ಪುಲ್ವಾಮಾ ನರಮೇಧದ 24 ಗಂಟೆಗಳಲ್ಲೇ ಬಿಜೆಪಿ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ವ್ಯವಸ್ಥಿತ ಪ್ರಚಾರ ಆರಂಭಿಸಿ ಬಿಟ್ಟಿತು. ಅಂದರೆ ಬಿಜೆಪಿಯ ವರಿಷ್ಠರಿಗೆ ಇದೆಲ್ಲ ಮೊದಲೇ ಗೊತ್ತಿತ್ತೇ? ಈಗ ದೇಶದ ಜನಕ್ಕೆ ಮೋದಿ ಸರ್ಕಾರ ಉತ್ತರಿಸಲೇ ಬೇಕಿದೆ:
1. 250 ಕೆ.ಜಿ.ಯಷ್ಟು ಸ್ಫೋಟಕಗಳು ದೇಶದ ಅತಿ ಸುರಕ್ಷಿತ ಹೈವೆಯನ್ನು ಹೊಕ್ಕಿದ್ದಾದರೂ ಹೇಗೆ?
2. ಸ್ಫೋಟಕಗಳಿದ್ದ ಉಗ್ರರ ವಾಹನ ಯಾವುದೇ ತಪಾಸಣೆಯಿಲ್ಲದೇ ಸಿಆರ್ಪಿಎಫ್ ಯೋಧರ ವಾಹನ ಬರುತ್ತಿದ್ದ ಹೈವೇಗೆ ನುಗ್ಗಿದ್ದು ಹೇಗೆ? ಬೇಕೆಂತಲೇ ತಪಾಸಣೆಯನ್ನು ಬೈಪಾಸ್ ಮಾಡಲಾಗಿತ್ತೆ?
3. ದಾಳಿಗೂ ಮೊದಲು ಸಂಭವನೀಯ ದಾಳಿಯ ಬಗ್ಗೆ ಜಮ್ಮು-ಕಾಶ್ಮೀರದ ಪೊಲೀಸರು ಭದ್ರತಾ ಪಡೆಗಳಿಗೆ ನೀಡಿದ್ದ ಗುಪ್ತಚರ ವರದಿ ನೀಡಿದ್ದರೂ, ಈ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದು ಏಕೆ?
4. ನಿಯಮಾವಳಿಗೆ ವಿರುದ್ಧವಾಗಿ ಒಮ್ಮೆಲೇ 2500 ಯೋಧರನ್ನು ಟ್ರಾನ್ಸ್ಪೋರ್ಟ್ ಮಾಡಿದ್ದು ಏಕೆ?
5. ಏರ್ಲಿಫ್ಟ್ ಮಾಡಿ ಎಂಬ ಸಿಆರ್ಪಿಎಫ್ ಮನವಿಯನ್ನು ಗೃಹ ಸಚಿವಾಲಯ ಕಡೆಗಣಿಸಿದ್ದು ಏಕೆ?
ಈ ಎಲ್ಲ ಪ್ರಶ್ನೆಗಳಿಗೆ ಜನ ಉತ್ತರ ಕೇಳಲೇಬೇಕಿದೆ. ಗುಜರಾತಿನಲ್ಲಿ ಯೋಜಿತ ರಕ್ತಪಾತ ನಡೆಸಿ, ಹೆಣಗಳ ಮೇಲೆ ರಾಜಕೀಯ ಫಸಲು ತೆಗೆದವರು 2019ರ ಚುನಾವಣೆ ಗೆಲ್ಲಲು ಏನೂ ಮಾಡಲು ಹೇಸಲಾರರು ಅಲ್ಲವೇ?
ಚೆಡ್ಡಿಗಳಿಗೊಂದು ಸಿಂಪಲ್ ಪ್ರಶ್ನೆ…! ಪುಲ್ವಾಮಾ ಸಂಭವಿಸಲು ಮೋದಿಯ ವೈಫಲ್ಯ ಕಾರಣವಲ್ಲವೇ?
- Advertisement -
- Advertisement -
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Must Read
ಹಾಸನ ಪೆನ್ಡ್ರೈವ್ ಪ್ರಕರಣ: ಎಸ್ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...