Homeಅಂಕಣಗಳುವಿಶ್ವ ಸಿದ್ದೇಶ್ವರರು ತ್ರಿಮತಸ್ಥರಂತೆ ಕಂಗೊಳಿಸಿದರಂತಲ್ಲಾ

ವಿಶ್ವ ಸಿದ್ದೇಶ್ವರರು ತ್ರಿಮತಸ್ಥರಂತೆ ಕಂಗೊಳಿಸಿದರಂತಲ್ಲಾ

- Advertisement -
- Advertisement -

ಭಾರತಕ್ಕೆ ವಕ್ಕರಿಸಿರುವ, ಮೋದಿ ಶಾ ಎಂಬ ಕರಟಕ ದಮನಕರಿಂದ ಇಡೀ ಭಾರತದ ಮನೆಯ ನೆಮ್ಮದಿಯೇ ಹಾಳಾಗಿದೆಯಂತಲ್ಲಾ. ಅದು ಸಹಜ. ಮನೆಯ ಒಬ್ಬ ಸದಸ್ಯನ ತಲೆ ಕೆಟ್ಟರೆ ಆತ ಯಾವ ಸಮಯದಲ್ಲಿ ಏನು ಮಾಡುತ್ತಾನೋ ಎಂದು ಹೆದರಿದ ಮನೆಯ ಸದಸ್ಯರು ಕ್ಷೋಭೆಗೆ ತುತ್ತಾಗಿರುತ್ತಾರೆ. ಆದರೆ ಎರಡು ಜನ ತಲೆಕೆಟ್ಟವರಿದ್ದರೆ ಕತೆಯೇನು? ಇಂತದ್ದೊಂದು ಸ್ಥಿತಿಯನ್ನು ಭಾರತಾಂಬೆಯ ಅವಿಭಕ್ತ ಕುಟುಂಬ ಎದರಿಸುತ್ತಿದೆ. ಅಚ್ಚರಿಯ ಸಂಗತಿ ಎಂದರೆ ತಲೆಕೆಟ್ಟ ಗಿರಾಕಿಗಳೇ ಮನೆಯ ಯಜಮಾನರುಗಳಾಗಿರುವುದು. ಒಮ್ಮೊಮ್ಮೆ ಅವನಾಡುವ ಮಾತನ್ನು ಇವನಾಡುತ್ತಾನೆ, ಇವನ ಮಾತನ್ನು ಅವನಾಡುತ್ತಾನೆ. ಯಾರು ಯಾವ ಮಾತನ್ನಾಡಬಾರದೊ ಅವರೇ ಆಡುತ್ತಾ ಭಾರತವನ್ನೆ ಅತಂತ್ರಕ್ಕೆ ದೂಡಿಬಿಟ್ಟಿದ್ದಾರೆ. ಇದರಿಂದ ಭಾರತದ ಸಮಸ್ತ ಜನಕೋಟಿಯೇ ಆತಂಕಕ್ಕೀಡಾಗಿದೆ. ಆದರೆ ಈ ಪೈಕಿ ಬಿಜೆಪಿಯಲ್ಲಿ ಆಶ್ರಯ ಪಡೆದಿರುವ ಜನ ಮಾತ್ರ ಯಂಥದೋ ಖುಷಿಯಿಂದ ಕೇಕೆ ಹಾಕುತ್ತಿವೆ. ಸೂಕ್ಷ್ಮವಾಗಿ ನೋಡಿದರೆ ಕರಟಕ ದಮನಕರ ಮನಸ್ಥಿತಿ ಇವರಿಗೂ ಆವರಿಸಿರುವ ಕಾರಣಕ್ಕೇ ಈ ಕೇಕೆಯಂತಲ್ಲಾ ಥೂತ್ತೇರಿ….

ಕೃಷ್ಣ ಭಗವಧ್ಗೀತೆಯ ಹೊರಗೂ ಒಂದು ಮಾತನ್ನಾಡಿದ್ದಾನೆ. ದುರ್ಯೋಧನನಿಂದ ಇಡೀ ಕುರುವಂಶವೇ ಯುದ್ಧ ಎದುರಿಸಿ, ನಾಶವಾಗುವುದರ ಬದಲು ದುರ್ಯೋಧನನನ್ನೇ ನಿಯಂತ್ರಿಸಿದರೆ ಹೇಗೆ? ಅಂದರೆ, ಒಂದು ದೇಶ ಉಳಿಸುವ ಸಲುವಾಗಿ ಒಂದು ಗ್ರಾಮವನ್ನು ಬಲಿಕೊಡಬೇಕಾಗಿ ಬಂದರೆ ಹಿಂದೆ ಮುಂದೆ ನೋಡಬಾರದು, ಹಾಗೆಯೇ ಒಂದು ಊರನ್ನ ಉಳಿಸಬೇಕಾದರೆ ಒಂದು ಕುಟುಂಬದ ಬಲಿಯ ಅಗತ್ಯಬಿದ್ದರೆ, ಕನಿಕರ ಒಳ್ಳೆಯದಲ್ಲ. ಅದರಂತೆ ಒಂದು ಕುಟುಂಬದ ಉಳುವಿಗಾಗಿ ಒಬ್ಬ ವ್ಯಕ್ತಿಯ ಬಲಿ ಅನಿವಾರ್ಯವಾದರೆ ಬಲಿಕೊಡಲೇಬೇಕು ಎಂದು ಕೃಷ್ಣ ಹೇಳಿದ್ದಾನೆ, ಆದರೆ, ಇದು ಕತೆಯಾಯಿತು. ಭಾರತದ ಸಂವಿಧಾನದ ರೀತ್ಯ ಚುನಾವಣೆಯಲ್ಲಿ ಆರಿಸಿ ಬಂದು ಪ್ರಧಾನಿಯಾದವ, ತನ್ನನ್ನು ಆರಿಸಿದ ಎಂ.ಪಿ.ಗಳ ಬೀಜವನೇ ಎಗರಿಸಿ ಸೀಡ್‍ಲೆಸ್ ಎಂಪಿಗಳನ್ನಾಗಿಸಿದ್ದಾನೆ. ಧಿಕ್ಕಾರ ಕೂಗಿದವನನ್ನೇ ಜೈಲಿಗೆ ಹಾಕುತ್ತೇನೆ ಎನ್ನುತ್ತಿದ್ದಾನೆ. ಅಂತೂ ಆತನ ಹುಲಿ ಸವಾರಿಗೊಂದು ಅಂತ್ಯ ಬರಬೇಕಾದರೆ ಮತ್ತೆ ಚುನಾವಣೆ ಬರಬೇಕು. ಆದರೆ ಅದೂ ಭಯ, ಏಕೆಂದರೆ ಕರ್ನಾಟಕದ ಜನತಾ ಜನಾರ್ಧನ ಅನರ್ಹರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾನಲ್ಲಾ ಥೂತ್ತೇರಿ…

ಇದ್ದುದರಲ್ಲಿ ಹುಣಸೂರಿನ ಜನ ಅನರ್ಹ ವಿಶ್ವನಾಥರನ್ನ ಸೋಲಿಸಿ, ತಕ್ಕ ಉತ್ತರ ಕೊಟ್ಟಿದ್ದಾರಂತಲ್ಲಾ. ತನ್ನ ಸೋಲಿಗೆ ಸಿದ್ದು ಕಾರಣ ಎಂದು ಹೇಳಿದ ವಿಶ್ವನಾಥ್ ಮೊನ್ನೆ ದೊಡ್ಡಕೊಪ್ಪಲಿನಲ್ಲಿ ಸಿದ್ದುವನ್ನು ಮಧ್ಯಕ್ಕೆ ಕೂರಿಸಿಕೊಂಡು ಆಕಡೆಗೆ ಈಶ್ವರಪ್ಪನನ್ನು ಸ್ಥಾಪಿಸಿಕೊಂಡು ಬ್ರಾಹ್ಮಣ ಸಮಾಜದ ತ್ರಿಮತಸ್ಥರಂತೆ ವಿರಾಜಮಾನರಾಗಿದ್ದು ನೋಡಿದ ದೊಡ್ಡಕೊಪ್ಪಲ ಕುರುಬರ ಕಣ್ಣಲ್ಲಿ ಆನಂದ ಭಾಷ್ಪಾ ಹರಿದು ಹೋದವಂತಲ್ಲಾ. ಕರ್ನಾಟಕದ ಬ್ರಾಹ್ಮಣ ಸಮಾಜದ ರಾಜಕಾರಣಿಗಳು, ತ್ರಿಮತಸ್ಥರು ಒಂದಾದರೆ ಅದೆಷ್ಟು ಚಂದ, ಮತ್ತೆ ಪುರೋಹಿತಶಾಹಿ ಕಾಲ ಮರುಕಳಿಸುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹರಸಾಹಸ ಪಡುತ್ತಿರಬೇಕಾದರೆ ಕುರುಬ ಕುಲದ ತ್ರಿಮತಸ್ಥರಂತೆ ಕಾಣುವ ಸಿದ್ದು ವಿಶ್ವ ಈಶ್ವರ ಬಾಡಿನೂಟಕ್ಕೆ ಸೇರಿದ ಬಾಡು ಒಕ್ಕರಂತೆ ಒಂದೇ ಮೈಕಿನಿಂದ ಪರಸ್ಪರ ಹಿಗ್ಗಾಮುಗ್ಗಾ ಹೊಗಳಿಕೊಂಡರಲ್ಲಾ. ಹಾಗೆ ನೋಡಿದರೆ, ಈ ಮೂವರು ತ್ರಿಮತಸ್ಥರೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಮನೋಗತದಲ್ಲಿ ಕುಲಾಚರಣೆಯಲ್ಲಿ ಪ್ರತಿನಿಧಿಸುವ ಪಾರ್ಟಿ ವಿಷಯದಲ್ಲೂ ಇವರು ತ್ರಿಮತಸ್ಥರಂತಲ್ಲಾ ಥೂತ್ತೇರಿ…

ಬ್ರಾಹ್ಮಣ ತ್ರಿಮತಸ್ಥರು ಒಂದಾಗುವ ಅಗತ್ಯವಿಲ್ಲ. ಏಕೆಂದರೆ ಪುರೋಹಿತಶಾಹಿ ಚಿಹ್ನೆಯಾದ ಬೆಲ್ಟು ಅವರನ್ನೆಲ್ಲಾ ಬಂಧಿಸಿದೆ. ಅವರ ಯೋಗಕ್ಷೇಮವನ್ನು ಆರೆಸೆಸ್ಸ್ ನೋಡಿಕೊಳ್ಳುತ್ತಿದೆ. ಆದರೆ ಕುರುಬರಿಗೆ ಅಂತ ಬೆಲ್ಟೇ ಇಲ್ಲ. ವಿಶ್ವನಾಥ ಮತ ಕೆದಕಿದರೆ ಕಾಂಗ್ರೆಸ್ ಮನೆ ಇತಿಹಾಸ ಹೇಳುತ್ತಾರೆ. ಸಿದ್ದು ಕುಲಕೇಳಿದರೆ ಜನತಾದಳದ ಮನೆಬಿಟ್ಟು ಬಂದ ಅಗಲಿಕೆ ವಾಸನೆ ಇನ್ನೂ ಇದೆ. ಈ ಪೈಕಿ ಈಶ್ವರಪ್ಪ ಮಾತ್ರ ಹೆಸರಿಗೆ ಕುರುಬ ಅಷ್ಟೇ, ಆತನ ಮಾತು ಮನಸ್ಸು ಚಡ್ಡಿಮಯವಾಗಿದೆ. ಅದಕ್ಕೆ ಉಡುಪಿಯಲ್ಲಿ ಕನಕ ಗೋಪುರವೇ ಇರಲಿಲ್ಲ ಎಂದುದಲ್ಲದೆ, ಅಧಿಕಾರ ಇರಲಿ ಇಲ್ಲದಿರಲಿ ಆತ ಮಾಡುವ ಕೆಲಸದಲ್ಲಿ ಮೊದಲನೆಯದು ಬ್ರಾಹ್ಮಣರ ಪರಿಚಾರಿಕೆ. ನಂತರ ಲಿಂಗಾಯಿತರದ್ದು. ಉಳಿದಂತೆ ಮರೆಯಲ್ಲಿ ಕುರುಬರದ್ದು. ಸಾರ್ವಜನಿಕವಾಗಿ ಖಂಡನೆ, ಹೀಯಾಳಿಕೆ ಮೂದಲಿಕೆ ಮಾತುಗಳನ್ನಾಡಿದರೂ ಕೂಡ, ದೊಡ್ಡಕೊಪ್ಪಲ ಮೈದಾನದಲಿ ವಿಶ್ವಸಿದ್ದೇಶ್ವರರ ಸಮಾಗಮ ನೋಡಿದ ಒಕ್ಕಲಿಗರು “ನೋಡಿರ್ಲ ಅವುರ್ಯಂಗೆ ಒಂಥಾಯಿ ಮಕ್ಕಳಂಗೆ ಕುಂತವರೆ! ನಮ್ಮದ್ಯಾವೇಗೌಡ ಜೀವಮಾನದಲ್ಲಿ ಹಿಂಗೆ ನಮ್ಮ ಜಾತಿ ಲೀಡ್ರು ಜತೆ ಕುಂತಿದ್ದ ನೋಡಕ್ಕಾಗಲೇಯಿಲವಲ್ಲಾ” ಎಂದು ಹಲುಬಿದರಂತಲ್ಲಾ. ಥೂತ್ತೇರಿ..

ಮೊನ್ನೆ ಮೊನ್ನೆಯವರೆಗೆ ಒಂದೇ ತಂದೆಯ ಮಕ್ಕಳಂತೆ ಕಂಗೊಳಿಸಿದ್ದ ಕುಮಾರಣ್ಣ ಮತ್ತು ಈಶ್ವರಣ್ಣ ಕೋಳಿಗಳಂತೆ ಜಗಳಕ್ಕೆ ಬಿದ್ದಿದ್ದಾರಲ್ಲಾ, ಇದನ್ನೇನು ಗಂಭೀರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಈಶ್ವರಪ್ಪ ಸಿದ್ದು ಜಗಳ ಮತ್ತು ವಿಶ್ವನಾಥ್ ಸಿದ್ದು ಫೈಟಿಂಗ್ ನೋಡಿದವರಿಗೆ ಮೊನ್ನೆ ನಡೆದ ದೊಡ್ಡಕೊಪ್ಪಲ ಸಭೆ ನೆನಪಿಸಿಕೊಂಡರೆ ಸಾಕು, ಈ ನಟಸಾರ್ವಭೌಮರ ಜಗಳ ನಟನೆಯೆಂಬುದು ಸಾಬೀತಾಗಿದೆ. ಇದೇ ಈಶ್ವರಪ್ಪ 2013ರ ಚುನಾವಣೆಯಲ್ಲಿ `ನಿಮ್ಮ ಜೆಡಿಎಸ್ ಅಭ್ಯರ್ಥಿ ಶಿವಮೊಗ್ಗದಲ್ಲಿ ತೊಡಕಾಗಿದ್ದಾನೆ’ ಎಂದು ಕುಮಾರಣ್ಣನಿಗೆ ಫೋನ್ ಮಾಡಿದಾಗ, ಕುಮಾರಣ್ಣ “ಆಯ್ತು ಬ್ರದರ್ ಹೆದರಬೇಡಿ” ಎಂದು ಆಶ್ವಾಸನೆ ಕೊಟ್ಟ ಮರುದಿನದಿಂದಲೇ ಜೆ.ಡಿ.ಎಸ್ ಕ್ಯಾಂಡಿಡೇಟ್ ಶ್ರೀಕಾಂತ್ ಕೈಗೆ ಯಾವ ಕಾರ್ಯಕರ್ತರೂ ಸಿಗಲಿಲ್ಲ. ಆದರೇನು ಲಿಂಗಾಯಿತರು ಈಶ್ವರಪ್ಪನನ್ನ ಮಗ್ಗ ಮಲಗಿಸಿದ್ದರು. ಆಪತ್ಕಾಲದಲ್ಲಿ ಸಹಾಯ ಮಾಡುವ ಕುಮಾರಣ್ಣನೇ ಈಗ `ಈಶ್ವರಪ್ಪನ ನಾಲಿಗೆ ಇರಬೇಕಾದ ಜಾಗದಲ್ಲಿ ಇರಬೇಕು’ ಎಂದಿದ್ದಾರಲ್ಲಾ. ವಿಶ್ವನಾಥ್ ಸಿದ್ದು ಜಗಳದ ಎದುರು ಇದ್ಯಾವ ಮಹಾ ಅಂತೀರಾ ಥೂತ್ತೇರಿ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...