Homeಅಂಕಣಗಳುಅಭಯೋತ್ಪಾದಕ ಮಸೂತಿ, ದರ್ಗಾ ಮತ್ತು ಮೌಲ್ವಿಗಳು

ಅಭಯೋತ್ಪಾದಕ ಮಸೂತಿ, ದರ್ಗಾ ಮತ್ತು ಮೌಲ್ವಿಗಳು

ಎಲ್ಲಾ ಸಂಗತಿಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ಕತೆಕಟ್ಟಿ ಜನರಲ್ಲಿ ಭಯವನ್ನು ಉತ್ಪಾದಿಸುವ ಮೂಲಭೂತವಾದಿಗಳೂ ಇದ್ದಾರೆ

- Advertisement -
- Advertisement -

| ಅರುಣ್ ಜೋಳದಕೂಡ್ಲಿಗಿ |

ಈಚೆಗೆ ಕೊಟ್ಟೂರಿನಲ್ಲಿ ನನ್ನ ಹೈಸ್ಕೂಲ್ ಮಿತ್ರನೊಬ್ಬ ಮಾತನಾಡುತ್ತಾ `ಗೆಳೆಯಾ ನಿನಗೆ ಗೊತ್ತಿಲ್ಲ ಈ ಮಸೂತಿ, ದರ್ಗಾ, ಮೌಲ್ವಿಗಳೆಲ್ಲಾ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದಾರೆ’ ಎಂದ. ನಾನು ಅದು ಹೇಗೆ ಹೇಳ್ತೀಯ, ಬಾ ಕೊಟ್ಟೂರಲ್ಲಿರುವ ಎಲ್ಲಾ ಮಸೂತಿಗಳನ್ನು ಒಮ್ಮೆ ಸುತ್ತಾಕಿಕೊಂಡು ಬರೋಣ, ನಿನ್ನ ಮಾತಿಗೆ ಸಾಕ್ಷಿ ತೋರಿಸು ಅಂದೆ. ಆತ ತಡವರಿಸುತ್ತ `ಹಂಗಲ್ಲ ಕೆಲವು ಮಸೀತಿಗಳು ಹಂಗೆ ಇದಾವೆ ಅಂದ’ ಆಗ ನಾನು ಮತ್ತೆ `ಸರಿ ನೀನು ಹೇಳೋವಂತ ಮಸೀತಿಗಳನ್ನಾದರೂ ತೋರಿಸು’ ಅಂದೆ. ಕೊನೆಗೆ ಆತ ಮತ್ತಷ್ಟು ಗಲಿಬಿಲಿಗೊಂಡು `ನನಗೆ ಪಕ್ಕ ಗೊತ್ತಿಲ್ಲ, ಆದ್ರ ನಾನು ಹೇಳೋ ಮಾತಂತು ಸತ್ಯ’ ಅಂದ. ನಾನು `ಅರೆ ನಿನ್ನ ಮಾತಿಗೆ ಒಂದಾದ್ರೂ ಸಾಕ್ಷಿ ತೋರಿಸೋಕೆ ರೆಡಿ ಇಲ್ಲ, ಆದ್ರೆ `ನಾನೇಳೋ ಮಾತು ಮಾತ್ರ ಸತ್ಯ’ ಅಂದ್ರೆ ಹೇಗೆ ಅಂದೆ. ಗೆಳೆಯ ಸ್ವಲ್ಪ ವಿಚಲಿತನಾದಂತೆ `ಇಲ್ಲ ಇಲ್ಲ ನಮ್ಮ ಭಾಗದ ಮುಸ್ಲಿಮರು ಒಳ್ಳೇರಿದಾರ, ಆದರೆ ಬೇರೆ ಕಡೆ ಮುಸ್ಲೀಮರು ಹಾಗಲ್ಲ’ ಎಂದ. ನಾನು ಮತ್ತೆ `ಅಲ್ಲಪ್ಪ ಬೇರೆ ಭಾಗದವರು ಇದೇ ಮಾತು ಹೇಳ್ತಾರೆ ಅಂತಿಟ್ಕೋ, ಹಾಗಾದ್ರೆ ಯಾವ ಭಾಗದ ಮುಸ್ಲೀಮರು ಒಳ್ಳೇರಲ್ಲ ಹೇಳು’ ಅಂದೆ. ಆತ ತಡವರಿಸುತ್ತಾ ಮಾತು ಬದಲಿಸಿ ಬೇರೆ ಖಾಸಗಿ ಸಂಗತಿಗಳಿಗೆ ತಿರುಗಿದ.
ನಾನು ಗೆಳೆಯನಿಗೆ ಮತ್ತೆ ಅದೆ ವಿಷಯ ಕೆದಕಿ `ಈಗ ಟೈಮಿದ್ರೆ ನೀನು ನನ್ನ ಜತೆ ಬಾ, ಇದೇ ಕೊಟ್ಟೂರ ಮಸೀದಿಯೊಂದರ ಹತ್ತಿರ ಕೂರೋಣ. ಹೆದರಿದ ಮಕ್ಕಳಿಗೆ ತಾಯತ ಕಟ್ಟಿಸಲಿಕ್ಕೋ, ಸಕ್ಕರೆ ಓದಿಸಲಿಕ್ಕೋ ಒಬ್ರು ಇಬ್ರಾದ್ರೂ ಬಂದೇ ಬರ್ತಾರೆ. ನೀನು ಹೇಳಿದ ಮಸೀದಿ ದರ್ಗಾಗಳೇ ಜನರಲ್ಲಿ ಹೇಗೆ ಭಯವನ್ನು ನಿವಾರಿಸುವ ನಂಬಿಕೆ ಹುಟ್ಟಿಸುತ್ತವೆಯೆಂದು ನೋಡೋಣ. ಇದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ಮಸೂತಿಗೆ ಬಂದ ಜನರ ಬಳಿ ಮಾತಾಡೋಣ. ನೀನು ನನ್ನ ಜತೆ ಬರುವುದಾದರೆ ನನ್ನ ಮಾತಿಗೆ ಇಂತಹ ಸಾವಿರಾರು ದರ್ಗಾ ಮಸೂತಿಗಳನ್ನು ಸಾಕ್ಷಿಯಾಗಿ ತೋರಿಸಲು ಸಿದ್ಧನಿದ್ದೇನೆ’ ಎಂದೆ. ಗೆಳೆಯ `ಹೌದು ನೀನು ಹೇಳೋದ್ರಲ್ಲಿ ನಿಜವಿದೆ. ನನ್ನ ಮಗಳಿಗೂ ನಮ್ಮವ್ವ ನಮ್ಮೂರ ಮುಜಾವರನ ಬಳಿ ತಾಯಿತ ಕಟ್ಟಿಸಿದ್ಲು’ ಎಂದು ದಿಢೀರ್ ನನ್ನ ದಾರಿಗೆ ಬಂದು ನಿಂತ. ಗೆಳೆಯನ ಈ ಗೊಂದಲದ ಸ್ಥಿತಿ ನೋಡಿ ಏನು ಹೇಳುವುದೋ ತಿಳಿಯದಾಯಿತು. ಆದರೆ ಹಲವರು ಇಂತಹ ಗೊಂದಲದಲ್ಲಿದ್ದಾರೆ ಎನ್ನುವುದಕ್ಕೆ ಈತ ಸಂಕೇತದಂತಿದ್ದ.
ಕಳೆದ ವರ್ಷ ನಮ್ಮೂರಲ್ಲಿ ನಡೆದ ಒಂದು ಘಟನೆ. ಆ ರಾತ್ರಿ ನನ್ನ ಮಗ ವಿಪರೀತ ಅಳುವುದಕ್ಕೆ ಶುರು ಮಾಡಿದ, ನಾವು ಮಗನನ್ನು ಸಂತೈಸಲು ಪ್ರಯತ್ನಿಸುತ್ತಿದ್ದೆವು. ನನ್ನವ್ವ ಮೊಮ್ಮಗ ಹೆದರಿಕೊಂಡಂತಿದೆ ಎಂದರಿತು ನಮ್ಮೂರ ಅಲಾವಿ ದೇವರಿಗೆ ಬೆಲ್ಲದ ತೂಕದ ಹರಕೆ ಹೊತ್ತಳು. ಕಾಕತಾಳೀಯವೆಂಬಂತೆ ಮಗನ ಅಳು ನಿಂತಿತು. ಅವ್ವನ ಮುಖದಲ್ಲಿ ಸಂತಸ ಮೂಡಿ `ನೋಡು ದೇವ್ರಿಲ್ಲ ದೇವ್ರಿಲ್ಲ ಅಂತ ನೀನು ಮೊಂಡುವಾದ ಮಾಡ್ತಿ, ಅಲಾವಿ ದೇವ್ರು ಹುಸೇನಪ್ಪ ಹ್ಯಂಗ ಮಗೂನ ಹೆದ್ರಿಕಿನ ಹೋಗಿಸ್ತು’ ಎಂದು ನನ್ನನ್ನು ದುರುಗುಟ್ಟಿ ನೋಡಿದಳು. ನಾನೀಗ ಏನಾದರೂ ಮಾತನಾಡಿದರೆ, ಮನಸ್ಸಿಗೆ ನೋವಾಗುವುದೆಂದು ಭಾವಿಸಿ ಮೌನ ವಹಿಸಿದೆ. ಮಗ ಅಳುವುದನ್ನು ನಿಲ್ಲಿಸಿ ನಿದ್ದೆಗೆ ಜಾರಿದ್ದಕ್ಕೆ ನಿರಾಳವಾದೆವು. ಇದರ ತಾರ್ಕಿಕತೆಯ ಬಗ್ಗೆ ವಿಚಾರ ಮಾಡದೆ ನನ್ನವ್ವನ ನಂಬಿಕೆಯಲ್ಲಿ ಮಸೂತಿ, ಅಲಾವಿ ದೇವ್ರು ಭಯನಿವಾರಕ ಶಕ್ತಿಗಳಾಗಿ ಉಳಿದದ್ದು ನನ್ನ ಮನದಲ್ಲಿ ಉಳಿಯಿತು.
ಮೇಲಿನ ಎರಡೂ ಸಂಗತಿಗಳೂ ಒಂದಕ್ಕೊಂದು ವಿರುದ್ಧವಾಗಿವೆ. ಒಂದೆಡೆ ಭಾರತದಾದ್ಯಂತ ಗ್ರಾಮೀಣ ಭಾಗದಲ್ಲಿ ಮಸೂತಿ, ದರ್ಗಾ, ಮೌಲ್ವಿ ಎಂದರೆ ಭಯನಿವಾರಕ ಸ್ಥಳಗಳೆಂದು ಭಾವಿಸಿದ ದೊಡ್ಡ ಜನವರ್ಗವಿದೆ. ಮತ್ತೊಂದೆಡೆ ಭಯವನ್ನು ಉತ್ಪಾದಿಸುವ ನೆರೆಯ ಮುಸ್ಲಿಂ ದೇಶಗಳನ್ನು ಆಧರಿಸಿ ಇಡಿಯಾಗಿ ಮುಸ್ಲಿಮರ ಎಲ್ಲಾ ಸಂಗತಿಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ಕತೆಕಟ್ಟಿ ಜನರಲ್ಲಿ ಭಯವನ್ನು ಉತ್ಪಾದಿಸುವ ಮೂಲಭೂತವಾದಿಗಳೂ ಇದ್ದಾರೆ. ಈ ಎರಡೂ ನೆಲೆಗಳ ಆಚೆ ವಾಸ್ತವ ಸಂಕೀರ್ಣವಾಗಿದೆ. ಬಹುಸಂಖ್ಯಾತ ಧರ್ಮಿಯರು ಅಹಮ್ಮಿನಿಂದ ಹುಟ್ಟಿಸುವ ಭಯದ ಕಾರಣಕ್ಕೆ ಮುಸ್ಲೀಮರಲ್ಲಿ ಅನಿವಾರ್ಯ ಆತಂಕದಿಂದ ಸ್ವರಕ್ಷಣೆಯ ಸಂಘಟಿತ ಚಟುವಟಿಕೆಗಳು ಕೆಲವೆಡೆ ನಡೆದಿರಬಹುದು. ಅದನ್ನು ಅಲ್ಲಗಳೆಯಲಾಗದು. ಆದರೆ ಬಹುಪಾಲು ಮಸೂತಿ, ದರ್ಗಾ, ಮೌಲ್ವಿಗಳು ಅಭಯೋತ್ಪಾದಕ ಅಥವಾ ಭಯಮುಕ್ತಗೊಳಿಸುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿವೆ ಎನ್ನುವುದು ವಾಸ್ತವ. ಹೀಗೆ ಭಯಮುಕ್ತ ಕೇಂದ್ರಗಳಾಗಿರುವ ಮಸೂತಿ ಮತ್ತು ದರ್ಗಾಗಳು ಬಹುಪಾಲು ಸೂಫಿ ಸಂತರವು ಎನ್ನುವುದನ್ನೂ ಗಮನಿಸಬೇಕಿದೆ. ಹಾಗಾಗಿಯೇ ಸೂಫಿ ಸಂತರ ಬಗ್ಗೆ `ರೋಗನಿವಾರಕ’ ಪವಾಡ ಕತೆಗಳು ಹೆಚ್ಚಿವೆ.
ಕರ್ನಾಟಕದಾದ್ಯಂತ ಇರುವ ಮೊಹರಂ ಮಸೀತಿಗಳು ಮತ್ತು ಸೂಫಿ ಸಂತರ ದರ್ಗಾಗಳು ಈಗಲೂ ಭಯ ನಿವಾರಕ ಕೇಂದ್ರಗಳಂತೆ ಕೆಲಸ ಮಾಡುತ್ತವೆ. ಬೆಂಗಳೂರಿನ ತವಕ್ಕಲ್ ಮಸ್ತಾನ್ ಸಾಹೇಬನು ಎಳೆಮಕ್ಕಳನ್ನು ರಕ್ಷಿಸುವ ದೈವವಾಗಿದೆ. ನವಲಗುಂದದ ಯಮನೂರಪ್ಪನ ಉರುಸನ್ನು ಜನರು `ಜಡ್ಡಿನ ಜಾತ್ರೆ’ ಎಂದು ಕರೆಯುವ ವಾಡಿಕೆಯಿದೆ. ಕಾಯಿಲೆಗೆ ಬಿದ್ದ ಗಂಡನನ್ನು ಉಳಿಸಿಕೊಂಡು ಭಯ ನಿವಾರಿಸಿಕೊಳ್ಳಲು ಸವಣೂರಿನ ಬ್ರಹ್ಮಚಾರಿ ಸಂತ ಕಮಲ್ ಭಾಷಾನ ದರ್ಗಾದಲ್ಲಿ ಮಹಿಳೆಯರ ರಾಶಿಗಟ್ಟಲೆ ಹರಕೆಯ ಬಳೆಗಳಿವೆ. ದನಗಳಿಗೆ ರೋಗ ಬಂದಾಗ, ಅವು ಕಳೆದು ಹೋದಾಗ ಉಳಿಸುವ ಮತ್ತು ಹುಡುಕಿಕೊಡುವ ಕೆಲಸವನ್ನು ಬೈದೊಡ್ಡಿಯ ಹುಜೂರಸಾಬ, ಕುಸುನೂರಿನ ಗೋಕುರಸಾಬ, ಅಂಬತ್ತಿಯ ಶೇಕಮಾರ ಮುಂತಾದವರಿಗೆ ವಹಿಸಿ ಭಯಮುಕ್ತರಾಗುವುದಿದೆ. ಮೈನರೆದ ಹುಡುಗಿ ನೀರುಹಾಕಿಕೊಂಡ ಮೇಲೆ, ಮದುಮಕ್ಕಳು ಪ್ರಸ್ತಕ್ಕೆ ಮೊದಲು ‘ಓದಿಕೆ’ ಮಾಡಿಸುವುದು, ಮಕ್ಕಳಿಲ್ಲದವರು ಹರಸಿಕೊಳ್ಳುವುದು, ಸರಾಗವಾಗಿ ಹೆರಿಗೆಯಾಗಲೆಂದು ಗಬಿರ್sಣಿಯ ಕೈಗೆ ಗೋರಿ ಮೇಲಿನ ಬಟ್ಟೆತುಂಡು ಕಟ್ಟುವುದು, ಹುಟ್ಟಿದ ಕೂಸನ್ನು ಅಥವಾ ಕರುವನ್ನು ತಂದು ದರ್ಗಾಕ್ಕೆ ‘ಸಣ’ ಮಾಡಿಸುವುದು, ಫಸಲಿನ ಮೊದಲ ಕಟಾವನ್ನು ತಂದೊಪ್ಪಿಸುವುದು-ಇವೇ ಮುಂತಾದ ಫಲವಂತಿಕೆಗೆ ಸಂಬಂದಿsಸಿದ ಆಚರಣೆಗಳು ದರ್ಗಾ ಸಂಸ್ಕøತಿಯ ಭಾಗವಾಗಿ ಬೆಳೆದುಬಿಟ್ಟಿವೆ. ರಹಮತ್ ತರೀಕೆರೆಯವರು `ಕರ್ನಾಟಕದ ಸೂಫಿಗಳು’ ಕೃತಿಯಲ್ಲಿ ಇಂತಹ ದರ್ಗಾ ಮಸೂತಿಗಳ ಬಗೆಗೆ ವಿಶ್ಲೇಷಿಸಿದ್ದಾರೆ.
ಜನರು ದೆವ್ವ ಬಂದಿದೆ ಎಂದು ನಂಬುವ `ಗಾಳಿ’ ಬಿಡಿಸುವ ದರ್ಗಾಗಳಾದ ಲಕ್ಷ್ಮೇಶ್ವರದ ದೂದಪೀರಾ, ಕರೋಶಿಯ ಶಾನೂರುಬಾಬಾ, ಬಿಜಾಪುರದ ಅಬ್ದುಲ್ ರಜಾಕ್ ಖಾದ್ರಿ, ಮುರುಗಾಮಲೈನ ಅಮ್ಮಾಜಾನ್ ಬಾವಾಜಾನ್ ಹಾಗೂ ಎಳ್ಳಾರತಿಯ ಶೇಕ್ ಶಾವಲಿ ಮುಂತಾದವುಗಳನ್ನು ನೋಡಬಹುದು. ಇವೂ ಕೂಡ ದೆವ್ವವೆಂಬ ಭಯವನ್ನು ಸಮುದಾಯದ ಮನಸ್ಸಿನಿಂದ ಹೋಗಲಾಡಿಸಿ ಭಯಮುಕ್ತಗೊಳಿಸುವ ಕೆಲಸವೇ ಆಗಿದೆ. ಹೀಗೆ ಮೂಢನಂಬಿಕೆಯ ಕಾರಣಕ್ಕೋ, ಅರಿವಿನ ಕೊರತೆಯ ಕಾರಣಕ್ಕೋ, ಅಸಹಾಯಕತೆಯ ಕಾರಣಕ್ಕೋ ಜನರನ್ನು ಆವರಿಸಿರುವ ಹಲವು ಬಗೆಯ `ಭಯ’ಗಳನ್ನು ಹೋಗಲಾಡಿಸಿ `ಅಭಯೋತ್ಪಾದಕ’ ಕೇಂದ್ರಗಳಾದ ಮಸೂತಿ, ದರ್ಗಾ, ಮುಜಾವರ ಮುಂತಾದ ಸಂಗತಿಗಳನ್ನು ಭಯೋತ್ಪಾದಕ ಚಟುವಟಿಕೆಗಳ ಜತೆ ಹೆಣೆಯುವು ಎಷ್ಟು ಅಮಾನವೀಯ ಎನ್ನುವುದನ್ನು ಅರಿಯಬೇಕಿದೆ. ಜನಸಾಮಾನ್ಯರಿಗೆ ಅವರದೇ ಆದ `ಜನತೆಯ ಧರ್ಮವಿದೆ’ ಆ ಜನತೆಯ ಧರ್ಮದಲ್ಲಿ ಹಿಂದು ಮುಸ್ಲಿಂ ಜೈನ ಬೌದ್ಧ ಮತಗಳೆಲ್ಲಾ ಬೆರೆತು ಹೊಸ ಆಕಾರವನ್ನು ಪಡೆಯುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜ ಅರುಣ್… ಜನತೆಯ ಧರ್ಮವೇ ಬೇರೆ.. ಅದಕ್ಕೆ ಮುಕ್ತ ಪ್ರಜ್ಞೆ ಇದೆ… ಹೀಗಾಗಿ ದೂರದಲ್ಲಿ ನಿಂತು ಕನ್ನಡಕಗಳನ್ನು ಹಾಕಿ ನೋಡುವವರ ಗರ ಬಿಡಿಸಲಾಗದು…. ಹತ್ತಿರ ಹೋಗಿ ಸಣ ಮಾಡಿದರೆ ಸಾಕು… ಈಗಲೂ ಎಷ್ಟೋ ಮಠಗಳು ಅಂತ್ರ ತಾಯಿತ ಕಟ್ಟುತ್ತಿವೆ… ಬೂದಿ ಹಚ್ಚಿ ದೆವ್ವ ಬಿಡಿಸುತ್ತಿವೆ….

LEAVE A REPLY

Please enter your comment!
Please enter your name here

- Advertisment -

SIR: ಕೇಂದ್ರ ಸರ್ಕಾರದ SIRಗೆ ಕೌಂಟರ್‌, ಮಹತ್ವದ ಆದೇಶಗಳನ್ನು ಹೊರಡಿಸಿದ ಕರ್ನಾಟಕ ಸರ್ಕಾರ

ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದವು. ಸುಪ್ರೀಂ ಕೋರ್ಟ್‌ ಆ ಪ್ರಕ್ರಿಯೆಯನ್ನು ಮಾನ್ಯ ಮಾಡಿತ್ತು. ಕರ್ನಾಟಕದಲ್ಲಿ ನಾಳೆಯಿಂದ (ಜೂನ್.30)‌...

ರಾಮಮಂದಿರದ ದೇಣಿಗೆ ಕಳ್ಳತನ: ಆರೋಪಿಗಳ ಪರ ಯಾವುದೇ ವಕೀಲರು ವಾದಿಸುವಂತಿಲ್ಲ , ವಾದಿಸಿದರೆ ರೂ. 5ಲಕ್ಷ ದಂಡ

ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪರವಾಗಿ ಯಾವುದೇ ವಕೀಲರು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು ಎಂದು ಅಯೋಧ್ಯೆ ಬಾರ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಸಂಘದ ಈ ತೀರ್ಮಾನವನ್ನು...

ವೋಟರ್ ಲಿಸ್ಟ್‌ನಿಂದ ಹೆಸರು ಡಿಲೀಟ್: ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ಬ್ರೇಕ್! ಬಂಗಾಳ ಸಿಎಂ ಗೆ ಪತ್ರ ಬರೆದ ಕೇರಳ ಸಿಎಂ

ಹಿರಿಯ ಪತ್ರಕರ್ತ ಮತ್ತು ‘ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ರಾಮದಾಸ್ ಅವರ ಪಾಸ್‌ಪೋರ್ಟ್ ನವೀಕರಣ ವಿವಾದವು ಸೋಮವಾರ ಮತ್ತಷ್ಟು ತೀವ್ರಗೊಂಡಿದೆ. ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಕೋರಿ...

ರಾಮ ಮಂದಿರ ದೇಣಿಗೆ ಹಗರಣ: ಅರ್ಜಿ ವಿಚಾರಣೆ ಕೆಲ ದಿನ ತಡವಾದರೆ ‘ಆಕಾಶವೇನೂ ಉರುಳಿ ಬೀಳುವುದಿಲ್ಲ’ ಎಂದ ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರಿಂದ ಬಂದ ದೇಣಿಗೆ ಹಣ ದುರುಪಯೋಗ ಆಗಿರುವ ಕುರಿತು ಸಿಬಿಐ ನೇತೃತ್ವದ ಬಹು-ಸಂಸ್ಥೆಗಳ ಜಂಟಿ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ...

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...