Homeಅಂಕಣಗಳುನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ

ನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..

ರಾಜ್ಯದ ಹೈಯರ್ ಎಜುಕೇಷನ್ ಮಿನಿಸ್ಟರ್ ‘ಜಟ್ಟಿ ದೆವ್ವೇಗೌಡ’ರ ಕಡೆಯಿಂದ ಕಾಲೇಜು ಸ್ಟೂಡೆಂಟುಗಳಿಗೆ ಬಿಸಿಬಿಸಿ ಸುದ್ದಿಯೊಂದು ಲಭ್ಯವಾಗಿದ್ದು, ಶಿಕ್ಷಣ ಮಂತ್ರಿಯ ಹೊಸ ಹೇಳಿಕೆಗೆ ಹುಡುಗ ಹುಡುಗಿಯರು ಕೆಂಡಾಮಂಡಲರಾಗಿದ್ದಾರೆ. ಆದರೆ ಈ ಮಂತ್ರಿಯ ಹೇಳಿಕೆ ಬ್ಲೂಜೆಪಿ ವಯೋವೃದ್ಧರಿಗೆ ರೋಮಾಂಚನ ಉಂಟುಮಾಡಿದೆ. ‘ಕಾಲೇಜಲ್ಲಿ ಓದೋ ಹುಡುಗ ಹುಡುಗೀರು ಲವ್ವುಗಿವ್ವು ಮಾಡ್ಬೇಡಿ, ಪಾರ್ಕು ಥೇಟ್ರು ಸುತ್ತಬೇಡಿ, ನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ’ ಅಂತ ಜಟ್ಟಿ ದೆವ್ವೇಗೌಡರು ಫತ್ವಾ ಹೊರಡಿಸಿದ್ದಾರೆ. ಇದರಿಂದ ಕನಲಿ ಕೆಂಡವಾಗಿರೋ ಕಾಲೇಜು ಯುವಕ ಯುವತಿಯರು “ನಾವು ಲವ್ವಾದ್ರೂ ಮಾಡ್ಕೋತೀವಿ, ಡವ್ವಾದ್ರು ಮಾಡ್ಕೋತೀವಿ, ಮೊದಲು ತಾವು ವಯಸ್ಕರ ಶಿಕ್ಷಣ ಶಾಲೆಗೆ ಸೇರ್ಕೊಂಡು ಹೈಸ್ಕೂಲ್ ಪಾಸಾಗೋದು ನೋಡಿ, ಎಸೆಸೆಲ್ಸಿಯೂ ಪಾಸಾಗದ ಟಪಾಸ್ ಗಿರಾಕಿಗಳು ನಮಗೆ ಬುದ್ದಿವಾದ ಹೇಳೋ ಅವಶ್ಯಕತೆ ಇಲ್ಲ, ಇನ್ನೊಂದ್ಸಲ ಅದು ಮಾಡ್ಬೇಡಿ, ಇದು ಮಾಡ್ಬೇಡಿ ಅಂತ ನಮಗೆ ರೂಲ್ಸ್ ಮಾಡೋಕೆ ಬಂದ್ರೆ ಭಾಷಣ ಮಾಡ್ತಿರೋ ಸ್ಟೇಜಲ್ಲೇ ನಿಮ್ಮ ಪೈಜಾಮ ಎಳೆದು ಅರೆಬೆತ್ತಲೆ ನಿಲ್ಲಿಸ್ತೀವಿ“ ಎಂದು ಇನ್ನೂ ಹೇಳಿಲ್ಲವೆಂದು ವರದಿಯಾಗಿದೆ.

******

ABP ನ್ಯೂಸ್ ಚಾನೆಲ್ ಇತ್ತೀಚೆಗೊಂದು ಕುಟುಕು ಕಾರ್ಯಾಚರಣೆ ನಡೆಸಿ ಗೋರಕ್ಷಕರ ಹೆಸರಿನಲ್ಲಿ ಕೊಲೆ ದರೋಡೆ ಮಾಡುತ್ತ ಹಫ್ತಾ ವಸೂಲಿ ದಂಧೆ ನಡೆಸುತ್ತಿದ್ದ ಹೋಪ್ಲೆಸ್ ಹೇತ್ಲಾಂಡಿಗಳನ್ನು ಜನರ ಮುಂದೆ ಬೆತ್ತಲು ಮಾಡಿದೆ. ಮನೆಯಲ್ಲಿ ಹೆಂಡ್ತಿಮಕ್ಕಳಿಗೆ ಎರಡೊತ್ತಿನ ಅನ್ನ ಹಾಕಲು ಯೋಗ್ಯತೆಯಿಲ್ಲದ ಚಿಳ್ಳೆಪಿಳ್ಳೆಗಳೆಲ್ಲ ಗಂಟಲಿಗೊಂದು ಬಾವುಟ ಹೆಟ್ಟಿಕೊಂಡು “ಜೈ ಶ್ರೀ ಮಾಮ್” ಎನ್ನುತ್ತ ಹಸು ದನ ಸಾಕಿದವರ ಮೇಲೆ ಬಿದ್ದು ಸಾಯ ಹೊಡೆದು ಕೊಂದು ಜೈಲು ಸೇರುತ್ತಿವೆ. ಇಂಥದ್ದೇ ಹೀನಾಯ ಸಾಹಸದಲ್ಲಿ ಇಬ್ಬರನ್ನು ಕೊಂದು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದ ಎರಡು ಹೇತ್ಲಾಂಡಿ ವೀರರನ್ನು ಓಆಖಿಗಿ ರಹಸ್ಯ ಕ್ಯಾಮೆರಾದೆದುರು ಬಾಯಿ ಬಿಡಿಸಿದೆ. ಇವರು ಕೋರ್ಟಿನಲ್ಲಿ ‘ನಮಗೇನೂ ಗೊತ್ತಿಲ್ಲ, ಆ ಕೊಲೆಗಳು ನಡೆದ ದಿನ ನಾವು “ಅಂತರರಾಷ್ಟ್ರೀಯ ಗೋಮೂತ್ರ ಸೇವಕರ ದಿನಾಚರಣೆ”ಯಲ್ಲಿ ಭಾಗವಹಿಸಿ ಬಕೇಟಿನಲ್ಲಿ ಗೋಮೂತ್ರ ಕುಡಿಯುತ್ತಿದ್ದೆವು, ಈ ಕೊಲೆಗೂ ನಮಗೂ ಸಂಬಂಧವಿಲ್ಲ’ ಎಂದಿದ್ದರು. ಜಾಮೀನು ಪಡೆದು ಹೊರಬಂದ ಕೂಡಲೆ ಇದ್ದಕ್ಕಿದ್ದಂತೆ ಗಂಡಸರಾದ ಈ ಕೊಲೆಗಡುಕರು ಓಆಖಿಗಿ ರಹಸ್ಯ ಕ್ಯಾಮೆರಾದೆದುರು ಆ ಕೊಲೆಗಳನ್ನು ಮಾಡಿದ್ದು ನಾವೇ, ನಮ್ ಸಪೋರ್ಟಿಗೆ ಪಿಳ್ಳಜುಟ್ಟು ಪಾರ್ಟಿಯವ್ರು ಇದ್ದಾರೆ, ಇನ್ನೊಂದೆರಡು ಕೊಲೆ ಮಾಡಿ ನೀವು ಸಾಯೋಮಟ ಜೈಲಿಗೆ ಹೋಗಿ, ನಿಮ್ಮ ಮನೆಮಂದಿ ಬಾಯಿಗೆ ಮಣ್ಣು ಹಾಕೋ ಜವಾಬ್ದಾರಿ ನಮ್ದು ಅಂತ ಪಿಳ್ಳಜುಟ್ಟು ಪಾರ್ಟಿಯ ಪುಟಗೋಸಿಗಳು ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ. ತಮ್ಮ ಮನೆಮಕ್ಕಳನ್ನು ಹೈಯರ್ ಎಜುಕೇಷನ್ನಿಗೆ ಹೊರದೇಶಕ್ಕೆ ಕಳಿಸಿ ಅವರ ಬಾಳು ಬಂಗಾರ ಮಾಡುವ ಈ ಪಿಳ್ಳಜುಟ್ಟು ಪುಟಗೋಸಿಗಳು, ತಳ ಸಮುದಾಯದ ಜನರ ಬದುಕಿನ ಮೇಲೆ ಚಪ್ಪಡಿಕಲ್ಲು ಎಳೆದು ಅದರ ಮೇಲೆ ಬಾಳೆಎಲೆ ಹಾಸಿಕೊಂಡು ಪಾಯಸ ನೆಕ್ಕಿಕೊಂಡು ಕುಳಿತುಬಿಡುತ್ತಾರೆಂಬುದು ಬಡ ಸಮುದಾಯಗಳಿಗೆ ಇನ್ನೂ ಅರಿವಾಗಿಲ್ಲವೆಂಬ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ‘ಗ್ಯಾಂಗ್ಸ್ ಆಫ್ ವಾಸ್ಸೆಪುರ್’ ಎಂಬ ಚಿತ್ರ ತೆಗೆದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಈ ಭಡವ ರಾಸ್ಕಲ್‍ಗಳ ಬಗ್ಗೆ “ ಗ್ಯಾಂಗ್ಸ್ ಆಫ್ ಗಂಜಳಾಪುರ್” ಎಂಬ ಚಿತ್ರ ತೆಗೆಯಲಿದ್ದಾರೆಂದು ನಂಬಲನರ್ಹ ಮೂಲಗಳು ತಿಳಿಸಿವೆ.

******

‘ಹಾಳೂರಿಗೆ ಉಳಿದೋನೆ ಐಲುಗಿರಾಕಿ’ ಎನ್ನೋ ಗಾದೆಗೆ ಕರೆಕ್ಟಾಗಿ ಫಿಟ್ ಆಗುವ ‘ಅನಂತ್ ಗಮಾಡ್ ಹೆಗಡೆ’ ಹೋದಲ್ಲಿ ಬಂದಲ್ಲೆಲ್ಲ ಕಯ್ಯಯ್ಯೋ ಕಯ್ಯಯ್ಯೋ ಅನ್ನುತ್ತ ಅತ್ತ ಪಕ್ಷದಿಂದಲೂ, ಇತ್ತ ಜನರಿಂದಲೂ ಸಮಪ್ರಮಾಣದಲ್ಲಿ ಉಗಿಸಿಕೊಂಡು ತಿರುಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿದೆ. ಹೊಸಾ ವಿಷ್ಯ ಏನಪ್ಪ ಅಂತಂದ್ರೆ.. “ ಬ್ಲೂಜೆಪಿ”ಯವ್ರು ಹುಲಿ ಇದ್ದಂಗೆ ಮಿಕ್ಕಿದೋರೆಲ್ಲ ಜಿಂಕೆ ಪಂಕೆ ಇದ್ದಂಗೆ, ನಮ್ದು ಹಂಗೈತೆ-ಹಿಂಗೈತೆ, ಲೊಟ್ಟೆ-ಲೊಸಕು, ಮಣ್ಣು ಮಸಕು ಅಂತೆಲ್ಲ ಕಯ್ಯಯ್ಯೋ ಅಂದಿದೆ. ಇವೆಲ್ಲವನ್ನು ‘ಅನಿಮಲ್ ಪ್ಲಾನೆಟ್’ ಚಾನೆಲ್‍ನ ನೇರಪ್ರಸಾರದಲ್ಲಿ ನೋಡಿದದವರು ಈ ಟೈಗರ್ ಸ್ಟೋರಿಗೆ ಥರಾವರಿ ಟ್ವಿಸ್ಟುಗಳನ್ನು ಕೊಡುತ್ತಿದ್ದಾರೆ. ಬ್ಲೂಜೆಪಿಯವರು ಟೈಗರ್‍ಗಳಾದರೆ ಮೊದಲು ಬಟ್ಟೆ ಬಿಚ್ಚಿ ಬರೇಬೆತ್ತಲೆ ಓಡಾಡಬೇಕು, ಯಾಕಂದ್ರೆ ಟೈಗರ್‍ಗಳು ಬಟ್ಟೆ ಹಾಕ್ಕಳಲ್ಲ ಅಂತ ಒಬ್ರು ಅಂದಿದ್ದಾರೆ. ತೊಡೆ ಸಂದಿಯಿಂದ ಮೂರಡಿ ಬಾಲ ನೇತಾಡ್ತಿದ್ರೆ ಮಾತ್ರ ಅದು ಟೈಗರ್ ಅನಿಸಿಕೊಳ್ತದೆ, ಆದ್ರಿಂದ ಗಮಾಡ್ ಹೆಗಡೆಗೂ ಒಂದು ಬಾಲ ಸಿಗಿಸಿ ಅದನ್ನವನು ಲಳ ಲಳ ಅಲ್ಲಾಡಿಸಿಕೊಂಡು ಓಡಾಡಬೇಕು, ಅವಾಗಷ್ಟೇ ಟೈಗರ್ ಅಂತ ಕನ್ಸಿಡರ್ ಮಾಡಬಹುದೆಂದು ಮತ್ತೊಬ್ಬರು ಅಂದಿದ್ದಾರೆ. ಇಲ್ಲ, ಇಲ್ಲ, ಟೈಗರ್‍ಗಳು ಹಸಿವಾದರೆ ಪುದೀನ ಕೊತ್ತಂಬರಿ ಸೊಪ್ಪು ತಿನ್ನೋದಿಲ್ಲ, ಅವಕ್ಕೆ ಹಸೀಮಾಂಸವೇ ಆಗಬೇಕು, ಆದ್ದರಿಂದ ಅನಂತ್ ಗಮಾಡ್ ಹೆಗಡೆ ಪಕ್ಷದೋರು ಊರಲ್ಲಿರೋ ಕೋಳಿ ಅಂಗಡಿ, ಮಟನ್ ಅಂಗಡಿಗಳಿಗೆ ಹುಲಿಗಳಂತೆ ಮಂಡಿ ಕೈಗಳನ್ನು ನೆಲಕ್ಕೂರಿ ನಾಲಿಗೆ ಹೊರಚಾಚಿ ನಡೆದುಕೊಂಡು ಹೋಗಿ ಅಲ್ಲಿ ವೇಸ್ಟ್ ಎಂದು ಎಸೆಯುವ ತ್ಯಾಜ್ಯಮಾಂಸವನ್ನು ಕಸದಡಬ್ಬಿಗೆ ಬಾಯಿ ಹಾಕಿ ಕಚಪಚನೆ ತಿನ್ನಬೇಕು, ಆಗಷ್ಟೇ ಇವರೆಲ್ಲ ಹುಲಿಗಳಾಗಲು ಸಾಧ್ಯ ಎಂದು ಜನರು ತರಾವರಿ ಐಡಿಯಾಗಳನ್ನು ಅನಂತ್ ಗಮಾಡ್ ಹೆಗಡೆಗೆ ಕೊಡುತ್ತಿದ್ದಾರೆ. ಅಗಣಿ ಹಾಕೋಕೆ ಹೋಗಿ ಇನ್ನೇನೋ ಸಿಗಿಸಿಕೊಂಡಂತಾಯ್ತಲ್ಲ ಎಂದು ಗಾಬರಿಯಾಗಿರೋ ಗಮಾರ್ ಹೆಗಡೆ ತನ್ನ ರಷ್ಯನ್ ಹೇರ್ ಸ್ಟೈಲ್ ತಲೆಗೂದಲಿಗೆ ಕೇಸರಿ ಕಲರ್ ಹೊಡೆಸಿಕೊಳ್ಳಲು ಕಟಿಂಗ್ ಶಾಪ್‍ಗೆ ಹೋದವರು ಇನ್ನೂ ಮನೆಗೆ ವಾಪಸಾಗಿಲ್ಲ ಎಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...