Homeಅಂಕಣಗಳುಗೆದ್ದ ನಂತರವೇ ಗಡ್ಡಮೀಸೆ ಬೋಳಿಸೋದಾಗಿ ಟೋಫನ್‍ತಲೆ ಮೇಲೆ ಆಣೆ

ಗೆದ್ದ ನಂತರವೇ ಗಡ್ಡಮೀಸೆ ಬೋಳಿಸೋದಾಗಿ ಟೋಫನ್‍ತಲೆ ಮೇಲೆ ಆಣೆ

- Advertisement -
- Advertisement -

ಆಘಾತವಾಣಿ |

ನಮಸ್ಕಾರ, ಆಘಾತವಾಣಿಗೆ ಸ್ವಾಗತ, ಇದೀಗ ಮುಖ್ಯಾಂಶಗಳು. ಓದುತ್ತಿರೋರು ಅಟ್ಯಾಕ್ ಹನ್ಮಂತು

ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಳೆದ ಒಂದು ತಿಂಗಳಿನಿಂದ ಉರಿಬಿಸಿಲಿನಲ್ಲಿ ಓತ್ಲಾ ಹೊಡೆಯುತ್ತಿದ್ದ ‘ವಿಜೇಂದ್ರ ಸನ್ನಾಫ್ ಯಡ್ರಪ್ಪ’ನವರಿಗೆ ಚಾಮರಾಜಪೇಟೆಯ ‘ಹೇ ಶವ ಕೃಪ’ದ ವಯೋವೃದ್ಧರು ಟಿಕೆಟ್ ನಿರಾಕರಿಸಿದ್ದಾರೆ. ತನ್ನ ‘ಅಧಿಕೃತ’ ಮಗನಿಗೇ ಟಿಕೆಟ್ ಢಮಾರ್ ಅನ್ನಿಸಿದ ಈ ಬೆಳವಣಿಗೆಯಿಂದ ನೊಂದ ಯಡೂರಪ್ಪನವರು ಸೋಪಕ್ಕನ ಹಳೇ ಸೀರೆಯೊಂದನ್ನು ಎತ್ತಿಕೊಂಡು ಫ್ಯಾನಿಗೆಸೆದು ನೇಣು ಹಾಕಿಕೊಳ್ಳಲು ಇನ್ನೂ ಯತ್ನಿಸಿಲ್ಲ ಎಂಬ ಸಾಕಿಂಗ್ ನ್ಯೂಸ್ ಹೊರಬಿದ್ದಿದೆ.
< < < <
ಸಂವಿಧಾನ ಬದಲಿಸೋಕೇ ನಾವು ಅಲ್ಲಾಡಿಸಿಕೊಂಡು ಇಲ್ಲೀತನಕ ಬಂದಿದ್ದೇವೆ ಎಂದು ಮಿಯಾಂವ್ ಎಂದಿದ್ದ ಬಿಜೆಪಿಯ ‘ಅನಾಥಕುಮಾರ್ ಹೆಗಡೆ’ಯವರು ಇದ್ದಕ್ಕಿದ್ದಂತೆ ಮಂಗಮಾಯವಾಗಿ ಹೋಗಿದ್ದಾರೆ. ಮೊನ್ನೆ ತಾನೇ ಬಿಜೆಪಿ ನಾಯಕನ ಲಾರಿಯೊಂದು ತಮ್ಮ ಬೆಂಗಾವಲು ವಾಹನಕ್ಕೆ ಗುದ್ದಿದ್ದರಿಂದ ಆಮಶಂಕೆ ಬೇಧಿಯಾಗಿ ಸುಸ್ತಾಗಿದ್ದ ಅನಾಥಕುಮಾರ್.. ಹೋದಲ್ಲಿ ಬಂದಲ್ಲಿ ಕಯ ಕಯ ಎಂದು ನರಳಾಡುತ್ತ ಜನರಿಂದ ಕಪುಕ್ ತುಪುಕ್ ಎಂದು ಉಗಿಸಿಕೊಂಡು ಚರ್ಮದ ಅಲರ್ಜಿಯಿಂದಲೂ ಬಳಲುತ್ತಿದ್ದರು. ಜನರ ಉಗುಳಿನಿಂದ ಇನ್ಫೆಕ್ಷನ್ ಆಗಿರಬಹುದಾದ ಸಾಧ್ಯತೆಯಿದ್ದುದರಿಂದ ಇದಕ್ಕೆ ಚಿಕಿತ್ಸೆ ಪಡೆಯಲು ಅನಾಥಕುಮಾರ್, ನೈಜೀರಿಯಾ ದೇಶಕ್ಕೆ ಅಳುತ್ತ ನಡೆದುಕೊಂಡೇ ಹೋಗಿದ್ದಾರೆ ಎಂಬ ಗುಮಾನಿಗಳು ವ್ಯಕ್ತವಾಗಿವೆ.
< < < <
ಈಗಾಗಲೇ ತಮ್ಮ ಎರಡೂ ಕಾಲನ್ನು ಸ್ಮಶಾನದ ಗುಂಡಿಗೆ ಇಳಿಬಿಟ್ಟಿರುವ ಬೊಚ್ಚುಬಾಯಿ ತಾತ ‘ಅಸಾರಾಂ ಬಾಪು’ ಅವರು ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ಅತ್ಯಾಚಾರದ ಕೇಸಿನಲ್ಲಿ ಕಳೆದ 5 ವರ್ಷಗಳಿಂದ ಜೈಲಿನಲ್ಲಿ ಶೌಚಾಲಯ ಸ್ವಚ್ಛ ಮಾಡುತ್ತ ಸಜೆಬಂಧಿಯಾಗಿದ್ದುದು ತಮಗೆಲ್ಲರಿಗೂ ತಿಳಿದಿದೆ. ಇದೀಗ ಈ ಅತ್ಯಾಚಾರದ ಕುರಿತಂತೆ ಕೋರ್ಟ್ ತೀರ್ಪು ಪ್ರಕಟವಾಗಿದ್ದು, ತಾತ ಅಸಾರಾಂ ಬಾಪು ತಪ್ಪಿತಸ್ಥ ಎಂದು ಸಾಬೀತಾಗಿದೆ. ಈ ಬಗ್ಗೆ ತೀರ್ಪು ಕೊಡುವಾಗ ರೊಚ್ಚಿಗೆದ್ದ ತೀರ್ಪುಗಾರರು.. ಈ ರೇಪಿಸ್ಟ್ ಮುದುಕನಿಗೆ ಸಾಯುವತನಕ ಪಕೋಡಮ್ಯಾನ್ ಫ್ರಾಡೇಂದ್ರನ ಎಲ್ಲ ಭಾಷಣಗಳನ್ನೂ ಕೇಳುವ ಮತ್ತು ನೋಡುವ ಭಯಾನಕ ಶಿಕ್ಷೆಯನ್ನು ಇನ್ನೂ ವಿಧಿಸಿಲ್ಲ ಎಂದು ವರದಿಯಾಗಿದೆ.
< < < <
ಈ ನಡುವೆ ಗುಜರಾತಿನ ತಮ್ಮ ಅಧಿಕೃತ ಹೆಂಡಿರು ಮಕ್ಕಳನ್ನು ಮರೆತು ಕರ್ನಾಟಕದ ತುಂಬೆಲ್ಲ ಅಂಡಲೆಯುತ್ತಿರುವ ಅಮಿತ್ ಬೋಡಪ್ಪನವರು ಬಿಜೆಪಿ ಪಾರ್ಟಿಗೂ ಮತ್ತು ಗಣಿರೆಡ್ಡಿಗೂ ಯಾವುದೇ ‘ವಿವಾಹೇತರ ಅಕ್ರಮ ಸಂಬಂಧ’ವಿಲ್ಲ ಎಂದು ಹೇಳಿದ್ದರು. ಆದರೂ ಸಹ ಬೋಡಪ್ಪನ ಮಾತಿಗೆ ಹಳೇಮೆಟ್ಟಿನಷ್ಟೂ ಬೆಲೆ ಕೊಡದ ಯಡೂರಪ್ಪನವರು ಗಣಿರೆಡ್ಡಿಯನ್ನು ಕಂಕುಳಲ್ಲಿ ಎತ್ತಿಕೊಂಡು ಕರ್ನಾಟಕದ ಮನೆಮನೆಯಲ್ಲಿ ಓಟಿನ ತಿರುಪೆ ಎತ್ತಲು ಮುಂದಾಗಿದ್ದಾರೆ. ಈ ಬಗ್ಗೆ ಸುದ್ದಿ ತಿಳಿದ ಅಮಿತ್ ಬೋಡಪ್ಪನವರು ಸಿಟ್ಟಿಗೆದ್ದು ಯಡೂರಪ್ಪನ ಮಗನ ಎಲೆಕ್ಷನ್ ಟಿಕೇಟಿಗೆ ಬಗನಿಗೂಟ ಹೆಟ್ಟಿದ್ದಾರೆಂದು ಬಲ್ಲ ಮೂಲಗಳಿಂದ ಇನ್ನೂ ತಿಳಿದು ಬಂದಿಲ್ಲ.
< < < <
ಇದೀಗ ಬಂದ ಸುದ್ದಿ. ಈ ಚುನಾವಣೆಯಲ್ಲಿ ಗೆದ್ದ ನಂತರವೇ ಗಡ್ಡಮೀಸೆ ಬೋಳಿಸುತ್ತೇನೆಂದು ಗಣಿರೆಡ್ಡಿಯ ಟೋಫನ್‍ತಲೆ ಮೇಲೆ ಆಣೆ ಮಡಗಿರುವ ‘ಸ್ತ್ರೀರಾಮುಲು’ ಇದ್ದಕ್ಕಿದ್ದಂತೆ ದೈವಭಕ್ತರಾಗಿದ್ದಾರೆ. ತಮ್ಮ ಮನೆಗೇ ಪೂಜಾರಿಗಳನ್ನು ಕರೆಸಿಕೊಂಡು ಗೋಪೂಜೆಯನ್ನು ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಹಸುವಿಗೆ ಅರಿಶಿಣ ಕುಂಕುಮ ಹಚ್ಚಲು ಹೇಳಿದ ಪೂಜಾರಿಯ ಮಾತು ಮುಗಿಯುವ ಮೊದಲೇ ಅರಿಶಿಣ ಕುಂಕುಮದ ಪಾತ್ರೆಯೆತ್ತಿಕೊಂಡ ಸ್ತ್ರೀರಾಮುಲು ಗೋಡೆಗೆ ಎನಾಮೆಲ್ ಪೇಂಟ್ ಬಳಿದಂತೆ ಹಸುವಿಗೆ ಬಳಿದಿದ್ದಾರೆ. ಪೂಜೆಯ ನಂತರ ಈ ಅನಿರೀಕ್ಷಿತ ಕುಂಕುಮದ ದಾಳಿಯಿಂದ ಬೆಚ್ಚಿಬಿದ್ದ ಹಸುವು ಸ್ತ್ರೀರಾಮುಲು ಮನೆಯಿದ್ದ ವಿರುದ್ಧ ದಿಕ್ಕಿಗೆ ಓಡಿಹೋಗಿದ್ದು ಇಷ್ಟೊತ್ತಿಗೆ ಬಹುಶಃ ರಾಜಸ್ಥಾನ ತಲುಪಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
< < < <
ಬಿಜೆಪಿ ಪಕ್ಷದ ಅನಧಿಕೃತ ಕಾನ್ಸ್‍ಟೇಬಲ್‍ಗಳಂತೆ ಕೋಮುಗಲಭೆಗಳು, ಬಂದ್, ಪ್ರತಿಭಟನೆಗಳಲ್ಲಿ ಗುಂಪುಗುಂಪಾಗಿ ಧುಮುಕಿ ಜೈಲುಪಾಲಾಗುತ್ತಿದ್ದ ‘ಪಿಲ್ಲವ ಸಮುದಾಯದ’ ವೀರಸೈನಿಕರಿಗೆ ಈ ಬಾರಿ ಬಿಜೆಪಿ ಪಂಗನಾಮ ಎಳೆದಿದೆ. ‘ಪಿಲ್ಲವ ಸಮುದಾಯದ’ ಯಾವೊಬ್ಬ ಗಂಡಸೂ ಮನೆಯಲ್ಲಿ ಇರಲು ಬಿಡದೆ, ಎಲ್ಲರನ್ನೂ ಸಾಮೂಹಿಕವಾಗಿ ಜೈಲಿಗೆ ಸೇರಿಸಿ ಗಿನ್ನೆಸ್ ದಾಖಲೆ ಬರೆಯಲು ಯತ್ನಿಸುತ್ತಿರುವ ಬಿಜೆಪಿಯ ಕೃಶಕಾಯ ಎದೆಯ ಮೇಲೆ ‘ಪಿಲ್ಲವರು’ ಕಾಲೆತ್ತಿ ಮಡಗಿದ್ದಾರೆ. ಯೂಸ್ ಮಾಡಿ ಬಿಸಾಕಲು ನಮ್ಮನ್ನೇನು ಕಾಂಡೋಮ್ ಎಂದುಕೊಂಡಿದ್ದೀರ ಎಂದು ರೊಚ್ಚಿಗೆದ್ದಿರುವ ‘ಪಿಲ್ಲವರ’ ಆಕ್ರೋಶದ ಹಿಂದೆ ಸಮುದಾಯಕ್ಕೆ ಟಿಕೆಟ್ ನಿರಾಕರಿಸಿದ ಬಿಜೆಪಿಯ ದೌಲತ್ತಿದೆ ಎಂಬುದು ತಿಳಿದುಬಂದಿದೆ.
< < < <
ಅತ್ತಾಗೂ ಇಲ್ಲ, ಇತ್ತಾಗೂ ಇಲ್ಲದ ಉಪರಾಷ್ಟ್ರಪತಿ ‘ಪೆಂಕಯ್ಯ ನಾಯ್ಡು’ ಅವರು ‘ಭಾರತದಲ್ಲಿ ಮಹಿಳೆಯರ ಮೇಲೆ ಗೌರವ ಕಡಿಮೆಯಾಗಲು ಬ್ರಿಟಿಷರೇ ಕಾರಣ’ ಎಂದು ಹೇಳಿದ್ದಾರೆ. ಬ್ರಿಟಿಷರು ಬರುವುದಕ್ಕೂ ಮೊದಲು ಭಾರತ ದೇಶದಲ್ಲಿ ವಿಧವೆಯರನ್ನು ಗಂಡನ ಚಿತೆಯೊಳಗೆ ತಳ್ಳಿ ಸುಟ್ಟುಹಾಕುವ ಅದ್ಭುತ ಸತಿಸಹಗಮನ ಪದ್ಧತಿ, ದೇವರ ಹೆಸರಿನಲ್ಲಿ ದಲಿತ ಮಹಿಳೆಯರನ್ನು ವೇಶ್ಯಾವಾಟಿಕೆಗೆ ನೂಕುತ್ತಿದ್ದ ದೇವದಾಸಿ ಪದ್ಧತಿಯಂತಹ ಅತ್ಯದ್ಭುತ ಪದ್ಧತಿಗಳಿದ್ದವು. ಬ್ರಿಟಿಷರು ಬಂದು ಇವೆಲ್ಲ ಅತ್ಯುತ್ತಮ ಪದ್ಧತಿಗಳನ್ನು ನಿಲ್ಲಿಸಿ ಮಹಿಳೆಯರಿಗೆ ಅಗೌರವ ಉಂಟು ಮಾಡಿದರೆಂದು ಪೆಂಕಯ್ಯನವರು ಇನ್ನೂ ಹೇಳಿಲ್ಲವೆಂದು ಬಲ್ಲ ಮೂಲಗಳು ಹೇಳಿವೆ.
< < < <
ನೋಟ್ ಬ್ಯಾನ್ ಮೂಲಕ ಲಕ್ಷಾಂತರ ಕೋಟಿ ಕಪ್ಪುಹಣವನ್ನು ಹೊರತೆಗೆಯಲು ಯತ್ನಿಸಿ ಅಂಡುಸುಟ್ಟ ಬೆಕ್ಕಿನಂತಾಗಿರುವ ಪಕೋಡೇಂದ್ರರ ಅಧ್ವಾನಗಳಿಗೆ ಇಂದಿಗೂ ಸಹ ಭಾರತದ ಎಟಿಎಂಗಳಲ್ಲಿ ಹಣವಿಲ್ಲದಂತಾಗಿದೆ. ಇದನ್ನು ಸರಿಪಡಿಸಲು ಎಟಿಎಂಗಳಲ್ಲಿ ಖೋಟಾನೋಟುಗಳನ್ನು ತುಂಬಿ ಜನರ ಹಣೆಗೆ ಪಂಗನಾಮ ಎಳೆಯುವ ಪ್ರಯತ್ನ ಉತ್ತರ ಭಾರತದಿಂದ ವರದಿಯಾಗಿದೆ. ಬರೇಲಿಯ ಎಟಿಎಂಗಳಲ್ಲಿ ಹಣ ಪಡೆಯಲು ಹೋದ ಜನರ ಕೈಗೆ ಖೋಟಾನೋಟುಗಳು ತುಪತುಪನೆ ಉದುರಿದ್ದು, ಜನರು ಪಕೋಡೇಂದ್ರನ ನೋಟ್‍ಬ್ಯಾನ್ ಸಾಹಸವೇ ಇವೆಲ್ಲ ಕಾಮಿಡಿಗಳಿಗೆ ಕಾರಣವೆಂದು ಪಕೋಡೇಂದ್ರನ ಮೇಲೆ ಮಾಟಮಂತ್ರ ಮಾಡಿಸಿಯಾದರೂ ಸರಿ ದೇಶದಿಂದ ಓಡಿಸಬೇಕೆಂದು ಕೇರಳದ ಮಾಂತ್ರಿಕರನ್ನು ಹುಡುಕುತ್ತಿದ್ದಾರೆ ಎಂಬ ಘನಘೋರ ಸತ್ಯ ಇನ್ನೂ ಬಯಲಾಗಿಲ್ಲ.
< < < <
ಇದೆಲ್ಲದರ ನಡುವೆ ಕುಖ್ಯಾತ ನಟ ‘ಸಾಯಿಗುಮಾರ್’ ಅವರಿಗೆ ಬಿಜೆಪಿ ಪಕ್ಷವು ಟಿಕೇಟನ್ನು ಕೊಟ್ಟಿದ್ದು, ಇದಕ್ಕೆ ಕಾರಣವೇನೆಂದು ಕೆದಕಿದಾಗ ಆಘಾತಕಾರಿ ವಿಷಯಗಳು ಹೊರಬಂದಿವೆ. ಟಿಕೇಟ್ ಕೇಳಲು ಕೈಯಲ್ಲಿ ಲಾಂಗ್ ಹಿಡಿದು ಸೀದ ‘ಹಾರೆಸ್ಸೆಸ್’ ಮುದುಕರ ಕೊಂಪೆಗೆ ನುಗ್ಗಿದ್ದ ಸಾಯಿಗುಮಾರ್ ಅವರು ಅಲ್ಲಿದ್ದ ಮಿಟುಕಲಾಡಿ ಮುದುಕರ ಸೊಂಟದ ಮೇಲೆ ಲಾಂಗ್ ಇಟ್ಟು, ಟಿಕೇಟ್ ಕೊಡ್ತೀರೋ, ಇಲ್ಲಾ ಸೊಂಟ ಕುಯ್ಯಲೋ ಎಂದು ಆವಾಜ್ ಹಾಕಿದ್ದರಂತೆ. ಐಟಂ ಉಳಿದರೆ ಸಾಕೆಂದು ಹಾರೆಸ್ಸೆಸ್ ಮುದುಕರು ಸಾಯಿಗುಮಾರ್‍ಗೆ ಟಿಕೇಟ್ ಕೊಟ್ಟು, ‘ವದಲೇರಾ ದೊಂಗ ನಾ ಕೊಡಕಾ’ ಎಂದು ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆಂದು ಇನ್ನೂ ತಿಳಿದುಬಂದಿಲ್ಲ.
< < < <
ಭಾರತೀಯ ಜನ ಪಕ್ಷದ ಒನ್ ಅಂಡ್ ಓನ್ಲಿ ಗಂಡಸಾಗಿರುವ ಸೋಪಕ್ಕನವರು ಈ ಸಲ ಟಿಕೇಟ್ ಸಿಗದೆ ಅಬ್ಬೇಪಾರಿಯಂತಾಗಿ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ. ‘ಯಾಕೆ ಸೋಪ, ಏನಾಯ್ತು ನಿಂಗೆ, ಯಾಕೆ ಹೀಗೆ ತಲೆಕೆದರಿಕೊಂಡು ಕುಂತಿದ್ದೀಯ’ ಎಂದು ಸಮಾಧಾನಪಡಿಸಲು ಹೋದ ಯಡ್ರಪ್ಪನವರ ತೊಡೆಗೆ ಸೋಪಕ್ಕನವರು ಬಲವಾಗಿ ಅಗಿದಿರುವ ಸಿಸಿಟಿವಿ ದೃಶ್ಯಗಳು ನಮಗೆ ಲಭ್ಯವಾಗಿವೆ. ಕನಿಷ್ಟ ಪಕ್ಷ 250 ಗ್ರಾಂನಷ್ಟು ಮಾಂಸವನ್ನು ಕಿತ್ತಿರುವ ಸೋಪಕ್ಕನವರು ನಂತರ ಯಡ್ರಪ್ಪನವರ ಕುತ್ತಿಗೆಗೆ ಬಾಯಿ ಹಾಕಲು ಯತ್ನಿಸಿದ್ದಾರೆ. ಆಗ ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್‍ಗಳು ಸೋಪನ ಕಪ್ಪಾಳಕ್ಕೆ ಚಟೇರ್-ಪಟೇರ್ ಎಂದು ಬಡಿದು ಯಡ್ರಪ್ಪನವರ ಪ್ರಾಣವನ್ನು ಕಾಪಾಡಿದ್ದಾರೆಂದು ಇನ್ನೇನು ನಮಗೆ ಸುದ್ದಿ ಲಭಿಸಲಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮುಂದಿನ ವಾರ ಸಿಗೋಣ. ಟೇಕ್ ಕೇರ್ ಬೈ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...