Homeಅಂಕಣಗಳುಸತ್ಯವ ನುಡಿಯುವ ದಿಟ್ಟತೆಗೆ ಪ್ರತೀಕವಾದ ಗೌರಿ ಲಂಕೇಶ್

ಸತ್ಯವ ನುಡಿಯುವ ದಿಟ್ಟತೆಗೆ ಪ್ರತೀಕವಾದ ಗೌರಿ ಲಂಕೇಶ್

- Advertisement -
- Advertisement -

| ವಾಸು.ಎಚ್.ವಿ |

ಒಂದುವೇಳೆ ಅಂದು ಪತ್ರಿಕೆಯ ತಯಾರಿಯ ಕೆಲಸ ಇರದೇ ಇದ್ದಿದ್ದರೆ, ನೋಟು ರದ್ದತಿಯ ಒಂದು ವರ್ಷದ ಪರಿಣಾಮಗಳ ಕುರಿತಂತೆ ಕಾರ್ಯಕ್ರಮ ರೂಪಿಸಲು ನಾವು ಬಸವನಗುಡಿಯ ಕಚೇರಿಯಲ್ಲೇ ಸಭೆ ಸೇರಬೇಕಾಗಿತ್ತು. ಮೇಡಂ (ಗೌರಿ ಲಂಕೇಶ್) ಹಿಂದಿನ ದಿನವೇ ‘ಮರೀ, ನಾಳೆ ಆಫೀಸಿನಲ್ಲಿ ಆಗಲ್ಲ, ಗುರುವಾರದ ನಂತರವಾದರೆ ಇಲ್ಲೇ ಮಾಡಿಕೊಳ್ಳಬಹುದು’ ಎಂದಿದ್ದರು. ಅಂದಿನ ಸಭೆಯಲ್ಲಿ ದಕ್ಷಿಣ ಬೆಂಗಳೂರಿನ ಕೆಲವರು ಇರಲೇಬೇಕಿದ್ದುದರಿಂದ, ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಸೇರಿಕೊಂಡಿದ್ದೆವು. ಸಭೆ ಮುಗಿಸಿ ಹೊರಡುವ ಹೊತ್ತಿಗೆ ಮೇಡಂ ಹತ್ಯೆಯ ಷಾಕಿಂಗ್ ಸುದ್ದಿ ಗೊತ್ತಾಯಿತು.

ಭಾರೀ ದುಃಖ ಹಾಗೂ ಆತಂಕದಿಂದ ದೊಡ್ಡಿಪಾಳ್ಯ ನರಸಿಂಹಮೂರ್ತಿ ಮತ್ತು ನಾನು ಮೇಡಂ ಮನೆಯ ಕಡೆಗೆ ಹೊರಟೆವು. ನಮ್ಮ ಮುಂದಿನ ಸಾರ್ವಜನಿಕ ಕೆಲಸದ ಜವಾಬ್ದಾರಿಯ ಪ್ರಯಾಣವೂ ಇನ್ನು ಮುಂದೆ ಬೇರೆಯಾಗುತ್ತದೆಂಬ ಕಲ್ಪನೆ ಆಗ ನಮ್ಮಿಬ್ಬರಿಗೂ ಇರಲಿಲ್ಲ. ರಾಜರಾಜೇಶ್ವರಿ ನಗರದ ಮನೆಯ ಮುಂದೆ ಕಳೆದ ಕೆಲವು ಗಂಟೆಗಳಲ್ಲೇ ಮುಂದಿನ ಜವಾಬ್ದಾರಿ ಅರ್ಥವಾಗತೊಡಗಿತು. ಕಚೇರಿಯ ಸಿಬ್ಬಂದಿ ಅಲ್ಲಿಗೆ ಬಂದು ತಲುಪಿದಾಗ ಮರುದಿನ ಪತ್ರಿಕೆ ಮುದ್ರಣಕ್ಕೆ ಹೋಗಬೇಕೆಂಬುದು ನೆನಪಾಯಿತು.

ಅಲ್ಲಿಂದ ಆಚೆಗೆ ಹಲವು ಬೆಳವಣಿಗೆಗಳು ನಡೆದವು. ಅದುವರೆಗಿನ ನಮ್ಮ ಇತರ ಜವಾಬ್ದಾರಿಗಳಿಂದ ಸ್ವಲ್ಪ ಸ್ವಲ್ಪ ಬಿಡಿಸಿಕೊಂಡು, ಇದೀಗ ಪತ್ರಿಕೆಯ ನೊಗಕ್ಕೆ ಹೆಗಲು ಕೊಡುವ ಕೆಲಸವನ್ನು ಪತ್ರಿಕೆಯ ಹಿಂದಿನ ಸಿಬ್ಬಂದಿಯ ಜೊತೆಗೆ ನಾವೂ ಮಾಡುತ್ತಿದ್ದೇವೆ.

ಇದು ಹಿಂದಿನ ಗೌರಿ ಲಂಕೇಶ್ ಪತ್ರಿಕೆಯ ಯಥಾರೂಪವಲ್ಲ. ಸ್ವತಃ ಮೇಡಂ ಈಗ ಭೌತಿಕವಾಗಿ ಇಲ್ಲ. ಅವರ ಬದಲಿಗೆ ರಾಜ್ಯ ಮತ್ತು ದೇಶಗಳ ಗಡಿ ದಾಟಿ ಸತ್ಯ ನುಡಿಯುವ ದಿಟ್ಟತೆಗೆ ಪ್ರತೀಕವಾಗಿರುವ ಗೌರಿಯವರ ನೆನಪು ಹಾಗೂ ಬಲಿದಾನದ ಔನ್ನತ್ಯ ಇಲ್ಲೇ ನಮ್ಮೊಂದಿಗಿದೆ.

ಸೆಪ್ಟೆಂಬರ್ 12ರಂದು ನಡೆದ ಪ್ರತಿರೋಧ ಸಮಾವೇಶದ ಹೊತ್ತಿಗೇ ಅದು ಸ್ಪಷ್ಟವಾಗತೊಡಗಿತ್ತು. ಗೌರಿಯವರ ರೇಖಾಚಿತ್ರವೊಂದನ್ನು ಕಲಾವಿದ ವಿಜಯ್ ಮತ್ತು ಗೆಳೆಯರು ತಯಾರಿಸಿದ್ದರು. ಆ ಚಿತ್ರ ಎಲ್ಲೆಡೆ ಕಾಣತೊಡಗಿತ್ತು. ಬ್ಯಾನರ್, ಎದೆಬಿಲ್ಲೆ, ತಲೆಪಟ್ಟಿ ಹೀಗೆ. ಸಾವಿರಗಟ್ಟಲೇ ಸಂಖ್ಯೆಯಲ್ಲಿ ಬಂದವರೆಲ್ಲರ ಹೃದಯದಲ್ಲಿ, ಮನಸ್ಸಿನಲ್ಲಿ ಮಾತ್ರವಲ್ಲದೇ ಭೌತಿಕವಾಗಿಯೂ ಗೌರಿಯವರ ಫೋಟೋ ಎದ್ದು ಕಾಣುತ್ತಿತ್ತು. ಆ ದಿನದ ಮಟ್ಟಿಗಂತೂ ಎಲ್ಲೆಲ್ಲೂ ಕಾಣುವ ಚೆಗೆವಾರನ ಫೋಟೋದಂತೆ ಗೌರಿಯವರ ಚಿತ್ರ ಕಾಣುತ್ತಿತ್ತು. ಅಲ್ಲಿಂದಾಚೆಗೆ ದೇಶದ ಮತ್ತು ಪ್ರಪಂಚದ ನೂರಾರು ಕಡೆ ಗೌರಿಯವರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆದವು. ಎಲ್ಲೆಡೆ ಬೆಳೆಯುತ್ತಿದ್ದ ಬಲಪಂಥೀಯ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದ ಪ್ರಜಾತಂತ್ರವಾದಿಗಳಿಗೆ ಗೌರಿ ತಮ್ಮ ಪ್ರತಿನಿಧಿ ಎನಿಸಿತು.

ಭಾರತವೆಂಬ ದೇಶದ ಕಲ್ಪನೆಗೇ ಅಪಾಯ ತಂದೊಡ್ಡಿದ್ದವರು ಸರ್ಕಾರ ಮತ್ತು ಸಮಾಜದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಬದಲಾಗುತ್ತಿದ್ದ ಕಾಲಘಟ್ಟವದು. ಅಂತಹ ಹೊತ್ತಿನಲ್ಲಿ ಸಾಮಾನ್ಯ ಜನರನ್ನೆಲ್ಲಾ ತಲುಪಬಹುದಾದ ಮಾಧ್ಯಮ, ಕಥನ, ಭಾಷೆ ಹಾಗೂ ಭಾವ ಏನಿರಬೇಕು ಎಂದು ಯೋಚಿಸುವ ನಿಟ್ಟಿನಲ್ಲಿ ಗೌರಿಯವರ ಪ್ರಯತ್ನ ಇರಲಿಲ್ಲ. ಅವರಷ್ಟೇ ಅಲ್ಲದೇ, ದೇಶದ ಬಹುತೇಕ ಪ್ರಜಾತಂತ್ರವಾದಿಗಳು ಅಂತಹ ಹುಡುಕಾಟಕ್ಕೆ ತೊಡಗಿರಲಿಲ್ಲ. ಭಾರತದ ಪ್ರಜಾತಂತ್ರ ವಿಸ್ತಾರಗೊಂಡ 60, 70, 80ರ ದಶಕದ ಪರಿಭಾಷೆಯೇ ಚಾಲ್ತಿಯಲ್ಲಿತ್ತು. ಆದರೆ, ಎಷ್ಟೋ ‘ದೊಡ್ಡವರು’ ಪ್ರತಿರೋಧದ ಗಟ್ಟಿ ದನಿಯನ್ನೂ ಮೊಳಗಿಸದೇ ಇದ್ದಾಗ ಗೌರಿ ಲಂಕೇಶ್ ಒಂದಿನಿತೂ ಹಿಂಜರಿಯಲಿಲ್ಲ. ಅದಕ್ಕಾಗಿ ಅವರೆಂದಿಗೂ ನಮಗೆ ಮಾದರಿಯಾಗಿ ನಿಲ್ಲುತ್ತಾರೆ. ಎರಡು ವರ್ಷದ ನಂತರವೂ ನಮ್ಮೆದೆಯೊಳಗೆ ಪ್ರತಿರೋಧದ ಪ್ರತೀಕ ಗೌರಿಯವರು ಮಾಸದೇ ಉಳಿದಿರುವುದೇ ಅದಕ್ಕೆ ಸಾಕ್ಷಿ.

‘ನಿನ್ನನ್ನು ಕೊಲ್ಲಬೇಕು’ ಎಂದು ಫೇಸ್‍ಬುಕ್‍ನಲ್ಲಿ ಬರೆದ ಯುವಕನಿಗೆ, ‘ಮಗೂ, ನನ್ನನ್ನು ಕೊಲ್ಲುವ ಮಾತನಾಡುತ್ತಿರುವ ನೀನೂ ನನ್ನ ಮಗನೇ. ಆದರೆ, ನಿನಗೆ ನಿನ್ನ ಚಿಂತನೆ ದೇಶವನ್ನು ಎಲ್ಲಿಗೆ ಕರೆದುಕೊಂಡು ಹೋಗಬಹುದು ಎಂಬ ವಾಸ್ತವದ ಅರಿವಿಲ್ಲ’ ಎಂದು ಪ್ರೀತಿಯಿಂದ ಬರೆದಿದ್ದ ಗೌರಿಯವರ ನಡೆ ಬಹುಶಃ ನಮಗೆ ದಾರಿ ತೋರಬಹುದು.
ಪತ್ರಿಕಾ ಸಂಸ್ಥೆಯ ಆರ್ಥಿಕ ಸ್ಥಿತಿ ಅತ್ಯಂತ ಸುಸ್ಥಿತಿಯಲ್ಲಿ ಎಂದೂ ಇಲ್ಲದಿದ್ದರೂ, ನಿರಂತರ ಶ್ರಮ ಹಾಗೂ ನೈತಿಕವಾದ ರೀತಿಯಲ್ಲಿಯೇ ಸಂಪನ್ಮೂಲ ಹೊಂದಿಸುವ ಒದ್ದಾಟದಲ್ಲೇ ಸಂಸ್ಥೆಯನ್ನು ನಡೆಸುತ್ತಾ ಬಂದ ಅವರ ನಿಲುವು ನಮ್ಮನ್ನು ಎಚ್ಚರಿಸುತ್ತಿರುತ್ತದೆ. ಜೂನ್ 2016ರಲ್ಲಿ ಮೇಡಂ ಇದ್ದಾಗಲೇ ತೀರ್ಮಾನಿಸಿದಂತೆ, ಪತ್ರಿಕೆಯೊಂದಿಗೆ ಇಂದಿನ ಅಗತ್ಯಕ್ಕೆ ತಕ್ಕಂತೆ ವೆಬ್ ಮತ್ತು ಇನ್ನಿತರ ಸಾಧ್ಯತೆಗಳಿಗೆ ಅಪ್‍ಡೇಟ್ ಆಗುವ ನಿಟ್ಟಿನಲ್ಲಿ ನಾವು ಸತತವಾಗಿ ಮುನ್ನಡೆಯುತ್ತಿರಬೇಕಿದೆ.

ನಿಂದಿಸುವ, ಅಪಪ್ರಚಾರಗಳನ್ನು ಮಾಡುವ, ದ್ವೇಷಿಸುವ ಜನರು, ಹಿತಶತ್ರುಗಳು ಅಂದೂ ಇದ್ದರು; ಮುಂದೆಯೂ ಇರುತ್ತಾರೆ. ಆದರೆ, ಅದು ಉನ್ನತ ಆಶಯದತ್ತ ಸಾಗಬೇಕಾದ ನಮ್ಮ ಸಂಕಲ್ಪವನ್ನು ಅಲುಗಾಡಿಸಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಬದಲಾದ ಕಾಲಘಟ್ಟದಲ್ಲಿ ಬದಲಾಗಬೇಕಾದ ಮಾಧ್ಯಮದ ಸ್ವರೂಪ, ಪರಿಭಾಷೆಗಳು ಮತ್ತು ಕಥನದ ಕುರಿತು ಗಂಭೀರವಾಗಿ ಆಲೋಚಿಸಿ ಆ ನಿಟ್ಟಿನಲ್ಲಿ ಮುಂದಡಿಯಿಡಬೇಕಿದೆ. ಆ ದಿಕ್ಕಿನಲ್ಲಿ ನಮ್ಮಲ್ಲಿರುವ ಆಲೋಚನೆಗಳನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಮಾಲೋಚನಾ ಸಭೆಗಳು, ಚರ್ಚಾಗೋಷ್ಠಿಗಳನ್ನು ಆಯೋಜಿಸಲು ಗೆಳೆಯರು ಉತ್ಸುಕತೆ ತೋರಿದ್ದಾರೆ. ಖುದ್ದಾಗಿ ಇಲ್ಲವೇ ಪತ್ರದ ಮುಖಾಂತರ ನಿಮ್ಮೆಲ್ಲರ ಜೊತೆ ನಡೆಯುವ ಸಂವಾದದಲ್ಲಿ, ನಿಮ್ಮ ಆಲೋಚನೆಗಳನ್ನೂ ಒಳಗೊಂಡು ನಮ್ಮ ಕರ್ತವ್ಯವನ್ನು ನಿಭಾಯಿಸುತ್ತೇವೆಂಬ ಭರವಸೆ ನೀಡಬಯಸುತ್ತೇವೆ.

ಮೇಡಂ ಇಲ್ಲವಾದ ಎರಡು ವರ್ಷದ ಈ ದಿನದಂದು ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿರುವುದನ್ನು ಅರ್ಥ ಮಾಡಿಕೊಂಡಿದ್ದೇವೆಂದು ತಂಡದ ಪರವಾಗಿ ಹೇಳಬಯಸುತ್ತೇನೆ. ನಾವು ನೀವೆಲ್ಲರೂ ಜೊತೆಗೂಡಿ ಸಾಗಬೇಕಾದ ದಾರಿ ಇದು. ಜೊತೆಗೂಡಿದರೆ ಮಾತ್ರ ಸಾಗುವ ದಾರಿಯೂ ಹೌದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜವಾಗಿ ಆ ಕೆಲಸವನ್ನು ನಾವು ನಮ್ಮ ನೀವುಗಳು ಕೂಡಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಮಾನಮನಸ್ಕರ ಸಮಾನತೆಯ ಸಭೆ ಮಾಡಬೇಕಿರುವದು.

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...