Homeಅಂಕಣಗಳುಆಧಾರ್: ಆಷಾಢಭೂತಿ ಕಾಂಗ್ರೆಸ್, ಘಾತುಕ ಬಿಜೆಪಿ

ಆಧಾರ್: ಆಷಾಢಭೂತಿ ಕಾಂಗ್ರೆಸ್, ಘಾತುಕ ಬಿಜೆಪಿ

- Advertisement -
- Advertisement -

ಆಧಾರ್ ಕುರಿತ ಬಹುನಿರೀಕ್ಷಿತ ಸುಪ್ರೀಂಕೋರ್ಟ್ ತೀರ್ಪು ಇಂದು ಹೊರಬಿದ್ದಿದೆ. ಸಾವಿರಕ್ಕೂ ಹೆಚ್ಚು ಪುಟಗಳ ತೀರ್ಪಿನ ವಿವರ ನಾಳೆಯ ಹೊತ್ತಿಗೆ ಸಂಪೂರ್ಣವಾಗಿ ಲಭ್ಯವಾಗಲಿದೆ. ಈ ಸದ್ಯ ಮಾಧ್ಯಮಗಳು ಹೇಳುತ್ತಿರುವುದು – ಬ್ಯಾಂಕ್ ಖಾತೆಗೆ ಮತ್ತು ಮೊಬೈಲ್ ಫೋನ್‍ಗೆ ಇದನ್ನು ಲಿಂಕ್ ಮಾಡಬೇಕೆಂದೇನಿಲ್ಲವೆಂದು. ಆದರೆ, ಮೇಲ್ಮಧ್ಯಮ ವರ್ಗ ಮತ್ತು ಮೇಲ್ವರ್ಗದವರು ಮಾಡಬೇಕಾದ ಆದಾಯ ತೆರಿಗೆ ಸಲ್ಲಿಕೆ ಮತ್ತು ಪ್ಯಾನ್ ಕಾರ್ಡ್‍ಗೆ ಆಧಾರ್ ಕಡ್ಡಾಯ ಎಂಬುದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮಧ್ಯಮ ವರ್ಗ (ಕನಿಷ್ಠ ಗ್ಯಾಸ್ ಸಬ್ಸಿಡಿಗೆ ಆಧಾರ್ ಕಾರ್ಡ್ ಬೇಕು) ಹಾಗೂ ಅದಕ್ಕಿಂತ ಕೆಳಗಿನ ಸಮುದಾಯಗಳಿಗೆ ತಲುಪುತ್ತಿರುವ ಸರ್ಕಾರೀ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ ಮಾಡುವುದನ್ನೂ ಎತ್ತಿ ಹಿಡಿದಿದೆ. ಮಕ್ಕಳನ್ನು ಹೊರತುಪಡಿಸಿ, ದೇಶದ ಎಲ್ಲಾ ಜನರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆಧಾರ್ ಕಡ್ಡಾಯವೇ ಆಗಿರುತ್ತದೆ. ಇದನ್ನು ಖಾಸಗಿ ಕಂಪೆನಿಗಳು ಕೇಳುವಂತಿಲ್ಲವೆಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಡಿಜಿಟಲ್ ತಂತ್ರಜ್ಞಾನದ ಮೂಲಕ ಈಗಾಗಲೇ ಪ್ರತಿಯೊಬ್ಬ ವ್ಯಕ್ತಿಯ ಆನ್‍ಲೈನ್ ವ್ಯವಹಾರಗಳ ಮೂಲಕ ಅವರ ಇಷ್ಟಾನಿಷ್ಟಗಳನ್ನು, ವ್ಯವಹಾರಗಳ ಮೇಲೆ ನಿಗಾ ಇಟ್ಟು ಅವರ ವಿವರಗಳನ್ನು ಖಾಸಗಿಯವರು ಪಡೆದುಕೊಂಡಾಗಿದೆ. ಸರ್ಕಾರವು ಬಯಸಿದಲ್ಲಿ ಎಲ್ಲರ ಮೇಲೆ ನಿಗಾ ಇಡಲು ಸಾಧ್ಯವಾಗುವಂತೆ ಆಧಾರ್ ಕಡ್ಡಾಯವೂ ಆಗಿರುತ್ತದೆ. ನಿಗಾ ಇಡಲು ಆಧಾರ್ ಸಹಾ ಬೇಕಿಲ್ಲ; ಮೊಬೈಲ್ ಫೋನೇ ಸಾಕಾಗುತ್ತದೆ. ಆ ಅರ್ಥದಲ್ಲಿ ಈ ತೀರ್ಪಿನಿಂದ ಮಹತ್ತರವಾದುದೇನೋ ಸಾಧನೆಯಾದಂತೆ ಕಾಣುತ್ತಿಲ್ಲ. ಇದಕ್ಕೂ ಹಿಂದೆ ಸುಪ್ರೀಂಕೋರ್ಟ್ ಖಾಸಗಿತನದ ರಕ್ಷಣೆಯ ಕುರಿತು ನೀಡಿದ ತೀರ್ಪನ್ನು ಇದರಿಂದ ಆಧಾರ್ ವಿಚಾರದಲ್ಲಿ ಭಾಗಶಃ (ಖಾಸಗಿ ವ್ಯಕ್ತಿಗಳ ಕೈಗೆ ಆಧಾರ್ ವಿವರಗಳು ಹೋಗದಂತೆ ತಡೆಯುವ ಮೂಲಕ) ಅಷ್ಟೇ ಅನುಷ್ಠಾನ ಮಾಡಿದಂತಾಗುತ್ತದೆ.
ಈಗಾಗಲೇ ಖಾಸಗಿ ಕಂಪೆನಿಗಳು ಸಂಗ್ರಹಿಸಿಟ್ಟುಕೊಂಡಿರುವ ಆಧಾರ್ ಮಾಹಿತಿಯನ್ನು ನಾಶ ಮಾಡಬೇಕೆಂದು ಹೇಳಿದಾಗ್ಗ್ಯೂ ಆ ಪ್ರಕ್ರಿಯೆಯನ್ನು ಯಾರು, ಹೇಗೆ ಖಾತರಿಗೊಳಿಸುತ್ತಾರೆಂಬ ವಿವರಗಳು ಇನ್ನಷ್ಟೇ ಹೊರಬೀಳಬೇಕಿದೆ.
ಮುಖ್ಯ ನ್ಯಾಯಾಧೀಶ ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಎ.ಕೆ.ಸಿಕ್ರಿ, ನ್ಯಾ.ಎ.ಎಂ.ಖಾನ್ವಿಲ್ಕರ್, ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಅಶೋಕ್ ಭೂಷಣ್‍ರಿದ್ದ ನ್ಯಾಯಪೀಠದಲ್ಲಿ ನ್ಯಾ.ಚಂದ್ರಚೂಡ್‍ರು ಮಾತ್ರ ತುಂಬಾ ಕಠಿಣ ಮಾತುಗಳಲ್ಲಿ ಕೆಲವು ಅಂಶಗಳನ್ನು ತೆರೆದಿಟ್ಟಿದ್ದಾರೆ. ಅವರೂ ಸಹಾ ಆಧಾರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಬೇಕು ಎಂದು ಹೇಳಿರದಿದ್ದರೂ, ಆಧಾರ್ ಕಡ್ಡಾಯವಾಗುವುದರಿಂದ ಆಗುವ ಸಮಸ್ಯೆಗಳನ್ನು ಎತ್ತಿ ಹೇಳಿದ್ದಾರೆ. ಇದನ್ನು ಜಾರಿಗೆ ತಂದ ಪ್ರಕ್ರಿಯೆಯು ಅಸಾಂವಿಧಾನಿಕ ಎಂದೂ ಸ್ಪಷ್ಟವಾಗಿ ಮುಂದಿಟ್ಟಿದ್ದಾರೆ. ಈ ರೀತಿಯ ಅಲ್ಪಸಂಖ್ಯಾತ ತೀರ್ಪು ಬಂದಾಗ ಅದನ್ನು ಹಿಡಿದು, ಇನ್ನೂ ದೊಡ್ಡ ಪೀಠ ರಚನೆಗೆ ಕೇಳಬಹುದಾಗಿದೆ. ಅದನ್ನೇ ಮಾಡುತ್ತೇವೆಂದು ಕಾಂಗ್ರೆಸ್‍ನ ನಾಯಕ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಈಗಾಗಲೇ ಘೋಷಿಸಿದ್ದಾರೆ.
ಇಲ್ಲಿ ಆಶ್ಚರ್ಯವೆಂದರೆ, ಸದರಿ ಆಧಾರ್‍ಅನ್ನು ಮೊದಲು ತರಲು ಹೊರಟಿದ್ದೇ ಕಾಂಗ್ರೆಸ್ ಪಕ್ಷ. ಆದರೆ, ಇಂದು ರಾಹುಲ್‍ಗಾಂಧಿಯಾದಿಯಾಗಿ ಎಲ್ಲಾ ಕಾಂಗ್ರೆಸ್ಸಿಗರೂ ಈ ತೀರ್ಪನ್ನು ಸ್ವಾಗತಿಸಿದ್ದಾರೆ. ಅವರ ಪ್ರಕಾರ ಇದು ಯುಪಿಎ ತರಲು ಹೊರಟಿದ್ದ ಆಧಾರ್ ಪ್ರಕ್ರಿಯೆಗೆ ಸಂದ ಜಯ. ವಾಸ್ತವದಲ್ಲಿ ನಂದನ್ ನಿಲೇಕಣಿ ನೇತೃತ್ವದಲ್ಲಿ ಇದರ ಪರಿಕಲ್ಪನೆ ರೂಪುಗೊಂಡಾಗಲೇ ಇಂದು ಎನ್‍ಡಿಎ ಯಾವ ರೀತಿಯಲ್ಲಿ ಜಾರಿ ಮಾಡುತ್ತಿದೆಯೋ ಆ ಎಲ್ಲಾ ಸಾಧ್ಯತೆಗಳು/ಅಪಾಯಗಳು ಇದ್ದೇ ಇತ್ತು. ಜಾರಿಗೆ ತರುವ ಪ್ರಕ್ರಿಯೆಯನ್ನು ಸಂಸತ್ತಿನೊಳಗೆ ಇನ್ನೂ ‘ಪ್ರಜಾತಾಂತ್ರಿಕ’ಗೊಳಿಸುವ ಕೆಲಸವನ್ನಷ್ಟೇ ಕಾಂಗ್ರೆಸ್ ಮಾಡಬಯಸಿತ್ತು ಮತ್ತು ಹಂತಹಂತವಾಗಿ ಅದನ್ನು ಹೇರಲಾಗುತ್ತಿತ್ತು. ಆದರೆ, ಇಂದು ತನ್ನ ರೀತಿಯೇ ಬೇರೆ ಎಂದು ಅದು ಹೇಳುತ್ತಿದೆ. ಇದು ಕಾಂಗ್ರೆಸ್‍ನ ಆಷಾಢಭೂತಿತನಕ್ಕೆ ಸಾಕ್ಷಿ.
ಅದೇ ಹೊತ್ತಿನಲ್ಲಿ ಬಿಜೆಪಿಯಂತೂ ಈ ವಿಚಾರದಲ್ಲಿ ಭಾರೀ ದೊಡ್ಡ ಯುಟರ್ನ್ ಮಾಡಿದೆ. ಆಧಾರ್ ತರುವುದಕ್ಕೇ ಅದು ವಿರೋಧ ವ್ಯಕ್ತಪಡಿಸಿತ್ತು. ಆಧಾರ್ ಜನಕ ನಿಲೇಕಣಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದಾಗ, ಅವರನ್ನು ವಿರೋಧಿಸಲೂ ಇದನ್ನೊಂದು ಅಸ್ತ್ರವಾಗಿ ಮಾಡಿಕೊಂಡಿತ್ತು. ನಂತರ ಸುಲಭವಾಗಿ ಖಾಸಗಿಯವರ ಕೈಗೂ ಆಧಾರ್ ಸಿಗುವ ರೀತಿ ಮಾಡಿ ಜಾರಿ ಮಾಡಲು ಹೊರಟಿದ್ದು ಇದೇ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ.
ಇದೀಗ ಒಂದೆರಡು ಅಂಶಗಳನ್ನು ಹೊರತುಪಡಿಸಿ, ಉಳಿದಂತೆ ಆಧಾರ್‍ಅನ್ನು ಕೋರ್ಟ್ ಎತ್ತಿಹಿಡಿದಿದ್ದರೂ, ಒಟ್ಟಾರೆ ಇದರಲ್ಲಿ ಹಲವು ಅಪಾಯಕಾರಿ ಸಂಗತಿಗಳಿವೆ ಎಂಬುದನ್ನು ಕೋರ್ಟ್ ಗುರುತಿಸಿದೆ. ನ್ಯಾ.ಚಂದ್ರಚೂಡ್ ಅವರ ತೀರ್ಪಿನ ಅಂಶಗಳಂತೂ ಇದರ ಮಾನ್ಯತೆಯನ್ನು ಪ್ರಶ್ನಿಸಿದೆ. ಆದರೂ, ಇದೊಂದು ‘ಐತಿಹಾಸಿಕ’ ತೀರ್ಪು ಎಂದು ಬಿಜೆಪಿ ಹೇಳುತ್ತಿದೆ.
ಭಾರತವೆಂಬ ದೇಶದಲ್ಲಿ ‘ಸ್ಟ್ರೀಮ್‍ಲೈನ್’ ಮಾಡಬೇಕಾದ್ದು ಬಡವರಿಗೆ ಸಿಗುವ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನಷ್ಟೇ ಎಂದು ಸರ್ಕಾರವು ತಿಳಿದಿದೆ. ಯಾವ ಕಲ್ಯಾಣ ಕಾರ್ಯಕ್ರಮಗಳು ಸಂವಿಧಾನದ ಕಲಂ 21ರ ‘ಘನತೆಯಿಂದ ಬದುಕುವ ಹಕ್ಕ’ನ್ನು ಖಾತರಿಗೊಳಿಸಲು ಕಡ್ಡಾಯವೋ, ರಾಜ್ಯ ನಿರ್ದೇಶನ ತತ್ವಗಳ ಹಲವು ಕಲಂಗಳನ್ನು ಖಾತರಿಗೊಳಿಸಲು ಕಡ್ಡಾಯವೋ, ಅವು ಸಾಧ್ಯವಾದಷ್ಟೂ ಎಲ್ಲರಿಗೂ ಸಿಗದಂತೆ ಮಾಡುವುದರಲ್ಲಿ ಅಧಿಕಾರಶಾಹಿಗೆ ಎಲ್ಲಿಲ್ಲದ ಮುತುವರ್ಜಿ. ದೇಶದ ಇಡೀ ಬೊಕ್ಕಸವೇ ಜನಸಾಮಾನ್ಯರಿಗೆ ನೀಡುವ ಸಬ್ಸಿಡಿಗಳಿಗೆ ಹೋಗುತ್ತಿದೆ ಎಂಬುದು ಅವರ ಅಳಲು. ವಾಸ್ತವದಲ್ಲಿ ಕನಿಷ್ಠ ಮಟ್ಟಕ್ಕಾದರೂ ಬದುಕಿ ದುಡಿಯಲು ಈ ಸಮುದಾಯಗಳಿಗೆ ಸರ್ಕಾರವು ಕೆಲವು ಸಬ್ಸಿಡಿಗಳನ್ನು ನೀಡುತ್ತಿದೆ. ಅದರ ಮೂಲಕ ಕಡಿಮೆ ಕೂಲಿಯಲ್ಲಿ ಉಳ್ಳವರ ಉತ್ಪಾದನಾ ಘಟಕಗಳಲ್ಲಿ ಈ ಜನರು ದುಡಿಯುತ್ತಿದ್ದಾರೆ. ಆ ಅರ್ಥದಲ್ಲಿ ಅಗ್ಗದ ಕೂಲಿಗಳನ್ನು ಸರಬರಾಜು ಮಾಡಲು ಬೇಕಾದಷ್ಟು ಸಬ್ಸಿಡಿಯಷ್ಟೇ ಜನರಿಗೆ ಸಿಗುತ್ತಿದೆ. ಘನತೆಯಿಂದ ಬದುಕಲು ಬೇಕಾದಷ್ಟು ಕಲ್ಯಾಣ ಕಾರ್ಯಕ್ರಮಗಳು ಈ ದೇಶದಲ್ಲಿ ಜಾರಿಯಾಗಿಯೇ ಇಲ್ಲ.
ಹೀಗಿರುವಾಗ, ಸರ್ಕಾರದ ಸವಲತ್ತುಗಳು ‘ಸೋರಿಕೆ’ಯಾಗಿ ಕಡುಬಡವರಿಗೆ ಮಾತ್ರ ಸಿಗಬೇಕಾದವು ‘ಅನರ್ಹ’ರಿಗೆ ಸಿಕ್ಕಿಬಿಡುತ್ತಿದೆಯೆಂದು ಇಂತಹವರು ವಾದಿಸುತ್ತಿದ್ದರು. ಅವರ ಕೈಗೆ ಅಸ್ತ್ರವಾಗಿ ಸಿಕ್ಕಿದ್ದು ತಂತ್ರಜ್ಞಾನ. ಅದನ್ನು ಬಳಸಿಕೊಂಡು ಸೃಷ್ಟಿಸಲಾದ ಆಧಾರ್ ಈಗ ಬಡವರ ಅನ್ನಕ್ಕೆ ಕತ್ತರಿ ಹಾಕುವುದಷ್ಟೇ ಅಲ್ಲದೇ, ದೇಶದ ಎಲ್ಲಾ ಜನರ ಮೇಲೂ ನಿಗಾ ಇಡುವ ‘ನಿಗಾ ಪ್ರಭುತ್ವ’ವನ್ನು ಆಧಾರ್ ಸೃಷ್ಟಿ ಮಾಡಲು ಹೊರಟಿತ್ತು. ಅದರ ಕುರಿತು ಎದ್ದ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ಗಮನಿಸಿದೆ ಮತ್ತು ಆ ಆತಂಕವನ್ನು ಒಂದಷ್ಟು ಮಟ್ಟಿಗೆ ಒಪ್ಪಿಕೊಂಡಿದೆ.
ಆದರೆ, ಆಧಾರ್‍ನ ಸಮಸ್ಯೆಯನ್ನು ನಿಜಕ್ಕೂ ಇಲ್ಲವಾಗಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯು ಮುಂದುವರೆಯುತ್ತದೆಯಾ? ನ್ಯಾ.ಚಂದ್ರಚೂಡ್ ಅವರ ತೀರ್ಪಿನ ಅಂಶಗಳ ಕುರಿತಾಗಿ ಯಾರಾದರೂ ಇನ್ನೂ ದೊಡ್ಡ ಪೀಠಕ್ಕೆ ಕೊಂಡೊಯ್ದರೆ ಆಗೇನಾದರೂ ಉಳಿದ ವಿಚಾರಗಳಿಗೂ ಒಂದು ಪರಿಹಾರ ಕಾಣಿಸುತ್ತದೆಯಾ? ಖಾಸಗಿತನವೂ ಜನರ ಮೂಲಭೂತ ಹಕ್ಕು ಮತ್ತು ಸಂವಿಧಾನದ ಕಲಂ 21ರ ಭಾಗ ಎಂದು ಹೇಳಿದ್ದರ ಸೂಕ್ತವಾದ ವ್ಯಾಖ್ಯಾನ ಮತ್ತು ಆಧಾರ್ ಹಾಗೂ ಡಿಜಿಟಲ್ ಗೌಪ್ಯತೆ ವಿಚಾರಕ್ಕೂ ಅನ್ವಯವಾಗುತ್ತದೆಯಾ ನೋಡಬೇಕು.
ಆದರೆ, ಒಂದಂತೂ ಸ್ಪಷ್ಟ. ಕಾಂಗ್ರೆಸ್ ಮತ್ತು ಬಿಜೆಪಿಯಂತಹ ಪಕ್ಷಗಳಿಂದ ಈ ವಿಚಾರದಲ್ಲಿ ಸೂಕ್ತ ಪರಿಹಾರ ನಿರೀಕ್ಷಿಸುವುದು ಮೂರ್ಖತನ. ಮೋದಿ ಜೇಟ್ಲಿಯವರ ಧೋರಣೆಯಂತೂ ಅಪಾಯಕಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆಲಸದ ಅವಧಿ ಬಳಿಕ ಯಾವುದೇ ಕರೆಗಳು, ಇಮೇಲ್‌ಗಳಿಗೆ ಉತ್ತರಿಸಬೇಕಿಲ್ಲ : ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?

ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ಮೇಲೆ ಅತೀವ ಕೆಲಸದ ಹೊರೆಯನ್ನು ಹೇರಿ ಅವರ ಖಾಸಗಿ ಜೀವನವನ್ನು ಕಿತ್ತುಕೊಳ್ಳುವ ಮೂಲಕ ಮಾನಸಿಕ ಒತ್ತಡಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ. ಅದಾಗ್ಯೂ ಕೆಲ ಕಾರ್ಪೋರೇಟ್‌...

ಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೇಳೆ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲೋರಾ ಶಾಂತಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸ್‌ಆರ್‌ಎಂನ ಆಂತರಿಕ ಸಮಿತಿಯ ವರದಿಯು ಲೋರಾ...

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...

ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟು : ಜೆಪಿಸಿ ವಿಚಾರಣೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ...

ಒಳಮೀಸಲಾತಿ : ಶೇ.17ರ ಪ್ರಮಾಣದಲ್ಲೇ ಮುಂದುವರಿಯಲು ಸರ್ಕಾರ ತೀರ್ಮಾನ?

ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇಕಡ 17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶನಿವಾರ ಸಂಜೆ (ಡಿಸೆಂಬರ್ 6) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಉತ್ತರ ಗೋವಾದ ನೈಟ್‌ ಕ್ಲಬ್‌ವೊಂದರಲ್ಲಿ ಶನಿವಾರ (ಡಿಸೆಂಬರ್ 6) ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು,...

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...