Homeಚಳವಳಿಪಾಯಲ್ ತಾಡ್ವಿ ಆತ್ಮಹತ್ಯೆ : ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯದ ಮುಂದುವರಿಕೆ

ಪಾಯಲ್ ತಾಡ್ವಿ ಆತ್ಮಹತ್ಯೆ : ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯದ ಮುಂದುವರಿಕೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ಆದಾರಿತ ದೌರ್ಜನ್ಯಗಳನ್ನ ಪತ್ತೆಹಚ್ಚಲು ಈ ಥೋರೋಟ್ ಸಮಿತಿಯ ವರದಿಯನ್ನ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ.

- Advertisement -
- Advertisement -

| ಮೂಲ : ಶಾ ಅಲಂ ಖಾನ್ |
| ಕನ್ನಡಕ್ಕೆ: ಶ್ರೀ ಪಾದ್ ಭಟ್ |

ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಬೂತಪೂರ್ವ ಗೆಲುವಿನ ನಂತರ ಪ್ರದಾನ ಮಂತ್ರಿ ಮೋದಿ ಅವರು ಬಿಜೆಪಿ ಕೇಂದ್ರ ಕಾರ್ಯಾಲಯದಲ್ಲಿ ಮಾತನಾಡುತ್ತ ‘ ಇಂಡಿಯಾದಲ್ಲಿ ಈಗ ಕೇವಲ ಎರಡು ಜಾತಿಗಳಿವೆ – ಒಂದು ಬಡವರು ಮತ್ತೊಂದು ಈ ಬಡತನವನ್ನ ಉಪಶಮನಗೊಳಿಸುವವರು’ ಎಂದು ಹೇಳಿದರು. ಅವರ ಮಾತುಗಳ ಪ್ರತಿದ್ವನಿ ಕಮರಿಹೋಗುವುದಕ್ಕೂ ಮೊದಲೆ ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯವ ವೈದ್ಯೆ ‘ಪಾಯಲ್ ತಾಡ್ವಿ’ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು ತಾಡ್ವಿಯವರು ಆ ಆಸ್ಪತ್ರೆಯಲ್ಲಿ ತಮ್ಮ ಹಿರಿಯ ವೈದ್ಯೆಯರಿಂದ ನಿರಂತರವಾಗಿ ಜಾತಿ ಅಪಮಾನ ಮತ್ತು ತಾರತಮ್ಯದ ಹಿಂಸೆಗೆ ಒಳಗಾಗಿದ್ದರು. ಆದಿವಾಸಿ ಭಿಲ್ ಮುಸ್ಲಿಂ ಸಮುದಾಯದ ತಾಡ್ವಿ ಅವರು ಮೇ 2018ರಿಂದ ಆ ಸಂಸ್ಥೆಯಲ್ಲಿ ಎಂ.ಡಿ. ಗೈನಕಾಲಜಿ ವಿಶಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರು. ಪ್ರದಾನಿ ಏನೇ ಹೇಳಿದರೂ ಇಂದಿಗೂ ಜಾತಿಯು ಇಂಡಿಯಾ ಸಮಾಜದಲ್ಲಿ ಭಯಾನಕ ವಾಸ್ತವವಾಗಿದೆ

ನಮ್ಮ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ, ಫ್ಯಾಕ್ಟರಿಗಳಲ್ಲಿ, ವ್ಯಾಪಾರದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಇಂದಿಗೂ ಜಾತೀಯತೆಯು ವಿಶದಂತೆ ಹಬ್ಬಿಕೊಂಡಿದೆ. ಈ ಜಾತಿ ತಾರತಮ್ಯದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ತಳಸಮುದಾಯಗಳ ವಿದ್ಯಾರ್ಥಿಗಳು, ವಿದ್ವಾಂಸರಾದ ಮಾದಾರಿ ವೆಂಕಟೇಶ್, ರೋಹಿತ್ ವೇಮುಲ, ಸೆಂತಿಲ್ ಕುಮಾರ್ ಮತ್ತು ಪುಲ್ಯಾಲ ರಾಜು ಅವರೊಂದಿಗೆ ಈಗ ತಾಡ್ವಿಯವರೂ ಕೂಡಿಕೊಂಡಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಆದಾರಿತ ಪ್ರತ್ಯೇಕತೆಯನ್ನ ಇಂದು ತ್ವರಿತವಾಗಿ ಬಗೆಹರಿಸಬೇಕಾಗಿದೆ. ಉತ್ತರ ಪ್ರದೇಶದ ದಲಿತ ಕುಟುಂಬದಿಂದ ಬಂದ ಏಮ್ಸ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ಬಾಲ ಮುಕುಂದ್ ಭಾರತಿ ಈ ಜಾತಿ ಹಿಂಸೆಯ ಕಾರಣಕ್ಕಾಗಿ ಮಾರ್ಚ 2010ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಕಳೆದ 50 ವರ್ಶಗಳಲ್ಲಿ ಭಾರತಿ ಅವರು ತಮ್ಮ ಗ್ರಾಮದಿಂದ ವೈದ್ಯಕೀಯ ವ್ಯಾಸಂಗಕ್ಕೆ ಪ್ರವೇಶ ಪಡೆದ ಮೊದಲ ದಲಿತ ವಿದ್ಯಾರ್ಥಿಯಾಗಿದ್ದರು. ಏಮ್ಸ್‍ನಲ್ಲಿ ಓದುತ್ತಿದ್ದ ಮತ್ತೊಬ್ಬ ವೈದ್ಯಕೀಯ ವಿದ್ಯಾರ್ಥಿ ಅನಿಲ್ ಕುಮಾರ್ ಮೀನಾ ಮಾರ್ಚ 2012ರಲ್ಲಿ ತಮ್ಮ ಹಿಂದುಳಿದ ಜಾತಿಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು. ಏಮ್ಸ್‍ನಲ್ಲಿ ಜಾತಿ ಆಧಾರಿತ ತಾರತಮ್ಮ ಎಶ್ಟು ಗಂಬೀರವಾಗಿದೆಯೆಂದರೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮೇಲೆ ನಡೆಯುತ್ತಿರುವ ದೌರ್ಜನ್ಯದ ಸತ್ಯಶೋದನೆಗಾಗಿ 2007ರಲ್ಲಿ ಸುಖದೇವ ಥೋರೊಟ್ ಅವರ ಅದ್ಯಕ್ಷತೆಯಲ್ಲಿ ಸಮಿತಿಯನ್ನ ರಚಿಸಲಾಯಿತು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ಆದಾರಿತ ದೌರ್ಜನ್ಯಗಳನ್ನ ಪತ್ತೆಹಚ್ಚಲು ಈ ಥೋರೋಟ್ ಸಮಿತಿಯ ವರದಿಯನ್ನ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ. ಈ ವರದಿಯ ಪ್ರಮುಖಾಂಶಗಳು : ಶೇಕಡಾ 69 ಪ್ರಮಾಣದ ಪ.ಜಾತಿ/ ಪ.ಪಂಗಡದ ವಿದ್ಯಾರ್ಥಿಗಳು ತಮಗೆ ಪ್ರಾದ್ಯಾಪಕರಿಂದ ಯಾವುದೆ ಪ್ರೋತ್ಸಾಹ ದೊರಕುವುದಿಲ್ಲ, ಈ ಪ್ರಾದ್ಯಾಪಕರ ತಾತ್ಸಾರ ಮತ್ತು ಅನುಪಸ್ಥಿತಿಯಿಂದಾಗಿ ಅವರೊಂದಿಗೆ ಸಂಪರ್ಕ ಸಾದಿಸಲು ಸಾದ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಶೇಕಡಾ 72 ಪ್ರಮಾಣದ ವಿದ್ಯಾರ್ಥಿಗಳು ತಮ್ಮ ಜಾತಿಯ ಹಿನ್ನೆಲೆ ಕಾರಣಕ್ಕೆ ಈ ಪ್ರಾದ್ಯಾಪಕರು ತಮ್ಮಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರು ಮತ್ತು ತರಗತಿಗಳಲ್ಲಿ ಪಾಠ ಮಾಡುವಾಗ ತಾರತಮ್ಯದಿಂದ ನೋಡುತ್ತಿದ್ದರು ಎಂದು ಹೇಳಿದ್ದಾರೆ. ಶೇಕಡಾ 76 ಪ್ರಮಾಣದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳನ್ನ ನ್ಯಾಯವಾದ ರೀತಿಯಲ್ಲಿ ಮೌಲ್ಯಮಾಪನ ಮಾಡಲೆ ಇಲ್ಲ ಎಂದು ಹೇಳಿದ್ದಾರೆ.

ಶೇಕಡಾ 88 ಪ್ರಮಾಣದ ವಿದ್ಯಾರ್ಥಿಗಳು ತಾವು ನಿರೀಕ್ಷಿಸಿದಕ್ಕಿಂತಲೂ ಕಡಿಮೆ ಅಂಕಗಳನ್ನ ನೀಡಿದ್ದಾರೆ ಎಂದು ಹೇಳಿದ್ದಾರೆ. ಶೇಕಡಾ 84 ಪ್ರಮಾಣದ ವಿದ್ಯಾರ್ಥಿಗಳು ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಪಕ್ಷಪಾತ ಮಾಡಿದರು ಎಂದು ಹೇಳಿದ್ದಾರೆ. ಶೇಕಡಾ 86 ಪ್ರಮಾಣದ ವಿದ್ಯಾರ್ಥಿಗಳು ಮೇಲ್ಜಾತಿಯವರಿಗೆ ಹೋಲಿಸಿದಾಗ ಈ ಪ್ರಾದ್ಯಾಪಕರು ಪರೀಕ್ಷೆಯಲ್ಲಿ ತಮಗೆ ಸಾಕಶ್ಟು ಸಮಯವನ್ನೆ ಕೊಡಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಏಮ್ಸ್ ಹಾಸ್ಟೆಲ್‍ಗಳಲ್ಲಿ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳು ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯದ ಹಿಂಸೆಯನ್ನ ಅನುಬವಿಸಬೇಕಾಯಿತು. ದೆಹಲಿಯ ಏಮ್ಸ್‍ನಲ್ಲಿ ಕೆಲಸ ಮಾಡುತ್ತಿರುವ ಪ.ಜಾತಿ/ಪ.ಪಂಗಡದ ಪ್ರಾದ್ಯಾಪಕರೂ ಸಹ ಈ ತಾರತಮ್ಯಕ್ಕೆ ಒಳಗಾಗಿದ್ದರು ಎಂದು ಆ ವರದಿಯಲ್ಲಿ ವಿವರಿಸಲಾಗಿದೆ

ದೆಹಲಿಯ ಏಮ್ಸ್‍ನ ಪಕ್ಕದಲ್ಲಿರುವ ಮತ್ತೊಂದು ಪ್ರಮುಖ ವೈದ್ಯ ಶಿಕ್ಷಣ ಬೋದಿಸುವ ವರ್ದಮಾನ ಮಹಾವೀರ ವೈದ್ಯಕೀಯ ಕಾಲೇಜ್‍ನಲ್ಲಿ ಶೇಕಡಾ 25 ಪ್ರಮಾಣದ ದಲಿತ ವಿದ್ಯಾರ್ಥಿಗಳನ್ನ ಜಾತಿ ತಾರತಮ್ಯದ ಕಾರಣಕ್ಕೆ ಶರೀರ ವಿಜ್ಞಾನ (physiology) ಪರೀಕ್ಷೆಯಲ್ಲಿ ಸಾಮೂಹಿವಾಗಿ ಅನುತ್ತೀರ್ಣಗೊಳಿಸಲಾಯಿತು. ಈ ಹಗರಣಕ್ಕೆ ಸಂಬಂದಸಿದಂತೆ 2012ರಲ್ಲಿ ಮುಂಗೇಕರ್ ಸಮಿತಿಯು ತನಿಖೆ ನಡೆಸಿತು. ಈ ಸಮಿತಿಯು ಪರಿಶಿಷ್ಟ ಜಾತಿಗಳ ರಾಶ್ಟ್ರೀಯ ಆಯೋಗಕ್ಕೆ (NCSC) ನೀಡಿದ ವರದಿಯಲ್ಲಿ ‘ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳ ವಿರುದ್ದ ಕಾಲೇಜ್‍ನ ಆಡಳಿತ ಮಂಡಳಿಯ ದ್ವೇಶ ಯಾವ ಮಟ್ಟದಲ್ಲಿದೆಯೆಂದರೆ ದಲಿತರು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಮಾಹಿತಿ ಆಯೋಗಕ್ಕೆ ಪ್ರತಿನಿತ್ಯ ಅರ್ಜಿಗಳನ್ನ ಸಲ್ಲಿಸುತ್ತಿದ್ದರು’ ಎಂದು ಉಲ್ಲೇಖಿಸಲಾಗಿದೆ. ಕಿರುಕುಳಕ್ಕೆ ಒಳಗಾದ ದಲಿತ ವಿದ್ಯಾರ್ಥಿಗಳಿಗೆ 10 ಲಕ್ಷ ಮೊತ್ತದ ಪರಿಹಾರ ಕೊಡಬೇಕೆಂದು ಮತ್ತು ಆ ಕಾಲೇಜ್‍ನ ಬೋದಕ ಮತ್ತು ಆಡಳಿತ ಸಿಬ್ಬಂದಿಯನ್ನ ಅಮಾನತ್ತು ಮಾಡಬೇಕೆಂದು ಸಮಿತಿಯು ಶಿಫಾರಸ್ಸು ಮಾಡಿತ್ತು.

ಶಿಕ್ಷಣ ಸಂಸ್ಥೆಗಳನ್ನ ಮೇಲ್ಜಾತಿಗಳು ಮತ್ತು ಶ್ರೀಮಂತ ವರ್ಗದವರಿಗೆ ಕಾಯ್ದಿರಿಸಲಾಗುತ್ತದೆ. ಆದರೆ ಜಾತಿ ಆದಾರಿತ ಮೀಸಲಾತಿಯ ಸಾಮಾಜಿಕ ನ್ಯಾಯದ ಮೂಲಕ ಈ ಯಾಜಮಾನಕೀಯಕ್ಕೆ ಒಡ್ಡಲಾಗುವ ಸವಾಲನ್ನ ಮೀರಲು ಈ ಕಿರುಕುಳ, ಅಪಮಾನ, ಪ್ರತ್ಯೇಕತೆ, ತಾರತಮ್ಯವನ್ನ ತುರ್ತಾಗಿ ಜಾರಿಗೊಳಿಲಾಗುತ್ತದೆ. ಈ ಅಪರಾದಿಗಳಿಗೆ ದಂಡನೆಯ ಕ್ರಮ ಮತ್ತು ಶಾಸನಬದ್ದ ಆದೇಶವಿದ್ದರೂ ಸಹ ದೀರ್ಘಾವದಿ ಪರಿಹಾರವನ್ನ ಕಂಡುಕೊಳ್ಳುವುದು ಅವಶ್ಯಕವಾಗಿದೆ.
( ಕೃಪೆ : ಇಂಡಿಯನ್ ಎಕ್ಸ್‍ಪ್ರೆಸ್ 29, ಮೇ, 2019)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...