Homeಅಂಕಣಗಳುಥೂತ್ತೇರಿ | ಯಾಹೂನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

ನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

- Advertisement -
- Advertisement -

ಸದ್ಯದ ಕರ್ನಾಟಕದ ರಾಜಕಾರಣ, ಅಯ್ಯೋಪಾಪ ಎಂಬ ಕನಿಕರದ ಉದ್ಘಾರಕ್ಕೆ ತುತ್ತಾಗಿದೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತವನ ದುಗುಡದ ಮುಖ ನೋಡಿದರೆ ಯಾರಿಗೆ ಬೇಕು ಆ ಮುಳ್ಳಿನ ಕುರ್ಚಿ ಎನ್ನುವಂತಾಗಿದೆ. ಈ ನಡುವೆ ಬಿ.ಜೆ.ಪಿ ಜನರಾಡುವ ಮಾತುಕತೆ ನೋಡಿದರೆ, ಒಂದು ಸಮೂಹವೇ ಮತೀಯ ಮನೋಕ್ಲೇಶಕ್ಕೆ ತುತ್ತಾಗಿರುವಂತಿದೆ. ಅದರಲ್ಲಿ ಅ.ಕು.ಹೆಗಡೆ ಎಂಬುವನ ತಲೆ ಸಂಪೂರ್ಣ ಹದಗೆಟ್ಟಿರುವುದರಿಂದ, ಆತನನ್ನೇ ಮಾತನಾಡಿಸಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು.

ನಮಸ್ತೇ ಸದಾವತ್ಸಲೇ ಮಾತೃ ಭೂಮಿ…. “ಹಲೊ ಯಾರ್ರಿ..”
“ನಾನು ಕಣೊ ಆಂಕೋಲಾದಿಂದ ಹೊಸಮನೆ ಹೆಗಡೆ ಮಾತನಾಡ್ತಾಯಿರೋದು.”
“ಏನೇಳಿ ಹೆಗಡೆಯವರೆ.”
“ನಾನು ನಿಮ್ಮ ತಂದೆ ಕ್ಲಾಸುಮೇಟು ಕಣೋ.”
“ಹೌದಾ.”
“ಆತ ತುಂಬ ಸಂಭಾವಿತ, ನಿಮ್ಮ ತಾಯಿನೂ ಬಹಳ ಒಳ್ಳೆಯವಳು.”
“ಹೌದು, ಅಂತ ಗೌರವಾನ್ವಿತರ ಮಗ ನಾನು.”
“ಆದರೇನು ನಮ್ಮ ಮರಿಯಾದಿನೆ ಕಳದಲ್ಲೋ.”
“ನಾನೇನು ಮಾಡಿದ್ದಿನಿ.”
“ನಾನೇನು ಮಾಡಿದ್ದಿನಿ ಅಂತ ಕೇಳಿದ್ರೆ ಏನ್ಹೇಳದು. ನಿನ್ನ ಅಪರಾಧಗಳೇ ನಿನಗೆ ಗೊತ್ತಿಲ್ಲವಲ್ಲೋ?.”
“ಅಪರಾಧ ಮಾಡಿದ್ರೆ ತಾನೆ.”
“ಲೋಕಸಭೇಲಿ ನಿಂತುಕೊಂಡು ಸುಳ್ಳು ಹೇಳತಿ ಕ್ಷಮೆ ಯಾಚಿಸ್ತಿ, ನಿನ್ನ ಆರಿಸಿದವರ ಮಾನ ಕಳಿತಿಯಲ್ಲೊ.”
“ನೋಡಿ ಹೆಗಡೆಯವರೆ, ನಾನು ಸತ್ಯನೆ ಹೇಳದು. ಅದ್ಕೆ ಎಲ್ಲರಿಗೂ ಉರಿಹತ್ತಿಗಳದು.”
“ಅಲ್ಲೊ ಗಾಂಧಿ ಉಪವಾಸಕ್ಕೆದರಿ ಬ್ರಿಟಿಷರು ಓಡಲಿಲ್ಲ. ಅದನ್ನ ಓದಿದ್ರೆ ರಕ್ತ ಹೆಪ್ಪುಗಟ್ಟುತ್ತೆ ಅಂತಿಯಲ್ಲೋ.”
“ಹೌದು ಹಾಗಂದೆ.”
“ಹಾಗಿದ್ರೆ ನಿನಗೆ ಬ್ಲಡ್‍ಕ್ಯಾನ್ಸರ್ ಇರಬಹುದು ಕಣೋ. ಅಲ್ಲೇ ಅಂಕೋಲಾದಲ್ಲಿ ಒಬ್ಬ ಮಹಿಳಾ ಡಾಕ್ಟರಿದಾರೆ. ಅಲ್ಲಿಗೋಗಿ ಚೆಕಪ್ ಮಾಡಿಸಿಕೊ. ಅಂದ್ರೆ ಸುಮ್ಮನೆ ಅವುರತ್ರ ಒಂದು ಗಂಟೆ ಮಾತನಾಡು. ಬ್ಲಡ್ ಸರಿಹೋಗಬಹುದು.”
“ನೀವು ಹಿರಿಯರು ಅಂತ ಗೌರವ ಕೊಡ್ತಿನಿ ಅಂಗೆಲ್ಲ ಮಾತನಾಡಬೇಡಿ ತಿಳಿತಾ.”
“ನನ್ನ ಸ್ನೇಹಿತನ ಮಗ ಕಣೋ ನೀನು. ಅದ್ಕೆ ಹೇಳ್ತಿನಿ. ಗಾಂಧಿ ಬಗ್ಗೆ ನಿನಗೇನೊ ಗೊತ್ತು. ಭಾರತ ಜಗತ್ತಿಗೆ ಕೊಟ್ಟ ಕೊಡುಗೆನೆ ಗಾಂಧಿ. ಹಿಂದೂ ಧರ್ಮದ ಶ್ರೇಷ್ಠ ಕೊಡುಗೆನೇ ಗಾಂಧಿ ಕಣೊ. ನಿಮ್ಮ ಕೊಡುಗೆ ಯಾವುದೊ?”
“ಮೋದಿ ಸಾವರ್ಕರ್‍ಗಿಂತ್ಲೂ ಬೇಕಾ?”
“ಒಬ್ಬ ಐದು ದಿನದಲ್ಲಿ ಮೂರು ಸಾವಿರ ಜನ ಕೊಲ್ಲಿಸಿದ. ಇನ್ನೊಬ್ಬ ಮೂರು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆಯಾಗಿ, ಹಿಂದೂ ಮುಸ್ಲಿಂ ಜಗಳ ಮಾಡಸಕ್ಕೆ ಸಾಯೋವರಿಗೂ ಶ್ರಮಪಟ್ಟ ಅಲ್ವೇನೊ?”
“ನೋಡಿ ತಿಳಕಂಡು ಮಾತಾಡಿ.”
“ನೀನು ಗಾಂಧಿ ಓದಿಕಂಡು ಮಾತಾಡು.”
“ಗಾಂಧಿ ಬೇಕಾಗಿಲ್ಲ ನನಿಗೆ.”
“ಬ್ರಾಹ್ಮಣ ಕುಲಕ್ಕೆ ಅವಮಾನ ನೀನು. ಬ್ರಾಹ್ಮಣ ಮಾತನಾಡ್ತ ಇದ್ರೆ ಕೇಳಬೇಕು ಅನ್ಸುತ್ತೆ. ಆತನ ಭಾಷೆ ಅಪ್ಯಾಯಮಾನವಾಗಿರುತ್ತೆ. ಅವನ ಮಾತಲ್ಲಿ ಹಿಂಸೆ ಇರಲ್ಲ. ಕಟಕಿ ಇರಲ್ಲ. ಪ್ರಚೋದನೆ ಇರಲ್ಲ. ಅವಮಾನ ಇರಲ್ಲ. ನಿನ್ನ ಮಾತಲ್ಲಿ ಇವೆಲ್ಲಾ ಇವೆ.”
“ಅದೇ ನನ್ನ ವ್ಯಕ್ತಿತ್ವ.”
“ಆ ನಿನ್ನ ವ್ಯಕ್ತಿತ್ವನ ನೀನು ಟೀಕೆ ಮಾಡೊ ಜಾತ್ಯತೀತರು ಶೋಧನೆ ಮಾಡ್ತಯಿದಾರೆ.”
“ಆ ನನ್ನ ಮಕ್ಕಳಿಗೆ ಬುದ್ಧಿ ಕಲುಸ್ತಿನಿ.”
“ನೀನು ಆ ನನ ಮಕ್ಕಳು ಅನ್ನಬಾರದಿತ್ತು.”
“ನಾನೂ ಹರಾಜಾಕ್ತಿನಿ.”
“ನಿನ್ನಿಂದಾಗಿ ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬಂತಲ್ಲೋ. ನಮ್ಮ ಜಿಲ್ಲೇಲಿ ಎಂತೆಂತಹ ಮೇಧಾವಿಗಳಿದ್ರು. ಕರ್ನಾಟಕ ಕಂಡ ಶ್ರೇಷ್ಠ ಆಡಳಿತಗಾರ ರಾಮಕೃಷ್ಣ ಹೆಗಡೆ, ತಾಯಿ ಹೃದಯದ ಮಾರ್ಗರೆಟ್ ಆಳ್ವ, ಇನ್ನ ಸಾಹಿತ್ಯ ಲೋಕಕ್ಕೆ ಬಂದ್ರೆ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ದಿನಕರ ದೇಸಾಯಿ, ಗೌರೀಶ್ ಕಾಯ್ಕಿಣಿ, ಜಯಂತಿ, ಅನುಪಮ ಇಂತಹ ಜನಗಳ ನಾಡಲ್ಲಿ ನೀನೆಲ್ಲಿ ಉದ್ಭವಿಸಿದೆಯೋ ಮುಂಡೆದೆ.”
“ನೋಡಿ ಮುಂಡೆದೆ ಅಂದ್ರೆ ನನ್ನ ರಕ್ತ ಹೆಪ್ಪುಗಟ್ಟುತ್ತೆ.”
“ನೋಡು ನಿನ್ನನ್ನ ಬೈಯ್ಯೋದಕ್ಕೆ ಬೈಗಳನೇ ಇಲ್ಲ. ಹೆತ್ತ ತಾಯಿಗೆ ಲಾಡಿ ಬಿಚ್ಚೊ ಮಾತಾಡಬೇಡ.”
“ಏನು ಹಾಗಂದೆ.್ರ”
“ಅದೊಂದು ಕೇಳಿಸಿಕೊಳ್ಳಕ್ಕೆ ಹಿಂಸೆಯಾಗೊ ಪದ. ನಮ್ಮ ಭಾರತದ ಸಂವಿಧಾನದಡಿಯಲ್ಲಿ ಚುನಾವಣೆ ನಡೆದು ಅದರಲ್ಲಿ ಗೆದ್ದು ಬಂದು ಅದನ್ನೆ ಬದಲಾಯಿಸ್ತಿನಿ ಅಂತಿಯಲ್ಲಾ, ಅದನ್ನ ಜಾತ್ಯತೀತರು ಹೆತ್ತ ತಾಯಿಗೇ ಲಾಡಿಬಿಚ್ಚೊ ಮಾತು ಅಂತಾರೆ. ಇಷ್ಟು ಕಠೋರ ಮಾತು ನಿನಗೆ ಬೇಕಾ.”
“ಅವರಿಗೆಲ್ಲಾ ನಾನು ಉತ್ತರ ಕೊಡ್ತಿನಿ. ನೀವು ತಲೆಕೆಡಿಸಿಕೋಬೇಡಿ.”
“ಹಾಗಂದ್ರೇಗೊ ಮುಂಡೆದೆ, ನೀನು ಬ್ರಾಹ್ಮಣ, ನಾನು ಬ್ರಾಹ್ಮಣ. ಆದ್ರಿಂದ ಅವರು ನಿನಿಗಂದ ಮಾತು ನನ್ನನ್ನು ನೋಯಿಸುತ್ತೆ.”
“ಅವರ ಮಾತ ಕೇಳಿಸಿಕೋಬೇಡಿ.”
“ಹಾಗಂದ್ರೇಗೊ, ಈ ಮುಪ್ಪಿನ ಕಾಲದಲ್ಲಿ ನಾನಿರೋದೆ ಜಾತ್ಯತೀತರ ನಡುವೆ.”
“ಅವರ ಜೊತೆ ಇರಬೇಡಿ, ನಮ್ಮ ಮನೆ ಹತ್ರ ಬಂದಿರಿ.”
“ನಿನ್ನ ಮನೆ ಹತ್ರ ಬರೀ ಹುಚ್ಚರ ಸಂತೆ ಕಣೋ. ಅಲ್ಲಿ ಸೇರೊವೆಲ್ಲಾ ಪಶ್ಚಿಮದ ದಾಳಿಗೆ ಹುಟ್ಟಿದಂಗೆ ಮಾತನಾಡ್ತವೆ. ಪಾಕಿಸ್ತಾನದ ಬಗ್ಗೆ ಮಾತನಾಡ್ತವೆ. ಶೂದ್ರರನ್ನು ಆಡಿಕೊಳ್ತವೆ. ದೇಶಕ್ಕೆ ಬೆಂಕಿ ಹಚ್ಚೊ ಮಾತುಬಿಟ್ರೆ, ಅಲ್ಲಿ ಇನ್ಯಾವ ಮನಶಾಂತಿನೂ ಸಿಗಲ್ಲ. ಅಲ್ಲಿಗೆ ಬರೋದಕ್ಕಿಂತ ಆತ್ಮಹತ್ಯೆ ಮಾಡಿಕಳದೇ ಒಳ್ಳೆದು.”
“ಅಷ್ಟು ಕೆಲಸ ಮಾಡಿ.”
“ಥೂ, ಗೋಡ್ಸೆ ಸಂತಾನವೆ.”

ಥೂತ್ತೇರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...