Homeಮುಖಪುಟಗೀತಾ ನಾಗಭೂಷಣ ತಮ್ಮ ಪುಸ್ತಕಗಳ ಜೊತೆ ಸದಾ ಜೀವಂತವಾಗಿ ಇರುತ್ತಾರೆ: ಶ್ರದ್ಧಾಂಜಲಿ

ಗೀತಾ ನಾಗಭೂಷಣ ತಮ್ಮ ಪುಸ್ತಕಗಳ ಜೊತೆ ಸದಾ ಜೀವಂತವಾಗಿ ಇರುತ್ತಾರೆ: ಶ್ರದ್ಧಾಂಜಲಿ

ನಮ್ಮಿಂದ ಅವರು ದೂರವಾಗಿರುವ ಈ ಸಂದರ್ಭದಲ್ಲಿ ಅವರ ಬಹುಮುಖ್ಯ ಕೃತಿಗಳು ಚರ್ಚೆಗೆ ಒಳಪಡಿಸುವುದೆ ಅವರಿಗೆ ನಾವು ಸಲ್ಲಿಸಬೇಕಾದ ನಿಜವಾದ ಗೌರವ ಆಗಿದೆ.

- Advertisement -
- Advertisement -

ನಾನಾಗ ಪಿಯುಸಿ ಓದುತ್ತಿದ್ದೆ. ಮುಂಜಾನೆ 8 ಗಂಟೆಗೆ ಕಾಲೇಜು ಇರುತ್ತಿದ್ದರಿಂದ ಬೇಗನೆ ಎದ್ದು ಹೊರಡಬೇಕಿತ್ತು. ಗೀತಾ ನಾಗಭೂಷಣ ಅವರ ಮನೆ ಮುಂದೆ ಹಾಯ್ದು ಹೋಗುತ್ತಿದ್ದೆವು. ಫಸ್ಟ್ ಪಿಯುಸಿ ಇದ್ದಾಗ ಇವರ್ಯಾರು ಅಂಬೋದು ನಮಗೆ ಗೊತ್ತಿರಲಿಲ್ಲ. ಟಿ.ವಿ ನೋಡುತ್ತಾ ಕುಳಿತುಕೊಂಡಿರುತ್ತಿದ್ದ ವಯಸ್ಸಾದ ಅಜ್ಜಿ ಈ ನಾಡಿನ ಬಹುದೊಡ್ಡ ಬರಹಗಾರ್ತಿ ಅಂತ ಗೊತ್ತಾಗಿದ್ದು, ಪಿಯುಸಿ ಮುಗಿಸುವ ಹೊತ್ತಿಗೆ. ಹೈಸ್ಕೂಲನಲ್ಲಿ ಪಠ್ಯಕ್ಕೆ ಇದ್ದ ಅವರ “ಅವ್ವ” ಕಥೆ ಓದಿದ ನೆನಪು . ಅವರಿಗೆ ಪರಿಚಯವಿಲ್ಲದ ನಾನು ಒಂದು ದಿನ ಅವರ ಮನೆಗೆ ಹೋಗಿ ಮೇಡಂ ಅವರಿಗೆ ನನ್ನ ಹೆಸರು, ಕಾಲೇಜು ಪರಿಚಯ ಮಾಡಿಸಿ “ನಿಮ್ಮ ಬುಕ್ಸ್ ಬೇಕಾಗಿತ್ತು ನಮ್ಮ ಕಾಲೇಜಿನ ಲೈಬ್ರರಿಗೆ ಫ್ರೀಯಾಗಿ ಕೊಡೋಕೆ ಸಾಧ್ಯನಾ?” ಅಂತ ಕೇಳಿದೆ. ಅವರು ತುಸು ಯೋಚಿಸಿ, “ನಿಮ್ಮ ಪ್ರಿನ್ಸಿಪಾಲರಿಂದ ಒಂದು ಲೆಟರ್ ತಗೊಂಡ ಬಾರಪ್ಪ ಕೊಡ್ತೀನಿ” ಅಂದ್ರು. ಮರುದಿನ ಲೆಟರ್ ಬರೆಸಿಕೊಂಡು ಹೋಗಿ ಅವರ ಕೈಗಿಟ್ಟೆ ಅವರು ಮರುಮಾತನಾಡದೆ ಮುಗುಳ್ನಗುತ್ತಲೆ ಪುಸ್ತಕದ ಹೊರೆ ಕೈಗಿಟ್ಟರು. ಅದು ಅವರ ಜೊತೆಗಿನ ನನ್ನ ಮೊದಲ ಭೇಟಿ.

ಮುಂದೆ ಅವರ ‘ಬದುಕು’ ಕಾದಂಬರಿ ಓದಿದೆ. ಆವಾಗ ಅರ್ಥ ಆಯ್ತು – ನಾ ಭೇಟಿ ಮಾಡಿದ್ದು, ನಮ್ಮ ಕಣ್ಣೆದುರೆ ಕೂರುತ್ತಿದ್ದ ಅಜ್ಜಿ ಅಸಾಮಾನ್ಯ ಬರಹಗಾರ್ತಿ ಅಂತ. ಆಮೇಲೆ ನನ್ನಲ್ಲಿ ಇದ್ದ ಬೃಹತ್ ಕಾದಂಬರಿ ‘ಬದುಕು’ ಹೊತ್ತುಕೊಂಡು ಹೋಗಿ, ಅವರಿಂದ ಆ ಪುಸ್ತಕದ ಮೇಲೆ ಆಟೋಗ್ರಾಫ್ ಹಾಕೊಂಡು ಬಂದೆ.

ನಮ್ಮಿಂದ ಅವರು ದೂರವಾಗಿರುವ ಈ ಸಂದರ್ಭದಲ್ಲಿ ಅವರ ಬಹುಮುಖ್ಯ ಕೃತಿಗಳು ಚರ್ಚೆಗೆ ಒಳಪಡಿಸುವುದೆ ಅವರಿಗೆ ನಾವು ಸಲ್ಲಿಸಬೇಕಾದ ನಿಜವಾದ ಗೌರವ ಆಗಿದೆ.

“ದಿನಕ್ಕೊಮ್ಮೆ ಹುಟ್ಟು ದಿನಕ್ಕೊಮ್ಮೆ ಸಾವು ಅನ್ನೋಹಂಗ ಸೂರ್ಯ ಚಂದ್ರಾಮರು ಹುಟ್ಟುತ್ತಿದ್ದರು…ಸಾಯುತ್ತಿದ್ದರು. ಹಿಂಗೇ ಹುಟ್ಟು ಸಾವುಗಳ ಕೈ ಹಿಡಿದುಕೊಂಡೇ ಮಂದಿಯ ಬದುಕು ಮುಂದೆ ಮುಂದೆ ನಡೆಯುತ್ತಿತ್ತು. ಎಲ್ಲಿಗೆ ಹೋಗಿ ತಲುಪಬೇಕು ಅನ್ನುವ ಗುರಿ ಗೊತ್ತಿರಲಿಲ್ಲವಾದರೂ ನಡೆಯುವುದೊಂದೇ ತನ್ನ ಗುರಿಯೆನ್ನುವಂತೆ ಹೊತ್ತು ನಡೆಯುತ್ತಲೇ ಇತ್ತು ತನ್ನದೇ ಗತಿಯಿಂದ !” ಬದುಕು (ಕಾದಂಬರಿ) – ಪುಟ ನಂ -517

‘ಬದುಕು’ ಕಾದಂಬರಿಯಲ್ಲಿ ಹೀಗೆ ಬರೆದಿರುವ ಗೀತಾ ನಾಗಭೂಷಣ ಅವರು ಸಾವಿನ ಕೈಹಿಡಿದು ಎಲ್ಲಿಗೋ ಹೋಗಿದ್ದಾರೆ. ಆದರೆ ಅವರು ನಮ್ಮ ಕೈಗಿತ್ತ ‘ಬದುಕು’ ಓದುವುದು, ಅದರೊಂದಿಗೆ ಸಂವಾದಿಸುವುದು ಈ ಹೊತ್ತಿನ ಜರೂರತ್ತು. ಸದಾ ಅವರು ಜಾತಿಯ ಶೋಷಣೆಗಳನ್ನು, ಸ್ತ್ರೀ ದೌರ್ಜನ್ಯಗಳನ್ನು ತಮ್ಮ ಬರಹದ ಮೂಲಕ ವಿರೋಧಿಸುತ್ತಲೇ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಅನಿಷ್ಟ ಪದ್ಧತಿಗಳಿಗೆ ತಮ್ಮ ಬರಹದ ಮೂಲಕ ಕನ್ನಡಿ ಹಿಡಿದು ಹೊರ ನಾಡಿಗೆ ಪರಿಚಯಿಸುವ ಕೆಲಸ ಸಹ ಮಾಡಿದ್ದಾರೆ. ಮುಖ್ಯವಾಗಿ ಅವರು ಬಳಸಿಕೊಂಡಿರುವ ನೆಲದ ಭಾಷೆ ನಮ್ಮೆಲ್ಲರಿಗೂ ನಿಜವಾಗಿಯೂ ಸ್ಪೂರ್ತಿ ಆಗಬೇಕಿದೆ.

ಕೆಲವು ತಿಂಗಳ ಕೆಳಗೆ ಆತ್ಮೀಯ ಗೆಳೆಯರೊಬ್ಬರು ಹೇಳಿದ ಕಾರಣಕ್ಕೆ ಒಂದಿಷ್ಟು ಪ್ರಶ್ನೆಗಳು ಬರೆದುಕೊಂಡು ಅವರ ಮನೆಗೆ ಒಂದು ಸಣ್ಣ ಸಂದರ್ಶನಕ್ಕಾಗಿ ಹೋಗಿದೆ. ” ಹೆಲ್ತ್ ಸರಿಯಲ್ಲ ಈಗ ಯಾವ ಇಂಟರ್ವ್ಯೂ ಸಹ ಕೊಡ್ತಿಲ್ಲಪ್ಪ” ಅಂದ್ರು. ಆವತ್ತು ತುಸು ಬೇಜಾರು ಮಾಡಿಕೊಂಡೆ ಹೊರ ಬಂದವನ ಕೈಯಲ್ಲಿನ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಸಿ ಹೋದ ಮೇಡಂ ಅವರು ತಮ್ಮ ಕಾದಂಬರಿಯಲ್ಲಿ ಒಂದುದು ಕಡೆ ಹೀಗೆ ಬರೆಯುತ್ತಾರೆ,
“ಹಣ್ಣೆಲಿ ಉದುರಿ ಹೊಸಾ ಎಲಿ ಚಿಗುರೊದು ಆ ಭಗವಂತ ಹಾಕಿದ ನೇಮದಾ. ಸತ್ತಾಗಿನ ದುಕ್ಕ, ಹಡದಾಗಿನ ಬ್ಯಾನಿ ನೆನಪಿಟ್ಟುಕೊಂಡರ ಈ ದುನಿಯಾದಾರೀನೇ ನಡೀತಿರಲಿಲ್ಲ”…. ಬದುಕು(ಕಾದಂಬರಿ) ಪುಟ ನಂ -428.

ಸದಾ ಹೊಸತನಕ್ಕೆ ತುಡಿಯುತ್ತಿದ್ದ ಅವರ ಬರಹ ನಮ್ಮೊಳಗೆ ಇನ್ನಷ್ಟು ಹೊಸ ಬೆಳಕಿಂಡಿಗಳು ತೆರೆದಿದೆ. ಒಬ್ಬ ಬರಹಗಾರ ಎಂದಿಗೂ ಸಾಯುವುದಿಲ್ಲ. ಪುಸ್ತಕಗಳ ಜೊತೆ ಸದಾ ಜೀವಂತವಾಗಿ ಉಸಿರಾಡುತ್ತಲೇ ಇರುತ್ತಾರೆ. ಓದುಗರೊಂದಿಗೆ ಮಾತಾಡುತ್ತಲೇ ಇರುತ್ತಾರೆ.


‘ಯುದ್ಧ ಮತ್ತು ಮಕ್ಕಳು’: ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಗೀತಾ ನಾಗಭೂಷಣರ ‘ಬದುಕು’ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು, ಎಂಬುದು ನನ್ನ ಅಭಿಪ್ರಾಯ.

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....