Homeಅಂಕಣಗಳುವಿಶ್ವ ಸಿದ್ದೇಶ್ವರರು ತ್ರಿಮತಸ್ಥರಂತೆ ಕಂಗೊಳಿಸಿದರಂತಲ್ಲಾ

ವಿಶ್ವ ಸಿದ್ದೇಶ್ವರರು ತ್ರಿಮತಸ್ಥರಂತೆ ಕಂಗೊಳಿಸಿದರಂತಲ್ಲಾ

- Advertisement -
- Advertisement -

ಭಾರತಕ್ಕೆ ವಕ್ಕರಿಸಿರುವ, ಮೋದಿ ಶಾ ಎಂಬ ಕರಟಕ ದಮನಕರಿಂದ ಇಡೀ ಭಾರತದ ಮನೆಯ ನೆಮ್ಮದಿಯೇ ಹಾಳಾಗಿದೆಯಂತಲ್ಲಾ. ಅದು ಸಹಜ. ಮನೆಯ ಒಬ್ಬ ಸದಸ್ಯನ ತಲೆ ಕೆಟ್ಟರೆ ಆತ ಯಾವ ಸಮಯದಲ್ಲಿ ಏನು ಮಾಡುತ್ತಾನೋ ಎಂದು ಹೆದರಿದ ಮನೆಯ ಸದಸ್ಯರು ಕ್ಷೋಭೆಗೆ ತುತ್ತಾಗಿರುತ್ತಾರೆ. ಆದರೆ ಎರಡು ಜನ ತಲೆಕೆಟ್ಟವರಿದ್ದರೆ ಕತೆಯೇನು? ಇಂತದ್ದೊಂದು ಸ್ಥಿತಿಯನ್ನು ಭಾರತಾಂಬೆಯ ಅವಿಭಕ್ತ ಕುಟುಂಬ ಎದರಿಸುತ್ತಿದೆ. ಅಚ್ಚರಿಯ ಸಂಗತಿ ಎಂದರೆ ತಲೆಕೆಟ್ಟ ಗಿರಾಕಿಗಳೇ ಮನೆಯ ಯಜಮಾನರುಗಳಾಗಿರುವುದು. ಒಮ್ಮೊಮ್ಮೆ ಅವನಾಡುವ ಮಾತನ್ನು ಇವನಾಡುತ್ತಾನೆ, ಇವನ ಮಾತನ್ನು ಅವನಾಡುತ್ತಾನೆ. ಯಾರು ಯಾವ ಮಾತನ್ನಾಡಬಾರದೊ ಅವರೇ ಆಡುತ್ತಾ ಭಾರತವನ್ನೆ ಅತಂತ್ರಕ್ಕೆ ದೂಡಿಬಿಟ್ಟಿದ್ದಾರೆ. ಇದರಿಂದ ಭಾರತದ ಸಮಸ್ತ ಜನಕೋಟಿಯೇ ಆತಂಕಕ್ಕೀಡಾಗಿದೆ. ಆದರೆ ಈ ಪೈಕಿ ಬಿಜೆಪಿಯಲ್ಲಿ ಆಶ್ರಯ ಪಡೆದಿರುವ ಜನ ಮಾತ್ರ ಯಂಥದೋ ಖುಷಿಯಿಂದ ಕೇಕೆ ಹಾಕುತ್ತಿವೆ. ಸೂಕ್ಷ್ಮವಾಗಿ ನೋಡಿದರೆ ಕರಟಕ ದಮನಕರ ಮನಸ್ಥಿತಿ ಇವರಿಗೂ ಆವರಿಸಿರುವ ಕಾರಣಕ್ಕೇ ಈ ಕೇಕೆಯಂತಲ್ಲಾ ಥೂತ್ತೇರಿ….

ಕೃಷ್ಣ ಭಗವಧ್ಗೀತೆಯ ಹೊರಗೂ ಒಂದು ಮಾತನ್ನಾಡಿದ್ದಾನೆ. ದುರ್ಯೋಧನನಿಂದ ಇಡೀ ಕುರುವಂಶವೇ ಯುದ್ಧ ಎದುರಿಸಿ, ನಾಶವಾಗುವುದರ ಬದಲು ದುರ್ಯೋಧನನನ್ನೇ ನಿಯಂತ್ರಿಸಿದರೆ ಹೇಗೆ? ಅಂದರೆ, ಒಂದು ದೇಶ ಉಳಿಸುವ ಸಲುವಾಗಿ ಒಂದು ಗ್ರಾಮವನ್ನು ಬಲಿಕೊಡಬೇಕಾಗಿ ಬಂದರೆ ಹಿಂದೆ ಮುಂದೆ ನೋಡಬಾರದು, ಹಾಗೆಯೇ ಒಂದು ಊರನ್ನ ಉಳಿಸಬೇಕಾದರೆ ಒಂದು ಕುಟುಂಬದ ಬಲಿಯ ಅಗತ್ಯಬಿದ್ದರೆ, ಕನಿಕರ ಒಳ್ಳೆಯದಲ್ಲ. ಅದರಂತೆ ಒಂದು ಕುಟುಂಬದ ಉಳುವಿಗಾಗಿ ಒಬ್ಬ ವ್ಯಕ್ತಿಯ ಬಲಿ ಅನಿವಾರ್ಯವಾದರೆ ಬಲಿಕೊಡಲೇಬೇಕು ಎಂದು ಕೃಷ್ಣ ಹೇಳಿದ್ದಾನೆ, ಆದರೆ, ಇದು ಕತೆಯಾಯಿತು. ಭಾರತದ ಸಂವಿಧಾನದ ರೀತ್ಯ ಚುನಾವಣೆಯಲ್ಲಿ ಆರಿಸಿ ಬಂದು ಪ್ರಧಾನಿಯಾದವ, ತನ್ನನ್ನು ಆರಿಸಿದ ಎಂ.ಪಿ.ಗಳ ಬೀಜವನೇ ಎಗರಿಸಿ ಸೀಡ್‍ಲೆಸ್ ಎಂಪಿಗಳನ್ನಾಗಿಸಿದ್ದಾನೆ. ಧಿಕ್ಕಾರ ಕೂಗಿದವನನ್ನೇ ಜೈಲಿಗೆ ಹಾಕುತ್ತೇನೆ ಎನ್ನುತ್ತಿದ್ದಾನೆ. ಅಂತೂ ಆತನ ಹುಲಿ ಸವಾರಿಗೊಂದು ಅಂತ್ಯ ಬರಬೇಕಾದರೆ ಮತ್ತೆ ಚುನಾವಣೆ ಬರಬೇಕು. ಆದರೆ ಅದೂ ಭಯ, ಏಕೆಂದರೆ ಕರ್ನಾಟಕದ ಜನತಾ ಜನಾರ್ಧನ ಅನರ್ಹರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾನಲ್ಲಾ ಥೂತ್ತೇರಿ…

ಇದ್ದುದರಲ್ಲಿ ಹುಣಸೂರಿನ ಜನ ಅನರ್ಹ ವಿಶ್ವನಾಥರನ್ನ ಸೋಲಿಸಿ, ತಕ್ಕ ಉತ್ತರ ಕೊಟ್ಟಿದ್ದಾರಂತಲ್ಲಾ. ತನ್ನ ಸೋಲಿಗೆ ಸಿದ್ದು ಕಾರಣ ಎಂದು ಹೇಳಿದ ವಿಶ್ವನಾಥ್ ಮೊನ್ನೆ ದೊಡ್ಡಕೊಪ್ಪಲಿನಲ್ಲಿ ಸಿದ್ದುವನ್ನು ಮಧ್ಯಕ್ಕೆ ಕೂರಿಸಿಕೊಂಡು ಆಕಡೆಗೆ ಈಶ್ವರಪ್ಪನನ್ನು ಸ್ಥಾಪಿಸಿಕೊಂಡು ಬ್ರಾಹ್ಮಣ ಸಮಾಜದ ತ್ರಿಮತಸ್ಥರಂತೆ ವಿರಾಜಮಾನರಾಗಿದ್ದು ನೋಡಿದ ದೊಡ್ಡಕೊಪ್ಪಲ ಕುರುಬರ ಕಣ್ಣಲ್ಲಿ ಆನಂದ ಭಾಷ್ಪಾ ಹರಿದು ಹೋದವಂತಲ್ಲಾ. ಕರ್ನಾಟಕದ ಬ್ರಾಹ್ಮಣ ಸಮಾಜದ ರಾಜಕಾರಣಿಗಳು, ತ್ರಿಮತಸ್ಥರು ಒಂದಾದರೆ ಅದೆಷ್ಟು ಚಂದ, ಮತ್ತೆ ಪುರೋಹಿತಶಾಹಿ ಕಾಲ ಮರುಕಳಿಸುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹರಸಾಹಸ ಪಡುತ್ತಿರಬೇಕಾದರೆ ಕುರುಬ ಕುಲದ ತ್ರಿಮತಸ್ಥರಂತೆ ಕಾಣುವ ಸಿದ್ದು ವಿಶ್ವ ಈಶ್ವರ ಬಾಡಿನೂಟಕ್ಕೆ ಸೇರಿದ ಬಾಡು ಒಕ್ಕರಂತೆ ಒಂದೇ ಮೈಕಿನಿಂದ ಪರಸ್ಪರ ಹಿಗ್ಗಾಮುಗ್ಗಾ ಹೊಗಳಿಕೊಂಡರಲ್ಲಾ. ಹಾಗೆ ನೋಡಿದರೆ, ಈ ಮೂವರು ತ್ರಿಮತಸ್ಥರೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಮನೋಗತದಲ್ಲಿ ಕುಲಾಚರಣೆಯಲ್ಲಿ ಪ್ರತಿನಿಧಿಸುವ ಪಾರ್ಟಿ ವಿಷಯದಲ್ಲೂ ಇವರು ತ್ರಿಮತಸ್ಥರಂತಲ್ಲಾ ಥೂತ್ತೇರಿ…

ಬ್ರಾಹ್ಮಣ ತ್ರಿಮತಸ್ಥರು ಒಂದಾಗುವ ಅಗತ್ಯವಿಲ್ಲ. ಏಕೆಂದರೆ ಪುರೋಹಿತಶಾಹಿ ಚಿಹ್ನೆಯಾದ ಬೆಲ್ಟು ಅವರನ್ನೆಲ್ಲಾ ಬಂಧಿಸಿದೆ. ಅವರ ಯೋಗಕ್ಷೇಮವನ್ನು ಆರೆಸೆಸ್ಸ್ ನೋಡಿಕೊಳ್ಳುತ್ತಿದೆ. ಆದರೆ ಕುರುಬರಿಗೆ ಅಂತ ಬೆಲ್ಟೇ ಇಲ್ಲ. ವಿಶ್ವನಾಥ ಮತ ಕೆದಕಿದರೆ ಕಾಂಗ್ರೆಸ್ ಮನೆ ಇತಿಹಾಸ ಹೇಳುತ್ತಾರೆ. ಸಿದ್ದು ಕುಲಕೇಳಿದರೆ ಜನತಾದಳದ ಮನೆಬಿಟ್ಟು ಬಂದ ಅಗಲಿಕೆ ವಾಸನೆ ಇನ್ನೂ ಇದೆ. ಈ ಪೈಕಿ ಈಶ್ವರಪ್ಪ ಮಾತ್ರ ಹೆಸರಿಗೆ ಕುರುಬ ಅಷ್ಟೇ, ಆತನ ಮಾತು ಮನಸ್ಸು ಚಡ್ಡಿಮಯವಾಗಿದೆ. ಅದಕ್ಕೆ ಉಡುಪಿಯಲ್ಲಿ ಕನಕ ಗೋಪುರವೇ ಇರಲಿಲ್ಲ ಎಂದುದಲ್ಲದೆ, ಅಧಿಕಾರ ಇರಲಿ ಇಲ್ಲದಿರಲಿ ಆತ ಮಾಡುವ ಕೆಲಸದಲ್ಲಿ ಮೊದಲನೆಯದು ಬ್ರಾಹ್ಮಣರ ಪರಿಚಾರಿಕೆ. ನಂತರ ಲಿಂಗಾಯಿತರದ್ದು. ಉಳಿದಂತೆ ಮರೆಯಲ್ಲಿ ಕುರುಬರದ್ದು. ಸಾರ್ವಜನಿಕವಾಗಿ ಖಂಡನೆ, ಹೀಯಾಳಿಕೆ ಮೂದಲಿಕೆ ಮಾತುಗಳನ್ನಾಡಿದರೂ ಕೂಡ, ದೊಡ್ಡಕೊಪ್ಪಲ ಮೈದಾನದಲಿ ವಿಶ್ವಸಿದ್ದೇಶ್ವರರ ಸಮಾಗಮ ನೋಡಿದ ಒಕ್ಕಲಿಗರು “ನೋಡಿರ್ಲ ಅವುರ್ಯಂಗೆ ಒಂಥಾಯಿ ಮಕ್ಕಳಂಗೆ ಕುಂತವರೆ! ನಮ್ಮದ್ಯಾವೇಗೌಡ ಜೀವಮಾನದಲ್ಲಿ ಹಿಂಗೆ ನಮ್ಮ ಜಾತಿ ಲೀಡ್ರು ಜತೆ ಕುಂತಿದ್ದ ನೋಡಕ್ಕಾಗಲೇಯಿಲವಲ್ಲಾ” ಎಂದು ಹಲುಬಿದರಂತಲ್ಲಾ. ಥೂತ್ತೇರಿ..

ಮೊನ್ನೆ ಮೊನ್ನೆಯವರೆಗೆ ಒಂದೇ ತಂದೆಯ ಮಕ್ಕಳಂತೆ ಕಂಗೊಳಿಸಿದ್ದ ಕುಮಾರಣ್ಣ ಮತ್ತು ಈಶ್ವರಣ್ಣ ಕೋಳಿಗಳಂತೆ ಜಗಳಕ್ಕೆ ಬಿದ್ದಿದ್ದಾರಲ್ಲಾ, ಇದನ್ನೇನು ಗಂಭೀರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಈಶ್ವರಪ್ಪ ಸಿದ್ದು ಜಗಳ ಮತ್ತು ವಿಶ್ವನಾಥ್ ಸಿದ್ದು ಫೈಟಿಂಗ್ ನೋಡಿದವರಿಗೆ ಮೊನ್ನೆ ನಡೆದ ದೊಡ್ಡಕೊಪ್ಪಲ ಸಭೆ ನೆನಪಿಸಿಕೊಂಡರೆ ಸಾಕು, ಈ ನಟಸಾರ್ವಭೌಮರ ಜಗಳ ನಟನೆಯೆಂಬುದು ಸಾಬೀತಾಗಿದೆ. ಇದೇ ಈಶ್ವರಪ್ಪ 2013ರ ಚುನಾವಣೆಯಲ್ಲಿ `ನಿಮ್ಮ ಜೆಡಿಎಸ್ ಅಭ್ಯರ್ಥಿ ಶಿವಮೊಗ್ಗದಲ್ಲಿ ತೊಡಕಾಗಿದ್ದಾನೆ’ ಎಂದು ಕುಮಾರಣ್ಣನಿಗೆ ಫೋನ್ ಮಾಡಿದಾಗ, ಕುಮಾರಣ್ಣ “ಆಯ್ತು ಬ್ರದರ್ ಹೆದರಬೇಡಿ” ಎಂದು ಆಶ್ವಾಸನೆ ಕೊಟ್ಟ ಮರುದಿನದಿಂದಲೇ ಜೆ.ಡಿ.ಎಸ್ ಕ್ಯಾಂಡಿಡೇಟ್ ಶ್ರೀಕಾಂತ್ ಕೈಗೆ ಯಾವ ಕಾರ್ಯಕರ್ತರೂ ಸಿಗಲಿಲ್ಲ. ಆದರೇನು ಲಿಂಗಾಯಿತರು ಈಶ್ವರಪ್ಪನನ್ನ ಮಗ್ಗ ಮಲಗಿಸಿದ್ದರು. ಆಪತ್ಕಾಲದಲ್ಲಿ ಸಹಾಯ ಮಾಡುವ ಕುಮಾರಣ್ಣನೇ ಈಗ `ಈಶ್ವರಪ್ಪನ ನಾಲಿಗೆ ಇರಬೇಕಾದ ಜಾಗದಲ್ಲಿ ಇರಬೇಕು’ ಎಂದಿದ್ದಾರಲ್ಲಾ. ವಿಶ್ವನಾಥ್ ಸಿದ್ದು ಜಗಳದ ಎದುರು ಇದ್ಯಾವ ಮಹಾ ಅಂತೀರಾ ಥೂತ್ತೇರಿ….

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...