Homeಅಂಕಣಗಳುವಿಶ್ವ ಸಿದ್ದೇಶ್ವರರು ತ್ರಿಮತಸ್ಥರಂತೆ ಕಂಗೊಳಿಸಿದರಂತಲ್ಲಾ

ವಿಶ್ವ ಸಿದ್ದೇಶ್ವರರು ತ್ರಿಮತಸ್ಥರಂತೆ ಕಂಗೊಳಿಸಿದರಂತಲ್ಲಾ

- Advertisement -
- Advertisement -

ಭಾರತಕ್ಕೆ ವಕ್ಕರಿಸಿರುವ, ಮೋದಿ ಶಾ ಎಂಬ ಕರಟಕ ದಮನಕರಿಂದ ಇಡೀ ಭಾರತದ ಮನೆಯ ನೆಮ್ಮದಿಯೇ ಹಾಳಾಗಿದೆಯಂತಲ್ಲಾ. ಅದು ಸಹಜ. ಮನೆಯ ಒಬ್ಬ ಸದಸ್ಯನ ತಲೆ ಕೆಟ್ಟರೆ ಆತ ಯಾವ ಸಮಯದಲ್ಲಿ ಏನು ಮಾಡುತ್ತಾನೋ ಎಂದು ಹೆದರಿದ ಮನೆಯ ಸದಸ್ಯರು ಕ್ಷೋಭೆಗೆ ತುತ್ತಾಗಿರುತ್ತಾರೆ. ಆದರೆ ಎರಡು ಜನ ತಲೆಕೆಟ್ಟವರಿದ್ದರೆ ಕತೆಯೇನು? ಇಂತದ್ದೊಂದು ಸ್ಥಿತಿಯನ್ನು ಭಾರತಾಂಬೆಯ ಅವಿಭಕ್ತ ಕುಟುಂಬ ಎದರಿಸುತ್ತಿದೆ. ಅಚ್ಚರಿಯ ಸಂಗತಿ ಎಂದರೆ ತಲೆಕೆಟ್ಟ ಗಿರಾಕಿಗಳೇ ಮನೆಯ ಯಜಮಾನರುಗಳಾಗಿರುವುದು. ಒಮ್ಮೊಮ್ಮೆ ಅವನಾಡುವ ಮಾತನ್ನು ಇವನಾಡುತ್ತಾನೆ, ಇವನ ಮಾತನ್ನು ಅವನಾಡುತ್ತಾನೆ. ಯಾರು ಯಾವ ಮಾತನ್ನಾಡಬಾರದೊ ಅವರೇ ಆಡುತ್ತಾ ಭಾರತವನ್ನೆ ಅತಂತ್ರಕ್ಕೆ ದೂಡಿಬಿಟ್ಟಿದ್ದಾರೆ. ಇದರಿಂದ ಭಾರತದ ಸಮಸ್ತ ಜನಕೋಟಿಯೇ ಆತಂಕಕ್ಕೀಡಾಗಿದೆ. ಆದರೆ ಈ ಪೈಕಿ ಬಿಜೆಪಿಯಲ್ಲಿ ಆಶ್ರಯ ಪಡೆದಿರುವ ಜನ ಮಾತ್ರ ಯಂಥದೋ ಖುಷಿಯಿಂದ ಕೇಕೆ ಹಾಕುತ್ತಿವೆ. ಸೂಕ್ಷ್ಮವಾಗಿ ನೋಡಿದರೆ ಕರಟಕ ದಮನಕರ ಮನಸ್ಥಿತಿ ಇವರಿಗೂ ಆವರಿಸಿರುವ ಕಾರಣಕ್ಕೇ ಈ ಕೇಕೆಯಂತಲ್ಲಾ ಥೂತ್ತೇರಿ….

ಕೃಷ್ಣ ಭಗವಧ್ಗೀತೆಯ ಹೊರಗೂ ಒಂದು ಮಾತನ್ನಾಡಿದ್ದಾನೆ. ದುರ್ಯೋಧನನಿಂದ ಇಡೀ ಕುರುವಂಶವೇ ಯುದ್ಧ ಎದುರಿಸಿ, ನಾಶವಾಗುವುದರ ಬದಲು ದುರ್ಯೋಧನನನ್ನೇ ನಿಯಂತ್ರಿಸಿದರೆ ಹೇಗೆ? ಅಂದರೆ, ಒಂದು ದೇಶ ಉಳಿಸುವ ಸಲುವಾಗಿ ಒಂದು ಗ್ರಾಮವನ್ನು ಬಲಿಕೊಡಬೇಕಾಗಿ ಬಂದರೆ ಹಿಂದೆ ಮುಂದೆ ನೋಡಬಾರದು, ಹಾಗೆಯೇ ಒಂದು ಊರನ್ನ ಉಳಿಸಬೇಕಾದರೆ ಒಂದು ಕುಟುಂಬದ ಬಲಿಯ ಅಗತ್ಯಬಿದ್ದರೆ, ಕನಿಕರ ಒಳ್ಳೆಯದಲ್ಲ. ಅದರಂತೆ ಒಂದು ಕುಟುಂಬದ ಉಳುವಿಗಾಗಿ ಒಬ್ಬ ವ್ಯಕ್ತಿಯ ಬಲಿ ಅನಿವಾರ್ಯವಾದರೆ ಬಲಿಕೊಡಲೇಬೇಕು ಎಂದು ಕೃಷ್ಣ ಹೇಳಿದ್ದಾನೆ, ಆದರೆ, ಇದು ಕತೆಯಾಯಿತು. ಭಾರತದ ಸಂವಿಧಾನದ ರೀತ್ಯ ಚುನಾವಣೆಯಲ್ಲಿ ಆರಿಸಿ ಬಂದು ಪ್ರಧಾನಿಯಾದವ, ತನ್ನನ್ನು ಆರಿಸಿದ ಎಂ.ಪಿ.ಗಳ ಬೀಜವನೇ ಎಗರಿಸಿ ಸೀಡ್‍ಲೆಸ್ ಎಂಪಿಗಳನ್ನಾಗಿಸಿದ್ದಾನೆ. ಧಿಕ್ಕಾರ ಕೂಗಿದವನನ್ನೇ ಜೈಲಿಗೆ ಹಾಕುತ್ತೇನೆ ಎನ್ನುತ್ತಿದ್ದಾನೆ. ಅಂತೂ ಆತನ ಹುಲಿ ಸವಾರಿಗೊಂದು ಅಂತ್ಯ ಬರಬೇಕಾದರೆ ಮತ್ತೆ ಚುನಾವಣೆ ಬರಬೇಕು. ಆದರೆ ಅದೂ ಭಯ, ಏಕೆಂದರೆ ಕರ್ನಾಟಕದ ಜನತಾ ಜನಾರ್ಧನ ಅನರ್ಹರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾನಲ್ಲಾ ಥೂತ್ತೇರಿ…

ಇದ್ದುದರಲ್ಲಿ ಹುಣಸೂರಿನ ಜನ ಅನರ್ಹ ವಿಶ್ವನಾಥರನ್ನ ಸೋಲಿಸಿ, ತಕ್ಕ ಉತ್ತರ ಕೊಟ್ಟಿದ್ದಾರಂತಲ್ಲಾ. ತನ್ನ ಸೋಲಿಗೆ ಸಿದ್ದು ಕಾರಣ ಎಂದು ಹೇಳಿದ ವಿಶ್ವನಾಥ್ ಮೊನ್ನೆ ದೊಡ್ಡಕೊಪ್ಪಲಿನಲ್ಲಿ ಸಿದ್ದುವನ್ನು ಮಧ್ಯಕ್ಕೆ ಕೂರಿಸಿಕೊಂಡು ಆಕಡೆಗೆ ಈಶ್ವರಪ್ಪನನ್ನು ಸ್ಥಾಪಿಸಿಕೊಂಡು ಬ್ರಾಹ್ಮಣ ಸಮಾಜದ ತ್ರಿಮತಸ್ಥರಂತೆ ವಿರಾಜಮಾನರಾಗಿದ್ದು ನೋಡಿದ ದೊಡ್ಡಕೊಪ್ಪಲ ಕುರುಬರ ಕಣ್ಣಲ್ಲಿ ಆನಂದ ಭಾಷ್ಪಾ ಹರಿದು ಹೋದವಂತಲ್ಲಾ. ಕರ್ನಾಟಕದ ಬ್ರಾಹ್ಮಣ ಸಮಾಜದ ರಾಜಕಾರಣಿಗಳು, ತ್ರಿಮತಸ್ಥರು ಒಂದಾದರೆ ಅದೆಷ್ಟು ಚಂದ, ಮತ್ತೆ ಪುರೋಹಿತಶಾಹಿ ಕಾಲ ಮರುಕಳಿಸುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹರಸಾಹಸ ಪಡುತ್ತಿರಬೇಕಾದರೆ ಕುರುಬ ಕುಲದ ತ್ರಿಮತಸ್ಥರಂತೆ ಕಾಣುವ ಸಿದ್ದು ವಿಶ್ವ ಈಶ್ವರ ಬಾಡಿನೂಟಕ್ಕೆ ಸೇರಿದ ಬಾಡು ಒಕ್ಕರಂತೆ ಒಂದೇ ಮೈಕಿನಿಂದ ಪರಸ್ಪರ ಹಿಗ್ಗಾಮುಗ್ಗಾ ಹೊಗಳಿಕೊಂಡರಲ್ಲಾ. ಹಾಗೆ ನೋಡಿದರೆ, ಈ ಮೂವರು ತ್ರಿಮತಸ್ಥರೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಮನೋಗತದಲ್ಲಿ ಕುಲಾಚರಣೆಯಲ್ಲಿ ಪ್ರತಿನಿಧಿಸುವ ಪಾರ್ಟಿ ವಿಷಯದಲ್ಲೂ ಇವರು ತ್ರಿಮತಸ್ಥರಂತಲ್ಲಾ ಥೂತ್ತೇರಿ…

ಬ್ರಾಹ್ಮಣ ತ್ರಿಮತಸ್ಥರು ಒಂದಾಗುವ ಅಗತ್ಯವಿಲ್ಲ. ಏಕೆಂದರೆ ಪುರೋಹಿತಶಾಹಿ ಚಿಹ್ನೆಯಾದ ಬೆಲ್ಟು ಅವರನ್ನೆಲ್ಲಾ ಬಂಧಿಸಿದೆ. ಅವರ ಯೋಗಕ್ಷೇಮವನ್ನು ಆರೆಸೆಸ್ಸ್ ನೋಡಿಕೊಳ್ಳುತ್ತಿದೆ. ಆದರೆ ಕುರುಬರಿಗೆ ಅಂತ ಬೆಲ್ಟೇ ಇಲ್ಲ. ವಿಶ್ವನಾಥ ಮತ ಕೆದಕಿದರೆ ಕಾಂಗ್ರೆಸ್ ಮನೆ ಇತಿಹಾಸ ಹೇಳುತ್ತಾರೆ. ಸಿದ್ದು ಕುಲಕೇಳಿದರೆ ಜನತಾದಳದ ಮನೆಬಿಟ್ಟು ಬಂದ ಅಗಲಿಕೆ ವಾಸನೆ ಇನ್ನೂ ಇದೆ. ಈ ಪೈಕಿ ಈಶ್ವರಪ್ಪ ಮಾತ್ರ ಹೆಸರಿಗೆ ಕುರುಬ ಅಷ್ಟೇ, ಆತನ ಮಾತು ಮನಸ್ಸು ಚಡ್ಡಿಮಯವಾಗಿದೆ. ಅದಕ್ಕೆ ಉಡುಪಿಯಲ್ಲಿ ಕನಕ ಗೋಪುರವೇ ಇರಲಿಲ್ಲ ಎಂದುದಲ್ಲದೆ, ಅಧಿಕಾರ ಇರಲಿ ಇಲ್ಲದಿರಲಿ ಆತ ಮಾಡುವ ಕೆಲಸದಲ್ಲಿ ಮೊದಲನೆಯದು ಬ್ರಾಹ್ಮಣರ ಪರಿಚಾರಿಕೆ. ನಂತರ ಲಿಂಗಾಯಿತರದ್ದು. ಉಳಿದಂತೆ ಮರೆಯಲ್ಲಿ ಕುರುಬರದ್ದು. ಸಾರ್ವಜನಿಕವಾಗಿ ಖಂಡನೆ, ಹೀಯಾಳಿಕೆ ಮೂದಲಿಕೆ ಮಾತುಗಳನ್ನಾಡಿದರೂ ಕೂಡ, ದೊಡ್ಡಕೊಪ್ಪಲ ಮೈದಾನದಲಿ ವಿಶ್ವಸಿದ್ದೇಶ್ವರರ ಸಮಾಗಮ ನೋಡಿದ ಒಕ್ಕಲಿಗರು “ನೋಡಿರ್ಲ ಅವುರ್ಯಂಗೆ ಒಂಥಾಯಿ ಮಕ್ಕಳಂಗೆ ಕುಂತವರೆ! ನಮ್ಮದ್ಯಾವೇಗೌಡ ಜೀವಮಾನದಲ್ಲಿ ಹಿಂಗೆ ನಮ್ಮ ಜಾತಿ ಲೀಡ್ರು ಜತೆ ಕುಂತಿದ್ದ ನೋಡಕ್ಕಾಗಲೇಯಿಲವಲ್ಲಾ” ಎಂದು ಹಲುಬಿದರಂತಲ್ಲಾ. ಥೂತ್ತೇರಿ..

ಮೊನ್ನೆ ಮೊನ್ನೆಯವರೆಗೆ ಒಂದೇ ತಂದೆಯ ಮಕ್ಕಳಂತೆ ಕಂಗೊಳಿಸಿದ್ದ ಕುಮಾರಣ್ಣ ಮತ್ತು ಈಶ್ವರಣ್ಣ ಕೋಳಿಗಳಂತೆ ಜಗಳಕ್ಕೆ ಬಿದ್ದಿದ್ದಾರಲ್ಲಾ, ಇದನ್ನೇನು ಗಂಭೀರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಈಶ್ವರಪ್ಪ ಸಿದ್ದು ಜಗಳ ಮತ್ತು ವಿಶ್ವನಾಥ್ ಸಿದ್ದು ಫೈಟಿಂಗ್ ನೋಡಿದವರಿಗೆ ಮೊನ್ನೆ ನಡೆದ ದೊಡ್ಡಕೊಪ್ಪಲ ಸಭೆ ನೆನಪಿಸಿಕೊಂಡರೆ ಸಾಕು, ಈ ನಟಸಾರ್ವಭೌಮರ ಜಗಳ ನಟನೆಯೆಂಬುದು ಸಾಬೀತಾಗಿದೆ. ಇದೇ ಈಶ್ವರಪ್ಪ 2013ರ ಚುನಾವಣೆಯಲ್ಲಿ `ನಿಮ್ಮ ಜೆಡಿಎಸ್ ಅಭ್ಯರ್ಥಿ ಶಿವಮೊಗ್ಗದಲ್ಲಿ ತೊಡಕಾಗಿದ್ದಾನೆ’ ಎಂದು ಕುಮಾರಣ್ಣನಿಗೆ ಫೋನ್ ಮಾಡಿದಾಗ, ಕುಮಾರಣ್ಣ “ಆಯ್ತು ಬ್ರದರ್ ಹೆದರಬೇಡಿ” ಎಂದು ಆಶ್ವಾಸನೆ ಕೊಟ್ಟ ಮರುದಿನದಿಂದಲೇ ಜೆ.ಡಿ.ಎಸ್ ಕ್ಯಾಂಡಿಡೇಟ್ ಶ್ರೀಕಾಂತ್ ಕೈಗೆ ಯಾವ ಕಾರ್ಯಕರ್ತರೂ ಸಿಗಲಿಲ್ಲ. ಆದರೇನು ಲಿಂಗಾಯಿತರು ಈಶ್ವರಪ್ಪನನ್ನ ಮಗ್ಗ ಮಲಗಿಸಿದ್ದರು. ಆಪತ್ಕಾಲದಲ್ಲಿ ಸಹಾಯ ಮಾಡುವ ಕುಮಾರಣ್ಣನೇ ಈಗ `ಈಶ್ವರಪ್ಪನ ನಾಲಿಗೆ ಇರಬೇಕಾದ ಜಾಗದಲ್ಲಿ ಇರಬೇಕು’ ಎಂದಿದ್ದಾರಲ್ಲಾ. ವಿಶ್ವನಾಥ್ ಸಿದ್ದು ಜಗಳದ ಎದುರು ಇದ್ಯಾವ ಮಹಾ ಅಂತೀರಾ ಥೂತ್ತೇರಿ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...