Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತಥೂತ್ತೇರಿ: ರಾಜ್ಯೋತ್ಸವ ಪ್ರಶಸ್ತೀನ ರಸ್ತೆ ಮಾಡೋರಿಗೆ, ಮನೆಕಟ್ಟೋರಿಗೂ ಕೊಡ್ಬೇಕು ಕಣ್ರೀ...

ಥೂತ್ತೇರಿ: ರಾಜ್ಯೋತ್ಸವ ಪ್ರಶಸ್ತೀನ ರಸ್ತೆ ಮಾಡೋರಿಗೆ, ಮನೆಕಟ್ಟೋರಿಗೂ ಕೊಡ್ಬೇಕು ಕಣ್ರೀ…

- Advertisement -
- Advertisement -

ಯಾಹೂ |

ಮೋಹನ್‌ರಾಂ ಎಂಬ ತಿಕ್ಕಲು ಬ್ರಾಹ್ಮಣ ಲಂಕೇಶರಿಂದ ಉಗಿಸಿಕೊಂಡು ಹೋದ 36 ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡಿದ್ದಾನಂತಲ್ಲಾ. ಅಂದರೆ ಲಂಕೇಶ್ ಎಷ್ಟರ ಮಟ್ಟಿಗೆ ಉಗಿದಿರಬಹುದೆಂದು ವೇದ್ಯವಾಗುತ್ತದೆ. ಇಂತವನನ್ನು ನೋಡಿಯೇ ಏನೋ ದೇವನೂರು ಒಂದು ಕತೆ ಬರೆದಿದ್ದರು. ಮೋಹನ ಶಾಸ್ತ್ರಿ ಎಂಬ ಗುಮಾಸ್ತನಿದ್ದ. ಅವನ ಬಾಸು ಲಂಕೇಗೌಡ. ಈ ಲಂಕೇಗೌಡ ಗುಮಾಸ್ತನಿಗೆ ಕೆಟ್ಟದಾಗಿ ಬೈಯ್ಯುತ್ತಿದ್ದ. ಇದರಿಂದ ಸೇಡಿಗೆ ತುತ್ತಾದ ಮೋಹನಶಾಸ್ತ್ರಿ ಲಂಕೇಗೌಡನ ಸರ‍್ವಿಸ್ ರಿಜಿಸ್ಟರಿನಲ್ಲಿ ಗೌಡನ ಆಕಾರ ಬರೆದು ಮುಂದಿನ ಎರಡು ಹಲ್ಲಿಲ್ಲ ಎಂದು ಬರೆದು ನಿವೃತ್ತನಾಗಿದ್ದನಂತೆ. ಲಂಕೇಗೌಡ ನಿವೃತ್ತನಾಗುವಾಗ ಅನಿವಾರ್ಯವಾಗಿ ಎರಡಲ್ಲು ಕೀಳಿಸಿಕೊಂಡು ಪಿಂಚನಿ ಪಡೆದನಂತೆ. ನಮ್ಮ ನಡುವಿನ ಪುರೋಹಿತಶಾಹಿಗಳ ಪಿಂಡಗಳು ಆಂತರ್ಯದಲ್ಲಿ ಹೊಂದಿರುವ ಹಗೆ ಎಂತದ್ದು ಎಂಬುದನ್ನು ಹೇಳಲು ದೇವನೂರು ಈ ಕತೆಯನ್ನು ಪಂಚಮದಲ್ಲಿ ಬರೆದಿದ್ದರು. ಮೂವತ್ತಾರು ವರ್ಷಗಳ ನಂತರ ಲಂಕೇಶರ ಹಲ್ಲು ಎಣಿಸಿರುವ ಸದರಿ ಮೋಹನ್ ರಾಂ ಎಂಬುವನ ಬಗ್ಗೆ ಲಂಕೇಶ್ ಹೇಳಿದ್ದೇನೆಂದರೆ, ‘ಆತ ಸುಳ್ಳು ಬರೆಯುತ್ತಾನೆ, ಈಗತಾನೆ ಬಾಂಬೆಯಿಂದ ಬಂದೆ. ಅಮಿತಾ ಬಚ್ಚನ್ ಇಂಟ್ರೂ ಮಾಡಿದೆ ಎಂದು ಮನೆಯಲ್ಲಿ ಕುಳಿತು ಬರೆದು ತಂದಿದ್ದ ಅದಕ್ಕೆ ಓಡಿಸಿದೆ’ ಎಂದು ಹೇಳಿದ್ದರಲ್ಲಾ, ಥೂತ್ತೇರಿ.

* * * *

ಎಂದಿನಂತೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಪ್ರಕಟಣೆಗೊಂಡಿವೆ. ಸಮ್ಮಿಶ್ರ ಸರಕಾರವೊಂದು ನೇಮಿಸಿದ್ದ ಆಯ್ಕೆ ಸಮಿತಿಯ ಸದರಿ ವಿದ್ವಾಂಸರು ಆಯ್ಕೆ ಮಾಡಿದ ಪ್ರತಿಭಾವಂತರ ಬಗ್ಗೆ ಚಕಾರವೆತ್ತದ ಜಯಮಾಲ ಹಾಗು ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನೇನು ಅನುಮೋದನೆಯ ಸೀಲು ಒತ್ತಿ ಪತ್ರಿಕೆಗಳಿಗೆ ಬಿಡುಗಡೆ ಮಡಬೇಕೆನ್ನುವಷ್ಟರಲ್ಲಿ ಸದರಿ ಪಟ್ಟಿಯನ್ನು ಕಿತ್ತುಕೊಂಡ ಡಿ.ಕೆ.ಶಿವಕುಮಾರ್ ಎಂಬ ಕರ್ನಾಟಕ ರಾಜಕಾರಣದ ಸಮಸ್ಯೆ, ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅಂದ್ರೆ ಬರೀ ಸಾಹಿತಿಗಳು, ಜನಪದ ಕಲಾವಿದರಿಗಷ್ಟೇ ಕೊಡಬಾರ್ದು ಕಂಡ್ರೀ. ರಾಜಕಾರಣಿಗಳು, ನಮಗೆ ಪಾಠ ಹೇಳಿದ ಮೇಷ್ಟ್ರು, ನಮ್ಮ ಪರ ವಾದ ಮಾಡೋ ಲಾಯರ್‌ಗಳು, ರಸ್ತೆ ಮಾಡೋರು, ಮನೆಕಟ್ಟೋರನ್ನೂ ಪರಿಗಣಿಸಬೇಕು’ ಎಂದು ರಾಜ್ಯೋತ್ಸವ ಪಟ್ಟಿಯೊಳಕ್ಕೆ ತನ್ನ ಅಭಿರುಚಿಯನ್ನ ಸೇರಿಸಿದರಂತಲ್ಲಾ. ಆಗ ಮುಖ್ಯಮಂತ್ರಿಯಾಗಿ ಯಾರನ್ನು ಸೇರಿಸಲಾಗದ ಕುಮಾರಸ್ವಾಮಿ ಅನಿವಾರ್ಯವಾಗಿ ಡಿ.ಕೆ.ಸಿ. ಅಭಿರುಚಿಯನ್ನು ಮನ್ನಿಸಿದರಂತಲ್ಲಾ, ಥೂತ್ತೇರಿ.

* * * *

ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ತಮ್ಮ ಮಹತ್ವ ಕಳೆದುಕೊಂಡಿದ್ದು ಬಂಗಾರಪ್ಪನ ಕಾಲದಲ್ಲಂತಲ್ಲಾ. ಹಿಂದುಳಿದ ವರ್ಗದ ನಾಯಕರಾದ ಬಂ ಸಾಮಾಜಿಕ ನ್ಯಾಯವನ್ನು ರಾಜ್ಯೋತ್ಸವ ಪ್ರಶಸ್ತಿ ಮುಖಾಂತರ ಸರಿಮಾಡಲು ಹೋಗಿ ಪ್ರಶಸ್ತಿ ಹಂಚಿದ ಪರಿಗೆ ಬೆದರಿದ ಪತ್ರಕರ್ತರು ಇದೇನು ಸಾರ್ ಅನರ್ಹರಿಗೆಲ್ಲಾ ಪ್ರಶಸ್ತಿ ಕೊಟ್ಟರಲ್ಲ ಎಂದಾಗ ಅರ್ಹರಿಗೆ ಮುಂದಿನ ಬಾರಿ ಕೊಡೋಣ ಬಿಡಿ ಎಂದರು. ಅರ್ಹರ‍್ಯಾರು, ಅವರು ಪಡೆದ ಸವಲತ್ತುಗಳೇನು ಎಂಬುದು ’ಬಂ’ಗೆ ಗೊತ್ತಿತ್ತು. ಆ ನಂತರ ಬಂದ ಬಿ.ಜೆ.ಪಿ ಸರಕಾರದಲ್ಲಿ ಬಿಸಿಬೇಳೆ ಬಾತು ಮಾಡುವವರಿಗೆಲ್ಲಾ ಪ್ರಶಸ್ತಿಗಳು ಸಿಕ್ಕವು. ಒಂದೆರಡು ಕನ್ನಡ ರಾಜ್ಯೋತ್ಸವ ಮಾಡಿದವನಿಗೂ ಈಶ್ವರಪ್ಪ ಪ್ರಶಸ್ತಿ ಕೊಡಿಸಿದರೆ, ನಾನು ಈಶ್ವರಪ್ಪನಿಗೇನು ಕಡಿಮೆ ಎಂದು ಭಾವಿಸಿದ ಯಡೂರಪ್ಪನ ಮಗಳು ಮಾತುಮಾತಿಗು ತನ್ನನ್ನು ನಗಿಸುತ್ತಿದ್ದ ಹುಡುಗನಿಗೂ ಒಂದು ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿದಳು. ಅದೇ ತರಹ ಈಗೊಂದು ಪ್ರಶಸ್ತಿ ವ್ಯರ್ಥವಾಗಿ ಹೋಯ್ತು. ಪ್ರತಿಭಾವಂತರೊಬ್ಬರ ಕೈಯಿಂದ ಪ್ರಶಸ್ತಿ ಕಿತ್ತುಕೊಂಡ ಡಿ.ಕೆ.ಶಿ ಅದನ್ನ ಮಾರ್ಗರೇಟ್ ಆಳ್ವರಿಗೆ ಕೊಟ್ಟಿದ್ದಾರೆ. ಈ ಮಾಜಿ ರಾಜ್ಯಪಾಲೆ ನಿರಾಕರಿಸಬಹುದಿತ್ತು. ಎಲ್ಲರ ಬಳಿ ಘನತೆವೆತ್ತ ಗುಣ ಸುಳಿಯುವುದು ಕಡಿಮೆಯಂತಲ್ಲಾ, ಥೂತ್ತೇರಿ.

* * * *

ರಾಜ್ಯೋತ್ಸವ ಪ್ರಶಸ್ತಿ ವಿಷಯ ಬಿತ್ತರಿಸುವಲ್ಲಿ ಕೆಲವು ಪತ್ರಿಕೆಗಳು ಹರಾಜಾಗಿ ಹೋದವಂತಲ್ಲಾ ಉದಾಹರಣೆ ಕೊಡುವುದಾದರೆ, ಪ್ರಶಸ್ತಿಯ ಆಯ್ಕೆ ಸಮಿತಿಯೇ ರಚನೆಯಾಗಿಲ್ಲ ಎಂದು ಅವು ಕರೆಯುತ್ತಿದ್ದಾಗ ಆಯ್ಕೆ ಸಮಿತಿ ಕಲಾಗ್ರಾಮದಲ್ಲಿ ಆಯ್ಕೆಯಲ್ಲಿ ನಿರತವಾಗಿತ್ತು. ಎರಡೂ ಪಕ್ಷದ ಒತ್ತಡದಲ್ಲಿ ಕುಮಾರಸ್ವಾಮಿ ನಲುಗಿ ಹೋಗಿದ್ದಾರೆ ಎಂದು ಬರೆಯುತ್ತಿದ್ದಾಗ ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿದ್ದರು.

ಪ್ರಶಸ್ತಿ ಕೊಡುವ ಹಿಂದಿನ ದಿನ ಆಯ್ಕೆ ನಡೆಸಿ ಮರುದಿನ ವಿತರಿಸಲಾಗುವುದೆಂದು ಪತ್ರಿಕೆಗಳು ಬರೆಯುವಾಗ ಎರಡು ವಾರಗಳ ಆಯ್ಕೆ ಪರಿಶ್ರಮದಿಂದ ಮುಕ್ತವಾದ ಆಯ್ಕೆ ಸಮಿತಿ ಕುಮಾರಸ್ವಾಮಿಗೆ ತಮ್ಮ ವರದಿಕೊಟ್ಟಿತ್ತು. ಹೀಗೆ ಮನಸ್ಸಿಗೆ ಬಂದ ವರದಿ ಬರೆಯುತ್ತಿದ್ದ ಪತ್ರಿಕೆಗಳನ್ನು ಕಂಡು ನಗುವುದರ ಬದಲು ನಗಿಸಲಾಗುತ್ತಿತ್ತು. ಏಕೆಂದರೆ ಏನೊಂದೂ ಪರಿಶೀಲಿಸದೆ ಕುಳಿತಲ್ಲೇ ಒಂದು ಊಹಾತ್ಮಕ ವರದಿ ಬರೆದು ಕೊಡುವುದರಿಂದ ಅನಾಹುತಗಳು ಜರುಗುವ ಸಂಭವವಿರುತ್ತದೆ. ಪಬ್ಲಿಕ್ ಟಿವಿಯ ಕಡ್ಡಿ ರಂಗ ಚಿಕ್ಕಮಗಳೂರು ಡಿ.ವೈ.ಎಸ್.ಪಿ ವಿಷಯದಲ್ಲಿಯೂ ಹೀಗೆಯೇ ಸುಳ್ಳು ಸುದ್ದಿ ಬಿತ್ತರಿಸಿದ್ದ. ಅವರ ಆತ್ಮಹತ್ಯೆಗೆ ಕಾರಣನಾದವರು ನಮ್ಮ ಕಣ್ಣು ಮುಂದಿರುವುದರಿಂದ ಪತ್ರಕರ್ತರು ಆದಷ್ಟೂ ಕಣ್ಣು ಕಿವಿ ತೊಳೆಯುವುದೊಳ್ಳೆಯದಂತಲ್ಲಾ, ಥೂತ್ತೇರಿ.

* * * *

ಪ್ರಶಸ್ತಿಗಳ ಬಗ್ಗೆ ಮನಸ್ಸಿಗೆ ಬಂದ ಸುಳ್ಳು ಸುದ್ದಿ ಬರೆದ ಪತ್ರಿಕೆಗಳು ಆ ನಂತರ ತಮ್ಮ ಜವಾಬ್ದಾರಿಯ ಕಡೆ ಗಮನಹರಿಸಲಿಲ್ಲವಂತಲ್ಲಾ. ಆಯ್ಕೆಯಾದ ೬೩ ಜನರಲ್ಲಿನ ವೈವಿಧ್ಯಮಯ ಪ್ರತಿಭೆ ಬೆರಗು ಹುಟ್ಟಿಸುವಂತಿತ್ತು. ತಮ್ಮ ಕ್ಷೌರದ ಅಂಗಡಿಯಲ್ಲೇ ಸಮಾಜವಾದದ ಚಳುವಳಿ ರೂಪಿಸಿದ ರಾಚಪ್ಪ ಹಡಪದ. ಇವರನ್ನು ನೋಡಿ ಮಾತನಾಡಿಸಲು ತೇಜಸ್ವಿ ಸ್ಕೂಟರಿನಲ್ಲೇ ಹೋಗಿದ್ದರಂತೆ. ಇನ್ನು ಕೈಗೆ ಕಾಸು ಸಿಕ್ಕ ಕೂಡಲೇ ಕೆರೆ, ಚೆಕ್ ಡ್ಯಾಂ ಕಟ್ಟುವ ಕಲ್ಮನೆ ಕಾಮೇಗೌಡ, ಆ ಕಾಲಕ್ಕೆ ಕ್ರಾಂತಿ ಮಾಡಿದ ಅಮ್ಮೆಂಬಳ ಆನಂದ, ಜನಪದ ನಿಧಿ ಗುಲ್ಬರ್ಗದ ಶಂಕ್ರಮ್ಮ ಇಂತಹ ಇತಿಹಾಸಗಳನ್ನ ಕೆದಕಿದರೆ ಸಾಕು, ಸಾರ್ಥಕ ಬದುಕೊಂದು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಹೊಸ ತಲೆಮಾರಿಗೆ ಇವರ ಬದುಕು ಸ್ಪೂರ್ತಿ ನೀಡಬಲ್ಲದು. ಇವರ ಪ್ರತಿಭೆ ಪ್ರಭಾವ ಬೀರಬಹುದು. ಇದಾವುದನ್ನು ಗ್ರಹಿಸದೆ ಕೇವಲ ಅವರ ಹೆಸರುಗಳನ್ನಷ್ಟೇ ಪ್ರಕಟಿಸಿ ಕೈತೊಳೆದುಕೊಂಡ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಸತ್ತು ಎಷ್ಟೋ ವರ್ಷಗಳಾಗಿವೆಯಂತಲ್ಲಾ. ವಿಶೇಷವೆಂದರೆ, ಸಾಂಸ್ಕೃತಿಕವಾಗಿ ಸತ್ತಂತಿರುವ ಈ ಮಾಧ್ಯಮಗಳ ವಿಷಯದಲ್ಲಿ ಜನರೂ ಕೂಡ ನಿರ್ಲಕ್ಷ್ಯದಿಂದಿದ್ದಾರಂತಲ್ಲಾ, ಥೂತ್ತೇರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...