Homeಅಂಕಣಗಳುಥೂತ್ತೇರಿ | ಯಾಹೂನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

ನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

- Advertisement -
- Advertisement -

ಸದ್ಯದ ಕರ್ನಾಟಕದ ರಾಜಕಾರಣ, ಅಯ್ಯೋಪಾಪ ಎಂಬ ಕನಿಕರದ ಉದ್ಘಾರಕ್ಕೆ ತುತ್ತಾಗಿದೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತವನ ದುಗುಡದ ಮುಖ ನೋಡಿದರೆ ಯಾರಿಗೆ ಬೇಕು ಆ ಮುಳ್ಳಿನ ಕುರ್ಚಿ ಎನ್ನುವಂತಾಗಿದೆ. ಈ ನಡುವೆ ಬಿ.ಜೆ.ಪಿ ಜನರಾಡುವ ಮಾತುಕತೆ ನೋಡಿದರೆ, ಒಂದು ಸಮೂಹವೇ ಮತೀಯ ಮನೋಕ್ಲೇಶಕ್ಕೆ ತುತ್ತಾಗಿರುವಂತಿದೆ. ಅದರಲ್ಲಿ ಅ.ಕು.ಹೆಗಡೆ ಎಂಬುವನ ತಲೆ ಸಂಪೂರ್ಣ ಹದಗೆಟ್ಟಿರುವುದರಿಂದ, ಆತನನ್ನೇ ಮಾತನಾಡಿಸಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು.

ನಮಸ್ತೇ ಸದಾವತ್ಸಲೇ ಮಾತೃ ಭೂಮಿ…. “ಹಲೊ ಯಾರ್ರಿ..”
“ನಾನು ಕಣೊ ಆಂಕೋಲಾದಿಂದ ಹೊಸಮನೆ ಹೆಗಡೆ ಮಾತನಾಡ್ತಾಯಿರೋದು.”
“ಏನೇಳಿ ಹೆಗಡೆಯವರೆ.”
“ನಾನು ನಿಮ್ಮ ತಂದೆ ಕ್ಲಾಸುಮೇಟು ಕಣೋ.”
“ಹೌದಾ.”
“ಆತ ತುಂಬ ಸಂಭಾವಿತ, ನಿಮ್ಮ ತಾಯಿನೂ ಬಹಳ ಒಳ್ಳೆಯವಳು.”
“ಹೌದು, ಅಂತ ಗೌರವಾನ್ವಿತರ ಮಗ ನಾನು.”
“ಆದರೇನು ನಮ್ಮ ಮರಿಯಾದಿನೆ ಕಳದಲ್ಲೋ.”
“ನಾನೇನು ಮಾಡಿದ್ದಿನಿ.”
“ನಾನೇನು ಮಾಡಿದ್ದಿನಿ ಅಂತ ಕೇಳಿದ್ರೆ ಏನ್ಹೇಳದು. ನಿನ್ನ ಅಪರಾಧಗಳೇ ನಿನಗೆ ಗೊತ್ತಿಲ್ಲವಲ್ಲೋ?.”
“ಅಪರಾಧ ಮಾಡಿದ್ರೆ ತಾನೆ.”
“ಲೋಕಸಭೇಲಿ ನಿಂತುಕೊಂಡು ಸುಳ್ಳು ಹೇಳತಿ ಕ್ಷಮೆ ಯಾಚಿಸ್ತಿ, ನಿನ್ನ ಆರಿಸಿದವರ ಮಾನ ಕಳಿತಿಯಲ್ಲೊ.”
“ನೋಡಿ ಹೆಗಡೆಯವರೆ, ನಾನು ಸತ್ಯನೆ ಹೇಳದು. ಅದ್ಕೆ ಎಲ್ಲರಿಗೂ ಉರಿಹತ್ತಿಗಳದು.”
“ಅಲ್ಲೊ ಗಾಂಧಿ ಉಪವಾಸಕ್ಕೆದರಿ ಬ್ರಿಟಿಷರು ಓಡಲಿಲ್ಲ. ಅದನ್ನ ಓದಿದ್ರೆ ರಕ್ತ ಹೆಪ್ಪುಗಟ್ಟುತ್ತೆ ಅಂತಿಯಲ್ಲೋ.”
“ಹೌದು ಹಾಗಂದೆ.”
“ಹಾಗಿದ್ರೆ ನಿನಗೆ ಬ್ಲಡ್‍ಕ್ಯಾನ್ಸರ್ ಇರಬಹುದು ಕಣೋ. ಅಲ್ಲೇ ಅಂಕೋಲಾದಲ್ಲಿ ಒಬ್ಬ ಮಹಿಳಾ ಡಾಕ್ಟರಿದಾರೆ. ಅಲ್ಲಿಗೋಗಿ ಚೆಕಪ್ ಮಾಡಿಸಿಕೊ. ಅಂದ್ರೆ ಸುಮ್ಮನೆ ಅವುರತ್ರ ಒಂದು ಗಂಟೆ ಮಾತನಾಡು. ಬ್ಲಡ್ ಸರಿಹೋಗಬಹುದು.”
“ನೀವು ಹಿರಿಯರು ಅಂತ ಗೌರವ ಕೊಡ್ತಿನಿ ಅಂಗೆಲ್ಲ ಮಾತನಾಡಬೇಡಿ ತಿಳಿತಾ.”
“ನನ್ನ ಸ್ನೇಹಿತನ ಮಗ ಕಣೋ ನೀನು. ಅದ್ಕೆ ಹೇಳ್ತಿನಿ. ಗಾಂಧಿ ಬಗ್ಗೆ ನಿನಗೇನೊ ಗೊತ್ತು. ಭಾರತ ಜಗತ್ತಿಗೆ ಕೊಟ್ಟ ಕೊಡುಗೆನೆ ಗಾಂಧಿ. ಹಿಂದೂ ಧರ್ಮದ ಶ್ರೇಷ್ಠ ಕೊಡುಗೆನೇ ಗಾಂಧಿ ಕಣೊ. ನಿಮ್ಮ ಕೊಡುಗೆ ಯಾವುದೊ?”
“ಮೋದಿ ಸಾವರ್ಕರ್‍ಗಿಂತ್ಲೂ ಬೇಕಾ?”
“ಒಬ್ಬ ಐದು ದಿನದಲ್ಲಿ ಮೂರು ಸಾವಿರ ಜನ ಕೊಲ್ಲಿಸಿದ. ಇನ್ನೊಬ್ಬ ಮೂರು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆಯಾಗಿ, ಹಿಂದೂ ಮುಸ್ಲಿಂ ಜಗಳ ಮಾಡಸಕ್ಕೆ ಸಾಯೋವರಿಗೂ ಶ್ರಮಪಟ್ಟ ಅಲ್ವೇನೊ?”
“ನೋಡಿ ತಿಳಕಂಡು ಮಾತಾಡಿ.”
“ನೀನು ಗಾಂಧಿ ಓದಿಕಂಡು ಮಾತಾಡು.”
“ಗಾಂಧಿ ಬೇಕಾಗಿಲ್ಲ ನನಿಗೆ.”
“ಬ್ರಾಹ್ಮಣ ಕುಲಕ್ಕೆ ಅವಮಾನ ನೀನು. ಬ್ರಾಹ್ಮಣ ಮಾತನಾಡ್ತ ಇದ್ರೆ ಕೇಳಬೇಕು ಅನ್ಸುತ್ತೆ. ಆತನ ಭಾಷೆ ಅಪ್ಯಾಯಮಾನವಾಗಿರುತ್ತೆ. ಅವನ ಮಾತಲ್ಲಿ ಹಿಂಸೆ ಇರಲ್ಲ. ಕಟಕಿ ಇರಲ್ಲ. ಪ್ರಚೋದನೆ ಇರಲ್ಲ. ಅವಮಾನ ಇರಲ್ಲ. ನಿನ್ನ ಮಾತಲ್ಲಿ ಇವೆಲ್ಲಾ ಇವೆ.”
“ಅದೇ ನನ್ನ ವ್ಯಕ್ತಿತ್ವ.”
“ಆ ನಿನ್ನ ವ್ಯಕ್ತಿತ್ವನ ನೀನು ಟೀಕೆ ಮಾಡೊ ಜಾತ್ಯತೀತರು ಶೋಧನೆ ಮಾಡ್ತಯಿದಾರೆ.”
“ಆ ನನ್ನ ಮಕ್ಕಳಿಗೆ ಬುದ್ಧಿ ಕಲುಸ್ತಿನಿ.”
“ನೀನು ಆ ನನ ಮಕ್ಕಳು ಅನ್ನಬಾರದಿತ್ತು.”
“ನಾನೂ ಹರಾಜಾಕ್ತಿನಿ.”
“ನಿನ್ನಿಂದಾಗಿ ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬಂತಲ್ಲೋ. ನಮ್ಮ ಜಿಲ್ಲೇಲಿ ಎಂತೆಂತಹ ಮೇಧಾವಿಗಳಿದ್ರು. ಕರ್ನಾಟಕ ಕಂಡ ಶ್ರೇಷ್ಠ ಆಡಳಿತಗಾರ ರಾಮಕೃಷ್ಣ ಹೆಗಡೆ, ತಾಯಿ ಹೃದಯದ ಮಾರ್ಗರೆಟ್ ಆಳ್ವ, ಇನ್ನ ಸಾಹಿತ್ಯ ಲೋಕಕ್ಕೆ ಬಂದ್ರೆ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ದಿನಕರ ದೇಸಾಯಿ, ಗೌರೀಶ್ ಕಾಯ್ಕಿಣಿ, ಜಯಂತಿ, ಅನುಪಮ ಇಂತಹ ಜನಗಳ ನಾಡಲ್ಲಿ ನೀನೆಲ್ಲಿ ಉದ್ಭವಿಸಿದೆಯೋ ಮುಂಡೆದೆ.”
“ನೋಡಿ ಮುಂಡೆದೆ ಅಂದ್ರೆ ನನ್ನ ರಕ್ತ ಹೆಪ್ಪುಗಟ್ಟುತ್ತೆ.”
“ನೋಡು ನಿನ್ನನ್ನ ಬೈಯ್ಯೋದಕ್ಕೆ ಬೈಗಳನೇ ಇಲ್ಲ. ಹೆತ್ತ ತಾಯಿಗೆ ಲಾಡಿ ಬಿಚ್ಚೊ ಮಾತಾಡಬೇಡ.”
“ಏನು ಹಾಗಂದೆ.್ರ”
“ಅದೊಂದು ಕೇಳಿಸಿಕೊಳ್ಳಕ್ಕೆ ಹಿಂಸೆಯಾಗೊ ಪದ. ನಮ್ಮ ಭಾರತದ ಸಂವಿಧಾನದಡಿಯಲ್ಲಿ ಚುನಾವಣೆ ನಡೆದು ಅದರಲ್ಲಿ ಗೆದ್ದು ಬಂದು ಅದನ್ನೆ ಬದಲಾಯಿಸ್ತಿನಿ ಅಂತಿಯಲ್ಲಾ, ಅದನ್ನ ಜಾತ್ಯತೀತರು ಹೆತ್ತ ತಾಯಿಗೇ ಲಾಡಿಬಿಚ್ಚೊ ಮಾತು ಅಂತಾರೆ. ಇಷ್ಟು ಕಠೋರ ಮಾತು ನಿನಗೆ ಬೇಕಾ.”
“ಅವರಿಗೆಲ್ಲಾ ನಾನು ಉತ್ತರ ಕೊಡ್ತಿನಿ. ನೀವು ತಲೆಕೆಡಿಸಿಕೋಬೇಡಿ.”
“ಹಾಗಂದ್ರೇಗೊ ಮುಂಡೆದೆ, ನೀನು ಬ್ರಾಹ್ಮಣ, ನಾನು ಬ್ರಾಹ್ಮಣ. ಆದ್ರಿಂದ ಅವರು ನಿನಿಗಂದ ಮಾತು ನನ್ನನ್ನು ನೋಯಿಸುತ್ತೆ.”
“ಅವರ ಮಾತ ಕೇಳಿಸಿಕೋಬೇಡಿ.”
“ಹಾಗಂದ್ರೇಗೊ, ಈ ಮುಪ್ಪಿನ ಕಾಲದಲ್ಲಿ ನಾನಿರೋದೆ ಜಾತ್ಯತೀತರ ನಡುವೆ.”
“ಅವರ ಜೊತೆ ಇರಬೇಡಿ, ನಮ್ಮ ಮನೆ ಹತ್ರ ಬಂದಿರಿ.”
“ನಿನ್ನ ಮನೆ ಹತ್ರ ಬರೀ ಹುಚ್ಚರ ಸಂತೆ ಕಣೋ. ಅಲ್ಲಿ ಸೇರೊವೆಲ್ಲಾ ಪಶ್ಚಿಮದ ದಾಳಿಗೆ ಹುಟ್ಟಿದಂಗೆ ಮಾತನಾಡ್ತವೆ. ಪಾಕಿಸ್ತಾನದ ಬಗ್ಗೆ ಮಾತನಾಡ್ತವೆ. ಶೂದ್ರರನ್ನು ಆಡಿಕೊಳ್ತವೆ. ದೇಶಕ್ಕೆ ಬೆಂಕಿ ಹಚ್ಚೊ ಮಾತುಬಿಟ್ರೆ, ಅಲ್ಲಿ ಇನ್ಯಾವ ಮನಶಾಂತಿನೂ ಸಿಗಲ್ಲ. ಅಲ್ಲಿಗೆ ಬರೋದಕ್ಕಿಂತ ಆತ್ಮಹತ್ಯೆ ಮಾಡಿಕಳದೇ ಒಳ್ಳೆದು.”
“ಅಷ್ಟು ಕೆಲಸ ಮಾಡಿ.”
“ಥೂ, ಗೋಡ್ಸೆ ಸಂತಾನವೆ.”

ಥೂತ್ತೇರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...