Homeಆರೋಗ್ಯಮದುಮೇಹ ವಿರುದ್ಧ ರಾಜಕೀಯ ಹೋರಾಟ ಅಗತ್ಯ: ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್

ಮದುಮೇಹ ವಿರುದ್ಧ ರಾಜಕೀಯ ಹೋರಾಟ ಅಗತ್ಯ: ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್

ಎಲ್ಲಿ ಬಡತನವಿರುತ್ತದೆಯೊ ಅಲ್ಲಿ ಅಪೌಷ್ಠಿಕತೆ ಇರುತ್ತದೆ. ಎಲ್ಲಿ ಅಪೌಷ್ಟಿಕತೆ ಇರುತ್ತದೆಯೋ ಅಲ್ಲಿ ರೋಗಗಳಿರುತ್ತವೆ. ಬಡತನ ಮತ್ತು ರೋಗಗಳು ಎರಡು ಜೊತೆಗೆ ಇರುತ್ತವೆ.

- Advertisement -
- Advertisement -

ವಿಶ್ವ ಮದುಮೇಹ ದಿನದ ಅಂಗವಾಗಿ ಅಮೆರಿಕದ ನ್ಯೂಯಾರ್ಕ್ ಮೆಟ್ರೋಪಾಲಿಟನ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್‌ರವರು ಬರೆದ ವಿಶೇಷ ಲೇಖನವಿದು.

ಮದುಮೇಹ ಒಂದು ಜೀವನ ಶೈಲಿಯ ರೋಗ. ಅದರಲ್ಲೂ, ನಾವು ತಿನ್ನುವ ಆಹಾರ ನಮ್ಮ ಚಯಾಪಚಯವನ್ನು ನಿರ್ಧರಿಸುತ್ತದೆ. ಆದ್ದರಿಂದ ಮದುಮೇಹವನ್ನು ಮಟ್ಟ ಹಾಕಲು ಸಹಜ ಚಯಾಪಚಯಕ್ಕೆ ಪೂರಕವಾದ ಆಹಾರ ಅಗತ್ಯ.

ಆಹಾರದ ಆಯ್ಕೆಯು ವಯಕ್ತಿಕ ನಿರ್ಧಾರಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಸಂಸ್ಕೃತಿ, ಪೂರ್ವಾಗ್ರಹಗಳು, ನಂಬಿಕೆಗಳು, ಆಹಾರವನ್ನು ಖರೀದಿಸುವ ಅಥವಾ ಉತ್ಪಾದಿಸುವ ಸಾಮಾಜಿಕ ತಾಕತ್ತು.. ಹೀಗೆ ಹಲವು ಅಂಶಗಳು ಕೆಲಸ ಮಾಡುತ್ತವೆ. ಯಾವಾಗ ಪೌಷ್ಟಿಕ ಆಹಾರ ಸೇವನೆಗೆ ಈ ಎಲ್ಲ ಅಂಶಗಳು ತಡೆಗೋಡೆಯಾಗುತ್ತವೆಯೋ, ಆವಾಗ ಅಪೌಷ್ಟಿಕತೆ ನೆಲೆಯೂರಿ ಚಯಾಪಚಾಕ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಪರಿಣಾಮವಾಗಿ, ಸ್ಥೂಲಕಾಯತೆ, ಮದುಮೇಹ, ಅಧಿಕ ರಕ್ತಒತ್ತಡ ಇಂತಹ ಮಾರಕ ರೋಗಗಳು ಕಾಣಿಸಿಕೊಳ್ಳುತ್ತವೆ.

ಒಂದು ಸಮಾಜದಲ್ಲಿ ಇಂತಹ ರೋಗಗಳು ಹೆಚ್ಚಾಗಿ ಕಾಣಸಿಗುವಾಗ, ಪ್ರಬಲ ಸಾಮಾಜಿಕ ಬದಲಾವಣೆ ಅಗತ್ಯ ಬೀಳುತ್ತದೆ. ಈ ಸಾಮಾಜಿಕ ಬದಲಾವಣೆಗಳು ಜನರಲ್ಲಿ ಆಹಾರ ಭದ್ರತೆಯನ್ನು ಒದಗಿಸುವ ಕಡೆಗೆ ಹೋಗಬೇಕು.

ಯಾವುದೇ ಸಾಮಾಜಿಕ ವರ್ತನೆಗಳ ಬದಲಾವಣೆಯಲ್ಲಿ ರಾಜಕೀಯ ಇಚ್ಚಾಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರ ಭದ್ರತೆಯ ಮುಖೇನ ಮಟ್ಟ ಹಾಕುವ ಪ್ರಕ್ರಿಯೆ ಇದಕ್ಕೆ ಹೊರತಾಗಿಲ್ಲ. ಇಂತಹ ರಚನಾತ್ಮಕ ಹೋರಾಟದಲ್ಲಿ ಸಾಮೂಹಿಕ ಮತ್ತು ಸಂಘಟನಾತ್ಮಕ ಭಾಗವಹಿಸುವಿಕೆ ಅಗತ್ಯ. ಇದು ಸಾಮಾಜಿಕ ಬಂಡವಾಳವನ್ನು ಬಲಪಡಿಸುತ್ತದೆ ಮತ್ತು ಬದಲಾವಣೆಯನ್ನು ಸುಲಭಗೊಳಿಸುತ್ತದೆ.

ಮದುಮೇಹ ಎಂದರೆ ನಾವು ರೋಗ ಮತ್ತು ಚಿಕಿತ್ಸೆ ಎಂಬುದಾಗಿ ಯೋಚನೆ ಮಾಡುತ್ತೇವೆ. ಒಬ್ಬ ರೋಗಿ ಮತ್ತು ಒಬ್ಬ ವೈದ್ಯರಿದ್ದು ಅದಕ್ಕೆ ಔಷಧಿ ನೀಡುವ ಮೂಲಕ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ. ಆದರೆ ಇದು ಧೀರ್ಘಕಾಲಿಕವಾಗಿ ಸುಸ್ಥಿರವಲ್ಲ. ಏಕೆಂದರೆ ಈಗ ನಮ್ಮ ಕರ್ನಾಟಕದಲ್ಲಿ ಸ್ಥೂಲಕಾಯತೆ, ಆಧಿಕ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್, ಡಯಾಬಿಟಿಸ್ ಇವೆಲ್ಲವುಗಲನ್ನು ಗಮನದಲ್ಲಿಟ್ಟುಕೊಂಡರೆ ಶೇ. 25% ರಿಂದ 30% ಜನರಲ್ಲಿ ಈ ಮೇಲಿನವುಗಳಲ್ಲಿ ಯಾವುದಾದರೂ ಒಂದು ಅಥವಾ ಎರಡು ರೋಗಗಳು ಇರುತ್ತವೆ. ಈ 30% ಜನರಿಗೆ ಸದಾ ಔ‍ಷಧ ನೀಡುತ್ತಾ ನಾವು ನಿಭಾಯಿಸಿಕೊಂಡು ಹೋಗಲು ಸಾಧ್ಯವಿಲ್ಲ. ಅದರ ಅಗತ್ಯವೂ ನಮಗಿಲ್ಲ. ಬದಲಿಗೆ ನಾವು ಬಹಳ ಸರಳವಾಗಿ ಇದನ್ನು ನಿಭಾಯಿಸಬಹುದು ಹಾಗೂ ನಿಯಂತ್ರಣ ಮಾಡಬಹುದು. ಅದನ್ನು ಮಾಡಲಿಕ್ಕೆ ನಮಗೆ ಮುಖ್ಯವಾಗಿ ಸಾಮಾಜಿಕ ಬದಲಾವಣೆ ಬೇಕಿದೆ. ಅಂದರೆ ಆಹಾರದಲ್ಲಿ ಬರಬೇಕಾದ ಬದಲಾವಣೆಗಳನ್ನು ನಾವು ಚಾಚೂತಪ್ಪದೆ ಮಾಡುತ್ತಾ ಹೋಗಬೇಕು.

ಆಹಾರದ ಬದಲಾವಣೆಯು ಆಹಾರದ ಭದ್ರತೆಯ ಕಡೆಗೆ ಹೋಗಬೇಕಾದರೆ ಅದಕ್ಕೊಂದು ರಾಜಕೀಯ ಬದಲಾವಣೆ ಅಗತ್ಯವಿದೆ. ಈ ರಾಜಕೀಯ ಬದಲಾವಣೆ ಏಕೆಂದರೆ ನಮ್ಮ ಆಹಾರ ಕೊಳ್ಳುವ ಶಕ್ತಿ ಸಾಮಾಜಿಕ, ಆರ್ಥಿಕ ಸ್ಥಿತಿಯ ಮೇಲೆ ಹಾಗೂ ಸರ್ಕಾರದ ನೀತಿಗಳ ಮೇಲೆ ಅವಲಂಬಿತವಾಗಿದೆ. ಈ ನೀತಿಗಳಲ್ಲಿ ಬದಲಾವಣೆ ಮಾಡುವುದರ ಮೂಲಕ, ವೈಜ್ಞಾನಿಕ ರೀತಿಯಲ್ಲಿ ಸಬ್ಸಿಡಿ ಕೊಡುವುದರ ಮೂಲಕ ನಾವು ಆಹಾರ ಬದಲಾವಣೆ ಮತ್ತು ಭದ್ರತೆಯನ್ನು ಸಾಧಿಸಬಹುದು. ಡಯಾಬಿಟೀಸ್ ನಂತಹ ಹಲವು ರೋಗಗಳನ್ನು ಎದುರಿಸಬಹುದು.

ಉದಾಹರಣೆಗೆ ನಾವು ಈಗ ಸಬ್ಸಿಡಿಯಲ್ಲಿ ಕೊಡುತ್ತಿರುವ ಪಡಿತರಗಳೆಂದರೆ ಮುಖ್ಯವಾಗಿ ಅಕ್ಕಿ, ಗೋದಿ ಮತ್ತು ಸಕ್ಕರೆ. ಇವು ಮೂರು ಕೂಡ ಮಾನವನಿಗೆ ಬೇಕಾದಂತಹ ಪಕೃತಿ ಸಹಜ ಆಹಾರವಲ್ಲ. ಅಂದರೆ ಧಾನ್ಯಗಳು ಜನರಿಗೆ ಬೇಕಾದಂತಹ ಆಹಾರ ಅಲ್ಲ. ಜನರಿಗೆ ಬೇಡದಂತ ಆಹಾರವನ್ನು ಸಬ್ಸಡಿ ಮೂಲಕ ಕೊಟ್ಟಾಗ ಬಡವರು, ದುರ್ಬಲರು, ಅಂಚಿಗೆ ತಳ್ಳಲ್ಪಟ್ಟವರು ಆಹಾರವಲ್ಲದ ಧಾನ್ಯವನ್ನು ಅನಿವಾರ್ಯವಾಗಿ ಅಧಿಕವಾಗಿ ಸೇವಿಸುತ್ತಾರೆ. ಇದರಿಂದಾಗಿ ಅವರ ಚಯಾಪಚಯ ಅನಿಯಮಿತವಾಗುತ್ತದೆ. ಪರಿಣಾಮವಾಗಿ ಸ್ಥೂಲಕಾಯತೆ, ಮದುಮೇಹ, ಅಧಿಕ ರಕ್ತಒತ್ತಡ ಇಂತಹ ಮಾರಕ ರೋಗಗಳು ಕಾಣುತ್ತವೆ. ಆದ್ದರಿಂದ ವೈಜ್ಞಾನಿಕವಾದ ಸಬ್ಸಿಡಿ ಆಹಾರಗಳನ್ನು ಕೊಡುವುದು ಪ್ರಭುತ್ವದ ಪ್ರಾಥಮಿಕ ಕರ್ತವ್ಯವಾಗಬೇಕು. ಅದಕ್ಕಾಗಿ ನಾವು ಹೋರಾಟ ಮಾಡಬೇಕು.

ವೈಜ್ಞಾನಿಕ ಸಬ್ಸಿಡಿ ಆಹಾರ ಎಂದರೆ ಮರದಲ್ಲಿ ಬೆಳೆಯುವ ಬೀಜ ಕಾಳುಗಳು, (ಗೇರು ಬೀಜ, ಬಾದಾಮಿ, ಪಿಸ್ತ) ಇವುಗಳೆಲ್ಲ ಒಂದು ಭಾಗ. ಎರಡನೇಯದು ಹಸಿರು ತರಕಾರಿಗಳು. ಮೂರನೇಯದು ಮೊಟ್ಟೆ ಮತ್ತು ನಾಲ್ಕನೆಯದು ತಾಜಾ ಮಾಂಸ ಮತ್ತು ಮೀನು. (ಪ್ಯಾಕ್ ಮಾಡಿರುವುದು, ಫ್ರೀಜರ್ ನಲ್ಲಿಟ್ಟು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ ತಿನ್ನುವುದು ಒಳ್ಳಯದಲ್ಲ. ಅಂದರೆ ಕೈಗಾರಿಕೆ ಆಧಾರಿತ ಮಾಂಸ ಒಳ್ಳೆಯದಲ್ಲ) ಇವುಗಳನ್ನು ಜನರಿಗೆ ತುಂಬಾ ಅಗ್ಗವಾಗಿ, ಕೈಗೆಟುಕುವ ಬೆಲೆಯಲ್ಲಿ ಕೊಟ್ಟಾಗ ಸ್ವಾಭಾವಿಕವಾಗಿ ಬಡವರು, ದುರ್ಬಲರು ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಅವರ ಚಯಾಪಚಾಯ ಅಭಿವೃದ್ದಿಗೊಂಡು ಉತ್ತಮ ಜೀವನಶೈಲಿ ರೂಡಿಯಾಗುತ್ತದೆ. ಆಗ ನಮ್ಮ ದೇಶದಲ್ಲಿ ಮೇಲಿನ ರೋಗಗಳು ಕಡಿಮೆಯಾಗುತ್ತವೆ. ಇದಕ್ಕೆ ಸಂಘಟನಾತ್ಮಕ ಒತ್ತಾಯ ಅಗತ್ಯ.

ಅಕ್ಕಿ ಗೋಧಿಯಂತಹ ‌ ಸಕ್ಕರೆ ಅಂಶ ತುಂಬಿಕೊಂಡಿರುವ ಧಾನ್ಯಗಳಿಗೆ ಸರ್ಕಾರಗಳು ಸಬ್ಸಿಡಿ ಕೊಡುವುದರಲ್ಲಿ ಯಾವುದೇ ರೀತಿಯ ವೈಜ್ಞಾನಿಕ ತಳಹದಿ ಇಲ್ಲ. ಬದಲಿಗೆ ಸಸಾರಜನಕ ಆಹಾರ ಪದಾರ್ಥ ಅಧಿಕವಾಗಿರುವ ಆಹಾರಗಳು ಬಡವರಿಗೆ ಸುಲಭವಾಗಿ ಸಿಗುವಂತೆ ವೈಜ್ಞಾನಿಕ ಸಬ್ಸಿಡಿ ಕೊಡಬೇಕಾದರೆ ಸಂಘಟನಾತ್ಮಕ, ರಾಜಕೀಯ, ಶೈಕ್ಷಣಿಕ ಹೋರಾಟದ ಅನಿವಾರ್ಯತೆ ಇದೆ.

ಎರಡನೇಯದು ಸಮಾನ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಯ ವಿಷಯ. ಎಲ್ಲಿ ಬಡತನವಿರುತ್ತದೆಯೊ ಅಲ್ಲಿ ಅಪೌಷ್ಠಿಕತೆ ಇರುತ್ತದೆ. ಎಲ್ಲಿ ಅಪೌಷ್ಟಿಕತೆ ಇರುತ್ತದೆಯೋ ಅಲ್ಲಿ ರೋಗಗಳಿರುತ್ತವೆ. ಆದ ಕಾರಣ ಬಡತನ ಮತ್ತು ರೋಗಗಳು ಎರಡು ಜೊತೆಗೆ ಇರುತ್ತವೆ. ಈ ವಿಷವರ್ತುಲವನ್ನು ನಾವು ತುಂಡರಿಸಬೇಕಾದರೆ ಸಮಾಜದಲ್ಲಿ ಬಡತನವನ್ನು ಮೊದಲು ತೆಗೆಯಬೇಕು. ಈ ಹೋರಾಟ ಕೂಡ ಡಯಾಬಿಟಿಸ್ ನಿರ್ಮೂಲನೆ ಮಾಡುವುದಕ್ಕೆ ಪ್ರಯೋಜನವಾಗುತ್ತದೆ ಎಂಬುದನ್ನು ನಾವು ಸಮಾಜಕ್ಕೆ, ಸರ್ಕಾರಗಳಿಗೆ ಮನವರಿಕೆ ಮಾಡಬೇಕು.

ಅವೈಜ್ಞಾನಿಕ ಮತ್ತು ಸಕ್ಕರೆ ಭರಿತ ಆಹಾರ ಸಬ್ಸಿಡಿಯಿಂದಲೇ ಮೊದಲು ಶ್ರೀಮಂತರಲ್ಲಿ ಹೆಚ್ಚಾಗಿ ಇದ್ದ ಈ ರೋಗಗಳು ಇತ್ತೀಚೆಗೆ ಬಡವರಲ್ಲಿ ಮತ್ತು ದುರ್ಬಲರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಒಂದು ವೈಜ್ಞಾನಿಕವಾದ ಆಹಾರ ಸಬ್ಸಿಡಿ ಮತ್ತು ಸಮಾನ ಸಾಮಾಜಿಕ, ಆರ್ಥಿಕ ಅಭಿವೃದ್ದಿ ಸಾಧಿಸಬೇಕಾಗಿರುವುದು ತುರ್ತು ಅಗತ್ಯವಾಗಿದೆ. ಅಂದರೆ ಸಮಗ್ರ ಮತ್ತು ಸಂಪೂರ್ಣ ಕ್ರಾಂತಿಯಾಗಬೇಕಿದೆ. ಈ ಎರಡನ್ನೂ ಒಟ್ಟೊಟ್ಟಿಗೆ ಮಾಡಲು ಹೊರಟಾಗ ಸಮಾಜದಲ್ಲಿ ಈ ಡಯಾಬಿಟಿಸ್ ಮತ್ತು ಸ್ಥೂಲಕಾಯತೆಯ ಪ್ರಮಾಣವನ್ನು ತಗ್ಗಿಸಬಹುದು. ಇದು ನಮ್ಮ ಪ್ರಾಥಮಿಕ ಅಗತ್ಯತೆಯಾಗಿರಬೇಕು.

ಇದಕ್ಕೆ ಯಾವುದೇ ಆಧುನಿಕ ತಂತ್ರಜ್ಞಾನದ ಅಗತ್ಯವಿಲ್ಲ. ದೊಡ್ಡ ಬಂಡವಾಳ ಹೂಡಿಕೆ ಬೇಕಿಲ್ಲ ಮತ್ತು ಮುಖ್ಯವಾಗಿ ಕಾರ್ಪೊರೇಟ್‌ಗಳ ಅನಿವಾರ್ಯತೆ ಇರುವುದಿಲ್ಲ. ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಸುಲಭವಾಗಿ ಸಾಧಿಸಬಹುದಾಗಿದೆ. ಈ ದೃಷ್ಟಿಕೋನದಲ್ಲಿ ನಾವು ನಮ್ಮ ರಾಜಕೀಯ ಚಿಂತನೆಗಳು, ಹೋರಾಟಗಳು ಮತ್ತು ಮತದಾನದ ಆದ್ಯತೆ ಬದಲಿಸಿಕೊಳ್ಳಬೇಕಿದೆ. ಆರೋಗ್ಯಕರ ದೇಹ, ಆರೋಗ್ಯಕರ ಮನಸ್ಸುಗಳನ್ನು ಸೃಷ್ಟಿಸಲು ಪ್ರತಿಯೊಬ್ಬರು ಇದಕ್ಕೆ ಆದ್ಯತೆ ಕೊಡಬೇಕೆಂಬುದು ನನ್ನ ಕಳಕಳಿಯ ವಿನಂತಿ.

ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್

(ತಜ್ಞ ವೈದ್ಯರು ಮತ್ತು ಸಂಶೋಧಕರು. ನ್ಯೂಯಾರ್ಕ್ ಮೆಟ್ರೋಪಾಲಿಟನ್ ಆಸ್ಪತ್ರೆ, ನ್ಯೂಯಾರ್ಕ್ ನಗರ)


ಇದನ್ನೂ ಓದಿ: ಕರ್ನಾಟಕದ ಆರ್ಥಿಕ ಚಿಂತನೆಯ ಕೊಡುಗೆ ಮತ್ತು ಸಾರ್ವಜನಿಕ ವಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತುಂಬಾ ಉತ್ತಮವಾದ ವಿಚಾರನೇ. ಸರಕಾರ ಉಚಿತವಾಗಿ ಬಡ ಜನರಿಗೆ ಆಹಾರ ಪೂರೈಕೆ ಮಾಡುವುದರಲ್ಲಿ ಯಾವ ರೀತಿ ಮನಸ್ಸು ಅಥವಾ ಯೋಜನೆ ರೂಪಿಸುತ್ತದೆಯೋ ಇದರೊಂದಿಗೆ ಗುಣಮಟ್ಟದ ಆಹಾರ ಸಾಮಾಗ್ರಿಗಳ ಪೂರೈಕೆಯಲ್ಲೂ ಗಮನ ನೀಡಬೇಕಾಗಿದೆ. ಬಹುತೇಕ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ಬಡತನದಲ್ಲಿರಲು ಕಾರಣ; ಮೌಢ್ಯತೆಯ ನಂಬಿಕೆಗಳು. ದೇವರ ಪ್ರಸಾದ ರೂಪದಲ್ಲಿ ತಿನ್ನುವ ಆಹಾರ. ಯಾವ ಆಹಾರದಲ್ಲಿ ಎಷ್ಟು ತೊಂದರೆ ಇದೆ ಎಂಬುದು ಗೊತ್ತಿದ್ದರೂ ಆಚಾರ ಪದ್ಧತಿಗಳಿಗೆ ತೊಂದರೆ ಆಗುತ್ತದೆ ಎಂಬ ಭ್ರಮೆಯೂ ಇದೆ.

    ಉದಾಹರಣೆಗೆ ಅಂಗನವಾಡಿ ಎಂಬುದು ಒಂದು ಮಗುವಿಗೆ ಶೈಕ್ಷಣಿಕ ಸಂಸ್ಥೆಯ ತಳಹದಿ. ಇಲ್ಲಿ ಅಂಗನವಾಡಿ ಟೀಚರ್ ಎಂಬ ದೇವರು ಅವರ ಔದ್ಯೋಗಿಕ ನೆಲೆಯಲ್ಲಿ ಮಕ್ಕಳೊಂದಿಗೆ ಮತ್ತು ಹೊರಗಿನ ವಾತಾವರಣದಲ್ಲಿ ಆಡುವ ಮಾತುಗಳಲ್ಲೂ ಗೌರವಯುತವಾಗಿರುವ ಸಂಸ್ಕಾರ ಸೃಷ್ಟಿ ಆಗಿರಬೇಕು. ಟೀಚರ್ ಮಾತಿನ ಕ್ರಮದಲ್ಲೂ ಆಹಾರ ಪದ್ಧತಿಯ ಕ್ರಮದಲ್ಲೂ ಅರಿವು ಇರುವ ವ್ಯಕ್ತಿ ಆಗಿದ್ದು ಶಿಕ್ಷಣದಲ್ಲಿ ಜ್ಞಾನವಂತರಾಗಿ ಸರಕಾರದಿಂದ ಉತ್ತಮ ವೇತನ ಪಡೆಯುವುದರೊಂದಿಗೆ ಇದ್ದರೆ ಬಡತನ ನಿರ್ಮೂಲನೆ ಆಗಬಹುದು. ಟೀಚರ್ ಸಂಸ್ಕಾರವಂತರಾದರೆ ಮಕ್ಕಳು ಚೆನ್ನಾಗಿರುತ್ತಾರೆ. ಮಕ್ಕಳು ಉತ್ತಮರಾದರೆ ಮನೆಯೂ ಅಭಿವೃದ್ಧಿ ಹೊಂದುತ್ತದೆ. ಮನೆ ಅಭಿವೃದ್ಧಿ ಆದರೆ ಸಮಾಜ, ಗ್ರಾಮ, ದೇಶ ಎಲ್ಲಾ ಚೆನ್ನಾಗಿರುತ್ತದೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...