Homeಕರ್ನಾಟಕಇಡಬ್ಲ್ಯೂಎಸ್‌ ಜಾರಿಗೆ ಯಾವ ಉಪಸಮಿತಿ ಮಾಡಿದ್ರಿ?: ಒಳಮೀಸಲಾತಿ ಹೋರಾಟದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ವಾಗ್ದಾಳಿ

ಇಡಬ್ಲ್ಯೂಎಸ್‌ ಜಾರಿಗೆ ಯಾವ ಉಪಸಮಿತಿ ಮಾಡಿದ್ರಿ?: ಒಳಮೀಸಲಾತಿ ಹೋರಾಟದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ವಾಗ್ದಾಳಿ

- Advertisement -
- Advertisement -

“ಮೂರು ಪರ್ಸೆಂಟ್ ಇರುವ ಮೇಲ್ಜಾತಿಯವರಿಗೆ ಹತ್ತು ಪರ್ಸೆಂಟ್ (ಇಡಬ್ಲ್ಯೂಎಸ್) ಮೀಸಲಾತಿ ನೀಡಲು ಯಾವ ಉಪಸಮಿತಿ ಮಾಡಿದ್ರಿ, ಯಾವ ಆಯೋಗ ವರದಿ ನೀಡಿತ್ತು?” ಎಂದು ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.

ಪುನಾರಂಭಗೊಂಡಿರುವ ಒಳಮೀಸಲಾತಿ ಹೋರಾಟ 30ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಆಗಮಿಸಿ, ಹೋರಾಟವನ್ನು ಉದ್ದೇಶಿಸಿ ಅವರು ಮಾತನಾಡಿದರು.

“ನಮ್ಮ ಸಮುದಾಯಗಳನ್ನು ಒಡೆದು ಆಳುವ ಷಡ್ಯಂತ್ರ ನಡೆಯುತ್ತಿರುವುದು ನಮಗೆ ತಿಳಿದಿದೆ. ಮತಕ್ಕಾಗಿ ನಮ್ಮನ್ನು ಛಿದ್ರ ಛಿದ್ರ ಮಾಡಿದ್ದಾರೆ. ನಾವು ಯಾರ ತಟ್ಟೆಗೂ ಕೈ ಹಾಕುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕು ಎಂಬುದು ಸಂವಿಧಾನ ಹಾಗೂ ಬಾಬಾ ಸಾಹೇಬ್‌ ಅಂಬೇಡ್ಕರರ ಆಶಯ. ಉಪಸಮಿತಿ ರಚಿಸಿರುವುದಾಗಿ ಹೇಳುತ್ತಾರೆ. ಆದರೆ ಹತ್ತು ಪರ್ಸೆಂಟ್ ಮೀಸಲಾತಿ ಜಾರಿಗೆ ಯಾವ ಉಪಸಮಿತಿ ಮಾಡಿದ್ದರು? ಯಾವ ಆಯೋಗ ಮಾಡಿದ್ದರು? ಯಾವ ವರದಿ ಪಡೆದಿದ್ದರು? ಹೇಗೆ ಇಡಬ್ಲ್ಯೂಎಸ್‌ ಜಾರಿಯಾಯಿತು?” ಎಂದು ಕೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಸಂವಿಧಾನ ಜಾರಿಗೊಳಿಸುವ ಜಾಗದಲ್ಲಿ ನಾವಿಲ್ಲ. ನಮ್ಮ ಪ್ರತಿನಿಧಿಗಳಾಗಿ ಹೋದವರು ಬಾಯಿ ಕಟ್ಟಿದ ನಾಯಿಗಳಾಗಿ ಕೂತಿದ್ದಾರೆ. ನಾವಿಲ್ಲಿ ಟೆಂಟ್ ಹಾಕಿಕೊಂಡು ಧಿಕ್ಕಾರ ಕೂಗುತ್ತಿದ್ದೇವೆ. ನಮ್ಮನ್ನು ಒಡೆದು ಆಳುತ್ತಿದ್ದಾರೆ. ಜಲ್ಲಿ, ಸಿಮೆಂಟ್, ಕಬ್ಬಿಣ, ನೀರು- ಎಲ್ಲವನ್ನು ಬೇರ್ಪಡಿಸಿ ಕಾಂಕ್ರೀಟ್ ಮಾಡಲು ಸಾಧ್ಯವೇ? ಜೇನು ನೊಣಗಳಂತೆ ಒಂದಾಗಿ” ಎಂದು ಸಂದೇಶ ನೀಡಿದರು.

“ಗ್ರಾಮ ಪಂಚಾಯಿತಿ ಮೆಂಬರ್‌ ಕೂಡ ಆಗಲು ಸಾಧ್ಯವಿಲ್ಲದಂತಹ ಬುಡುಬುಡಕೆ, ದೊಂಬಿದಾಸ, ಶಿಳ್ಳೆಕ್ಯಾತರಿದ್ದಾರೆ. ಅವರಿಗೆಲ್ಲರಿಗೂ ಪ್ರಾತಿನಿಧ್ಯ ಕೊಡಬೇಕು. ಆದರೆ ಮೆಜಾರಿಟಿ ಇಲ್ಲದ ಬ್ರಾಹ್ಮಣರು 127 ಮಂದಿ ಎಂಪಿಗಳನ್ನು ಹೊಂದಿದ್ದಾರೆ. ಅವರನ್ನು ಗೆದ್ದು ಕಳಿಸಿದ್ದು ಯಾರು? ನಿಮ್ಮ ಹೆಗಲ ಮೇಲೆ ಕಾಲುಗಳನ್ನು ಇಟ್ಟುಕೊಂಡು ನಿಂತಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವೆಲ್ಲ ಅವರ ಹಿಡಿತದಲ್ಲಿವೆ. ಹೀಗಾಗಿ ಹತ್ತು ಪರ್ಸೆಂಟ್ ಮೀಸಲಾತಿ ಒಂದೇ ದಿನದಲ್ಲಿ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಅವರ ಬಳಿ ಅಧಿಕಾರವಿದೆ. ಅಂಬೇಡ್ಕರ್‌ರವರು ಹೇಳಿದಂತೆ ಅಧಿಕಾರ ಹೀನತೆಯೇ ಅಸ್ಪೃಶ್ಯತೆ” ಎಂದು ಅಭಿಪ್ರಾಯಪಟ್ಟರು.

“ಒಂದೇ ದಿನದಲ್ಲಿ ಹತ್ತು ಪರ್ಸೆಂಟ್ ಮೀಸಲಾತಿ ಜಾರಿಗೊಳಿಸಿದಂತೆ ಒಳಮೀಸಲಾತಿ ಜಾರಿಗೊಳಿಸಿ. ಸುಗ್ರೀವಾಜ್ಞೆ ಮೂಲಕ ಜಾರಿಗೆ ತನ್ನಿರಿ. ಆಜಾದಿ ಕಾ ಅಮೃತ ಮಹೋತ್ಸವ ಎನ್ನುತ್ತಿದ್ದಾರೆ. ಯಾರಿಗೆ ಅಮೃತ? ಆರು ನಿಮಿಷಕ್ಕೊಮ್ಮೆ ದಲಿತ ಹೆಣ್ಣುಮಕ್ಕಳ ರೇಪ್ ಆಗುತ್ತಿದೆ. ಎಂಟು ನಿಮಿಷಕ್ಕೊಂದು ಗುಡಿಸಲಿಗೆ ಬೆಂಕಿ ಬೀಳುತ್ತಿದೆ, ಅರವತ್ತು ಸಾವಿರ ವಿದ್ಯಾರ್ಥಿಗಳ ಸ್ಕಾಲರ್‌ ಶಿಪ್ ಬಂದ್‌ ಆಗಿದೆ, ಏಳು ಸಾವಿರ ವಿದ್ಯಾರ್ಥಿಗಳ ಪಿಎಚ್‌.ಡಿ ಬಂದ್ ಆಗಿದೆ, ಬೈಕ್‌ ರೈಡ್ ಮಾಡಿದ್ದಕ್ಕೆ ದಲಿತ ವಿದ್ಯಾರ್ಥಿಗೆ ಕೋಲಾರದಲ್ಲಿ ಥಳಿಸಿದ್ದಾರೆ, ಇದಕ್ಕೆಲ್ಲ ಯಾರು ಉತ್ತರ ಕೊಡಬೇಕು” ಎಂದು ಮಾರ್ಮಿಕವಾಗಿ ನುಡಿದರು.

“ಜಾತಿ ಜಾತಿಗಳ ನಡುವೆ ಒಡಕುಗಳು ಬೇಡ. ಎಸ್.ಸಿ., ಎಸ್‌.ಟಿ. ಸ್ವಾಮೀಜಿಗಳು ಏಕೆ ಒಂದಾಗಬೇಕು ಎಂಬ ವಿಷಯವನ್ನಿಟ್ಟುಕೊಂಡು 31 ಜಿಲ್ಲೆಗಳಲ್ಲೂ ಹೋರಾಟ ಮಾಡುತ್ತಿದ್ದೇವೆ. ಪರಿಶಿಷ್ಟ ಜನಾಂಗದ ಸ್ವಾಮೀಜಿಗಳನ್ನೇ ಒಡೆಯಬೇಕೆಂದು ಹೊರಟಿದ್ದಾರೆ. ಒಂದಿಷ್ಟು ಸಮುದಾಯದ ಸ್ವಾಮೀಜಿಗಳನ್ನು ಎತ್ತಿಕಟ್ಟಿ ನಮ್ಮ ವಿರುದ್ಧ ಬಿಟ್ಟಿದ್ದಾರೆ. ನಾವು ಯಾರೂ ವಿಚಲಿತರಾಗಿಲ್ಲ. ನಾವು ಒಗ್ಗಟ್ಟಿನಿಂದ ಇದ್ದೇವೆ. ನಾಲ್ಕು ವಿಭಾಗೀಯ ಸಮಾವೇಶ ಮಾಡುತ್ತೇವೆ, ದಲಿತ ಮುಖಂಡರೆಲ್ಲ ಅದರಲ್ಲಿ ಪಾಲ್ಗೊಳ್ಳಿದ್ದಾರೆ” ಎಂದು ಗುಡುಗಿದರು.

ನಮ್ಮ ಪಾಲು ಕೇಳಲು ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ: ಮಾವಳ್ಳಿ ಶಂಕರ್‌

ಹಿರಿಯ ದಲಿತ ಮುಖಂಡರಾದ ಮಾವಳ್ಳಿ ಶಂಕರ್‌ ಮಾತನಾಡಿ, “ಯಾರ ಪಾಲನ್ನು ನಾವು ಕಿತ್ತುಕೊಳ್ಳುತ್ತಿಲ್ಲ, ಯಾರ ಆಸ್ತಿಗೂ, ತಟ್ಟೆಗೂ ಕೈಹಾಕಿಲ್ಲ. ಹಿಂದುಳಿದ ಜಾತಿಗಳಿಗೆ ಮೀಸಲಾತಿ ವರ್ಗೀಕರಣ ಮಾಡಲು ಸಾಧ್ಯವಾದರೆ ಪರಿಶಿಷ್ಟ ಜಾತಿಯಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ನಮ್ಮ ಪಾಲನ್ನು ನಾವು ಕೇಳೋದಕ್ಕೆ ಯಾವುದೇ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎ.ಜೆ.ಸದಾಶಿವ ಆಯೋಗದ ಜಾರಿಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡು ಮಾವಳ್ಳಿ ಶಂಕರ್‌ ಮಾತನಾಡಿದರು.

“ಒಳಮೀಸಲಾತಿ ಕುರಿತು ಚರ್ಚೆ ಮಾಡುತ್ತಿರುವಾಗ ಖಾಸಗೀಕರಣ ಹೆಚ್ಚಾಗಿರುವುದನ್ನು ಪ್ರಸ್ತಾಪಿಸುತ್ತಾರೆ. ಅದರ ವಿರುದ್ಧ ಹೋರಾಟ ಮಾಡುವುದು ಹೇಗೆಂದು ಬಾಬಾ ಸಾಹೇಬರ ಅನುಯಾಯಿಗಳಿಗೆ ಗೊತ್ತಿದೆ. ಆದರೆ ಖಾಸಗೀಕರಣವನ್ನು ತೋರಿಸಿ, ಈ ಹೋರಾಟವನ್ನು ತಡೆಯಬಾರದು” ಎಂದು ಎಚ್ಚರಿಕೆ ನೀಡಿದರು.

“ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಹೇಡಿಗಳು ಗೆದ್ದು ಬರುತ್ತಿದ್ದಾರೆ. ಅವರೆಲ್ಲ ಈ ಸಮುದಾಯವನ್ನು ಪ್ರತಿನಿಧಿಸಿ ಮೇಲ್ಜಾತಿಯ ಗುಲಾಮಗಿರಿ ಮಾಡದಿದ್ದರೆ ಒಳಮೀಸಲಾತಿ ದೊಡ್ಡ ಪ್ರಶ್ನೆಯೇ ಆಗುತ್ತಿರಲಿಲ್ಲ. ರಾಜಕೀಯ ಅಧಿಕಾರಕ್ಕಾಗಿ ಬೇರೆಯವರ ಜೀತ ಮಾಡಿದರೆ ಸಮುದಾಯ ಹಿಂದುಳಿಯುತ್ತದೆ. ಬಾಬಾ ಸಾಹೇಬರ ಆಶಯದಂತೆ ಪ್ರತ್ಯೇಕ ಮತದಾನದ ಹಕ್ಕು ನಮಗೆ ಸಿಕ್ಕಿದ್ದರೆ ನಮ್ಮ ಕಾಲ ಬುಡಕ್ಕೆ ಮೇಲ್ಜಾತಿಗಳು ಬರುತ್ತಿದ್ದವು. ಪರಿಶಿಷ್ಟ ರಾಜಕಾರಣಗಳು ಒಳಮೀಸಲಾತಿ ಪರ ಮಾತನಾಡಲು ಸಾಧ್ಯವಾಗುತ್ತಿಲ್ಲ. ದಲಿತ ರಾಜಕಾರಣಿಗಳು ಮೇಲ್ಜಾತಿಗಳ ಮರ್ಜಿಗೆ ಬಿದ್ದಿದ್ದಾರೆ” ಎಂದು ವಿಷಾದಿಸಿದರು.

ಒಳಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ದಲಿತ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, “ಈ ಮೂವತ್ತು ವರ್ಷದ ಹೋರಾಟದಲ್ಲಿ ಹಲವಾರು ನಾಯಕರು ಸತ್ತಿದ್ದಾರೆ, ಜೈಲಿಗೆ ಹೋಗಿದ್ದಾರೆ, ನೌಕರಿ ಬಿಟ್ಟಿದ್ದಾರೆ, ಲಾಠಿ ಏಟು ತಿಂದಿದ್ದಾರೆ- ಯಾವುದೇ ಕಾರಣಕ್ಕೂ ಒಂದು ದಿನಕ್ಕೆ ಮಾತ್ರ ಹೋರಾಟ ಸೀಮಿತಗೊಳಿಸಬಾರದು ಎಂದು ಭೀಮ ಸೈನಿಕರು ಎಚ್ಚರಿಕೆ ಕೊಟ್ಟು ನಮ್ಮನ್ನು ಕಳಿಸಿದ್ದಾರೆ. ಹೀಗಾಗಿ ಹೋರಾಟ ಮುಂದುವರಿಸಿದೆ. ನವೆಂಬರ್‌ ತಿಂಗಳಿನಿಂದ ನಿರಂತರ ಹೋರಾಟ ನಡೆಯುತ್ತಿದೆ. ಡಿಸೆಂಬರ್‌ 11ರಿಂದ ಬೆಂಗಳೂರಿನಲ್ಲಿ ಹೋರಾಟ ಜರುಗಿದೆ” ಎಂದರು.

“ಒಂದು ಸಂಘಟನೆ, ಒಂದು ಸಮುದಾಯ ಈ ಹೋರಾಟದ ಮುಂದಾಳತ್ವ ವಹಿಸಿತ್ತು. ಆದರೆ ಎಲ್ಲ ಜಾತಿಗಳು ಈ ಚಳವಳಿಯ ಭಾಗವಾಗಬೇಕೆಂದು ನಿರಂತರ ಚರ್ಚೆಗಳು ನಡೆಸಿದ್ದೇವೆ. ಎಲ್ಲ ಸಮುದಾಯಗಳು ಒಳಗೊಂಡಿದ್ದರಿಂದ ನಮ್ಮ ಟೈಟಲ್‌ ಬದಲಾಗಿದೆ, ನಡೆ, ನುಡಿ, ವರ್ತನೆ ಬದಲಾಗಿದೆ. ಎಲ್ಲ ರೀತಿಯಲ್ಲೂ ನಮ್ಮ ಹೋರಾಟ ವಿಸ್ತರಣೆಯಾಗಿದೆ. ಮೂರು ಪಕ್ಷಗಳು ಮಾತನಾಡುವಂತಾಗಿದೆ. ಇದು ರಾಜಕೀಯೇತರ ಚಳವಳಿ” ಎಂದು ಸ್ಪಷ್ಟಪಡಿಸಿದರು.

ದಲಿತ ಹೋರಾಟಗಾರರಾದ ಬಿ.ಗೋಪಾಲ್ ಮಾತನಾಡಿ, “ಯಾರದೇ ಮೀಸಲಾತಿಯನ್ನು ಕಿತ್ತುಹಾಕುವ ಪ್ರಸ್ತಾವನ್ನು ಯಾರೂ ಮಾಡಿಲ್ಲ. ಮಾಡಲೂಬಾರದು” ಎಂದು ಆಶಿಸಿದರು.

ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಹೋರಾಟ 30ನೇ ದಿನಕ್ಕೆ ಕಾಲಿಟ್ಟಿದೆ.

ಹೋರಾಟದಲ್ಲಿ ದಲಿತ ಮುಖಂಡರಾದ ಎನ್.ವೆಂಕಟೇಶ್, ಹೆಣ್ಣೂರು ಶ್ರೀನಿವಾಸ್, ಬಸವರಾಜ ಕೌತಾಳ್, ಮೋಹನ್ ರಾಜ್, ಹೆಣ್ಣೂರು ಲಕ್ಷ್ಮೀನಾರಾಯಣ್, ಡಿ.ಶಿವಶಂಕರ್, ಕನಕಪುರ ಬಿ.ಶಿವಣ್ಣ, ಶಿವರಾಜ ಯಕ್ಕರಕಿ, ಗುರುಮೂರ್ತಿ, ಶಿವಸುಂದರ್, ಗೌರಿ ಜನಶಕ್ತಿ, ನಾಗಮಣಿ, ಸವಿತಾ, ಹ.ರಾ.ಮಹೇಶ್, ಸೂಲಿಕುಂಟೆ ರಮೇಶ್, ಗಣೇಶ್ ಮೇತ್ರಿ, ಕಮಲಾನಗರ ಚಿಕ್ಕಣ್ಣ, ರಾಜಗೋಪಾಲ್, ಹನುಮೇಗೌಡ, ಕರಿಯಪ್ಪ ಗುಡಿಮನಿ, ವೇಣುಗೋಪಾಲ್ ಮೌರ್ಯ, ಹನುಮೇಶ್ ಗುಂಡೂರು, ಡಿಬಿಎಂ ವೆಂಕಟೇಶ್, ಕೋದಂಡರಾಮ್, ಹೆಗ್ಗನಹಳ್ಳಿ ಮೂರ್ತಿ, ಕನಕೇನಹಳ್ಳಿ ಕೃಷ್ಣ, ಡಾ.ರವಿಕುಮಾರ್ ಬಾಗಿ, ಹಾಡುಗಾರರಾದ ಕೆ.ಎನ್.ನಾಗೇಶ್, ಸಬ್ಬನಹಳ್ಳಿ ರಾಜು, ಪ್ರಶಾಂತ್ ದಾನಪ್ಪ, ಸುಧಾಕರ್, ಸಿದ್ದಯ್ಯ, ಎಲ್.ವಿ.ಸುರೇಶ್, ಮೌನೇಶ್ ದೇವತೆಗಲ್, ಮೌಲಪ್ಪ ಐಹೊಳೆ, ಹನುಮೇಶ್ ಬೇರಿ, ಎಂ.ಡೇವಿಡ್ ಸಿರವಾರ, ಎಸ್.ಎಚ್.ನಾಗೇಶ್ ಮೊದಲಾದವರು ಪಾಲ್ಗೊಂಡಿದ್ದರು.

ಇದನ್ನೂ ಓದಿರಿ: ಮಾಂಸಾಹಾರದ ಮೇಲೆ ಮತ್ತೆ ಪ್ರಹಾರ: ಮಠಾಧೀಶರ ಸಲಹೆಗಳಿಗೆ ತೀವ್ರ ವಿರೋಧ

ಲಂಬಾಣಿ, ಭೋವಿ ಸಮುದಾಯ ಬೃಹತ್‌ ಪ್ರತಿಭಟನೆ

ಭೋವಿ, ಲಂಬಾಣಿ ಮುಖಂಡರು ಮುಂಚೂಣಿಯಲ್ಲಿರುವ ‘ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟದ ನೇತೃತ್ವ’ದಲ್ಲಿ ಅದೇ ಫ್ರೀಡಂ ಪಾರ್ಕ್‌‌ನಲ್ಲಿ ಬೃಹತ್ ಹೋರಾಟ ಜರುಗಿತು.

ಎ.ಜೆ.ಸದಾಶಿವ ಆಯೋಗದ ವರದಿಯನ್ನು ತರಾತುರಿಯಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು ಎಂಬುದು ಒಕ್ಕೂಟದ ಆಗ್ರಹವಾಗಿತ್ತು. ಎರಡು ಭಿನ್ನ ನಿಲುವಿನ ಹೋರಾಟಗಳು ಒಂದೇ ಸ್ಥಳದಲ್ಲಿ ಜರುಗಿದ್ದರಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಒಂದು ಸಾವಿರ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದರು. ಎ.ಜೆ.ಸದಾಶಿವ ಆಯೋಗದ ಪರ ನಡೆಯುತ್ತಿರುವ 30ನೇ ದಿನದ ಹೋರಾಟದ ಸ್ಥಳಕ್ಕೆ ಹೋಗುವವರನ್ನು ಪರಿಶೀಲಿಸಿ ಬಿಡಲಾಗುತ್ತಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈಗಾಲಾದರೂ ಸನಾತನಿ ಬ್ರಾಹ್ಮಣ್ಯದ ಎದುರು ಗಟ್ಟಿಯಾಗಿ ಮಾತಾಡುತ್ತದ್ದಾರಲ್ಲಾ?,🙏

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...