Homeಅಂಕಣಗಳುಆಧಾರ್: ಆಷಾಢಭೂತಿ ಕಾಂಗ್ರೆಸ್, ಘಾತುಕ ಬಿಜೆಪಿ

ಆಧಾರ್: ಆಷಾಢಭೂತಿ ಕಾಂಗ್ರೆಸ್, ಘಾತುಕ ಬಿಜೆಪಿ

- Advertisement -
- Advertisement -

ಆಧಾರ್ ಕುರಿತ ಬಹುನಿರೀಕ್ಷಿತ ಸುಪ್ರೀಂಕೋರ್ಟ್ ತೀರ್ಪು ಇಂದು ಹೊರಬಿದ್ದಿದೆ. ಸಾವಿರಕ್ಕೂ ಹೆಚ್ಚು ಪುಟಗಳ ತೀರ್ಪಿನ ವಿವರ ನಾಳೆಯ ಹೊತ್ತಿಗೆ ಸಂಪೂರ್ಣವಾಗಿ ಲಭ್ಯವಾಗಲಿದೆ. ಈ ಸದ್ಯ ಮಾಧ್ಯಮಗಳು ಹೇಳುತ್ತಿರುವುದು – ಬ್ಯಾಂಕ್ ಖಾತೆಗೆ ಮತ್ತು ಮೊಬೈಲ್ ಫೋನ್‍ಗೆ ಇದನ್ನು ಲಿಂಕ್ ಮಾಡಬೇಕೆಂದೇನಿಲ್ಲವೆಂದು. ಆದರೆ, ಮೇಲ್ಮಧ್ಯಮ ವರ್ಗ ಮತ್ತು ಮೇಲ್ವರ್ಗದವರು ಮಾಡಬೇಕಾದ ಆದಾಯ ತೆರಿಗೆ ಸಲ್ಲಿಕೆ ಮತ್ತು ಪ್ಯಾನ್ ಕಾರ್ಡ್‍ಗೆ ಆಧಾರ್ ಕಡ್ಡಾಯ ಎಂಬುದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮಧ್ಯಮ ವರ್ಗ (ಕನಿಷ್ಠ ಗ್ಯಾಸ್ ಸಬ್ಸಿಡಿಗೆ ಆಧಾರ್ ಕಾರ್ಡ್ ಬೇಕು) ಹಾಗೂ ಅದಕ್ಕಿಂತ ಕೆಳಗಿನ ಸಮುದಾಯಗಳಿಗೆ ತಲುಪುತ್ತಿರುವ ಸರ್ಕಾರೀ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ ಮಾಡುವುದನ್ನೂ ಎತ್ತಿ ಹಿಡಿದಿದೆ. ಮಕ್ಕಳನ್ನು ಹೊರತುಪಡಿಸಿ, ದೇಶದ ಎಲ್ಲಾ ಜನರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆಧಾರ್ ಕಡ್ಡಾಯವೇ ಆಗಿರುತ್ತದೆ. ಇದನ್ನು ಖಾಸಗಿ ಕಂಪೆನಿಗಳು ಕೇಳುವಂತಿಲ್ಲವೆಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಡಿಜಿಟಲ್ ತಂತ್ರಜ್ಞಾನದ ಮೂಲಕ ಈಗಾಗಲೇ ಪ್ರತಿಯೊಬ್ಬ ವ್ಯಕ್ತಿಯ ಆನ್‍ಲೈನ್ ವ್ಯವಹಾರಗಳ ಮೂಲಕ ಅವರ ಇಷ್ಟಾನಿಷ್ಟಗಳನ್ನು, ವ್ಯವಹಾರಗಳ ಮೇಲೆ ನಿಗಾ ಇಟ್ಟು ಅವರ ವಿವರಗಳನ್ನು ಖಾಸಗಿಯವರು ಪಡೆದುಕೊಂಡಾಗಿದೆ. ಸರ್ಕಾರವು ಬಯಸಿದಲ್ಲಿ ಎಲ್ಲರ ಮೇಲೆ ನಿಗಾ ಇಡಲು ಸಾಧ್ಯವಾಗುವಂತೆ ಆಧಾರ್ ಕಡ್ಡಾಯವೂ ಆಗಿರುತ್ತದೆ. ನಿಗಾ ಇಡಲು ಆಧಾರ್ ಸಹಾ ಬೇಕಿಲ್ಲ; ಮೊಬೈಲ್ ಫೋನೇ ಸಾಕಾಗುತ್ತದೆ. ಆ ಅರ್ಥದಲ್ಲಿ ಈ ತೀರ್ಪಿನಿಂದ ಮಹತ್ತರವಾದುದೇನೋ ಸಾಧನೆಯಾದಂತೆ ಕಾಣುತ್ತಿಲ್ಲ. ಇದಕ್ಕೂ ಹಿಂದೆ ಸುಪ್ರೀಂಕೋರ್ಟ್ ಖಾಸಗಿತನದ ರಕ್ಷಣೆಯ ಕುರಿತು ನೀಡಿದ ತೀರ್ಪನ್ನು ಇದರಿಂದ ಆಧಾರ್ ವಿಚಾರದಲ್ಲಿ ಭಾಗಶಃ (ಖಾಸಗಿ ವ್ಯಕ್ತಿಗಳ ಕೈಗೆ ಆಧಾರ್ ವಿವರಗಳು ಹೋಗದಂತೆ ತಡೆಯುವ ಮೂಲಕ) ಅಷ್ಟೇ ಅನುಷ್ಠಾನ ಮಾಡಿದಂತಾಗುತ್ತದೆ.
ಈಗಾಗಲೇ ಖಾಸಗಿ ಕಂಪೆನಿಗಳು ಸಂಗ್ರಹಿಸಿಟ್ಟುಕೊಂಡಿರುವ ಆಧಾರ್ ಮಾಹಿತಿಯನ್ನು ನಾಶ ಮಾಡಬೇಕೆಂದು ಹೇಳಿದಾಗ್ಗ್ಯೂ ಆ ಪ್ರಕ್ರಿಯೆಯನ್ನು ಯಾರು, ಹೇಗೆ ಖಾತರಿಗೊಳಿಸುತ್ತಾರೆಂಬ ವಿವರಗಳು ಇನ್ನಷ್ಟೇ ಹೊರಬೀಳಬೇಕಿದೆ.
ಮುಖ್ಯ ನ್ಯಾಯಾಧೀಶ ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಎ.ಕೆ.ಸಿಕ್ರಿ, ನ್ಯಾ.ಎ.ಎಂ.ಖಾನ್ವಿಲ್ಕರ್, ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಅಶೋಕ್ ಭೂಷಣ್‍ರಿದ್ದ ನ್ಯಾಯಪೀಠದಲ್ಲಿ ನ್ಯಾ.ಚಂದ್ರಚೂಡ್‍ರು ಮಾತ್ರ ತುಂಬಾ ಕಠಿಣ ಮಾತುಗಳಲ್ಲಿ ಕೆಲವು ಅಂಶಗಳನ್ನು ತೆರೆದಿಟ್ಟಿದ್ದಾರೆ. ಅವರೂ ಸಹಾ ಆಧಾರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಬೇಕು ಎಂದು ಹೇಳಿರದಿದ್ದರೂ, ಆಧಾರ್ ಕಡ್ಡಾಯವಾಗುವುದರಿಂದ ಆಗುವ ಸಮಸ್ಯೆಗಳನ್ನು ಎತ್ತಿ ಹೇಳಿದ್ದಾರೆ. ಇದನ್ನು ಜಾರಿಗೆ ತಂದ ಪ್ರಕ್ರಿಯೆಯು ಅಸಾಂವಿಧಾನಿಕ ಎಂದೂ ಸ್ಪಷ್ಟವಾಗಿ ಮುಂದಿಟ್ಟಿದ್ದಾರೆ. ಈ ರೀತಿಯ ಅಲ್ಪಸಂಖ್ಯಾತ ತೀರ್ಪು ಬಂದಾಗ ಅದನ್ನು ಹಿಡಿದು, ಇನ್ನೂ ದೊಡ್ಡ ಪೀಠ ರಚನೆಗೆ ಕೇಳಬಹುದಾಗಿದೆ. ಅದನ್ನೇ ಮಾಡುತ್ತೇವೆಂದು ಕಾಂಗ್ರೆಸ್‍ನ ನಾಯಕ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಈಗಾಗಲೇ ಘೋಷಿಸಿದ್ದಾರೆ.
ಇಲ್ಲಿ ಆಶ್ಚರ್ಯವೆಂದರೆ, ಸದರಿ ಆಧಾರ್‍ಅನ್ನು ಮೊದಲು ತರಲು ಹೊರಟಿದ್ದೇ ಕಾಂಗ್ರೆಸ್ ಪಕ್ಷ. ಆದರೆ, ಇಂದು ರಾಹುಲ್‍ಗಾಂಧಿಯಾದಿಯಾಗಿ ಎಲ್ಲಾ ಕಾಂಗ್ರೆಸ್ಸಿಗರೂ ಈ ತೀರ್ಪನ್ನು ಸ್ವಾಗತಿಸಿದ್ದಾರೆ. ಅವರ ಪ್ರಕಾರ ಇದು ಯುಪಿಎ ತರಲು ಹೊರಟಿದ್ದ ಆಧಾರ್ ಪ್ರಕ್ರಿಯೆಗೆ ಸಂದ ಜಯ. ವಾಸ್ತವದಲ್ಲಿ ನಂದನ್ ನಿಲೇಕಣಿ ನೇತೃತ್ವದಲ್ಲಿ ಇದರ ಪರಿಕಲ್ಪನೆ ರೂಪುಗೊಂಡಾಗಲೇ ಇಂದು ಎನ್‍ಡಿಎ ಯಾವ ರೀತಿಯಲ್ಲಿ ಜಾರಿ ಮಾಡುತ್ತಿದೆಯೋ ಆ ಎಲ್ಲಾ ಸಾಧ್ಯತೆಗಳು/ಅಪಾಯಗಳು ಇದ್ದೇ ಇತ್ತು. ಜಾರಿಗೆ ತರುವ ಪ್ರಕ್ರಿಯೆಯನ್ನು ಸಂಸತ್ತಿನೊಳಗೆ ಇನ್ನೂ ‘ಪ್ರಜಾತಾಂತ್ರಿಕ’ಗೊಳಿಸುವ ಕೆಲಸವನ್ನಷ್ಟೇ ಕಾಂಗ್ರೆಸ್ ಮಾಡಬಯಸಿತ್ತು ಮತ್ತು ಹಂತಹಂತವಾಗಿ ಅದನ್ನು ಹೇರಲಾಗುತ್ತಿತ್ತು. ಆದರೆ, ಇಂದು ತನ್ನ ರೀತಿಯೇ ಬೇರೆ ಎಂದು ಅದು ಹೇಳುತ್ತಿದೆ. ಇದು ಕಾಂಗ್ರೆಸ್‍ನ ಆಷಾಢಭೂತಿತನಕ್ಕೆ ಸಾಕ್ಷಿ.
ಅದೇ ಹೊತ್ತಿನಲ್ಲಿ ಬಿಜೆಪಿಯಂತೂ ಈ ವಿಚಾರದಲ್ಲಿ ಭಾರೀ ದೊಡ್ಡ ಯುಟರ್ನ್ ಮಾಡಿದೆ. ಆಧಾರ್ ತರುವುದಕ್ಕೇ ಅದು ವಿರೋಧ ವ್ಯಕ್ತಪಡಿಸಿತ್ತು. ಆಧಾರ್ ಜನಕ ನಿಲೇಕಣಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದಾಗ, ಅವರನ್ನು ವಿರೋಧಿಸಲೂ ಇದನ್ನೊಂದು ಅಸ್ತ್ರವಾಗಿ ಮಾಡಿಕೊಂಡಿತ್ತು. ನಂತರ ಸುಲಭವಾಗಿ ಖಾಸಗಿಯವರ ಕೈಗೂ ಆಧಾರ್ ಸಿಗುವ ರೀತಿ ಮಾಡಿ ಜಾರಿ ಮಾಡಲು ಹೊರಟಿದ್ದು ಇದೇ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ.
ಇದೀಗ ಒಂದೆರಡು ಅಂಶಗಳನ್ನು ಹೊರತುಪಡಿಸಿ, ಉಳಿದಂತೆ ಆಧಾರ್‍ಅನ್ನು ಕೋರ್ಟ್ ಎತ್ತಿಹಿಡಿದಿದ್ದರೂ, ಒಟ್ಟಾರೆ ಇದರಲ್ಲಿ ಹಲವು ಅಪಾಯಕಾರಿ ಸಂಗತಿಗಳಿವೆ ಎಂಬುದನ್ನು ಕೋರ್ಟ್ ಗುರುತಿಸಿದೆ. ನ್ಯಾ.ಚಂದ್ರಚೂಡ್ ಅವರ ತೀರ್ಪಿನ ಅಂಶಗಳಂತೂ ಇದರ ಮಾನ್ಯತೆಯನ್ನು ಪ್ರಶ್ನಿಸಿದೆ. ಆದರೂ, ಇದೊಂದು ‘ಐತಿಹಾಸಿಕ’ ತೀರ್ಪು ಎಂದು ಬಿಜೆಪಿ ಹೇಳುತ್ತಿದೆ.
ಭಾರತವೆಂಬ ದೇಶದಲ್ಲಿ ‘ಸ್ಟ್ರೀಮ್‍ಲೈನ್’ ಮಾಡಬೇಕಾದ್ದು ಬಡವರಿಗೆ ಸಿಗುವ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನಷ್ಟೇ ಎಂದು ಸರ್ಕಾರವು ತಿಳಿದಿದೆ. ಯಾವ ಕಲ್ಯಾಣ ಕಾರ್ಯಕ್ರಮಗಳು ಸಂವಿಧಾನದ ಕಲಂ 21ರ ‘ಘನತೆಯಿಂದ ಬದುಕುವ ಹಕ್ಕ’ನ್ನು ಖಾತರಿಗೊಳಿಸಲು ಕಡ್ಡಾಯವೋ, ರಾಜ್ಯ ನಿರ್ದೇಶನ ತತ್ವಗಳ ಹಲವು ಕಲಂಗಳನ್ನು ಖಾತರಿಗೊಳಿಸಲು ಕಡ್ಡಾಯವೋ, ಅವು ಸಾಧ್ಯವಾದಷ್ಟೂ ಎಲ್ಲರಿಗೂ ಸಿಗದಂತೆ ಮಾಡುವುದರಲ್ಲಿ ಅಧಿಕಾರಶಾಹಿಗೆ ಎಲ್ಲಿಲ್ಲದ ಮುತುವರ್ಜಿ. ದೇಶದ ಇಡೀ ಬೊಕ್ಕಸವೇ ಜನಸಾಮಾನ್ಯರಿಗೆ ನೀಡುವ ಸಬ್ಸಿಡಿಗಳಿಗೆ ಹೋಗುತ್ತಿದೆ ಎಂಬುದು ಅವರ ಅಳಲು. ವಾಸ್ತವದಲ್ಲಿ ಕನಿಷ್ಠ ಮಟ್ಟಕ್ಕಾದರೂ ಬದುಕಿ ದುಡಿಯಲು ಈ ಸಮುದಾಯಗಳಿಗೆ ಸರ್ಕಾರವು ಕೆಲವು ಸಬ್ಸಿಡಿಗಳನ್ನು ನೀಡುತ್ತಿದೆ. ಅದರ ಮೂಲಕ ಕಡಿಮೆ ಕೂಲಿಯಲ್ಲಿ ಉಳ್ಳವರ ಉತ್ಪಾದನಾ ಘಟಕಗಳಲ್ಲಿ ಈ ಜನರು ದುಡಿಯುತ್ತಿದ್ದಾರೆ. ಆ ಅರ್ಥದಲ್ಲಿ ಅಗ್ಗದ ಕೂಲಿಗಳನ್ನು ಸರಬರಾಜು ಮಾಡಲು ಬೇಕಾದಷ್ಟು ಸಬ್ಸಿಡಿಯಷ್ಟೇ ಜನರಿಗೆ ಸಿಗುತ್ತಿದೆ. ಘನತೆಯಿಂದ ಬದುಕಲು ಬೇಕಾದಷ್ಟು ಕಲ್ಯಾಣ ಕಾರ್ಯಕ್ರಮಗಳು ಈ ದೇಶದಲ್ಲಿ ಜಾರಿಯಾಗಿಯೇ ಇಲ್ಲ.
ಹೀಗಿರುವಾಗ, ಸರ್ಕಾರದ ಸವಲತ್ತುಗಳು ‘ಸೋರಿಕೆ’ಯಾಗಿ ಕಡುಬಡವರಿಗೆ ಮಾತ್ರ ಸಿಗಬೇಕಾದವು ‘ಅನರ್ಹ’ರಿಗೆ ಸಿಕ್ಕಿಬಿಡುತ್ತಿದೆಯೆಂದು ಇಂತಹವರು ವಾದಿಸುತ್ತಿದ್ದರು. ಅವರ ಕೈಗೆ ಅಸ್ತ್ರವಾಗಿ ಸಿಕ್ಕಿದ್ದು ತಂತ್ರಜ್ಞಾನ. ಅದನ್ನು ಬಳಸಿಕೊಂಡು ಸೃಷ್ಟಿಸಲಾದ ಆಧಾರ್ ಈಗ ಬಡವರ ಅನ್ನಕ್ಕೆ ಕತ್ತರಿ ಹಾಕುವುದಷ್ಟೇ ಅಲ್ಲದೇ, ದೇಶದ ಎಲ್ಲಾ ಜನರ ಮೇಲೂ ನಿಗಾ ಇಡುವ ‘ನಿಗಾ ಪ್ರಭುತ್ವ’ವನ್ನು ಆಧಾರ್ ಸೃಷ್ಟಿ ಮಾಡಲು ಹೊರಟಿತ್ತು. ಅದರ ಕುರಿತು ಎದ್ದ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ಗಮನಿಸಿದೆ ಮತ್ತು ಆ ಆತಂಕವನ್ನು ಒಂದಷ್ಟು ಮಟ್ಟಿಗೆ ಒಪ್ಪಿಕೊಂಡಿದೆ.
ಆದರೆ, ಆಧಾರ್‍ನ ಸಮಸ್ಯೆಯನ್ನು ನಿಜಕ್ಕೂ ಇಲ್ಲವಾಗಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯು ಮುಂದುವರೆಯುತ್ತದೆಯಾ? ನ್ಯಾ.ಚಂದ್ರಚೂಡ್ ಅವರ ತೀರ್ಪಿನ ಅಂಶಗಳ ಕುರಿತಾಗಿ ಯಾರಾದರೂ ಇನ್ನೂ ದೊಡ್ಡ ಪೀಠಕ್ಕೆ ಕೊಂಡೊಯ್ದರೆ ಆಗೇನಾದರೂ ಉಳಿದ ವಿಚಾರಗಳಿಗೂ ಒಂದು ಪರಿಹಾರ ಕಾಣಿಸುತ್ತದೆಯಾ? ಖಾಸಗಿತನವೂ ಜನರ ಮೂಲಭೂತ ಹಕ್ಕು ಮತ್ತು ಸಂವಿಧಾನದ ಕಲಂ 21ರ ಭಾಗ ಎಂದು ಹೇಳಿದ್ದರ ಸೂಕ್ತವಾದ ವ್ಯಾಖ್ಯಾನ ಮತ್ತು ಆಧಾರ್ ಹಾಗೂ ಡಿಜಿಟಲ್ ಗೌಪ್ಯತೆ ವಿಚಾರಕ್ಕೂ ಅನ್ವಯವಾಗುತ್ತದೆಯಾ ನೋಡಬೇಕು.
ಆದರೆ, ಒಂದಂತೂ ಸ್ಪಷ್ಟ. ಕಾಂಗ್ರೆಸ್ ಮತ್ತು ಬಿಜೆಪಿಯಂತಹ ಪಕ್ಷಗಳಿಂದ ಈ ವಿಚಾರದಲ್ಲಿ ಸೂಕ್ತ ಪರಿಹಾರ ನಿರೀಕ್ಷಿಸುವುದು ಮೂರ್ಖತನ. ಮೋದಿ ಜೇಟ್ಲಿಯವರ ಧೋರಣೆಯಂತೂ ಅಪಾಯಕಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...