Homeಅಂಕಣಗಳುಥೂತ್ತೇರಿ | ಯಾಹೂನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

ನಿನಗೆ ಬ್ಲಡ್ ಕ್ಯಾನ್ಸರ್ ಇರಬೇಕು ಕಣೋ : ಯಾಹೂ

- Advertisement -
- Advertisement -

ಸದ್ಯದ ಕರ್ನಾಟಕದ ರಾಜಕಾರಣ, ಅಯ್ಯೋಪಾಪ ಎಂಬ ಕನಿಕರದ ಉದ್ಘಾರಕ್ಕೆ ತುತ್ತಾಗಿದೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತವನ ದುಗುಡದ ಮುಖ ನೋಡಿದರೆ ಯಾರಿಗೆ ಬೇಕು ಆ ಮುಳ್ಳಿನ ಕುರ್ಚಿ ಎನ್ನುವಂತಾಗಿದೆ. ಈ ನಡುವೆ ಬಿ.ಜೆ.ಪಿ ಜನರಾಡುವ ಮಾತುಕತೆ ನೋಡಿದರೆ, ಒಂದು ಸಮೂಹವೇ ಮತೀಯ ಮನೋಕ್ಲೇಶಕ್ಕೆ ತುತ್ತಾಗಿರುವಂತಿದೆ. ಅದರಲ್ಲಿ ಅ.ಕು.ಹೆಗಡೆ ಎಂಬುವನ ತಲೆ ಸಂಪೂರ್ಣ ಹದಗೆಟ್ಟಿರುವುದರಿಂದ, ಆತನನ್ನೇ ಮಾತನಾಡಿಸಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು.

ನಮಸ್ತೇ ಸದಾವತ್ಸಲೇ ಮಾತೃ ಭೂಮಿ…. “ಹಲೊ ಯಾರ್ರಿ..”
“ನಾನು ಕಣೊ ಆಂಕೋಲಾದಿಂದ ಹೊಸಮನೆ ಹೆಗಡೆ ಮಾತನಾಡ್ತಾಯಿರೋದು.”
“ಏನೇಳಿ ಹೆಗಡೆಯವರೆ.”
“ನಾನು ನಿಮ್ಮ ತಂದೆ ಕ್ಲಾಸುಮೇಟು ಕಣೋ.”
“ಹೌದಾ.”
“ಆತ ತುಂಬ ಸಂಭಾವಿತ, ನಿಮ್ಮ ತಾಯಿನೂ ಬಹಳ ಒಳ್ಳೆಯವಳು.”
“ಹೌದು, ಅಂತ ಗೌರವಾನ್ವಿತರ ಮಗ ನಾನು.”
“ಆದರೇನು ನಮ್ಮ ಮರಿಯಾದಿನೆ ಕಳದಲ್ಲೋ.”
“ನಾನೇನು ಮಾಡಿದ್ದಿನಿ.”
“ನಾನೇನು ಮಾಡಿದ್ದಿನಿ ಅಂತ ಕೇಳಿದ್ರೆ ಏನ್ಹೇಳದು. ನಿನ್ನ ಅಪರಾಧಗಳೇ ನಿನಗೆ ಗೊತ್ತಿಲ್ಲವಲ್ಲೋ?.”
“ಅಪರಾಧ ಮಾಡಿದ್ರೆ ತಾನೆ.”
“ಲೋಕಸಭೇಲಿ ನಿಂತುಕೊಂಡು ಸುಳ್ಳು ಹೇಳತಿ ಕ್ಷಮೆ ಯಾಚಿಸ್ತಿ, ನಿನ್ನ ಆರಿಸಿದವರ ಮಾನ ಕಳಿತಿಯಲ್ಲೊ.”
“ನೋಡಿ ಹೆಗಡೆಯವರೆ, ನಾನು ಸತ್ಯನೆ ಹೇಳದು. ಅದ್ಕೆ ಎಲ್ಲರಿಗೂ ಉರಿಹತ್ತಿಗಳದು.”
“ಅಲ್ಲೊ ಗಾಂಧಿ ಉಪವಾಸಕ್ಕೆದರಿ ಬ್ರಿಟಿಷರು ಓಡಲಿಲ್ಲ. ಅದನ್ನ ಓದಿದ್ರೆ ರಕ್ತ ಹೆಪ್ಪುಗಟ್ಟುತ್ತೆ ಅಂತಿಯಲ್ಲೋ.”
“ಹೌದು ಹಾಗಂದೆ.”
“ಹಾಗಿದ್ರೆ ನಿನಗೆ ಬ್ಲಡ್‍ಕ್ಯಾನ್ಸರ್ ಇರಬಹುದು ಕಣೋ. ಅಲ್ಲೇ ಅಂಕೋಲಾದಲ್ಲಿ ಒಬ್ಬ ಮಹಿಳಾ ಡಾಕ್ಟರಿದಾರೆ. ಅಲ್ಲಿಗೋಗಿ ಚೆಕಪ್ ಮಾಡಿಸಿಕೊ. ಅಂದ್ರೆ ಸುಮ್ಮನೆ ಅವುರತ್ರ ಒಂದು ಗಂಟೆ ಮಾತನಾಡು. ಬ್ಲಡ್ ಸರಿಹೋಗಬಹುದು.”
“ನೀವು ಹಿರಿಯರು ಅಂತ ಗೌರವ ಕೊಡ್ತಿನಿ ಅಂಗೆಲ್ಲ ಮಾತನಾಡಬೇಡಿ ತಿಳಿತಾ.”
“ನನ್ನ ಸ್ನೇಹಿತನ ಮಗ ಕಣೋ ನೀನು. ಅದ್ಕೆ ಹೇಳ್ತಿನಿ. ಗಾಂಧಿ ಬಗ್ಗೆ ನಿನಗೇನೊ ಗೊತ್ತು. ಭಾರತ ಜಗತ್ತಿಗೆ ಕೊಟ್ಟ ಕೊಡುಗೆನೆ ಗಾಂಧಿ. ಹಿಂದೂ ಧರ್ಮದ ಶ್ರೇಷ್ಠ ಕೊಡುಗೆನೇ ಗಾಂಧಿ ಕಣೊ. ನಿಮ್ಮ ಕೊಡುಗೆ ಯಾವುದೊ?”
“ಮೋದಿ ಸಾವರ್ಕರ್‍ಗಿಂತ್ಲೂ ಬೇಕಾ?”
“ಒಬ್ಬ ಐದು ದಿನದಲ್ಲಿ ಮೂರು ಸಾವಿರ ಜನ ಕೊಲ್ಲಿಸಿದ. ಇನ್ನೊಬ್ಬ ಮೂರು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆಯಾಗಿ, ಹಿಂದೂ ಮುಸ್ಲಿಂ ಜಗಳ ಮಾಡಸಕ್ಕೆ ಸಾಯೋವರಿಗೂ ಶ್ರಮಪಟ್ಟ ಅಲ್ವೇನೊ?”
“ನೋಡಿ ತಿಳಕಂಡು ಮಾತಾಡಿ.”
“ನೀನು ಗಾಂಧಿ ಓದಿಕಂಡು ಮಾತಾಡು.”
“ಗಾಂಧಿ ಬೇಕಾಗಿಲ್ಲ ನನಿಗೆ.”
“ಬ್ರಾಹ್ಮಣ ಕುಲಕ್ಕೆ ಅವಮಾನ ನೀನು. ಬ್ರಾಹ್ಮಣ ಮಾತನಾಡ್ತ ಇದ್ರೆ ಕೇಳಬೇಕು ಅನ್ಸುತ್ತೆ. ಆತನ ಭಾಷೆ ಅಪ್ಯಾಯಮಾನವಾಗಿರುತ್ತೆ. ಅವನ ಮಾತಲ್ಲಿ ಹಿಂಸೆ ಇರಲ್ಲ. ಕಟಕಿ ಇರಲ್ಲ. ಪ್ರಚೋದನೆ ಇರಲ್ಲ. ಅವಮಾನ ಇರಲ್ಲ. ನಿನ್ನ ಮಾತಲ್ಲಿ ಇವೆಲ್ಲಾ ಇವೆ.”
“ಅದೇ ನನ್ನ ವ್ಯಕ್ತಿತ್ವ.”
“ಆ ನಿನ್ನ ವ್ಯಕ್ತಿತ್ವನ ನೀನು ಟೀಕೆ ಮಾಡೊ ಜಾತ್ಯತೀತರು ಶೋಧನೆ ಮಾಡ್ತಯಿದಾರೆ.”
“ಆ ನನ್ನ ಮಕ್ಕಳಿಗೆ ಬುದ್ಧಿ ಕಲುಸ್ತಿನಿ.”
“ನೀನು ಆ ನನ ಮಕ್ಕಳು ಅನ್ನಬಾರದಿತ್ತು.”
“ನಾನೂ ಹರಾಜಾಕ್ತಿನಿ.”
“ನಿನ್ನಿಂದಾಗಿ ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬಂತಲ್ಲೋ. ನಮ್ಮ ಜಿಲ್ಲೇಲಿ ಎಂತೆಂತಹ ಮೇಧಾವಿಗಳಿದ್ರು. ಕರ್ನಾಟಕ ಕಂಡ ಶ್ರೇಷ್ಠ ಆಡಳಿತಗಾರ ರಾಮಕೃಷ್ಣ ಹೆಗಡೆ, ತಾಯಿ ಹೃದಯದ ಮಾರ್ಗರೆಟ್ ಆಳ್ವ, ಇನ್ನ ಸಾಹಿತ್ಯ ಲೋಕಕ್ಕೆ ಬಂದ್ರೆ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ದಿನಕರ ದೇಸಾಯಿ, ಗೌರೀಶ್ ಕಾಯ್ಕಿಣಿ, ಜಯಂತಿ, ಅನುಪಮ ಇಂತಹ ಜನಗಳ ನಾಡಲ್ಲಿ ನೀನೆಲ್ಲಿ ಉದ್ಭವಿಸಿದೆಯೋ ಮುಂಡೆದೆ.”
“ನೋಡಿ ಮುಂಡೆದೆ ಅಂದ್ರೆ ನನ್ನ ರಕ್ತ ಹೆಪ್ಪುಗಟ್ಟುತ್ತೆ.”
“ನೋಡು ನಿನ್ನನ್ನ ಬೈಯ್ಯೋದಕ್ಕೆ ಬೈಗಳನೇ ಇಲ್ಲ. ಹೆತ್ತ ತಾಯಿಗೆ ಲಾಡಿ ಬಿಚ್ಚೊ ಮಾತಾಡಬೇಡ.”
“ಏನು ಹಾಗಂದೆ.್ರ”
“ಅದೊಂದು ಕೇಳಿಸಿಕೊಳ್ಳಕ್ಕೆ ಹಿಂಸೆಯಾಗೊ ಪದ. ನಮ್ಮ ಭಾರತದ ಸಂವಿಧಾನದಡಿಯಲ್ಲಿ ಚುನಾವಣೆ ನಡೆದು ಅದರಲ್ಲಿ ಗೆದ್ದು ಬಂದು ಅದನ್ನೆ ಬದಲಾಯಿಸ್ತಿನಿ ಅಂತಿಯಲ್ಲಾ, ಅದನ್ನ ಜಾತ್ಯತೀತರು ಹೆತ್ತ ತಾಯಿಗೇ ಲಾಡಿಬಿಚ್ಚೊ ಮಾತು ಅಂತಾರೆ. ಇಷ್ಟು ಕಠೋರ ಮಾತು ನಿನಗೆ ಬೇಕಾ.”
“ಅವರಿಗೆಲ್ಲಾ ನಾನು ಉತ್ತರ ಕೊಡ್ತಿನಿ. ನೀವು ತಲೆಕೆಡಿಸಿಕೋಬೇಡಿ.”
“ಹಾಗಂದ್ರೇಗೊ ಮುಂಡೆದೆ, ನೀನು ಬ್ರಾಹ್ಮಣ, ನಾನು ಬ್ರಾಹ್ಮಣ. ಆದ್ರಿಂದ ಅವರು ನಿನಿಗಂದ ಮಾತು ನನ್ನನ್ನು ನೋಯಿಸುತ್ತೆ.”
“ಅವರ ಮಾತ ಕೇಳಿಸಿಕೋಬೇಡಿ.”
“ಹಾಗಂದ್ರೇಗೊ, ಈ ಮುಪ್ಪಿನ ಕಾಲದಲ್ಲಿ ನಾನಿರೋದೆ ಜಾತ್ಯತೀತರ ನಡುವೆ.”
“ಅವರ ಜೊತೆ ಇರಬೇಡಿ, ನಮ್ಮ ಮನೆ ಹತ್ರ ಬಂದಿರಿ.”
“ನಿನ್ನ ಮನೆ ಹತ್ರ ಬರೀ ಹುಚ್ಚರ ಸಂತೆ ಕಣೋ. ಅಲ್ಲಿ ಸೇರೊವೆಲ್ಲಾ ಪಶ್ಚಿಮದ ದಾಳಿಗೆ ಹುಟ್ಟಿದಂಗೆ ಮಾತನಾಡ್ತವೆ. ಪಾಕಿಸ್ತಾನದ ಬಗ್ಗೆ ಮಾತನಾಡ್ತವೆ. ಶೂದ್ರರನ್ನು ಆಡಿಕೊಳ್ತವೆ. ದೇಶಕ್ಕೆ ಬೆಂಕಿ ಹಚ್ಚೊ ಮಾತುಬಿಟ್ರೆ, ಅಲ್ಲಿ ಇನ್ಯಾವ ಮನಶಾಂತಿನೂ ಸಿಗಲ್ಲ. ಅಲ್ಲಿಗೆ ಬರೋದಕ್ಕಿಂತ ಆತ್ಮಹತ್ಯೆ ಮಾಡಿಕಳದೇ ಒಳ್ಳೆದು.”
“ಅಷ್ಟು ಕೆಲಸ ಮಾಡಿ.”
“ಥೂ, ಗೋಡ್ಸೆ ಸಂತಾನವೆ.”

ಥೂತ್ತೇರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...