Homeರಾಜಕೀಯಕುರುಬ್ರು ವಿಶ್ವನಾಥನ ಹಿಂದೋದ್ರೆ?

ಕುರುಬ್ರು ವಿಶ್ವನಾಥನ ಹಿಂದೋದ್ರೆ?

- Advertisement -
- Advertisement -

ಕಾಲ ಎಂತೆಂತಹ ವಿಚಿತ್ರ ಸನ್ನಿವೇಶಗಳನ್ನು. ಸೃಷ್ಟಿ ಮಾಡುತ್ತದಲ್ಲವೆ! ಕಳೆದ ಚುನಾವಣೆಯಲ್ಲಿ ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೊಲ್ಲ ಎಂದು ಹೋದಲ್ಲಿಬಂದಲ್ಲಿ ಭಾಷಣ ಬಿಗಿದಿದ್ದ ಸಿದ್ದರಾಮಯ್ಯ, ಚುನಾವಣಾ ಫಲಿತಾಂಶ ಇನ್ನ ಬಾಕಿ ಇರುವಾಗಲೇ ಕುಮಾರಸ್ವಾಮಿ ಮನೆಯ ಕರೆಗಂಟೆ ಒತ್ತಿ ಕೈಕಟ್ಟಿ ನಿಂತಿದ್ದಾರಲ್ಲಾ. ಆಗ ಸಿದ್ದು ನಮ್ಮಪ್ಪನಾಣೆ ನೀನೇ ಮುಖ್ಯಮಂತ್ರಿ ಎನ್ನುವುದೊಂದು ಬಾಕಿ ಇತ್ತು. ಸಿದ್ದು ಸ್ಥಿತಿ ನೋಡಿ ನಗು ಅದುಮಿಕೊಂಡ ದೇವೇಗೌಡರು ಮಗ ಮುಖ್ಯಮಂತ್ರಿ ಯಾದರೂ ಬಿಡದೆ, ಸಿದ್ದು ಬಗೆಗಿನ ಸೇಡನ್ನು ಮುಂದುವರಿಸುವ ಸಲುವಾಗಿ, ವಿಶ್ವನಾಥನನ್ನೇ ಪಾರ್ಟಿ ಪ್ರೆಸಿಡೆಂಟು ಮಾಡಿಬಿಟ್ಟಿದ್ದಾರಲ್ಲಾ, ಈ ಬಗ್ಗೆ ಸಿದ್ದುವನ್ನು ಕೇಳಬೇಕೆಂದು ಫೋನ್ ಮಾಡಿದರೆ ರಿಂಗಾಯ್ತು.
ರಿಂಗ್‍ಠೋನ್ “ಕರಿಯ ಕಂಬಳಿ ಗದ್ದುಗೆ ಮಾಡಿ ವೀರದೊಳ್ಳತಂದಿರಿಸಿದರೊ, ವೀರದೊಳತಂದಿರಿಸಿದರೊ. ವಿಶ್ವನಾಥನ ಭಜಿಸಿದರೊ….. ಹಲೊ.
“ಯಾರು.”
“ನಾನು ಸಾರ್ ಯಾಹೂ.”
“ಏನ್ರಿ ಯಾಹೂ.”
“ಏನ್ ಸಾರ್ ಮುಖ್ಯಮಂತ್ರಿಯಾದಾಗ ನೋಡಕ್ಕೂ ಸಿಗಲಿಲ್ಲ, ಈಗ್ಲು ಸಿಗದಿ¯ವಲ್ಲ ಸಾರ್ ಅಷ್ಟು ಬಿಜಿನ.”
“ಅಂಗೇನಿಲ್ಲ ಹೇಳಿ.”
“ನಿಮ್ಮ ಸರಕಾರ ಸೋತಿದ್ದರ ಬಗ್ಗೆ ನೀವೇನೇಳ್ತಿರಿ ಸಾರ್.”
“ಜನ ಮೋಸ ಮಾಡಿದ್ರು.”
“ನಿಮ್ಮ ಭಾಗದ ತಪ್ಪುಗಳೇನಾದ್ರು ಇದ್ದವೆ?’’
“ಆಂಂ.’’
“ನೀವೇನಾರ ತೆಪ್ಪು ಮಾಡಿದ್ರ ಸಾರ್.”
“ನಾನೇನು ಮಾಡಿದೇ.”
“ ಮೊದಲನೆದಾಗಿ ನಿಮ್ಮ ಪ್ರತಿ ಭಾಷಣದಲ್ಲಿ ಎಡೂರಪ್ಪನ ಜೈಲಿನ ವಿಷಯ ಪ್ರಸ್ತಾಪ ಮಾಡಿದ್ರಿ? ಜನ ಚಪ್ಪಾಳೆ ತಟ್ಟಿದ್ರು, ಆದ್ರೆ ಲಿಂಗಾಯಿತ್ರು ಎಡೂರಪ್ಪನ ಹಿಂದೆ ಒಗ್ಗಟ್ಟಾದ್ರು. ಆಮೇಲೆ ಕುಮಾರಸ್ವಾಮಿಯ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ್ಲ ಅಂದ್ರಿ. ಅದ್ಯಂಗಾಗಲ್ಲ ನೋಡನ ಅಂತ ಒಕ್ಕಲಿಗರೆಲ್ಲ ಒಂದಾದ್ರು. ಅಂತೂ ನಿಮ್ಮ ಭಾಷಣನೆ ಜಾತಿಜನ ಒಟ್ಟು ಮಾಡ್ತು. ಇದೇ ಕಾರಣ ಸೋಲಿಗೆ ಅಂತ ನಮ್ಮ ಲೆಕ್ಕಾಚಾರ.”
“ಈಗಾಯ್ತಲ್ಲ ಬುಡ್ರಿ ಆ ಸುದ್ದಿ ತಗಂಡೇನು.”
“ವಿಶ್ಲೇಷಣೆ ಮಾಡ್ಬೇಕಲ್ಲವಾ ಸಾರ್.”
“ಈಗ ಮಾಡಿ ಏನು ಪ್ರಯೋಜನ.”
“ಮುಂದೆ ರಾಜಕಾರಣ ಮಾಡೋರಿಗೆ ಒಂದು ಅನುಭವ ಆಗುತ್ತೆ ಸಾರ್.”
“ಆ….”
“ಅಷ್ಟೊಂದು ಹಟದ ಅಗತ್ಯ ಇರಲಿಲ್ಲ, ಆ ಮುಸ್ಲಿಮರು ಏನು ಕೇಳ್ತಾರೆ ಅದನ್ನ ಮಾತ್ರ ಕೊಡಬೇಕು. ಅದು ಬುಟ್ಟು ಏನೇನೋ ಕೊಡಕೋದ್ರೆ ಅದವುರಿಗೂ ಬೇಕಿರಲಿಲ್ಲ. ಬೇರೆ ಜನಗಳೂ ಅದನ್ನ ಸಯಿಸದಿಲ್ಲ ಸಾರ್.”
“ಸಯಿಸದಿಲ್ಲ ಅಂತ ನಾವು ಮಾಡದನ್ನ ಬಿಡಬಾರ್ದು, ಅಧಿಕಾರ ಸಿಕ್ಕಿದಾಗ ದುರ್ಬಲರಿಗೆ ಸಹಾಯ ಮಾಡ್ಳೇಬೇಕು.”
“ನಿಮ್ಮ ಸಹಾಯ ಸಾಲಮನ್ನಾ, ಬಿಟ್ಟಿ ಅನ್ನ, ಹಲವಾರು ಭಾಗ್ಯ, ಸರಕಾರಿ ಕವರ್iಜಾರಿಗಳ ಸಂಬಳ ಏರಿಸಿ, ದಲಿತ್ರ ಸಾಲ ಮನ್ನ ಮಾಡಿದ್ರೂ ಜನ ಕೈ ಹಿಡಿಲಿಲ್ಲವಲ್ಲ. ಇದರ ಕಾರಣ ಗೊತ್ತಾಯ್ತಾ ಸಾರ್.”
“ಇಲ್ಲ ಹೇಳಿ.”
“ಜನ ಜಾತ್ಯಂದ್ರಾದಾಗ ಏನು ಕೊಟ್ರೂ ಜಾತಿ ಮಕ್ಕಳಾಗೇ ವರ್ತುಸ್ತಾರೆ, ಜೊತೆಗೆ ನೀವು ತಿರಗ ನಾನೇ ಮುಖ್ಯಮಂತ್ರಿ ಅಂದ್ರೆ ಅದು ರಿವರ್ಸಾಯ್ತು. ದಲಿತ ಮುಖ್ಯಮಂತ್ರಿ ಬೇಡಿಕೆ ಇಟ್ಟಿದ್ದ ಜನ ಹಗಲುರಾತ್ರಿ ಓಡಾಡಿ ಬಿಜೆಪಿಗೆ ಓಟು ಮಾಡಿಸಿದ್ರು ಗೊತ್ತಾ.”
“ಹೋಗ್ಲಿಬುಡಿ.”
“ಬುಡದಲ್ಲ ಸಾರ್, ಅಧಿಕಾರದ ಅಂತ್ಯದಲ್ಲಿ ಯಲ್ಲಾರಿಗೂ ಅಹಂಕಾರ ಬತ್ತದೆ, ನಿಮಿಗೊಂಚೂರು ಜಾಸ್ತಿನೆ ಬಂತು.”
“ನಾನೇನು ಮಾಡಿದೆ.”
“ನಿಮ್ಮನ್ನ ಕಾಂಗ್ರೆಸಿಗೆ ಕರೆತಂದ ವಿಶ್ವನಾಥನ್ನ ಕಾಸಿಗಿಂತ ಕಡೆಮಾಡಿದ್ರಿ, ನೀವು ಗೆಲ್ಲಲಿ ಅಂತ ಓಡಾಡಿದ ರೇವಣಸಿದ್ದಯ್ಯನ್ನ ಐದೊರ್ಸ ಎಲ್ಯವುರೆ ಅಂತ ನೋಡಲಿಲ್ಲ, ಚಾಮುಂಡೇಶ್ವರಿಗಾರ ಟಿಕೆಟ್ ಕೊಡಬವುದಿತ್ತು. ಅಂಗೇ ನೋಡಿದ್ರೆ ಕಾಂಗ್ರೆಸ್ ಸೋಲಿನ ದೊಡ್ಡಪಾಲು ನಿಮ್ಮದೆ ಸಾರ್.”
“ಸೋತಾಯ್ತಲ್ಲ ಬುಡಿ.”
“ಇನ್ನೋಂದು ವಿಷಯ ಸಾರ್.”
“ಏನು.”
“ದೇವೇಗೌಡ್ರು ವಿಶ್ವನಾಥನ್ನ ಜೆಡಿಎಸ್ ಪಾರ್ಟಿ ಪ್ರೆಸಿಡೆಂಟ್ ಮಾಡ್ಯವುರೇ.”
“ಮಾಡ್ಲಿ ಬುಡ್ರಿ.”
“ಅದರಿಂದ ನಿಮಗೇನು ಬೇಜಾರಾಗಿಲ್ವೇ.”
“ಬೇಜಾರ್ಯಾಕೆ, ನಾನು ಜೆಡಿಎಸ್ ಅಧ್ಯಕ್ಷ ಆಗಿದ್ದೆ, ನನ್ನ ಹುಟ್ಟುಹಬ್ಬದ ದಿನವೇ ದೇವೇಗೌಡ ನನ್ನನ್ನ ತಗದು ಆ ತಿಪ್ಪಣ್ಣನ್ನ ಪ್ರೆಸಿಡೆಂಟ್ ಮಾಡಿದ್ರು, ಅವುರು ಪಾರ್ಟಿ ಬುಟ್ಟು ಬಿಜೆಪಿಗೋದ್ರು, ಅಂಗೆ ಒಂದಿನ ಈ ಅಪ್ಪ ಮಕ್ಕಳಿಗೆ ಬೇಜಾರಾದ್ರೆ ವಿಶ್ವನಾಥನ್ನ ತೆಗೆದಾಕ್ತರೆ. ಆದ್ರಿಂದ ವಿಶ್ವನಾಥ ನನ್ನ ಎದುರಾಳಿನೂ ಅಲ್ಲ, ಸ್ಪರ್ಧಿನೂ ಅಲ್ಲ.”
“ಕುರುಬ್ರು ವಿಶ್ವನಾಥನ ಹಿಂದೋದ್ರೆ.”
“ಹೋಗ್ಲಿ ಬುಡ್ರಿ ನಂಗೇನು.”
“ಥೂತ್ತೇರಿ.”

-ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...