Homeಬಹುಜನ ಭಾರತಬಹುಜನ ಭಾರತ: ಅಧೋಲೋಕದ ಈ ಲೇಖಕ ಇದೀಗ ಬಂಗಾಳದ ಶಾಸಕ

ಬಹುಜನ ಭಾರತ: ಅಧೋಲೋಕದ ಈ ಲೇಖಕ ಇದೀಗ ಬಂಗಾಳದ ಶಾಸಕ

- Advertisement -
- Advertisement -

ಎರಡು ತಿಂಗಳ ಹಿಂದೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಸರು ಪ್ರಕಟವಾಗುವ ತನಕ ಮನೋರಂಜನ್ ಬ್ಯಾಪಾರಿ ಯಾರೆಂದು ಬಾಲಾಗಢದ ಮತದಾರರಿಗೆ ತಿಳಿದಿರಲಿಲ್ಲ. ಸಾಮಾನ್ಯ ಮತದಾರರಿರಲಿ, ಪಕ್ಷದ ಕಾರ್ಯಕರ್ತರಿಗೂ ಗೊತ್ತಿರಲಿಲ್ಲ. ಅವರ ಬದುಕು-ಸಂಘರ್ಷ-ಸಾಧನೆಗಳ ಕುರಿತು ಕರಪತ್ರಗಳನ್ನು ಅಚ್ಚು ಮಾಡಿ ಹಂಚಲಾಯಿತು.

ರಿಕ್ಷಾ ತುಳಿಯುತ್ತಿದ್ದ, ಸ್ಮಶಾನ ಕಾಯುತ್ತಿದ್ದ, ಅಡುಗೆ ಮಾಡುತ್ತಿದ್ದ, ರೇಲ್ವೆ ವ್ಯಾಗನ್‌ಗಳಿಂದ ಕಲ್ಲಿದ್ದಲು ಕದಿಯುತ್ತಿದ್ದ ಆತನ ಹೆಸರು ಮನೋರಂಜನ್ ಬ್ಯಾಪಾರಿ. ಪಶ್ಚಿಮ ಬಂಗಾಳದ ಮೊದಲ ದಲಿತ ಲೇಖಕ. ಜೈಲಿನಲ್ಲಿ ಅಕ್ಷರ ಕಲಿತು ಹತ್ತಕ್ಕೂ ಹೆಚ್ಚು ಕಾದಂಬರಿಗಳು ಮತ್ತು ನೂರಾರು ಸಣ್ಣ ಕತೆಗಳು ಹಾಗೂ ಅಧೋಲೋಕದ ಯಾತನೆ ಕುರಿತ ಆತ್ಮಕತೆ ಬರೆದ ಜಗತ್ತಿನ ಮೊದಲ ಬರಹಗಾರ.

ಆದರೆ ಬದುಕು ಅವರನ್ನು ಇದೀಗ ಬಂಗಾಳದ ವಿಧಾನಸಭೆಯನ್ನು ತಲುಪಿಸಿದೆ. ಹೂಗ್ಲಿ ಜಿಲ್ಲೆಯ ಬಾಲಾಗಢ ಮೀಸಲು ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ.

ಇಂದು ಬಾಂಗ್ಲಾ ದೇಶವೆಂದು ಕರೆಯಲಾಗುವ ಅಂದಿನ ಪೂರ್ವ ಬಂಗಾಳದಿಂದ ಓಡಿಬಂದ ನಿರಾಶ್ರಿತ ನಾಮಶೂದ್ರ ಕುಟುಂಬ ಅವರದು. ದಶಕಗಳ ಅಲೆದಾಟದ ನಂತರ ಕೊಲ್ಕತ್ತಾದ ಹೊರವಲಯದ ಖುದಿರಾಬಾದ್ ಎಂಬಲ್ಲಿ ಕಲ್ನಾರಿನ ಛಾವಣಿಯ ಪುಟ್ಟ ಇಟ್ಟಿಗೆ ಮನೆಯನ್ನು ಕಟ್ಟಿಕೊಂಡರು.

ಈವರೆಗೆ 23 ಪುಸ್ತಕಗಳನ್ನು (ಹದಿಮೂರು ಕಾದಂಬರಿಗಳು ನೂರೈವತ್ತಕ್ಕೂ ಹೆಚ್ಚು ಸಣ್ಣ ಕತೆಗಳು) ರಚಿಸಿರುವ ಬ್ಯಾಪಾರಿ ಪಶ್ಚಿಮ ಬಂಗಾಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ರಾಜ್ಯ ಸರ್ಕಾರ ರಚಿಸಿರುವ ದಲಿತ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು. ಇಲ್ಲಿಯವರೆಗೂ ಅವರದು ಸರಳ ಬದುಕು ಮತ್ತು ಶ್ರಮಜೀವಿಗಳ ಅತಿ ಸಾಧಾರಣ ದಿರಿಸು.

ನೊಂದವರು ಅವಮಾನಿತರ ಅಮ್ಮನಾಗಿ ಅವರ ಬೆವರು ಕಣ್ಣೀರು ಅಪಮಾನಗಳು ಪ್ರತಿಭಟನೆಗಳಿಗೆ ಸಿಡಿಮದ್ದಿನಂತಹ ಅಕ್ಷರಗಳನ್ನು ತೊಡಿಸಿದವರು ಮಹಾಶ್ವೇತಾದೇವಿ. ವಿಶೇಷವಾಗಿ ಆದಿವಾಸಿಗಳು ದಲಿತರ ಕಣ್ಣೀರು ಒರೆಸಿದ ದೀದಿ. ಈಕೆ ‘ಸ್ಪರ್ಶಿಸಿದ’ ಸೈಕಲ್ ರಿಕ್ಷಾ ತುಳಿವ ಪಾತಕಲೋಕದ ಹಿನ್ನೆಲೆಯ ದಲಿತನೊಬ್ಬ ಬಂಗಾಳಿ ಸಾಹಿತ್ಯ ಲೋಕ ಎದ್ದು ಕುಳಿತು ಗಮನಿಸುವ ಲೇಖಕನಾದ ವಿದ್ಯಮಾನ ಬೆರಗು ಬಡಿಸುವಂತಹುದು.

ಇವರು 2012ರಲ್ಲಿ ಬಂಗಾಳಿಯಲ್ಲಿ ಬರೆದ ಆತ್ಮಕತೆ ‘ಇತಿಬ್ರಿತ್ತೆ ಚಾಂಡಾಲ ಜಿಬಾನ್’ (‘ನನ್ನ ಚಾಂಡಾಲ ಬದುಕು- ದಲಿತನೊಬ್ಬನ ಆತ್ಮಚರಿತ್ರೆ’) ಎಂಬ ಕೃತಿ 2018ರಲ್ಲಿ `Interrogating My Chandal Life’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಗೊಂಡು ಪ್ರಕಟವಾಗುತ್ತದೆ. 2018ರ ಸಾಲಿನ ದಿ ಹಿಂದೂ ಪ್ರಶಸ್ತಿಯನ್ನು ಪಡೆಯುತ್ತದೆ

ಕಿವುಡ-ಮೂಗ ಮಕ್ಕಳ ಸರ್ಕಾರ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಬಾಣಸಿಗನಾಗಿ 23 ವರ್ಷಗಳ ಕಾಲ ದುಡಿದರು. ಮೊಣಕಾಲ ಶಸ್ತ್ರಚಿಕಿತ್ಸೆಯ ನಂತರ ಭಾರೀ ದೊಡ್ಡ ಭಾಂಡೆಗಳನ್ನು ಎತ್ತಿ ಇಳಿಸುವುದು ಕಷ್ಟಕರವೆನಿಸಿತು. ಗ್ರಂಥಾಲಯಕ್ಕೆ ವರ್ಗ ಮಾಡಿ ಹಗುರ ಕೆಲಸ ನೀಡುವಂತೆ ಕೋರಿ ನಾಲ್ಕು ವರ್ಷಗಳ ಕಾಲ ಸರ್ಕಾರಿ ಕಚೇರಿಗಳಿಗೆ ಅಲೆದರು. ಕಡೆಗೆ ಖುದ್ದು ಮಮತಾ ಬ್ಯಾನರ್ಜಿಯವರೇ ಈ ವಿನಂತಿಯನ್ನು ಈಡೇರಿಸಿದರು. 2020ರ ಆಗಸ್ಟ್ ತಿಂಗಳಲ್ಲಿ ದಕ್ಷಿಣ 24 ಪರಗಣದ ಅಮಟಾಲದ ಗ್ರಂಥಾಲಯದಲ್ಲಿ ಪುಸ್ತಕಗಳ ಧೂಳು ಝಾಡಿಸಿ ಒರೆಸಿ ಇಡುವ ಕೆಲಸಕ್ಕೆ ವರ್ಗಾವಣೆ ಆಯಿತು. ಆದರೆ ಕೋವಿಡ್ ಕಾರಣ ಗ್ರಂಥಾಲಯ ಬಹುಪಾಲು ಮುಚ್ಚಿಯೇ ಇತ್ತು.

“ತಮ್ಮ ಬರೆಹಗಳಲ್ಲಿ ರೂಪು ತಳೆಯವ ಪಾತ್ರಗಳಿಗೆ ಪ್ರೇರಣೆಯಾಗುವ ಜನರಿಗಾಗಿ ಏನಾದರೂ ಮಾಡಲು ಸಾಧ್ಯವಿರುವ ವೇದಿಕೆ ರಾಜಕಾರಣ. ಜನರ ತಬ್ಬಲಿ ಬದುಕುಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರ ಸಂಕಟ ವ್ಯಥೆ ವಿಷಾದಗಳ ಕುರಿತು ಬರೆದಿದ್ದೇನೆ. ನನ್ನದೇ ಬದುಕಿನ ಅನುಭವಗಳು ಮತ್ತು ಇತರರ ಬವಣೆಗಳನ್ನು ಬೆರೆಸಿ ಪುಸ್ತಕಗಳ ಬರೆದು ಪ್ರಕಟಿಸಿದೆ. ರಾಯಲ್ಟಿ ಸಂಪಾದಿಸಿದೆ. ಆದರೆ ಅವರಿಗಾಗಿ ಏನನ್ನೂ ಮಾಡಲಾರದಾಗಿದ್ದೆ. ನನ್ನ ಬದುಕೇ ಹಾಗಿತ್ತು” ಎನ್ನುತ್ತಾರೆ ಮನೋರಂಜನ್ ಬ್ಯಾಪಾರಿ.

“ಪಶ್ಚಿಮ ಬಂಗಾಳದ ಸಂಸ್ಕೃತಿ, ಭಾಷೆ, ಜನಸಮುದಾಯಗಳನ್ನು ಧ್ವಸ್ತಗೊಳಿಸಲು ದಂಡೆತ್ತಿ ಬಂದಿದ್ದಾರೆ ಶತ್ರುಗಳು. ಬ್ರಿಟಿಷ್ ವರ್ತಕರು ಭಾರತಕ್ಕೆ ಬಂದು 200 ವರ್ಷ ಕಾಲ ನಮ್ಮನ್ನು ಗುಲಾಮಗಿರಿಗೆ ತಳ್ಳಿದರು. ಇದೀಗ ಗುಜರಾತಿ ವರ್ತಕರು ಅದೇ ಇರಾದೆಯೊಂದಿಗೆ ನುಗ್ಗಿದ್ದಾರೆ. ವ್ಯಾಪಾರೋದ್ಯಮದ ಹಿತಾಸಕ್ತಿಗಳೇ ಅವರಿಗೆ ಪರಮ. ಇಂತಹ ಹೊತ್ತಿನಲ್ಲಿ ‘ನೀನು ತೆಪ್ಪಗೆ ಕತೆ ಬರೆಯಪ್ಪಾ’ ಎಂದು ನನ್ನ ಲೇಖನಿಗೆ ಹೇಳಲಾರೆ. ಬಂಗಾಳದ ಆತ್ಮಕ್ಕಾಗಿ ನಡೆದಿರುವ ಹೋರಾಟವಿದು.

“ಸಾಧಾರಣ ಸಂದರ್ಭಗಳೇ ಆಗಿದ್ದಲ್ಲಿ ತಾವು ರಾಜಕಾರಣಕ್ಕೆ ಎಂದೆಂದಿಗೂ ಕಾಲಿಡುತ್ತಿರಲಿಲ್ಲ. ವ್ಯವಸ್ಥೆ ಅಷ್ಟೊಂದು ಕೊಳೆತು ಹೋಗಿದೆ. ಆದರೆ ಈಗ ಹೊರಗಿನ ಶಕ್ತಿಗಳು ಬಂಗಾಳದ ಭಾಷೆ, ಸಂಸ್ಕೃತಿ, ಪರಂಪರೆಗೆ ಗಂಡಾಂತರ ಒಡ್ಡಿವೆ. ಬಂಗಾಳವನ್ನು ತಮ್ಮ ನಿಯಂತ್ರಣದ ಕಪಿಮುಷ್ಠಿಗೆ ಸಿಕ್ಕಿಸಿಕೊಳ್ಳಲು ಮುಂದಾಗಿವೆ.. ಹೀಗಾಗಿ ಪ್ರತಿರೋಧ ಒಡ್ಡದೆ ಬೇರೆ ದಾರಿಯೇ ಇಲ್ಲ” ಎಂದು ತಮ್ಮ ರಾಜಕಾರಣ ಪ್ರವೇಶವನ್ನು ಸಮರ್ಥಿಸಿಕೊಳ್ಳುತ್ತಾರೆ ಅವರು.

ಚುನಾವಣೆಯ ಪ್ರಚಾರದ ದಿನಗಳಲ್ಲಿ ಅವರಿಗೆ ದೊರೆತ ಜನಪ್ರೀತಿ ‘ಊಹಾತೀತ’. ಸಿಪಿಐ(ಎಂ) ಮತ್ತು ಬಿಜೆಪಿಯ ಜನರೂ ತಮ್ಮನ್ನು ಭೇಟಿಯಾಗಿ ಬೆಂಬಲ ಪ್ರಕಟಿಸಿದ್ದನ್ನು ಕೃತಜ್ಞತೆಯಿಂದ ನೆನೆಯುತ್ತಾರೆ. ಆರಂಭದಲ್ಲಿ ಬಾಲಾಗಢಕ್ಕೆ ಹೊರಗಿನವರೆಂದು ಅವರ ಉಮೇದುವಾರಿಕೆಗೆ ವಿರೋಧ ಎದುರಾಗಿತ್ತು. ನಾನೊಬ್ಬ ನಿರಾಶ್ರಿತ. ಹೀಗಾಗಿ ದೇಶದ ಯಾವ ಭಾಗಕ್ಕೆ ಹೋದರೂ ನಾನು ಹೊರಗಿನವನೇ. ಆದರೆ ನಿಜವಾಗಿಯೂ ನಾನು ನಿಮ್ಮೊಳಗೊಬ್ಬನು. ಚಿಂದಿ ಆಯುವ, ರಿಕ್ಷಾ ತುಳಿಯುವ, ಚಹಾ ಮಾರುವ, ರಸ್ತೆ ಬದಿ ಮಲಗುವ ಜನರ ನೋವನ್ನು ಅರ್ಥ ಮಾಡಿಕೊಂಡವನು. ಯಾಕೆಂದರೆ ವರ್ಷಗಳ ಕಾಲ ನಾನು ಇವೇ ಬದುಕುಗಳನ್ನು ಬದುಕಿದ್ದವನು ಎಂದು ವಿರೋಧಿಗಳನ್ನು ಒಲಿಸಿಕೊಳ್ಳುತ್ತಾರೆ.

ಕ್ಷೇತ್ರಕ್ಕೆ ಹೊರಗಿನಿಂದ ಬಂದು ಸ್ಪರ್ಧಿಸುವ ಬಹುತೇಕ ಹುರಿಯಾಳುಗಳು ಗೆದ್ದರೆ ಅಲ್ಲಿಯೇ ಮನೆ ಮಾಡುವುದಾಗಿ ಸಾರುವುದುಂಟು. ಆದರೆ ಗೆದ್ದರೂ ಸೋತರೂ ತಾವು ಇಲ್ಲಿಯೇ ನೆಲೆಸುವುದಾಗಿ ಹೇಳಿದ್ದಾರೆ ಬ್ಯಾಪಾರಿ. ನಿವೇಶನ ನೀಡಲು ಬಂದವರನ್ನು ನಯವಾಗಿಯೇ ದೂರವಿರಿಸಿದ್ದಾರೆ. ಬದಲಿಗೆ ಈ ಕ್ಷೇತ್ರದ ಮನೆ ಮನೆಯಿಂದ ಅರ್ಧ ಇಟ್ಟಿಗೆ ದಾನ ಪಡೆದು ಮನೆ ಕಟ್ಟಿಕೊಳ್ಳುತ್ತೇನೆ ಎಂದಿದ್ದರು.

“ಭಾರತದ ಸಂವಿಧಾನವನ್ನು ಮೂಲೆಗೆ ತಳ್ಳಿ ಮನುಸ್ಮೃತಿಯನ್ನು ಜಾರಿಗೊಳಿಸುವ ಪಕ್ಷವಿದು. ದಲಿತರು ಮತ್ತು ಮುಸಲ್ಮಾನರನ್ನು ಗುಲಾಮರಂತೆ ಕಾಣಲಿದೆ. ಬ್ರಾಹ್ಮಣವಾದದ ತಳಹದಿಯ ಸಮಾಜವನ್ನು ಕಟ್ಟುವುದು ಅವರ ಹುನ್ನಾರ. ಧರ್ಮ ಮತ್ತು ಜಾತಿಗಳ ಆಧಾರದ ಮೇಲೆ ನಮ್ಮ ಸಮಾಜವನ್ನು ಹರಿದು ಸೀಳುವ ವಿಭಜಕ ಶಕ್ತಿಯಿದು” ಎಂಬುದು ಬಿಜೆಪಿಯ ಬಗ್ಗೆ ಅವರ ನಿಚ್ಚಳ ನಿಲುವು.

ಎಪ್ಪತ್ತರ ದಶಕದ ಆರಂಭದಲ್ಲಿ ನಕ್ಸಲೀಯ ಆಂದೋಲನ ಉತ್ತುಂಗದಲ್ಲಿತ್ತು. ಅದರೊಂದಿಗೆ ಗುರುತಿಸಿಕೊಂಡಿದ್ದ ಬ್ಯಾಪಾರಿ 26 ತಿಂಗಳು ಜೈಲಿನಲ್ಲಿದ್ದರು. ವರ್ಷಗಟ್ಟಲೆ ಜಾಧವಪುರದ ರೇಲ್ವೆ ಪ್ಲಾಟ್‌ಫಾರ್ಮ್‌ಗಳ ಮೇಲೆ ಇರುಳು ಕಳೆದರು. ಕೊಲ್ಕತ್ತ ಇವರನ್ನು ತೆರೆದ ಬಾಹುಗಳಿಂದೇನೂ ಕರೆದುಕೊಳ್ಳಲಿಲ್ಲ.

ಜೈಲಿನಿಂದ ಬಿಡುಗಡೆಯಾಗಿ ಹೊಟ್ಟೆಪಾಡಿಗಾಗಿ ಜಾಧವಪುರದಲ್ಲಿ ಸೈಕಲ್ ರಿಕ್ಷಾ ತುಳಿಯಲಾರಂಭಿಸಿದರು. ಬಿಸಿಲು ಧಗೆಯ ಒಂದು ಮಧ್ಯಾಹ್ನ ಜ್ಯೋತಿಷ್ ರಾಯ್ ಕಾಲೇಜಿನ ಹೊರಗೆ ಸವಾರಿಗಾಗಿ ಕಾಯುತ್ತಿದ್ದರು. ಹಿರಿಯ ಮಹಿಳಾ ಪ್ರೊಫೆಸರೊಬ್ಬರು ರಿಕ್ಷಾ ಹತ್ತಿದರು.

ರಿಕ್ಷಾವಾಲನ ಹೆಸರು ಮನೋರಂಜನ್ ಬ್ಯಾಪಾರಿ. ರಿಕ್ಷಾ ಏರಿ ಕುಳಿತು ಆತನನ್ನು ಮನೆಗೆ ಊಟಕ್ಕೆ ಕರೆದು ಅಕ್ಕರೆ ತೋರಿದ ಆ ಅಮ್ಮ ಮಹಾಶ್ವೇತಾದೇವಿ. ಆದಿವಾಸಿಗಳು-ದಲಿತರ ಪಾಲಿನ ದೀದಿ ಎಂದು ಕರೆಯಿಸಿಕೊಂಡ ಜೀವ ಕಾರುಣ್ಯದ ತಾಯಿ.

“ಮಹಾಶ್ವೇತಾ ತಾಯಿ ಬದುಕಿದ್ದರೆ ನನ್ನ ಚುನಾವಣೆ-ಗೆಲುವು ಕುರಿತು ಸಂತಸಪಡುತ್ತಿದ್ದರು. ಜೈಲಿನಲ್ಲಿ ತಮಗೆ ಓದು ಬರೆಹ ಕಲಿಸಿದ ಸಹಖೈದಿ ಮತ್ತು ಮಹಾಶ್ವೇತಾ ಅವರಂತಹ ಉತ್ತಮಾತ್ಮರು ನನಗೆ ಸಿಕ್ಕಿದ್ದು ತಮ್ಮ ಸುಕೃತ” ಎನ್ನುತ್ತಾರೆ.

1974ರಲ್ಲಿ ನಕ್ಸಲ್ಬರಿಯ ಸಿಲಿಗುಡಿಯ ಬಳಿಯಿದ್ದಾಗ ಜರುಗಿದ ರೈತ ಬಂಡಾಯದಲ್ಲಿ ಭಾಗಿಯಾಗುತ್ತಾರೆ. ಬಿಡುಗಡೆಯಾಗಿ ರಿಕ್ಷಾ ತುಳಿದು ಅನ್ನ ಸಂಪಾದಿಸುತ್ತಾರೆ. 1989ರಲ್ಲಿ ಸಿ.ಐ.ಟಿ.ಯು. ಜೊತೆಗೆ ಘರ್ಷಣೆ ಜರುಗಿ ಬಸ್ತರ್‌ಗೆ ತೆರಳುತ್ತಾರೆ. ದಂತಕತೆಯೇ ಆಗಿ ಹೋಗಿರುವ ಕಾರ್ಮಿಕ ನಾಯಕ ಶಂಕರಗುಹಾ ನಿಯೋಗಿಯ ಸಂಪರ್ಕಕ್ಕೆ ಬರುತ್ತಾರೆ. ಛತ್ತೀಸಗಢ ಮುಕ್ತಿ ಮೋರ್ಚಾ ಟ್ರೇಡ್ ಯೂನಿಯನ್ ಕಟ್ಟಲು ಕೈ ಜೋಡಿಸುತ್ತಾರೆ. ವರ್ಷಗಳ ನಂತರ ಮತ್ತೆ ಜಾಧವಪುರಕ್ಕೆ ಮರಳುತ್ತಾರೆ. ಅವರ ಬದುಕಿಗೆ ಹೊಸ ತಿರುವ ನೀಡಿದ ಮಹಾಶ್ವೇತ ತಾಯಿಯ ಭೇಟಿ ಜರುಗಿದ ಹಂತವಿದು.

ಅವರು 2010ರಲ್ಲಿ ‘ನಿಶ್ಯಬ್ದ ಬಾಣ’ ಎಂಬ ಸಣ್ಣಕತೆಯ ರಿಕ್ಷಾ ಚಾಲಕ ನಾಯಕ ಸಿಪಿಐ(ಎಂ) ಮತ್ತು ತೃಣಮೂಲ ಎರಡರಿಂದಲೂ ಮತ ನೀಡಲು ಹಣ ಪಡೆಯುತ್ತಾನೆ. ಮೀನು ಕೊಳಗಳಿದ್ದ ಜೌಗು ಪ್ರದೇಶವನ್ನು ಮಣ್ಣು ತುಂಬಿ ಮುಚ್ಚಿ ಬಡಜನರ ವಸತಿಗೆ ನಿವೇಶನಗಳನ್ನು ಮಾಡಿ ಮಾರಾಟ ಮಾಡಲಾದ ಕೊಲ್ಕತ್ತಾದ ಹೊರವಲಯದ ಪ್ರದೇಶ ಖುದಿರಾಬಾದ್. ಅಲ್ಲಿನ ನೀರು ತುಂಬಿದ ಜೌಗು-ಕೆಸರು ರೊಜ್ಜೆಯ ರಸ್ತೆಗಳಲ್ಲಿ ರಿಕ್ಷಾ ತುಳಿದು ರೋಸಿರುತ್ತಾನೆ. ಮತಗಟ್ಟೆಗೆ ತೆರಳಿ ಮತಪತ್ರದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಹೆಸರಿನ ಮುಂದೆ ಮುದ್ರೆಯೊತ್ತಿ ಮತವನ್ನು ವ್ಯರ್ಥಗೊಳಿಸಿ ಪ್ರತಿಭಟಿಸುತ್ತಾನೆ. ಯಾವ ಪಕ್ಷದ ಸರ್ಕಾರ ಬಂದರೇನು, ಬಡವರು ದೀನ ದಲಿತರ ಬದುಕುಗಳು ಬದಲಾಗುವುದಿಲ್ಲ ಎನ್ನುತ್ತದೆ ಅವರ ‘ಪೊರಿಬೊರ್ತನ್ ಚಾಯ್’ ಎಂಬ ಮತ್ತೊಂದು ಸಣ್ಣ ಕತೆ. ಚಿಂದಿ ಆಯುವವನು ಆ ಕತೆಯ ನಾಯಕ. ರಾಜಕೀಯ ಗೂಂಡಾಗಳು ಮತ್ತು ಪೊಲೀಸರು ಜನಸಾಮಾನ್ಯರನ್ನು ಸುಲಿದು ತಿನ್ನುವುದು ಅವರ ‘ಟೋಲಾಬಾಜ್’ ಕತೆಯ ವಸ್ತು.

“ಬದುಕೆಲ್ಲ ಅಲೆಮಾರಿಯಾಗಿ ಕಳೆದವರು ತಾವು. ಬಾಳ ಸಂಗಾತಿಯ ವಿನಾ ತಮ್ಮದೆಂಬುದು ಇನ್ನೇನೂ ಇಲ್ಲ” ಎಂದು ಪತ್ನಿಯ ಕುರಿತು ಮೈಯೆಲ್ಲ ಕೃತಜ್ಞತೆಯಾಗುತ್ತಾರೆ. ಪತ್ನಿಯ ಆಸರೆ ಇಲ್ಲದೆ ಹೋಗಿದ್ದರೆ ಬದುಕಿನ ಈ ಯಾನ ಸಾಧ್ಯವಿರಲಿಲ್ಲ. ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ನಿತ್ಯ 20 ಕಿ.ಮೀ. ಸೈಕಲ್ ತುಳಿಯಬೇಕಿತ್ತು. ಆಕೆ ತರುತ್ತಿದ್ದ 225 ರುಪಾಯಿಗಳ ಮಾಸಿಕ ಸಂಬಳವೇ ಜೀವನಾಧಾರ. ನನಗೆ ಸಂಪಾದನೆ ಇರದಿದ್ದಾಗಲೂ ಆಕೆ ದೂರಲಿಲ್ಲ. ಈಗಲೂ ಮನೆ ವ್ಯವಹಾರವೆಲ್ಲ ಆಕೆಯದೇ. ನಾನು ಆಕೆಗೆ ಎಣೆಯಿಲ್ಲದಷ್ಟು ಋಣಿಯಾಗಿದ್ದೇನೆ. ಮನೆಯ ಒಳಗಣ ಈ ನೆಮ್ಮದಿ ನೆರವು ಹೊರಗೆ ಸಿಗಲಿಲ್ಲ. ವಾತಾವರಣ ಸಹಕಾರಿಯಾಗಿರಲಿಲ್ಲ. ಬಹಿಷ್ಕೃತರು ಮತ್ತು ದಿಕ್ಕಿಲ್ಲದ ಪರದೇಸಿಗಳ ಛೋಟಾಲೋಕ ಮತ್ತು ಸಜ್ಜನರ ಭದ್ರಲೋಕವಾಗಿ ನಮ್ಮ ಸಮಾಜ ಇಬ್ಭಾಗವಾಗಿ ಹೋಗಿದೆ. ನನ್ನಂತಹವನು ಮನ್ನಣೆ ಗಳಿಸುವುದನ್ನು ಭದ್ರಲೋಕ ಇಷ್ಟಪಡುವುದಿಲ್ಲ” ಎನ್ನುತ್ತಾರೆ.

ಮನೋರಂಜನ್ ಅವರ ಬದುಕಿನ ಭಾಗವಾಗಿ ಪರಿಣಮಿಸಿದೆ ಸೈಕಲ್ ರಿಕ್ಷಾ. ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಚಾರಕ್ಕೆ ಅವರು ತೆರಳಿದ್ದು ರಿಕ್ಷಾ ತುಳಿದುಕೊಂಡೇ.

ಇವರ ‘ಜಿಜೀವಿಷ’ ಈಗಲೂ ಕುಂದಿಲ್ಲ. ಬೆರಳಲ್ಲಿ ಅವರು ಸದಾ ಧರಿಸುವ ಉಂಗುರದಲ್ಲಿ ಬರೆದಿರುವ ಪದ ‘ಜಿಜೀವಿಷ’. ಮಹಾಶ್ವೇತಾ ತಾಯಿಯ ಭೇಟಿಯ ನಂತರ ಲೇಖಕನಾಗಿ ತಾವು ‘ಮರುಹುಟ್ಟು’ ಪಡೆದೆನೆಂಬುದು ಅವರ ನಂಬಿಕೆ.


ಇದನ್ನೂ ಓದಿ: ಹೆಚ್ಚುತ್ತಿರುವ ಸಾಂಕ್ರಾಮಿಕ: ಕುಸಿಯುತ್ತಿರುವ ನರೇಂದ್ರ ಮೋದಿ ಜನಪ್ರಿಯತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...