Homeಅಂಕಣಗಳುನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ

ನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..

ರಾಜ್ಯದ ಹೈಯರ್ ಎಜುಕೇಷನ್ ಮಿನಿಸ್ಟರ್ ‘ಜಟ್ಟಿ ದೆವ್ವೇಗೌಡ’ರ ಕಡೆಯಿಂದ ಕಾಲೇಜು ಸ್ಟೂಡೆಂಟುಗಳಿಗೆ ಬಿಸಿಬಿಸಿ ಸುದ್ದಿಯೊಂದು ಲಭ್ಯವಾಗಿದ್ದು, ಶಿಕ್ಷಣ ಮಂತ್ರಿಯ ಹೊಸ ಹೇಳಿಕೆಗೆ ಹುಡುಗ ಹುಡುಗಿಯರು ಕೆಂಡಾಮಂಡಲರಾಗಿದ್ದಾರೆ. ಆದರೆ ಈ ಮಂತ್ರಿಯ ಹೇಳಿಕೆ ಬ್ಲೂಜೆಪಿ ವಯೋವೃದ್ಧರಿಗೆ ರೋಮಾಂಚನ ಉಂಟುಮಾಡಿದೆ. ‘ಕಾಲೇಜಲ್ಲಿ ಓದೋ ಹುಡುಗ ಹುಡುಗೀರು ಲವ್ವುಗಿವ್ವು ಮಾಡ್ಬೇಡಿ, ಪಾರ್ಕು ಥೇಟ್ರು ಸುತ್ತಬೇಡಿ, ನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ’ ಅಂತ ಜಟ್ಟಿ ದೆವ್ವೇಗೌಡರು ಫತ್ವಾ ಹೊರಡಿಸಿದ್ದಾರೆ. ಇದರಿಂದ ಕನಲಿ ಕೆಂಡವಾಗಿರೋ ಕಾಲೇಜು ಯುವಕ ಯುವತಿಯರು “ನಾವು ಲವ್ವಾದ್ರೂ ಮಾಡ್ಕೋತೀವಿ, ಡವ್ವಾದ್ರು ಮಾಡ್ಕೋತೀವಿ, ಮೊದಲು ತಾವು ವಯಸ್ಕರ ಶಿಕ್ಷಣ ಶಾಲೆಗೆ ಸೇರ್ಕೊಂಡು ಹೈಸ್ಕೂಲ್ ಪಾಸಾಗೋದು ನೋಡಿ, ಎಸೆಸೆಲ್ಸಿಯೂ ಪಾಸಾಗದ ಟಪಾಸ್ ಗಿರಾಕಿಗಳು ನಮಗೆ ಬುದ್ದಿವಾದ ಹೇಳೋ ಅವಶ್ಯಕತೆ ಇಲ್ಲ, ಇನ್ನೊಂದ್ಸಲ ಅದು ಮಾಡ್ಬೇಡಿ, ಇದು ಮಾಡ್ಬೇಡಿ ಅಂತ ನಮಗೆ ರೂಲ್ಸ್ ಮಾಡೋಕೆ ಬಂದ್ರೆ ಭಾಷಣ ಮಾಡ್ತಿರೋ ಸ್ಟೇಜಲ್ಲೇ ನಿಮ್ಮ ಪೈಜಾಮ ಎಳೆದು ಅರೆಬೆತ್ತಲೆ ನಿಲ್ಲಿಸ್ತೀವಿ“ ಎಂದು ಇನ್ನೂ ಹೇಳಿಲ್ಲವೆಂದು ವರದಿಯಾಗಿದೆ.

******

ABP ನ್ಯೂಸ್ ಚಾನೆಲ್ ಇತ್ತೀಚೆಗೊಂದು ಕುಟುಕು ಕಾರ್ಯಾಚರಣೆ ನಡೆಸಿ ಗೋರಕ್ಷಕರ ಹೆಸರಿನಲ್ಲಿ ಕೊಲೆ ದರೋಡೆ ಮಾಡುತ್ತ ಹಫ್ತಾ ವಸೂಲಿ ದಂಧೆ ನಡೆಸುತ್ತಿದ್ದ ಹೋಪ್ಲೆಸ್ ಹೇತ್ಲಾಂಡಿಗಳನ್ನು ಜನರ ಮುಂದೆ ಬೆತ್ತಲು ಮಾಡಿದೆ. ಮನೆಯಲ್ಲಿ ಹೆಂಡ್ತಿಮಕ್ಕಳಿಗೆ ಎರಡೊತ್ತಿನ ಅನ್ನ ಹಾಕಲು ಯೋಗ್ಯತೆಯಿಲ್ಲದ ಚಿಳ್ಳೆಪಿಳ್ಳೆಗಳೆಲ್ಲ ಗಂಟಲಿಗೊಂದು ಬಾವುಟ ಹೆಟ್ಟಿಕೊಂಡು “ಜೈ ಶ್ರೀ ಮಾಮ್” ಎನ್ನುತ್ತ ಹಸು ದನ ಸಾಕಿದವರ ಮೇಲೆ ಬಿದ್ದು ಸಾಯ ಹೊಡೆದು ಕೊಂದು ಜೈಲು ಸೇರುತ್ತಿವೆ. ಇಂಥದ್ದೇ ಹೀನಾಯ ಸಾಹಸದಲ್ಲಿ ಇಬ್ಬರನ್ನು ಕೊಂದು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದ ಎರಡು ಹೇತ್ಲಾಂಡಿ ವೀರರನ್ನು ಓಆಖಿಗಿ ರಹಸ್ಯ ಕ್ಯಾಮೆರಾದೆದುರು ಬಾಯಿ ಬಿಡಿಸಿದೆ. ಇವರು ಕೋರ್ಟಿನಲ್ಲಿ ‘ನಮಗೇನೂ ಗೊತ್ತಿಲ್ಲ, ಆ ಕೊಲೆಗಳು ನಡೆದ ದಿನ ನಾವು “ಅಂತರರಾಷ್ಟ್ರೀಯ ಗೋಮೂತ್ರ ಸೇವಕರ ದಿನಾಚರಣೆ”ಯಲ್ಲಿ ಭಾಗವಹಿಸಿ ಬಕೇಟಿನಲ್ಲಿ ಗೋಮೂತ್ರ ಕುಡಿಯುತ್ತಿದ್ದೆವು, ಈ ಕೊಲೆಗೂ ನಮಗೂ ಸಂಬಂಧವಿಲ್ಲ’ ಎಂದಿದ್ದರು. ಜಾಮೀನು ಪಡೆದು ಹೊರಬಂದ ಕೂಡಲೆ ಇದ್ದಕ್ಕಿದ್ದಂತೆ ಗಂಡಸರಾದ ಈ ಕೊಲೆಗಡುಕರು ಓಆಖಿಗಿ ರಹಸ್ಯ ಕ್ಯಾಮೆರಾದೆದುರು ಆ ಕೊಲೆಗಳನ್ನು ಮಾಡಿದ್ದು ನಾವೇ, ನಮ್ ಸಪೋರ್ಟಿಗೆ ಪಿಳ್ಳಜುಟ್ಟು ಪಾರ್ಟಿಯವ್ರು ಇದ್ದಾರೆ, ಇನ್ನೊಂದೆರಡು ಕೊಲೆ ಮಾಡಿ ನೀವು ಸಾಯೋಮಟ ಜೈಲಿಗೆ ಹೋಗಿ, ನಿಮ್ಮ ಮನೆಮಂದಿ ಬಾಯಿಗೆ ಮಣ್ಣು ಹಾಕೋ ಜವಾಬ್ದಾರಿ ನಮ್ದು ಅಂತ ಪಿಳ್ಳಜುಟ್ಟು ಪಾರ್ಟಿಯ ಪುಟಗೋಸಿಗಳು ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ. ತಮ್ಮ ಮನೆಮಕ್ಕಳನ್ನು ಹೈಯರ್ ಎಜುಕೇಷನ್ನಿಗೆ ಹೊರದೇಶಕ್ಕೆ ಕಳಿಸಿ ಅವರ ಬಾಳು ಬಂಗಾರ ಮಾಡುವ ಈ ಪಿಳ್ಳಜುಟ್ಟು ಪುಟಗೋಸಿಗಳು, ತಳ ಸಮುದಾಯದ ಜನರ ಬದುಕಿನ ಮೇಲೆ ಚಪ್ಪಡಿಕಲ್ಲು ಎಳೆದು ಅದರ ಮೇಲೆ ಬಾಳೆಎಲೆ ಹಾಸಿಕೊಂಡು ಪಾಯಸ ನೆಕ್ಕಿಕೊಂಡು ಕುಳಿತುಬಿಡುತ್ತಾರೆಂಬುದು ಬಡ ಸಮುದಾಯಗಳಿಗೆ ಇನ್ನೂ ಅರಿವಾಗಿಲ್ಲವೆಂಬ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ‘ಗ್ಯಾಂಗ್ಸ್ ಆಫ್ ವಾಸ್ಸೆಪುರ್’ ಎಂಬ ಚಿತ್ರ ತೆಗೆದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಈ ಭಡವ ರಾಸ್ಕಲ್‍ಗಳ ಬಗ್ಗೆ “ ಗ್ಯಾಂಗ್ಸ್ ಆಫ್ ಗಂಜಳಾಪುರ್” ಎಂಬ ಚಿತ್ರ ತೆಗೆಯಲಿದ್ದಾರೆಂದು ನಂಬಲನರ್ಹ ಮೂಲಗಳು ತಿಳಿಸಿವೆ.

******

‘ಹಾಳೂರಿಗೆ ಉಳಿದೋನೆ ಐಲುಗಿರಾಕಿ’ ಎನ್ನೋ ಗಾದೆಗೆ ಕರೆಕ್ಟಾಗಿ ಫಿಟ್ ಆಗುವ ‘ಅನಂತ್ ಗಮಾಡ್ ಹೆಗಡೆ’ ಹೋದಲ್ಲಿ ಬಂದಲ್ಲೆಲ್ಲ ಕಯ್ಯಯ್ಯೋ ಕಯ್ಯಯ್ಯೋ ಅನ್ನುತ್ತ ಅತ್ತ ಪಕ್ಷದಿಂದಲೂ, ಇತ್ತ ಜನರಿಂದಲೂ ಸಮಪ್ರಮಾಣದಲ್ಲಿ ಉಗಿಸಿಕೊಂಡು ತಿರುಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿದೆ. ಹೊಸಾ ವಿಷ್ಯ ಏನಪ್ಪ ಅಂತಂದ್ರೆ.. “ ಬ್ಲೂಜೆಪಿ”ಯವ್ರು ಹುಲಿ ಇದ್ದಂಗೆ ಮಿಕ್ಕಿದೋರೆಲ್ಲ ಜಿಂಕೆ ಪಂಕೆ ಇದ್ದಂಗೆ, ನಮ್ದು ಹಂಗೈತೆ-ಹಿಂಗೈತೆ, ಲೊಟ್ಟೆ-ಲೊಸಕು, ಮಣ್ಣು ಮಸಕು ಅಂತೆಲ್ಲ ಕಯ್ಯಯ್ಯೋ ಅಂದಿದೆ. ಇವೆಲ್ಲವನ್ನು ‘ಅನಿಮಲ್ ಪ್ಲಾನೆಟ್’ ಚಾನೆಲ್‍ನ ನೇರಪ್ರಸಾರದಲ್ಲಿ ನೋಡಿದದವರು ಈ ಟೈಗರ್ ಸ್ಟೋರಿಗೆ ಥರಾವರಿ ಟ್ವಿಸ್ಟುಗಳನ್ನು ಕೊಡುತ್ತಿದ್ದಾರೆ. ಬ್ಲೂಜೆಪಿಯವರು ಟೈಗರ್‍ಗಳಾದರೆ ಮೊದಲು ಬಟ್ಟೆ ಬಿಚ್ಚಿ ಬರೇಬೆತ್ತಲೆ ಓಡಾಡಬೇಕು, ಯಾಕಂದ್ರೆ ಟೈಗರ್‍ಗಳು ಬಟ್ಟೆ ಹಾಕ್ಕಳಲ್ಲ ಅಂತ ಒಬ್ರು ಅಂದಿದ್ದಾರೆ. ತೊಡೆ ಸಂದಿಯಿಂದ ಮೂರಡಿ ಬಾಲ ನೇತಾಡ್ತಿದ್ರೆ ಮಾತ್ರ ಅದು ಟೈಗರ್ ಅನಿಸಿಕೊಳ್ತದೆ, ಆದ್ರಿಂದ ಗಮಾಡ್ ಹೆಗಡೆಗೂ ಒಂದು ಬಾಲ ಸಿಗಿಸಿ ಅದನ್ನವನು ಲಳ ಲಳ ಅಲ್ಲಾಡಿಸಿಕೊಂಡು ಓಡಾಡಬೇಕು, ಅವಾಗಷ್ಟೇ ಟೈಗರ್ ಅಂತ ಕನ್ಸಿಡರ್ ಮಾಡಬಹುದೆಂದು ಮತ್ತೊಬ್ಬರು ಅಂದಿದ್ದಾರೆ. ಇಲ್ಲ, ಇಲ್ಲ, ಟೈಗರ್‍ಗಳು ಹಸಿವಾದರೆ ಪುದೀನ ಕೊತ್ತಂಬರಿ ಸೊಪ್ಪು ತಿನ್ನೋದಿಲ್ಲ, ಅವಕ್ಕೆ ಹಸೀಮಾಂಸವೇ ಆಗಬೇಕು, ಆದ್ದರಿಂದ ಅನಂತ್ ಗಮಾಡ್ ಹೆಗಡೆ ಪಕ್ಷದೋರು ಊರಲ್ಲಿರೋ ಕೋಳಿ ಅಂಗಡಿ, ಮಟನ್ ಅಂಗಡಿಗಳಿಗೆ ಹುಲಿಗಳಂತೆ ಮಂಡಿ ಕೈಗಳನ್ನು ನೆಲಕ್ಕೂರಿ ನಾಲಿಗೆ ಹೊರಚಾಚಿ ನಡೆದುಕೊಂಡು ಹೋಗಿ ಅಲ್ಲಿ ವೇಸ್ಟ್ ಎಂದು ಎಸೆಯುವ ತ್ಯಾಜ್ಯಮಾಂಸವನ್ನು ಕಸದಡಬ್ಬಿಗೆ ಬಾಯಿ ಹಾಕಿ ಕಚಪಚನೆ ತಿನ್ನಬೇಕು, ಆಗಷ್ಟೇ ಇವರೆಲ್ಲ ಹುಲಿಗಳಾಗಲು ಸಾಧ್ಯ ಎಂದು ಜನರು ತರಾವರಿ ಐಡಿಯಾಗಳನ್ನು ಅನಂತ್ ಗಮಾಡ್ ಹೆಗಡೆಗೆ ಕೊಡುತ್ತಿದ್ದಾರೆ. ಅಗಣಿ ಹಾಕೋಕೆ ಹೋಗಿ ಇನ್ನೇನೋ ಸಿಗಿಸಿಕೊಂಡಂತಾಯ್ತಲ್ಲ ಎಂದು ಗಾಬರಿಯಾಗಿರೋ ಗಮಾರ್ ಹೆಗಡೆ ತನ್ನ ರಷ್ಯನ್ ಹೇರ್ ಸ್ಟೈಲ್ ತಲೆಗೂದಲಿಗೆ ಕೇಸರಿ ಕಲರ್ ಹೊಡೆಸಿಕೊಳ್ಳಲು ಕಟಿಂಗ್ ಶಾಪ್‍ಗೆ ಹೋದವರು ಇನ್ನೂ ಮನೆಗೆ ವಾಪಸಾಗಿಲ್ಲ ಎಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...