Homeಅಂಕಣಗಳುಆಧಾರ್: ಆಷಾಢಭೂತಿ ಕಾಂಗ್ರೆಸ್, ಘಾತುಕ ಬಿಜೆಪಿ

ಆಧಾರ್: ಆಷಾಢಭೂತಿ ಕಾಂಗ್ರೆಸ್, ಘಾತುಕ ಬಿಜೆಪಿ

- Advertisement -
- Advertisement -

ಆಧಾರ್ ಕುರಿತ ಬಹುನಿರೀಕ್ಷಿತ ಸುಪ್ರೀಂಕೋರ್ಟ್ ತೀರ್ಪು ಇಂದು ಹೊರಬಿದ್ದಿದೆ. ಸಾವಿರಕ್ಕೂ ಹೆಚ್ಚು ಪುಟಗಳ ತೀರ್ಪಿನ ವಿವರ ನಾಳೆಯ ಹೊತ್ತಿಗೆ ಸಂಪೂರ್ಣವಾಗಿ ಲಭ್ಯವಾಗಲಿದೆ. ಈ ಸದ್ಯ ಮಾಧ್ಯಮಗಳು ಹೇಳುತ್ತಿರುವುದು – ಬ್ಯಾಂಕ್ ಖಾತೆಗೆ ಮತ್ತು ಮೊಬೈಲ್ ಫೋನ್‍ಗೆ ಇದನ್ನು ಲಿಂಕ್ ಮಾಡಬೇಕೆಂದೇನಿಲ್ಲವೆಂದು. ಆದರೆ, ಮೇಲ್ಮಧ್ಯಮ ವರ್ಗ ಮತ್ತು ಮೇಲ್ವರ್ಗದವರು ಮಾಡಬೇಕಾದ ಆದಾಯ ತೆರಿಗೆ ಸಲ್ಲಿಕೆ ಮತ್ತು ಪ್ಯಾನ್ ಕಾರ್ಡ್‍ಗೆ ಆಧಾರ್ ಕಡ್ಡಾಯ ಎಂಬುದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮಧ್ಯಮ ವರ್ಗ (ಕನಿಷ್ಠ ಗ್ಯಾಸ್ ಸಬ್ಸಿಡಿಗೆ ಆಧಾರ್ ಕಾರ್ಡ್ ಬೇಕು) ಹಾಗೂ ಅದಕ್ಕಿಂತ ಕೆಳಗಿನ ಸಮುದಾಯಗಳಿಗೆ ತಲುಪುತ್ತಿರುವ ಸರ್ಕಾರೀ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ ಮಾಡುವುದನ್ನೂ ಎತ್ತಿ ಹಿಡಿದಿದೆ. ಮಕ್ಕಳನ್ನು ಹೊರತುಪಡಿಸಿ, ದೇಶದ ಎಲ್ಲಾ ಜನರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆಧಾರ್ ಕಡ್ಡಾಯವೇ ಆಗಿರುತ್ತದೆ. ಇದನ್ನು ಖಾಸಗಿ ಕಂಪೆನಿಗಳು ಕೇಳುವಂತಿಲ್ಲವೆಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಡಿಜಿಟಲ್ ತಂತ್ರಜ್ಞಾನದ ಮೂಲಕ ಈಗಾಗಲೇ ಪ್ರತಿಯೊಬ್ಬ ವ್ಯಕ್ತಿಯ ಆನ್‍ಲೈನ್ ವ್ಯವಹಾರಗಳ ಮೂಲಕ ಅವರ ಇಷ್ಟಾನಿಷ್ಟಗಳನ್ನು, ವ್ಯವಹಾರಗಳ ಮೇಲೆ ನಿಗಾ ಇಟ್ಟು ಅವರ ವಿವರಗಳನ್ನು ಖಾಸಗಿಯವರು ಪಡೆದುಕೊಂಡಾಗಿದೆ. ಸರ್ಕಾರವು ಬಯಸಿದಲ್ಲಿ ಎಲ್ಲರ ಮೇಲೆ ನಿಗಾ ಇಡಲು ಸಾಧ್ಯವಾಗುವಂತೆ ಆಧಾರ್ ಕಡ್ಡಾಯವೂ ಆಗಿರುತ್ತದೆ. ನಿಗಾ ಇಡಲು ಆಧಾರ್ ಸಹಾ ಬೇಕಿಲ್ಲ; ಮೊಬೈಲ್ ಫೋನೇ ಸಾಕಾಗುತ್ತದೆ. ಆ ಅರ್ಥದಲ್ಲಿ ಈ ತೀರ್ಪಿನಿಂದ ಮಹತ್ತರವಾದುದೇನೋ ಸಾಧನೆಯಾದಂತೆ ಕಾಣುತ್ತಿಲ್ಲ. ಇದಕ್ಕೂ ಹಿಂದೆ ಸುಪ್ರೀಂಕೋರ್ಟ್ ಖಾಸಗಿತನದ ರಕ್ಷಣೆಯ ಕುರಿತು ನೀಡಿದ ತೀರ್ಪನ್ನು ಇದರಿಂದ ಆಧಾರ್ ವಿಚಾರದಲ್ಲಿ ಭಾಗಶಃ (ಖಾಸಗಿ ವ್ಯಕ್ತಿಗಳ ಕೈಗೆ ಆಧಾರ್ ವಿವರಗಳು ಹೋಗದಂತೆ ತಡೆಯುವ ಮೂಲಕ) ಅಷ್ಟೇ ಅನುಷ್ಠಾನ ಮಾಡಿದಂತಾಗುತ್ತದೆ.
ಈಗಾಗಲೇ ಖಾಸಗಿ ಕಂಪೆನಿಗಳು ಸಂಗ್ರಹಿಸಿಟ್ಟುಕೊಂಡಿರುವ ಆಧಾರ್ ಮಾಹಿತಿಯನ್ನು ನಾಶ ಮಾಡಬೇಕೆಂದು ಹೇಳಿದಾಗ್ಗ್ಯೂ ಆ ಪ್ರಕ್ರಿಯೆಯನ್ನು ಯಾರು, ಹೇಗೆ ಖಾತರಿಗೊಳಿಸುತ್ತಾರೆಂಬ ವಿವರಗಳು ಇನ್ನಷ್ಟೇ ಹೊರಬೀಳಬೇಕಿದೆ.
ಮುಖ್ಯ ನ್ಯಾಯಾಧೀಶ ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಎ.ಕೆ.ಸಿಕ್ರಿ, ನ್ಯಾ.ಎ.ಎಂ.ಖಾನ್ವಿಲ್ಕರ್, ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಅಶೋಕ್ ಭೂಷಣ್‍ರಿದ್ದ ನ್ಯಾಯಪೀಠದಲ್ಲಿ ನ್ಯಾ.ಚಂದ್ರಚೂಡ್‍ರು ಮಾತ್ರ ತುಂಬಾ ಕಠಿಣ ಮಾತುಗಳಲ್ಲಿ ಕೆಲವು ಅಂಶಗಳನ್ನು ತೆರೆದಿಟ್ಟಿದ್ದಾರೆ. ಅವರೂ ಸಹಾ ಆಧಾರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಬೇಕು ಎಂದು ಹೇಳಿರದಿದ್ದರೂ, ಆಧಾರ್ ಕಡ್ಡಾಯವಾಗುವುದರಿಂದ ಆಗುವ ಸಮಸ್ಯೆಗಳನ್ನು ಎತ್ತಿ ಹೇಳಿದ್ದಾರೆ. ಇದನ್ನು ಜಾರಿಗೆ ತಂದ ಪ್ರಕ್ರಿಯೆಯು ಅಸಾಂವಿಧಾನಿಕ ಎಂದೂ ಸ್ಪಷ್ಟವಾಗಿ ಮುಂದಿಟ್ಟಿದ್ದಾರೆ. ಈ ರೀತಿಯ ಅಲ್ಪಸಂಖ್ಯಾತ ತೀರ್ಪು ಬಂದಾಗ ಅದನ್ನು ಹಿಡಿದು, ಇನ್ನೂ ದೊಡ್ಡ ಪೀಠ ರಚನೆಗೆ ಕೇಳಬಹುದಾಗಿದೆ. ಅದನ್ನೇ ಮಾಡುತ್ತೇವೆಂದು ಕಾಂಗ್ರೆಸ್‍ನ ನಾಯಕ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಈಗಾಗಲೇ ಘೋಷಿಸಿದ್ದಾರೆ.
ಇಲ್ಲಿ ಆಶ್ಚರ್ಯವೆಂದರೆ, ಸದರಿ ಆಧಾರ್‍ಅನ್ನು ಮೊದಲು ತರಲು ಹೊರಟಿದ್ದೇ ಕಾಂಗ್ರೆಸ್ ಪಕ್ಷ. ಆದರೆ, ಇಂದು ರಾಹುಲ್‍ಗಾಂಧಿಯಾದಿಯಾಗಿ ಎಲ್ಲಾ ಕಾಂಗ್ರೆಸ್ಸಿಗರೂ ಈ ತೀರ್ಪನ್ನು ಸ್ವಾಗತಿಸಿದ್ದಾರೆ. ಅವರ ಪ್ರಕಾರ ಇದು ಯುಪಿಎ ತರಲು ಹೊರಟಿದ್ದ ಆಧಾರ್ ಪ್ರಕ್ರಿಯೆಗೆ ಸಂದ ಜಯ. ವಾಸ್ತವದಲ್ಲಿ ನಂದನ್ ನಿಲೇಕಣಿ ನೇತೃತ್ವದಲ್ಲಿ ಇದರ ಪರಿಕಲ್ಪನೆ ರೂಪುಗೊಂಡಾಗಲೇ ಇಂದು ಎನ್‍ಡಿಎ ಯಾವ ರೀತಿಯಲ್ಲಿ ಜಾರಿ ಮಾಡುತ್ತಿದೆಯೋ ಆ ಎಲ್ಲಾ ಸಾಧ್ಯತೆಗಳು/ಅಪಾಯಗಳು ಇದ್ದೇ ಇತ್ತು. ಜಾರಿಗೆ ತರುವ ಪ್ರಕ್ರಿಯೆಯನ್ನು ಸಂಸತ್ತಿನೊಳಗೆ ಇನ್ನೂ ‘ಪ್ರಜಾತಾಂತ್ರಿಕ’ಗೊಳಿಸುವ ಕೆಲಸವನ್ನಷ್ಟೇ ಕಾಂಗ್ರೆಸ್ ಮಾಡಬಯಸಿತ್ತು ಮತ್ತು ಹಂತಹಂತವಾಗಿ ಅದನ್ನು ಹೇರಲಾಗುತ್ತಿತ್ತು. ಆದರೆ, ಇಂದು ತನ್ನ ರೀತಿಯೇ ಬೇರೆ ಎಂದು ಅದು ಹೇಳುತ್ತಿದೆ. ಇದು ಕಾಂಗ್ರೆಸ್‍ನ ಆಷಾಢಭೂತಿತನಕ್ಕೆ ಸಾಕ್ಷಿ.
ಅದೇ ಹೊತ್ತಿನಲ್ಲಿ ಬಿಜೆಪಿಯಂತೂ ಈ ವಿಚಾರದಲ್ಲಿ ಭಾರೀ ದೊಡ್ಡ ಯುಟರ್ನ್ ಮಾಡಿದೆ. ಆಧಾರ್ ತರುವುದಕ್ಕೇ ಅದು ವಿರೋಧ ವ್ಯಕ್ತಪಡಿಸಿತ್ತು. ಆಧಾರ್ ಜನಕ ನಿಲೇಕಣಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದಾಗ, ಅವರನ್ನು ವಿರೋಧಿಸಲೂ ಇದನ್ನೊಂದು ಅಸ್ತ್ರವಾಗಿ ಮಾಡಿಕೊಂಡಿತ್ತು. ನಂತರ ಸುಲಭವಾಗಿ ಖಾಸಗಿಯವರ ಕೈಗೂ ಆಧಾರ್ ಸಿಗುವ ರೀತಿ ಮಾಡಿ ಜಾರಿ ಮಾಡಲು ಹೊರಟಿದ್ದು ಇದೇ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ.
ಇದೀಗ ಒಂದೆರಡು ಅಂಶಗಳನ್ನು ಹೊರತುಪಡಿಸಿ, ಉಳಿದಂತೆ ಆಧಾರ್‍ಅನ್ನು ಕೋರ್ಟ್ ಎತ್ತಿಹಿಡಿದಿದ್ದರೂ, ಒಟ್ಟಾರೆ ಇದರಲ್ಲಿ ಹಲವು ಅಪಾಯಕಾರಿ ಸಂಗತಿಗಳಿವೆ ಎಂಬುದನ್ನು ಕೋರ್ಟ್ ಗುರುತಿಸಿದೆ. ನ್ಯಾ.ಚಂದ್ರಚೂಡ್ ಅವರ ತೀರ್ಪಿನ ಅಂಶಗಳಂತೂ ಇದರ ಮಾನ್ಯತೆಯನ್ನು ಪ್ರಶ್ನಿಸಿದೆ. ಆದರೂ, ಇದೊಂದು ‘ಐತಿಹಾಸಿಕ’ ತೀರ್ಪು ಎಂದು ಬಿಜೆಪಿ ಹೇಳುತ್ತಿದೆ.
ಭಾರತವೆಂಬ ದೇಶದಲ್ಲಿ ‘ಸ್ಟ್ರೀಮ್‍ಲೈನ್’ ಮಾಡಬೇಕಾದ್ದು ಬಡವರಿಗೆ ಸಿಗುವ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನಷ್ಟೇ ಎಂದು ಸರ್ಕಾರವು ತಿಳಿದಿದೆ. ಯಾವ ಕಲ್ಯಾಣ ಕಾರ್ಯಕ್ರಮಗಳು ಸಂವಿಧಾನದ ಕಲಂ 21ರ ‘ಘನತೆಯಿಂದ ಬದುಕುವ ಹಕ್ಕ’ನ್ನು ಖಾತರಿಗೊಳಿಸಲು ಕಡ್ಡಾಯವೋ, ರಾಜ್ಯ ನಿರ್ದೇಶನ ತತ್ವಗಳ ಹಲವು ಕಲಂಗಳನ್ನು ಖಾತರಿಗೊಳಿಸಲು ಕಡ್ಡಾಯವೋ, ಅವು ಸಾಧ್ಯವಾದಷ್ಟೂ ಎಲ್ಲರಿಗೂ ಸಿಗದಂತೆ ಮಾಡುವುದರಲ್ಲಿ ಅಧಿಕಾರಶಾಹಿಗೆ ಎಲ್ಲಿಲ್ಲದ ಮುತುವರ್ಜಿ. ದೇಶದ ಇಡೀ ಬೊಕ್ಕಸವೇ ಜನಸಾಮಾನ್ಯರಿಗೆ ನೀಡುವ ಸಬ್ಸಿಡಿಗಳಿಗೆ ಹೋಗುತ್ತಿದೆ ಎಂಬುದು ಅವರ ಅಳಲು. ವಾಸ್ತವದಲ್ಲಿ ಕನಿಷ್ಠ ಮಟ್ಟಕ್ಕಾದರೂ ಬದುಕಿ ದುಡಿಯಲು ಈ ಸಮುದಾಯಗಳಿಗೆ ಸರ್ಕಾರವು ಕೆಲವು ಸಬ್ಸಿಡಿಗಳನ್ನು ನೀಡುತ್ತಿದೆ. ಅದರ ಮೂಲಕ ಕಡಿಮೆ ಕೂಲಿಯಲ್ಲಿ ಉಳ್ಳವರ ಉತ್ಪಾದನಾ ಘಟಕಗಳಲ್ಲಿ ಈ ಜನರು ದುಡಿಯುತ್ತಿದ್ದಾರೆ. ಆ ಅರ್ಥದಲ್ಲಿ ಅಗ್ಗದ ಕೂಲಿಗಳನ್ನು ಸರಬರಾಜು ಮಾಡಲು ಬೇಕಾದಷ್ಟು ಸಬ್ಸಿಡಿಯಷ್ಟೇ ಜನರಿಗೆ ಸಿಗುತ್ತಿದೆ. ಘನತೆಯಿಂದ ಬದುಕಲು ಬೇಕಾದಷ್ಟು ಕಲ್ಯಾಣ ಕಾರ್ಯಕ್ರಮಗಳು ಈ ದೇಶದಲ್ಲಿ ಜಾರಿಯಾಗಿಯೇ ಇಲ್ಲ.
ಹೀಗಿರುವಾಗ, ಸರ್ಕಾರದ ಸವಲತ್ತುಗಳು ‘ಸೋರಿಕೆ’ಯಾಗಿ ಕಡುಬಡವರಿಗೆ ಮಾತ್ರ ಸಿಗಬೇಕಾದವು ‘ಅನರ್ಹ’ರಿಗೆ ಸಿಕ್ಕಿಬಿಡುತ್ತಿದೆಯೆಂದು ಇಂತಹವರು ವಾದಿಸುತ್ತಿದ್ದರು. ಅವರ ಕೈಗೆ ಅಸ್ತ್ರವಾಗಿ ಸಿಕ್ಕಿದ್ದು ತಂತ್ರಜ್ಞಾನ. ಅದನ್ನು ಬಳಸಿಕೊಂಡು ಸೃಷ್ಟಿಸಲಾದ ಆಧಾರ್ ಈಗ ಬಡವರ ಅನ್ನಕ್ಕೆ ಕತ್ತರಿ ಹಾಕುವುದಷ್ಟೇ ಅಲ್ಲದೇ, ದೇಶದ ಎಲ್ಲಾ ಜನರ ಮೇಲೂ ನಿಗಾ ಇಡುವ ‘ನಿಗಾ ಪ್ರಭುತ್ವ’ವನ್ನು ಆಧಾರ್ ಸೃಷ್ಟಿ ಮಾಡಲು ಹೊರಟಿತ್ತು. ಅದರ ಕುರಿತು ಎದ್ದ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ಗಮನಿಸಿದೆ ಮತ್ತು ಆ ಆತಂಕವನ್ನು ಒಂದಷ್ಟು ಮಟ್ಟಿಗೆ ಒಪ್ಪಿಕೊಂಡಿದೆ.
ಆದರೆ, ಆಧಾರ್‍ನ ಸಮಸ್ಯೆಯನ್ನು ನಿಜಕ್ಕೂ ಇಲ್ಲವಾಗಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯು ಮುಂದುವರೆಯುತ್ತದೆಯಾ? ನ್ಯಾ.ಚಂದ್ರಚೂಡ್ ಅವರ ತೀರ್ಪಿನ ಅಂಶಗಳ ಕುರಿತಾಗಿ ಯಾರಾದರೂ ಇನ್ನೂ ದೊಡ್ಡ ಪೀಠಕ್ಕೆ ಕೊಂಡೊಯ್ದರೆ ಆಗೇನಾದರೂ ಉಳಿದ ವಿಚಾರಗಳಿಗೂ ಒಂದು ಪರಿಹಾರ ಕಾಣಿಸುತ್ತದೆಯಾ? ಖಾಸಗಿತನವೂ ಜನರ ಮೂಲಭೂತ ಹಕ್ಕು ಮತ್ತು ಸಂವಿಧಾನದ ಕಲಂ 21ರ ಭಾಗ ಎಂದು ಹೇಳಿದ್ದರ ಸೂಕ್ತವಾದ ವ್ಯಾಖ್ಯಾನ ಮತ್ತು ಆಧಾರ್ ಹಾಗೂ ಡಿಜಿಟಲ್ ಗೌಪ್ಯತೆ ವಿಚಾರಕ್ಕೂ ಅನ್ವಯವಾಗುತ್ತದೆಯಾ ನೋಡಬೇಕು.
ಆದರೆ, ಒಂದಂತೂ ಸ್ಪಷ್ಟ. ಕಾಂಗ್ರೆಸ್ ಮತ್ತು ಬಿಜೆಪಿಯಂತಹ ಪಕ್ಷಗಳಿಂದ ಈ ವಿಚಾರದಲ್ಲಿ ಸೂಕ್ತ ಪರಿಹಾರ ನಿರೀಕ್ಷಿಸುವುದು ಮೂರ್ಖತನ. ಮೋದಿ ಜೇಟ್ಲಿಯವರ ಧೋರಣೆಯಂತೂ ಅಪಾಯಕಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...