Homeಆರೋಗ್ಯಮದುಮೇಹ ವಿರುದ್ಧ ರಾಜಕೀಯ ಹೋರಾಟ ಅಗತ್ಯ: ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್

ಮದುಮೇಹ ವಿರುದ್ಧ ರಾಜಕೀಯ ಹೋರಾಟ ಅಗತ್ಯ: ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್

ಎಲ್ಲಿ ಬಡತನವಿರುತ್ತದೆಯೊ ಅಲ್ಲಿ ಅಪೌಷ್ಠಿಕತೆ ಇರುತ್ತದೆ. ಎಲ್ಲಿ ಅಪೌಷ್ಟಿಕತೆ ಇರುತ್ತದೆಯೋ ಅಲ್ಲಿ ರೋಗಗಳಿರುತ್ತವೆ. ಬಡತನ ಮತ್ತು ರೋಗಗಳು ಎರಡು ಜೊತೆಗೆ ಇರುತ್ತವೆ.

- Advertisement -
- Advertisement -

ವಿಶ್ವ ಮದುಮೇಹ ದಿನದ ಅಂಗವಾಗಿ ಅಮೆರಿಕದ ನ್ಯೂಯಾರ್ಕ್ ಮೆಟ್ರೋಪಾಲಿಟನ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್‌ರವರು ಬರೆದ ವಿಶೇಷ ಲೇಖನವಿದು.

ಮದುಮೇಹ ಒಂದು ಜೀವನ ಶೈಲಿಯ ರೋಗ. ಅದರಲ್ಲೂ, ನಾವು ತಿನ್ನುವ ಆಹಾರ ನಮ್ಮ ಚಯಾಪಚಯವನ್ನು ನಿರ್ಧರಿಸುತ್ತದೆ. ಆದ್ದರಿಂದ ಮದುಮೇಹವನ್ನು ಮಟ್ಟ ಹಾಕಲು ಸಹಜ ಚಯಾಪಚಯಕ್ಕೆ ಪೂರಕವಾದ ಆಹಾರ ಅಗತ್ಯ.

ಆಹಾರದ ಆಯ್ಕೆಯು ವಯಕ್ತಿಕ ನಿರ್ಧಾರಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಸಂಸ್ಕೃತಿ, ಪೂರ್ವಾಗ್ರಹಗಳು, ನಂಬಿಕೆಗಳು, ಆಹಾರವನ್ನು ಖರೀದಿಸುವ ಅಥವಾ ಉತ್ಪಾದಿಸುವ ಸಾಮಾಜಿಕ ತಾಕತ್ತು.. ಹೀಗೆ ಹಲವು ಅಂಶಗಳು ಕೆಲಸ ಮಾಡುತ್ತವೆ. ಯಾವಾಗ ಪೌಷ್ಟಿಕ ಆಹಾರ ಸೇವನೆಗೆ ಈ ಎಲ್ಲ ಅಂಶಗಳು ತಡೆಗೋಡೆಯಾಗುತ್ತವೆಯೋ, ಆವಾಗ ಅಪೌಷ್ಟಿಕತೆ ನೆಲೆಯೂರಿ ಚಯಾಪಚಾಕ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಪರಿಣಾಮವಾಗಿ, ಸ್ಥೂಲಕಾಯತೆ, ಮದುಮೇಹ, ಅಧಿಕ ರಕ್ತಒತ್ತಡ ಇಂತಹ ಮಾರಕ ರೋಗಗಳು ಕಾಣಿಸಿಕೊಳ್ಳುತ್ತವೆ.

ಒಂದು ಸಮಾಜದಲ್ಲಿ ಇಂತಹ ರೋಗಗಳು ಹೆಚ್ಚಾಗಿ ಕಾಣಸಿಗುವಾಗ, ಪ್ರಬಲ ಸಾಮಾಜಿಕ ಬದಲಾವಣೆ ಅಗತ್ಯ ಬೀಳುತ್ತದೆ. ಈ ಸಾಮಾಜಿಕ ಬದಲಾವಣೆಗಳು ಜನರಲ್ಲಿ ಆಹಾರ ಭದ್ರತೆಯನ್ನು ಒದಗಿಸುವ ಕಡೆಗೆ ಹೋಗಬೇಕು.

ಯಾವುದೇ ಸಾಮಾಜಿಕ ವರ್ತನೆಗಳ ಬದಲಾವಣೆಯಲ್ಲಿ ರಾಜಕೀಯ ಇಚ್ಚಾಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರ ಭದ್ರತೆಯ ಮುಖೇನ ಮಟ್ಟ ಹಾಕುವ ಪ್ರಕ್ರಿಯೆ ಇದಕ್ಕೆ ಹೊರತಾಗಿಲ್ಲ. ಇಂತಹ ರಚನಾತ್ಮಕ ಹೋರಾಟದಲ್ಲಿ ಸಾಮೂಹಿಕ ಮತ್ತು ಸಂಘಟನಾತ್ಮಕ ಭಾಗವಹಿಸುವಿಕೆ ಅಗತ್ಯ. ಇದು ಸಾಮಾಜಿಕ ಬಂಡವಾಳವನ್ನು ಬಲಪಡಿಸುತ್ತದೆ ಮತ್ತು ಬದಲಾವಣೆಯನ್ನು ಸುಲಭಗೊಳಿಸುತ್ತದೆ.

ಮದುಮೇಹ ಎಂದರೆ ನಾವು ರೋಗ ಮತ್ತು ಚಿಕಿತ್ಸೆ ಎಂಬುದಾಗಿ ಯೋಚನೆ ಮಾಡುತ್ತೇವೆ. ಒಬ್ಬ ರೋಗಿ ಮತ್ತು ಒಬ್ಬ ವೈದ್ಯರಿದ್ದು ಅದಕ್ಕೆ ಔಷಧಿ ನೀಡುವ ಮೂಲಕ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ. ಆದರೆ ಇದು ಧೀರ್ಘಕಾಲಿಕವಾಗಿ ಸುಸ್ಥಿರವಲ್ಲ. ಏಕೆಂದರೆ ಈಗ ನಮ್ಮ ಕರ್ನಾಟಕದಲ್ಲಿ ಸ್ಥೂಲಕಾಯತೆ, ಆಧಿಕ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್, ಡಯಾಬಿಟಿಸ್ ಇವೆಲ್ಲವುಗಲನ್ನು ಗಮನದಲ್ಲಿಟ್ಟುಕೊಂಡರೆ ಶೇ. 25% ರಿಂದ 30% ಜನರಲ್ಲಿ ಈ ಮೇಲಿನವುಗಳಲ್ಲಿ ಯಾವುದಾದರೂ ಒಂದು ಅಥವಾ ಎರಡು ರೋಗಗಳು ಇರುತ್ತವೆ. ಈ 30% ಜನರಿಗೆ ಸದಾ ಔ‍ಷಧ ನೀಡುತ್ತಾ ನಾವು ನಿಭಾಯಿಸಿಕೊಂಡು ಹೋಗಲು ಸಾಧ್ಯವಿಲ್ಲ. ಅದರ ಅಗತ್ಯವೂ ನಮಗಿಲ್ಲ. ಬದಲಿಗೆ ನಾವು ಬಹಳ ಸರಳವಾಗಿ ಇದನ್ನು ನಿಭಾಯಿಸಬಹುದು ಹಾಗೂ ನಿಯಂತ್ರಣ ಮಾಡಬಹುದು. ಅದನ್ನು ಮಾಡಲಿಕ್ಕೆ ನಮಗೆ ಮುಖ್ಯವಾಗಿ ಸಾಮಾಜಿಕ ಬದಲಾವಣೆ ಬೇಕಿದೆ. ಅಂದರೆ ಆಹಾರದಲ್ಲಿ ಬರಬೇಕಾದ ಬದಲಾವಣೆಗಳನ್ನು ನಾವು ಚಾಚೂತಪ್ಪದೆ ಮಾಡುತ್ತಾ ಹೋಗಬೇಕು.

ಆಹಾರದ ಬದಲಾವಣೆಯು ಆಹಾರದ ಭದ್ರತೆಯ ಕಡೆಗೆ ಹೋಗಬೇಕಾದರೆ ಅದಕ್ಕೊಂದು ರಾಜಕೀಯ ಬದಲಾವಣೆ ಅಗತ್ಯವಿದೆ. ಈ ರಾಜಕೀಯ ಬದಲಾವಣೆ ಏಕೆಂದರೆ ನಮ್ಮ ಆಹಾರ ಕೊಳ್ಳುವ ಶಕ್ತಿ ಸಾಮಾಜಿಕ, ಆರ್ಥಿಕ ಸ್ಥಿತಿಯ ಮೇಲೆ ಹಾಗೂ ಸರ್ಕಾರದ ನೀತಿಗಳ ಮೇಲೆ ಅವಲಂಬಿತವಾಗಿದೆ. ಈ ನೀತಿಗಳಲ್ಲಿ ಬದಲಾವಣೆ ಮಾಡುವುದರ ಮೂಲಕ, ವೈಜ್ಞಾನಿಕ ರೀತಿಯಲ್ಲಿ ಸಬ್ಸಿಡಿ ಕೊಡುವುದರ ಮೂಲಕ ನಾವು ಆಹಾರ ಬದಲಾವಣೆ ಮತ್ತು ಭದ್ರತೆಯನ್ನು ಸಾಧಿಸಬಹುದು. ಡಯಾಬಿಟೀಸ್ ನಂತಹ ಹಲವು ರೋಗಗಳನ್ನು ಎದುರಿಸಬಹುದು.

ಉದಾಹರಣೆಗೆ ನಾವು ಈಗ ಸಬ್ಸಿಡಿಯಲ್ಲಿ ಕೊಡುತ್ತಿರುವ ಪಡಿತರಗಳೆಂದರೆ ಮುಖ್ಯವಾಗಿ ಅಕ್ಕಿ, ಗೋದಿ ಮತ್ತು ಸಕ್ಕರೆ. ಇವು ಮೂರು ಕೂಡ ಮಾನವನಿಗೆ ಬೇಕಾದಂತಹ ಪಕೃತಿ ಸಹಜ ಆಹಾರವಲ್ಲ. ಅಂದರೆ ಧಾನ್ಯಗಳು ಜನರಿಗೆ ಬೇಕಾದಂತಹ ಆಹಾರ ಅಲ್ಲ. ಜನರಿಗೆ ಬೇಡದಂತ ಆಹಾರವನ್ನು ಸಬ್ಸಡಿ ಮೂಲಕ ಕೊಟ್ಟಾಗ ಬಡವರು, ದುರ್ಬಲರು, ಅಂಚಿಗೆ ತಳ್ಳಲ್ಪಟ್ಟವರು ಆಹಾರವಲ್ಲದ ಧಾನ್ಯವನ್ನು ಅನಿವಾರ್ಯವಾಗಿ ಅಧಿಕವಾಗಿ ಸೇವಿಸುತ್ತಾರೆ. ಇದರಿಂದಾಗಿ ಅವರ ಚಯಾಪಚಯ ಅನಿಯಮಿತವಾಗುತ್ತದೆ. ಪರಿಣಾಮವಾಗಿ ಸ್ಥೂಲಕಾಯತೆ, ಮದುಮೇಹ, ಅಧಿಕ ರಕ್ತಒತ್ತಡ ಇಂತಹ ಮಾರಕ ರೋಗಗಳು ಕಾಣುತ್ತವೆ. ಆದ್ದರಿಂದ ವೈಜ್ಞಾನಿಕವಾದ ಸಬ್ಸಿಡಿ ಆಹಾರಗಳನ್ನು ಕೊಡುವುದು ಪ್ರಭುತ್ವದ ಪ್ರಾಥಮಿಕ ಕರ್ತವ್ಯವಾಗಬೇಕು. ಅದಕ್ಕಾಗಿ ನಾವು ಹೋರಾಟ ಮಾಡಬೇಕು.

ವೈಜ್ಞಾನಿಕ ಸಬ್ಸಿಡಿ ಆಹಾರ ಎಂದರೆ ಮರದಲ್ಲಿ ಬೆಳೆಯುವ ಬೀಜ ಕಾಳುಗಳು, (ಗೇರು ಬೀಜ, ಬಾದಾಮಿ, ಪಿಸ್ತ) ಇವುಗಳೆಲ್ಲ ಒಂದು ಭಾಗ. ಎರಡನೇಯದು ಹಸಿರು ತರಕಾರಿಗಳು. ಮೂರನೇಯದು ಮೊಟ್ಟೆ ಮತ್ತು ನಾಲ್ಕನೆಯದು ತಾಜಾ ಮಾಂಸ ಮತ್ತು ಮೀನು. (ಪ್ಯಾಕ್ ಮಾಡಿರುವುದು, ಫ್ರೀಜರ್ ನಲ್ಲಿಟ್ಟು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ ತಿನ್ನುವುದು ಒಳ್ಳಯದಲ್ಲ. ಅಂದರೆ ಕೈಗಾರಿಕೆ ಆಧಾರಿತ ಮಾಂಸ ಒಳ್ಳೆಯದಲ್ಲ) ಇವುಗಳನ್ನು ಜನರಿಗೆ ತುಂಬಾ ಅಗ್ಗವಾಗಿ, ಕೈಗೆಟುಕುವ ಬೆಲೆಯಲ್ಲಿ ಕೊಟ್ಟಾಗ ಸ್ವಾಭಾವಿಕವಾಗಿ ಬಡವರು, ದುರ್ಬಲರು ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಅವರ ಚಯಾಪಚಾಯ ಅಭಿವೃದ್ದಿಗೊಂಡು ಉತ್ತಮ ಜೀವನಶೈಲಿ ರೂಡಿಯಾಗುತ್ತದೆ. ಆಗ ನಮ್ಮ ದೇಶದಲ್ಲಿ ಮೇಲಿನ ರೋಗಗಳು ಕಡಿಮೆಯಾಗುತ್ತವೆ. ಇದಕ್ಕೆ ಸಂಘಟನಾತ್ಮಕ ಒತ್ತಾಯ ಅಗತ್ಯ.

ಅಕ್ಕಿ ಗೋಧಿಯಂತಹ ‌ ಸಕ್ಕರೆ ಅಂಶ ತುಂಬಿಕೊಂಡಿರುವ ಧಾನ್ಯಗಳಿಗೆ ಸರ್ಕಾರಗಳು ಸಬ್ಸಿಡಿ ಕೊಡುವುದರಲ್ಲಿ ಯಾವುದೇ ರೀತಿಯ ವೈಜ್ಞಾನಿಕ ತಳಹದಿ ಇಲ್ಲ. ಬದಲಿಗೆ ಸಸಾರಜನಕ ಆಹಾರ ಪದಾರ್ಥ ಅಧಿಕವಾಗಿರುವ ಆಹಾರಗಳು ಬಡವರಿಗೆ ಸುಲಭವಾಗಿ ಸಿಗುವಂತೆ ವೈಜ್ಞಾನಿಕ ಸಬ್ಸಿಡಿ ಕೊಡಬೇಕಾದರೆ ಸಂಘಟನಾತ್ಮಕ, ರಾಜಕೀಯ, ಶೈಕ್ಷಣಿಕ ಹೋರಾಟದ ಅನಿವಾರ್ಯತೆ ಇದೆ.

ಎರಡನೇಯದು ಸಮಾನ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಯ ವಿಷಯ. ಎಲ್ಲಿ ಬಡತನವಿರುತ್ತದೆಯೊ ಅಲ್ಲಿ ಅಪೌಷ್ಠಿಕತೆ ಇರುತ್ತದೆ. ಎಲ್ಲಿ ಅಪೌಷ್ಟಿಕತೆ ಇರುತ್ತದೆಯೋ ಅಲ್ಲಿ ರೋಗಗಳಿರುತ್ತವೆ. ಆದ ಕಾರಣ ಬಡತನ ಮತ್ತು ರೋಗಗಳು ಎರಡು ಜೊತೆಗೆ ಇರುತ್ತವೆ. ಈ ವಿಷವರ್ತುಲವನ್ನು ನಾವು ತುಂಡರಿಸಬೇಕಾದರೆ ಸಮಾಜದಲ್ಲಿ ಬಡತನವನ್ನು ಮೊದಲು ತೆಗೆಯಬೇಕು. ಈ ಹೋರಾಟ ಕೂಡ ಡಯಾಬಿಟಿಸ್ ನಿರ್ಮೂಲನೆ ಮಾಡುವುದಕ್ಕೆ ಪ್ರಯೋಜನವಾಗುತ್ತದೆ ಎಂಬುದನ್ನು ನಾವು ಸಮಾಜಕ್ಕೆ, ಸರ್ಕಾರಗಳಿಗೆ ಮನವರಿಕೆ ಮಾಡಬೇಕು.

ಅವೈಜ್ಞಾನಿಕ ಮತ್ತು ಸಕ್ಕರೆ ಭರಿತ ಆಹಾರ ಸಬ್ಸಿಡಿಯಿಂದಲೇ ಮೊದಲು ಶ್ರೀಮಂತರಲ್ಲಿ ಹೆಚ್ಚಾಗಿ ಇದ್ದ ಈ ರೋಗಗಳು ಇತ್ತೀಚೆಗೆ ಬಡವರಲ್ಲಿ ಮತ್ತು ದುರ್ಬಲರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಒಂದು ವೈಜ್ಞಾನಿಕವಾದ ಆಹಾರ ಸಬ್ಸಿಡಿ ಮತ್ತು ಸಮಾನ ಸಾಮಾಜಿಕ, ಆರ್ಥಿಕ ಅಭಿವೃದ್ದಿ ಸಾಧಿಸಬೇಕಾಗಿರುವುದು ತುರ್ತು ಅಗತ್ಯವಾಗಿದೆ. ಅಂದರೆ ಸಮಗ್ರ ಮತ್ತು ಸಂಪೂರ್ಣ ಕ್ರಾಂತಿಯಾಗಬೇಕಿದೆ. ಈ ಎರಡನ್ನೂ ಒಟ್ಟೊಟ್ಟಿಗೆ ಮಾಡಲು ಹೊರಟಾಗ ಸಮಾಜದಲ್ಲಿ ಈ ಡಯಾಬಿಟಿಸ್ ಮತ್ತು ಸ್ಥೂಲಕಾಯತೆಯ ಪ್ರಮಾಣವನ್ನು ತಗ್ಗಿಸಬಹುದು. ಇದು ನಮ್ಮ ಪ್ರಾಥಮಿಕ ಅಗತ್ಯತೆಯಾಗಿರಬೇಕು.

ಇದಕ್ಕೆ ಯಾವುದೇ ಆಧುನಿಕ ತಂತ್ರಜ್ಞಾನದ ಅಗತ್ಯವಿಲ್ಲ. ದೊಡ್ಡ ಬಂಡವಾಳ ಹೂಡಿಕೆ ಬೇಕಿಲ್ಲ ಮತ್ತು ಮುಖ್ಯವಾಗಿ ಕಾರ್ಪೊರೇಟ್‌ಗಳ ಅನಿವಾರ್ಯತೆ ಇರುವುದಿಲ್ಲ. ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಸುಲಭವಾಗಿ ಸಾಧಿಸಬಹುದಾಗಿದೆ. ಈ ದೃಷ್ಟಿಕೋನದಲ್ಲಿ ನಾವು ನಮ್ಮ ರಾಜಕೀಯ ಚಿಂತನೆಗಳು, ಹೋರಾಟಗಳು ಮತ್ತು ಮತದಾನದ ಆದ್ಯತೆ ಬದಲಿಸಿಕೊಳ್ಳಬೇಕಿದೆ. ಆರೋಗ್ಯಕರ ದೇಹ, ಆರೋಗ್ಯಕರ ಮನಸ್ಸುಗಳನ್ನು ಸೃಷ್ಟಿಸಲು ಪ್ರತಿಯೊಬ್ಬರು ಇದಕ್ಕೆ ಆದ್ಯತೆ ಕೊಡಬೇಕೆಂಬುದು ನನ್ನ ಕಳಕಳಿಯ ವಿನಂತಿ.

ಡಾ.ಸಂದೀಪ್ ಸಾಮೆತ್ತಡ್ಕ ನಾಯಕ್

(ತಜ್ಞ ವೈದ್ಯರು ಮತ್ತು ಸಂಶೋಧಕರು. ನ್ಯೂಯಾರ್ಕ್ ಮೆಟ್ರೋಪಾಲಿಟನ್ ಆಸ್ಪತ್ರೆ, ನ್ಯೂಯಾರ್ಕ್ ನಗರ)


ಇದನ್ನೂ ಓದಿ: ಕರ್ನಾಟಕದ ಆರ್ಥಿಕ ಚಿಂತನೆಯ ಕೊಡುಗೆ ಮತ್ತು ಸಾರ್ವಜನಿಕ ವಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತುಂಬಾ ಉತ್ತಮವಾದ ವಿಚಾರನೇ. ಸರಕಾರ ಉಚಿತವಾಗಿ ಬಡ ಜನರಿಗೆ ಆಹಾರ ಪೂರೈಕೆ ಮಾಡುವುದರಲ್ಲಿ ಯಾವ ರೀತಿ ಮನಸ್ಸು ಅಥವಾ ಯೋಜನೆ ರೂಪಿಸುತ್ತದೆಯೋ ಇದರೊಂದಿಗೆ ಗುಣಮಟ್ಟದ ಆಹಾರ ಸಾಮಾಗ್ರಿಗಳ ಪೂರೈಕೆಯಲ್ಲೂ ಗಮನ ನೀಡಬೇಕಾಗಿದೆ. ಬಹುತೇಕ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ಬಡತನದಲ್ಲಿರಲು ಕಾರಣ; ಮೌಢ್ಯತೆಯ ನಂಬಿಕೆಗಳು. ದೇವರ ಪ್ರಸಾದ ರೂಪದಲ್ಲಿ ತಿನ್ನುವ ಆಹಾರ. ಯಾವ ಆಹಾರದಲ್ಲಿ ಎಷ್ಟು ತೊಂದರೆ ಇದೆ ಎಂಬುದು ಗೊತ್ತಿದ್ದರೂ ಆಚಾರ ಪದ್ಧತಿಗಳಿಗೆ ತೊಂದರೆ ಆಗುತ್ತದೆ ಎಂಬ ಭ್ರಮೆಯೂ ಇದೆ.

    ಉದಾಹರಣೆಗೆ ಅಂಗನವಾಡಿ ಎಂಬುದು ಒಂದು ಮಗುವಿಗೆ ಶೈಕ್ಷಣಿಕ ಸಂಸ್ಥೆಯ ತಳಹದಿ. ಇಲ್ಲಿ ಅಂಗನವಾಡಿ ಟೀಚರ್ ಎಂಬ ದೇವರು ಅವರ ಔದ್ಯೋಗಿಕ ನೆಲೆಯಲ್ಲಿ ಮಕ್ಕಳೊಂದಿಗೆ ಮತ್ತು ಹೊರಗಿನ ವಾತಾವರಣದಲ್ಲಿ ಆಡುವ ಮಾತುಗಳಲ್ಲೂ ಗೌರವಯುತವಾಗಿರುವ ಸಂಸ್ಕಾರ ಸೃಷ್ಟಿ ಆಗಿರಬೇಕು. ಟೀಚರ್ ಮಾತಿನ ಕ್ರಮದಲ್ಲೂ ಆಹಾರ ಪದ್ಧತಿಯ ಕ್ರಮದಲ್ಲೂ ಅರಿವು ಇರುವ ವ್ಯಕ್ತಿ ಆಗಿದ್ದು ಶಿಕ್ಷಣದಲ್ಲಿ ಜ್ಞಾನವಂತರಾಗಿ ಸರಕಾರದಿಂದ ಉತ್ತಮ ವೇತನ ಪಡೆಯುವುದರೊಂದಿಗೆ ಇದ್ದರೆ ಬಡತನ ನಿರ್ಮೂಲನೆ ಆಗಬಹುದು. ಟೀಚರ್ ಸಂಸ್ಕಾರವಂತರಾದರೆ ಮಕ್ಕಳು ಚೆನ್ನಾಗಿರುತ್ತಾರೆ. ಮಕ್ಕಳು ಉತ್ತಮರಾದರೆ ಮನೆಯೂ ಅಭಿವೃದ್ಧಿ ಹೊಂದುತ್ತದೆ. ಮನೆ ಅಭಿವೃದ್ಧಿ ಆದರೆ ಸಮಾಜ, ಗ್ರಾಮ, ದೇಶ ಎಲ್ಲಾ ಚೆನ್ನಾಗಿರುತ್ತದೆ.

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...