Homeಅಂಕಣಗಳುಅಭಯೋತ್ಪಾದಕ ಮಸೂತಿ, ದರ್ಗಾ ಮತ್ತು ಮೌಲ್ವಿಗಳು

ಅಭಯೋತ್ಪಾದಕ ಮಸೂತಿ, ದರ್ಗಾ ಮತ್ತು ಮೌಲ್ವಿಗಳು

ಎಲ್ಲಾ ಸಂಗತಿಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ಕತೆಕಟ್ಟಿ ಜನರಲ್ಲಿ ಭಯವನ್ನು ಉತ್ಪಾದಿಸುವ ಮೂಲಭೂತವಾದಿಗಳೂ ಇದ್ದಾರೆ

- Advertisement -
- Advertisement -

| ಅರುಣ್ ಜೋಳದಕೂಡ್ಲಿಗಿ |

ಈಚೆಗೆ ಕೊಟ್ಟೂರಿನಲ್ಲಿ ನನ್ನ ಹೈಸ್ಕೂಲ್ ಮಿತ್ರನೊಬ್ಬ ಮಾತನಾಡುತ್ತಾ `ಗೆಳೆಯಾ ನಿನಗೆ ಗೊತ್ತಿಲ್ಲ ಈ ಮಸೂತಿ, ದರ್ಗಾ, ಮೌಲ್ವಿಗಳೆಲ್ಲಾ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದಾರೆ’ ಎಂದ. ನಾನು ಅದು ಹೇಗೆ ಹೇಳ್ತೀಯ, ಬಾ ಕೊಟ್ಟೂರಲ್ಲಿರುವ ಎಲ್ಲಾ ಮಸೂತಿಗಳನ್ನು ಒಮ್ಮೆ ಸುತ್ತಾಕಿಕೊಂಡು ಬರೋಣ, ನಿನ್ನ ಮಾತಿಗೆ ಸಾಕ್ಷಿ ತೋರಿಸು ಅಂದೆ. ಆತ ತಡವರಿಸುತ್ತ `ಹಂಗಲ್ಲ ಕೆಲವು ಮಸೀತಿಗಳು ಹಂಗೆ ಇದಾವೆ ಅಂದ’ ಆಗ ನಾನು ಮತ್ತೆ `ಸರಿ ನೀನು ಹೇಳೋವಂತ ಮಸೀತಿಗಳನ್ನಾದರೂ ತೋರಿಸು’ ಅಂದೆ. ಕೊನೆಗೆ ಆತ ಮತ್ತಷ್ಟು ಗಲಿಬಿಲಿಗೊಂಡು `ನನಗೆ ಪಕ್ಕ ಗೊತ್ತಿಲ್ಲ, ಆದ್ರ ನಾನು ಹೇಳೋ ಮಾತಂತು ಸತ್ಯ’ ಅಂದ. ನಾನು `ಅರೆ ನಿನ್ನ ಮಾತಿಗೆ ಒಂದಾದ್ರೂ ಸಾಕ್ಷಿ ತೋರಿಸೋಕೆ ರೆಡಿ ಇಲ್ಲ, ಆದ್ರೆ `ನಾನೇಳೋ ಮಾತು ಮಾತ್ರ ಸತ್ಯ’ ಅಂದ್ರೆ ಹೇಗೆ ಅಂದೆ. ಗೆಳೆಯ ಸ್ವಲ್ಪ ವಿಚಲಿತನಾದಂತೆ `ಇಲ್ಲ ಇಲ್ಲ ನಮ್ಮ ಭಾಗದ ಮುಸ್ಲಿಮರು ಒಳ್ಳೇರಿದಾರ, ಆದರೆ ಬೇರೆ ಕಡೆ ಮುಸ್ಲೀಮರು ಹಾಗಲ್ಲ’ ಎಂದ. ನಾನು ಮತ್ತೆ `ಅಲ್ಲಪ್ಪ ಬೇರೆ ಭಾಗದವರು ಇದೇ ಮಾತು ಹೇಳ್ತಾರೆ ಅಂತಿಟ್ಕೋ, ಹಾಗಾದ್ರೆ ಯಾವ ಭಾಗದ ಮುಸ್ಲೀಮರು ಒಳ್ಳೇರಲ್ಲ ಹೇಳು’ ಅಂದೆ. ಆತ ತಡವರಿಸುತ್ತಾ ಮಾತು ಬದಲಿಸಿ ಬೇರೆ ಖಾಸಗಿ ಸಂಗತಿಗಳಿಗೆ ತಿರುಗಿದ.
ನಾನು ಗೆಳೆಯನಿಗೆ ಮತ್ತೆ ಅದೆ ವಿಷಯ ಕೆದಕಿ `ಈಗ ಟೈಮಿದ್ರೆ ನೀನು ನನ್ನ ಜತೆ ಬಾ, ಇದೇ ಕೊಟ್ಟೂರ ಮಸೀದಿಯೊಂದರ ಹತ್ತಿರ ಕೂರೋಣ. ಹೆದರಿದ ಮಕ್ಕಳಿಗೆ ತಾಯತ ಕಟ್ಟಿಸಲಿಕ್ಕೋ, ಸಕ್ಕರೆ ಓದಿಸಲಿಕ್ಕೋ ಒಬ್ರು ಇಬ್ರಾದ್ರೂ ಬಂದೇ ಬರ್ತಾರೆ. ನೀನು ಹೇಳಿದ ಮಸೀದಿ ದರ್ಗಾಗಳೇ ಜನರಲ್ಲಿ ಹೇಗೆ ಭಯವನ್ನು ನಿವಾರಿಸುವ ನಂಬಿಕೆ ಹುಟ್ಟಿಸುತ್ತವೆಯೆಂದು ನೋಡೋಣ. ಇದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ಮಸೂತಿಗೆ ಬಂದ ಜನರ ಬಳಿ ಮಾತಾಡೋಣ. ನೀನು ನನ್ನ ಜತೆ ಬರುವುದಾದರೆ ನನ್ನ ಮಾತಿಗೆ ಇಂತಹ ಸಾವಿರಾರು ದರ್ಗಾ ಮಸೂತಿಗಳನ್ನು ಸಾಕ್ಷಿಯಾಗಿ ತೋರಿಸಲು ಸಿದ್ಧನಿದ್ದೇನೆ’ ಎಂದೆ. ಗೆಳೆಯ `ಹೌದು ನೀನು ಹೇಳೋದ್ರಲ್ಲಿ ನಿಜವಿದೆ. ನನ್ನ ಮಗಳಿಗೂ ನಮ್ಮವ್ವ ನಮ್ಮೂರ ಮುಜಾವರನ ಬಳಿ ತಾಯಿತ ಕಟ್ಟಿಸಿದ್ಲು’ ಎಂದು ದಿಢೀರ್ ನನ್ನ ದಾರಿಗೆ ಬಂದು ನಿಂತ. ಗೆಳೆಯನ ಈ ಗೊಂದಲದ ಸ್ಥಿತಿ ನೋಡಿ ಏನು ಹೇಳುವುದೋ ತಿಳಿಯದಾಯಿತು. ಆದರೆ ಹಲವರು ಇಂತಹ ಗೊಂದಲದಲ್ಲಿದ್ದಾರೆ ಎನ್ನುವುದಕ್ಕೆ ಈತ ಸಂಕೇತದಂತಿದ್ದ.
ಕಳೆದ ವರ್ಷ ನಮ್ಮೂರಲ್ಲಿ ನಡೆದ ಒಂದು ಘಟನೆ. ಆ ರಾತ್ರಿ ನನ್ನ ಮಗ ವಿಪರೀತ ಅಳುವುದಕ್ಕೆ ಶುರು ಮಾಡಿದ, ನಾವು ಮಗನನ್ನು ಸಂತೈಸಲು ಪ್ರಯತ್ನಿಸುತ್ತಿದ್ದೆವು. ನನ್ನವ್ವ ಮೊಮ್ಮಗ ಹೆದರಿಕೊಂಡಂತಿದೆ ಎಂದರಿತು ನಮ್ಮೂರ ಅಲಾವಿ ದೇವರಿಗೆ ಬೆಲ್ಲದ ತೂಕದ ಹರಕೆ ಹೊತ್ತಳು. ಕಾಕತಾಳೀಯವೆಂಬಂತೆ ಮಗನ ಅಳು ನಿಂತಿತು. ಅವ್ವನ ಮುಖದಲ್ಲಿ ಸಂತಸ ಮೂಡಿ `ನೋಡು ದೇವ್ರಿಲ್ಲ ದೇವ್ರಿಲ್ಲ ಅಂತ ನೀನು ಮೊಂಡುವಾದ ಮಾಡ್ತಿ, ಅಲಾವಿ ದೇವ್ರು ಹುಸೇನಪ್ಪ ಹ್ಯಂಗ ಮಗೂನ ಹೆದ್ರಿಕಿನ ಹೋಗಿಸ್ತು’ ಎಂದು ನನ್ನನ್ನು ದುರುಗುಟ್ಟಿ ನೋಡಿದಳು. ನಾನೀಗ ಏನಾದರೂ ಮಾತನಾಡಿದರೆ, ಮನಸ್ಸಿಗೆ ನೋವಾಗುವುದೆಂದು ಭಾವಿಸಿ ಮೌನ ವಹಿಸಿದೆ. ಮಗ ಅಳುವುದನ್ನು ನಿಲ್ಲಿಸಿ ನಿದ್ದೆಗೆ ಜಾರಿದ್ದಕ್ಕೆ ನಿರಾಳವಾದೆವು. ಇದರ ತಾರ್ಕಿಕತೆಯ ಬಗ್ಗೆ ವಿಚಾರ ಮಾಡದೆ ನನ್ನವ್ವನ ನಂಬಿಕೆಯಲ್ಲಿ ಮಸೂತಿ, ಅಲಾವಿ ದೇವ್ರು ಭಯನಿವಾರಕ ಶಕ್ತಿಗಳಾಗಿ ಉಳಿದದ್ದು ನನ್ನ ಮನದಲ್ಲಿ ಉಳಿಯಿತು.
ಮೇಲಿನ ಎರಡೂ ಸಂಗತಿಗಳೂ ಒಂದಕ್ಕೊಂದು ವಿರುದ್ಧವಾಗಿವೆ. ಒಂದೆಡೆ ಭಾರತದಾದ್ಯಂತ ಗ್ರಾಮೀಣ ಭಾಗದಲ್ಲಿ ಮಸೂತಿ, ದರ್ಗಾ, ಮೌಲ್ವಿ ಎಂದರೆ ಭಯನಿವಾರಕ ಸ್ಥಳಗಳೆಂದು ಭಾವಿಸಿದ ದೊಡ್ಡ ಜನವರ್ಗವಿದೆ. ಮತ್ತೊಂದೆಡೆ ಭಯವನ್ನು ಉತ್ಪಾದಿಸುವ ನೆರೆಯ ಮುಸ್ಲಿಂ ದೇಶಗಳನ್ನು ಆಧರಿಸಿ ಇಡಿಯಾಗಿ ಮುಸ್ಲಿಮರ ಎಲ್ಲಾ ಸಂಗತಿಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ಕತೆಕಟ್ಟಿ ಜನರಲ್ಲಿ ಭಯವನ್ನು ಉತ್ಪಾದಿಸುವ ಮೂಲಭೂತವಾದಿಗಳೂ ಇದ್ದಾರೆ. ಈ ಎರಡೂ ನೆಲೆಗಳ ಆಚೆ ವಾಸ್ತವ ಸಂಕೀರ್ಣವಾಗಿದೆ. ಬಹುಸಂಖ್ಯಾತ ಧರ್ಮಿಯರು ಅಹಮ್ಮಿನಿಂದ ಹುಟ್ಟಿಸುವ ಭಯದ ಕಾರಣಕ್ಕೆ ಮುಸ್ಲೀಮರಲ್ಲಿ ಅನಿವಾರ್ಯ ಆತಂಕದಿಂದ ಸ್ವರಕ್ಷಣೆಯ ಸಂಘಟಿತ ಚಟುವಟಿಕೆಗಳು ಕೆಲವೆಡೆ ನಡೆದಿರಬಹುದು. ಅದನ್ನು ಅಲ್ಲಗಳೆಯಲಾಗದು. ಆದರೆ ಬಹುಪಾಲು ಮಸೂತಿ, ದರ್ಗಾ, ಮೌಲ್ವಿಗಳು ಅಭಯೋತ್ಪಾದಕ ಅಥವಾ ಭಯಮುಕ್ತಗೊಳಿಸುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿವೆ ಎನ್ನುವುದು ವಾಸ್ತವ. ಹೀಗೆ ಭಯಮುಕ್ತ ಕೇಂದ್ರಗಳಾಗಿರುವ ಮಸೂತಿ ಮತ್ತು ದರ್ಗಾಗಳು ಬಹುಪಾಲು ಸೂಫಿ ಸಂತರವು ಎನ್ನುವುದನ್ನೂ ಗಮನಿಸಬೇಕಿದೆ. ಹಾಗಾಗಿಯೇ ಸೂಫಿ ಸಂತರ ಬಗ್ಗೆ `ರೋಗನಿವಾರಕ’ ಪವಾಡ ಕತೆಗಳು ಹೆಚ್ಚಿವೆ.
ಕರ್ನಾಟಕದಾದ್ಯಂತ ಇರುವ ಮೊಹರಂ ಮಸೀತಿಗಳು ಮತ್ತು ಸೂಫಿ ಸಂತರ ದರ್ಗಾಗಳು ಈಗಲೂ ಭಯ ನಿವಾರಕ ಕೇಂದ್ರಗಳಂತೆ ಕೆಲಸ ಮಾಡುತ್ತವೆ. ಬೆಂಗಳೂರಿನ ತವಕ್ಕಲ್ ಮಸ್ತಾನ್ ಸಾಹೇಬನು ಎಳೆಮಕ್ಕಳನ್ನು ರಕ್ಷಿಸುವ ದೈವವಾಗಿದೆ. ನವಲಗುಂದದ ಯಮನೂರಪ್ಪನ ಉರುಸನ್ನು ಜನರು `ಜಡ್ಡಿನ ಜಾತ್ರೆ’ ಎಂದು ಕರೆಯುವ ವಾಡಿಕೆಯಿದೆ. ಕಾಯಿಲೆಗೆ ಬಿದ್ದ ಗಂಡನನ್ನು ಉಳಿಸಿಕೊಂಡು ಭಯ ನಿವಾರಿಸಿಕೊಳ್ಳಲು ಸವಣೂರಿನ ಬ್ರಹ್ಮಚಾರಿ ಸಂತ ಕಮಲ್ ಭಾಷಾನ ದರ್ಗಾದಲ್ಲಿ ಮಹಿಳೆಯರ ರಾಶಿಗಟ್ಟಲೆ ಹರಕೆಯ ಬಳೆಗಳಿವೆ. ದನಗಳಿಗೆ ರೋಗ ಬಂದಾಗ, ಅವು ಕಳೆದು ಹೋದಾಗ ಉಳಿಸುವ ಮತ್ತು ಹುಡುಕಿಕೊಡುವ ಕೆಲಸವನ್ನು ಬೈದೊಡ್ಡಿಯ ಹುಜೂರಸಾಬ, ಕುಸುನೂರಿನ ಗೋಕುರಸಾಬ, ಅಂಬತ್ತಿಯ ಶೇಕಮಾರ ಮುಂತಾದವರಿಗೆ ವಹಿಸಿ ಭಯಮುಕ್ತರಾಗುವುದಿದೆ. ಮೈನರೆದ ಹುಡುಗಿ ನೀರುಹಾಕಿಕೊಂಡ ಮೇಲೆ, ಮದುಮಕ್ಕಳು ಪ್ರಸ್ತಕ್ಕೆ ಮೊದಲು ‘ಓದಿಕೆ’ ಮಾಡಿಸುವುದು, ಮಕ್ಕಳಿಲ್ಲದವರು ಹರಸಿಕೊಳ್ಳುವುದು, ಸರಾಗವಾಗಿ ಹೆರಿಗೆಯಾಗಲೆಂದು ಗಬಿರ್sಣಿಯ ಕೈಗೆ ಗೋರಿ ಮೇಲಿನ ಬಟ್ಟೆತುಂಡು ಕಟ್ಟುವುದು, ಹುಟ್ಟಿದ ಕೂಸನ್ನು ಅಥವಾ ಕರುವನ್ನು ತಂದು ದರ್ಗಾಕ್ಕೆ ‘ಸಣ’ ಮಾಡಿಸುವುದು, ಫಸಲಿನ ಮೊದಲ ಕಟಾವನ್ನು ತಂದೊಪ್ಪಿಸುವುದು-ಇವೇ ಮುಂತಾದ ಫಲವಂತಿಕೆಗೆ ಸಂಬಂದಿsಸಿದ ಆಚರಣೆಗಳು ದರ್ಗಾ ಸಂಸ್ಕøತಿಯ ಭಾಗವಾಗಿ ಬೆಳೆದುಬಿಟ್ಟಿವೆ. ರಹಮತ್ ತರೀಕೆರೆಯವರು `ಕರ್ನಾಟಕದ ಸೂಫಿಗಳು’ ಕೃತಿಯಲ್ಲಿ ಇಂತಹ ದರ್ಗಾ ಮಸೂತಿಗಳ ಬಗೆಗೆ ವಿಶ್ಲೇಷಿಸಿದ್ದಾರೆ.
ಜನರು ದೆವ್ವ ಬಂದಿದೆ ಎಂದು ನಂಬುವ `ಗಾಳಿ’ ಬಿಡಿಸುವ ದರ್ಗಾಗಳಾದ ಲಕ್ಷ್ಮೇಶ್ವರದ ದೂದಪೀರಾ, ಕರೋಶಿಯ ಶಾನೂರುಬಾಬಾ, ಬಿಜಾಪುರದ ಅಬ್ದುಲ್ ರಜಾಕ್ ಖಾದ್ರಿ, ಮುರುಗಾಮಲೈನ ಅಮ್ಮಾಜಾನ್ ಬಾವಾಜಾನ್ ಹಾಗೂ ಎಳ್ಳಾರತಿಯ ಶೇಕ್ ಶಾವಲಿ ಮುಂತಾದವುಗಳನ್ನು ನೋಡಬಹುದು. ಇವೂ ಕೂಡ ದೆವ್ವವೆಂಬ ಭಯವನ್ನು ಸಮುದಾಯದ ಮನಸ್ಸಿನಿಂದ ಹೋಗಲಾಡಿಸಿ ಭಯಮುಕ್ತಗೊಳಿಸುವ ಕೆಲಸವೇ ಆಗಿದೆ. ಹೀಗೆ ಮೂಢನಂಬಿಕೆಯ ಕಾರಣಕ್ಕೋ, ಅರಿವಿನ ಕೊರತೆಯ ಕಾರಣಕ್ಕೋ, ಅಸಹಾಯಕತೆಯ ಕಾರಣಕ್ಕೋ ಜನರನ್ನು ಆವರಿಸಿರುವ ಹಲವು ಬಗೆಯ `ಭಯ’ಗಳನ್ನು ಹೋಗಲಾಡಿಸಿ `ಅಭಯೋತ್ಪಾದಕ’ ಕೇಂದ್ರಗಳಾದ ಮಸೂತಿ, ದರ್ಗಾ, ಮುಜಾವರ ಮುಂತಾದ ಸಂಗತಿಗಳನ್ನು ಭಯೋತ್ಪಾದಕ ಚಟುವಟಿಕೆಗಳ ಜತೆ ಹೆಣೆಯುವು ಎಷ್ಟು ಅಮಾನವೀಯ ಎನ್ನುವುದನ್ನು ಅರಿಯಬೇಕಿದೆ. ಜನಸಾಮಾನ್ಯರಿಗೆ ಅವರದೇ ಆದ `ಜನತೆಯ ಧರ್ಮವಿದೆ’ ಆ ಜನತೆಯ ಧರ್ಮದಲ್ಲಿ ಹಿಂದು ಮುಸ್ಲಿಂ ಜೈನ ಬೌದ್ಧ ಮತಗಳೆಲ್ಲಾ ಬೆರೆತು ಹೊಸ ಆಕಾರವನ್ನು ಪಡೆಯುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜ ಅರುಣ್… ಜನತೆಯ ಧರ್ಮವೇ ಬೇರೆ.. ಅದಕ್ಕೆ ಮುಕ್ತ ಪ್ರಜ್ಞೆ ಇದೆ… ಹೀಗಾಗಿ ದೂರದಲ್ಲಿ ನಿಂತು ಕನ್ನಡಕಗಳನ್ನು ಹಾಕಿ ನೋಡುವವರ ಗರ ಬಿಡಿಸಲಾಗದು…. ಹತ್ತಿರ ಹೋಗಿ ಸಣ ಮಾಡಿದರೆ ಸಾಕು… ಈಗಲೂ ಎಷ್ಟೋ ಮಠಗಳು ಅಂತ್ರ ತಾಯಿತ ಕಟ್ಟುತ್ತಿವೆ… ಬೂದಿ ಹಚ್ಚಿ ದೆವ್ವ ಬಿಡಿಸುತ್ತಿವೆ….

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...