HomeUncategorized‘ಇದು ಸಿದ್ಧಾರ್ಥನ ದುರಂತವಷ್ಟೇ ಅಲ್ಲ, ದೇಶದ ಎಕಾನಮಿಯದೂ ಕೂಡ..’ ಯುವ ಉದ್ಯಮಿಯ ಮನದಾಳದ ಮಾತುಗಳು

‘ಇದು ಸಿದ್ಧಾರ್ಥನ ದುರಂತವಷ್ಟೇ ಅಲ್ಲ, ದೇಶದ ಎಕಾನಮಿಯದೂ ಕೂಡ..’ ಯುವ ಉದ್ಯಮಿಯ ಮನದಾಳದ ಮಾತುಗಳು

- Advertisement -
- Advertisement -

‘ಇದು ಸಿದ್ಧಾರ್ಥ ದುರಂತವಷ್ಟೇ ಅಲ್ಲ, ದೇಶದ ಎಕಾನಮಿಯದೂ ಕೂಡ…..’
ಯುವ ಉದ್ಯಮಿಯೊಬ್ಬನ ಮನದಾಳದ ಮಾತುಗಳು..

ಇವತ್ತು ದೇಶದ ಆರ್ಥಿಕತೆ ಅಪಾಯದಲ್ಲಿದೆ. ಹೊರ ರಾಜ್ಯದಲ್ಲಿ ಸಣ್ಣ ಉದ್ಯಮ ಆರಂಭಿಸಿರುವ ಗದಗ ಜಿಲ್ಲೆಯ ಗಜೇಂದ್ರಗಡದ ಯುವ ಇಂಜಿನಿಯರ್-ಎಂಟರಪ್ರೈನರ್ ಒಬ್ಬರು ನಮ್ಮ ಪತ್ರಿಕೆ ಮತು ಪೋರ್ಟಲ್ ಮುಂದೆ ಹೇಳಿದ ಮನದಾಳದ ಮಾತುಗಳು ಇಲ್ಲಿವೆ…….

ಒಂದು ದುರಂತ ಸಾವು ಇವತ್ತು ಒಂದಿಷ್ಟು ಪ್ರಶ್ನೆಗಳನ್ನೂ ಎಬ್ಬಿಸಿದೆ. ಎಲ್ಲ ಸಾವುಗಳೂ, ಅವೂ ಆತ್ಮಹತ್ಯೆಯಾಗಿದ್ದರೆ ಇಂತಹ ಪ್ರಶ್ನೆಗಳನ್ನು ಹುಟ್ಟು ಹಾಕಲೇಬೇಕು…

ಇತ್ತೀಚೆಗೆ ಬಿಡಿಬಿಡಿಯಾಗಿ ವ್ಯಾಟ್ಸಾಫ್‍ನಲ್ಲಿ ಸಿಗುತ್ತಿರುವ ‘ನ್ಯಾಯಪಥ’ದ ಬರಹಗಳು ಮತ್ತು ಕೈಗೇ ಸಿಗುತ್ತಿರುವ ನಾನುಗೌರಿ.ಕಾಂ ಬರಹಗಳು ನನಗೆ ಇಷ್ಟವಾಗಿವೆ. ಸಿದ್ಧಾರ್ಥ ಕುರಿತಾಗಿ, ಈ ಸಲದ ನ್ಯಾಯಪಥದಲ್ಲಿ ಬಂದ ಲೇಖನ ಮತ್ತು ಸಿದ್ಧಾರ್ಥ ಸಾವಿನ ಕುರಿತಾಗಿ ಶಿವಸುಂದರ್ ಎನ್ನುವವರು ವಿಶ್ಲೇಷಣೆ ಮಾಡಿದ ವಿಡಿಯೋ ನೋಡಿದ ಮೇಲೆ ನನಗೆ ಅನಿಸಿದ್ದನ್ನು ಇಲ್ಲಿ ಮುಂದಿಡುತ್ತಿರುವೆ:

ಬರಹ ಮತ್ತು ವಿಡಿಯೋದ ಕೆಲವು ಅಂಶಗಳಲ್ಲಿ ವೈರುಧ್ಯ ಇರಬಹುದಾದರೂ ಒಟ್ಟೂ ಕಾಳಜಿ ಜನಪರವಾಗಿಯೇ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾ, ಒಬ್ಬ ತೀರಾ ಪುಟ್ಟ ಉದ್ಯಮಿಯಾಗಿ ನನ್ನ ಈ ಅನಿಸಿಕೆಗಳನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿರುವೆ:

‘ಸಿದ್ಧಾರ್ಥ್ ಹೆಗ್ಡೆ ಒಬ್ಬ ಬ್ರಿಲಿಯಂಟ್ ಉದ್ಯಮಿಯಾಗಿದ್ದ… ಶೂನ್ಯದಿಂದ ಶುರು ಮಾಡಿ, ಈ (ಜಟಿಲ) ಅರ್ಥವ್ಯವಸ್ಥೆ ಮತ್ತು ಮಾರುಕಟ್ಟೆಯ ಸೂಕ್ಷ್ಮಗಳನ್ನು ಮನಗಂಡಿದ್ದ ಒಬ್ಬ ವ್ಯಕ್ತಿಯಾಗಿ ನನ್ನಂತಹ ಯಾವುದೇ ಬಿಸಿನೆಸ್ ಹಿನ್ನೆಲೆಯಿಂದ ಬರದ ಯುವಕರಿಗೆ ಸ್ಪೂರ್ತಿಯೂ ಆಗಿದ್ದರು… ಆದರೆ, ಕಾಲಘಟ್ಟ ಅದೆಷ್ಟು ಅಪಾಯಕಾರಿ ವೇಗದಲ್ಲಿ ಅರ್ಥವ್ಯವಸ್ಥೆಯನ್ನು ಮುಂದಕ್ಕೆ ಒಯ್ಯುವ ಭರವಸೆ ಮೂಡಿಸಿ ಬಿಟ್ಟಿತು ಎಂದರೆ….. ಈ ವೇಗದೋಟದ ಹಾದಿಯಲ್ಲಿ ಜನಸಾಮಾನ್ಯರಿಗೆ ಜಾಗವೇ ಇಲ್ಲ ಎಂಬುದು ಸತ್ಯವಾಗಿದ್ದರೂ, ಜನರನ್ನು ದಾರಿ ತಪ್ಪಿಸುತ್ತಲೇ ಬರಲಾಗಿತು…

ಸಿದ್ಧಾರ್ಥರು ಸೃಷ್ಟಿಸಿದ ಉದ್ಯೋಗಗಳ ಸಂಖ್ಯೆ ಮತ್ತು ಸಂಪತ್ತನ (?) ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆದರೆ ಒಬ್ಬ ಅತಿ ಸಣ್ಣ ಉದ್ಯಮಿಯಾಗಿ ನನಗೆ ವೈಯಕ್ತಿಕವಾಗಿ ಸಿದ್ಧಾರ್ಥರ ಬಗ್ಗೆ ಗೌರವವಂತೂ ಇದೆ, ಅದು ಅವರು ತಳಮಟ್ಟದಿಂದ ಕಟ್ಟಿದ ಹೊಸ ಉದ್ಯಮ ಸಾಮ್ರಾಜ್ಯಕ್ಕಾಗಿ… ಆದರೆ ಅದಷ್ಟೇ ಜೀವನವಲ್ಲವಲ್ಲ….

***
2014ರ ಚುನಾವಣೆ ಸಂದರ್ಭ. ಅಲ್ಲಿವರೆಗೂ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹೇರುತ್ತಿದ್ದ ತೆರಿಗೆ ಭಾರಗಳನ್ನು ತಡೆಯದೇ ನನ್ನಂತಹ ಪುಟ್ಟ ಪುಟ್ಟ ಹೊಸ ಉದ್ಯಮಿಗಳು ( ಇಂಜಿನಿಯರಿಂಗ್ ನೆರವಿನಿಂದ ದೊಡ್ಡ ಸಂಬಳದ ಹುದ್ದೆ ಗಿಟ್ಟಿಸಿ, ಅದರಲ್ಲಿ ಉಳಿಸಿದ ಹಣ ಮತ್ತು ಅದರ ಆಧಾರದಲ್ಲಿ ಸಿಕ್ಕ ಬ್ಯಾಂಕ್ ಸಾಲಗಳಿಂದ ಸಣ್ಣ ಉದ್ಯಮ ಘಟಕ) ಆಘಾತ ಅನುಭವಿಸುತ್ತಿದ್ದ ಸಂದರ್ಭದಲ್ಲಿ, ಪಾರದರ್ಶಕ, ಉದ್ಯಮಿಗಳಿಗೆ ಕಿರುಕುಳಮುಕ್ತ …ಇತ್ಯಾದಿ ಇತ್ಯಾದಿ ಭರವಸೆಗಳನ್ನೇ ನೀಡಿದ ಮೋದಿಯಿಂದ ಬದಲಾವಣೆ ಆಗಬಹುದು ಎಂದು ಎಲ್ಲರಂತೆ ನಾವೂ ನಂಬಿದೆವು.

ಆದರೆ, ಆ ಮನುಷ್ಯನ ಆಡಳಿತದ ಒಂದೇ ವರ್ಷದಲ್ಲಿ ಎಲ್ಲವೂ ಸ್ಪಷ್ಟವಾಯಿತು. ಈತ ಮಹಾನ್ ದರೋಡೆಕೋರ, ಮಹಾನ್ ಠಕ್ಕ ಎಂಬುದು. ಈತ ಕೇವಲ ಗುಜರಾತಿನ ಪಿಎಂ ಅಷ್ಟೇ ಎಂಬುದು ಗೊತ್ತಾಗಿತು.

ಆದರೆ, ದೇಶಭಕ್ತಿ ಮತ್ತು ಇತರ ಧಾರ್ಮಿಕ ಭಾವನಾತ್ಮಕ ವಿಷಯ ಇಟ್ಟುಕೊಂಡು ಚುನಾವಣೆ ಎದುರಿಸುವಾಗ ಈ ದೇಶದ ಉದ್ಯಮ ಸಮೂಹ ಆತನ ಬೆಂಬಲಕ್ಕೇ ನಿಂತಿದ್ದು ವಿಚಿತ್ರವಾಗಿತ್ತು. ಮೀಡಿಯಾ ಕೂಡ ನಿನ್ನೆ ಮೊನ್ನೆವರೆಗೆ ಬೊಂಬಡಾ ಬಜಾಯಿಸಿ ಈಗ ಸಿದ್ಧಾರ್ಥರ ಸಾವಿನ ನಂತರ ಎಚ್ಚರಗೊಂಡು ಕೆಲವು ಸತ್ಯಗಳನ್ನು ಹೇಳುತ್ತಿದೆ.

ಸದ್ಯ ದೇಶದ ಆರ್ಥಿಕತೆ ಕುಸಿಯುತ್ತಲೇ ಸಾಗಿದೆ, ಬಂಡವಾಳ ಹೂಡಿಕೆ ಕುಸಿದಿದೆ ಕೂಡ… ಮೇಲಾಗಿ ಜನರ ಕೊಳ್ಳುವ ಶಕ್ತಿಯೇ ಕುಸಿದು ಹೋಗಿದೆ.. ಇಲ್ಲಿ ಏರುತ್ತಲೇ ಇರೋದು ಒಂದು ಮಾತ್ರ: ಅದು ಮೋದಿಯ ಹುಚ್ಚಾಟ, ಹುಂಬತನಗಳಷ್ಟೇ…

ಸಣ್ಣ ಮತ್ತ ಮಧ್ಯಮ ಉದ್ಯಮಗಳಿಗೆ ಈ ವರ್ಷ ಭಾರಿ ಗಂಡಾಂತರ ಕಾದಿದೆ. ಒಟ್ಟೂ ಅರ್ಥವ್ಯವಸ್ಥೆ ನಿಧಾನಕ್ಕೆ ಕುಸಿಯತೊಡಗಿದೆ….

(ಲೇಖಕರ ಕೋರಿಕೆಯ ಮೇರೆಗೆ ಅವರ ಹೆಸರನ್ನು ಪ್ರಕಟಿಸಿಲ್ಲ.)

ನಿರೂಪಣೆ: ಪಿ.ಕೆ ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾವಿನ ವಿಷ ಪ್ರಕರಣ : ಎಲ್ವಿಶ್ ಯಾದವ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧದ ಹಾವಿನ ವಿಷ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ಕ್ರಿಮಿನಲ್ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಗುರುವಾರ (ಮಾ.19) ರದ್ದುಗೊಳಿಸಿದೆ.  ವನ್ಯಜೀವಿ (ರಕ್ಷಣೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲು ಅಧಿಕೃತ ವ್ಯಕ್ತಿಯಿಂದ ದೂರು...

ದೆಹಲಿಯ ಉತ್ತಮ್ ನಗರದಲ್ಲಿ ಮುಸ್ಲಿಮರಿಗೆ ಬೆದರಿಕೆ; ಅಮಿತ್ ಶಾಗೆ ಪತ್ರ ಬರೆದ ವಿಪಕ್ಷ ಸಂಸದರು

ರಾಷ್ಟ್ರ ರಾಜಧಾನಿಯ ಉತ್ತಮ್ ನಗರದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂದುತ್ವ ಗುಂಪುಗಳು ಮಾಡುತ್ತಿರುವ ಬೆದರಿಕೆಗಳ ಬಗ್ಗೆ ತುರ್ತು ಹಸ್ತಕ್ಷೇಪವನ್ನು ಕೋರಿ ಹಲವಾರು ವಿರೋಧ ಪಕ್ಷದ ಸದಸ್ಯರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ...

‘ಇರಾನ್ ಕತಾರ್ ಮೇಲೆ ಮತ್ತೊಮ್ಮೆ ದಾಳಿ ಮಾಡಿದರೆ, ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಸ್ಪೋಟಿಸುತ್ತೇವೆ’; ಟ್ರಂಪ್ ಬೆದರಿಕೆ

ಇರಾನ್ ಕತಾರ್‌ನ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡರೆ, ಅಮೆರಿಕ ”ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಬೃಹತ್ ಪ್ರಮಾಣದಲ್ಲಿ ಸ್ಫೋಟಿಸುತ್ತದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾಜ್ಯಸಭೆಯಲ್ಲಿ ಎಚ್ಚರಿಸಿದ್ದಾರೆ. ಇರಾನ್‌ನ ಸೌತ್ ಪಾರ್ಸ್ ಗ್ಯಾಸ್...

ಮುಸ್ಲಿಂ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡ ಓಲಾ ಚಾಲಕ; ‘ಇಸ್ಲಾಮೋಫೋಬಿಕ್’ ಕುರಿತು ಆತಂಕ ವ್ಯಕ್ತಪಡಿಸಿದ ವಕೀಲ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಓಲಾ ಕ್ಯಾಬ್ ಪ್ರಯಾಣದ ಸಂದರ್ಭದಲ್ಲಿ ಚಾಲಕನಿಂದ ನನಗೆ ಬೆದರಿಕೆ ಮತ್ತು ಇಸ್ಲಾಮೋಫೋಬಿಕ್ ಹೇಳಿಕೆಗಳು ಬಂದಿವೆ ಎಂದು ಸುಪ್ರೀಂ ಕೋರ್ಟ್ ವಕೀಲರೊಬ್ಬರು ಆರೋಪಿಸಿದ್ದಾರೆ. ಈ ಘಟನೆಯು, ಪ್ರಯಾಣಿಕರ ಸುರಕ್ಷತೆ ಮತ್ತು...

ಬೆಳ್ತಂಗಡಿ | ಮುಸ್ಲಿಂ ಬಾಲಕನ ಮೇಲೆ ಗುಂಪು ಹಲ್ಲೆ ಆರೋಪ; ಬಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಮುಸ್ಲಿಂ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಅಪಹರಿಸಿ, ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ...

ಉಮರ್ ಖಾಲಿದ್ ಬಂಧನ ನಿರಂಕುಶ; ಕಾನೂನು ಆಧಾರವಿಲ್ಲ: ವಿಶ್ವಸಂಸ್ಥೆ ಕಾರ್ಯಪಡೆ

"ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಕಾರ್ಯಕರ್ತ ಮತ್ತು ಸಂಶೊಧನಾ ವಿದ್ಯಾರ್ಥಿ ಉಮರ್ ಖಾಲಿದ್ ಅವರ ಬಂಧನವು ನಿರಂಕುಶವಾಗಿದೆ, ಅದಕ್ಕೆ ಯಾವುದೇ ಕಾನೂನು ಆಧಾರವಿಲ್ಲ" ಎಂದು ವಿಶ್ವಸಂಸ್ಥೆಯ ಸಮಿತಿ ಹೇಳಿದೆ. ಸಾಮಾಜಿಕ ಕಾರ್ಯಕರ್ತರ...

ಮಹಾರಾಷ್ಟ್ರ | ಲೈಂಗಿಕ ದೌರ್ಜನ್ಯ ಆರೋಪ : ಸ್ವಯಂ ಘೋಷಿತ ದೇವಮಾನವನ ಬಂಧನ

ಮಹಿಳೆಯರನ್ನು ಅಸಭ್ಯವಾಗಿ ಚಿತ್ರೀಕರಿಸಿ, ಆ ವಿಡಿಯೋಗಳನ್ನು ಇಟ್ಟುಕೊಂಡು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ಆರೋಪದ ಮೇಲೆ ಸ್ವಯಂಘೋಷಿತ ದೇವಮಾನವ ಮತ್ತು ಜ್ಯೋತಿಷಿ ಕ್ಯಾಪ್ಟನ್ ಅಶೋಕ್ ಖಾರಟ್‌ನನ್ನು ಮಹಾರಾಷ್ಟ್ರದ ನಾಸಿಕ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ....

‘ಕಾಂಗ್ರೆಸ್ ಜೊತೆ ಬಲವಂತದ ಮದುವೆ ಆಗಿತ್ತು’: ಖರ್ಗೆ ಅವರ ‘ಮೋದಿ ಜೊತೆ ಮದುವೆ’ ಟೀಕೆಗೆ ದೇವೇಗೌಡ ತಿರುಗೇಟು

ಸಂಸತ್ತಿನಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ 'ಮದುವೆ' ಮತ್ತು 'ಪ್ರೀತಿ' ಹೇಳಿಕೆಗೆ ಮಾಜಿ ಪ್ರಧಾನಿ ಮತ್ತು ರಾಜ್ಯಸಭಾ ಸಂಸದ ಎಚ್‌ಡಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ. ದೇವೇಗೌಡರು ಕಾಂಗ್ರೆಸ್ ಅನ್ನು "ಪ್ರೀತಿಸಿದರು" ಆದರೆ ಮೋದಿ (ಬಿಜೆಪಿ)...

ರಾಹುಲ್ ಗಾಂಧಿಯನ್ನು ‘ಟಪೋರಿ’ ಎಂದು ಕರೆದ ಬಿಜೆಪಿ ಸಂಸದೆ ಕಂಗನಾ ರಣಾವತ್

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದೆ - ನಟಿ ಕಂಗನಾ ರನೌತ್, ಅವರನ್ನು ಟಪೋರಿ ಎಂದು ಕರೆದಿದ್ದಾರೆ. ಅವರ ನಡವಳಿಕೆಯು ಮಹಿಳೆಯರಿಗೆ ಅನಾನುಕೂಲವನ್ನುಂಟು ಮಾಡುತ್ತದೆ ಎಂದು...

ಎಸ್‌ಬಿಐಗೆ ವಂಚನೆ ಪ್ರಕರಣ : ಅನಿಲ್ ಅಂಬಾನಿ ವಿಚಾರಣೆ ನಡೆಸಿದ ಸಿಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಮೇರೆಗೆ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ವಿರುದ್ಧ ದಾಖಲಾಗಿರುವ 2,929 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ಮಾ.19) ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರನ್ನು ಕೇಂದ್ರ...