Homeಕರ್ನಾಟಕಅರಸು ಪ್ರಶಸ್ತಿ ನಿಲ್ಲಿಸಿದ್ದೇಕೆ? ಬಿ.ಚಂದ್ರೇಗೌಡರ ಪ್ರಶ್ನೆ..

ಅರಸು ಪ್ರಶಸ್ತಿ ನಿಲ್ಲಿಸಿದ್ದೇಕೆ? ಬಿ.ಚಂದ್ರೇಗೌಡರ ಪ್ರಶ್ನೆ..

- Advertisement -
- Advertisement -

ಪ್ರತಿ ವರ್ಷ ರಾಜ್ಯ ಸರ್ಕಾರ ದೇವರಾಜ ಅರಸು ಹೆಸರಿನಲ್ಲಿ ಕೊಡುತ್ತಿದ್ದ ಪ್ರಶಸ್ತಿಯನ್ನು ಈ ಬಾರಿಯಿಂದ ರಾಜ್ಯ ಬಿಜೆಪಿ ಸರಕಾರ ನಿಲ್ಲಿಸಿಬಿಟ್ಟಿದೆ. ಇದಕ್ಕಾಗಿ ಅದು ಕೊಡುತ್ತಿರುವ ಕಾರಣ, ರಾಜ್ಯದಲ್ಲಿ ನೆರೆಹಾವಳಿಯಿಂದಾಗಿ ಪ್ರಶಸ್ತಿ ಕೊಡಲು ಸರ್ಕಾರದ ಬಳಿ ಹಣವಿಲ್ಲವಂತೆ. ಅದು ಎಷ್ಟು? ಕೇವಲ ಐದು ಲಕ್ಷ…!

ಆದರೆ ನಿಜವಾಗಿ ಇದು ಅಪ್ಪಟ ಸುಳ್ಳು. ಏಕೆಂದರೆ ಈ ಸರಕಾರದ ಕೆಲವು ನಿರ್ಧಾರಗಳು ಅದೆಲ್ಲಿಂದಲೋ ಬರುತ್ತವೆ. ಅವು ಅಧಿಕಾರಿಗಳ ಮುಖಾಂತರ ಜಾರಿಯಾಗುತ್ತವೆ. ಅರಸು ಪ್ರಶಸ್ತಿ ವಿಷಯದಲ್ಲೂ ಕೂಡ ಜನಪ್ರತಿನಿಧಿಗಳ ಬದಲು ಅಧಿಕಾರಿಗಳೇ ಪ್ರಶಸ್ತಿ ನೀಡಬಾರದೆಂದು ನಮಗೆ ಮೌಖಿಕ ಸಂದೇಶವಿದೆ ಎನ್ನುತ್ತಾರೆ. ಯಾರಿಂದ ಎಂದರೆ ಬಾಯಿಬಿಡುವುದಿಲ್ಲ. ನಿಜಕ್ಕೂ ಸಾಮಾಜಿಕ ಕಳಕಳಿ ಇದ್ದ ಅಧಿಕಾರಿಗಳು ಕೂಡ ಅಸಹಾಯಕರಾಗಿ ವರ್ತಿಸುತ್ತಿದ್ದಾರೆ.

ಇದನ್ನೂ ಓದಿ: ವರ್ಷ ಕಳೆದರೂ ದೇವರಾಜ ಅರಸು ಪ್ರಶಸ್ತಿ ಪ್ರಕಟಿಸದ ಬಿಜೆಪಿ ಸರ್ಕಾರ : ಏನಿರಬಹುದು ಹುನ್ನಾರ?

ಇದು ಹೇಳಿಕೇಳಿ ಬಿಜೆಪಿ ಸರಕಾರ. ಸಾಮಾಜಿಕ ಪರಿವರ್ತನೆಯ ವಿರೋಧಿ ಆದ್ದರಿಂದ ಸ್ಥಗಿತಗೊಂಡ ಸಮಾಜವನ್ನ ಸಾಮಾಜಿಕ ನ್ಯಾಯದಿಂದ ಮುಂದೆ ನೂಕಿದ ಅರಸು ಕಂಡರೆ ಬಿಜೆಪಿಗಳಿಗಾಗುವುದಿಲ್ಲ. ಆದ್ದರಿಂದ ಒಂದು ವ್ಯವಸ್ಥಿತ ಸಂಚಿನಿಂದ ಅರಸು ಪ್ರಶಸ್ತಿಯನ್ನು ಆಯ್ಕೆಮಾಡಲು ನೇಮಕವಾಗುವ ಸಮಿತಿಯನ್ನೇ ರಚಿಸಿಲ್ಲ. ಜೊತೆಗೆ ಆ ಪ್ರಸ್ತಾಪವೇ ನಡೆಯದಂತೆ ನೋಡಿಕೊಂಡಿದೆ.

ಹಾಗೆ ನೋಡಿದರೆ ಈ ಸರಕಾರದ ಅಜೆಂಡಾಗಳು ನಿಗೂಢವಾಗಿದೆ. ಅದನ್ನ ಜಾರಿ ಮಾಡುವುದರಲ್ಲಿ ಅದು ಸದ್ದುಗದ್ದಲವಿಲ್ಲದೆ ನಡೆದುಕೊಳ್ಳುತ್ತದೆ. ಅದಕ್ಕೊಂದು ಉದಾಹರಣೆ ಎಂದರೆ ಈ ಅರಸು ಪ್ರಶಸ್ತಿ. ಅದಕ್ಕಾಗಿ ಕೊಡಲು ಸರಕಾರದಲ್ಲಿ ಐದು ಲಕ್ಷ ಹಣವಿಲ್ಲ ಎನ್ನುವುದಾದರೆ, ರಾಜ್ಯೋತ್ಸವ ಪ್ರಶಸ್ತಿಯಂತೆ ಈ ಪ್ರಶಸ್ತಿಯ ಮೊತ್ತವನ್ನ ಸಹ ಒಂದು ಲಕ್ಷಕ್ಕೆ ಇಳಿಸಬಹುದಿತ್ತಲ್ಲವೇ? ಲಕ್ಷ ಕೋಟಿ ಬಜೆಟ್‌ ಮಂಡಿಸುವ ಸರ್ಕಾರದ ಬಳಿ ಒಂದು ಲಕ್ಷ ಹಣವಿಲ್ಲವೆಂದರೆ ಜನ ನಂಬುತ್ತಾರೆಯೇ? ದರಿದ್ರ ಸರಕಾರಕ್ಕೆ ಇವು ಅವಮಾನದ ಸಂಗತಿಗಳಾಗುವುದಿಲ್ಲ.

ಈ ಮೊದಲು ಎರಡು ಲಕ್ಷವಿದ್ದ ಪ್ರಶಸ್ತಿಯ ಬೆಲೆಯನ್ನ ಸಿದ್ದರಾಮಯ್ಯನವರ ಸರಕಾರ ಐದು ಲಕ್ಷಕ್ಕೆ ಏರಿಸಿತ್ತು. ಒಂದು ಸರಕಾರ ಪ್ರಶಸ್ತಿ ಮೊತ್ತ ಏರಿಸಿದರೆ ಮತ್ತೊಂದು ಸರಕಾರ ಆ ಮೊತ್ತವನ್ನ ಇಳಿಸಿದರೆ ಯಾರಿಗೂ ಅವಮಾನವಾಗುವುದಿಲ್ಲ. ನಮ್ಮ ನಡುವಿನ ಸಮಾಜ ಸುಧಾರಕರು ಹಣಕ್ಕಾಗಿ ಸೇವೆ ಮಾಡುವವರಲ್ಲ. ಆದರೆ ಬಿಜೆಪಿಯ ಉದ್ದೇಶವೇ ಅರಸುರವರನ್ನ ಜನಮನದಿಂದ ಮರೆಯಾಗಿಸುವುದು. ಅದಕ್ಕಾಗಿ ಈ ಸೇಡಿನ ಕ್ರಮ ಕೈಗೊಂಡಿದ್ದಾರೆ.

ಬಿಜೆಪಿಗಳು ಅರಸು ಪ್ರಶಸ್ತಿಯಂತಹ ವಿಷಯಗಳನ್ನ ತಣ್ಣಗೆ ಜಾರಿ ಮಾಡಿ ಪರಿಣಾಮ ನೋಡುತ್ತವೆ. ಪ್ರತಿಕ್ರಿಯೆ ಇಲ್ಲದಿದ್ದರೆ ಅದು ಮುಂದಿನ ವರ್ಷದಿಂದ ಮೂಲೆಗೆ ಬೀಳುವುದು ಗ್ಯಾರಂಟಿ. ಈಗಾಗಲೇ ಅಂಬೇಡ್ಕರ್ ಸಂವಿಧಾನ ರೂಪಿಸಿರಲಿಲ್ಲ, ಕ್ರೂಡೀಕರಿಸಿದರು ಎಂಬ ಸುದ್ದಿ ಮಾಡಿ ಅದರ ಪರಿಣಾಮ ಗ್ರಹಿಸತೊಡಗಿದ್ದಾರೆ. ಅಂಬೇಡ್ಕರ್ ವಿಷಯ ದಲಿತರಿಗೆ ಸಂಬಂಧಿಸಿದ್ದೆಂದು ಹಲವರು ಸುಮ್ಮನಿದ್ದಾರೆ. ಇದೇ ಬಿಜೆಪಿಗಳಿಗೆ ಸಂತಸದ ಸುದ್ದಿ.

ಇದನ್ನೂ ಓದಿ: ಸಂವಿಧಾನ ದಿನ: ಅಂಬೇಡ್ಕರ್‌ ಬದಲಿಗೆ ಶ್ಯಾಂ ಪ್ರಸಾದ್‌ ಮುಖರ್ಜಿ ಫೋಟೋ ಹಾಕಿದ್ದಕ್ಕೆ ಛೀಮಾರಿ, ನಂತರ ಬದಲಾವಣೆ.

ಆದರೆ ಅಂಬೇಡ್ಕರ್ ಕೆಣಕಿದ ಕಾರಣಕ್ಕೆ ನಾಡಿನ ಪ್ರಜ್ಞಾವಂತ ಸಮಾಜ ಕ್ರೋಧಗೊಂಡಿದೆ. ಪ್ರತಿಭಟನೆ ಮಾಡಿದವರು ಮಾತ್ರ ತಳಸಮುದಾಯದವರು. ಆದ್ದರಿಂದ ಅವರ ಹೆಸರಲ್ಲಿ ಕೊಡಮಾಡುವ ಪ್ರಶಸ್ತಿ ನಿಲ್ಲಿಸಿದ್ದರ ಬಗ್ಗೆ ಎಲ್ಲೂ ಸೊಲ್ಲೆತ್ತಿಲ್ಲ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅರಸು ತರದ ಸಾಮಾಜಿಕ ಪರಿವರ್ತನೆಯ ಹರಿಕಾರ ಹಿಂದೆ ಬಂದಿಲ್ಲ. ಮುಂದೆ ಬರುವುದೂ ಅಸಂಭವ. ಆದ್ದರಿಂದ ಸತ್ತಂತಿರುವ ಫಲಾನುಭವಿಗಳು ಎಚ್ಚೆತ್ತು ತಮ್ಮ ದನಿ ಗುರುತಿಸಿಕೊಳ್ಳದಿದ್ದರೆ ಇಲ್ಲಿ ಗೋಳ್ವಾರ್ಕರ್ ಪ್ರಶಸ್ತಿ ಜಾರಿಗೆ ಬರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಹಿಂದ ವರ್ಗದ ನಾಯಕರಾಗಿದ್ದ ಅರಸುರವರ ಹೆಸರು ಚಾಲ್ತಿಯಲ್ಲಿರದಂತೆ ಮಾಡುವುದೇ ಮನುವಾದಿಗಳ ಹುನ್ನಾರ.

LEAVE A REPLY

Please enter your comment!
Please enter your name here

- Advertisment -

ಮಾಜಿ ರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ಹಿಂದೆ ಇಡಿ ಒತ್ತಡ : ತನ್ನ ಹೊಸ ಪುಸ್ತಕದಲ್ಲಿ ಸಂಜಯ್ ರಾವುತ್ ಆರೋಪ

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಮೋದಿ ಸರ್ಕಾರದ ವಿರುದ್ಧ ಕೈಗೊಂಡ ಸ್ವತಂತ್ರ ರಾಜಕೀಯ ನಡೆಗಳಿಗೆ ಪ್ರತಿಯಾಗಿ, ಜಾರಿ ನಿರ್ದೇಶನಾಲಯದ (ಇಡಿ) ಒತ್ತಡಕ್ಕೆ ಮಣಿದು 2025ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು...

ಯುಎನ್‌ಐ ಮಾಧ್ಯಮ ಕಚೇರಿಗೆ ಬೀಗ : ಪೊಲೀಸರ ವರ್ತನೆಗೆ ಪತ್ರಿಕಾ ಸಂಘಗಳು, ವಿಪಕ್ಷ ನಾಯಕರಿಂದ ತೀವ್ರ ಖಂಡನೆ

ಶುಕ್ರವಾರ (ಮಾ.20) ರಾತ್ರಿ ದೆಹಲಿ ಪೊಲೀಸರು ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್‌ಐ) ಸುದ್ದಿ ಸಂಸ್ಥೆಯ ಕಚೇರಿಗೆ ಬೀಗ ಜಡಿದ ರೀತಿಗೆ ಪತ್ರಕರ್ತರ ಸಂಘಗಳು ಮತ್ತು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ದೆಹಲಿಯ...

ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್: ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್

ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರ ತೀವ್ರ ವಿರೋಧದ ನಡುವೆಯೂ ಕೃಷಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್ ಅವರ...

ಕೇರಳ ವಿಧಾನಸಭೆ ಚುನಾವಣೆ : ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಕೇಸ್!

ಏಪ್ರಿಲ್ 9ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಗೆ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ. ಸುರೇಂದ್ರನ್ ಮೇಲೆ ಬರೋಬ್ಬರಿ 242 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಈ ಮಾಹಿತಿ ಶನಿವಾರ...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಆರು ಮಂದಿ ಶಾಸಕರನ್ನು ಅಮಾನತುಗೊಳಿಸಿದ ಬಿಜೆಡಿ

ಮಾರ್ಚ್ 16ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಮಂದಿ ಶಾಸಕರನ್ನು ಒಡಿಶಾದ ಬಿಜು ಜನತಾದಳ (ಬಿಜೆಡಿ) ಅಮಾನತುಗೊಳಿಸಿದೆ ಎಂದು ವರದಿಯಾಗಿದೆ. ಒಟ್ಟು 8 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ....

ಆಸ್ಕರ್ ನಾಮನಿರ್ದೇಶಿತ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರ ಪ್ರದರ್ಶನಕ್ಕೆ ಭಾರತದಲ್ಲಿ ನಿರ್ಬಂಧ!

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ಳನ್ನು ಇಸ್ರೇಲಿ ಸೈನಿಕರು ಸುಮಾರು 300 ಸುತ್ತು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿರುವ ಕಥೆಯನ್ನು ಹೇಳುವ, 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರದ ಪ್ರದರ್ಶನಕ್ಕೆ...

ವೈದ್ಯೆ ವಂದನಾ ದಾಸ್ ಹತ್ಯೆ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ನ್ಯಾಯಾಲಯ

ಕೊಲ್ಲಂ: ಆಸ್ಪತ್ರೆಯಲ್ಲಿ ನಡೆದ ಡಾ. ವಂದನಾ ದಾಸ್ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿ ಜಿ. ಸಂದೀಪ್ ಗೆ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಆರೋಪಿಗೆ ಮರಣದಂಡನೆ ವಿಧಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ...

ಕಾಂಗ್ರೆಸ್, ರಾಹುಲ್ ಗಾಂಧಿ ಬಿಜೆಪಿಯ ಬಿ-ಟೀಮ್: ಕೇರಳ ಸಿಎಂ ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿದ್ದಾರೆ.   ಕೇಂದ್ರೀಯ ಸಂಸ್ಥೆಗಳು ಕೇರಳ...

‘ಬಿಜೆಪಿ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ, ಕೊನೆಯವರೆಗೂ ಹೋರಾಡುತ್ತೇವೆ’; ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮತದಾರರ ಪಟ್ಟಿಯ ಪರಿಷ್ಕರಣೆಯ ಮೂಲಕ ಜನರ "ಮತದಾನದ ಹಕ್ಕನ್ನು ಕಸಿದುಕೊಳ್ಳಲು" ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.  "ಮೋದಿ ಜಿ...

ಏಳು ವರ್ಷಗಳ ನಂತರ ಯುಎಪಿಎ ಪ್ರಕರಣದಲ್ಲಿ ಇಬ್ಬರು ಕಾಶ್ಮೀರಿ ಯುವಕರನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

ಏಳು ವರ್ಷಗಳಿಗೂ ಹೆಚ್ಚು ಕಾಲದ ನಂತರ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಲ್ಪಟ್ಟ ಇಬ್ಬರು ಕಾಶ್ಮೀರಿ ಯುವಕರನ್ನು ಗುರುವಾರ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಮತ್ತು ದೆಹಲಿ ಪೊಲೀಸರು...