Homeರಾಜಕೀಯಎನ್‍ಆರ್‍ಸಿ: ಶುರುವಾಯಿತೇ ಶಾ ಸಂಚು? ವಿದೇಶಿ ಹೆಸರಲ್ಲಿ ಸೇನಾಧಿಕಾರಿ ಬಂಧನ

ಎನ್‍ಆರ್‍ಸಿ: ಶುರುವಾಯಿತೇ ಶಾ ಸಂಚು? ವಿದೇಶಿ ಹೆಸರಲ್ಲಿ ಸೇನಾಧಿಕಾರಿ ಬಂಧನ

ಭಾರತೀಯ ಸೇನೆಯ ಲೆಫ್ಟಿನೆಂಟ್ ‘ವಿದೇಶಿ.. ಬಂಧನದಲ್ಲೀಗ ಅವರು ‘ಪರದೇಶಿ’...

- Advertisement -
- Advertisement -

ರಾಷ್ಟ್ರೀಯ ನಾಗರೀಕತ್ವ ನೋಂದಣಿ (ಎನ್‍ಆರ್‍ಸಿ) ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಬಿಜೆಪಿಯ ಮ್ರಮುಖ ಚುನಾವಣಾ ವಿಷಯವಾಗಿತ್ತು. ಈ ಹಿಂದೆಯೇ ಅಸ್ಸಾಂನಂತಹ ರಾಜ್ಯದಲ್ಲಿ ಈ ಪ್ರಯೋಗ ಆರಂಭವಾಗಿದೆ. ಇದರ ಅಡಿಯಲ್ಲಿ ಭಾರತೀಯ ಸೇನೆಯಲ್ಲಿ 30 ಬರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಲೆಫ್ಟಿನೆಂಟ್ ಒಬ್ಬರನ್ನು ವಿದೇಶಿ ಎಂದು ಗುರುತಿಸಿ ಬಂಧಿಸಲಾಗಿದೆ. ಅವರು ಮುಸ್ಲಿಂ ಎನ್ನುವುದು ಕಾಕತಾಳೀಯವಲ್ಲ…
ಎನ್‍ಆರ್‍ಸಿ ಮುಂದೆ ಸೃಷ್ಟಿಸಲಿರುವ ಅನಾಹುತಗಳಿಗೆ ಸಾಕ್ಷಿಯಾಗಿ ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಹಲವಾರು ಜನರನ್ನು ವಿದೇಶಿ ವಲಸಿಗರು ಎಂದು ಗುರುತಿಸುವ ಸಂಚು ಶುರುವಾಗಿದೆ. ಮೊನ್ನೆ ಮೇ 29ರಂದು ಅಸ್ಸಾಂ ಪೊಲೀಸರು ಮೊಹಮ್ಮದ್ ಸನಾವುಲ್ಲಾ ಎಂಬ ನಿವೃತ್ತ ಗೌರವಾನ್ವಿತ ಲೆಫ್ಟಿನೆಂಟ್‍ರನ್ನು ವಶಕ್ಕೆ ಪಡೆದಿದ್ದಾರೆ. ‘ಬೋಕೊ ಫಾರಿನರ್ಸ್ ಟ್ರಿಬ್ಯುನಲ್’ ಅವರನ್ನು ವಿದೇಶಿಯೆಂದು ಗುರುತಿಸಿದೆ.
ಇದೇನೂ ಮೊದಲಲ್ಲ. ಹಲವಾರು ನಿವೃತ್ತ ಸೇನಾಧಿಕಾರಿಗಳು ಈಗಾಗಲೇ ವಿಚಾರಣೆ ಹೆಸರಲ್ಲಿ ಕಿರುಕುಳ ಅನುಭವಿಸಿದ್ದಾರೆ. ದೇಶಕ್ಕೆ ಅವರು ನೀಡಿದ ಕೊಡುಗೆಯೂ ಈ ಭಯಾನಕ ಎನ್‍ಆರ್‍ಸಿ ಮುಂದೆ ನಗಣ್ಯ. ಹೀಗಾದರೆ ಅಲ್ಲಿನ ಜನಸಾಮಾನ್ಯರ ಪರಿಸ್ಥಿತಿಯನ್ನು ಊಹಿಸಿ.
ಈ ಸಲದ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಲವಾರು ಕಡೆ ಎನ್‍ಆರ್‍ಸಿ ವಿಷಯ ಪ್ರಸ್ತಾಪಿಸಿ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಎಲ್ಲ ಕಡೆ ಎನ್‍ಆರ್‍ಸಿ ಬಳಸಿ ನುಸುಳುಕೋರರನ್ನು ದೇಶದಿಂದ ಹೊರ ಹಾಕುತ್ತೇವೆ. ಇದರಲ್ಲಿ ಹಿಂದೂ ನಿರಾಶ್ರಿತರಿದ್ದರೆ ಅವರಿಗೆ ಇಲ್ಲಿಯ ನಾಗರಿಕತ್ವ ನೀಡುತ್ತೇವೆ. ಉಳಿದವರನ್ನು ಎತ್ತಿ ಬಿಸಾಡುತ್ತೇವೆ’ ಎಂದು ಪ್ರಚೊದನಾಜಾರ ಭಾಷಣಗಳನ್ನು ಮಾಡಿದ್ದರು. ಅವರ ಗುರಿ ಬಾಂಗ್ಲಾ ಮೂಲದ ಮುಸ್ಲಿಂರೇ ಎಂಬುದು ಸ್ಪಷ್ಟ. ಇದನ್ನು ದೇಶಾದ್ಯಂತ ವಿಸ್ರಿಸಿದರೆ ಘನಘೋರ ದೌರ್ಜನ್ಯಗಳಾಗುವುದಂತೂ ಸತ್ಯ. ಹಿಂದೊಮ್ಮೆ ಬಾಂಗ್ಲಾ ವಲಸಿಗರನ್ನು ಇದೇ ಶಾ ಕ್ರಿಮಿಕೀಟಗಳಿಗೆ ಹೋಲಿಸಿದ್ದರು. ಈ ಪುಣ್ಯಾತ್ಮನಿಗೆ ಗೃಹ ಖಾತೆ ನೀಡಿದರಂತೂ ಪರಿಸ್ಥಿತಿ ಅಧ್ವಾನವಾಗಲಿದೆ.
51 ವರ್ಷದ ಸನಾವುಲ್ಲಾ ಭಾರತೀಯ ಸೇನೆಗೆ ಸಾಮಾನ್ಯ ಸೈನಿಕನಾಗಿ ಸೇವೆಗೆ ಸೇರಿ, ಜಮ್ಮು-ಕಾಶ್ಮೀರ ಮತ್ತು ಮಣಿಪುರಗಳಲ್ಲಿ ಆಂತರಿಕ ಸಶಸ್ತ್ರ ಬಂಡಾಯಗಳ ವಿರುದ್ಧದ ಹೋರಾಟದಲ್ಲಿ ಪಾಲೊಂಡಿದ್ದಾರೆ. ಅವರ ಸೇವೆ ಮನ್ನಿಸಿ 2014ರಲ್ಲಿ ರಾಷ್ಟ್ಪತಿ ಅವರಿಗೆ ಜೂನಿಯರ್ ಕಮೀಚನ್ ಅಧಿಕಾರಿ ದರ್ಜಗೆ ಬಡ್ತಿ ನೀಡಿದ್ದಾರೆ.
ನಿವೃತ್ತಿ ನಂತರ ಅವರು ಅಸ್ಸಾಂ ಗಡಿ ಭದ್ರತಾ ಪಡೆಗೆ ಎಸ್‍ಐ ಎಂದು ನೇಮಕಗೊಂಡಿದ್ದರು. ಈಗ ಫಾರಿನರ್ಸ್ ಟ್ರಿಬ್ಯುನಲ್ (ಎಫ್‍ಟಿ) ಸೂಚನೆಯ ಮೇರೆಗೆ ಅದೇ ಪೊಲೀಸರೇ ಅವರನ್ನು ಅರೆಸ್ಟಟ ಮಾಡಿದ್ದಾರೆ. ಅವರನ್ನು ಈಗ ಗೋಲ್‍ಪಾರಾ ಡಿಟೆನ್ಸನ್ ಕೇಂದ್ರದಲ್ಲಿ ಇಡಲಾಗಿದೆ. ಸನಾವುಲ್ಲಾ ಬಂಧನದ ವಿರುದ್ಧ ಹೈಕೋರ್ಟಿಗೆ ಹೋಗಲಿರುವ ವಕೀಲ ಅಮಾನ್ ವಡುದ್ ‘ಕ್ವಿಂಟ್’ನೊಂದಿಗೆ ಮಾತನಾಡಿ, ಫಾರಿನರ್ಸ್ ಟ್ರಿಬ್ಯುನಲ್ ಸರಿಯಾದ ತನಿಖೆ ಮಾಡದೇ ಸನಾವುಲ್ಲಾ ಅವರನ್ನು ವಿದೇಶಿ ನಾಗರಿಕ ಎಂದು ಹೇಳಿರುವುದು ಅಕ್ಷಮ್ಯ, 30 ವರ್ಷ ಈ ದೇಶದ ಸೇನೆಯ ಭಾಗವಾಗಿದ್ದವರಿಗೇ ಈ ಸ್ಥಿತಿಯಾದರೆ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ್ದಾರೆ.
ಅಸ್ಸಾಂ ಗಡಿ ಭದ್ರತಾ ಪೊಲೀಸರ5ನ್ನೂ ದೂರಿರುವ ಅವರು, ವೆರಿಫಿಕೆಷನ್ ರಿಪೋರ್ಟಿನಲ್ಲಿ ಸನಾವುಲ್ಲಾ ಒಬ್ಬ ದಿನಗೂಲಿ ಕಾರ್ಮಿಕ ಎಂದು ಉಲ್ಲೇಖಿಸಿದ್ದಾರೆ ಎಂದೂ ತಿಳಿಸಿದ್ದಾರೆ. ಎಫ್‍ಟಿ ವರದಿಯಲ್ಲಿ ಸನಾವುಲ್ಲಾ ವಿದೇಶಿ ಎಂದು ನಿರ್ಧರಿಸಲು, ‘1986ರ ಮತದಾರರ ಪಟ್ಟಿಯಲ್ಲಿ 20 ವರ್ಷದವರಾಗಿದ್ದ ಅವರು ತಮ್ಮ ಹೆಸರನ್ನು ನೋಂದಾಯಿಸಿರಲಿಲ್ಲ’ ಎಂಬ ವಿಚುತ್ರ ಕಾರಣವನ್ನೂ ನೀಡಲಾಗಿದೆ. ಆದರೆ, ಮತದಾನದ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ್ದು 1989ರಲ್ಲಿ ಎಂಬ ವಾಸ್ತವವನ್ನೂ ಕಡೆಗಣಿಸಲಾಗಿದೆ.
‘ಕೋರ್ಟಿನ ಆದೇಶದ ಮೇರೆಗೆ ಸನಾವುಲ್ಲಾ ಅವರನ್ನು ನಾವು ಬಂಧಿಸಿದ್ದೇವೆ. ಎಫ್‍ಟಿ ವರದಿಯೇ ನಮಗೆ ಫೈನಲ್/ ಸನಾವುಲ್ಲಾ ಅವರು ಕೋರ್ಟಿಗೆ ಹೋಗಲು ಅವಕಾಶಗಳಿವೆ’ ಎಂದು ಅನಿನ್‍ಗಾಂವ್‍ನ ಹೆಚ್ಚುವರಿ ಎಸ್‍ಪಿ ಸಂಜೀಬ್ ಸೈಕಿಯಾ ತಿಳಿಸಿದ್ದಾರೆ.
ಕಳೆದ ವರ್ಷವೇ ಈ ಬಗ್ಗೆ ನೋಟಿಸ್ ಬಂದಾದ ಮೇಲೆ ಸನಾವುಲ್ಲಾ ವಿವಿಧ ಪೊಲೀಸ್ ಠಾಣೆಗಳಿಗೆ ತೆರಳಿ ವಿವರ ಪರಿಶೀಲಿಸಿದ್ದಾರೆ. ಆದರೆ, ಬೋಕೊ ಎಫ್‍ಟಿ ವರದಿಯಲ್ಲಿ ಆಗಿಚ್ಯಾ ಗ್ರಾಮದ ಮೊಹಮ್ಮದ್ ಸಮಸ್ಯಲ್ ಹಕ್ ಎಂಬುವರ ಹೆಸರಿದ್ದು, ಅದನ್ನೇ ತಪ್ಪಾಗಿ ನನ್ನ ಮೇಲೆ ಕೇಸಉ ಹೂಡಲು ಎಫ್‍ಟಿ ಬಳಸಿಕೊಂಡಿದ್ದಾರೆ…. 30 ವರ್ಷ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ನನಗೆ ವಿದೇಶಿ ಪಟ್ಟ ಕಟ್ಟಿ ಬಂಧನದಲ್ಲಿ ಇಡುವ ಉಡುಗೊರೆಯನ್ನು ನೀಡಲಾಗುತ್ತಿದೆ’ ಎಂದು ಸ್ವತ: ಸನಾವುಲ್ಲಾ ನ್ಯೂಸ್ 18 ಮಾಧ್ಯಮದ ಮುಂದೆ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...