Homeಮುಖಪುಟಏನಾಗಿದೆ ಈ ಮಠಾಧಿಪತಿಗಳಿಗೆ!?

ಏನಾಗಿದೆ ಈ ಮಠಾಧಿಪತಿಗಳಿಗೆ!?

- Advertisement -
- Advertisement -

ತಮ್ಮ ಜಾತಿ ಮೀಸಲಾತಿಗಾಗಿ, ಸಚಿವ ಸ್ಥಾನಕ್ಕಾಗಿ, ಮಠದ ಅನುದಾನಕ್ಕಾಗಿ ಬಾಯಿಬಾಯಿ ಬಿಡುವ ಮಠಾಧಿಪತಿಗಳು ದೇಶದಲ್ಲಿ ಭುಗಿಲೆದ್ದಿರುವ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಪರವಾಗಿ ದನಿ ಎತ್ತದಿರುವುದು ಸಾಮಾಜಿಕ ದುರಂತವಲ್ಲವೇ?

ಧರ್ಮ ಮಾನವನನ್ನು ಸೃಷ್ಟಿಸಲಿಲ್ಲ. ಮಾನವ ಧರ್ಮವನ್ನು ಸೃಷ್ಟಿಸಿದ. ಧರ್ಮಗಳು ಬೆಳೆದಂತೆ ಧರ್ಮಗುರುಗಳು, ಮೌಲ್ವಿಗಳು, ಪಾದ್ರಿಗಳು, ಮೌಢ್ಯ ಕಂದಾಚಾರದ ಕಟ್ಟುಪಾಡುಗಳನ್ನು ಹೇರುತ್ತಾ ಬಂದರಲ್ಲದೆ ಯಾವಾಗ ಧರ್ಮ ರಾಜಕಾರಣದಲ್ಲಿ ಬೆರೆಯಿತೋ ಕೋಮುವಾದದ ರೂಪ ಪಡೆಯಿತು. ಏನಾಗಿದೆ ಕೆಲವು ಮಠಾಧೀಶರಿಗೆ? ತಮ್ಮ ಸ್ಥಾನಮಾನ ಪೀಠದ ಗೌರವವನ್ನು ಒತ್ತೆಯಿಟ್ಟು ತಮ್ಮ ತಮ್ಮ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಲು ಬಹಿರಂಗವಾಗಿಯೇ ಪ್ರಭಾವ ಬೀರುತ್ತಾ ಧಮಕಿಹಾಕುವ ಮಟ್ಟಕ್ಕೆ ಇಳಿದಿದ್ದಾರೆ. ತಮ್ಮ ಜಾತಿಗೆ ಇಷ್ಟೇ ಮೀಸಲಾತಿ ಕೊಡಬೇಕೆಂಬ ಹಕ್ಕೊತ್ತಾಯಕ್ಕಿಳಿಯುವುದು ಇಲ್ಲವಾದರೆ ನಮ್ಮ ಜಾತಿಯ ಮಂತ್ರಿಗಳು ಶಾಸಕರೆಲ್ಲರಿಂದ ರಾಜೀನಾಮೆ ಕೊಡಿಸಿದರೆ ಸರ್ಕಾರ ಉರುಳುತ್ತದೆಯೇ ಎಂಬ ಬಗ್ಗೆ ಅರಿವಿರಲಿ, ಎಂದೆಲ್ಲಾ ಪ್ರಶ್ನಿಸುವ ಅಧೋಗತಿಗೆ ಇಳಿಯುತ್ತಿದ್ದಾರೆ. ಯಾವುದೇ ಒಂದು ಜಾತಿಯಿಂದ ಯಾವ ರಾಜಕಾರಣಿಯೂ ಗೆಲ್ಲಲು ಸಾಧ್ಯವಿಲ್ಲವೆಂಬ ಪರಿವೇ ಇಲ್ಲದೆ ಗುಟುರುಹಾಕುವ ಇಂಥವರು ಮತದಾರರನ್ನು ಅಪಮಾನಿಸುತ್ತಿದ್ದಾರೆ. ಇದೆಲ್ಲಾ ಏಕೆ ಹೇಳಬೇಕಾಯಿತು ಎಂದರೆ ಇತ್ತೀಚೆಗೆ ಪಂಚಮಸಾಲಿ ಮಠಾಧೀಶರೊಬ್ಬರು ಬಹಿರಂಗವಾಗಿಯೇ ವೇದಿಕೆಯಲ್ಲಿ ನಮ್ಮವರು ಹದಿಮೂರು ಜನ ಶಾಸಕರಲ್ಲಿ ಮೂವರಿಗಾದರೂ ಸಚಿವ ಸ್ಥಾನ ಕೊಡಿ, ಇಲ್ಲವಾದರೆ ಕೆಳಗಿಳಿಯಬೇಕಾಗುತ್ತದೆಂದು ಮುಖ್ಯಮಂತ್ರಿಗೆ ಉರಿಗಣ್ಣು ಬಿಡುತ್ತಾ ಕೆಂಡಕಾರಿದ್ದನ್ನು ಮಾಧ್ಯಮಗಳು ತೋರಿಸಿವೆ. ಮರುದಿನದ ಸಭೆಯಲ್ಲಿ ವಾಲ್ಮೀಕಿ ಮಠದ ಸ್ವಾಮೀಜಿಯೊಬ್ಬರು ನಾವೂ ನಿಮ್ಮ ಬೆಂಬಲಕ್ಕಿದ್ದೇವೆಯೆಂದು ಬೆಂಬಲ ವ್ಯಕ್ತಪಡಿಸಿದರೆ, ಉಳಿದ ಮಠಾಧಿಪತಿಗಳು ಕಾವಿ ತೊಟ್ಟಿದ್ದೇವೆಂದು ಮರೆತು ಪರ ವಿರೋಧದ ಡಿಬೇಟ್‍ಗೆ ಇಳಿದಿರುವುದು ಧಾರ್ಮಿಕ ದುರಂತವಲ್ಲವೆ?

ಕುಂಚಿಟಿಗರ ಸ್ವಾಮಿಯ ನೇತೃತ್ವದಲ್ಲಿ ಕೆಲವು ಓಬಿಸಿಗಳ ಜೊತೆ ಮಾದಾರಪೀಠದ ಸ್ವಾಮಿಗಳು ಮುಖ್ಯಮಂತ್ರಿಗಳ ಧವಳಗಿರಿ ನಿವಾಸಕ್ಕೆ ತೆರಳಿ ಅವರ ಕಣ್ಣೊರೆಸಿ ಬೆಂಬಲಿಸಿ, ಸೆಡ್ಡು ಹೊಡೆದು ಹೊರ ಬಂದಿದ್ದಾರೆ. ಈ ಮಠಾಧಿಪತಿಗಳಿಗೇನಾಗಿದೆ? ಬಿಜೆಪಿ ಸರ್ಕಾರ ಬರುತ್ತಲೇ ಗುಂಪು ಕಟ್ಟಿಕೊಂಡು ಹೋಗಿ ನಮ್ಮ ಮಠಕ್ಕೆ ಇಷ್ಟೇ ಕೋಟಿ ಅನುದಾನ ಕೊಡಿರೆಂದು ವಸೂಲಿಗೆ ಇಳಿದು ಬಿಡುತ್ತಾರೆ. ಇದಕ್ಕೂ ಕಾರಣವಿಲ್ಲದಿಲ್ಲ ರಾಜಕಾರಣಿಗಳೂ ಅಷ್ಟೇ. ತಮ್ಮ ಗೆಲುವಿಗಾಗಿ ಜಾತಿ ಸ್ವಾಮಿಗಳ ಬೆನ್ನು ಬಿದ್ದು ಕೋಟಿಗಟ್ಟಲೆ ಕಾಣಿಕೆ ನೀಡಿ, ಮತಗಳನ್ನು ರಿಸರ್ವ್ ಮಾಡಿಸಿಕೊಳ್ಳಲು ಆರಂಭಿಸಿದ್ದರ ಫಲವೇ ಇದು. ನೀನನಗಿದ್ದರೆ ನಾನಿನಗೆ ಎಂಬಂತಹ ಒಡಂಬಡಿಕೆಯ ವ್ಯಾಪಾರ ನಡೆಯುತ್ತಿದೆ.

ಸಮ್ಮಿಶ್ರ ಸರ್ಕಾರವಿದ್ದಾಗಲೂ ಅಷ್ಟೇ. ನಮ್ಮ ಮುಖ್ಯಮಂತ್ರಿಯ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲವೆಂದು ಆದಿಚುಂಚನಗಿರಿಯೇ ಗುಡುಗಿದ್ದುಂಟು. ಸಿದ್ಧರಾಮಯ್ಯನವರು ಸಿ.ಎಂ. ಆದಾಗ ಕಾಗಿನೆಲೆಯ ಮಠಾಧಿಪತಿಗಳು ರಕ್ಷಣೆಗೆ ಇಳಿದಿದ್ದುಂಟು. ರಾಜಕಾರಣದಲ್ಲಿ ಧರ್ಮಕಾರಣ ಬೆರೆತರೆ ಕೇಡಿಲ್ಲ. ಆದರೆ ಧರ್ಮದಲ್ಲಿ ರಾಜಕಾರಣ ಬೆರೆತರೆ ಒಳಿತಿಲ್ಲವೆಂಬುದು ಬಸವಣ್ಣನವರ ಕಾಲದಲ್ಲಿ ಸಾಬೀತಾಗಿದೆಯಾದರೂ ಅದರ ಬಗ್ಗೆ ರಾಜಕಾರಣಿಗಳು ಮಠಾಧೀಶರು ಮರೆತಂತೆ ಕಾಣುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮಠಾಧಿಪತಿಗಳ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಸ್ವಾಮಿಗಳಾದರೂ ಘನತೆ ಹೆಚ್ಚಿಸಿಕೊಂಡಿದ್ದಾರೆಯೇ ಎಂದಾಲೋಚಿಸಿದರೆ ಕೆಲವರು ಜೈಲಿಗೆ ಹೋಗಿದ್ದಾರೆ. ಕೆಲವರ ಮೇಲಿನ ಅತ್ಯಾಚಾರದ ಕೇಸುಗಳು ಕೋರ್ಟಿನಲ್ಲಿ ಕೊಳೆಯುತ್ತಿವೆ. ಕೆಲವರು ನೆಲವನ್ನೇ ನುಂಗಿದ್ದಾರೆ. ಸ್ವಾಮೀಜಿಯೊಬ್ಬ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಗೋದ್ರಾ ಪ್ರಕರಣವನ್ನು ಮರುಕಳಿಸುತ್ತಿದ್ದಾನೆ. ಉತ್ತರದಲ್ಲಿ ಯೋಗಪಟು ಬಾಬಾ ರಾಮ್‍ದೇವ್, ರವಿಶಂಕರ್ ಗುರೂಜಿ, ಜಗ್ಗಿ ವಾಸುದೇವ್ (ಇಲ್ಲಿನ ದಿವಂಗತ ಪೇಜಾವರಶ್ರೀಗಳಂತವರು) ಬಹಿರಂಗವಾಗಿಯೇ ಬಿಜೆಪಿಯ ಹಾಗೂ ಮೋದಿಯವರ ಬೆಂಬಲಕ್ಕೆ ನಿಂತವರು. ನೀವೆಲ್ಲಾ ರಾಜಕೀಯದಲ್ಲೇಕೆ ಮೂಗು ತೂರಿಸುವಿರಿ ಎಂದರೆ, ನನಗೊಬ್ಬರು ಸಮಜಾಯಿಷಿ ನೀಡಿದ್ದುಂಟು. ನಮ್ಮ ಸನಾತನ ಧರ್ಮ, ಪುರಾಣಗಳಲ್ಲೇ ಇದೆಲ್ಲಾ ನಡೆದು ಬಂದಿದೆ ಎನ್ನುತ್ತಾರೆ. ದೇವತೆಗಳಿಗೆ ವಸಿಷ್ಠ ಗುರುಗಳಾಗಿದ್ದರು, ರಾಕ್ಷಸರಿಗೆ ಶುಕ್ಲಾಚಾರ್ಯರು ಸಲಹೆ ನೀಡಿದ್ದುಂಟು. ಸಾಮಾನ್ಯ ಬಾಲಕ ಚಂದ್ರಗುಪ್ತನಿಗೆ ಚಾಣಕ್ಯ, ಸಳನನ್ನು ಹೋಯ್ಸಳನನ್ನಾಗಿಸಿದ್ದ ಸುದತ್ತ, ಹಕ್ಕಬುಕ್ಕರನ್ನು ಬೆಂಬಲಿಸಿದ ವಿದ್ಯಾರಣ್ಯ, ಗ್ರಾಮವಾಸಿ ಯುವಕ ಭರಮಣ್ಣನಾಯಕನಿಗೆ ಮಾರ್ಗದರ್ಶನವಿತ್ತು. ದೊರೆಪದವಿಗೇರಿಸಿದ ಮುರುಗೇಸ್ವಾಮಿಗಳನ್ನು ಉದಾಹರಿಸುತ್ತಾರೆ. ಇರಬಹುದು ಆದರೆ ಇವರೆಲ್ಲಾ ಗುರುಗಳಾಗಿ ಧರ್ಮಕಾರಣ ಮಾಡಿ ಪ್ರಜಾಹಿತ ಬಯಸಿದರೆ ವಿನಃ ರಾಜಕಾರಣ ಮಾಡಲಿಲ್ಲ. ಬಹುಮುಖ್ಯವಾಗಿ ಇವರಾರು ದೊರೆಯಾದವನ “ಜಾತಿಗೆ” ಸೇರಿದವರಲ್ಲವಾಗಿದ್ದರಿಂದಲೇ ಜಗದ್ಗುರುಗಳು ಎನಿಸಿಕೊಂಡರು. ಈಗಿರುವ ಎಲ್ಲರೂ ಜಾತಿ ಗುರುಗಳು, ಇರುವುವೆಲ್ಲಾ ಜಾತಿಮಠಗಳು ಎಂಬುದನ್ನು ಅವರುಗಳೇ ಸಾಬೀತು ಪಡಿಸುತ್ತಿದ್ದಾರೆ. ಹಿಂದಿನವರೆಲ್ಲಾ ಭಕ್ತಾಧಿಗಳ ನೆರವಿನಿಂದ ಮಠ ಕಟ್ಟಿ ಬೆಳೆಸಿದ್ದವರಾದ್ದರಿಂದ ಅವರಿಗೆ ಯಾರ ಹಂಗೂ ಇರಲಿಲ್ಲ. ಐಷಾರಾಮಿ ಮಠಗಳಲ್ಲಿದ್ದು, ಯಾವಾಗ ಸರ್ವ ಸಂಗ ಪರಿತ್ಯಾಗವನ್ನೇ ಮರೆತರೋ, ಕೋಟಿಗಟ್ಟಲೆ ಹಣಕ್ಕಾಗಿ ರಾಜಕಾರಣಿಗಳ ಎದುರು ಸಲಾಮ್ ಹೊಡೆದರೋ ಆಗಲೇ ಕಾವಿ ತನ್ನ ಕಿಮ್ಮತ್ತು ಕಳೆದುಕೊಂಡಿದೆ. ಖಾದಿಗಳ ಹಿಂದೆ ನಿಂತು ದರ್ಬಾರ್ ನಡೆಸುವ ಬದಲು, ತಮಗೆ ಬೇಕಾದವರನ್ನು ವಿವಿಧ ಪಕ್ಷಗಳಿಂದ ನಿಲ್ಲಿಸಿ, ಗೆಲ್ಲಿಸುವ ಪಡಿಪಾಟಲು ಬಿಟ್ಟು ಕಾವಿ ಕಿತ್ತೆಸೆದು ನೇರಾ ನೇರ ತಾವೇ ರಾಜಕೀಯಕ್ಕಿಳಿಯುವುದು ಇಬ್ಬಂದಿತನಕ್ಕಿಂತ ಮೇಲಲ್ಲವೇ? ತಮ್ಮ ಜಾತಿ ಮೀಸಲಾತಿಗಾಗಿ, ಸಚಿವಸ್ಥಾನಕ್ಕಾಗಿ, ಮಠದ ಅನುದಾನಕ್ಕಾಗಿ ಬಾಯಿ ಬಾಯಿ ಬಿಡುವ ಇವರುಗಳು ದೇಶದಲ್ಲಿ ಭುಗಿಲೆದ್ದಿರುವ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಪರವಾಗಿ ದನಿ ಎತ್ತದಿರುವುದು ಸಾಮಾಜಿಕ ದುರಂತವಲ್ಲವೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನದ ಭಿವಾಡಿಯಲ್ಲಿ ಗೋ ಕಳ್ಳಸಾಗಣೆದಾರರು ಮತ್ತು ಗೋರಕ್ಷಕರ ನಡುವೆ ಘರ್ಷಣೆ: ಯುವಕ ಸಾವು

ಜೈಪುರ: ರಾಜಸ್ಥಾನದ ಭಿವಾಡಿಯಲ್ಲಿ ಸೋಮವಾರ ಬೆಳಗಿನ ಜಾವ ಗೋ ಕಳ್ಳಸಾಗಣೆದಾರರು ಮತ್ತು ಗೋರಕ್ಷಕರ ನಡುವೆ ನಡೆದ ಘರ್ಷಣೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದಾಗಿ ಮೃತನ ಕುಟುಂಬ ಪ್ರತಿಭಟನೆ ನಡೆಸಿದ್ದು, ಆತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು...

ಖಮೇನಿ ಹತ್ಯೆ ಬಗ್ಗೆ ಪ್ರಧಾನಿ ಮೋದಿ ತಮ್ಮ ನಿಲುವು ತಿಳಿಸಬೇಕು: ರಾಹುಲ್ ಗಾಂಧಿ ಒತ್ತಾಯ

ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿದ್ದಾರೆ. ಅಮೆರಿಕ ಮತ್ತು...

ಇರಾನ್‌ ಮೇಲೆ ಇಸ್ರೇಲ್ ದಾಳಿ: ಟೆಹ್ರಾನ್‌ನಿಂದ 200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಕೋಮ್‌ಗೆ ಸ್ಥಳಾಂತರ

ನವದೆಹಲಿ: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಗಳು ತೀವ್ರಗೊಳ್ಳುತ್ತಿರುವ ಮಧ್ಯೆ, ಟೆಹ್ರಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ವಿದ್ಯಾರ್ಥಿಗಳನ್ನು ಕೋಮ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ, ಆದರೆ ಭಾರತೀಯ ರಾಯಭಾರ ಕಚೇರಿಯು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ಪ್ರಜೆಗಳನ್ನು ಮನೆಯೊಳಗೆ ಇರುವಂತೆ...

‘ಪಿಟಿಸಿಎಲ್‌ ಕಾಯ್ದೆ’ ಸಮರ್ಪಕ ಜಾರಿಗೆ ಆಗ್ರಹಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ

'ಪಿಟಿಸಿಎಲ್‌ (PTCL) ಕಾಯ್ದೆ' ಸಮರ್ಪಕ ಜಾರಿಗೆ ಆಗ್ರಹಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು 'ಪಿಟಿಸಿಎಲ್‌ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ' ಮುಖಂಡರು ಘೋಷಿಸಿದರು. ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ...

ರಾಜಸ್ಥಾನ| ‘ನೀವು ಕೆಳಜಾತಿಯವರು, ಎಲ್‌ಎಲ್‌ಬಿ ನಿಮಗೆ ಸೂಕ್ತವಲ್ಲ..’; ದಲಿತ ವಿದ್ಯಾರ್ಥಿನಿಗೆ ಪ್ರಾಧ್ಯಾಪಕರಿಂದ ಜಾತಿ ನಿಂದನೆ

ರಾಜಸ್ಥಾನದ ಚುರುವಿನ ಸರ್ಕಾರಿ ಕಾನೂನು ಕಾಲೇಜಿನ ಮೂರನೇ ಸೆಮಿಸ್ಟರ್ ದಲಿತ ಎಲ್‌ಎಲ್‌ಬಿ ವಿದ್ಯಾರ್ಥಿನಿಯೊಬ್ಬರು, ಇಬ್ಬರು ಪ್ರಾಧ್ಯಾಪಕರಿಂದ ಜಾತಿ ಆಧಾರಿತ ನಿಂದನೆ, ಬೆದರಿಕೆ ಮತ್ತು ತಾರತಮ್ಯ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಿದ್ದಾರೆ. ಎಸ್‌ಸಿ...

ಬೆಂಗಳೂರು: ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ: ಮಹಿಳೆ ಸಾವು, ಮೂವರ ರಕ್ಷಣೆ

ಬೆಂಗಳೂರು: ಸೋಮವಾರ ರಾತ್ರಿ ಉತ್ತರ ಬೆಂಗಳೂರಿನಲ್ಲಿರುವ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮೃತರನ್ನು 55 ವರ್ಷದ ಸವಿತಾ ಎಂದು ಗುರುತಿಸಲಾಗಿದೆ. ಅವರ ಪತಿ ಗುತ್ತಿಗೆದಾರ ರಮೇಶ್...

ಲಕ್ನೋ | 12 ವರ್ಷದ ಬಾಲಕ ಉನೈಝ್ ಗುಂಡೇಟಿಗೆ ಬಲಿ : ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದ ಕುಟುಂಬ

ಉತ್ತರ ಪ್ರದೇಶದ ಲಕ್ನೋದಲ್ಲಿ 12 ವರ್ಷದ ಬಾಲಕನೊಬ್ಬ ಗುಂಡೇಟಿನಿಂದ ಮೃತಪಟ್ಟಿದ್ದು, ಆತನನ್ನು ಕೊಲೆ ಮಾಡಲಾಗಿದೆ. ಕೃತ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ದೇಶದ ಗಮನ ಸೆಳೆದಿದ್ದು, ಸಾಮಾಜಿಕ...

ಕೇರಳ: ಪೊಲೀಸರ ‘ದುರುದ್ದೇಶಪೂರಿತ ಮೊಕದ್ದಮೆ’ಗಾಗಿ ನಿವೃತ್ತ ಸೇನಾ ಅಧಿಕಾರಿಗೆ ಕೇರಳ ನ್ಯಾಯಾಲಯದಿಂದ 5 ಲಕ್ಷ ರೂ. ಪರಿಹಾರ ಘೋಷಣೆ

ಕೊಲ್ಲಂ, ಕೇರಳ: ಪೊಲೀಸರ "ದುರುದ್ದೇಶಪೂರಿತ ಮೊಕದ್ದಮೆ"ಗಾಗಿ ನಿವೃತ್ತ ಸೇನಾ ಅಧಿಕಾರಿಯೊಬ್ಬರಿಗೆ ಕೇರಳ ನ್ಯಾಯಾಲಯವು 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ.  ಪ್ರಿನ್ಸಿಪಲ್ ಮುನ್ಸಿಫ್ ರಾಗಿ ಎಸ್. ಅವರು, 54 ವರ್ಷದ ನಿವೃತ್ತ ನಾಯಕ್ ಸುಬೇದಾರ್...

ಮಧ್ಯಪ್ರದೇಶ: ಇಂದೋರ್‌ನಲ್ಲಿ ಒಳಚರಂಡಿಗೆ ಇಳಿದು ಇಬ್ಬರು ಪೌರ ಕಾರ್ಮಿಕರು ಸಾವು: ವಿಷಕಾರಿ ಅನಿಲ ಶಂಕೆ

ಇಂದೋರ್‌ನ ಚೋಯಿತ್ರಮ್ ಆಸ್ಪತ್ರೆ ಬಳಿ ಸೋಮವಾರ ಒಳಚರಂಡಿ ಒಳಗೆ ಇಳಿದ ಕಾರಣ ಕರಣ್ ಮತ್ತು ಅಜಯ್ ಎಂದು ಗುರುತಿಸಲಾದ ಇಂದೋರ್ ಮಹಾನಗರ ಪಾಲಿಕೆಯ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ವಲಯ 13ರ...

‘ಅತೃಪ್ತ ಆತ್ಮಗಳ ಹತಾಶ ಹೇಳಿಕೆ’ : ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ....