Homeಸಾಮಾಜಿಕಜೀ ಕನ್ನಡದ ಟಿಆರ್‌ಪಿ ಬಲೆಯಲ್ಲಿ ಸಿಕ್ಕಿಬಿತ್ತೇ ಹಳ್ಳಿ ಹಕ್ಕಿ?

ಜೀ ಕನ್ನಡದ ಟಿಆರ್‌ಪಿ ಬಲೆಯಲ್ಲಿ ಸಿಕ್ಕಿಬಿತ್ತೇ ಹಳ್ಳಿ ಹಕ್ಕಿ?

- Advertisement -
- Advertisement -

ಸರೋವರ್ ಬೆಂಕಿಕೆರೆ |

ಸೆಲೆಬ್ರಿಟಿಗಳಿಗೆ ಮೀಸಲಾದ ಬಿಗ್‌ಬಾಸ್ ಅನ್ನು ಹೊರತುಪಡಿಸಿದರೆ ಕನ್ನಡದ ಬಹುತೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಹಳ್ಳಿಗಾಡಿನ ಪ್ರತಿಭೆಗಳು ಜನಪ್ರಿಯರಾಗಿ ಕನ್ನಡಿಗರ ಮನೆಮಾತಾಗಿರುವುದು ನಿಜಕ್ಕೂ ವಿಶೇಷ ಮತ್ತು ಅಭಿನಂದನಾರ್ಹ. ಇದೀಗ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ 15ನೇ ಅವತರಣಿಕೆಯಲ್ಲಿ ಹಾವೇರಿ ಜಿಲ್ಲೆಯ ಕುರಿ ಕಾಯುವ ಯುವಕ ಹನುಮಂತು ಮನೆಮಾತಾಗಿದ್ದಾನೆ.

ಭಾರತದಂಥ ದೇಶದಲ್ಲಿ ಕೆಲವೇ ಕೆಲವು ಸಮುದಾಯಕ್ಕೆ ಸೀಮಿತವಾಗಿದ್ದ ಕಲೆಗಳನ್ನು ಶ್ರೇಷ್ಠವೆಂಬಂತೆ ಬಿಂಬಿಸಿದ್ದು ಅಲ್ಲದೆ ಅಂತಹ ಕಲೆಗಳಿಗೆ ವೇದಿಕೆಗಳ ಮೂಲಕ ಪ್ರಚಾರಗಳು ದೊರೆಯುತ್ತಾ ಬಂದಿದೆ. ಚಮ್ಮಾರಿಕೆ, ಕುಲುಮೆ, ಕುಂಬಾರಿಕೆ, ಬೇಟೆ ಇತ್ಯಾದಿ ತಳ ಸಮುದಾಯದ ಕಲೆಗಳ ಸ್ಪರ್ಧೆಯನ್ನು ಇವತ್ತಿನ ಟಿವಿ ಶೋಗಳಲ್ಲಿ ನಾವು ನೋಡಲು ಸಾಧ್ಯವಿಲ್ಲ. ಸಂಗೀತದ ವಿಚಾರಕ್ಕೆ ಬಂದರೆ ತಳಸಮುದಾಯದ ಕಲೆಗಳಾದ ಚರ್ಮದ ತಮಟೆ, ಉರ್ಮೆ, ಸೋಬಾನ, ಜೋಗತಿ ಜೋಗಪ್ಪರ ಹಾಡು, ಇದೇ ಹನುಮಂತನ ಲಂಬಾಣಿ ಸಮುದಾಯದ ಅತ್ತುಕೊಂಡು ಹಾಡುವ ಡಾವ್ಳೋ, ಮೇರಗಳು, ದೇವಸ್ಥಾನದ ಹೊರಗೇ ನಿಂತು ಒಂದಿಡೀ ದಿನ ಹಾಡುವ ಅಸಾದಿಗಳ ಹಾಡು…. ಇವೆಲ್ಲವಕ್ಕೆ ರಿಯಾಲಿಟಿ ಶೋಗಳಲ್ಲಿ ಸ್ಪರ್ಧೆ ನಡೆಸುವುದು ಹಾಗಿರಲಿ ಕಲ್ಪನೆ ಮಾಡಿಕೊಳ್ಳುವುದೂ ಅಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿಯೂ ಯಾವುದೇ ಸಾಂಪ್ರದಾಯಿಕ ತರಬೇತಿ ಪಡೆಯದ, ಹಳ್ಳಿಗಾಡು ಬಡ ಕುರಿಗಾಯಿ ಕುಟುಂಬದ ಹನುಮಂತು ಇಂದು ಸರಿಗಮಪ-15 ರಲ್ಲಿ ಫೈನಲ್‌ಗೆ ಆಯ್ಕೆ ಆದದ್ದು ನಿಜಕ್ಕೂ ದೊಡ್ಡ ಸಾಧನೆಯೇ ಎನ್ನಬಹುದು.

ಆದರೆ ಟಿವಿ ನಿರೂಪಕರು-ಚಾನೆಲ್‌ಗಳ ಜನರ ಮುಗ್ಧತೆಗಳನ್ನು ಬಂಡವಾಳವಾಗಿಸಿಕೊಂಡು ತಮ್ಮ ಟಿಆರ್‌ಪಿ ದಾಹವನ್ನು ತೀರಿಸಿಕೊಳ್ಳುವುದರಲ್ಲಿ ವಿಕೃತವಾಗಿ ಪಳಗಿದ್ದಾರೆ. ಹಳ್ಳಿ ಹೈದಾ ಪ್ಯಾಟೇಗ್ ಬಂದ ಖ್ಯಾತಿಯ ರಾಜೇಶ್ ಅನ್ನುವ ಸಿದ್ಧಿ ಜನಾಂಗದ ಕಾಡು ಹುಡುಗನ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡ ಇದೇ ಟಿವಿ ಸಿನೆಮಾ ರಂಗದವರು ಅವನನ್ನು ಆತ್ಮಹತ್ಯೆ ಎಂಬ ಕೂಪಕ್ಕೆ ತಳ್ಳಿ ಕೊಲೆ ಮಾಡಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಹುದು.

ಇತ್ತೀಚೆಗೆ ಪ್ರಸಾರವಾದ ಸರಿಗಮಪ ಸೆಮಿಫೈನಲ್‌ನ ಸಂಚಿಕೆಯಲ್ಲಿ ಹನುಮಂತು ಹಾಡಿದ ನಂತರ ನಿರೂಪಕಿ ಬಂದು ತುಂಬಾ ಚೆನ್ನಾಗಿ ಹಾಡಿದೆ ಮತ್ತೊಮ್ಮೆ ನಮಗಾಗಿ ಹಾಡು ಎನ್ನುತ್ತಾಳೆ. ಅವನು ಹಾಡು ಶುರು ಮಾಡಿದ ಸ್ವಲ್ಪ ಹೊತ್ತಿಗೆ ಹನುಮಂತನ ತಾಯಿ ವೇದಿಕೆ ಮೇಲೆ ಬರುತ್ತಾರೆ. ಆತನಿಗೆ ಆಶ್ಚರ್ಯವಾಗಿ ಹಾಡು ನಿಲ್ಲಿಸುತ್ತಾನೆ. ಈಗ ನಿರೂಪಕಿ ತಾಯಿಗೆ ಸಂಬಂಧಿಸಿದ ಹಾಡು ಹಾಡುತ್ತಿದ್ದೀಯ ಅದನ್ನು ನಿನ್ನ ತಾಯಿಯ ಮುಖವನ್ನು ನೋಡುತ್ತಾ ಹಾಡು ಎನ್ನುತ್ತಾಳೆ. ಹನುಮಂತು ತಾಯಿಯ ಮುಖ ನೋಡುತ್ತಾ ಹಾಡಲು ಶುರು ಮಾಡಿದಾಗ, ಪಾಪ ಆ ತಾಯಿಗೆ ಏನು ನಡೀತಿದೆ ಎನ್ನುವುದು ತಿಳಿಯದೆ ಮಗನ ಕಡೆ ನೋಡದೆ ಪ್ರೇಕ್ಷಕರ ಕಡೆ ನೋಡುತ್ತಾ ನಿಲ್ಲುತ್ತಾಳೆ. ಕ್ಯಾಮೆರಾ ತಾಯಿಯ ಕಣ್ಣಿಗೆ ಫೋಕಸ್ ಆಗುತ್ತದೆ. ಆಕೆ ಅಷ್ಟೇನು ಭಾವುಕಳಾಗದಂತೆ ಇದ್ದದ್ದು ಗಮನಿಸಿದಳೇನೋ ನಿರೂಪಕಿ, ತಾಯಿಗೆ ಮತ್ತೆ ಪ್ರಶ್ನೆ ಮಾಡುತ್ತಾಳೆ, ಮಗನ ನೆನಪು ಆಗುತ್ತಿತ್ತಾ? ನೆನಪಾದಾಗ ಏನು ಮಾಡುತ್ತಿದ್ರಿ? ಎಂದು.

ತಾಯಿ ಭಾವುಕರಾಗದೆ ಉತ್ತರ ನೀಡಿದ್ದು ನಿರೂಪಕಿಗೆ ಸಮಾಧಾನವಾಗಲಿಲ್ಲ ಅನಿಸುತ್ತೆ. ಆ ಹೊತ್ತಿಗೆ ವೇದಿಕೆಗೆ ಬಂದಿದ್ದ ಹನುಮಂತನ ತಂದೆಗೂ ಇದೇ ರೀತಿಯ ಬಗೆಬಗೆಯ ಪ್ರಶ್ನೆ. ಮತ್ತು ಎಲ್ಲರಿಗೂ ಹನುಮಂತನ ತಂದೆಗಾಗಿ ’ಅಪ್ಪ ಐ ಲವ್ಯೂ ಅಪ್ಪ ಹಾಡು ಹೇಳುವಂತೆ ಕೇಳುತ್ತಾಳೆ. ಒಟ್ಟಾರೆಯಲ್ಲಿ ಏನೆಲ್ಲಾ ಮಾಡಿ ಅಲ್ಲಿ ಭಾವನಾತ್ಮಕ ವಾತಾವರಣ ಸೃಷ್ಟಿ ಮಾಡಬಹುದೋ ಅದನ್ನು ಮಾಡುವ ಪ್ರಯತ್ನ ಮಾಡುತ್ತಿದ್ದಳು. ಹಾಡು ಮುಗಿಯುವ ಹೊತ್ತಿಗೆ ತನ್ನ ತಂದೆಯನ್ನು ನೆನೆದು ತೀರ್ಪುಗಾರ ರಾಜೇಶ್ ಕೃಷ್ಣನ್ ಅವರನ್ನು ಒಳಗೊಂಡಂತೆ ಒಂದಷ್ಟು ಜನ ಅಳುವವರನ್ನು ಕ್ಯಾಮರಾ ಕಣ್ಣಿಗೆ ಕಾಣಿಸುವುದರಲ್ಲಿ ಸಫಲರಾಗುತ್ತಾರೆ. ಈ ಹೊತ್ತಿಗೆ ಅಲ್ಲೇನು ನಡೆಯುತ್ತಿದೆ ಎನ್ನುವ ಅರಿವು ಇಲ್ಲದ ರೀತಿಯಲ್ಲಿ ಹನುಮಂತನ ಕುಟುಂಬ ವೇದಿಕೆ ಮೇಲೆ ಸುಮ್ಮನೆ ನಿಂತಿದ್ದರು.

ಈ ಕಾರ್ಯಕ್ರಮ ನೋಡುತ್ತಿದ್ದ ಸೂಕ್ಷ್ಮ ವೀಕ್ಷಕರಿಗೆ ಇದೆಲ್ಲವೂ ಟಿಆರ್‌ಪಿ ಗೇಮ್ ಎನ್ನುವುದು ಅರ್ಥವಾಗುತ್ತಿತ್ತು. ಸೆಮಿ ಫೈನಲ್ ಪ್ರಸಾರ ಆಗುವ ಮೊದಲೇ ದಿನಪತ್ರಿಕೆಗಳಲ್ಲಿ ಸೆಮಿಫೈನಲ್ ಕಾರ್ಯಕ್ರಮದಲ್ಲಿ ಭಾವನಾತ್ಮಕ ಸನ್ನಿವೇಶಗಳು ಇರಲಿವೆ ಎಂದು ಸುದ್ಧಿ ಮಾಡಿಸಿದ್ದನ್ನು ಗಮನಿಸಿದರೆ ರಿಯಾಲಿಟಿ ಶೋಗಳಲ್ಲಿ ನಡೆಯುವ ಭಾವನಾತ್ಮಕ ಸನ್ನಿವೇಶಗಳು ಟಿಆರ್‌ಪಿಗಾಗಿ ಜನರನ್ನು ಹಿಡಿದಿಡಲು ಮಾಡುವ ಪೂರ್ವನಿಯೋಜಿತ ಪ್ಲಾನ್‌ಗಳು ಎಂಬ ಅನುಮಾನ ಹುಟ್ಟುತ್ತದೆ. ಹಲವು ಬಾರಿ ನೂರಕ್ಕೆ ನೂರು ಅಂಕ ಪಡೆದಿರುವ ಹನುಮಂತನಿಗಿಂತ ಇತರರು ಚೆನ್ನಾಗಿ ಹಾಡುತ್ತಾರೆ ಎಂದು ವಾದಿಸುವವರೂ ಇದ್ದಾರೆ. ಕಾರ್ಯಕ್ರಮದ ಕೊನೆಯವರೆಗೂ ಜನರನ್ನು ಹಿಡಿದಿಡಲು ಮುಗ್ಧತೆಯನ್ನು ಅತಿಯಾಗಿ ವೈಭವೀಕರಿಸುವ ಅಥವಾ ತಮಾಷೆ ಮಾಡುವುದನ್ನು ನಡೆಸಿಕೊಂಡೇ ಅವರನ್ನು ಫೈನಲ್‌ವರೆಗೂ ತರುತ್ತಾರೆ ಎನ್ನುವ ಆಪಾದನೆ ಸಹ ಹೊಸದೇನಲ್ಲ.

ಇದೆಲ್ಲದರ ನಡುವೆಯೂ ಹೆಚ್ಚು ಹೆಗಡೆ, ಹೊಳ್ಳ, ರಾವ್, ಶರ್ಮ, ಭಟ್‌ಗಳೇ ತುಂಬಿರುವ ಇಂತಹ ಸಂಗೀತ ವೇದಿಕೆಗಳ ನಡುವೆ ಯಾವುದೋ ಮೂಲೆಯ ಹಳ್ಳಿಯೊಂದರ ಪ್ರತಿಭೆಗೆ ಅವಕಾಶ ಸಿಗುತ್ತಿದೆ ಅನ್ನುವುದು ನಿಜವೇ ಆದರೂ, ಇದು ಟಿವಿ ಚಾನಲ್ ಅವರ ಆಟ ಮತ್ತು ಅವರದ್ದೇ ಮೈದಾನ ಅನ್ನುವುದು ವಾಸ್ತವ. ಇಂತಹ ಯಾವುದೇ ವೈಭವೀಕರಣ ಮಾಡದೇ ಭಾವಾವೇಶಕ್ಕೆ ಒಳಗಾಗದೇ ವಸ್ತುನಿಷ್ಠವಾಗಿ ನಡೆದುಕೊಳ್ಳುತ್ತಿದ್ದವರು ಹಂಸಲೇಖ ಅವರು. ಆದರೆ ಟೀವಿ ಚಾನೆಲ್‌ಗಳ ಟಿಆರ್‌ಪಿ ದಾಹದಿಂದ ಸೃಷ್ಟಿಗೊಳ್ಳುವ ಅನಿವಾರ್ಯ ಸಂದರ್ಭಗಳ ಮುಂದೆ ಅವರು ಕೂಡಾ ಸೋತು ರಾಜಿಯಾಗುವ ಮರ್ಜಿಗೆ ಸಿಲುಕಿದರಾ ಎನ್ನುವ ಪ್ರಶ್ನೆ ನಿಜಕ್ಕೂ ಅವರ ದೇಸಿ ಸಂಗೀತ ಪ್ರೀತಿಯನ್ನು ಅಪಾರವಾಗಿ ಅಭಿಮಾನಿಸುತ್ತಿದ್ದ ಸೂಕ್ಷ್ಮಸಂವೇದನೆಯ ಅಭಿಮಾನಿಗಳನ್ನು ಕಾಡುತ್ತಿದೆ.

ಹಳ್ಳಿಗಾಡಿನ ಯುವತಿ ಯುವಕರು ತಮ್ಮದೇ ಆದ ಜೀವನಶೈಲಿಯಲ್ಲಿ ಬದುಕುತ್ತಿರುತ್ತಾರೆ. ಅವರಿಗೆ ಅವರದ್ದೇ ಸಂಸ್ಕೃತಿ ಇರುತ್ತೆ. ಜೀವಪ್ರೀತಿಯೇ ಆ ಸಂಸ್ಕೃತಿಯ ಜೀವಾಳ. ಮುಗ್ಧತೆ ಅಲ್ಲಿ ಸಲೀಸಾಗಿ ಕಾಣಸಿಗುವ ಗುಣಲಕ್ಷಣ. ‘ಪ್ರತಿಭೆಗೆ ಅವಕಾಶ’ ಎಂಬ ಹೆಸರಲ್ಲಿ ಅವರನ್ನು ಸರಕಾಗಿಸಿಕೊಳ್ಳುವುದು ನಿಜಕ್ಕೂ ಕ್ರೂರ ಜಗತ್ತಿನ ಹೇಯ ಕೃತ್ಯ. ಹನುಮಂತಣ್ಣ ಮೊದಲ ಬಾರಿ ಶರೀಫಜ್ಜನ ಹಾಡು ಹಾಡಿ ಈ ರಿಯಾಲಿಟಿ ಶೋಗೆ ಆಯ್ಕೆಯಾದಾಗಲೇ ನ್ಯಾಯಪಥ ಪತ್ರಿಕೆ ಎಚ್ಚರಿಕೆಯ ಬರಹ ಪ್ರಕಟಿಸಿತ್ತು. ಅವನ ಪ್ರತಿಭೆ ಬೆಳಗಲಿ, ಆದರೆ ಮುಗ್ಧತೆ ಸರಕಾಗದಿರಲಿ ಎಂದು ಆಶಿಸಿತ್ತು. ಇದೀಗ ಹನುಮಂತುಗಿಂತ ಚೆನ್ನಾದ ಹಾಡುಗಾರಿಕೆ ಇದ್ದವರನ್ನೂ ಹಿಮ್ಮೆಟ್ಟಿಸಿ ಆತನಿಗೆ ಫೈನಲ್‌ನಲ್ಲಿ ಜಾಗ ಕೊಟ್ಟಿರೋದನ್ನು ನೋಡಿದರೆ ನಿಜಕ್ಕೂ ಅದು ಅವನ ಪ್ರತಿಭೆಗೆ ಸಂದ ಗೌರವಕ್ಕಿಂತ ಹೆಚ್ಚಾಗಿ ಅವನನ್ನು ಫೈನಲ್‌ಗೆ ಟಿಆರ್‌ಪಿ ಸರಕಾಗಿ ಬಳಸಿಕೊಳ್ಳುವ ಟೀವಿಯವರ ಹುನ್ನಾರವಾಗಿ ಕಾಣಿಸುತ್ತೆ.

ಎಷ್ಟೇ ಆಗಲಿ ಅದು ಸಂಗೀತ ಸ್ಪರ್ಧೆ. ಅಲ್ಲಿ ಸಂಗೀತವೇ ಮುಖ್ಯವಾಗಬೇಕೆ ವಿನಃ ಬೇರೆಯ ಕಾರಣಗಳಲ್ಲ. ಹನುಮಂತನ ಆಯ್ಕೆಯಲ್ಲಿ ಈ ಬೇರೆ ಕಾರಣಗಳೇ ಎದ್ದು ಕಾಣುತ್ತಿರೋದು ವಿಪರ್ಯಾಸ. ಒಂದೊಮ್ಮೆ ಅಂತಹ ಯಾವ ಲೆಕ್ಕಾಚಾರಗಳೂ ಇಲ್ಲದೆ ತನ್ನ ಹಾಡಿನ ಪ್ರತಿಭೆಯಿಂದಲೇ ಹನುಮಂತು ಈ ಸ್ಥಾನಕ್ಕೇರಿದ್ದರೆ ಪತ್ರಿಕೆ ಆತನಿಗೆ ನಿಜವಾಗಲೂ ಶುಭ ಹಾರೈಸುತ್ತದೆ. ಯಾಕೆಂದರೆ, ಕೆಲ ಪ್ರಬಲ ಸಮುದಾಯಗಳಿಗಷ್ಟೇ ಸೀಮಿತವಾಗಿದ್ದ ಇಂಥಾ Sophisticated ಕಲೆಗಳ ಚಾರಿತ್ರಿಕ trait ಅನ್ನು ಮೀರಿ ಆತ ಬೆಳೆದಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಆದಾಗ್ಯೂ ಈ ಫ್ಯಾಂಟಸಿ ಟೀವಿ ಜಗತ್ತಿನ ವ್ಯಾಮೋಹಗಳ ಒಳಗೆ, ನಿಭಾಯಿಸಲಾಗದ ‘ಯಶಸ್ಸಿನ’ ಉಸುಕುನೆಲದೊಳಗೆ ಇಂಥಾ ಪ್ರತಿಭೆಗಳು ಹೂತು ಹೋಗದಿರಲಿ ಎಂಬುದಷ್ಟೇ ನಮ್ಮ ಕಾಳಜಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಬಿಕ್ಕಟ್ಟು : ಇರಾನ್ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ಚರ್ಚೆ

ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರೊಂದಿಗೆ ಮಂಗಳವಾರ (ಮಾ.10) ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈ ವೇಳೆ ಪಶ್ಚಿಮ ಏಷ್ಯಾದ ಬೆಳವಣಿಗೆಗಳು...

ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ಆರೋಪ : ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ 24 ವರ್ಷದ ಭಾರತೀಯ ನೌಕಾಪಡೆಯ ಲ್ಯಾನ್ಸ್ ನಾಯಕ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ (ಮಾ.10)...

ಅಮೆರಿಕದ ತೈಲ ಸಂಸ್ಕರಣಾ ಘಟಕಕ್ಕೆ ರಿಲಯನ್ಸ್ ಹೂಡಿಕೆ : ಟ್ರಂಪ್ ಘೋಷಣೆ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಹೂಡಿಕೆಯ ಸಹಾಯದಿಂದ 50 ವರ್ಷಗಳಲ್ಲಿ ಅಮೆರಿಕ ತನ್ನ ಮೊದಲ ಹೊಸ ತೈಲ ಸಂಸ್ಕರಣಾಗಾರವನ್ನು ಪಡೆಯಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 'ಅಮೆರಿಕ ಫಸ್ಟ್ ರಿಫೈನಿಂಗ್ ಸಂಸ್ಥೆ'ಯು ಟೆಕ್ಸಾಸ್‌ನ...

ಭಾರತೀಯರ ಅಡುಗೆ ಮನೆ ತಲುಪಿದ ಯುದ್ಧದ ಪರಿಣಾಮ : ದೇಶದಾದ್ಯಂತ ಎಲ್‌ಪಿಜಿ ಕೊರತೆ ಉಲ್ಬಣ

ಅಮೆರಿಕ, ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸಂಘರ್ಷದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದೇಶ ಪ್ರಧಾನಿ ಮೋದಿಯವರ ಕೈಯಲ್ಲಿ ಭದ್ರವಾಗಿದೆ ಎಂದು ಒಂದಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿರುವಾಗಲೇ,...

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...