Homeಕರ್ನಾಟಕಬಜೆಟ್ ಅಧಿ-‘ವೇಷಣ’: ಕಿತ್ತಾಟದಲ್ಲೇ ಮುಗಿದು ಹೋಯ್ತಣ್ಣ!

ಬಜೆಟ್ ಅಧಿ-‘ವೇಷಣ’: ಕಿತ್ತಾಟದಲ್ಲೇ ಮುಗಿದು ಹೋಯ್ತಣ್ಣ!

- Advertisement -
- Advertisement -

-ಮಲ್ಲಿ |

ಬಜೆಟ್ ಅಧಿವೇಶನ ನಡೆದಿದ್ದು 5 ದಿನ ಮಾತ್ರ! ಇದರಲ್ಲಿ ಕಲಾಪ ನಡೆದಿದ್ದು ಕೇವಲ 15 ಗಂಟೆ 10 ನಿಮಿಷ! ಇದನ್ನು ಅಧಿವೇಶನ ಎನ್ನುವುದೋ ಅಧಿ’ವೇಷಣ’ ಎನ್ನುವುದೋ? ಏಕೆಂದರೆ ಈ ಸಲ ಹಲವರ ‘ವೇಷಣಗಳು’ ಕಳಚಿಬಿದ್ದಿದ್ದಂತೂ ಸತ್ಯ. ಹಾಗೆಯೇ ಆಡಳಿತ ಪಕ್ಷ ಮತ್ತು ವಿಪಕ್ಷಗಳ ರಾಜಕೀಯ ಕಿತ್ತಾಟಕ್ಕೆ ಕಲಾಪ ಬಲಿಯಾಗಿದ್ದೂ ನಿಜ.
ರಾಜ್ಯ ಸರ್ಕಾರದ ಒಂದು ವರ್ಷದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಚೌಕಟ್ಟಿನ ಮುನ್ನೋಟ ನೀಡುವ ಮಹತ್ವದ ಬಜೆಟ್ ಯಾವುದೇ ಅಂಗೀಕಾರವಿಲ್ಲದೇ ಅನುಮೋದನೆ ಪಡೆದಿದೆ. ಅಂದರೆ ಪಾಸ್ ಆಗಿದೆ, ಅಲ್ಲಿಗೆ ಕಲಾಪದ ಒಟ್ಟೂ ಉದ್ದೇಶವೇ ಫೇಲ್ ಆಗಿದೆ. ಆಪರೇಷನ್ ಕಮಲ ಎಂಬ ಭೂತ ಬಜೆಟ್ ಚರ್ಚೆಯನ್ನೇ ನುಂಗಿ ಹಾಕಿ ಅಟ್ಟಹಾಸ ಮೆರೆದಿದೆ.
2 ಲಕ್ಷ 34 ಸಾವಿರ ಕೋಟಿಗಳ ಬಜೆಟ್ ಬಗ್ಗೆ ಚರ್ಚಿಸಲು ಅಲ್ಲಿ ಯಾರಿಗೂ ವ್ಯವಧಾನವೇ ಇರಲಿಲ್ಲ. ವಿಪಕ್ಷ ಬಿಜೆಪಿಗಂತೂ ತನ್ನ ಅಧಿವೇಶನದುದ್ದಕ್ಕೂ ತನ್ನ ಅಧಿನಾಯಕ ಯಡಿಯೂರಪ್ಪನವರನ್ನು ರಕ್ಷಿಸುವುದೇ ಒಂದು ಘನಂದಾರಿ ಕೆಲಸವಾಗಿತ್ತು. ಅದಕ್ಕೆ ಅದು ಆಯ್ದುಕೊಂಡ ಮಾರ್ಗ: ಇಡೀ ಕಲಾಪವನ್ನೇ ಗಬ್ಬೆಬ್ಬಿಸುವ ನೀಚ ಮಾರ್ಗ.
ಬಜೆಟ್‍ನ ಮೂರನೇ ಒಂದು ಭಾಗದಷ್ಟಿರುವ ಲೇಖಾನುಧನವನ್ನು ಯಾವುದೇ ರ್ಚೆಯಿಲ್ಲದೇ ಪಾಸು ಮಾಡಲಾಗಿತು. ಹಿಂದೆಂದೂ ಇಂತಹ ಘಟನೆ ಸಂಭವಿಸಿರಲಿಲ್ಲ. ಆದರೆ ಈ ಸದಸನದ ಯೋಗ್ಯತೆಯೇ ಅಷ್ಟಿರುವಂತಿದೆಯಲ್ಲವೇ?
ಕಲಾಪದಲ್ಲಿ ಸ್ಪೀಕರ್ ಸಾಹೇಬರು ಪದೇ ಪದೇ ತಮ್ಮ ನೋವು ತೊಡಿಕೊಳ್ಳುವ ‘ವಿಲಕ್ಷಣ’ ಸಂದರ್ಭಗಳೇ ಸೃಷಿಯಾದವು. ಕಲಾಪ ನಡೆಯುವಂತೆ ಮಾಡಲು ಅವರು ತುಂಬ ಪ್ರಯಾಸಪಟ್ಟರೂ ಉಪಯೋಗವಾಗಲಿಲ್ಲ. ಬಜೆಟ್ ಮುನ್ನ ಸ್ಪೋಟಗೊಂಡ ಆಡಿಯೋವೇ ಎಲ್ಲವನ್ನೂ ಗುಡಿಸಿ ಹಾಕಿತು- ಆಪರೇಷನ್ ಕಮಲವನ್ನೂ, ಕಲಾಪದ ಚರ್ಚೆಯನ್ನೂ….
ಅಂತಿಮವದಲ್ಲಿ ಯಾವುದೇ ರ್ಚೆಯಿಲ್ಲದೇ ಬಜೆಟ್ ಮಂಡನೆ ಆಗುತ್ತಿದ್ದಂತೆ, ಸ್ಪೀಕರ್ ಸಾಹೇಬರು ತಮ್ಮ ಹೃದಯ ಕಿತ್ತು ಬರುತ್ತಿದೆ, ಸಾರ್ವಜನಿಕರ ಹಣದ ಬಳಕೆಯ ಬಗ್ಗೆ ಚರ್ಚೆ ನಡೆಸದೇ ಘೋರ ಅಪರಾಧ ಮಾಡಿದ್ದೇವೆ ಎಂದು ಅವಲತ್ತುಕೊಳ್ಳಬೇಕಾಗಿತು. ಆಡಳಿತ ಮತ್ತು ವಿಪಕ್ಷಗಳಿಗೆ ಮಾತ್ರ ಇದೇನೂ ಘೋರ ಅಪರಾಧ ಎನಿಸಲೇ ಇಲ್ಲ!
ಎಸ್‍ಐಟಿ ತನಿಖೆ ಬೇಡ ಎಂದು ಗದ್ದಲ ಮಾಡಿ ಎರಡು ದಿನ ಕಲಾಪವನ್ನು ಬರ್ಬಾದ್ ಮಾಡಿದ ಬಿಜೆಪಿ, ಎಸ್‍ಐಟಿ ತನಿಖೆಯೇ ಫೈನಲ್ ಎಂದು ನಿರ್ಣಯವಾದ ಮೇಲಾದರೂ ಚರ್ಚೆಗೆ ಅವಕಾಶ ಮಾಡಿಕೊಡಬಹದಿತ್ತು. ಆದರೆ ಶಾಸಕ ಪ್ರೀತಂಗೌಡರಿಗೆ ರಕ್ಷಣೆ ಕೊಡಿ ಎಂದು ಮತ್ತೆ ಒಂದೂವರೆ ದಿನಗಳ ಕಲಾಪವನ್ನು ಹಳ್ಳ ಹಿಡಿಸಿತು. ಪ್ರೀತಂಗೌಡನಿಗೆ ರಕ್ಷಣೆ ಕೊಡಲು ಪೊಲೀಸ್ ಇಲಾಖೆಯಿತ್ತಲ್ಲವೇ? ಅದನ್ನೆಲ್ಲ ಬಿಟ್ಟು ಸದಸನದ ಕಲಾಪ ಹಾಳು ಮಾಡುವ ಅಗತ್ಯವಿತ್ತೇ?
ಎಲ್ಲ ಕಲಾಪಗಳಲ್ಲೂ ಅಬ್ಬರಿಸುತ್ತಿದ್ದ ಯಡಿಯೂರಪ್ಪ ಈ ಸಲ ಎಲ್ಲ ಮುಚ್ಚಿಕೊಂಡು, ಮುಖ ಗಂಟಿಕ್ಕಿಕೊಂಡು ಕೂತದ್ದೇ ಜಾಸ್ತಿ. ಆದರೂ ಅವರಿಗೆ ಮಾನ ಮುಚ್ಚಿಕೊಳ್ಳಲಾಗಲಿಲ್ಲ. ಈ ಅಧಿವೇಶನದ ಇನ್ನೊಂದು ಅಂಶವೆಂದರೆ, ಮಾಧುಸ್ವಾಮಿಯವರಂತಹ ಹಿರಿಯ ಸಂಸದೀಯ ಪಟು ಲಜ್ಜೆ ಬಿಟ್ಟು ಯಡಿಯೂರಪ್ಪನವರ ಸಮರ್ಥನೆಗೆ ಇಳಿದಿದ್ದು!
ಈ ಅಧಿವೇಶನದ ಲಾಭವಾಗಿದ್ದು ಮೈತ್ತಿ ಪಕ್ಷಗಳಿಗೆ ಮಾತ್ರ. ಆಪರೇಷನ್ ಕಮಲವನ್ನು ಹೊಡೆದು ಹಾಕುವ ಮೂಲಕ ಮೈತ್ರಿಬಣದಲ್ಲಿ ಮೂಡಿದ್ದ ಬಿರುಕನ್ನು ಅವು ನಿವಾರಿಸಿಕೊಂಡವು.
ಹಿಂದೆ ಧರ್ಮಸಿಂಗ್ ಮತ್ತು ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರವಿದ್ದಾಗ, ನಂತರ ಕುಮಾರಸ್ವಾಮಿ-ಯಡಿಯೂರಪ್ಪ ಸರ್ಕಾರವಿದ್ದಾಗಲೂ ಸದನದ ಕಲಾಪಗಳು ಹೀಗೇ ಬಲಿಯಾಗಿದ್ದವು. ತಮ್ಮ ಪಕ್ಷಗಳ ನಡುವಿನ ಕಿತ್ತಾಟದ ರಾಜಕೀಯವನ್ನು ಸದನದಲ್ಲಿ ಚಚಿಚ್ಸಲು ನಾವು ಅವರನ್ನು ಅಲ್ಲಿಗೆ ಕಳಿಸಿದ್ದೇವಾ ಎಂಬ ಪ್ರಶ್ನೆ ಜನರನ್ನು ಕಾಡದೇ ಇರದು. ಯಾವುದೇ ಚರ್ಚೆಯಿಲ್ಲದೇ ಮಸೂದೆಗಳನ್ನು ಧ್ವನಿಮತದ ಮೂಲಕ ಪಾಸು ಮಾಡುವುದಾದರೆ ಈ ಶಾಸಕರು ಸದನದಲ್ಲಿ ಕಿತ್ತು ಹಾಕುವುದಾದರೂ ಏನನ್ನು ಎಂದು ಪ್ರಶ್ನಿಸುವ ಸಮಯ ಬಂದಿದೆಯಲ್ಲವೇ?
ಹಿಂದೆ ಆಗಿನ್ನೂ ಸಂಸದಿಯ ವ್ಯವಸ್ಥೆ ಬಾಲ್ಯಾವಸ್ಥೆಯಲ್ಲಿ ಇದ್ದ ಸಂದರ್ಭದಲ್ಲೇ, ಬಜೆಟ್ ಅಧಿವೇಶನ 6 ದಿನಗಳ ಅವಧಿಯನ್ನು ಹೊಂದಿರುತ್ತಿತ್ತು. ದಿವಾನರ ಭಾಷಣ, ಪ್ರಶ್ನೆಗಳು ಮತ್ತು ಸರ್ಕಾರಿ ಕಲಾಪಕ್ಕಾಗಿ 1 ದಿನ, ಬಜೆಟ್ ಮೇಲಿನ ಸಾಮಾನ್ಯ ಚರ್ಚೆಗಾಗಿ ಗರಿಷ್ಠ 2 ದಿನ, ಬಜೆಟ್ ಮೇಲಿನ ನಿರ್ಣಯಗಳಿಗಾಗಿ 1 ದಿನ, ಅರಿಕೆಗಳಿಗಾಗಿ 1 ದಿನ ಮತ್ತು ಇತರ ನಿರ್ಣಯಗಳಿಗಾಗಿ 1 ದಿನವನ್ನು ನಿಗದಿಪಡಿಸಲಾಗಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಬಜೆಟ್ ರ್ಚೆಗಳು ಕೇವಲ ದೂಷಾರೋಪಣೆಯಲ್ಲೇ ಮುಗಿದು ಹೋಗುತ್ತಿವೆ. ಕಳೆದ ವಾರ ಮುಗಿದ ಬಜೆಟ್ ಅಧಿವೇಶನವಂತೂ ಚರ್ಚೆಯಿಲ್ಲದೇ ಬಜೆಟ್ ಪಾಸು ಮಾಡಿ ‘ದಾಖಲೆ’ ಬರೆದಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...