Homeಅಂಕಣಗಳುಆಘಾತವಾಣಿ | `ಜೈಲೊಳಗೆ ಸ್ವೋಭುನಕ್ಕೆ ರೆಡಿ ಮಾಡಿ, ಆಮ್ಯಾಲೆ ನನ್ನ ಅರೆಸ್ಟ್ ಮಾಡ್ರುಲಾ’

ಆಘಾತವಾಣಿ | `ಜೈಲೊಳಗೆ ಸ್ವೋಭುನಕ್ಕೆ ರೆಡಿ ಮಾಡಿ, ಆಮ್ಯಾಲೆ ನನ್ನ ಅರೆಸ್ಟ್ ಮಾಡ್ರುಲಾ’

- Advertisement -
- Advertisement -
  • ಅಟ್ಯಾಕ್ ಹನ್ಮಂತ |

ನಮಸ್ಕಾರ ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ಅಟ್ಯಾಕ್ ಹನ್ಮಂತ.

ಕಣ್ಣಿಗೆ ಏನೇ ಕಂಡರೂ ಅದನ್ನು ಉದ್ಘಾಟನೆ ಮಾಡಿ ಪೋಟೋ ತಗೊಳ್ತೀನಿ ಅಂತ ಓಡೋಡಿ ಬರುವ ಮಾನ್ಯ ಪ್ರದ್ರಾನ ಮಂತ್ರಿ ‘ಪಕೋಡಪ್ಪ ಕುಂಡಾಲೇಂದ್ರ’ ಅವರು ಇತ್ತೀಚೆಗೆ ಒಂದು ವಿಶೇಷ ಉದ್ಘಾಟನೆಯಿಂದಾಗಿ ಮತ್ತೆ ಸುದ್ದಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇವರುಗಳು ಕಳೆದ ತಮ್ಮ ಅಧಿಕಾರಾವಧಿಯಲ್ಲಿ ದೆಹಲಿಗೆ ಹೊಂದಿಕೊಂಡಂತೆ ನೂರಾರು ಕಿಲೋಮೀಟರ್‍ಗಳ ಎಕ್ಸ್‍ಪ್ರೆಸ್ ಹೈವೇ ನಿರ್ಮಿಸಿದ್ದರು. ಅದನ್ನು ತಮ್ಮ ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರತಿಭೆಯ ಕೊರತೆಯಿಂದಾಗಿ ಹಾಲಿ ವಿಫಲ ರಾಜಕಾರಣಿಗಳಾಗಿದ್ದಾರೆ. ಆದರೆ ಪಕೋಡೇಂದ್ರನ ಬಹುಮುಖ ಪ್ರತಿಭೆಗೆ ಮತ್ತೊಂದು ತಾಜಾ ನಿದರ್ಶನ ಇದೀ ವರದಿಯಾಗಿದೆ.. ದೆಹಲಿಯಿಂದ ಮೀರತ್ ನಡುವೆ ಜುಜುಬಿ 9 ಕಿಲೋಮೀಟರ್ ಎಕ್ಸ್‍ಪ್ರೆಸ್ ಹೈವೇಯನ್ನು ನಿರ್ಮಿಸಿ ‘ನಾನೇ ಮಾಡಿದ್ದು, ನಾನೇ ನಾನೇ..’ ಎಂದು ಕೂಗಾಡಿ ಕಿರುಚಾಡಿ ಫೋಟೋ ತಗೆಸಿ ಪ್ರಚಾರ ಮಾಡಿ ಕೊಂಡಿದ್ದಾರೆ. ಇಂಥದೊಂದು ಚಿಲ್ಲರೆ ಸುದ್ದಿಗಾಗಿಯೇ ಕಾದು ಕುಳಿತಿದ್ದ ಮೀಡಿಯಾಗಳು ಮಂತ್ರಕ್ಕಿಂತ ಉಗುಳನ್ನೇ ಹೆಚ್ಚಾಗಿ ಖರ್ಚುಮಾಡಿ ತಮ್ಮ ಖಾಲಿತಲೆಯನ್ನು ಪ್ರದರ್ಶನಕ್ಕಿಟ್ಟಿರುವುದು ವರದಿಯಾಗಿದೆ. ಈ ಸುದ್ದಿಯಿಂದ ಉತ್ತೇಜಿತನಾದ ಜಡೇಮಾಯಸಂದ್ರದ ಹಾಸ್ಯನಟ ಗಜ್ಜೇಶ್ ಅವರು, ತಮ್ಮ ‘ಮನೆಯ ಶೌಚಾಲಯಕ್ಕೆ ಹಾಕಿಸಿರೋ ಹೊಸ ಟೈಲ್ಸ್‍ಗಳು ಮತ್ತು ತಮ್ಮೂರಿನಲ್ಲಿ ಹೊಸದಾಗಿ ಹಾಕಿರುವ ರಸ್ತೆಉಬ್ಬುಗಳನ್ನು ಉದ್ಘಾಟಿಸಲು ಕ್ಯಾಮೆರಾ ಸಮೇತ ತಾವು ಬರಲೇಬೇಕೆಂದು’ ಪ್ರದಾನಮಂತ್ರಿ ‘ಪಕೋಡೇಂದ್ರ’ ಅವರನ್ನು ಬೇಡಿಕೊಂಡಿದ್ದಾರೆಂದು ವರದಿಯಾಗಿದೆ.

* * * *

ದೇಶದ ಬ್ಯಾಂಕ್‍ಗಳಲ್ಲಿ ಬೇಕಾಬಿಟ್ಟಿ ಸಾಲ ಮಾಡಿ ದೇಶ ಬಿಟ್ಟು ಓಡಿಹೋಗಲು ಸನ್ಮಾನ್ಯ ‘ಕುಂಡಾಲೇಂದ್ರ’ ಅವರು ಶುರು ಮಾಡಿರುವ ‘ಕುಣ್ಕೊಂಡ್ ಬನ್ನಿ ದೋಚ್ಕೊಂಡ್ ಓಡಿ’ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 33 ಮಂದಿ ಕಾರ್ಪೊರೇಟ್ ಕಳ್ಳರು ತಾವು ಸಾಲ ಪಡೆದ ಬ್ಯಾಂಕುಗಳ ತಲೆಯನ್ನು ನುಣ್ಣಗೆ ಬೋಳಿಸಿ ದೇಶ ಬಿಟ್ಟು ಓಡಿ ಹೋಗಿರುವುದು ಹಳೆಯ ವಿಷಯ. ಈಗ ಈ ಯೋಜನೆಯಡಿಯಲ್ಲಿ ದೇಶಬಿಟ್ಟ ಮೊದಲಿಗರಾದ ಮಲ್ಯಪ್ಪನವರನ್ನು ಲಂಡನ್‍ನಿಂದ ವಾಪಸ್ಸು ಕಳಿಸಲು ಕುಂಡಾಲೇಂದ್ರ ಬ್ರಿಟನ್ ಸರ್ಕಾರವನ್ನು ಅಂಗಲಾಚಿ ಕೇಳಿಕೊಂಡಿದ್ದರು. ಇದಕ್ಕೆ ಮಲ್ಯಪ್ಪನವರು “ಇಂಡಿಯಾ ದೇಸುದ ಜೈಲ್‍ಗುಳಲ್ಲಿ ಸೊಳ್ಳೆಕಾಟ ಜ್ಯಾಸ್ತಿ, ನಿಂಬೆ ಶರ್ಬತ್ತಿನಷ್ಟು ಗಟ್ಟಿ ಸಾಂಬಾರ್ ಮಾಡ್ತಾರೆ, ಆಲೂಗಡ್ಡೆ ಪಲ್ಯುದ ಬದ್ಲು ಬೂಸ್ಟು ಹಿಡಿದ ಹಪ್ಪಳ ಕೊಡ್ತಾರೆ. ನಾನು ಇಂಥಾ ಇಂಡಿಯಾ ಜೈಲ್‍ಗುಳಿಗೆ ಹ್ವೋಗಲ್ಲ, ಮೊದ್ಲು ಆ ದೇಸುದ ಜೈಲುಗಳಲ್ಲಿ ಸಿಮ್ಮಿಂಗ್ ಫೂಲ್ ಕಟ್ಟುಸಿ, ತ್ರಿಬಲ್ ಬೆಡ್ರೂಂ ಜೈಲುಕ್ವಾಣೆಯೊಳಗೆ ನನ್ನ ಹೊಸ ಹೆಂಡ್ತಿ ಜ್ವತೆ ಶೋಭನ ಮಾಡ್ಕ್ಯನಕ್ಕೆ ಕುರ್ಲಾನ್ ಹಾಸಿಗೆ ವ್ಯವಸ್ಥೆ ಮಾಡಿ ಮುಗಿದ ಮ್ಯಾಲೆ ಬೇಕಾದ್ರೆ ನನ್ನುನ್ನ ಅರೆಸ್ಟು ಮಾಡಿ” ಎಂದು ಉತ್ತರಿಸಿದ್ದಾರಂತೆ. ಈ ಸಂಬಂಧ ಕುರ್ಲಾನ್ ಹಾಸಿಗೆಯ ಮೇಲೆ ಚೆಲ್ಲಲು ಮಲ್ಲಿಗೆಹೂವುಗಳ ಪೂರೈಕೆದಾರರರಿಗೆ ಕುಂಡಾಲೇಂದ್ರ ಟೆಂಡರ್ ಕರೆಯುತ್ತಾರಾ ಎಂದು ಜನರು ಕುಂಡೆ ಬಡಕೊಂಡು ನಗುತ್ತಿದ್ದಾರೆ ಎಂದು ವರದಿಯಾಗಿದೆ.

* * * *

ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಕೆಟ್ಟು ಕುಲಗೆಟ್ಟಿರುವ ಇವಿಎಂಗಳನ್ನು ಬಳಸಲಾಗಿದೆಯೆಂದು ಚುನಾವಣಾ ಅಭ್ಯರ್ಥಿಗಳು ಎಲೆಕ್ಷನ್ ಕಮಿಷನ್ನಿಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಉತ್ತರಿಸಿರುವ ಚುನಾವಣಾ ಆಯೋಗವು `ಆ ಸ್ಥಳಗಳಲ್ಲಿ ಟೆಂಪ್ರೇಚರ್ರು ಶ್ಯಾನೆ ಹೆಚ್ಚಾಗಿಹ್ವೋಗಿ ನಂ ಇವಿಎಂ ಮೆಷೀನುಗಳ ತಲೆಕೆಟ್ಟು, ಇದ್ದುಕ್ಕಿದ್ದಂತೆ ಹುಚ್ಚ್‍ನಾಯಿ ಕಚ್ಚುದಂಗೆ ಬಿಜೆಪಿಗೆ ವೋಟು ಹಾಕ್ತಾ ಕುಂತವೆ‘ ಎಂದೂ ವಿವರಣೆ ಕೊಟ್ಟಿದೆ. ವಾತಾವರಣದ ಉಷ್ಣಾಂಶ ಹೆಚ್ಚಾಗಿ ಮೊಬೈಲ್‍ಗಳು ಕೆಟ್ಟಿಲ್ಲ, ಕಂಪ್ಯೂಟರ್‍ಗಳು ಕೆಟ್ಟಿಲ್ಲ, ಟಿವಿ, ಮಿಕ್ಸಿ, ಟೇಪ್‍ರೆಕಾರ್ಡರಿನಂಥ ಎಲೆಕ್ಟ್ರಾನಿಕ್ ವಸ್ತುಗಳೂ ಕೆಟ್ಟ ಉದಾಹರಣೆಯಿಲ್ಲ. ಹೀಗಿರುವಾಗ ಇವಿಎಂಗಳು ಮಾತ್ರ ಉಷ್ಣಾಂಶಕ್ಕೆ ಹೆದರಿ ಯಾಕೆ ಉಚ್ಚೆ ಹುಯ್ದುಕೊಳ್ಳುತ್ತಿವೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಇವನ್ನು ತಯಾರಿಸಿದ್ದು ಸರ್ಕಾರದ ಎಲೆಕ್ಟ್ರಾನಿಕ್ ಎಂಜಿನಿಯರ್‍ಗಳೋ ಅಥವ ಹಳೇಸೀಸ ಖಾಲಿ ಬಾಟ್ಲು ವ್ಯಾಪಾರಿಗಳೋ ಎಂದು ಜನರು ತಲೆ ಕೆರೆದುಕೊಳ್ಳುತ್ತಿದ್ದಾರೆ.

* * * *

ರೈತರ ಸಾಲ ಮನ್ನಾ ಮಾಡದಿದ್ರೆ ನಾವು ಕರ್ನಾಟಕ ಬಂದ್ ಮಾಡ್ತೀವಿ’ ಅಂತ ತಮ್ಮದೇ ತೊಡೆಯನ್ನು ತಟ್ಟಿಕೊಂಡು ಹೇಳಿದ ಧಡಿಯೂರಪ್ಪನವರು ನಂತರ ಕೈ ಪಕ್ಷವು ಕೋರ್ಟ್‍ಗೆ ಹೋಗಿ ಕೇಸಾಕ್ತೀವಿ ಎಂದು ಹೆದರಿಸಿದ ಮೇಲೆ.. ನಾನಂಗೆ ಹೇಳೇ ಇಲ್ಲ, ಮೋಸ್ಟ್ ಲಿ ನನ್ನ ಆತ್ಮ ದೇಹದಿಂದ ಪುಸುಕ್ ಅಂತ ಹೊರಬಂದು.. ಡೈಲಾಗ್ ಹೊಡೆದು ದಬುಕ್ ಅಂತ ಒಳಕ್ಕೆ ಹೋಗಿರಬೇಕು ಎಂದು ಪ್ಲೇಟ್ ಚೇಂಜ್ ಮಾಡಿಬಿಟ್ಟಿದ್ದರು. ಈ ಅವಾಂತರಗಳನ್ನು ಕಣ್ಣಾರೆ ಕಂಡ ಕರ್ನಾಟಕದ ಜನ ಬಂದನ್ನೇ ಬಂದ್ ಮಾಡಿ ಧಡಿಯೂರಪ್ಪನಿಗೆ ಮಣ್ಣುಮುಕ್ಕಿಸಿದ್ದಾರೆ. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ವಿಶೇಷ ಚೇತನ ಮಾನಸಿಕ ಅಸ್ವಸ್ಥ ಪ್ರಪಾತ ಸಿಮ್ಮನನ್ನು ಅರೆಸ್ಟ್ ಮಾಡಿರುವ ಪೊಲೀಸರು.. ಸಿಮ್ಮನ ಎರಡೂ ಕಾಲುಗಳಿಗೆ ಹಗ್ಗ ಕಟ್ಟಿ, ಬಾಯಿಗೆ ಗೋಣಿಚೀಲ ತುರುಕಿ, ಎರಡೂ ಕಣ್ಣಿಗೆ ಪತಂಜಲಿ ಖಾರದಪುಡಿ ಎರಚಿ, ಫ್ಯಾನಿಗೆ ನೇತುಹಾಕಿ ನಾಯಿಗೆ ಹೊಡೆದಂತೆ ಇನ್ನೂ ಹೊಡೆದಿಲ್ಲವೆಂದು ವರದಿಯಾಗಿದೆ.

* * * *

ನಮ್ಮ ಪ್ರದ್ರಾನಮಂತ್ರಿ ಕುಂಡಾಲೇಂದ್ರ ವಿಶ್ವಬ್ಯಾಂಕಿನಿಂದ ನಯಾಪೈಸ ಸಾಲ ತೆಗೆದುಕೊಳ್ಳದೆ ಸರ್ಕಾರ ನಡೆಸುತ್ತಿದ್ದಾನೆಂದು ಮೋತಿಭಕ್ತರು ಊರಲ್ಲೆಲ್ಲ ಪುಂಗಿ ಊದುತ್ತಿರುವ ವರದಿಗಳು ವ್ಯಾಪಕವಾಗಿ ಕೇಳಿಬಂದಿವೆ. ಕೈಯಲ್ಲಿ ಪೊರಕೆ ಹಿಡಿದು, ಮುಖಕ್ಕೆ ಮೂರು ಇಂಚು ಮೇಕಪ್ಪು ರುಬ್ಬಿಕೊಂಡು ಟೊಯ್ಯಟೊಯ್ಯ ಎಂದು ಕಸಗುಡಿಸುವ ಡ್ರಾಮಾ ಮಾಡುತ್ತಿದ್ದ ಮೋತಿಜೀ, ಈ ಬಿಕನಾಸಿ ನಾಟಕವನ್ನು ಪತ್ರಿಕೆಗಳಲ್ಲಿ ಪ್ರಚಾರ ಮಾಡಲೂ ಸಹ ವಿಶ್ವಬ್ಯಾಂಕಿನಿಂದ ತಿರುಪೆ ಸಾಲ ತಂದಿದ್ದಾನೆಂದು ವಿಶ್ವಬ್ಯಾಂಕ್ ಮೂಲಗಳು ತಿಳಿಸಿವೆ. ಇಂಥಹ ಹಸಿಸುಳ್ಳುಗಳನ್ನೇ ಹೇಳುತ್ತ ತಿರುಗುತ್ತಿರುವ ಮೋತಿಜಿ ಮತ್ತು ಮೋತಿಭಕ್ತರನ್ನು ಜನರು ಅಟ್ಟಾಡಿಸಿಕೊಂಡು ಬಟ್ಟೆ ಹರಿದುಹೋಗುವಂತೆ ಬಡಿದು ನೆಲಕ್ಕೆ ಹಾಕಿ ತುಳಿಯಲು ಪ್ರಯತ್ನ ನಡೆಸಿರುವ ಘಟನೆ ಇನ್ನೂ ವರದಿಯಾಗಿಲ್ಲ.

* * * *

ಉತ್ತರಪ್ರದೇಶದ ಕಬ್ಬು ಬೆಳೆಯುವ ರೈತರಿಗೆ ಕೊಡಬೇಕಾದ 13 ಸಾವಿರ ಕೋಟಿ ಖರೀದಿ ಹಣವನ್ನು ಕೊಡದೆ ಮುಂಡಾ ಮೋಚಿರುವ ಜೋಗಿ ಪ್ಯಾದೇನಾತನ ಸರ್ಕಾರವು ಈ ಬಗ್ಗೆ ಪ್ರದ್ರಾನಮಂತ್ರಿಗೆ ಹಣಬಿಡುಗಡೆಗೆ ಕೇಳಿದಾಗ.. ಕುಂಡಾಲೇಂದ್ರನು..’ ಏನೂ ಹೆದರಬ್ಯಾಡ.. ಪಾಕಿಸ್ತಾನದಿಂದ ಸಕ್ಕರೆ ತರಿಸಿಕೊಂಡು ಉತ್ತರಪ್ರದೇಶದ ರೈತರ ಕಣ್ಣಿಗೆ ಮಣ್ಣುಸುಣ್ಣ ಎರಡನ್ನೂ ಮಿಕ್ಸ್ ಮಾಡಿ ಎರಚೋಣ’ಎಂದು ಭರವಸೆ ಕೊಟ್ಟಿದ್ದಾನೆ ಎಂದು ದೆಹಲಿಯಿಂದ ವರದಿ ಬಂದಿದೆ. ಅದರಂತೆ ಪಾಕಿಸ್ತಾನದಿಂದ 2 ಲಕ್ಷ ಟನ್ ಸಕ್ಕರೆ ಆಮದು ಮಾಡಿಕೊಂಡು ಉತ್ತರಪ್ರದೇಶದ ಕಬ್ಬುಬೆಳೆಗಾರರಿಗೆ ಈ ಅಲ್ಲಣ್ಣ-ಮಲ್ಲಣ್ಣ ಅಲಕ್ ಬುಲಕ್ ಜೋಡಿಯು ನಾಮ ಎಳೆದಿದೆ ಎಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ಸಿಗೋಣ. ಬೈ ಟೇಕ್ ಕೇರ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...