Homeಅಂಕಣಗಳು"ವಿವೇಕಾನಂದರು ಮುಸ್ಲಿಂ ದೇಹಶಕ್ತಿಯಿಂದ, ಹಿಂದೂ ಬುದ್ಧಿಶಕ್ತಿಯಿಂದ ದೇಶ ಕಟ್ಟಿ ಅಂದವುರೆ ಸಾ"

“ವಿವೇಕಾನಂದರು ಮುಸ್ಲಿಂ ದೇಹಶಕ್ತಿಯಿಂದ, ಹಿಂದೂ ಬುದ್ಧಿಶಕ್ತಿಯಿಂದ ದೇಶ ಕಟ್ಟಿ ಅಂದವುರೆ ಸಾ”

- Advertisement -
- Advertisement -

ನಾವು ಇದುವರೆಗೂ ಹೆಡಗೇವಾರ್‌ರನ್ನ, ಹೆಡಗೇವಾರ್ ಎಂದು ಭಾವಿಸಿದ್ದರೆ, ಎಸ್. ಎಲ್. ಭೈರಪ್ಪನವರು ಪರಮಪೂಜ್ಯ ಹೆಡಗೇವಾರ್ ಎಂದು ಕರೆದು ಈ ನಾಡಿಗೇ ಅಚ್ಚರಿ ಮೂಡಿಸಿದ್ದಾರಲ್ಲಾ. ನಾವು ತಿಳಿದಂತೆ ಭೈರಪ್ಪನ ಪೂಜ್ಯರು ಸಂತೇಶಿವರದ ಚನ್ನಿಗ ರಾಯ ಅಂತೆ. ಅಥವ ಆ ಹೆಸರಿನ ಆಸುಪಾಸಿನವರು. ಆದರೀಗ
ಭೈರಪ್ಪ ನಮ್ಮ ಪರಮಪೂಜ್ಯರು ಎನ್ನಲಾಗಿ, ಪರಮಪೂಜ್ಯ ಎಂದರೆ ಪಿತಾಮಹರ ಸಮಾನ ಎಂಬ ಅರ್ಥವು ಬರುವುದರಿಂದ ಸದರಿ ಹೆಡೆಗೆವಾರ್ ಭೈರಪ್ಪನವರಿಗೆ ಪಿತಾಮಹನ ಸಮನಾಗಿರುವ ಪ್ರಯುಕ್ತ ಅವರು ಪಠ್ಯದಲ್ಲಿ ಇದ್ದರೆ ತಪ್ಪೇನು ಎನ್ನುವ ವಾದವೂಂದು ಮುಗ್ಧ ಜನರಿಂದ ಶುರುವಾಗಿದೆಯಂತಲ್ಲಾ. ಈ ಸಂಚನ್ನ ಅರಿತೇ ಭೈರಪ್ಪ ಅಳೆದು ತೂಗಿ ಪರಮಪೂಜ್ಯ ಪದ ಎಸೆದಿದ್ದಾರಂತಲ್ಲಾ.

ಸದರಿ ಭೈರಪ್ಪರನ್ನ ಸಂತೆಶಿವರದ ಒಕ್ಕಲಿಗರು ಕುರುಬರು ಅಕ್ಕಿ ರಾಗಿ ಕಾಯಿ ಕಸಿ ಕೊಟ್ಟು ಸಾಕಿದರು. ಓದಲು ಸಹಾಯ ಮಾಡಿದರು. ಅದರೆ ಭೈರಪ್ಪ ಬೆಳೆದು ದೂಡ್ಡವರಾಗಿ ವಿದ್ವಾಂಸನಾಗಿ ಆರೆಸ್ಸೆಸ್ ಪ್ರೋಫೆಸರ್‌ರಾದರೂ ಸಂತೇಶಿವರದ ಜನಕ್ಕೆ ಮಹಾದ್ರೋಹವಾಗಿ ಕಂಡೇ ಇಲ್ಲವಂತಲ್ಲಾ. ಸದ್ಯ ಪಠ್ಯ ಪರಿಷ್ಕರಣವಷ್ಟೇ ಅಲ್ಲ. ಈ ಸಾಹಿತಿಗಳು ಜಗಳಗಂಟರು, ಕಳೆದ ಅರವತ್ತು ವರ್ಷದಿಂದ ನನ್ನ ವಿರುಧ್ಧ ಜಗಳವಾಡಿದ್ದಾರೆ, ಈಗಲೂ ಅವರ ಮುಂದುವರೆದ ಸಂತತಿ ಈ ಎಲ್ಲದಕ್ಕೂ ಜಗಳ ಕಾಯುತ್ತಿದೆ ಎಂದರಂತಲ್ಲಾ. ಹೀಗಿರುವಾಗ ಈ ಭೈರಪ್ಪನ ಪಾದಗೋಚರಿಸಿದ ಕೂಡಲೇ ಡೈ ಹೊಡೆಯುವ ಜ್ಞಾನಪೀಠಿ ಕಂಬಾರರು ಈವರೆಗೆ ಬಾಯನ್ನೆ ಬಿಡದಿರುವುದು ಯಾರಿಗೂ ಆಶ್ಚರ್ಯ ತಂದಿಲ್ಲವಂತಲ್ಲಾ ಥೂತ್ತೇರಿ

******

ಇದ್ದಕ್ಕಿದ್ದಂತೆ ಆಮ್‌ಆದ್ಮಿ ಪಕ್ಷ ಈಶ್ವರಪ್ಪನ ಮೇಲೆ ಕಾರ್ಯಕ್ರಮ ಹಾಕಿಕೊಂಡು, ಅಂದು ಕಾಡುಗಳ್ಳ ವೀರಪ್ಪ ಇಂದು ಶಿವಮೊಗ್ಗ ಕಳ್ಳ ಈಶ್ವರಪ್ಪ ಎಂಬ ಪ್ಲೆಕ್ಸ್‌ಗಳನ್ನು ಹಿಡಿದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ಬಗ್ಗೆ ಕುತೂಹಲಗೊಂಡು, ಈ ಬಗ್ಗೆ ಈಶ್ವರಪ್ಪನವರಿಗೆ ಪೋನ್ ಮಾಡಿ ತಿಳಿದುಕೊಳ್ಳಬೇಕೆನಿಸಿದ ಕೂಡಲೇ, ಯಡೂರಪ್ಪನವರ ಕಡೆಯಿಂದ ಪೋನ್ ನಂಬರ್ ಪಡೆದು ಪೋನ್ ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ ’ನಮಸ್ತೇ ಸದಾವತ್ಸಲೇ ಮಾತೃಭೂಮಿ’.

“ಹಲೊ ಹಲೊ ನಾನು ಸರ್ ಯಾಹೂ”.

“ಏನ್ರಿ ಯಾಹೂ ಭಾಳ ದಿನದ ಮ್ಯಾಲೆ ಫೋನ್ ಮಾಡಿದ್ದೀರಿ”.

“ಒಂದಿಷ್ಟು ಮಾತಾಡಬೇಕು ಸಾರ್”.

“ಬನ್ರಿ ಮನಿಗೆ ಆರಾಮಾಗಿದ್ದಿನಿ ಮಾತಾಡನ”.

“ಬರ್ತಿನಿ ಸಾರ್ ಯಾವಾಗ್ಲಾರ ಬಿಡುವು ಮಾಡಿಕೊಂಡು. ಮಾತಾಡನ. ಈಗೊಂದೆರಡು ಪ್ರಶ್ನೆ ಸಾರ್”.

“ಕೇಳಿ, ಅದಕೆ ಅಲವ ನೀವು ಪೋನ್ ಮಾಡಿದ್ದು. ನಿಮ್ಮ ಪತ್ರಕರ್ತರ ಚಾಳಿ ನಂಗೊತ್ತಿಲ್ವ”.

“ಸಿದ್ದರಾಮಯ್ಯ ಆರೆಸ್ಸೆಸ್ ಬಗ್ಗೆ ಭಯ ಅಂದವುರಲ್ಲ ಸಾರ್”.

“ಭಯನೆ ಮತ್ತೆ. ಅರೆಸ್ಸೆಸ್‌ಗೆ ಸಿದ್ದರಾಮಯ್ಯನೂ ಹೆದರಬೇಕು, ಮತ್ತೊಬ್ಬನೂ ಹೆದರಬೇಕು”.

“ನಿಜ ಸಾರ್ ಅಂತ ಗಾಂಧಿನೆ ಕೊಂದಾಕಿದ ಗೋಡ್ಸೆ ಪ್ರಕರಣದಲ್ಲಿ ಆರೋಪಿತನಾಗಿ ಜಯಿಸಿಗಂಡ ಸಂಘಟನೆ ಅದು. ಇನ್ನ ಸಿದ್ದರಾಮಯ್ಯ ಯಾವ ಲೆಕ್ಕ ಅಲ್ವೆ”.

“ರಿ ಗಾಂಧಿ ಕೊಂದಿದ್ದು ಅರೆಸ್ಸೆಸ್ ಅಲ್‌ಕಂಡ್ರಿ. ಅಲ್ಲಿ ಬೇರೆ ಕಡಿಂದ ಒಂದು ಗುಂಡು ಬಂತು. ಅದನ್ನ ಯಾರು ತನಿಖೆ ಮಾಡಲಿಲ್ಲ”.

“ಪಾಕಿಸ್ತಾನದ ಕಡಿಂದ ಬಂದಿರಬೇಕಲ್ಲವ ಸಾರ್”.

“ಇನ್ನೇನ್ರಿ ಮತ್ತೆ, ಆ ಬಗ್ಗೆ ತನಿಖೆನೆ ಮಾಡಲಿಲ್ಲ”.

“ಅರೆಸ್ಸೆಸ್ ವಿಷಯಕ್ಕೆ ಬಂದ್ರೆ ಉರುದೋಯ್ತಿರಿ ಅಂತ ಸಿದ್ದರಾಮಯ್ಯನ್ನ ಹೆಸರಿಸಿದಿರಿ. ಯಾಕ್ ಸಾರ್”.

“ಅರೆಸ್ಸೆಸ್ ಒಂದು ದೇಶಭಕ್ತಿ ಸಂಘಟನೆ ಕಂಡ್ರಿ. ಪಾಪ ಅವುರು ಮನೆಮಠದ ಯೋಚನೆ ಬಿಟ್ಟು, ಸಂಸಾರದ ಸುಖ ಬಿಟ್ಟು ಯಾವಾಗ್ಲೂ ದೇಶದ ಬಗ್ಗೆ ಯೋಚನೆ ಮಾಡ್ತರೆ”.

“ಹುಡುಗರಿಗೆ ದೇಶಭಕ್ತಿ ಕಲುಸ್ತರೆ. ಹುಡುಗರನ್ನ ಜೊತೆಲೆ ಇಟ್ಟುಕೊಂಡು ದೇಶಭಕ್ತಿ ಅಂದ್ರೇನು, ನಮ್ಮ ಸಂಸ್ಕೃತಿ ಅಂದ್ರೇನು ಅಂತ ಹೇಳಿಕೊಡ್ತಾರೆ”.

“ನೀವು ಆರೆಸ್ಸೆಸ್‌ನಲ್ಲಿ ಇದ್ರಲ್ಲವ ಸಾರ್?”

“ಈಗ್ಲು ಇದ್ದಿನಿ”.

“ಮತ್ತೆ ಸಂಸಾರಸ್ಥರಾಗಿದಿರಿ. ಕೋಟ್ಯಾನು ಕೋಟಿ ಆಸ್ತಿ ಮಾಡಿದಿರಿ. ಭ್ರಷ್ಟಾಚಾರ ಮಾಡದು ದೇಶದ್ರೋಹದ ಕೆಲಸವಂತೆ. ಅಂತ ಕೆಲಸ ಮಾಡಿ ಮಂತ್ರಿಗಿರಿ ಕಳಕೊಂಡು ಮನೆಲಿದಿರಿ. ಮತ್ತೆ ಆರೆಸ್ಸೆಸ್ಸು ಅಂತ ಹೇಳ್ತಿರಿ. ಇದ್ಯಾರಿಗೆ ಸಾರ್?”

“ರೀ ಯಾಹು ತಲೆಹರಟೆ ಪ್ರಶ್ನೆ ಬೇಡಿ. ಆರೆಸ್ಸೆಸ್ ಬಗ್ಗೆ ಕೇಳಿ”.

“ಹೇಳಿ ಸರ್”.

“ಆರೆಸ್ಸೆಸ್ ಒಂದು ಸುಸಂಸ್ಕೃತ ಸಂಸ್ಥೆ. ಅದು ಒಳ್ಳೆ ಸಂಸ್ಕೃತಿ ಕಲಸತ್ತೆ. ಒಳ್ಳೆ ಭಾಷೆ ಕಲಸತ್ತೆ”.

“ಅಂಗಾದ್ರೆ ನೀವು ಅವೆರಡನ್ನೂ ಕಲೀಲ್ಲವಾ ಸಾರ್”.

“ಯಾಕ್ರಿ ಅಂಗಂತಿರಿ”.

“ದನ ತಿಂದರೆ ಗಂಟಲು ಸೀಳಬೇಕು, ಕೈ ಕಡಿಬೇಕು ಅಂತಿರಿ. ಸಿದ್ದರಾಮಯ್ಯನ್ನ ಹುಚ್ಚ ಅಂತಿರಿ. ಹೆಣ್ಣು ಮಕ್ಕಳ ಬೈತಿರಿ. ನೀವಷ್ಟೇ ಅಲ್ಲ. ಅವನ್ಯಾರೊ ಸಿ.ಟಿ. ರವಿ, ಪ್ರತಾಪ, ನಿಮ್ಮ ಕಟೀಲ ಇವುರ ಮಾತಲ್ಲಿ ನಾನು ಸಂಸ್ಕೃತಿನೂ ನೋಡಲಿಲ್ಲ, ಭಾಷೆನೂ ನೋಡಲಿಲ್ಲ”.

“ಸಿಟ್ಟು ಬಂದ್ರೆ ಏನು ಮಾಡಕ್ಕಾಯ್ತದ್ರೀ?”

“ಸಂಸ್ಕೃತಿ ಅಂದ್ರೆ ಸಿಟ್ಟು ಗೆಲ್ಲೋದೆ ಅಲವಾ ಸಾರ್”.

“ಈ ಸಾಬರು ಮಾಡೋ ಗೂಂಡಾ ಕೆಲಸ, ಕ್ರಿಶ್ಚಿಯನ್ರು ಮಾಡೋ ಮತಾಂತರ ನೋಡಿಕಂಡು ಸುಮ್ಮನಿರಬೇಕೇನ್ರಿ?”

“ಸಾರ್ ಸಾಬರು ಗೂಂಡಾಗಳಾದ್ರೆ ಅವರನ್ನ ವಿಚಾರಿಸಿಕೊಳ್ಳೋಕೆ ಪೋಲಿಸ್ ಅದೆ. ಇನ್ನ ಕ್ರಿಶ್ಚಿಯನ್ರು ಮತಾಂತರ ಮಾಡ್ತರೆ ಅಂದ್ರೆ, ಅವರ್‍ನ ಕರೆದು ನೀವೆ ಕುರುಬರನ್ನಾಗಿ ಮತಾಂತರ ಮಾಡಿ ಸಾರ್”.

“ಯಾರು ಕುರುಬರಾಗಕ್ಕೆ ಬರ್‍ತಾರ್ರೀ”.

“ಬತ್ತರೆ ಸಾರ್, ಗುಡಿಸಲ್ಲಿರೋ ದಕ್ಕಲಿಗರು, ಕೊರಮರು, ಕೊರಚರು ಇವ್ರರತ್ರ ಹೋಗಿ ತಲಾ ಒಂದು ಲಕ್ಷಕೊಟ್ಟು ಕುರುಬರ ಮಾಡಿದ್ರೆ. ಅವರ ಲೀಡ್ರಾಗಿ. ನೀವು ಅಹಿಂದಾ ಸಿದ್ದರಾಮಯ್ಯನ್ನೆ ತೆಗೆದು ವರುಣಾ ನಾಲೆಗೆ ಯಸಿಬಹುದು”.

“ಅಂಗೆ ಮಾಡಕ್ಕೆ ಆರೆಸ್ಸೆಸ್ಸಿನವುರು ಬುಡಲ್ಲ ಕಂಡ್ರಿ”.

“ಯಾಕೆ ಸಾರ್”.

“ನಮ್ಮ ಹಿಂದೂ ಜನ ಏನಾಗಿದ್ದೆವೋ, ಅವುರು ಅಂಗೇಯಿದ್ದು, ನಮಿಗೆ ಸಪೋರ್ಟು ಮಾಡಬೇಕು ಅನ್ನದು ನಮ್ಮ ಸಿದ್ದಾಂತ”.

“ನಿಜ ಸಾರ್. ಇಲ್ದೆಯಿದ್ರೆ ನೀವು ಕುರುಬರ ಜಾತಿ ಬುಟ್ಟು ಮಾಧ್ವರಾಯ್ತಿದ್ರಿ ಅಲ್ವ”.

“ಇಲ್ಲ ಆಯ್ತಿರಲಿಲ್ಲ. ನಾವು ನಮ್ಮನಮ್ಮ ಜಾತಿಲಿ ಗಟ್ಟಿಯಾಗಿ ನಿಂತು ಹಿಂದೂ ಧರ್ಮನ ಕಾಪಾಡಬೇಕು”.

“ಕಾಪಾಡಕ್ಕೆ ಅದೇನು ಪ್ರಾಣಿನೋ, ಪಕ್ಷಿನೋ ಅಥವಾ ನಿಮ್ಮ ಗೋಮಾತೆನೊ”?

“ಗೋ ಮಾತೆನೆ ಅನ್‌ಕಳಿ”.

“ಸಾರ್ ನಿಮ್ಮ ಗೋಮಾತೆ ಕಾಳಜಿ ನನಿಗೆ ಗೊತ್ತು. ಯಾವ ಬಿ.ಜೆ.ಪಿ. ಆರೆಸ್ಸೆಸ್‌ನವರ ಮನೆಲೂ ಈ ಗೋವುಗಳಿಲ್ಲ. ಗೋಹತ್ಯೆ ನಿಷೇಧ ಮಾಡಿದ್ರಿ. ಗೋಶಾಲೆ ಮಾಡಲಿಲ್ಲ. ದನಗಳ ಜೊತೆಗೆ ರೈತನೂ ಬಡಕಲಾದ. ನಿಮ್ಮ ಹಿಂದೂ ಧರ್ಮದ ರಕ್ಷಣೆ ನನಿಗ್ಯಾಕೊ ಗೋರಕ್ಷಣೆ ತರ ಕಾಣ್ತಾ ಅದೆ”.

“ಅದಕ್ಯಲ್ಲ ಟೈಂ ಬೇಕು ಕಂಡ್ರಿ”.

“ಗೋವುಗಳೆಲ್ಲ ಸತ್ತಮ್ಯಾಲೆ ಅನ್ನಿ. ಈಗ್ ನೋಡಿದ್ರೆ ಯಲ್ಲಾನು ಬಿಟ್ಟು ಮಸೀದಿಗೆ ನುಗ್ಗಕೋಯ್ತಿರಿ. ಇದು ಮುಂದೆ ನಿಮಗೇ ತಿರುಗುಬಾಣಾಗಿ ಜೈನ ಮಂದಿರ ಬೌದ್ಧ ಸ್ತೂಪ ಯಲ್ಲಾ ಸದ್ದು ಮಾಡ್ತವೆ. ದೇಶ ಕಟ್ಟೋರಿಗೆ ವಿವೇಕಾನಂದರು ಒಂದು ಮಾತೇಳಿದ್ರು ಗೊತ್ತಾ ಸಾರ್?

“ನನಗೇಳಿಲ್ಲ”.

“ಈ ದೇಶನ ಮುಸ್ಲಿಂ ದೇಹಶಕ್ತಿ ಹಿಂದೂ ಬುದ್ಧಿ ಶಕ್ತಿಯಿಂದ ಕಟ್ಟಿ ಅಂದವುರೆ”.

“ಅದ್ಯಂಗಾಯ್ತದರಿ”?

“ಆಗುತ್ತೆ ಸಾರ್. ಮುಸ್ಲಿಮರು ದೈಹಿಕವಾಗಿ ಶಕ್ತಿಶಾಲಿ ಜನ, ಆ ಶಕ್ತಿನ ದೇಶಕಟ್ಟಕ್ಕೆ ಬಳಸಬೇಕು. ಹಾಗೆ ಬ್ರಾಹ್ಮಣರ ಬುದ್ಧಿಶಕ್ತಿನ್ನ ಬಳಸಿದ್ರೆ ದೇಶ ಬಲಿಷ್ಟ ಆಗುತ್ತೆ”.

“ಆಗ ನಾವೇನು ಮಾಡದ್ರಿ?”

“ಆರೆಸ್ಸೆಸ್ ಸಿದ್ಧಾಂತದ ಪ್ರಕಾರ ನೀವು ನೂರಾರು ಕುರಿ ಸಾಕಿ, ದೈಹಿಕ ಶಕ್ತಿಗಾಗಿ ಜನಕ್ಕೆ ಮಾಂಸ ಒದಗಿಸಿ. ಚಳಿ ತಡೆಯಕ್ಕೆ ಜನರಿಗೆ ಕಂಬಳಿ ಒದಗಿಸಬೇಕು ಸಾರ್”.

“ಏನ್ರಿ ಹೇಳ್ತಿರಿ”.

“ಸಾರ್ ಒಂದು ವಿಷಯ ಕೇಳದ್ನೆ ಮರತೆ. ಅಮ್‌ಆದ್ಮಿ ಜನ ಅಂದು ವೀರಪ್ಪ ಇಂದು ಈಶ್ವರಪ್ಪ ಅಂತ ಶಿವಮೊಗ್ಗಕ್ಕೆ ಬಂದಿದ್ರು ಸಾರ್”.

“ಬರ್ಲಿ ಬುಡ್ರಿ ಒಂದು ಕಾಲದಲ್ಲಿ ನಾವು ಇಂತ ಪ್ರತಿಭಟನೆನ ಬೇಕಾದಷ್ಟು ಮಾಡಿದೀವಿ. ಶಿವಮೊಗ್ಗದಿಂದ ಬೆಂಗಳೂರುವರೆಗೂ ನಡೆದಿದ್ವಿ ಗೊತ್ತಾ”?

ಥೂತ್ತೇರಿ..


ಇದನ್ನೂ ಓದಿ: “ದ್ರಾವಿಡರು ಆರೆಸ್ಸೆಸ್ಸಾಗ್ಯವುರಲ್ಲ ಸಾ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...