Homeಅಂಕಣಗಳುಥೂತ್ತೇರಿ | ಯಾಹೂನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

ನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

- Advertisement -
- Advertisement -

ಸದ್ಯದ ಕರ್ನಾಟಕದ ರಾಜಕಾರಣ, ಅಯ್ಯೋಪಾಪ ಎಂಬ ಕನಿಕರದ ಉದ್ಘಾರಕ್ಕೆ ತುತ್ತಾಗಿದೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತವನ ದುಗುಡದ ಮುಖ ನೋಡಿದರೆ ಯಾರಿಗೆ ಬೇಕು ಆ ಮುಳ್ಳಿನ ಕುರ್ಚಿ ಎನ್ನುವಂತಾಗಿದೆ. ಈ ನಡುವೆ ಬಿ.ಜೆ.ಪಿ ಜನರಾಡುವ ಮಾತುಕತೆ ನೋಡಿದರೆ, ಒಂದು ಸಮೂಹವೇ ಮತೀಯ ಮನೋಕ್ಲೇಶಕ್ಕೆ ತುತ್ತಾಗಿರುವಂತಿದೆ. ಅದರಲ್ಲಿ ಅ.ಕು.ಹೆಗಡೆ ಎಂಬುವನ ತಲೆ ಸಂಪೂರ್ಣ ಹದಗೆಟ್ಟಿರುವುದರಿಂದ, ಆತನನ್ನೇ ಮಾತನಾಡಿಸಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು.

ನಮಸ್ತೇ ಸದಾವತ್ಸಲೇ ಮಾತೃ ಭೂಮಿ…. “ಹಲೊ ಯಾರ್ರಿ..”
“ನಾನು ಕಣೊ ಆಂಕೋಲಾದಿಂದ ಹೊಸಮನೆ ಹೆಗಡೆ ಮಾತನಾಡ್ತಾಯಿರೋದು.”
“ಏನೇಳಿ ಹೆಗಡೆಯವರೆ.”
“ನಾನು ನಿಮ್ಮ ತಂದೆ ಕ್ಲಾಸುಮೇಟು ಕಣೋ.”
“ಹೌದಾ.”
“ಆತ ತುಂಬ ಸಂಭಾವಿತ, ನಿಮ್ಮ ತಾಯಿನೂ ಬಹಳ ಒಳ್ಳೆಯವಳು.”
“ಹೌದು, ಅಂತ ಗೌರವಾನ್ವಿತರ ಮಗ ನಾನು.”
“ಆದರೇನು ನಮ್ಮ ಮರಿಯಾದಿನೆ ಕಳದಲ್ಲೋ.”
“ನಾನೇನು ಮಾಡಿದ್ದಿನಿ.”
“ನಾನೇನು ಮಾಡಿದ್ದಿನಿ ಅಂತ ಕೇಳಿದ್ರೆ ಏನ್ಹೇಳದು. ನಿನ್ನ ಅಪರಾಧಗಳೇ ನಿನಗೆ ಗೊತ್ತಿಲ್ಲವಲ್ಲೋ?.”
“ಅಪರಾಧ ಮಾಡಿದ್ರೆ ತಾನೆ.”
“ಲೋಕಸಭೇಲಿ ನಿಂತುಕೊಂಡು ಸುಳ್ಳು ಹೇಳತಿ ಕ್ಷಮೆ ಯಾಚಿಸ್ತಿ, ನಿನ್ನ ಆರಿಸಿದವರ ಮಾನ ಕಳಿತಿಯಲ್ಲೊ.”
“ನೋಡಿ ಹೆಗಡೆಯವರೆ, ನಾನು ಸತ್ಯನೆ ಹೇಳದು. ಅದ್ಕೆ ಎಲ್ಲರಿಗೂ ಉರಿಹತ್ತಿಗಳದು.”
“ಅಲ್ಲೊ ಗಾಂಧಿ ಉಪವಾಸಕ್ಕೆದರಿ ಬ್ರಿಟಿಷರು ಓಡಲಿಲ್ಲ. ಅದನ್ನ ಓದಿದ್ರೆ ರಕ್ತ ಹೆಪ್ಪುಗಟ್ಟುತ್ತೆ ಅಂತಿಯಲ್ಲೋ.”
“ಹೌದು ಹಾಗಂದೆ.”
“ಹಾಗಿದ್ರೆ ನಿನಗೆ ಬ್ಲಡ್‍ಕ್ಯಾನ್ಸರ್ ಇರಬಹುದು ಕಣೋ. ಅಲ್ಲೇ ಅಂಕೋಲಾದಲ್ಲಿ ಒಬ್ಬ ಮಹಿಳಾ ಡಾಕ್ಟರಿದಾರೆ. ಅಲ್ಲಿಗೋಗಿ ಚೆಕಪ್ ಮಾಡಿಸಿಕೊ. ಅಂದ್ರೆ ಸುಮ್ಮನೆ ಅವುರತ್ರ ಒಂದು ಗಂಟೆ ಮಾತನಾಡು. ಬ್ಲಡ್ ಸರಿಹೋಗಬಹುದು.”
“ನೀವು ಹಿರಿಯರು ಅಂತ ಗೌರವ ಕೊಡ್ತಿನಿ ಅಂಗೆಲ್ಲ ಮಾತನಾಡಬೇಡಿ ತಿಳಿತಾ.”
“ನನ್ನ ಸ್ನೇಹಿತನ ಮಗ ಕಣೋ ನೀನು. ಅದ್ಕೆ ಹೇಳ್ತಿನಿ. ಗಾಂಧಿ ಬಗ್ಗೆ ನಿನಗೇನೊ ಗೊತ್ತು. ಭಾರತ ಜಗತ್ತಿಗೆ ಕೊಟ್ಟ ಕೊಡುಗೆನೆ ಗಾಂಧಿ. ಹಿಂದೂ ಧರ್ಮದ ಶ್ರೇಷ್ಠ ಕೊಡುಗೆನೇ ಗಾಂಧಿ ಕಣೊ. ನಿಮ್ಮ ಕೊಡುಗೆ ಯಾವುದೊ?”
“ಮೋದಿ ಸಾವರ್ಕರ್‍ಗಿಂತ್ಲೂ ಬೇಕಾ?”
“ಒಬ್ಬ ಐದು ದಿನದಲ್ಲಿ ಮೂರು ಸಾವಿರ ಜನ ಕೊಲ್ಲಿಸಿದ. ಇನ್ನೊಬ್ಬ ಮೂರು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆಯಾಗಿ, ಹಿಂದೂ ಮುಸ್ಲಿಂ ಜಗಳ ಮಾಡಸಕ್ಕೆ ಸಾಯೋವರಿಗೂ ಶ್ರಮಪಟ್ಟ ಅಲ್ವೇನೊ?”
“ನೋಡಿ ತಿಳಕಂಡು ಮಾತಾಡಿ.”
“ನೀನು ಗಾಂಧಿ ಓದಿಕಂಡು ಮಾತಾಡು.”
“ಗಾಂಧಿ ಬೇಕಾಗಿಲ್ಲ ನನಿಗೆ.”
“ಬ್ರಾಹ್ಮಣ ಕುಲಕ್ಕೆ ಅವಮಾನ ನೀನು. ಬ್ರಾಹ್ಮಣ ಮಾತನಾಡ್ತ ಇದ್ರೆ ಕೇಳಬೇಕು ಅನ್ಸುತ್ತೆ. ಆತನ ಭಾಷೆ ಅಪ್ಯಾಯಮಾನವಾಗಿರುತ್ತೆ. ಅವನ ಮಾತಲ್ಲಿ ಹಿಂಸೆ ಇರಲ್ಲ. ಕಟಕಿ ಇರಲ್ಲ. ಪ್ರಚೋದನೆ ಇರಲ್ಲ. ಅವಮಾನ ಇರಲ್ಲ. ನಿನ್ನ ಮಾತಲ್ಲಿ ಇವೆಲ್ಲಾ ಇವೆ.”
“ಅದೇ ನನ್ನ ವ್ಯಕ್ತಿತ್ವ.”
“ಆ ನಿನ್ನ ವ್ಯಕ್ತಿತ್ವನ ನೀನು ಟೀಕೆ ಮಾಡೊ ಜಾತ್ಯತೀತರು ಶೋಧನೆ ಮಾಡ್ತಯಿದಾರೆ.”
“ಆ ನನ್ನ ಮಕ್ಕಳಿಗೆ ಬುದ್ಧಿ ಕಲುಸ್ತಿನಿ.”
“ನೀನು ಆ ನನ ಮಕ್ಕಳು ಅನ್ನಬಾರದಿತ್ತು.”
“ನಾನೂ ಹರಾಜಾಕ್ತಿನಿ.”
“ನಿನ್ನಿಂದಾಗಿ ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬಂತಲ್ಲೋ. ನಮ್ಮ ಜಿಲ್ಲೇಲಿ ಎಂತೆಂತಹ ಮೇಧಾವಿಗಳಿದ್ರು. ಕರ್ನಾಟಕ ಕಂಡ ಶ್ರೇಷ್ಠ ಆಡಳಿತಗಾರ ರಾಮಕೃಷ್ಣ ಹೆಗಡೆ, ತಾಯಿ ಹೃದಯದ ಮಾರ್ಗರೆಟ್ ಆಳ್ವ, ಇನ್ನ ಸಾಹಿತ್ಯ ಲೋಕಕ್ಕೆ ಬಂದ್ರೆ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ದಿನಕರ ದೇಸಾಯಿ, ಗೌರೀಶ್ ಕಾಯ್ಕಿಣಿ, ಜಯಂತಿ, ಅನುಪಮ ಇಂತಹ ಜನಗಳ ನಾಡಲ್ಲಿ ನೀನೆಲ್ಲಿ ಉದ್ಭವಿಸಿದೆಯೋ ಮುಂಡೆದೆ.”
“ನೋಡಿ ಮುಂಡೆದೆ ಅಂದ್ರೆ ನನ್ನ ರಕ್ತ ಹೆಪ್ಪುಗಟ್ಟುತ್ತೆ.”
“ನೋಡು ನಿನ್ನನ್ನ ಬೈಯ್ಯೋದಕ್ಕೆ ಬೈಗಳನೇ ಇಲ್ಲ. ಹೆತ್ತ ತಾಯಿಗೆ ಲಾಡಿ ಬಿಚ್ಚೊ ಮಾತಾಡಬೇಡ.”
“ಏನು ಹಾಗಂದೆ.್ರ”
“ಅದೊಂದು ಕೇಳಿಸಿಕೊಳ್ಳಕ್ಕೆ ಹಿಂಸೆಯಾಗೊ ಪದ. ನಮ್ಮ ಭಾರತದ ಸಂವಿಧಾನದಡಿಯಲ್ಲಿ ಚುನಾವಣೆ ನಡೆದು ಅದರಲ್ಲಿ ಗೆದ್ದು ಬಂದು ಅದನ್ನೆ ಬದಲಾಯಿಸ್ತಿನಿ ಅಂತಿಯಲ್ಲಾ, ಅದನ್ನ ಜಾತ್ಯತೀತರು ಹೆತ್ತ ತಾಯಿಗೇ ಲಾಡಿಬಿಚ್ಚೊ ಮಾತು ಅಂತಾರೆ. ಇಷ್ಟು ಕಠೋರ ಮಾತು ನಿನಗೆ ಬೇಕಾ.”
“ಅವರಿಗೆಲ್ಲಾ ನಾನು ಉತ್ತರ ಕೊಡ್ತಿನಿ. ನೀವು ತಲೆಕೆಡಿಸಿಕೋಬೇಡಿ.”
“ಹಾಗಂದ್ರೇಗೊ ಮುಂಡೆದೆ, ನೀನು ಬ್ರಾಹ್ಮಣ, ನಾನು ಬ್ರಾಹ್ಮಣ. ಆದ್ರಿಂದ ಅವರು ನಿನಿಗಂದ ಮಾತು ನನ್ನನ್ನು ನೋಯಿಸುತ್ತೆ.”
“ಅವರ ಮಾತ ಕೇಳಿಸಿಕೋಬೇಡಿ.”
“ಹಾಗಂದ್ರೇಗೊ, ಈ ಮುಪ್ಪಿನ ಕಾಲದಲ್ಲಿ ನಾನಿರೋದೆ ಜಾತ್ಯತೀತರ ನಡುವೆ.”
“ಅವರ ಜೊತೆ ಇರಬೇಡಿ, ನಮ್ಮ ಮನೆ ಹತ್ರ ಬಂದಿರಿ.”
“ನಿನ್ನ ಮನೆ ಹತ್ರ ಬರೀ ಹುಚ್ಚರ ಸಂತೆ ಕಣೋ. ಅಲ್ಲಿ ಸೇರೊವೆಲ್ಲಾ ಪಶ್ಚಿಮದ ದಾಳಿಗೆ ಹುಟ್ಟಿದಂಗೆ ಮಾತನಾಡ್ತವೆ. ಪಾಕಿಸ್ತಾನದ ಬಗ್ಗೆ ಮಾತನಾಡ್ತವೆ. ಶೂದ್ರರನ್ನು ಆಡಿಕೊಳ್ತವೆ. ದೇಶಕ್ಕೆ ಬೆಂಕಿ ಹಚ್ಚೊ ಮಾತುಬಿಟ್ರೆ, ಅಲ್ಲಿ ಇನ್ಯಾವ ಮನಶಾಂತಿನೂ ಸಿಗಲ್ಲ. ಅಲ್ಲಿಗೆ ಬರೋದಕ್ಕಿಂತ ಆತ್ಮಹತ್ಯೆ ಮಾಡಿಕಳದೇ ಒಳ್ಳೆದು.”
“ಅಷ್ಟು ಕೆಲಸ ಮಾಡಿ.”
“ಥೂ, ಗೋಡ್ಸೆ ಸಂತಾನವೆ.”

ಥೂತ್ತೇರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...