Homeಅಂಕಣಗಳುವಿಶ್ವ ಸಿದ್ದೇಶ್ವರರು ತ್ರಿಮತಸ್ಥರಂತೆ ಕಂಗೊಳಿಸಿದರಂತಲ್ಲಾ

ವಿಶ್ವ ಸಿದ್ದೇಶ್ವರರು ತ್ರಿಮತಸ್ಥರಂತೆ ಕಂಗೊಳಿಸಿದರಂತಲ್ಲಾ

- Advertisement -
- Advertisement -

ಭಾರತಕ್ಕೆ ವಕ್ಕರಿಸಿರುವ, ಮೋದಿ ಶಾ ಎಂಬ ಕರಟಕ ದಮನಕರಿಂದ ಇಡೀ ಭಾರತದ ಮನೆಯ ನೆಮ್ಮದಿಯೇ ಹಾಳಾಗಿದೆಯಂತಲ್ಲಾ. ಅದು ಸಹಜ. ಮನೆಯ ಒಬ್ಬ ಸದಸ್ಯನ ತಲೆ ಕೆಟ್ಟರೆ ಆತ ಯಾವ ಸಮಯದಲ್ಲಿ ಏನು ಮಾಡುತ್ತಾನೋ ಎಂದು ಹೆದರಿದ ಮನೆಯ ಸದಸ್ಯರು ಕ್ಷೋಭೆಗೆ ತುತ್ತಾಗಿರುತ್ತಾರೆ. ಆದರೆ ಎರಡು ಜನ ತಲೆಕೆಟ್ಟವರಿದ್ದರೆ ಕತೆಯೇನು? ಇಂತದ್ದೊಂದು ಸ್ಥಿತಿಯನ್ನು ಭಾರತಾಂಬೆಯ ಅವಿಭಕ್ತ ಕುಟುಂಬ ಎದರಿಸುತ್ತಿದೆ. ಅಚ್ಚರಿಯ ಸಂಗತಿ ಎಂದರೆ ತಲೆಕೆಟ್ಟ ಗಿರಾಕಿಗಳೇ ಮನೆಯ ಯಜಮಾನರುಗಳಾಗಿರುವುದು. ಒಮ್ಮೊಮ್ಮೆ ಅವನಾಡುವ ಮಾತನ್ನು ಇವನಾಡುತ್ತಾನೆ, ಇವನ ಮಾತನ್ನು ಅವನಾಡುತ್ತಾನೆ. ಯಾರು ಯಾವ ಮಾತನ್ನಾಡಬಾರದೊ ಅವರೇ ಆಡುತ್ತಾ ಭಾರತವನ್ನೆ ಅತಂತ್ರಕ್ಕೆ ದೂಡಿಬಿಟ್ಟಿದ್ದಾರೆ. ಇದರಿಂದ ಭಾರತದ ಸಮಸ್ತ ಜನಕೋಟಿಯೇ ಆತಂಕಕ್ಕೀಡಾಗಿದೆ. ಆದರೆ ಈ ಪೈಕಿ ಬಿಜೆಪಿಯಲ್ಲಿ ಆಶ್ರಯ ಪಡೆದಿರುವ ಜನ ಮಾತ್ರ ಯಂಥದೋ ಖುಷಿಯಿಂದ ಕೇಕೆ ಹಾಕುತ್ತಿವೆ. ಸೂಕ್ಷ್ಮವಾಗಿ ನೋಡಿದರೆ ಕರಟಕ ದಮನಕರ ಮನಸ್ಥಿತಿ ಇವರಿಗೂ ಆವರಿಸಿರುವ ಕಾರಣಕ್ಕೇ ಈ ಕೇಕೆಯಂತಲ್ಲಾ ಥೂತ್ತೇರಿ….

ಕೃಷ್ಣ ಭಗವಧ್ಗೀತೆಯ ಹೊರಗೂ ಒಂದು ಮಾತನ್ನಾಡಿದ್ದಾನೆ. ದುರ್ಯೋಧನನಿಂದ ಇಡೀ ಕುರುವಂಶವೇ ಯುದ್ಧ ಎದುರಿಸಿ, ನಾಶವಾಗುವುದರ ಬದಲು ದುರ್ಯೋಧನನನ್ನೇ ನಿಯಂತ್ರಿಸಿದರೆ ಹೇಗೆ? ಅಂದರೆ, ಒಂದು ದೇಶ ಉಳಿಸುವ ಸಲುವಾಗಿ ಒಂದು ಗ್ರಾಮವನ್ನು ಬಲಿಕೊಡಬೇಕಾಗಿ ಬಂದರೆ ಹಿಂದೆ ಮುಂದೆ ನೋಡಬಾರದು, ಹಾಗೆಯೇ ಒಂದು ಊರನ್ನ ಉಳಿಸಬೇಕಾದರೆ ಒಂದು ಕುಟುಂಬದ ಬಲಿಯ ಅಗತ್ಯಬಿದ್ದರೆ, ಕನಿಕರ ಒಳ್ಳೆಯದಲ್ಲ. ಅದರಂತೆ ಒಂದು ಕುಟುಂಬದ ಉಳುವಿಗಾಗಿ ಒಬ್ಬ ವ್ಯಕ್ತಿಯ ಬಲಿ ಅನಿವಾರ್ಯವಾದರೆ ಬಲಿಕೊಡಲೇಬೇಕು ಎಂದು ಕೃಷ್ಣ ಹೇಳಿದ್ದಾನೆ, ಆದರೆ, ಇದು ಕತೆಯಾಯಿತು. ಭಾರತದ ಸಂವಿಧಾನದ ರೀತ್ಯ ಚುನಾವಣೆಯಲ್ಲಿ ಆರಿಸಿ ಬಂದು ಪ್ರಧಾನಿಯಾದವ, ತನ್ನನ್ನು ಆರಿಸಿದ ಎಂ.ಪಿ.ಗಳ ಬೀಜವನೇ ಎಗರಿಸಿ ಸೀಡ್‍ಲೆಸ್ ಎಂಪಿಗಳನ್ನಾಗಿಸಿದ್ದಾನೆ. ಧಿಕ್ಕಾರ ಕೂಗಿದವನನ್ನೇ ಜೈಲಿಗೆ ಹಾಕುತ್ತೇನೆ ಎನ್ನುತ್ತಿದ್ದಾನೆ. ಅಂತೂ ಆತನ ಹುಲಿ ಸವಾರಿಗೊಂದು ಅಂತ್ಯ ಬರಬೇಕಾದರೆ ಮತ್ತೆ ಚುನಾವಣೆ ಬರಬೇಕು. ಆದರೆ ಅದೂ ಭಯ, ಏಕೆಂದರೆ ಕರ್ನಾಟಕದ ಜನತಾ ಜನಾರ್ಧನ ಅನರ್ಹರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾನಲ್ಲಾ ಥೂತ್ತೇರಿ…

ಇದ್ದುದರಲ್ಲಿ ಹುಣಸೂರಿನ ಜನ ಅನರ್ಹ ವಿಶ್ವನಾಥರನ್ನ ಸೋಲಿಸಿ, ತಕ್ಕ ಉತ್ತರ ಕೊಟ್ಟಿದ್ದಾರಂತಲ್ಲಾ. ತನ್ನ ಸೋಲಿಗೆ ಸಿದ್ದು ಕಾರಣ ಎಂದು ಹೇಳಿದ ವಿಶ್ವನಾಥ್ ಮೊನ್ನೆ ದೊಡ್ಡಕೊಪ್ಪಲಿನಲ್ಲಿ ಸಿದ್ದುವನ್ನು ಮಧ್ಯಕ್ಕೆ ಕೂರಿಸಿಕೊಂಡು ಆಕಡೆಗೆ ಈಶ್ವರಪ್ಪನನ್ನು ಸ್ಥಾಪಿಸಿಕೊಂಡು ಬ್ರಾಹ್ಮಣ ಸಮಾಜದ ತ್ರಿಮತಸ್ಥರಂತೆ ವಿರಾಜಮಾನರಾಗಿದ್ದು ನೋಡಿದ ದೊಡ್ಡಕೊಪ್ಪಲ ಕುರುಬರ ಕಣ್ಣಲ್ಲಿ ಆನಂದ ಭಾಷ್ಪಾ ಹರಿದು ಹೋದವಂತಲ್ಲಾ. ಕರ್ನಾಟಕದ ಬ್ರಾಹ್ಮಣ ಸಮಾಜದ ರಾಜಕಾರಣಿಗಳು, ತ್ರಿಮತಸ್ಥರು ಒಂದಾದರೆ ಅದೆಷ್ಟು ಚಂದ, ಮತ್ತೆ ಪುರೋಹಿತಶಾಹಿ ಕಾಲ ಮರುಕಳಿಸುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹರಸಾಹಸ ಪಡುತ್ತಿರಬೇಕಾದರೆ ಕುರುಬ ಕುಲದ ತ್ರಿಮತಸ್ಥರಂತೆ ಕಾಣುವ ಸಿದ್ದು ವಿಶ್ವ ಈಶ್ವರ ಬಾಡಿನೂಟಕ್ಕೆ ಸೇರಿದ ಬಾಡು ಒಕ್ಕರಂತೆ ಒಂದೇ ಮೈಕಿನಿಂದ ಪರಸ್ಪರ ಹಿಗ್ಗಾಮುಗ್ಗಾ ಹೊಗಳಿಕೊಂಡರಲ್ಲಾ. ಹಾಗೆ ನೋಡಿದರೆ, ಈ ಮೂವರು ತ್ರಿಮತಸ್ಥರೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಮನೋಗತದಲ್ಲಿ ಕುಲಾಚರಣೆಯಲ್ಲಿ ಪ್ರತಿನಿಧಿಸುವ ಪಾರ್ಟಿ ವಿಷಯದಲ್ಲೂ ಇವರು ತ್ರಿಮತಸ್ಥರಂತಲ್ಲಾ ಥೂತ್ತೇರಿ…

ಬ್ರಾಹ್ಮಣ ತ್ರಿಮತಸ್ಥರು ಒಂದಾಗುವ ಅಗತ್ಯವಿಲ್ಲ. ಏಕೆಂದರೆ ಪುರೋಹಿತಶಾಹಿ ಚಿಹ್ನೆಯಾದ ಬೆಲ್ಟು ಅವರನ್ನೆಲ್ಲಾ ಬಂಧಿಸಿದೆ. ಅವರ ಯೋಗಕ್ಷೇಮವನ್ನು ಆರೆಸೆಸ್ಸ್ ನೋಡಿಕೊಳ್ಳುತ್ತಿದೆ. ಆದರೆ ಕುರುಬರಿಗೆ ಅಂತ ಬೆಲ್ಟೇ ಇಲ್ಲ. ವಿಶ್ವನಾಥ ಮತ ಕೆದಕಿದರೆ ಕಾಂಗ್ರೆಸ್ ಮನೆ ಇತಿಹಾಸ ಹೇಳುತ್ತಾರೆ. ಸಿದ್ದು ಕುಲಕೇಳಿದರೆ ಜನತಾದಳದ ಮನೆಬಿಟ್ಟು ಬಂದ ಅಗಲಿಕೆ ವಾಸನೆ ಇನ್ನೂ ಇದೆ. ಈ ಪೈಕಿ ಈಶ್ವರಪ್ಪ ಮಾತ್ರ ಹೆಸರಿಗೆ ಕುರುಬ ಅಷ್ಟೇ, ಆತನ ಮಾತು ಮನಸ್ಸು ಚಡ್ಡಿಮಯವಾಗಿದೆ. ಅದಕ್ಕೆ ಉಡುಪಿಯಲ್ಲಿ ಕನಕ ಗೋಪುರವೇ ಇರಲಿಲ್ಲ ಎಂದುದಲ್ಲದೆ, ಅಧಿಕಾರ ಇರಲಿ ಇಲ್ಲದಿರಲಿ ಆತ ಮಾಡುವ ಕೆಲಸದಲ್ಲಿ ಮೊದಲನೆಯದು ಬ್ರಾಹ್ಮಣರ ಪರಿಚಾರಿಕೆ. ನಂತರ ಲಿಂಗಾಯಿತರದ್ದು. ಉಳಿದಂತೆ ಮರೆಯಲ್ಲಿ ಕುರುಬರದ್ದು. ಸಾರ್ವಜನಿಕವಾಗಿ ಖಂಡನೆ, ಹೀಯಾಳಿಕೆ ಮೂದಲಿಕೆ ಮಾತುಗಳನ್ನಾಡಿದರೂ ಕೂಡ, ದೊಡ್ಡಕೊಪ್ಪಲ ಮೈದಾನದಲಿ ವಿಶ್ವಸಿದ್ದೇಶ್ವರರ ಸಮಾಗಮ ನೋಡಿದ ಒಕ್ಕಲಿಗರು “ನೋಡಿರ್ಲ ಅವುರ್ಯಂಗೆ ಒಂಥಾಯಿ ಮಕ್ಕಳಂಗೆ ಕುಂತವರೆ! ನಮ್ಮದ್ಯಾವೇಗೌಡ ಜೀವಮಾನದಲ್ಲಿ ಹಿಂಗೆ ನಮ್ಮ ಜಾತಿ ಲೀಡ್ರು ಜತೆ ಕುಂತಿದ್ದ ನೋಡಕ್ಕಾಗಲೇಯಿಲವಲ್ಲಾ” ಎಂದು ಹಲುಬಿದರಂತಲ್ಲಾ. ಥೂತ್ತೇರಿ..

ಮೊನ್ನೆ ಮೊನ್ನೆಯವರೆಗೆ ಒಂದೇ ತಂದೆಯ ಮಕ್ಕಳಂತೆ ಕಂಗೊಳಿಸಿದ್ದ ಕುಮಾರಣ್ಣ ಮತ್ತು ಈಶ್ವರಣ್ಣ ಕೋಳಿಗಳಂತೆ ಜಗಳಕ್ಕೆ ಬಿದ್ದಿದ್ದಾರಲ್ಲಾ, ಇದನ್ನೇನು ಗಂಭೀರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಈಶ್ವರಪ್ಪ ಸಿದ್ದು ಜಗಳ ಮತ್ತು ವಿಶ್ವನಾಥ್ ಸಿದ್ದು ಫೈಟಿಂಗ್ ನೋಡಿದವರಿಗೆ ಮೊನ್ನೆ ನಡೆದ ದೊಡ್ಡಕೊಪ್ಪಲ ಸಭೆ ನೆನಪಿಸಿಕೊಂಡರೆ ಸಾಕು, ಈ ನಟಸಾರ್ವಭೌಮರ ಜಗಳ ನಟನೆಯೆಂಬುದು ಸಾಬೀತಾಗಿದೆ. ಇದೇ ಈಶ್ವರಪ್ಪ 2013ರ ಚುನಾವಣೆಯಲ್ಲಿ `ನಿಮ್ಮ ಜೆಡಿಎಸ್ ಅಭ್ಯರ್ಥಿ ಶಿವಮೊಗ್ಗದಲ್ಲಿ ತೊಡಕಾಗಿದ್ದಾನೆ’ ಎಂದು ಕುಮಾರಣ್ಣನಿಗೆ ಫೋನ್ ಮಾಡಿದಾಗ, ಕುಮಾರಣ್ಣ “ಆಯ್ತು ಬ್ರದರ್ ಹೆದರಬೇಡಿ” ಎಂದು ಆಶ್ವಾಸನೆ ಕೊಟ್ಟ ಮರುದಿನದಿಂದಲೇ ಜೆ.ಡಿ.ಎಸ್ ಕ್ಯಾಂಡಿಡೇಟ್ ಶ್ರೀಕಾಂತ್ ಕೈಗೆ ಯಾವ ಕಾರ್ಯಕರ್ತರೂ ಸಿಗಲಿಲ್ಲ. ಆದರೇನು ಲಿಂಗಾಯಿತರು ಈಶ್ವರಪ್ಪನನ್ನ ಮಗ್ಗ ಮಲಗಿಸಿದ್ದರು. ಆಪತ್ಕಾಲದಲ್ಲಿ ಸಹಾಯ ಮಾಡುವ ಕುಮಾರಣ್ಣನೇ ಈಗ `ಈಶ್ವರಪ್ಪನ ನಾಲಿಗೆ ಇರಬೇಕಾದ ಜಾಗದಲ್ಲಿ ಇರಬೇಕು’ ಎಂದಿದ್ದಾರಲ್ಲಾ. ವಿಶ್ವನಾಥ್ ಸಿದ್ದು ಜಗಳದ ಎದುರು ಇದ್ಯಾವ ಮಹಾ ಅಂತೀರಾ ಥೂತ್ತೇರಿ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...