Homeಕರ್ನಾಟಕಚಂದ್ರಯಾನ-2: ತಪ್ಪನ್ನು ತಿದ್ದಿಕೊಳ್ಳದೇ ಅಹಂಕಾರ ಮೆರೆದ ವಿಜಯವಾಣಿ: ಸಾಮಾಜಿಕ ಜಾಲತಾಣದಲ್ಲಿ ಖಂಡನೆ

ಚಂದ್ರಯಾನ-2: ತಪ್ಪನ್ನು ತಿದ್ದಿಕೊಳ್ಳದೇ ಅಹಂಕಾರ ಮೆರೆದ ವಿಜಯವಾಣಿ: ಸಾಮಾಜಿಕ ಜಾಲತಾಣದಲ್ಲಿ ಖಂಡನೆ

"ಡಿಯರ್ ಮೀಡಿಯಾ, ನಿಮ್ಮ ನಿನ್ನೆಯ ತಪ್ಪಿಗಾದರೂ ಕ್ಷಮೆ ಇದೆ; ಈವತ್ತಿನ ಅಹಂಕಾರ ಪ್ರದರ್ಶನಕ್ಕೆ ಖಂಡಿತಾ ಕ್ಷಮೆ ಇಲ್ಲ."

- Advertisement -
- Advertisement -

ಚಂದ್ರಯಾನ-2 ಅನ್ನು ಉಡಾವಣೆಗೂ ಮುನ್ನವೇ ನಭಕ್ಕೆ ನೆಗೆದ ಬಾಹುಬಲಿ ಎಂದು ಮುದ್ರಿಸಿ ಪ್ರಮಾದ ಎಸಗಿದ್ದ ವಿಜಯವಾಣಿ ಪತ್ರಿಕೆ ಕ್ಷಮೆ ಕೇಳುವ ನೆಪದಲ್ಲಿ ಮತ್ತೆ ಅಹಂಕಾರ ಮೆರೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಯಾಗಿದೆ.

ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದಾಗಿ ಚಂದ್ರಯಾನವನ್ನು ಇಸ್ರೋ ಮುಂದೂಡಿತ್ತು. ಆದರೆ ಮುಂಚೆಯೇ ಚಂದ್ರಯಾಣ ಉಡಾವಣೆಯಾಯಿತು, ರಾಷ್ಟ್ರಪತಿ ಶುಭಹಾರೈಸಿದರು ಎಂದು ಪತ್ರಿಕೆ ಧಾವಂತದಲ್ಲಿ ಮುದ್ರಿಸಿತ್ತು. ಆ ಕುರಿತು ಇಂದು ನೋವಾಗಿದೆ ಎಂದು 17 ಸಾಲುಗಳುಳ್ಳ ಸುದ್ದಿ ಪ್ರಕಟಿಸಿರುವ ವಿಜಯವಾಣಿ ಪತ್ರಿಕೆ ಅಲ್ಲಿಯೂ ನೇರವಾಗಿ ತಪ್ಪಾಗಿದೆ ಎಂದು ಹೇಳುವ ಬದಲು ಸುತ್ತಿ ಬಳಸಿ ಕೊನೆಯಲ್ಲಿ ಓದುಗರಿಗಾದ ಅನಾನುಕೂಲಕ್ಕೆ ವಿಷಾದಿಸುತ್ತೇವೆ ಎಂದು ಸಂಪಾದಕನ ಹೆಸರಿನಲ್ಲಿ ಪ್ರಕಟಿಸುವ ಮೂಲಕ ಅಹಂಕಾರ ಮೆರೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ಸಾಲಿನಲ್ಲಿ ಹೇಳಬಹುದಾದನ್ನು ಅಷ್ಟು ಸಾಲುಗಳಲ್ಲಿ ಹೇಳಿದ ಉದ್ದೇಶವೇ ಮತ್ತೆ ಕನ್ ಫ್ಯೂಸ್ ಮಾಡುವುದು, ಆ ಮೂಲಕ ತಮ್ಮದೇನೂ ತಪ್ಪಿಲ್ಲ ಎಂಬ ಪರೋಕ್ಷ ವಾದ. ವಿಷಾದ ವಿನಯದ ಕುರುಹೂ ಇಲ್ಲ ಎಂದು ಶ್ರೀನಿವಾಸ ಕಾರ್ಕಳರವರು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಇವರ ಕುಲಗೆಟ್ಟು ಹೋದ ಈ ಧಂದೆ(ಉದ್ಯಮ)ಯನ್ನು ಆಗಾಗ ‘ಜಾರತನ’ ಎಂದು ನಾನು ಬರೀತಿದ್ದಾಗ ಸ್ವಲ್ಪ ಅಳುಕು ಉಂಟಾಗುತ್ತಿತ್ತು. ಈಗ ಯಾವ ಅಳುಕಿಲ್ಲದೇ ಹೇಳ್ತೇನೆ ಎಂದು ಅಬು ಅಸ್ಮರವರು ಪ್ರತಿಕ್ರಿಯಿಸಿದ್ದಾರೆ.

ಇಂಥ ಕಲಗಚ್ಚು ಪತ್ರಿಕೆಯಲ್ಲಿ ಪ್ರಾಮಾಣಿಕ ಕ್ಷಮಾಪಣೆ ಬಯಸುವುದು ಚಂದ್ರನಲ್ಲಿ ಜೀವಿಗಳಿವೆ ಎಂದು ಹೇಳಿದಷ್ಟೇ ಅಭಾಸ ಎಂದು ಗೋವಿಂದರಾಜ ಬೈಚಗುಪ್ಪೆಯವರು ವ್ಯಂಗ್ಯವಾಡಿದ್ದಾರೆ.

“ಡಿಯರ್ ಮೀಡಿಯಾ, ನಿಮ್ಮ ನಿನ್ನೆಯ ತಪ್ಪಿಗಾದರೂ ಕ್ಷಮೆ ಇದೆ; ಈವತ್ತಿನ ಅಹಂಕಾರ ಪ್ರದರ್ಶನಕ್ಕೆ ಖಂಡಿತಾ ಕ್ಷಮೆ ಇಲ್ಲ. ನಾವು ನಮ್ಮ ಕೆಲಸ ಶಿಸ್ತಿನಿಂದ ಮಾಡಿದ್ದೇವೆ. ಇಸ್ರೋದವರು ತಪ್ಪು ಮಾಡಿದರೆ ನಾವು ಹೊಣೆ ಅಲ್ಲ ಎಂಬ ಧ್ವನಿಯ ನಿಮ್ಮ ಈವತ್ತಿನ ಪ್ರಕಟಣೆ ನಿಮ್ಮ ಬಗ್ಗೆ, ನಿಮ್ಮ ಪತ್ರಿಕೋದ್ಯಮದ ಬಗ್ಗೆ ಹಾಗೂ ಕನ್ನಡ ಪತ್ರಿಕೋದ್ಯಮ ಸಾಗುತ್ತಿರುವ ಹಾದಿಯ ಬಗ್ಗೆ ತುಂಬಾ ಸೂಚನೆಗಳನ್ನು ನೀಡುತ್ತಿದೆ. ಸುದ್ದಿಮನೆಯಲ್ಲಿ ತಪ್ಪುಗಳು ಸ್ವಾಭಾವಿಕ. ಸ್ವಲ್ಪ ಎಚ್ಚರ ಮತ್ತು ನಾವು ಮಾಡುತ್ತಿರುವುದು ಏನೆಂಬ ಕಲ್ಪನೆ ಇದ್ದಿದ್ದರೆ, ಕ್ಷಮೆಯಲ್ಲಿ ವಿನಯ ತಾನಾಗಿ ವ್ಯಕ್ತಗೊಳ್ಳುತ್ತದೆ. ಕಲಿತದ್ದು ಜಾಸ್ತಿ ಆದಾಗ ಹೀಗೇ..” ಎಂದು ರಾಜರಾಮ ತಲ್ಲೂರ್ ರವರು ಬರೆದಿದ್ದಾರೆ.

ಶ್ರೀಹರಿಕೋಟಾದಲ್ಲಿ ತಾಂತ್ರಿಕ ಕಾರಣಗಳಿಂದ ಉಡಾವಣೆಗೆ 56 ನಿಮಿಷ ಮುಂಚಿತವಾಗಿ ರದ್ದು ಮಾಡಲ್ಪಟ್ಟ ಚಂದ್ರಯಾನ -2 ಕೊನೆಗೆ ಯಶಸ್ವಿಯಾಗಿ ಬೆಂಗಳೂರಿನ ಚಾಮರಾಜಪೇಟೆಯ ವಿಜಯವಾಣಿ ಕಚೇರಿ ಒಳಗಿಂದ ಹಾರಿಸಲ್ಪಟ್ಟಿರುವುದು ತಿಳಿದು ಬಂದಿದೆ….. ಈ ಸುಸಂದರ್ಭದಲ್ಲಿ ಮಾನ್ಯ ವಿಜಯ ಸಂಕೇಶ್ವರ ಅವರು ಉಪಸ್ಥಿತರಿದ್ದು ಈ ಯಶಸ್ವಿ ಚಂದ್ರಯಾನ್ -2 ಉಡಾವಣೆಯನ್ನು ನೆರವೇರಿಸಿಕೊಟ್ಟರು ಎಂದು ಬಲ್ಲ ಮೂಲಗಳು ತಿಳಿಸಿವೆ…. ಎಂದು ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆಯವರು ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ಪೇಪರ್ ಓದುವವರಿಗೆ, ಅದನ್ನು ಮನೆಗೆ ಹಾಕಿಸುವವರಿಗೆ – ನೆನ್ನೆ ಚಂದ್ರಯಾನ ನೌಕೆ ಯಶಸ್ವಿ ಉಡ್ಡಯನದ ಸುಳ್ಳು ಸುದ್ದಿ ಮುಖಪುಟದಲ್ಲಿ ಓದಿ ‘ಈ ಪೇಪರ್ ಹಾಕಿಸಿ ಬೆಂಬಲ ಕೊಡ್ತಾ ಇರೋದಕ್ಕೆ ನಮ್ ಮೆಟ್ ತಗಂಡು ನಾವೇ ಹೋಡ್ಕೊಬೇಕು’ ಅನ್ನಿಸಲಿಲ್ವಾ? ಎಂದು ಬರೆಯುವ ಮೂಲಕ ಗರುವೇ ಹೆಜ್ಜಾಜಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇದು ಯಾವ ಪತ್ರಿಕೆ ? ಇವರಿಗಿಂತ ನಮ್ಮ ರಂಗಣ್ಣ ಸರೇ Better.. ನಿನ್ನೆ ನೇರವಾಗಿ ಚಂದ್ರನ ಮೇಲೆ ನಿಂತು ವರದಿ ಮಾಡಿದ್ರು..” ಎಂದು ರಾಘವೇಂದ್ರ ಗೋಪಾಡಿಯವರು ಕಿಚಾಯಿಸಿದ್ದಾರೆ.

“ಯಾವ ಮೀಡಿಯಾವು ಯಾವಾಗ ತಾನು ಪ್ರಕಟಿಸುವ ಸುದ್ದಿಯನ್ನು ಮಾರಿದ ಆದಾಯವನ್ನಷ್ಟೇ ನೆಚ್ಚಿ ಬದುಕುವುದು ಬಿಡುತ್ತಾ ಬಂದಿತೋ ಆಗಲೇ ಈ ಅಹಂಕಾರದ ನಶೆಯೂ ಏರುತ್ತಾ ಹೋಯಿತು.” ಎಂದು ಬರಹಗಾರ್ತಿ ಕಾದಂಬಿನಿ ರಾವಿಯವರು ಬರೆದಿದ್ದಾರೆ.

ಇನ್ನು ವಿಜಯವಾಣಿ ಪತ್ರಿಕೆಯ ಸಿಬ್ಬಿಂದಿಯೊಬ್ಬರು “ನಾವೇನು ಕಾಲದರ್ಶಕರಲ್ಲ, ಮುಂದಿನದನ್ನು ಮೊದಲೆ ತಿಳಿದು ಬರೆಯಲು, ತಾಂತ್ರಿಕ ದೋಷ ಇದೆ ಎಂದು, ನಿಗದಿತ ಸಮಯಕ್ಕೆ ಉಡಾವನೆ ಮಾಡಲು ಆಗುವುದಿಲ್ಲ ಎಂದು ಅಲ್ಲಿರುವವರಿಗೇನೇ ಗೊತ್ತಿಲ್ಲದಿರುವಾಗ ಇನ್ನು ನಮಗೇನು ಗೊತ್ತಾಗ್ವೇಕು. ಇಸ್ರೋ ಮೇಲಿನ ನಂಬಿಕೆ, ವಿಶ್ವಾಸದಿಂದ ನಿಗದಿತ ಸಮಯಕ್ಕೆ ಉಡಾವಣೆ ಆಗಲಿದೆ ಎಂದು ಬರೆದಿದ್ದೇವೆ” ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದಕ್ಕೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತರು ಮತ್ತು ಪ್ರಸಿದ್ದ ಕಾರ್ಟೂನಿಷ್ಟ್ ಆದ ಪಂಜು ಗಂಗೊಳ್ಳಿಯವರು “ಒಂದು ಘಟನೆ ನಡೆದ ನಂತರವಷ್ಟೇ ಅದು ಸುದ್ದಿ ಅಂತಾಗುತ್ತದೆ. ಒಂದು ವೇಳೆ ೨.೫೫ ಕ್ಕೆ ನಿಗದಿಯಾಗಿದ್ದ ಚಂದ್ರಯಾನ ಯಶಸ್ವಿಯಾಗಿ ಉಡಾವಣೆಯಾಗಿದ್ದರೂ ಬೆಳಗ್ಗಿನ ಎರಡು ಗಂಟೆಗಳೊಳಗೆ ಮುದ್ರಣಗೊಂಡು ಹೊರ ಬರುವ ಪತ್ರಿಕೆಯಲ್ಲಿ ಅದು ಸುದ್ದಿಯಾಗಿ ಬರುವುದೂ ಉಡಾಫೆಯಾಗುತ್ತದೆ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...