Homeಅಂಕಣಗಳುಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

ಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

- Advertisement -
- Advertisement -

ನಿಖಿಲ್ ಕೊಲ್ಫೆ |

ಪೊಳ್ಳು ರಾಷ್ಟ್ರೀಯತೆ ಮತ್ತು ಜನಪ್ರೀತಿಯಿಲ್ಲದ ಭೂಪಟ ಪ್ರೇಮ ಸರ್ವಾಧಿಕಾರದ ಒಂದು ಮುಖ್ಯ ಲಕ್ಷಣ. ಆಸ್ಟ್ರಿಯನ್ ಸಂಜಾತ ಅಡಾಲ್ಫ್ ಹಿಟ್ಲರ್ ಜರ್ಮನ್ ರಾಷ್ಟ್ರೀಯತೆ ಹೆಸರಿನಲ್ಲಿ ಜರ್ಮನಿಯಲ್ಲಿ ಅಧಿಕಾರ ಹಿಡಿದ. ಅವನ ಜರ್ಮನ್ ರಾಷ್ಟ್ರೀಯತೆಯಲ್ಲಿ ಯಹೂದಿಗಳಿಗೆ, ಜಿಪ್ಸಿಗಳಿಗೆ, ಪೋಲಿಷ್ ಸಂಜಾತರಿಗೆ, ಕರಿಯರು, ಮಿಶ್ರ ರಕ್ತದವರಿಗೆ ಸ್ಥಾನವಿರಲಿಲ್ಲ! ಶುದ್ಧರಕ್ತದವರೆಂದು ಅವನು ಭಾವಿಸಿದ್ದ ಅರ್ಯನ್ ಜನಾಂಗದವರಿಗೆ ಮಾತ್ರ ಸ್ಥಾನವಿತ್ತು.
ಅತ ಸುಳ್ಳು ದೇಶಪ್ರೇಮದ ಬೊಂಬಡ ಬಜಾಯಿಸಿದಾಗ ಎಲ್ಲರೂ ಅದಕ್ಕೆ ತಲೆದೂಗಿಸಿದರು. ಎಲ್ಲರೂ ದೇಶಕ್ಕಾಗಿ ಅದನ್ನು ತ್ಯಾಗ ಮಾಡಬೇಕು, ಇದನ್ನು ತ್ಯಾಗ ಮಾಡಬೇಕು ಎಂದು ಹೇಳಿದ. ಕೊನೆಗೆ ಜನರು ತಮ್ಮ ಸ್ವಾತಂತ್ರ್ಯವನ್ನು ತ್ಯಾಗ ಮಾಡಬೇಕಾಯಿತು.
ತನ್ನ ವಿಚಾರಗಳಿಗೆ ತಲೆಬಾಗುವವರು ಮಾತ್ರ. ದೇಶಪ್ರೇಮಿಗಳು, ಉಳಿದವರೆಲ್ಲ ದೇಶದ್ರೋಹಿಗಳೆಂದು ಆತನ ಭ್ರಮೆ. ಜನರನ್ನು ಪೋಲೆಂಡ್ ಸಹಿತ ನೆರೆಯ ದೇಶಗಳ ಮೇಲೆ ಎತ್ತಿಕಟ್ಟಿ ಆಕ್ರಮಣ ಮಾಡಿ ಜರ್ಮನಿಯನ್ನು ಭೂಪಟದಲ್ಲಿ ವಿಸ್ತರಿಸಿದ. ಅದರೆ, ಜನರದ್ದು ನಾಯಿಪಾಡಾಯಿತು.
ಇದೀಗ ಭಾರತದಲ್ಲಿ ದೇಶಪ್ರೇಮದ ಮತ್ತು ರಾಷ್ಟ್ರೀಯತೆಯ ಮಾತಾಗುತ್ತಿದೆ. ಈ ರಾಷ್ಟ್ರೀಯತೆಯಲ್ಲಿ ಮತೀಯ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ, ದಲಿತರಿಗೆ ಯಾವ ಸ್ಥಾನವಿದೆ? ರಾಷ್ಟ್ರೀಯತೆಯ ಹೆಸರಲ್ಲಿ ಮೇಲ್ಜಾತಿ ಪ್ರಾಬಲ್ಯ ಒಪ್ಪಿಕೊಳ್ಳಬೇಕೆ?
ನಮ್ಮಲ್ಲಿಯೂ ದೇಶಕ್ಕಾಗಿ ತ್ಯಾಗ ಮಾಡಿ, ಸಬ್ಸಿಡಿ ತ್ಯಾಗಮಾಡಿ ಇತ್ಯಾದಿ ಹೇಳಲಾಗುತ್ತದೆ. ಗಗನಕ್ಕೇರಿದ ತೈಲ, ಅನಿಲ ಬೆಲೆಯೂ ದೇಶಕ್ಕಾಗಿ ಮಾಡುವ ತ್ಯಾಗವಂತೆ!
ಇಲ್ಲಿ ಕೂಡಾ ಪಾಕಿಸ್ತಾನ, ಬಾಂಗ್ಲ, ನೇಪಾಳ, ಶ್ರೀಲಂಕಾ, ಬರ್ಮಾ ಒಳಗೊಂಡಂತಹ ಅಖಂಡ ಭಾರತದ ಸಾಮ್ರಾಜ್ಯಶಾಹಿ ಕಲ್ಪನೆಗೆ ನೀರುಣಿಸಿ ಬೆಳೆಸುವವರು ಇನ್ನೂ ಇದ್ದಾರೆ. ಭೂಪಟ ಮತ್ತು ಜನಪ್ರೇಮದ ವ್ಯತ್ಯಾಸವನ್ನು, ನಿಜವಾದ ದೇಶಪ್ರೇಮವನ್ನು ಸರ್ವಾಧಿಕಾರಿ ಪ್ರವೃತ್ತಿಯು ಎಂದಿಗೂ ತಿಳಿದುಕೊಳ್ಳಲಾರದು.
ಗಿಲೀಟಿನ ಸುಳ್ಳು ಪ್ರಚಾರ ಸರ್ವಾಧಿಕಾರದ ಮುಖ್ಯ ಲಕ್ಷಣಗಳಲ್ಲಿ ಇನ್ನೊಂದು. ನಾಜಿ ಜರ್ಮನಿಯಲ್ಲಿ ಗೊಬೆಲ್ಸ್ ಅದರ ರೂವಾರಿಯಾಗಿದ್ದ. ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಅವನ ನಿಲುವಾಗಿತ್ತು. ಅಪಪ್ರಚಾರವು ಅವರ ಪ್ರಚಾರದ ಇನ್ನೊಂದು ಮುಖ.
ಇಂದು ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಹಸಿಹಸಿ ಸುಳ್ಳುಗಳನ್ನು ಉತ್ಪಾದಿಸುವ ಕಾರ್ಖಾನೆಗಳೇ ನಡೆಯುತ್ತಿವೆ. ಅವುಗಳನ್ನು ಕಾಸಿಗಾಗಿ ಶೇರ್ ಮಾಡುವವರ ಪಡೆಗಳಿವೆ. ವಿದ್ವೇಷದ, ಅವಹೇಳನೆಯ ವೈಯುಕ್ತಿಕ ನಿಂದನೆಯ, ಅಶ್ಲೀಲವಾದ ಬೆದರಿಕೆಯ ಸಂದೇಶಗಳು ಸ್ವಯಂಘೋಷಿತ ಸಂಸ್ಕೃತಿಯ ರಕ್ಷಕರಿಂದ ಬರುತ್ತಿರುವುದು ಬರೇ ಕಾಕತಾಳೀಯ. ಅಗಿರಲಾರದು!
ಗಾಂಧಿ ಪದತಲದಲ್ಲಿ ಯುವಕ ಮೋದಿ, ಭೋಸರ ಪಕ್ಕದಲ್ಲಿ ವಂದನೆ ಸ್ವೀಕರಿಸುತ್ತಿರುವ ಮೋದಿ, ಭಗತ್ ಸಿಂಗ್‍ಗೆ ಜೈಲಿನಲ್ಲಿ ಮನೆಯೂಟ ನೀಡುತ್ತಿರುವ ಮೋದಿ ಇತ್ಯಾದಿಯಾಗಿ ನಾಜಿಗಳೇ ನಾಚುವಂತಹ ಫೊಟೋಷಾಪ್ ಸುಳ್ಳುಗಳನ್ನು ಹರಿದುಬಿಡಲಾಗುತ್ತದೆ. 1950ರಲ್ಲಿ ಅತ ಹುಟ್ಟಿದಾಗ ಅವರೆಲ್ಲಾ ಮಣ್ಣಲ್ಲಿ ಲೀನವಾಗಿಹೋಗಿದ್ದರೆಂಬ ಸ್ಪಷ್ಟ ಸತ್ಯವೂ ಗೋಚರವಾಗದ ಮುಗ್ಧ ಜನರು ಅವುಗಳನ್ನು ನಂಬುತ್ತಾರೆ. ಇದುವೇ ಗೋಬೆಲ್ಸ್ ತಂತ್ರ.
ಪ್ರಧಾನಿಯವರ ಸೆಲ್ಫಿಗಳಲ್ಲಿ ವ್ಯಕ್ತವಾಗುವ ಸೆಲ್ಫ್ ಮೋಹ ಗಾಬರಿ ಹುಟ್ಟಿಸುತ್ತದೆ. ಅವರು ಲಕ್ಷಾಂತರ ಟ್ವೀಟ್‍ಗಳಿಗೆ ಸ್ವತಃ ಪ್ರತಿಕ್ರಿಯಿಸುತ್ತಾರೆಂದು ನಂಬುವ ಮೂರ್ಖರೂ ಇದ್ದಾರೆ. ಇದು ಸಾಧ್ಯವೆ, ಮತ್ತೆ ಅವರು ಕೆಲಸ ಮಾಡುವುದು ಯಾವಾಗ, ಅವರ ಗಡಿಯಾರದಲ್ಲಿ ದಿನಕ್ಕೆ 48 ಗಂಟೆಗಳಿವೆಯೇ ಎಂದು ಯಾರೂ ಪ್ರಶ್ನೆ ಮಾಡಲು ಹೋಗುವುದಿಲ್ಲ. ಇಂತಹ ಕುರುಡು ನಂಬಿಕೆ, ವ್ಯಕ್ತಿ ವೈಭವೀಕರಣವೇ ಸರ್ವಾಧಿಕಾರಕ್ಕೆ ಮೆಟ್ಟಿಲು.
ಎಲ್ಲಾ ಸರ್ವಾಧಿಕಾರಿಗಳು ಹಿಂದಿನ ಆಡಳಿತವನ್ನು ದೂರಿ ಅಭಿವೃದ್ಧಿಯ ಮಂತ್ರವನ್ನು ಜಪಿಸಿದ್ದಾರೆ. ಹಿಟ್ಲರ್ ಮತ್ತು ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೊಲಿನಿಯಂತವರೂ ಹಿಂದೆ ಬಿದ್ದಿರಲಿಲ್ಲ. ತಮ್ಮ ತಮ್ಮ ದೇಶಗಳನ್ನು ಸಮೃದ್ಧಿಯ ಶಿಖರಕ್ಕೆ ಕೊಂಡೊಯ್ಯುವ ಭರವಸೆ ನೀಡಿ ವಿನಾಶದ ಪಾತಾಳಕ್ಕೆ ತಳ್ಳಿದರು. ಜನಕೇಂದ್ರಿತವಲ್ಲದ ಮತ್ತು ಮಿಲಿಟರಿ ಯಂತ್ರವನ್ನು ಬಲಪಡಿಸುವ ಕೈಗಾರಿಕೀಕರಣ ಅದಾಗಿತ್ತು. ಹೊಸ ರೀತಿಯ ಬಂದೂಕುಗಳು, ಫಿರಂಗಿಗಳು, ಟ್ಯಾಂಕ್‍ಗಳು, ಯುದ್ಧ ವಿಮಾನಗಳು, ಹಡಗುಗಳು, ಜಲಾಂರ್ಗಾಮಿಗಳು, ಸೋನಾರ್, ರಾಡಾರ್ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿ ವಿನಾಶದ ಸಲಕರಣೆಗಳು ಭಾರೀ ಪ್ರಮಾಣದಲ್ಲಿ ನಿರ್ಮಾಣವಾದವು. ಇಂದು ಮಧ್ಯಮ ವರ್ಗದ, ಅದರಲ್ಲೂ ಯುವಕರ ನೆಚ್ಚಿನ ಶೋಕಿಗಳಾಗಿರುವ ಮೋಟಾರ್ ಬೈಕ್ ನಿರ್ಮಾಣವಾದದ್ದು ಜರ್ಮನಿಯಲ್ಲಿ! ಸ್ಕೂಟರ್ ನಿರ್ಮಾಣವಾದದ್ದು ಇಟಲಿಯಲ್ಲಿ! ಅದೂ ಯುದ್ಧದ ಉದ್ದೇಶಕ್ಕಾಗಿ.
ನಮ್ಮಲ್ಲಿಯೂ ಯುದ್ಧಾಸ್ತ್ರಗಳ ಖಾಸಗಿ ನಿರ್ಮಾಣಕ್ಕೆ ಚಾಲನೆ ದೊರಕಿದೆ. ರಾಫೆಲ್ ಯುದ್ಧ ವಿಮಾನಗಳ ನಿರ್ಮಾಣ ಗುತ್ತಿಗೆ ಸಾರ್ವಜನಿಕ ವಲಯದ ಅನುಭವಿ ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್‍ಗೆ ಸಿಗದೇ ಅನುಭವವೇ ಇಲ್ಲದ ಅಂಬಾನಿಯ ಹೊಸ ಕಂಪೆನಿಯ ಪಾಲಾಗಿದೆ. ಡ್ರೋನ್ ನಿರ್ಮಾಣದ ಗುತ್ತಿಗೆಯದ್ದೂ ಅದೇ ಕತೆ! ಅಂಬಾನಿ, ಅದಾನಿ ಮುಂತಾದ ಆಗರ್ಭ ಶ್ರೀಮಂತರ ಬೃಹತ್ ಉದ್ದಿಮೆಗಳಿಗೆ ಲಾಭ ಮಾಡಿಕೊಡುವುದರಿಂದ ಸಾಮಾನ್ಯ ಜನರ ಅಭಿವೃದ್ಧಿ ಅಗುವುದು ಹೇಗೆ? ಬಂಡವಾಳ ಹೂಡಿಕೆಯ ಲಾಭ ಕೇವಲ ಉದ್ದಿಮೆಗಳಿಗೆ, ರಾಜಕೀಯ ಪಕ್ಷಗಳ ನಿಧಿಗೆ, ರಾಜಕಾರಣಿಗಳ ಜೇಬಿಗೆ ತಲುಪಿದರೆ ಸಾಕೆ? ರಕ್ಷಣಾ ವಲಯದಂತಹ ಸೂಕ್ಷ್ಮ ಕ್ಷೇತ್ರಗಳನ್ನೂ ಖಾಸಗಿ ಬಂಡವಾಳಗಾರರಿಗೆ ಬಿಟ್ಟುಕೊಡುತ್ತಿರುವುದು ಅಪಾಯಕಾರಿ ನಡೆ. ವಿಕೇಂದ್ರೀಕೃತವಾದ ಜನಪರ ಅಭಿವೃದ್ಧಿಗೆ ತಿಲಾಂಜಲಿ ಬಿಟ್ಟು, ದೊಡ್ಡ ಕೈಗಾರಿಕೆಗಳಿಗೆ ಭೂಮಿ ಒದಗಿಸಿಕೊಡುವ ರಿಯಲ್ ಎಸ್ಟೇಟ್ ದಂಧೆಗೆ ಇಳಿದು, ಅದಕ್ಕೆ ಅನುಕೂಲಕರವಾದ ರೈತವಿರೋಧಿ ಭೂಸ್ವಾಧೀನ ಕಾಯಿದೆಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬುದು ಅಪಾಯದ ಗಂಟೆಯನ್ನು ಮೊಳಗಿಸುತ್ತಿದೆಯೆ?
ಜನಾಂಗ ಜನಾಂಗಗಳನ್ನೇ ನಿರ್ನಾಮ ಮಾಡಿದ ಸರ್ವಾಧಿಕಾರಗಳೆಲ್ಲವೂ ಮೊದಲಿಗೆ ಎಲ್ಲರನ್ನು ಜೊತೆಗೊಯ್ಯುವ ಮಾತಾಡಿವೆ!
ಲಕ್ಷಾಂತರ ಯಹೂದಿಗಳನ್ನು ಯಾತನಾ ಶಿಬಿರಗಳಿಗೆ ತಳ್ಳಿ ಅಮಾನವೀಯವಾಗಿ ಮುಗಿಸಿದ ಹಿಟ್ಲರ್‍ಗೆ ಆರಂಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿಡಿತಹೊಂದಿದ್ದ ಯಹೂದಿಗಳು ಬೇಕಾಗಿದ್ದರು. ಅವನು ಅದಕ್ಕಾಗಿ ಅವರನ್ನು ಓಲೈಸಿದ್ದ ಕೂಡಾ. ಅತನ ಸರಕಾರ ಅವರಿಂದ ಬೇಕಾಬಿಟ್ಟಿ ಸಾಲ ಎತ್ತಿದ್ದ. ನಂತರ ಕೈಯೆತ್ತಿ ಅವರ ವಿರುದ್ಧ ಮುಗಿಬಿದ್ದಿದ್ದ.
ನಮ್ಮಲ್ಲಿಯೂ ಇಂತಹ ಮಾತುಗಳು ಕೇಳಿಬರುತ್ತಿವೆ. ಅದರೆ, ವ್ಯವಸ್ಥಿತವಾಗಿ ಸಂಕುಚಿತವಾದ, ಗಂಭೀರವಾದ ದಾಳಿಗಳು ನಿರಂತರವಾಗಿ ಬುದ್ಧಿಜೀವಿಗಳ ಮೇಲೆ, ದಲಿತರು, ಅಲ್ಪಸಂಖ್ಯಾತರ ಮೇಲೆ ನಡೆದುಕೊಂಡುಬಂದಿವೆ. ದನ ಸಾಗಾಟ, ಕಾಲಮೇಲೆ ಕಾಲುಹಾಕಿದ್ದು, ಕುದುರೆಯ ಮೇಲೆ ಕುಳಿತದ್ದು ಮುಂತಾದ ಕ್ಷುಲ್ಲಕ ಕಾರಣಗಳಿಗೆ ಮಾತ್ರವಲ್ಲ, ಕಾರಣವೇ ಇಲ್ಲದೇ ದಾಳಿಗಳು, ಕೊಲೆಗಳು, ಅತ್ಯಾಚಾರಗಳು ನಡೆದಿವೆ. ಜೊತೆಗೆ ಪ್ರತೀಕಾರ ಕೃತ್ಯಗಳೂ ಕೆಲವೊಮ್ಮೆ ನಡೆದಿವೆ. ತಾವು ಸಂತರೆಂದು ಹೇಳಿಕೊಳ್ಳುವವರು, ಸಂಸದರು ಕೂಡಾ ಕೊಚ್ಚಿ, ಕೊಲ್ಲಿ, ಬೆಂಕಿಹಚ್ಚಿ, ತಲೆಕಡಿಯಿರಿ, ದೇಶದಿಂದ ಓಡಿಸಿ ಇತ್ಯಾದಿ ಪ್ರಚೋದನಾತ್ಮಕ ಭಾಷೆಯಲ್ಲಿ ಎಗ್ಗಿಲ್ಲದೇ ಮಾತನಾಡುತ್ತಿದ್ದಾರೆ. ಎಲ್ಲರನ್ನೂ ಜೊತೆಗೊಯ್ಯುತ್ತೇವೆ ಎಂದು ಹೇಳುವವರು ಮಾತ್ರ ಇವುಗಳನ್ನು ಖಂಡಿಸದೇ, ಕ್ರಮ ಕೈಗೊಳ್ಳದೆ ಮೌನ ಅನುಮತಿ ನೀಡುತ್ತಿರುವಂತಿದೆ.
ಇದಲ್ಲದೇ ಸಂವಿಧಾನವನ್ನು ಬದಲಾಯಿಸುವ ಮಾತೂ ಕೇಳಿಬರುತ್ತಿದೆ. ಈ ಎಲ್ಲಾ ವಿಷಯಗಳನ್ನು ಮುಂದೆ ವಿವರವಾಗಿ ಚರ್ಚಿಸೋಣ. ಇದು ಕೇವಲ ಪರಿಚಯ ಮಾತ್ರ. ಭಾರತದಂತಹ ವೈವಿಧ್ಯಮಯ ವಿಶಾಲ ಜನಭರಿತ ದೇಶದಲ್ಲಿ ಸರ್ವಾಧಿಕಾರ ತರುವುದು ಸುಲಭದ ಕೆಲಸವೇನಲ್ಲ! ಹಿಂದೆ ಇಂದಿರಾಗಾಂಧಿಯವರ ಕಾಲದಲ್ಲಿ ಇಂತಹ ಪ್ರಯತ್ನ ನಡೆದಿತ್ತು ಮತ್ತು ಅದನ್ನು ಜನತೆಯ ಹೋರಾಟ ವಿಫಲಗೊಳಿಸಿತು ಎಂಬುದನ್ನು
ಮರೆಯದಿರೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...