Homeಅಂಕಣಗಳುಹೊಸ ಮೌಲ್ಯಕ್ಕಾಗಿ ಯುವಕರು ಹೊಸ ಪಕ್ಷ ಕಟ್ಟುವಂತಾಗಬೇಕು

ಹೊಸ ಮೌಲ್ಯಕ್ಕಾಗಿ ಯುವಕರು ಹೊಸ ಪಕ್ಷ ಕಟ್ಟುವಂತಾಗಬೇಕು

- Advertisement -
- Advertisement -

ಕವಿಯತ್ರಿ ಸರೋಜಿನಿ ನಾಯ್ಡು ಅವರು ಗಾಂಧೀಜಿಯನ್ನು ಪ್ರಥಮ ಬಾರಿಗೆ 1915ರಲ್ಲಿ ಇಂಗ್ಲೆಂಡಿನಲ್ಲಿ ಭೇಟಿಮಾಡುತ್ತಾರೆ. ಆಗ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಇಂಗ್ಲೆಂಡಿಗೆ ಕಾರ್ಯನಿಮಿತ್ತ ಬಂದಿರುತ್ತಾರೆ. ಗಾಂಧೀಜಿ ಕಂಬಳಿ ಮೇಲೆ ನೆಲದಲ್ಲಿ ಕೂತು ಕಡಲೆಕಾಯಿ ಬೀಜ, ಬಿಸ್ಕತ್, ಕಿವಿಚಿದ ಟಮೋಟಗೆ ಬೆರೆಸಿದ ಆಲೀವ್ ಆಯಿಲ್ ಸೇವಿಸುತ್ತಿದ್ದರು. ಇದನ್ನು ನೋಡಿದ ಸರೋಜಿನಿ ನಾಯ್ಡು ಗಾಂಧೀಜಿಯವರ ಕುರಿತು ‘ನೀವು ನನಗೆ ದಕ್ಷಿಣ ಆಫ್ರಿಕಾದ ಭಾರತೀಯರ ಪರವಾಗಿ ಹೋರಾಡುವ ಧೀರರಾಗಿ ಕಾಣುತ್ತಿಲ್ಲ. ನೀವು ಒಂದು ಮಿಕ್ಕಿಮೌಸ್‍ನಂತೆ ಕಾಣುತ್ತಿದ್ದೀರಿ’ ಎಂದರು. ‘ನೀವು ಸರೋಜಿನಿ ಅಲ್ಲವೇ? ಇನ್ನು ಯಾರಿಗೆ ಇಷ್ಟು ಧಿಮಾಕು, ಧೈರ್ಯ ಇದ್ದೀತು?’ ಎಂದರು ಗಾಂಧೀಜಿ ಆ ತುಂಟ ಮಾತು ಆಕೆಯ ಮನ ತುಂಬಿತು. ಅಂದು ಗಾಂಧೀಜಿಯ ಅನುಯಾಯಿಯಾದ ಸರೋಜಿನಿದೇವಿ ಮುಂದೆ 33 ವರ್ಷಗಳ ಕಾಲ ಗಾಂಧೀಜಿಯ ನಿಕಟವರ್ತಿಯಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಬಾರಿ ಸೆರೆಮನೆವಾಸ ಅನುಭವಿಸಿದರು. ಬ್ರಿಟಿಷರೊಡನೆ ರಾಯಭಾರ ಕೆಲಸಕೂಡ ಮಾಡಿದರು.
ಗಾಂಧೀಜಿ ಅವರ ರಾಷ್ಟ್ರಭಕ್ತಿ ಎಂಥದ್ದು? ಅವರು ಹೀಗೆ ಬರೆಯುತ್ತಾರೆ. ‘ನನ್ನ ರಾಷ್ಟ್ರ ಭಕ್ತಿ ಉದಾರ ಚರಿತವಾದುದು. ನಾನು ವಸುಧೈವ ಕುಟುಂಬಕಂ ಎಂಬ ವಿಚಾರದಲ್ಲಿ ಶ್ರದ್ಧೆಯುಳ್ಳವನು. ನಾನು ಬದುಕಿರುವುದು ಭಾರತದ ಸ್ವಾತಂತ್ರ್ಯಕ್ಕಾಗಿ. ನಾನು ಸಾಯುವುದೂ ಆ ಗುರಿ ಸಾಧನೆಯಲ್ಲಿಯೇ.’
‘ನಾನು ಹಿಂದು, ಆದರೆ ನನ್ನ ನಿಲುವು ‘ಸರ್ವಧರ್ಮ ಸಮನ್ವಯ’, ಎಲ್ಲ ಧರ್ಮಗಳನ್ನು ಸಮಾನ ದೃಷ್ಟಿಯಿಂದ ಕಾಣುತ್ತೇನೆ. ನನ್ನ ಕನಸಿನ ಭಾರತದಲ್ಲಿ ನಾನಾ ಧರ್ಮದವರು ಸಂಪೂರ್ಣ ಸ್ನೇಹದಿಂದ ಕೂಡಿಕೊಂಡು ಬದುಕುತ್ತಾರೆ.’
‘ಸ್ವರಾಜ್ಯವೆಂದರೆ ಹಿಂದು ರಾಷ್ಟ್ರವಲ್ಲ. ನನ್ನ ಶಕ್ತಿಯನ್ನೆಲ್ಲ ಬಳಸಿ ಈ ಸಂಕುಚಿತ ರಾಷ್ಟ್ರ ಪರಿಕಲ್ಪನೆಯ ವಿರುದ್ಧವಾಗಿ ಹೋರಾಡುತ್ತೇನೆ. ಅಧಿಕಾರದ ಅಮಲಿನಲ್ಲಿ ಅಲ್ಪಸಂಖ್ಯಾತರನ್ನು ತುಳಿದು ಹಾಕಿ ಅಂಥಾ ರಾಷ್ಟ್ರ ಸ್ಥಾಪಿಸುವುದಾದರೆ ಅದು ಹಿಂದೂ ಧರ್ಮಕ್ಕೇ ದ್ರೋಹ ಬಗೆದಂತೆ. ಅದು ಹಾನಿಕಾರಕವೂ ಹೌದು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆಗ ಹಿಂದು ದೇವಾಲಯಗಳಿಗೆ ಹರಿಜನರು ಬರುವಂತಿರಲಿಲ್ಲ. ಬಂದರೆ ಅವರನ್ನು ಸನಾತನಿಗಳು ಬರ್ಬರವಾಗಿ ನಡೆಸಿಕೊಳ್ಳುತ್ತಿದ್ದರು. ‘ಭಾರತೀಯರು ತಮ್ಮ ಇಂಥಾ ವರ್ತನೆಗಾಗಿ ಪಶ್ಚಾತಾಪ ಪಡಬೇಕು’ ಎಂದರು ಗಾಂಧೀಜಿ. ಹರಿಜನರಿಗೆ ದೇವಾಲಯಕ್ಕೆ ಪ್ರವೇಶದ ಹಕ್ಕನ್ನು ನೀಡಬೇಕೆಂದು ಹಿಂದುಗಳಲ್ಲಿ ವಿನಂತಿಸಿಕೊಂಡರು. ಸನಾತನಿಗಳು ಗಾಂಧಿಯವರ ನಿಲುವನ್ನು ಅಲ್ಲಗಳೆದರು. ಆಗ ಗಾಂಧೀಜಿ ಹಿಂದುಗಳು ಹರಿಜನರಿಗೆ ದೇವಾಲಯಗಳಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕೆಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹಳ್ಳಿಹಳ್ಳಿಗೂ ಗಾಂಧೀಜಿಯ ಉಪವಾಸದ ಸುದ್ದಿ ಕಾಳ್ಗಿಚ್ಚಿನಂತೆ ಮುಟ್ಟಿತು. ಗಾಂಧೀಜಿ ಉಪವಾಸ 21 ದಿನ ನಡೆಯಿತು. ಉಪವಾಸ ಮುಕ್ತಾಯಕ್ಕೆ ಮೊದಲೇ ಅನೇಕ ಕಡೆ ಹರಿಜನರ ದೇವಾಲಯ ಪ್ರವೇಶಕ್ಕೆ ಜನರು ಅವಕಾಶ ಮಾಡಿಕೊಟ್ಟರು.
ಭಾರತದ ರಾಜಕೀಯವನ್ನು ‘ನಾವು’ ಯುವಕರು ಆಮೂಲಾಗ್ರವಾಗಿ ಬದಲಾಯಿಸಬೇಕು. ರಾಜಕೀಯದಿಂದ ಜಾತಿ, ಧರ್ಮಗಳನ್ನು ದೂರ ಇಡಲು ಹೋರಾಟ ಮಾಡಬೇಕು. ಈ ಬದಲಾವಣೆ ಆಗುವುದೆಂದು ನಿರೀಕ್ಷಣೆ ಮಾಡುತ್ತಾ ಕಾದು ಕೂರುವುದು ಮೂರ್ಖತನ; ಅಥವಾ ಇನ್ಯಾರೋ ನಮ್ಮ ಪರವಾಗಿ ರಾಜಕೀಯದಲ್ಲಿ ಬದಲಾವಣೆ ತರುವುದೆಂದು ಕನಸು ಕಾಣುತ್ತಾ ಕೂಡುವುದೂ ಸರಿಯಲ್ಲ. ಯುವಕರು ತಾವೇ ಬದಲಾವಣೆಯ ವಾಹಕರು ಎಂದು ಘೋಷಣೆ ಮಾಡಬೇಕು.
ದೆಹಲಿಯಲ್ಲಿ ಆಮ್‍ಆದ್ಮಿಪಕ್ಷ ಒಮ್ಮೆಯಲ್ಲ ಎರಡು ಸಾರಿ ಚುನಾವಣೆ ಎದುರಿಸಿ ಸರ್ಕಾರ ರಚಿಸಿದೆ. ಸ್ವಲ್ಪವೇ ಹಣ ಖರ್ಚುಮಾಡಿ ಈ ಚುನಾವಣೆಗಳಲ್ಲಿ ಪಕ್ಷ ಜಯಗಳಿಸಿದೆ. ಹಾಗೆ ಗೆಲ್ಲಿಸಬಹುದು ಎಂಬುದನ್ನು ನಮಗೆ ತೋರಿಸಿಕೊಟ್ಟಿದೆ. ಜನರಿಗೆ ಈಗಿನ ರಾಜಕೀಯ ಪಕ್ಷಗಳ ವೈಫಲ್ಯಗಳನ್ನು ನೋಡಿ ಬೇಸರವಾಗಿದೆ. ಜನರಿಗೆ ಬದಲಾವಣೆ ಬೇಕಾಗಿದೆ. ಅವರ ಆಸೆಯನ್ನು ಪೂರೈಸುವ ಕೆಲಸವನ್ನು ಯುವಕರು ಮಾಡಬೇಕಾಗಿದೆ.
ಇಂದಿನ ರಾಜಕೀಯ ಹೀಗಿದೆ:- ಅಧಿಕಾರಬೇಕೆನ್ನುವವರು ಯಾವುದೋ ಒಂದು ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಸೋತರೆ ಮತ್ತೊಂದು ಪಕ್ಷಕ್ಕೆ ಹಾರುತ್ತಾರೆ. ಸೀಟು ಸಿಗದಿದ್ದರೆ ಬೇರೆ ಪಕ್ಷಕ್ಕೆ ಜಿಗಿಯುತ್ತಾರೆ. ಆ ಪಕ್ಷಗಳು ಇಂತಹವರ ಬರುವಿಕೆಗಾಗಿ ಕಾಯುತ್ತಿರುತ್ತವೆ. ಬಂದೊಡನೆ ಸೇರಿಸಿಕೊಳ್ಳುತ್ತವೆ. ನಾಯಿ ಹಸಿದಿತ್ತು ಹಿಟ್ಟು ಹಳಸಿತ್ತು ಎಂಬಂತಾಗಿದೆ ನಮ್ಮ ಇಂದಿನ ರಾಜಕೀಯ. ಈ ಪದ್ಧತಿ ಬದಲಾಗಬೇಕಲ್ಲವೇ? ಈ ವ್ಯವಸ್ಥೆಗೆ ಬೇಸತ್ತು ಜನ ಯಾವ ಒಂದು ಪಕ್ಷಕ್ಕೂ ಬಹುಮತ ನೀಡದೆ ಒಂದು ಅಭದ್ರ ಸ್ಥಿತಿಯನ್ನು ಸೃಷ್ಟಿಸುತ್ತಾರೆ. ಆಗ ರಾಜಕೀಯ ಪಕ್ಷಗಳು ಇತರ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಳ್ಳತೊಡಗುತ್ತವೆ. ಆಗ ಎತ್ತು ಏರಿಗೆ ಎಮ್ಮೆ ನೀರಿಗೆ ಎಂಬ ಅನುಭವ ಆ ಪಕ್ಷಗಳದಾಗುತ್ತದೆ.
ಇಂದಿನ ಪರಿಸ್ಥಿತಿಯಲ್ಲಿ ಕಪ್ಪು ಹಣ ಇಲ್ಲದೆ ಚುನಾವಣೆ ಎದುರಿಸುವುದು ಕಷ್ಟವಾಗಿದೆ. ಅಷ್ಟೇ ಅಲ್ಲ, ಚುನಾವಣೆಗೆ ಭಾರೀ ಹಣ ಚೆಲ್ಲಲು ತಯಾರಾಗಬೇಕು. ಈ ಹಣ ರಾಜಕೀಯ ಪಕ್ಷಗಳಿಗೆ ಯಾರು ಯಾರು ಕೊಡುತ್ತಾರೆ? ರಾಜಕೀಯ ಪಕ್ಷಗಳು ಆಯ್ದ ಉದ್ಯಮಿಗಳಿಗೆ ಕೋಟಿ ಕೋಟಿರೂಗಳನ್ನು ದೋಚಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತವೆ. ಈ ಉದ್ಯಮಿಗಳು ಗಳಿಸಿದ ಪಾಪದ ಹಣದಲ್ಲಿ ಒಂದಿಷ್ಟು ನರಿಪಾಲನ್ನು ರಾಜಕೀಯ ಪಕ್ಷಗಳಿಗೆ ಎಸೆಯುತ್ತವೆ. ಹೀಗೆ ಕೊಡಲಾದ ಹಣ ಕೋಟ್ಯಾಂತರ ರೂಪಾಯಿಗಳು.
ಪಕ್ಷ ಕಟ್ಟಲು ಹತ್ತಾರು ವರ್ಷ ಬೇಕು, ಪಕ್ಷ ಬೆಳೆಸಲು ಕೋಟ್ಯಾಂತರ ರೂಗಳು ಬೇಕು ಎನ್ನುವುದು ಈಗ ಸುಳ್ಳಾಗಿದೆ. ಇಷ್ಟು ಬಲವಾಗಿ ಬೇರೂರಿರುವ ಪಕ್ಷಗಳನ್ನು ಮೂಲೋಚ್ಚಾಟನೆ ಮಾಡಲಾಗದು ಎನ್ನುವುದೂ ಒಂದು ಮಿಥ್ಯೆಯಾಗಿದೆ. ಜನ ಈಗಿರುವ ರಾಜಕೀಯ ಪಕ್ಷಗಳಿಂದ, ರಾಜಕಾರಣಿಗಳಿಂದ ಬೇಸತ್ತು ಹೋಗಿದ್ದಾರೆ. ಅವರಿಗೆ ಬದಲಾವಣೆ ಬೇಕಾಗಿದೆ.
ಇದಕ್ಕೆ ಪರ್ಯಾಯವಾಗಿ ಆದರ್ಶಗಳಿಂದ ಕೂಡಿದ ಒಂದು ಪಕ್ಷದ ಅಗತ್ಯತೆ ಇದೆ. ಈಗಿರುವ ರಾಜಕೀಯ ಪಕ್ಷಗಳಿಗೆ ಪ್ರತಿ ಸ್ಪರ್ಧಿಯಾಗಿ ನಿಲ್ಲುವುದಷ್ಟೇ ನಮ್ಮ ಆಶಯವಾಗಬಾರದು. ಒಂದು ಹೊಸ ಮೌಲ್ಯ ಸ್ಥಾಪನೆಗಾಗಿ ನಮ್ಮ ಹೋರಾಟ ಎಂಬ ಧ್ಯೇಯವಾಕ್ಯ ಇಟ್ಟುಕೊಂಡು ನಾವು ಹೊಸ ಪಕ್ಷ ಕಟ್ಟಬೇಕು.

-ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...