಗಳ ಕುರ್ಚಿಯ ಮೇಲೆ ಕೂರುವ ಸಂಚು ನಡೆಸಿರುವ ಜನ, ಅದರಲ್ಲೂ ಸಾಹಿತ್ಯ, ನಾಟಕ, ಪತ್ರಿಕಾ ಅಕಾಡೆಮಿಗಳನ್ನು ಕುರಿತು ಯೋಚಿಸಿರುವ ಜನರಲ್ಲಿ ಇದು ಕಾಣುತ್ತಿದೆಯಂತಲ್ಲ. ಮಂತ್ರಿ ಶಾಸಕರಿಗೆ ಮುತ್ತಿಕೊಂಡಿರುವುದಲ್ಲದೆ ಪ್ರಭಾವಿಗಳು ಮುಖ್ಯಮಂತ್ರಿ ಕಣ್ಣಿಗೆ ಬೀಳಲು ಹರಸಾಹಸ ಪಡುತ್ತಿರುವುದನ್ನು ನೋಡಿದರೆ ಸಾಮಾನ್ಯರಿಗೆ ಕನಿಕರವಾಗುತ್ತಿದೆಯಂತಲ್ಲಾ. ಏಕೆಂದರೆ ಈ ಮೇಧಾವಿಗಳು ಬಿಜೆಪಿ ಸರಕಾರದಲ್ಲಿ ಇದ್ದಾರೊ ಇಲ್ಲವೊ ಎಂಬಂತೆ ಅವಿತುಕೊಂಡಿದ್ದರು. ಬಿಜೆಪಿಗಳು ನೇರವಾಗಿ ಮುಸ್ಲಿಂ ಸಂಸ್ಕೃತಿ ಮೇಲೆ ದಾಳಿ ಮಾಡಿದಾಗ ಪಠ್ಯಪುಸ್ತಕವನ್ನು ತಿದ್ದಿದಾಗ ಮನೆಯೊಳಗಿದ್ದವರು, ಯಾವತ್ತು ಕಾಂಗ್ರೆಸ್ ಅಧಿಕಾರ ಹಿಡಿಯಿತೊ ಆ ಕೂಡಲೇ ವಿಧಾನಸೌಧದ ಕಾರಿಡಾರಿನಲ್ಲಿ ಸುತ್ತುತ್ತಿರುವುದಲ್ಲದೆ ಬಿಜೆಪಿ ಕಾಲದ ಅನಾಹುತಗಳನ್ನು ದನಿ ಎತ್ತರಿಸಿ ಚರ್ಚಿಸುತ್ತಿದ್ದಾರಲ್ಲಾ, ಥೂತ್ತೇರಿ.

*****

ಸರಕಾರ ಈಗ ಮಾಡಬೇಕಾದದ್ದು ಇಷ್ಟೆ. ಈ ಅಕಾಡೆಮಿ ನಿಗಮಮಂಡಲಿಗಳ ನೇಮಕ ನಿಧಾನವಾಗಿ ಆಗಲಿ ಎಂದು ನಿರ್ಧರಿಸುವುದು; ಇವುಗಳಿಗೆ ನೇಮಕ ತಡವಾಗುವುದರಿಂದ ಯಾವ ಅನಾಹುತಗಳೇನೂ ಸಂಭವಿಸುವುದಿಲ್ಲ. ಆ ಸಮಯದಲ್ಲಿ ಕೋಮುವಾದಿ ಸರಕಾರ ಸೃಷ್ಟಿಸಿದ ಸಮಸ್ಯೆಗಳು ಮತ್ತು ದುರಂತಗಳ ವಿರದ್ಧ ಬರೆದವರು, ಪ್ರತಿಭಟಿಸಿದವರು, ಜಾಥ ತೆಗೆದವರು ಇತ್ಯಾದಿ ಜನಗಳ ಇತಿಹಾಸ ತೆಗೆದರೆ ಯೋಗ್ಯರು ಸಿಗಬಹುದು. ಈ ಹಿಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಸ್ಥಾನಮಾನ ಪಡೆದ ಕಾರಣಕ್ಕಾಗಿಯಾದರು ಕೋಮುವಾದ ಮತ್ತು ದ್ವೇಷದ ವಾತಾವರಣದ ವಿರುದ್ಧ ಹೋರಾಡದೆ, ಹೊಟ್ಟೆತುಂಬ ಕುಡಿದುಕೊಂಡು ಕಾಲಹಾಕಿದವರು ಈಗಲೂ ವಿಧಾನಸೌಧದ ಕಾರಿಡಾರಿನಲ್ಲಿ ಹೊಸವೇಶದೊಂದಿಗೆ ಪ್ರತ್ಯಕ್ಷವಾಗಿವೆಯಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮೋದಿಗೂ ಅರ್ಜುನನಿಗೂ ಯಾವ ಸಂಬಂಧ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: BLO ಮನೆ-ಮನೆ ಭೇಟಿ ಗಡುವು ಆಗಸ್ಟ್‌ 17ರವರೆಗೆ ವಿಸ್ತರಣೆ!

ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು (ECI) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮನೆ-ಮನೆ ಗಣತಿ ಪ್ರಕ್ರಿಯೆಯ ಗಡುವನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದ್ದು,...

ಕಾವೇರಿ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲ್ಲ: ತಮಿಳುನಾಡು ಸಿಎಂ ವಿಜಯ್

ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವ ವಿಚಾರವಾಗಿ ತಮಿಳುನಾಡಿನಲ್ಲಿ ರಾಜಕೀಯ ಕಾವು ಏರುತ್ತಿರುವ ಬೆನ್ನಲ್ಲೇ, ಈ ಕುರಿತು ತಕ್ಷಣವೇ ಸರ್ವಪಕ್ಷಗಳ ಸಭೆಯನ್ನು ಆಯೋಜಿಸುವ ಯಾವುದೇ ಅಗತ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ....

ಬೆಂಗಳೂರಿನ ಜಕ್ಕೂರಿನಲ್ಲಿ 22-23 ವರ್ಷದ ಇಬ್ಬರು ನೇಪಾಳಿ ಯುವತಿಯರ ಶವಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: ಜಕ್ಕೂರು ಮುಖ್ಯ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರು ಒಂದೇ ಸೀರೆಯಿಂದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ. ಮೃತರನ್ನು ನೇಪಾಳ...

NEET Paper Leak: ಒಂದೇ ಒಂದು CCTV ಇರಲಿಲ್ಲ, ಚೆಕಿಂಗ್ ಇರಲಿಲ್ಲ! ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಹೇಗೆ? CBI ವರದಿ ಇಲ್ಲಿದೆ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA)...

ಉತ್ತರಾಖಂಡ : ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ SIR ನೋಟಿಸ್

ಉತ್ತರಾಖಂಡದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ತಲುಪಿದೆ. ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ),...

SIR: ಗಣತಿ ನಮೂನೆ ವಾಪಸ್‌ಗೆ ನಾಳೆಯೇ ಅಂತಿಮ ಗಡುವು, 1.10 ಕೋಟಿ ಮತದಾರರ ಹೆಸರು ಡಿಲೀಟ್‌!

ರಾಜ್ಯಾದ್ಯಂತ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಮೊದಲ ಹಂತವಾದ ಗಣತಿ ನಮೂನೆಗಳನ್ನು ಭರ್ತಿ ಮಾಡಿ ವಾಪಸ್ ನೀಡಲು ನಾಳೆ (ಆಗಸ್ಟ್ 8) ಕೊನೆಯ ದಿನವಾಗಿದೆ. ಈ ನಡುವೆ...

ಕರ್ನಾಟಕ ಎಸ್ಐಆರ್: ಬೆಂಗಳೂರಿನ ಅರ್ಧದಷ್ಟು ಮತದಾರರು ‘ಹೊರಕ್ಕೆ’: ರಾಜ್ಯದಲ್ಲಿ 1.11 ಕೋಟಿ ಜನರು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿ

ಕರ್ನಾಟಕದಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಕೈಗೊಂಡಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision - SIR) ಪ್ರಕ್ರಿಯೆಯು ರಾಜ್ಯದ ಕೋಟ್ಯಂತರ ನಾಗರಿಕರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಭೀತಿಯನ್ನು ಹುಟ್ಟುಹಾಕಿದೆ. ಪ್ರಜಾಪ್ರಭುತ್ವ...

ಎರಡು ನ್ಯೂಸ್ ಚಾನೆಲ್‌ಗಳಿಗೆ ಉದಯನಿಧಿ ಲೀಗಲ್ ನೋಟಿಸ್ : ಸಾರ್ವಜನಿಕ ಕ್ಷಮೆಯಾಚನೆ, 100 ಕೋಟಿ ಪರಿಹಾರಕ್ಕೆ ಆಗ್ರಹ-ವರದಿ

ತಮಿಳುನಾಡಿನ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ತಮ್ಮ ಇತ್ತೀಚಿನ ಹೇಳಿಕೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾನನಷ್ಟ ಆರೋಪ ಮಾಡಿ ಎರಡು ರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ...

CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆ: ಅಭಿಜೀತ್ ದೀಪ್ಕೆಗೆ ‘ರಾಷ್ಟ್ರೀಯ ಸಂಚಾಲಕ’

ದೇಶಾದ್ಯಂತ ವಿದ್ಯಾರ್ಥಿ ಮತ್ತು ಯುವಜನರ ಬೃಹತ್ ಹೋರಾಟದ ಮೂಲಕ ಗಮನಸೆಳೆದಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಅಧಿಕೃತವಾಗಿ ತನ್ನ ಮೊದಲ 14 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (National Working Committee) ಪ್ರಕಟಿಸಿದೆ....

ಕ್ಷೇತ್ರ ಪುನರ್ ವಿಂಗಡಣೆಗೆ ಡಿಎಂಕೆ ವಿರೋಧ: ‘ಮೃದು ಧೋರಣೆ’ ವದಂತಿಗೆ ಉದಯನಿಧಿ ಸ್ಟಾಲಿನ್ ಬ್ರೇಕ್

ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯನ್ನು ಕೇಂದ್ರ ಸರ್ಕಾರ ಮರುಪರಿಚಯಿಸಲು ಮುಂದಾಗಿರುವುದು ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಕಸರತ್ತಿಗೆ ಕಾರಣವಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ವಿಷಯದಲ್ಲಿ ಡಿಎಂಕೆ (DMK) ತನ್ನ ಕಠಿಣ ನಿಲುವನ್ನು ಮೃದುಗೊಳಿಸಿದೆ ಎಂಬ...