Homeಮುಖಪುಟಗೀತಾ ನಾಗಭೂಷಣ ತಮ್ಮ ಪುಸ್ತಕಗಳ ಜೊತೆ ಸದಾ ಜೀವಂತವಾಗಿ ಇರುತ್ತಾರೆ: ಶ್ರದ್ಧಾಂಜಲಿ

ಗೀತಾ ನಾಗಭೂಷಣ ತಮ್ಮ ಪುಸ್ತಕಗಳ ಜೊತೆ ಸದಾ ಜೀವಂತವಾಗಿ ಇರುತ್ತಾರೆ: ಶ್ರದ್ಧಾಂಜಲಿ

ನಮ್ಮಿಂದ ಅವರು ದೂರವಾಗಿರುವ ಈ ಸಂದರ್ಭದಲ್ಲಿ ಅವರ ಬಹುಮುಖ್ಯ ಕೃತಿಗಳು ಚರ್ಚೆಗೆ ಒಳಪಡಿಸುವುದೆ ಅವರಿಗೆ ನಾವು ಸಲ್ಲಿಸಬೇಕಾದ ನಿಜವಾದ ಗೌರವ ಆಗಿದೆ.

- Advertisement -
- Advertisement -

ನಾನಾಗ ಪಿಯುಸಿ ಓದುತ್ತಿದ್ದೆ. ಮುಂಜಾನೆ 8 ಗಂಟೆಗೆ ಕಾಲೇಜು ಇರುತ್ತಿದ್ದರಿಂದ ಬೇಗನೆ ಎದ್ದು ಹೊರಡಬೇಕಿತ್ತು. ಗೀತಾ ನಾಗಭೂಷಣ ಅವರ ಮನೆ ಮುಂದೆ ಹಾಯ್ದು ಹೋಗುತ್ತಿದ್ದೆವು. ಫಸ್ಟ್ ಪಿಯುಸಿ ಇದ್ದಾಗ ಇವರ್ಯಾರು ಅಂಬೋದು ನಮಗೆ ಗೊತ್ತಿರಲಿಲ್ಲ. ಟಿ.ವಿ ನೋಡುತ್ತಾ ಕುಳಿತುಕೊಂಡಿರುತ್ತಿದ್ದ ವಯಸ್ಸಾದ ಅಜ್ಜಿ ಈ ನಾಡಿನ ಬಹುದೊಡ್ಡ ಬರಹಗಾರ್ತಿ ಅಂತ ಗೊತ್ತಾಗಿದ್ದು, ಪಿಯುಸಿ ಮುಗಿಸುವ ಹೊತ್ತಿಗೆ. ಹೈಸ್ಕೂಲನಲ್ಲಿ ಪಠ್ಯಕ್ಕೆ ಇದ್ದ ಅವರ “ಅವ್ವ” ಕಥೆ ಓದಿದ ನೆನಪು . ಅವರಿಗೆ ಪರಿಚಯವಿಲ್ಲದ ನಾನು ಒಂದು ದಿನ ಅವರ ಮನೆಗೆ ಹೋಗಿ ಮೇಡಂ ಅವರಿಗೆ ನನ್ನ ಹೆಸರು, ಕಾಲೇಜು ಪರಿಚಯ ಮಾಡಿಸಿ “ನಿಮ್ಮ ಬುಕ್ಸ್ ಬೇಕಾಗಿತ್ತು ನಮ್ಮ ಕಾಲೇಜಿನ ಲೈಬ್ರರಿಗೆ ಫ್ರೀಯಾಗಿ ಕೊಡೋಕೆ ಸಾಧ್ಯನಾ?” ಅಂತ ಕೇಳಿದೆ. ಅವರು ತುಸು ಯೋಚಿಸಿ, “ನಿಮ್ಮ ಪ್ರಿನ್ಸಿಪಾಲರಿಂದ ಒಂದು ಲೆಟರ್ ತಗೊಂಡ ಬಾರಪ್ಪ ಕೊಡ್ತೀನಿ” ಅಂದ್ರು. ಮರುದಿನ ಲೆಟರ್ ಬರೆಸಿಕೊಂಡು ಹೋಗಿ ಅವರ ಕೈಗಿಟ್ಟೆ ಅವರು ಮರುಮಾತನಾಡದೆ ಮುಗುಳ್ನಗುತ್ತಲೆ ಪುಸ್ತಕದ ಹೊರೆ ಕೈಗಿಟ್ಟರು. ಅದು ಅವರ ಜೊತೆಗಿನ ನನ್ನ ಮೊದಲ ಭೇಟಿ.

ಮುಂದೆ ಅವರ ‘ಬದುಕು’ ಕಾದಂಬರಿ ಓದಿದೆ. ಆವಾಗ ಅರ್ಥ ಆಯ್ತು – ನಾ ಭೇಟಿ ಮಾಡಿದ್ದು, ನಮ್ಮ ಕಣ್ಣೆದುರೆ ಕೂರುತ್ತಿದ್ದ ಅಜ್ಜಿ ಅಸಾಮಾನ್ಯ ಬರಹಗಾರ್ತಿ ಅಂತ. ಆಮೇಲೆ ನನ್ನಲ್ಲಿ ಇದ್ದ ಬೃಹತ್ ಕಾದಂಬರಿ ‘ಬದುಕು’ ಹೊತ್ತುಕೊಂಡು ಹೋಗಿ, ಅವರಿಂದ ಆ ಪುಸ್ತಕದ ಮೇಲೆ ಆಟೋಗ್ರಾಫ್ ಹಾಕೊಂಡು ಬಂದೆ.

ನಮ್ಮಿಂದ ಅವರು ದೂರವಾಗಿರುವ ಈ ಸಂದರ್ಭದಲ್ಲಿ ಅವರ ಬಹುಮುಖ್ಯ ಕೃತಿಗಳು ಚರ್ಚೆಗೆ ಒಳಪಡಿಸುವುದೆ ಅವರಿಗೆ ನಾವು ಸಲ್ಲಿಸಬೇಕಾದ ನಿಜವಾದ ಗೌರವ ಆಗಿದೆ.

“ದಿನಕ್ಕೊಮ್ಮೆ ಹುಟ್ಟು ದಿನಕ್ಕೊಮ್ಮೆ ಸಾವು ಅನ್ನೋಹಂಗ ಸೂರ್ಯ ಚಂದ್ರಾಮರು ಹುಟ್ಟುತ್ತಿದ್ದರು…ಸಾಯುತ್ತಿದ್ದರು. ಹಿಂಗೇ ಹುಟ್ಟು ಸಾವುಗಳ ಕೈ ಹಿಡಿದುಕೊಂಡೇ ಮಂದಿಯ ಬದುಕು ಮುಂದೆ ಮುಂದೆ ನಡೆಯುತ್ತಿತ್ತು. ಎಲ್ಲಿಗೆ ಹೋಗಿ ತಲುಪಬೇಕು ಅನ್ನುವ ಗುರಿ ಗೊತ್ತಿರಲಿಲ್ಲವಾದರೂ ನಡೆಯುವುದೊಂದೇ ತನ್ನ ಗುರಿಯೆನ್ನುವಂತೆ ಹೊತ್ತು ನಡೆಯುತ್ತಲೇ ಇತ್ತು ತನ್ನದೇ ಗತಿಯಿಂದ !” ಬದುಕು (ಕಾದಂಬರಿ) – ಪುಟ ನಂ -517

‘ಬದುಕು’ ಕಾದಂಬರಿಯಲ್ಲಿ ಹೀಗೆ ಬರೆದಿರುವ ಗೀತಾ ನಾಗಭೂಷಣ ಅವರು ಸಾವಿನ ಕೈಹಿಡಿದು ಎಲ್ಲಿಗೋ ಹೋಗಿದ್ದಾರೆ. ಆದರೆ ಅವರು ನಮ್ಮ ಕೈಗಿತ್ತ ‘ಬದುಕು’ ಓದುವುದು, ಅದರೊಂದಿಗೆ ಸಂವಾದಿಸುವುದು ಈ ಹೊತ್ತಿನ ಜರೂರತ್ತು. ಸದಾ ಅವರು ಜಾತಿಯ ಶೋಷಣೆಗಳನ್ನು, ಸ್ತ್ರೀ ದೌರ್ಜನ್ಯಗಳನ್ನು ತಮ್ಮ ಬರಹದ ಮೂಲಕ ವಿರೋಧಿಸುತ್ತಲೇ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಅನಿಷ್ಟ ಪದ್ಧತಿಗಳಿಗೆ ತಮ್ಮ ಬರಹದ ಮೂಲಕ ಕನ್ನಡಿ ಹಿಡಿದು ಹೊರ ನಾಡಿಗೆ ಪರಿಚಯಿಸುವ ಕೆಲಸ ಸಹ ಮಾಡಿದ್ದಾರೆ. ಮುಖ್ಯವಾಗಿ ಅವರು ಬಳಸಿಕೊಂಡಿರುವ ನೆಲದ ಭಾಷೆ ನಮ್ಮೆಲ್ಲರಿಗೂ ನಿಜವಾಗಿಯೂ ಸ್ಪೂರ್ತಿ ಆಗಬೇಕಿದೆ.

ಕೆಲವು ತಿಂಗಳ ಕೆಳಗೆ ಆತ್ಮೀಯ ಗೆಳೆಯರೊಬ್ಬರು ಹೇಳಿದ ಕಾರಣಕ್ಕೆ ಒಂದಿಷ್ಟು ಪ್ರಶ್ನೆಗಳು ಬರೆದುಕೊಂಡು ಅವರ ಮನೆಗೆ ಒಂದು ಸಣ್ಣ ಸಂದರ್ಶನಕ್ಕಾಗಿ ಹೋಗಿದೆ. ” ಹೆಲ್ತ್ ಸರಿಯಲ್ಲ ಈಗ ಯಾವ ಇಂಟರ್ವ್ಯೂ ಸಹ ಕೊಡ್ತಿಲ್ಲಪ್ಪ” ಅಂದ್ರು. ಆವತ್ತು ತುಸು ಬೇಜಾರು ಮಾಡಿಕೊಂಡೆ ಹೊರ ಬಂದವನ ಕೈಯಲ್ಲಿನ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಸಿ ಹೋದ ಮೇಡಂ ಅವರು ತಮ್ಮ ಕಾದಂಬರಿಯಲ್ಲಿ ಒಂದುದು ಕಡೆ ಹೀಗೆ ಬರೆಯುತ್ತಾರೆ,
“ಹಣ್ಣೆಲಿ ಉದುರಿ ಹೊಸಾ ಎಲಿ ಚಿಗುರೊದು ಆ ಭಗವಂತ ಹಾಕಿದ ನೇಮದಾ. ಸತ್ತಾಗಿನ ದುಕ್ಕ, ಹಡದಾಗಿನ ಬ್ಯಾನಿ ನೆನಪಿಟ್ಟುಕೊಂಡರ ಈ ದುನಿಯಾದಾರೀನೇ ನಡೀತಿರಲಿಲ್ಲ”…. ಬದುಕು(ಕಾದಂಬರಿ) ಪುಟ ನಂ -428.

ಸದಾ ಹೊಸತನಕ್ಕೆ ತುಡಿಯುತ್ತಿದ್ದ ಅವರ ಬರಹ ನಮ್ಮೊಳಗೆ ಇನ್ನಷ್ಟು ಹೊಸ ಬೆಳಕಿಂಡಿಗಳು ತೆರೆದಿದೆ. ಒಬ್ಬ ಬರಹಗಾರ ಎಂದಿಗೂ ಸಾಯುವುದಿಲ್ಲ. ಪುಸ್ತಕಗಳ ಜೊತೆ ಸದಾ ಜೀವಂತವಾಗಿ ಉಸಿರಾಡುತ್ತಲೇ ಇರುತ್ತಾರೆ. ಓದುಗರೊಂದಿಗೆ ಮಾತಾಡುತ್ತಲೇ ಇರುತ್ತಾರೆ.


‘ಯುದ್ಧ ಮತ್ತು ಮಕ್ಕಳು’: ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಗೀತಾ ನಾಗಭೂಷಣರ ‘ಬದುಕು’ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು, ಎಂಬುದು ನನ್ನ ಅಭಿಪ್ರಾಯ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...