Homeಮುಖಪುಟಭೂದಾಹಕ್ಕೆ ಆಹುತಿಯಾದರಾ ಆಕ್ಟಿವಿಸ್ಟ್ ಅಜಿತ್ ನಾಯಕ್?!

ಭೂದಾಹಕ್ಕೆ ಆಹುತಿಯಾದರಾ ಆಕ್ಟಿವಿಸ್ಟ್ ಅಜಿತ್ ನಾಯಕ್?!

- Advertisement -
- Advertisement -

ಉತ್ತರ ಕನ್ನಡದ ಒಂದು ಕಾಲದ ಕೈಗಾರಿಕಾ ನಗರ ದಾಂಡೇಲಿ ಭೂಮಾಫಿಯಾದ ಆಡಂಬೋಲದಂತಾಗಿ ಹೋಗಿದೆ! ದೈತ್ಯ ರಾಜಕಾರಣಿ ದೇಶಪಾಂಡೆ ದೊಡ್ಡ ಕೈಗಾರಿಕೆಗಳ ಪ್ರಭಾವಿ ಮಂತ್ರಿ ಮಾಂಡಲೀಕನಾಗಿದ್ದಾಗಲೇ ಇಲ್ಲಿಯ ಒಂದೊಂದೇ ಕಾರ್ಖಾನೆಗಳು ಬಾಗಿಲು ಎಳೆದುಕೊಂಡಿರುವುದು ಇವತ್ತಿಗೂ ಬಿಡಿಸಲಾಗದ ಒಗಟಾಗೇ ಉಳಿದಿದೆ. ಈಗೇನಿದ್ದರೂ ದಾಂಡೇಲಿಯಲ್ಲಿ ಪ್ರವಾಸೋದ್ಯಮ “ದಂಧೆ”ಯ ಭಯಾನಕ ಭರಾಟೆ! ದಾಂಡೇಲಿ ಜೋಯಿಡಾದ ನಿತ್ಯಹರಿದ್ವರ್ಣ ಕಾಡಿನ ನೀರವತೆ ಮೃಗ-ಪಕ್ಷಿಗಳ ಕೂಗು-ಕಲರವ, ಕಾಳಿ-ಪಾಂಡರಿ ನದಿಗಳ ನಿನಾದ ತಂಡೋಪತಂಡವಾಗಿ ಪ್ರವಾಸಿಗರನ್ನ ಸೆಳೆಯುತ್ತಿದೆ. ಒಂದು ವಾರಕ್ಕೆ ಹಲವು ಕೋಟಿ ವಹಿವಾಟು ಆಗುತ್ತಿದೆ.
ದಾಂಡೇಲಿ-ಜೋಯಿಡಾದ ಸುತ್ತಲೂ ರೆಸಾರ್ಟ್, ಹೋಮ್‍ಸ್ಟೇಗಳದೇ ಹಾವಳಿ. ಪ್ರವಾಸೋದ್ಯಮದ ಮೋಜು-ಮಸ್ತಿ ಭೂ ಮಾಫಿಯಾ ನಿಭಾಯಿಸುತ್ತಿದೆ. ಹೀಗಾಗಿ ದಾಂಡೇಲಿಯ ಕಾಡಿನ ಅಂಚಿನ ಮತ್ತು ಕಾಳಿ ನದಿದಂಡೆಯ ಒಂದಿಂಚು ಜಾಗಕ್ಕೂ ಬಂಗಾರದ ಬೆಲೆ ಬಂದಿದೆ! ಟೂರಿಸಮ್‍ಗೆ ತೆಕ್ಕೆಹಾಕಿಕೊಂಡಿರುವ ಲ್ಯಾಂಡ್ ಲಫಡಾ, ಲಡಾಯಿ ದಾಂಡೇಲಿಯಲ್ಲಿ ನಿತ್ಯನೂತನ ಮುಂಬೈ-ಕೇರಳ-ಬೆಳಗಾವಿ-ಬೆಂಗಳೂರು ಮತ್ತು ಸ್ಥಳೀಯ ಭೂಭಾನ್ಗಡಿದಾರರು ಯಾರ್ಯಾರದೋ ಜಾಗ ಕಬಳಿಸಲು ಹೊಂಚುಹಾಕಿ ಕುಂತಿದ್ದಾರೆ. ಧೋಖಾ ಬಾಜಿಗಳ ಹಿಂದೆ ಸರ್ಕಾರಿ ಏಜೆನ್ಸಿಗಳು, ಕಾನೂನಿನ ಸಿಕ್ಕು ಬಿಡಿಸುವ ನ್ಯಾಯವಾದಿಗಳು, ಖಾಕಿಕಿರಾತಕರೆಲ್ಲ ಅಡಗಿಕೊಂಡಿದ್ದಾರೆ. ರೆಸಾರ್ಟ್ ಉದ್ಯಮಿಯಾಗಿ ಕೊಪ್ಪರಿಗೆ ಕಾಸು ಬಾಚುವ ದುರಾಸೆಯ ಪೈಪೋಟಿಯಿಂದ ದಾಂಡೇಲಿಯ ಪ್ರವಾಸೋದ್ಯಮಕ್ಕೆ ಈಗ ರಕ್ತದ ಕಲೆಯೂ ಅಂಟಿಬಿಟ್ಟಿದೆ!
ಕಳೆದ ಶುಕ್ರವಾರ, ಜುಲೈ 27ರ ರಾತ್ರಿ 9.30ರ ಹೊತ್ತಿಗೆ ಮುಸುಕುಧಾರಿ ಪಾತಕಿಯ ಮಚ್ಚಿನೇಟಿಗೆ ಹತರಾದ ದಾಂಡೇಲಿಯ ನಾಮಾಂಕಿತ ನ್ಯಾಯವಾದಿಯೂ, ಸಾಮಾಜಿಕ ಹೋರಾಟಗಾರರೂ ಆಗಿದ್ದ ಅಜಿತ್‍ನಾಯಕ್ ಬರ್ಬರ ಹತ್ಯೆ ಪ್ರಕರಣವೂ ಇದೇ ಪ್ರವಾಸೋದ್ಯಮ ನಂಟಿನ ಭೂ ಮಾಫಿಯಾದ ಭೀಭತ್ಸ ಕಾರ್ಯಾಚರಣೆ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಅಜಿತ್ ವಕೀಲಿಕೆಯಿಂದ ಭರ್ಜರಿ ದುಡ್ಡು-ಭೂಮಿ ಮಾಡಿಕೊಂಡಿದ್ದರು. ಸಣ್ಣ ಸೈಜಿನ ರಾಜಕಾರಣಿಯೂ ಆಗಿದ್ದರು. ದಾಂಡೇಲಿ ನಗರಸಭೆಯ ಅರ್ಯರೂ ಒಮ್ಮೆ ಆಗಿದ್ದರು. ಬ್ಲಾಕ್-ಕಾಂಗ್ರೆಸ್ ಕಮಿಟಿಯ ಅಧ್ಯಕ್ಷತೆ ನಿಭಾಯಿಸಿದ್ದರು; ಎಂಪಿಯಾಗಿದ್ದ ಮ್ಯಾಗಿ, ಸಿಎಂ ಆಗಿದ್ದ ‘ಬಂ’ ಬಾಂಧವ್ಯ ಅಜಿತ್‍ಗೆ ಇತ್ತು. ದಾಂಡೇಲಿಯ ಪರಿಸರ, ಸಾಮಾಜಿಕ ವ್ಯವಸ್ಥೆಗೆ ತೊಂದರೆಯಾದಾಗ ಆತ ಸೆಟೆದು ನಿಲ್ಲುತಿದ್ದರು. ಹೋರಾಟ ಕಟ್ಟೆ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.
ದಾಂಡೇಲಿ ತಾಲ್ಲೂಕು ಮಾಡಬೇಕೆಂದು ಸಂಘಟನೆ ಮಾಡಿ ಹೋರಾಟ ಅಜಿತ್‍ನಾಯಕ್ ರೂಪಿಸಿದ್ದರು. ಈಚೆಗೆ ದಾಂಡೇಲಿ ತಾಲ್ಲೂಕು ಘೋಷಣೆಯಾದಾಗ ಆತ ತುಂಬ ಖುಷಿಯಾಗಿದ್ದರು. ದಾಂಡೇಲಿಯ ಜೀವನದಿ ಕಾಳಿ ಬೆನ್ನಿವನ ಮೇಲೆ ಸಾಲಾಗಿ ಕಟ್ಟಲಾಗಿರುವ ಜಲವಿದ್ಯುತ್ ಡ್ಯಾಮ್‍ನಿಂದಾಗುವ ಡ್ಯಾಮೇಜ್ ಅರಿವಿನ ಕಾಳಿ ಬಚಾವ್ ಆಂದೋಲನದಲ್ಲಿ ಅಜಿತ್ ಸಕ್ರಿಯರಾಗಿದ್ದರು; ನದಿಯಿಂದ ಎತ್ತುವ ಮರಳು ಮಾಫಿಯಾ, ಕೈಗಾರಿಕಾ ಮಾಲಿನ್ಯ ಮಾಫಿಯಾದ ಕಣ್ಣುರಿಗೂ ಆತ ಕಾರಣರಾಗಿದ್ದರು. ಆದರೆ ಇದ್ಯಾವುದೂ ಆತನ ಕೊಂದೇ ಹಾಕುವಷ್ಟು ಸೇಡಿನ ಶತ್ರುಗಳನ್ನೇನೂ ಸೃಷ್ಟಿಸಿರಲಿಲ್ಲ. ಹಾಗಂತ ಆತ ಗÀುಣಸ್ವಭಾವ ಕಂಡಿರುವ ದಾಂಡೇಲಿಯ ಜನರು ಹೇಳುತ್ತಾರೆ.
ಹಾಗಿದ್ದರೆ ಅಜಿತ್‍ನಾಯಕ್‍ರ ಕೊಲೆ ಮಾಡುವಂಥ ಹಠದ ಜಿದ್ದಿನ ಹಿನೆÀ್ನಲೆ ಏನಿರಬಹುದು ಎಂದು ಉತ್ತರ ಕನ್ನಡದಲ್ಲಿ ಬಿರುಸಿನ ಚರ್ಚೆಗಳು ನಡೆದಿದೆ. ಪೊಲೀಸರು ಆತನ ವಕೀಲಿ ವೃತ್ತಿಗೆ ಸುತ್ತಿಕೊಂಡಿದ್ದ ಒಂದಿಷ್ಟು ಭೂಮಾಫಿಯಾ ವ್ಯವಹಾರಗಳತ್ತ ತನಿಖೆ ಕೇಂದ್ರೀಕರಿಸಿದ್ದಾರೆ. ಈಚೆಗೆ ಅಜಿತ್‍ನಾಯಕ್‍ಗೆ ಭೂಮಿಯ ಮೋಹ ವಿಪರೀತವಾಗಿತ್ತು. ಆತ ಹಲವು ಕಡೆ ಬೇನಾಮಿಯಾಗಿ ಭೂಖರೀದಿಯೂ ಮಾಡಿದ್ದರು. ರೆಸಾರ್ಟ್ ಬಿಸ್ನೆಸ್‍ನ ಸೆಳೆತಕ್ಕೆ ಬಿದ್ದಿದ್ದರಂತೆ. ಕಾಳಿನದಿ ತೀರದ ಮೌಳಂಗಿ ಎಂಬ ಮನಮೋಹಕ ಪ್ರದೇಶದ ಪ್ರೈಮ್ ಲ್ಯಾಂಡ್ ಮೇಲೆ ಅಜಿತ್ ಕಣ್ಣು ಬಿದ್ದಿತ್ತಂತೆ. ಇದೇ ಆತನಿಗೆ ಗಂಡಾಂತರಕಾರಿ ಆಯ್ತೆಂಬ ಕಾರಾರುವಾಕ್ಕಾದ ಲೆಕ್ಕಾಚಾರದ ಮಾತುಗಳೀಗ ದಾಂಡೇಲಿಯಲ್ಲಿ ಮೊಳಗಲಾರಂಭಿಸಿದೆ!
ಒಂದು ಸುದ್ದಿಯಂತೆ ಮೌಳಂಗಿಯ ಎರಡು ದಲಿತ ಕುಟುಂಬದ ಮಧ್ಯೆ ಭೂವ್ಯಾಜ್ಯ ನಡೆದಿತ್ತು. ಒಂದು ಕಡೆ ವಕೀಲರಾಗಿ ಅಜಿತ್‍ನಾಯಕ್ ನಿಂತಿದ್ದರು. ಎದುರಾಳಿ ತಂಡದ ಪಾಂಡುರಂಗ ಕಾಂಬಳೆಗೆ ಬಲಾಢ್ಯ ಭೂಮಾಫಿಯಾದ ನಂಟಿತ್ತು. ಕಾಂಬಳೆಯ ಜಾಗವನ್ನು ಎದುರುದಾರರು ಕಬ್ಜಾ ಮಾಡಿಕೊಂಡಿದ್ದರು. ಇದು ಘನಘೋರ ಕಾಳಗಕ್ಕೂ ಕಾರಣವಾಗಿಹೋಯ್ತು. ಆಗ ಅಜಿತ್ ನಾಯಕ್ ಮುತುವರ್ಜಿಯಲ್ಲಿ ಸರ್ವೇಯೂ ನಡೆಯಿತು. ತಾವೇ ಖುದ್ದು ನಿಂತು ಮೋಜುಣಿ ಮಾಡಿಸಿದ್ದರಂತೆ. ದೀಪಕ್ ಯಾನೆ ಪಾಂಡುರಂಗ ಕಾಂಬಳೆಯವರ ವಿರುದ್ಧ ಪೊಲೀಸ್ ಕಂಪ್ಲೇಂಟೂ ಆಗಿತ್ತು. ಪೊಲೀಸರು ಅಜಿತ್‍ನಾಯಕ್‍ರ ಪ್ರಭಾವದಿಂದ ಎದುರಾಳಿಗಳನ್ನು ಸತಾಯಿಸಿದ್ದರು. ಅಷ್ಟೇ ಅಲ್ಲ, ಕೆರಳಿದ ಕಾಂಬಳೆ ಪಾಳಯವು ಅಜಿತ್‍ನಾಯಕ್‍ರ ಕಕ್ಷಿದಾರನ ಜಾಗಕ್ಕೆ ಮಾರಕಾಸ್ತ್ರಗಳ ಸಮೇತ ಲಗ್ಗೆಹಾಕಿ ಧಮಕಿ ಹಾಕಿತ್ತು. ಒಂದೆಡೆ ತಗಾದೆ ನ್ಯಾಯಾಲಯ ಮೆಟ್ಟಿಲೇರಿದರೆ, ಮತ್ತೊಂದೆಡೆ ಆರೋಪಿಗಳಿಗೆ ಪೊಲೀಸರು ಜೈಲಿಗೆ ಹಾಕಿ ಬೆಂಡೆತ್ತಿದ್ದರು. ಇದಕ್ಕೆಲ್ಲ ವಕೀಲ ಅಜಿತ್‍ನಾಯಕ್ ಚಿತಾವಣಿಯೇ ಕಾರಣವೆಂಬ ಸಿಟ್ಟು ಕಾಂಬಳೆ ಕುಟುಂಬಕ್ಕಿತ್ತು. ಕೆರಳಿ ಬುಸುಗುಡುತ್ತಿದ್ದ ಕಾಂಬಳೆ ತಂಡ ಅಜಿತ್‍ನಾಯಕ್‍ಗೆ ಬೆದರಿಕೆ ಫೋನ್ ಕರೆಗಳನ್ನು ಆಗಾಗ ಮಾಡುತ್ತಲೇ ಇತ್ತು.
ಇದನ್ನು ಅಜಿತ್ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ ಈಗ ದಾಂಡೇಲಿಯಲ್ಲಿರುವ ಪುಕಾರುಗಳ ಪ್ರಕಾರ ತುಂಬ ಬೆಲೆಬಾಳುವ ಮಹತ್ವದ ಟೂರಿಸಮ್ ಸೈಟಾಗಿದ್ದ ಮೌಳಂಗಿಯ ಜಾಗದಲ್ಲಿ ಬೇನಾಮಿ ರೆಸಾರ್ಟ್ ಮಾಡುವ ಸ್ಕೆಚ್ ಹಾಕಿದ್ದ ಅಜಿತ್‍ನಾಯಕ್ ತುಂಬ ವ್ಯವಸ್ಥಿತವಾಗಿ ಎದುರಾಳಿಗಳ ಹಣಿಯಲು ಹತ್ತಿದ್ದರು. ಆದರೆ ಇದೇ ಜಾಗಕ್ಕಾಗಿ ಬಲಾಢ್ಯ ಭೂಮಾಫಿಯಾ ಒಂದು ಪ್ರಯತ್ನ ನಡೆಸಿ ಮತ್ತೊಂದು ದಲಿತÀ ಕುಟುಂಬದ ಬೆನ್ನಿಗೆ ನಿಂತಿತ್ತು. ಮೌಳಂಗಿಯಲ್ಲಿ ಈಕೋ ಪಾರ್ಕ್ ಆದ ಬಳಿಕ ವಿವಾದಿತ ಜಾಗದ ಕಿಮ್ಮತ್ತು ಜಾಸ್ತಿಯಾಗಿತ್ತು; ಅಜಿತ್ ನಾಯಕ್ ಕೂಡಾ ಸದ್ರಿ ಜಾಗದ ಬಗ್ಗೆ `ವಿಶೇಷ’ ಆಸಕ್ತಿ ವಹಿಸಿದ್ದರು. ಇದು ಪಾಂಡುರಂಗ ಕಾಂಬಳೆಯ ಆಕ್ರೋಶ ಹೆಚ್ಚಿಸಿತ್ತು. ಈ ದ್ವೇಷ ಒಳಗೊಳಗೇ ಹೊಗೆಯಾಡುತ್ತಲೇ ಇತ್ತು. ಅಜಿತ್‍ನಾಯಕ್‍ರ ಕಾನೂನು ತಂತ್ರಗಾರಿಕೆ, ಖಾಕಿಗಳ ಮೇಲಿನ ಹಿಡಿತದಿಂದ ಎದುರಾಳಿ ತಂಡ ಹೈರಾಣಾಗಿಹೋಗಿತ್ತು. ಇದು ಕೊಲೆಗೂ ಪ್ರೇರೇಪಿಸಿತೆಂಬ ತರ್ಕ ನಡೆದಿದೆ. ಇದು ಜನಸಾಮಾನ್ಯರದ್ದಷ್ಟೇ ಅಲ್ಲ, ಪೊಲೀಸರ ತಲೆಯೂ ತಿನ್ನುತ್ತಿದೆ.
ಹಂತಕರು ಹಲವು ದಿನಗಳಿಂದ ಅಜಿತ್‍ನಾಯಕ್ ಚಲನವಲನ, ಚಟುವಟಿಕೆ ಮೇಲೆ ನಿಗಾಯಿಟ್ಟು ನೋಡಿದ್ದಾರೆ. ಆತ ಅಂದು ರಾತ್ರಿ ದಾಂಡೇಲಿಯ ಜೆಎನ್ ರಸ್ತೆಯಲ್ಲಿರುವ ಕಚೇರಿಯಿಂದ ಹೊರಬರುವುದನ್ನೇ ಕಾದು ಕುಳಿತಿದ್ದಾರೆ. ಒಬ್ಬರೇ ಬರುವುದು ಖಾತ್ರಿಯಾಗಿದೆ. ಆತ ಕಾರಿನ ಬಳಿ ಹೋಗುವಾಗ ಮಚ್ಚಿನಿಂದ ತಲೆಗೆ ಹೊಡೆದಿದ್ದಾರೆ. ತಲೆಯ ಎಡಭಾಗ ಸೀಳಿಹೋಗಿದೆ. ಕಿವಿಯೂ ಚಿಂದಿಯಾಗಿದೆ. ಕೊಚ್ಚಿದ ರಭಸಕ್ಕೆ ಅಜಿತ್ ನಿಂತಲ್ಲೇ ಕುಸಿದು ರಕ್ತದ ಮಡುವಲ್ಲಿ ಒದ್ದಾಡಿ ಜೀವ ಬಿಟ್ಟಿದ್ದಾರೆ. ಕತ್ತಲಲ್ಲಿ ಹಂತಕ ಕರಗಿಹೋಗಿದ್ದಾನೆ. ಪೊಲೀಸರು ಈ ಲ್ಯಾಂಡ್ ಪ್ರಕರಣದತ್ತಲೇ ತನಿಖೆ ನಡೆಸಿದ್ದಾರೆ. ಹಂತಕನನ್ನು ಬಂಧಿಸಲಾಗಿದೆ ಎಂಬ ಅನಧಿಕೃತ ಸುದ್ದಿಯೂ ಹಬ್ಬಿದೆ ಯಲ್ಲಾಪುರದಲ್ಲಿ ಸೆರೆಸಿಕ್ಕಿರುವ ಹಂತಕ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾನಂತೆ!
ಆತ ಅಸ್ತ್ರವಷ್ಟೇ! ಬಳಸಿದ್ದು ಯಾರೆಂಬುದು ಬಹಿರಂಗವಾಗಬೇಕಾಗಿದೆ. ಒಂದಂತೂ ಖರೆ; ಅಜಿತ್‍ನಾಯಕ್ ಕೋಲೆ ದಾಂಡೇಲಿ ಭಾಗದ ರೆಸಾರ್ಟ್ ದಂಧೆಯ ಅನಾಹುತಕಾರಿ ಆಯಾಮ ತೋರಿಸಿದೆ!

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...