Homeಅಂಕಣಗಳುಅಭಯೋತ್ಪಾದಕ ಮಸೂತಿ, ದರ್ಗಾ ಮತ್ತು ಮೌಲ್ವಿಗಳು

ಅಭಯೋತ್ಪಾದಕ ಮಸೂತಿ, ದರ್ಗಾ ಮತ್ತು ಮೌಲ್ವಿಗಳು

ಎಲ್ಲಾ ಸಂಗತಿಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ಕತೆಕಟ್ಟಿ ಜನರಲ್ಲಿ ಭಯವನ್ನು ಉತ್ಪಾದಿಸುವ ಮೂಲಭೂತವಾದಿಗಳೂ ಇದ್ದಾರೆ

- Advertisement -
- Advertisement -

| ಅರುಣ್ ಜೋಳದಕೂಡ್ಲಿಗಿ |

ಈಚೆಗೆ ಕೊಟ್ಟೂರಿನಲ್ಲಿ ನನ್ನ ಹೈಸ್ಕೂಲ್ ಮಿತ್ರನೊಬ್ಬ ಮಾತನಾಡುತ್ತಾ `ಗೆಳೆಯಾ ನಿನಗೆ ಗೊತ್ತಿಲ್ಲ ಈ ಮಸೂತಿ, ದರ್ಗಾ, ಮೌಲ್ವಿಗಳೆಲ್ಲಾ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದಾರೆ’ ಎಂದ. ನಾನು ಅದು ಹೇಗೆ ಹೇಳ್ತೀಯ, ಬಾ ಕೊಟ್ಟೂರಲ್ಲಿರುವ ಎಲ್ಲಾ ಮಸೂತಿಗಳನ್ನು ಒಮ್ಮೆ ಸುತ್ತಾಕಿಕೊಂಡು ಬರೋಣ, ನಿನ್ನ ಮಾತಿಗೆ ಸಾಕ್ಷಿ ತೋರಿಸು ಅಂದೆ. ಆತ ತಡವರಿಸುತ್ತ `ಹಂಗಲ್ಲ ಕೆಲವು ಮಸೀತಿಗಳು ಹಂಗೆ ಇದಾವೆ ಅಂದ’ ಆಗ ನಾನು ಮತ್ತೆ `ಸರಿ ನೀನು ಹೇಳೋವಂತ ಮಸೀತಿಗಳನ್ನಾದರೂ ತೋರಿಸು’ ಅಂದೆ. ಕೊನೆಗೆ ಆತ ಮತ್ತಷ್ಟು ಗಲಿಬಿಲಿಗೊಂಡು `ನನಗೆ ಪಕ್ಕ ಗೊತ್ತಿಲ್ಲ, ಆದ್ರ ನಾನು ಹೇಳೋ ಮಾತಂತು ಸತ್ಯ’ ಅಂದ. ನಾನು `ಅರೆ ನಿನ್ನ ಮಾತಿಗೆ ಒಂದಾದ್ರೂ ಸಾಕ್ಷಿ ತೋರಿಸೋಕೆ ರೆಡಿ ಇಲ್ಲ, ಆದ್ರೆ `ನಾನೇಳೋ ಮಾತು ಮಾತ್ರ ಸತ್ಯ’ ಅಂದ್ರೆ ಹೇಗೆ ಅಂದೆ. ಗೆಳೆಯ ಸ್ವಲ್ಪ ವಿಚಲಿತನಾದಂತೆ `ಇಲ್ಲ ಇಲ್ಲ ನಮ್ಮ ಭಾಗದ ಮುಸ್ಲಿಮರು ಒಳ್ಳೇರಿದಾರ, ಆದರೆ ಬೇರೆ ಕಡೆ ಮುಸ್ಲೀಮರು ಹಾಗಲ್ಲ’ ಎಂದ. ನಾನು ಮತ್ತೆ `ಅಲ್ಲಪ್ಪ ಬೇರೆ ಭಾಗದವರು ಇದೇ ಮಾತು ಹೇಳ್ತಾರೆ ಅಂತಿಟ್ಕೋ, ಹಾಗಾದ್ರೆ ಯಾವ ಭಾಗದ ಮುಸ್ಲೀಮರು ಒಳ್ಳೇರಲ್ಲ ಹೇಳು’ ಅಂದೆ. ಆತ ತಡವರಿಸುತ್ತಾ ಮಾತು ಬದಲಿಸಿ ಬೇರೆ ಖಾಸಗಿ ಸಂಗತಿಗಳಿಗೆ ತಿರುಗಿದ.
ನಾನು ಗೆಳೆಯನಿಗೆ ಮತ್ತೆ ಅದೆ ವಿಷಯ ಕೆದಕಿ `ಈಗ ಟೈಮಿದ್ರೆ ನೀನು ನನ್ನ ಜತೆ ಬಾ, ಇದೇ ಕೊಟ್ಟೂರ ಮಸೀದಿಯೊಂದರ ಹತ್ತಿರ ಕೂರೋಣ. ಹೆದರಿದ ಮಕ್ಕಳಿಗೆ ತಾಯತ ಕಟ್ಟಿಸಲಿಕ್ಕೋ, ಸಕ್ಕರೆ ಓದಿಸಲಿಕ್ಕೋ ಒಬ್ರು ಇಬ್ರಾದ್ರೂ ಬಂದೇ ಬರ್ತಾರೆ. ನೀನು ಹೇಳಿದ ಮಸೀದಿ ದರ್ಗಾಗಳೇ ಜನರಲ್ಲಿ ಹೇಗೆ ಭಯವನ್ನು ನಿವಾರಿಸುವ ನಂಬಿಕೆ ಹುಟ್ಟಿಸುತ್ತವೆಯೆಂದು ನೋಡೋಣ. ಇದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ಮಸೂತಿಗೆ ಬಂದ ಜನರ ಬಳಿ ಮಾತಾಡೋಣ. ನೀನು ನನ್ನ ಜತೆ ಬರುವುದಾದರೆ ನನ್ನ ಮಾತಿಗೆ ಇಂತಹ ಸಾವಿರಾರು ದರ್ಗಾ ಮಸೂತಿಗಳನ್ನು ಸಾಕ್ಷಿಯಾಗಿ ತೋರಿಸಲು ಸಿದ್ಧನಿದ್ದೇನೆ’ ಎಂದೆ. ಗೆಳೆಯ `ಹೌದು ನೀನು ಹೇಳೋದ್ರಲ್ಲಿ ನಿಜವಿದೆ. ನನ್ನ ಮಗಳಿಗೂ ನಮ್ಮವ್ವ ನಮ್ಮೂರ ಮುಜಾವರನ ಬಳಿ ತಾಯಿತ ಕಟ್ಟಿಸಿದ್ಲು’ ಎಂದು ದಿಢೀರ್ ನನ್ನ ದಾರಿಗೆ ಬಂದು ನಿಂತ. ಗೆಳೆಯನ ಈ ಗೊಂದಲದ ಸ್ಥಿತಿ ನೋಡಿ ಏನು ಹೇಳುವುದೋ ತಿಳಿಯದಾಯಿತು. ಆದರೆ ಹಲವರು ಇಂತಹ ಗೊಂದಲದಲ್ಲಿದ್ದಾರೆ ಎನ್ನುವುದಕ್ಕೆ ಈತ ಸಂಕೇತದಂತಿದ್ದ.
ಕಳೆದ ವರ್ಷ ನಮ್ಮೂರಲ್ಲಿ ನಡೆದ ಒಂದು ಘಟನೆ. ಆ ರಾತ್ರಿ ನನ್ನ ಮಗ ವಿಪರೀತ ಅಳುವುದಕ್ಕೆ ಶುರು ಮಾಡಿದ, ನಾವು ಮಗನನ್ನು ಸಂತೈಸಲು ಪ್ರಯತ್ನಿಸುತ್ತಿದ್ದೆವು. ನನ್ನವ್ವ ಮೊಮ್ಮಗ ಹೆದರಿಕೊಂಡಂತಿದೆ ಎಂದರಿತು ನಮ್ಮೂರ ಅಲಾವಿ ದೇವರಿಗೆ ಬೆಲ್ಲದ ತೂಕದ ಹರಕೆ ಹೊತ್ತಳು. ಕಾಕತಾಳೀಯವೆಂಬಂತೆ ಮಗನ ಅಳು ನಿಂತಿತು. ಅವ್ವನ ಮುಖದಲ್ಲಿ ಸಂತಸ ಮೂಡಿ `ನೋಡು ದೇವ್ರಿಲ್ಲ ದೇವ್ರಿಲ್ಲ ಅಂತ ನೀನು ಮೊಂಡುವಾದ ಮಾಡ್ತಿ, ಅಲಾವಿ ದೇವ್ರು ಹುಸೇನಪ್ಪ ಹ್ಯಂಗ ಮಗೂನ ಹೆದ್ರಿಕಿನ ಹೋಗಿಸ್ತು’ ಎಂದು ನನ್ನನ್ನು ದುರುಗುಟ್ಟಿ ನೋಡಿದಳು. ನಾನೀಗ ಏನಾದರೂ ಮಾತನಾಡಿದರೆ, ಮನಸ್ಸಿಗೆ ನೋವಾಗುವುದೆಂದು ಭಾವಿಸಿ ಮೌನ ವಹಿಸಿದೆ. ಮಗ ಅಳುವುದನ್ನು ನಿಲ್ಲಿಸಿ ನಿದ್ದೆಗೆ ಜಾರಿದ್ದಕ್ಕೆ ನಿರಾಳವಾದೆವು. ಇದರ ತಾರ್ಕಿಕತೆಯ ಬಗ್ಗೆ ವಿಚಾರ ಮಾಡದೆ ನನ್ನವ್ವನ ನಂಬಿಕೆಯಲ್ಲಿ ಮಸೂತಿ, ಅಲಾವಿ ದೇವ್ರು ಭಯನಿವಾರಕ ಶಕ್ತಿಗಳಾಗಿ ಉಳಿದದ್ದು ನನ್ನ ಮನದಲ್ಲಿ ಉಳಿಯಿತು.
ಮೇಲಿನ ಎರಡೂ ಸಂಗತಿಗಳೂ ಒಂದಕ್ಕೊಂದು ವಿರುದ್ಧವಾಗಿವೆ. ಒಂದೆಡೆ ಭಾರತದಾದ್ಯಂತ ಗ್ರಾಮೀಣ ಭಾಗದಲ್ಲಿ ಮಸೂತಿ, ದರ್ಗಾ, ಮೌಲ್ವಿ ಎಂದರೆ ಭಯನಿವಾರಕ ಸ್ಥಳಗಳೆಂದು ಭಾವಿಸಿದ ದೊಡ್ಡ ಜನವರ್ಗವಿದೆ. ಮತ್ತೊಂದೆಡೆ ಭಯವನ್ನು ಉತ್ಪಾದಿಸುವ ನೆರೆಯ ಮುಸ್ಲಿಂ ದೇಶಗಳನ್ನು ಆಧರಿಸಿ ಇಡಿಯಾಗಿ ಮುಸ್ಲಿಮರ ಎಲ್ಲಾ ಸಂಗತಿಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ಕತೆಕಟ್ಟಿ ಜನರಲ್ಲಿ ಭಯವನ್ನು ಉತ್ಪಾದಿಸುವ ಮೂಲಭೂತವಾದಿಗಳೂ ಇದ್ದಾರೆ. ಈ ಎರಡೂ ನೆಲೆಗಳ ಆಚೆ ವಾಸ್ತವ ಸಂಕೀರ್ಣವಾಗಿದೆ. ಬಹುಸಂಖ್ಯಾತ ಧರ್ಮಿಯರು ಅಹಮ್ಮಿನಿಂದ ಹುಟ್ಟಿಸುವ ಭಯದ ಕಾರಣಕ್ಕೆ ಮುಸ್ಲೀಮರಲ್ಲಿ ಅನಿವಾರ್ಯ ಆತಂಕದಿಂದ ಸ್ವರಕ್ಷಣೆಯ ಸಂಘಟಿತ ಚಟುವಟಿಕೆಗಳು ಕೆಲವೆಡೆ ನಡೆದಿರಬಹುದು. ಅದನ್ನು ಅಲ್ಲಗಳೆಯಲಾಗದು. ಆದರೆ ಬಹುಪಾಲು ಮಸೂತಿ, ದರ್ಗಾ, ಮೌಲ್ವಿಗಳು ಅಭಯೋತ್ಪಾದಕ ಅಥವಾ ಭಯಮುಕ್ತಗೊಳಿಸುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿವೆ ಎನ್ನುವುದು ವಾಸ್ತವ. ಹೀಗೆ ಭಯಮುಕ್ತ ಕೇಂದ್ರಗಳಾಗಿರುವ ಮಸೂತಿ ಮತ್ತು ದರ್ಗಾಗಳು ಬಹುಪಾಲು ಸೂಫಿ ಸಂತರವು ಎನ್ನುವುದನ್ನೂ ಗಮನಿಸಬೇಕಿದೆ. ಹಾಗಾಗಿಯೇ ಸೂಫಿ ಸಂತರ ಬಗ್ಗೆ `ರೋಗನಿವಾರಕ’ ಪವಾಡ ಕತೆಗಳು ಹೆಚ್ಚಿವೆ.
ಕರ್ನಾಟಕದಾದ್ಯಂತ ಇರುವ ಮೊಹರಂ ಮಸೀತಿಗಳು ಮತ್ತು ಸೂಫಿ ಸಂತರ ದರ್ಗಾಗಳು ಈಗಲೂ ಭಯ ನಿವಾರಕ ಕೇಂದ್ರಗಳಂತೆ ಕೆಲಸ ಮಾಡುತ್ತವೆ. ಬೆಂಗಳೂರಿನ ತವಕ್ಕಲ್ ಮಸ್ತಾನ್ ಸಾಹೇಬನು ಎಳೆಮಕ್ಕಳನ್ನು ರಕ್ಷಿಸುವ ದೈವವಾಗಿದೆ. ನವಲಗುಂದದ ಯಮನೂರಪ್ಪನ ಉರುಸನ್ನು ಜನರು `ಜಡ್ಡಿನ ಜಾತ್ರೆ’ ಎಂದು ಕರೆಯುವ ವಾಡಿಕೆಯಿದೆ. ಕಾಯಿಲೆಗೆ ಬಿದ್ದ ಗಂಡನನ್ನು ಉಳಿಸಿಕೊಂಡು ಭಯ ನಿವಾರಿಸಿಕೊಳ್ಳಲು ಸವಣೂರಿನ ಬ್ರಹ್ಮಚಾರಿ ಸಂತ ಕಮಲ್ ಭಾಷಾನ ದರ್ಗಾದಲ್ಲಿ ಮಹಿಳೆಯರ ರಾಶಿಗಟ್ಟಲೆ ಹರಕೆಯ ಬಳೆಗಳಿವೆ. ದನಗಳಿಗೆ ರೋಗ ಬಂದಾಗ, ಅವು ಕಳೆದು ಹೋದಾಗ ಉಳಿಸುವ ಮತ್ತು ಹುಡುಕಿಕೊಡುವ ಕೆಲಸವನ್ನು ಬೈದೊಡ್ಡಿಯ ಹುಜೂರಸಾಬ, ಕುಸುನೂರಿನ ಗೋಕುರಸಾಬ, ಅಂಬತ್ತಿಯ ಶೇಕಮಾರ ಮುಂತಾದವರಿಗೆ ವಹಿಸಿ ಭಯಮುಕ್ತರಾಗುವುದಿದೆ. ಮೈನರೆದ ಹುಡುಗಿ ನೀರುಹಾಕಿಕೊಂಡ ಮೇಲೆ, ಮದುಮಕ್ಕಳು ಪ್ರಸ್ತಕ್ಕೆ ಮೊದಲು ‘ಓದಿಕೆ’ ಮಾಡಿಸುವುದು, ಮಕ್ಕಳಿಲ್ಲದವರು ಹರಸಿಕೊಳ್ಳುವುದು, ಸರಾಗವಾಗಿ ಹೆರಿಗೆಯಾಗಲೆಂದು ಗಬಿರ್sಣಿಯ ಕೈಗೆ ಗೋರಿ ಮೇಲಿನ ಬಟ್ಟೆತುಂಡು ಕಟ್ಟುವುದು, ಹುಟ್ಟಿದ ಕೂಸನ್ನು ಅಥವಾ ಕರುವನ್ನು ತಂದು ದರ್ಗಾಕ್ಕೆ ‘ಸಣ’ ಮಾಡಿಸುವುದು, ಫಸಲಿನ ಮೊದಲ ಕಟಾವನ್ನು ತಂದೊಪ್ಪಿಸುವುದು-ಇವೇ ಮುಂತಾದ ಫಲವಂತಿಕೆಗೆ ಸಂಬಂದಿsಸಿದ ಆಚರಣೆಗಳು ದರ್ಗಾ ಸಂಸ್ಕøತಿಯ ಭಾಗವಾಗಿ ಬೆಳೆದುಬಿಟ್ಟಿವೆ. ರಹಮತ್ ತರೀಕೆರೆಯವರು `ಕರ್ನಾಟಕದ ಸೂಫಿಗಳು’ ಕೃತಿಯಲ್ಲಿ ಇಂತಹ ದರ್ಗಾ ಮಸೂತಿಗಳ ಬಗೆಗೆ ವಿಶ್ಲೇಷಿಸಿದ್ದಾರೆ.
ಜನರು ದೆವ್ವ ಬಂದಿದೆ ಎಂದು ನಂಬುವ `ಗಾಳಿ’ ಬಿಡಿಸುವ ದರ್ಗಾಗಳಾದ ಲಕ್ಷ್ಮೇಶ್ವರದ ದೂದಪೀರಾ, ಕರೋಶಿಯ ಶಾನೂರುಬಾಬಾ, ಬಿಜಾಪುರದ ಅಬ್ದುಲ್ ರಜಾಕ್ ಖಾದ್ರಿ, ಮುರುಗಾಮಲೈನ ಅಮ್ಮಾಜಾನ್ ಬಾವಾಜಾನ್ ಹಾಗೂ ಎಳ್ಳಾರತಿಯ ಶೇಕ್ ಶಾವಲಿ ಮುಂತಾದವುಗಳನ್ನು ನೋಡಬಹುದು. ಇವೂ ಕೂಡ ದೆವ್ವವೆಂಬ ಭಯವನ್ನು ಸಮುದಾಯದ ಮನಸ್ಸಿನಿಂದ ಹೋಗಲಾಡಿಸಿ ಭಯಮುಕ್ತಗೊಳಿಸುವ ಕೆಲಸವೇ ಆಗಿದೆ. ಹೀಗೆ ಮೂಢನಂಬಿಕೆಯ ಕಾರಣಕ್ಕೋ, ಅರಿವಿನ ಕೊರತೆಯ ಕಾರಣಕ್ಕೋ, ಅಸಹಾಯಕತೆಯ ಕಾರಣಕ್ಕೋ ಜನರನ್ನು ಆವರಿಸಿರುವ ಹಲವು ಬಗೆಯ `ಭಯ’ಗಳನ್ನು ಹೋಗಲಾಡಿಸಿ `ಅಭಯೋತ್ಪಾದಕ’ ಕೇಂದ್ರಗಳಾದ ಮಸೂತಿ, ದರ್ಗಾ, ಮುಜಾವರ ಮುಂತಾದ ಸಂಗತಿಗಳನ್ನು ಭಯೋತ್ಪಾದಕ ಚಟುವಟಿಕೆಗಳ ಜತೆ ಹೆಣೆಯುವು ಎಷ್ಟು ಅಮಾನವೀಯ ಎನ್ನುವುದನ್ನು ಅರಿಯಬೇಕಿದೆ. ಜನಸಾಮಾನ್ಯರಿಗೆ ಅವರದೇ ಆದ `ಜನತೆಯ ಧರ್ಮವಿದೆ’ ಆ ಜನತೆಯ ಧರ್ಮದಲ್ಲಿ ಹಿಂದು ಮುಸ್ಲಿಂ ಜೈನ ಬೌದ್ಧ ಮತಗಳೆಲ್ಲಾ ಬೆರೆತು ಹೊಸ ಆಕಾರವನ್ನು ಪಡೆಯುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜ ಅರುಣ್… ಜನತೆಯ ಧರ್ಮವೇ ಬೇರೆ.. ಅದಕ್ಕೆ ಮುಕ್ತ ಪ್ರಜ್ಞೆ ಇದೆ… ಹೀಗಾಗಿ ದೂರದಲ್ಲಿ ನಿಂತು ಕನ್ನಡಕಗಳನ್ನು ಹಾಕಿ ನೋಡುವವರ ಗರ ಬಿಡಿಸಲಾಗದು…. ಹತ್ತಿರ ಹೋಗಿ ಸಣ ಮಾಡಿದರೆ ಸಾಕು… ಈಗಲೂ ಎಷ್ಟೋ ಮಠಗಳು ಅಂತ್ರ ತಾಯಿತ ಕಟ್ಟುತ್ತಿವೆ… ಬೂದಿ ಹಚ್ಚಿ ದೆವ್ವ ಬಿಡಿಸುತ್ತಿವೆ….

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...