Homeಸಿನಿಮಾಸಿನಿ ಸುದ್ದಿಸಾಮಾಜಿಕ ದುರಂತದ ವಿಡಂಬನೆಯಸಿನಿಕಾರ ಪೀಟರ್ ಬಾಷೋ.

ಸಾಮಾಜಿಕ ದುರಂತದ ವಿಡಂಬನೆಯಸಿನಿಕಾರ ಪೀಟರ್ ಬಾಷೋ.

- Advertisement -
- Advertisement -

ರಾಜಶೇಖರ್ ಅಕ್ಕಿ |

ರಷಿಯಾದ ಒಂದು ಗ್ರಾಮ, ಆಗತಾನೆ ಕ್ರಾಂತಿಯಾಗಿದೆ. ಮಹಾಯುದ್ಧದ ಪರಿಣಾಮಗಳು ಇನ್ನೂ ಕಾಣಿಸಿಕೊಳ್ಳುತ್ತಿವೆ. ಅಂತಹದ್ದರಲ್ಲಿ ಒಂದು ಗೂಡ್ಸ್ ರೈಲಿನಿಂದ ಪರಾನ್ಯಾ ಎನ್ನುವ ಹೆಣ್ಣುಮಗಳು ಬಂದಿಳಿಯುತ್ತಾಳೆ. ಗೋಣಿಚೀಲವನ್ನೇ ಉಡುಪಾಗಿ ಧರಿಸಿದ ಅವಳು ಮಾನಸಿಕವಾಗಿ ಅಸ್ವಸ್ಥ ಎನ್ನುವುದು ಅವಳ ವರ್ತನೆಗಳಿಂದ ಸ್ಪಷ್ಟವಾಗುತ್ತದೆ. ಜೋಕ್ರ್ಯಾ ಎನ್ನುವ ವ್ಯಕ್ತಿ ತನ್ನ ಕುದುರೆಯನ್ನು ಕಳೆದುಕೊಂಡು, ಹೊಸ ಸೋಷಲಿಸ್ಟ್ ಆಳ್ವಕೆಗೆ ಹೊಂದಿಕೊಳ್ಳದೇ ಸ್ಥಳೀಯ ಕೆಫೆಯಲ್ಲಿ ಕಾಲಹರಣ ಮಾಡುತ್ತಿರುತ್ತಾನೆ. ಪರಾನ್ಯಾ ಹೇಗೋ ಆ ಹಳ್ಳಿಯವಳಾಗುತ್ತಾಳೆ. ಅಲ್ಲಿಯ ಪಡ್ಡೆ ಹುಡುಗರಿಗೆ ಅವಳನ್ನು ಪೀಡಿಸುವುದೇ ಒಂದು ಕೆಲಸ. ಒಂದು ದಿನ ಕಿರುಕುಳದಿಂದ ಪಾರಾಗಲು ಓಡುತ್ತ ಹೋಗಿ ಸ್ಟ್ಯಾಲಿನ್‍ನ ಪ್ರತಿಮೆಯೊಂದರ ಪಕ್ಕಕ್ಕೆ ನಿಂತುಕೊಳ್ಳುತ್ತಾಳೆ. ಜನರ ಒಂದು ಗುಂಪೇ ಬಂದು ತಮಾಷೆ ನೋಡುತ್ತಿದೆ. ಅಷ್ಟರಲ್ಲಿ ಪುಟ್ಟಹುಡುಗಿಯೊಬ್ಬಳು ಅವಳನ್ನು ‘ಸ್ಟಾಲಿನ್‍ನ ಹೆಂಡತಿ’ ಎಂದು ಕರೆದುಬಿಡುತ್ತಾಳೆ. ಅಲ್ಲಿಂದ ಪ್ರಾರಂಭವಾಗುವುದು ಅವಳ ನರಕಯಾತನೆ. ಅಧಿಕಾರಿಗಳು ಅವಳೊಬ್ಬ ಗೂಢಚಾರಿ ಎನ್ನುವ ಸಂಶಯದ ಮೇಲೆ ಬಂಧಿಸಿ ಚಿತ್ರಹಿಂಸೆ ನೀಡುತ್ತಾರೆ. ಆದರೆ ಅವಳಿಂದ ಯಾವ ಮಾಹಿತಿಯೂ ಹೊರಬರುವುದಿಲ್ಲ ಆಗ ಅವಳನ್ನು ಬಿಡುಗಡೆ ಮಾಡಿ, ಅವಳ ಚಲನವಲನಗಳಿಂದ ಮಾಹಿತಿ ಸಿಗಬಹುದು ಎನ್ನುವ ಲೆಕ್ಕಾಚಾರದ ಮೇಲೆ ಅವಳ ಮೇಲೆ ಕಣ್ಣಿಟ್ಟಿರುತ್ತಾರೆ. ಹಿತ್ರಹಿಂಸೆಯನ್ನು ಅನುಭವಿಸಿದ ಪರಾನ್ಯಾಳ ಮಾನಸಿಕ ಸ್ಥಿಮಿತ ಇನ್ನಷ್ಟು ಹದಗೆಟ್ಟಿ, ತನಗೆ ಚಿತ್ರಹಿಂಸೆ ನೀಡಿದಾಗ ಪದೇ ಪದೇ ಕೇಳಿದ ಪದಗಳಾದ ‘ಗೂಢಚಾರ’ ‘ದೇಶದ್ರೋಹಿ’ ಎಂದು ಕಂಡಕಂಡವರನ್ನು ನೋಡಿ ಕರೆಯತೊಡಗುತ್ತಾಳೆ. ಅವಳು ಹೆಸರಿಸಿದ ವ್ಯಕ್ತಿಗಳನ್ನು ಪೊಲೀಸರು ಬಂಧಿಸತೊಡಗಿದಾಗ ಇಡೀ ಊರೇ ಪ್ರಕ್ಷುಬ್ದಗೊಳ್ಳುತ್ತದೆ. ಆಗ ಏನಾದರೂ ಮಾಡಲೇಬೇಕು ಎನ್ನುವ ಸ್ಥಿತಿಗೆ ಬಂದುನಿಂತ ಊರಲ್ಲಿ ಜೋಕ್ರ್ಯಾ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಬಲ್ಲ.

ಇದು ಹಂಗೇರಿಯದ ಚಿತ್ರನಿರ್ದೇಶಕ ಪೀಟರ್ ಬಾಷೋ 1990 ರಲ್ಲಿ ನಿರ್ದೇಶಿಸಿದ ‘ಸ್ಟ್ಯಾಲಿನ್’ಸ್ ಬ್ರೈಡ್’ ಎನ್ನುವ ಚಿತ್ರದ ಸಾರಾಂಶ.

ಒಂದು ಕಛೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬಳ ನರ್ವಸ್ ಬ್ರೆಕ್‍ಡೌನ್ ಆಗಿ, ತನ್ನೆಲ್ಲ ಬಟ್ಟೆಗಳನ್ನು ಕಳಚಿ ಬೆತ್ತಲೆಯಾಗಿ ರಸ್ತೆಯಲ್ಲಿ ನಡೆಯತೊಡುತ್ತಾಳೆ. ತನ್ನಪಾಡಿಗೆ ತಾನು ಆಸ್ಪತ್ರೆಗೆ ಹೋಗುತ್ತಿದ್ದ ಯುವವೈದ್ಯನೊಬ್ಬ ಇವಳನ್ನು ನೋಡಿ ತನ್ನ ಓವರ್‍ಕೋಟನ್ನು ಅವಳಿಗೆ ಧರಿಸುತ್ತಾನೆ. ತಾನು ಮಾಡಿದ ಈ ಪುಟ್ಟ ಕ್ರಿಯೆಯಿಂದ ಆಗುವ ಪರಿಣಾಮಗಳ ಯಾವುದೇ ಅರಿವಿಲ್ಲದೇ ಆ ವೈದ್ಯ ಮುಂದೆ ಸಾಗುತ್ತಾನೆ. ಆದರೆ ಅವನು ತನ್ನ ಓವರ್‍ಕೋಟನ್ನು ಆ ಬಡಪಾಯಿ ಹೆಣ್ಣುಮಗಳಿಗೆ ಕೊಟ್ಟ ಸ್ಥಳ ಆ ದೇಶದ ಆಳ್ವಿಕೆಯ ವಿರುದ್ಧ ಪ್ರತಿಭಟನೆ ಮಾಡುವವರ ತಾಣ. ಯುವವೈದ್ಯನ ಈ ಒಂದು ಪುಟ್ಟ ಕ್ರಿಯೆಯನ್ನೂ ಪ್ರತಿಭಟನೆಯ ಸಂಕೇತವೆಂದೇ ಅರ್ಥೈಸಿಕೊಳ್ಳುವ ಅಲ್ಲಿಯ ಅಧಿಕಾರಿಗಳು ಆ ವೈದ್ಯನನ್ನು ಬಂಧಿಸಿ, ತನಿಖೆಗೆ ಒಳಪಡಿಸುತ್ತಾರೆ. ಅಲ್ಲಿಂದ ಆ ವೈದ್ಯ ತನ್ನ ಜೀವನವನ್ನು ಹೊಸದಾಗಿ ಕಂಡಿಕೊಳ್ಳಬೇಕಾಗುತ್ತದೆ.

ಇದು ಪೀಟರ್ ಬಾಷೋ ಅವರ ‘ಬನಾನಾ ಸ್ಕಿನ್ ವಾಲ್ಟ್ಜ್’ (1987) ಚಿತ್ರದ ಸಾರಾಂಶ.

1928ರಲ್ಲಿ ಆಗಿನ ಚೆಕೊಸ್ಲೋವೇಕಿಯಾದಲ್ಲಿ ಹುಟ್ಟಿದ ಪೀಟರ್ ಬಾಷೋ, ಹಂಗರಿಯಾದ ಸಿನೆಮಾ ಮತ್ತು ನಾಟಕದ ಶಾಲೆಯಲ್ಲಿ ಪದವಿ ಪಡೆದುಕೊಂಡರು. ಎರಡನೇ ಮಹಾಯುದ್ಧದಲ್ಲಿ ಆದ ಸಾವು ನೋವುಗಳು, ಮಹಾಯುದ್ಧದ ನಂತರ ಹಂಗರಿ ದೇಶ ರಷಿಯಾದ ಸೆಟಲೈಟ್ ಸ್ಟೇಟ್ ಆಗಿ ಮುಂದುವರೆದದ್ದು, ಹೊಸ ಸಮಾಜವಾದಿ ವ್ಯವಸ್ಥೆಯ ಕಟ್ಟುನಿಟ್ಟುಗಳಿಗೆ ಸಾಕ್ಷಿಯಾಗಿದ್ದ ಪೀಟರ್ ಬಾಷೊ ಜೀವನದುದ್ದಕ್ಕೂ ಹೆಚ್ಚಾಗಿ ರಾಜಕೀಯ ಸಿನೆಮಾಗಳನ್ನೇ ಮಾಡಿದರು. 1969 ರಲ್ಲಿ ಅವರು ಮಾಡಿದ ಚಿತ್ರ ‘ದಿ ವಿಟ್ನೆಸ್’ನಲ್ಲಿ ಹಂಗರಿಯ ಕಮ್ಯುನಿಸ್ಟ್ ಕ್ರಾಂತಿಯಲ್ಲಿ ಭಾಗವಹಿಸಿದ್ದ ಒಬ್ಬ ವ್ಯಕ್ತಿ ತನ್ನ ಊರಿನ ಚರಂಡಿ, ನೀರಿನ ಹರಿವುಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾನೆ. ಅವನು ತನ್ನ ಮನೆಯಲ್ಲಿ ಅಡುಗೆಗಾಗಿ ಹಂದಿಯೊಂದನ್ನು ಕೊಯ್ಯುತ್ತಾನೆ. ಹಂಗರಿಯಲ್ಲಿ ಆಗ ಅದು ನಿಷಿದ್ಧ. ಯಾರಿಗೂ ಗೊತ್ತಾಗಬಾರದು ಎಂದು ಎಷ್ಟೇ ಲಕ್ಷ ವಹಿಸಿದ್ದರೂ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅವನನ್ನು ಬಂಧಿಸಿದ ನಂತರ ಶಿಕ್ಷೆಯಾಗುವ ಬದಲು ಬೇರೊಂದು ಊರಲ್ಲಿ ಉನ್ನತ ಕೆಲಸಕ್ಕೆ ನೇಮಿಸಲಾಗುತ್ತದೆ. ಏಕೆ ಎಂದು ಅವನಿಗೆ ತಿಳಿಯದು, ಒಂದು ಸಲ ನ್ಯಾಯಧೀಶನ ಮುಂದೆ ಬಂದು ನಿಲ್ಲಬೇಕಾದಲ್ಲಿ ತನ್ನ ಎಲ್ಲ ಸತ್ಯಗಳನ್ನು ಹೇಳಿಬಿಡುತ್ತಾನೆ. ಅದರಿಂದ ಅವನಿಗೆ ಮರಣದಂಡನೆ

ವಿಧಿಸಬೇಕೆಂದು ತೀರ್ಪು ಬರುತ್ತದೆ ಆದರೆ ಮರಣೆದಂಡನೆ ಜಾರಿಗೊಳ್ಳಬೇಕಾದ ಸಮಯದಲ್ಲಿಯೇ ರಾಜಕೀಯ ಪರಿಸ್ಥಿತಿ ಬದಲಾಯಿಸುತ್ತವೆ. ‘ದಿ ವಿಟ್ನೆಸ್’ ಎನ್ನುವ ಈ ಚಿತ್ರವನ್ನು ಆ ದೇಶದ ಸರಕಾರವೇ ನಿರ್ಮಿಸಿತ್ತು ಆದರೆ ಬಿಡುಗಡೆಯ ಮುಂಚೆಯೇ ಚಿತ್ರವನ್ನು ನಿಷೇಧಿಸಿತು. ಈ ಚಿತ್ರ ವಿದೇಶಗಳಲ್ಲಿ ಬಿಡುಗಡೆಯಾಗಿ ಪ್ರಸಿದ್ಧಿ ಮಾಡಿದ ನಂತರವೇ ಹಂಗೇರಿಯ ಕಮ್ಯನಿಸ್ಟ್ ಸರಕಾರ ನಿಷೇಧವನ್ನು ವಾಪಸ್ ತೆಗೆದುಕೊಂಡಿತು. ಬಾಷೋ ಅವರ ಚಿತ್ರಗಳಲ್ಲಿ ಕಮ್ಯನಿಸ್ಟ್ ಆಡಳಿತದ ಕೊರತೆಗಳನ್ನು ಪ್ರಶ್ನಿಸುತ್ತಾರೆಯೇ ಹೊರತು ಕಮ್ಯೂನಿಸಂ ಅನ್ನು ಅಲ್ಲ. ಹಾಗೂ ಅವರೆಲ್ಲ ಚಿತ್ರಗಳು ಎಷ್ಟೇ ಗಂಭೀರ ವಿಷಯಗಳನ್ನೆತ್ತಿಕೊಂಡರೂ ಚಿತ್ರದುದ್ದಕ್ಕೂ ಹಾಸ್ಯ, ದುರಂತದ ವಿಡಂಬನೆಯೇ ಎದ್ದುಕಾಣುತ್ತವೆ. ಕಮ್ಯನಿಸಂ ಬಗ್ಗೆ, ಅದರ ಇತಿಹಾಸದ ಬಗ್ಗೆ ಅನೇಕ ಅಧ್ಯಯನಗಳು ನಮಗೆ ಲಭ್ಯವಿವೆ ಆದರೆ ಕ್ರಾಂತಿಯ ನಂತರ ಅಲ್ಲಿಯ ಸಬ್‍ಆಲ್ಟರ್ನ್ ಇತಿಹಾಸದ ಬಗ್ಗೆ ತಿಳಿಯಬೇಕಾದರೆ ನಾವು ಸಾಹಿತ್ಯ, ಸಿನೆಮಾಗಳನ್ನೇ ನೆಚ್ಚಬೇಕಾಗುತ್ತದೆ. ಆ ನಿಟ್ಟಿನಲ್ಲಿ ಪೀಟರ್ ಬಾಷೋ ಮಹತ್ವದ ಚಿತ್ರ ಬರಹಗಾರ ಮತ್ತು ನಿರ್ದೇಶಕ.

ಸಿನೆಮಾ ನಿರ್ದೇಶನದ ಕೌಶಲ್ಯದ ಪ್ರಶ್ನೆ ಬಂದಾಗಲೂ ಪೀಟರ್ ಬಾಷೋ ನಂತಹ ನಿರ್ದೇಶಕರು ಗೆಲ್ಲುತ್ತಾರೆ ಎಂದು ನನಗನಿಸುತ್ತದೆ. ಏಕೆಂದರೆ ಅವರ ಚಿತ್ರಗಳಲ್ಲಿ ನಮಗೆ ಕಾಣಿಸುವುದು, ಮನಕ್ಕೆ ತಟ್ಟುವುದು ಆಯಾ ಕಥೆಗಳು, ಪಾತ್ರಗಳು, ಪಾತ್ರಗಳು ನೋವು ನಲಿವು ಅದರೊಂದಿಗೆ ಆಯಾ ಸಾಮಾಜಿಕ ಪರಿಸರದ ಚಿತ್ರಣ ಮತ್ತು ಅವರು ಕೇಳುವ ಪ್ರಶ್ನೆಗಳೇ ಹೊರತು ಎಲ್ಲಿಯೂ ನಮಗೆ ನಿರ್ದೇಶಕÀ ಅಥವಾ ಛಾಯಗ್ರಹಕÀ ಕಾಣಿಸಿಕೊಳ್ಳುವುದಿಲ್ಲ. ಒಂದು ಉತ್ತಮ ಚಿತ್ರದ ಕರುಹು ಇದೇ ತಾನೇ?

ವಿಶ್ವದ ಅಂಡರ್‍ರೇಟೆಡ್ ನಿರ್ದೇಶಕರಲ್ಲಿ ಒಬ್ಬರು ಎನ್ನಲಾಗುವ ಪೀಟರ್ ಬಾಷೋ ತಮ್ಮ ಚಲನಚಿತ್ರ ನಿರ್ದೇಶನದ ಸುಧೀರ್ಘ ಜೀವನವನ್ನು ಮುಗಿಸಿ 2009ರಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ತೀರಿಕೊಂಡರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...