Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತಥೂತ್ತೇರಿ: ರಾಜ್ಯೋತ್ಸವ ಪ್ರಶಸ್ತೀನ ರಸ್ತೆ ಮಾಡೋರಿಗೆ, ಮನೆಕಟ್ಟೋರಿಗೂ ಕೊಡ್ಬೇಕು ಕಣ್ರೀ...

ಥೂತ್ತೇರಿ: ರಾಜ್ಯೋತ್ಸವ ಪ್ರಶಸ್ತೀನ ರಸ್ತೆ ಮಾಡೋರಿಗೆ, ಮನೆಕಟ್ಟೋರಿಗೂ ಕೊಡ್ಬೇಕು ಕಣ್ರೀ…

- Advertisement -
- Advertisement -

ಯಾಹೂ |

ಮೋಹನ್‌ರಾಂ ಎಂಬ ತಿಕ್ಕಲು ಬ್ರಾಹ್ಮಣ ಲಂಕೇಶರಿಂದ ಉಗಿಸಿಕೊಂಡು ಹೋದ 36 ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡಿದ್ದಾನಂತಲ್ಲಾ. ಅಂದರೆ ಲಂಕೇಶ್ ಎಷ್ಟರ ಮಟ್ಟಿಗೆ ಉಗಿದಿರಬಹುದೆಂದು ವೇದ್ಯವಾಗುತ್ತದೆ. ಇಂತವನನ್ನು ನೋಡಿಯೇ ಏನೋ ದೇವನೂರು ಒಂದು ಕತೆ ಬರೆದಿದ್ದರು. ಮೋಹನ ಶಾಸ್ತ್ರಿ ಎಂಬ ಗುಮಾಸ್ತನಿದ್ದ. ಅವನ ಬಾಸು ಲಂಕೇಗೌಡ. ಈ ಲಂಕೇಗೌಡ ಗುಮಾಸ್ತನಿಗೆ ಕೆಟ್ಟದಾಗಿ ಬೈಯ್ಯುತ್ತಿದ್ದ. ಇದರಿಂದ ಸೇಡಿಗೆ ತುತ್ತಾದ ಮೋಹನಶಾಸ್ತ್ರಿ ಲಂಕೇಗೌಡನ ಸರ‍್ವಿಸ್ ರಿಜಿಸ್ಟರಿನಲ್ಲಿ ಗೌಡನ ಆಕಾರ ಬರೆದು ಮುಂದಿನ ಎರಡು ಹಲ್ಲಿಲ್ಲ ಎಂದು ಬರೆದು ನಿವೃತ್ತನಾಗಿದ್ದನಂತೆ. ಲಂಕೇಗೌಡ ನಿವೃತ್ತನಾಗುವಾಗ ಅನಿವಾರ್ಯವಾಗಿ ಎರಡಲ್ಲು ಕೀಳಿಸಿಕೊಂಡು ಪಿಂಚನಿ ಪಡೆದನಂತೆ. ನಮ್ಮ ನಡುವಿನ ಪುರೋಹಿತಶಾಹಿಗಳ ಪಿಂಡಗಳು ಆಂತರ್ಯದಲ್ಲಿ ಹೊಂದಿರುವ ಹಗೆ ಎಂತದ್ದು ಎಂಬುದನ್ನು ಹೇಳಲು ದೇವನೂರು ಈ ಕತೆಯನ್ನು ಪಂಚಮದಲ್ಲಿ ಬರೆದಿದ್ದರು. ಮೂವತ್ತಾರು ವರ್ಷಗಳ ನಂತರ ಲಂಕೇಶರ ಹಲ್ಲು ಎಣಿಸಿರುವ ಸದರಿ ಮೋಹನ್ ರಾಂ ಎಂಬುವನ ಬಗ್ಗೆ ಲಂಕೇಶ್ ಹೇಳಿದ್ದೇನೆಂದರೆ, ‘ಆತ ಸುಳ್ಳು ಬರೆಯುತ್ತಾನೆ, ಈಗತಾನೆ ಬಾಂಬೆಯಿಂದ ಬಂದೆ. ಅಮಿತಾ ಬಚ್ಚನ್ ಇಂಟ್ರೂ ಮಾಡಿದೆ ಎಂದು ಮನೆಯಲ್ಲಿ ಕುಳಿತು ಬರೆದು ತಂದಿದ್ದ ಅದಕ್ಕೆ ಓಡಿಸಿದೆ’ ಎಂದು ಹೇಳಿದ್ದರಲ್ಲಾ, ಥೂತ್ತೇರಿ.

* * * *

ಎಂದಿನಂತೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಪ್ರಕಟಣೆಗೊಂಡಿವೆ. ಸಮ್ಮಿಶ್ರ ಸರಕಾರವೊಂದು ನೇಮಿಸಿದ್ದ ಆಯ್ಕೆ ಸಮಿತಿಯ ಸದರಿ ವಿದ್ವಾಂಸರು ಆಯ್ಕೆ ಮಾಡಿದ ಪ್ರತಿಭಾವಂತರ ಬಗ್ಗೆ ಚಕಾರವೆತ್ತದ ಜಯಮಾಲ ಹಾಗು ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನೇನು ಅನುಮೋದನೆಯ ಸೀಲು ಒತ್ತಿ ಪತ್ರಿಕೆಗಳಿಗೆ ಬಿಡುಗಡೆ ಮಡಬೇಕೆನ್ನುವಷ್ಟರಲ್ಲಿ ಸದರಿ ಪಟ್ಟಿಯನ್ನು ಕಿತ್ತುಕೊಂಡ ಡಿ.ಕೆ.ಶಿವಕುಮಾರ್ ಎಂಬ ಕರ್ನಾಟಕ ರಾಜಕಾರಣದ ಸಮಸ್ಯೆ, ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅಂದ್ರೆ ಬರೀ ಸಾಹಿತಿಗಳು, ಜನಪದ ಕಲಾವಿದರಿಗಷ್ಟೇ ಕೊಡಬಾರ್ದು ಕಂಡ್ರೀ. ರಾಜಕಾರಣಿಗಳು, ನಮಗೆ ಪಾಠ ಹೇಳಿದ ಮೇಷ್ಟ್ರು, ನಮ್ಮ ಪರ ವಾದ ಮಾಡೋ ಲಾಯರ್‌ಗಳು, ರಸ್ತೆ ಮಾಡೋರು, ಮನೆಕಟ್ಟೋರನ್ನೂ ಪರಿಗಣಿಸಬೇಕು’ ಎಂದು ರಾಜ್ಯೋತ್ಸವ ಪಟ್ಟಿಯೊಳಕ್ಕೆ ತನ್ನ ಅಭಿರುಚಿಯನ್ನ ಸೇರಿಸಿದರಂತಲ್ಲಾ. ಆಗ ಮುಖ್ಯಮಂತ್ರಿಯಾಗಿ ಯಾರನ್ನು ಸೇರಿಸಲಾಗದ ಕುಮಾರಸ್ವಾಮಿ ಅನಿವಾರ್ಯವಾಗಿ ಡಿ.ಕೆ.ಸಿ. ಅಭಿರುಚಿಯನ್ನು ಮನ್ನಿಸಿದರಂತಲ್ಲಾ, ಥೂತ್ತೇರಿ.

* * * *

ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ತಮ್ಮ ಮಹತ್ವ ಕಳೆದುಕೊಂಡಿದ್ದು ಬಂಗಾರಪ್ಪನ ಕಾಲದಲ್ಲಂತಲ್ಲಾ. ಹಿಂದುಳಿದ ವರ್ಗದ ನಾಯಕರಾದ ಬಂ ಸಾಮಾಜಿಕ ನ್ಯಾಯವನ್ನು ರಾಜ್ಯೋತ್ಸವ ಪ್ರಶಸ್ತಿ ಮುಖಾಂತರ ಸರಿಮಾಡಲು ಹೋಗಿ ಪ್ರಶಸ್ತಿ ಹಂಚಿದ ಪರಿಗೆ ಬೆದರಿದ ಪತ್ರಕರ್ತರು ಇದೇನು ಸಾರ್ ಅನರ್ಹರಿಗೆಲ್ಲಾ ಪ್ರಶಸ್ತಿ ಕೊಟ್ಟರಲ್ಲ ಎಂದಾಗ ಅರ್ಹರಿಗೆ ಮುಂದಿನ ಬಾರಿ ಕೊಡೋಣ ಬಿಡಿ ಎಂದರು. ಅರ್ಹರ‍್ಯಾರು, ಅವರು ಪಡೆದ ಸವಲತ್ತುಗಳೇನು ಎಂಬುದು ’ಬಂ’ಗೆ ಗೊತ್ತಿತ್ತು. ಆ ನಂತರ ಬಂದ ಬಿ.ಜೆ.ಪಿ ಸರಕಾರದಲ್ಲಿ ಬಿಸಿಬೇಳೆ ಬಾತು ಮಾಡುವವರಿಗೆಲ್ಲಾ ಪ್ರಶಸ್ತಿಗಳು ಸಿಕ್ಕವು. ಒಂದೆರಡು ಕನ್ನಡ ರಾಜ್ಯೋತ್ಸವ ಮಾಡಿದವನಿಗೂ ಈಶ್ವರಪ್ಪ ಪ್ರಶಸ್ತಿ ಕೊಡಿಸಿದರೆ, ನಾನು ಈಶ್ವರಪ್ಪನಿಗೇನು ಕಡಿಮೆ ಎಂದು ಭಾವಿಸಿದ ಯಡೂರಪ್ಪನ ಮಗಳು ಮಾತುಮಾತಿಗು ತನ್ನನ್ನು ನಗಿಸುತ್ತಿದ್ದ ಹುಡುಗನಿಗೂ ಒಂದು ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿದಳು. ಅದೇ ತರಹ ಈಗೊಂದು ಪ್ರಶಸ್ತಿ ವ್ಯರ್ಥವಾಗಿ ಹೋಯ್ತು. ಪ್ರತಿಭಾವಂತರೊಬ್ಬರ ಕೈಯಿಂದ ಪ್ರಶಸ್ತಿ ಕಿತ್ತುಕೊಂಡ ಡಿ.ಕೆ.ಶಿ ಅದನ್ನ ಮಾರ್ಗರೇಟ್ ಆಳ್ವರಿಗೆ ಕೊಟ್ಟಿದ್ದಾರೆ. ಈ ಮಾಜಿ ರಾಜ್ಯಪಾಲೆ ನಿರಾಕರಿಸಬಹುದಿತ್ತು. ಎಲ್ಲರ ಬಳಿ ಘನತೆವೆತ್ತ ಗುಣ ಸುಳಿಯುವುದು ಕಡಿಮೆಯಂತಲ್ಲಾ, ಥೂತ್ತೇರಿ.

* * * *

ರಾಜ್ಯೋತ್ಸವ ಪ್ರಶಸ್ತಿ ವಿಷಯ ಬಿತ್ತರಿಸುವಲ್ಲಿ ಕೆಲವು ಪತ್ರಿಕೆಗಳು ಹರಾಜಾಗಿ ಹೋದವಂತಲ್ಲಾ ಉದಾಹರಣೆ ಕೊಡುವುದಾದರೆ, ಪ್ರಶಸ್ತಿಯ ಆಯ್ಕೆ ಸಮಿತಿಯೇ ರಚನೆಯಾಗಿಲ್ಲ ಎಂದು ಅವು ಕರೆಯುತ್ತಿದ್ದಾಗ ಆಯ್ಕೆ ಸಮಿತಿ ಕಲಾಗ್ರಾಮದಲ್ಲಿ ಆಯ್ಕೆಯಲ್ಲಿ ನಿರತವಾಗಿತ್ತು. ಎರಡೂ ಪಕ್ಷದ ಒತ್ತಡದಲ್ಲಿ ಕುಮಾರಸ್ವಾಮಿ ನಲುಗಿ ಹೋಗಿದ್ದಾರೆ ಎಂದು ಬರೆಯುತ್ತಿದ್ದಾಗ ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿದ್ದರು.

ಪ್ರಶಸ್ತಿ ಕೊಡುವ ಹಿಂದಿನ ದಿನ ಆಯ್ಕೆ ನಡೆಸಿ ಮರುದಿನ ವಿತರಿಸಲಾಗುವುದೆಂದು ಪತ್ರಿಕೆಗಳು ಬರೆಯುವಾಗ ಎರಡು ವಾರಗಳ ಆಯ್ಕೆ ಪರಿಶ್ರಮದಿಂದ ಮುಕ್ತವಾದ ಆಯ್ಕೆ ಸಮಿತಿ ಕುಮಾರಸ್ವಾಮಿಗೆ ತಮ್ಮ ವರದಿಕೊಟ್ಟಿತ್ತು. ಹೀಗೆ ಮನಸ್ಸಿಗೆ ಬಂದ ವರದಿ ಬರೆಯುತ್ತಿದ್ದ ಪತ್ರಿಕೆಗಳನ್ನು ಕಂಡು ನಗುವುದರ ಬದಲು ನಗಿಸಲಾಗುತ್ತಿತ್ತು. ಏಕೆಂದರೆ ಏನೊಂದೂ ಪರಿಶೀಲಿಸದೆ ಕುಳಿತಲ್ಲೇ ಒಂದು ಊಹಾತ್ಮಕ ವರದಿ ಬರೆದು ಕೊಡುವುದರಿಂದ ಅನಾಹುತಗಳು ಜರುಗುವ ಸಂಭವವಿರುತ್ತದೆ. ಪಬ್ಲಿಕ್ ಟಿವಿಯ ಕಡ್ಡಿ ರಂಗ ಚಿಕ್ಕಮಗಳೂರು ಡಿ.ವೈ.ಎಸ್.ಪಿ ವಿಷಯದಲ್ಲಿಯೂ ಹೀಗೆಯೇ ಸುಳ್ಳು ಸುದ್ದಿ ಬಿತ್ತರಿಸಿದ್ದ. ಅವರ ಆತ್ಮಹತ್ಯೆಗೆ ಕಾರಣನಾದವರು ನಮ್ಮ ಕಣ್ಣು ಮುಂದಿರುವುದರಿಂದ ಪತ್ರಕರ್ತರು ಆದಷ್ಟೂ ಕಣ್ಣು ಕಿವಿ ತೊಳೆಯುವುದೊಳ್ಳೆಯದಂತಲ್ಲಾ, ಥೂತ್ತೇರಿ.

* * * *

ಪ್ರಶಸ್ತಿಗಳ ಬಗ್ಗೆ ಮನಸ್ಸಿಗೆ ಬಂದ ಸುಳ್ಳು ಸುದ್ದಿ ಬರೆದ ಪತ್ರಿಕೆಗಳು ಆ ನಂತರ ತಮ್ಮ ಜವಾಬ್ದಾರಿಯ ಕಡೆ ಗಮನಹರಿಸಲಿಲ್ಲವಂತಲ್ಲಾ. ಆಯ್ಕೆಯಾದ ೬೩ ಜನರಲ್ಲಿನ ವೈವಿಧ್ಯಮಯ ಪ್ರತಿಭೆ ಬೆರಗು ಹುಟ್ಟಿಸುವಂತಿತ್ತು. ತಮ್ಮ ಕ್ಷೌರದ ಅಂಗಡಿಯಲ್ಲೇ ಸಮಾಜವಾದದ ಚಳುವಳಿ ರೂಪಿಸಿದ ರಾಚಪ್ಪ ಹಡಪದ. ಇವರನ್ನು ನೋಡಿ ಮಾತನಾಡಿಸಲು ತೇಜಸ್ವಿ ಸ್ಕೂಟರಿನಲ್ಲೇ ಹೋಗಿದ್ದರಂತೆ. ಇನ್ನು ಕೈಗೆ ಕಾಸು ಸಿಕ್ಕ ಕೂಡಲೇ ಕೆರೆ, ಚೆಕ್ ಡ್ಯಾಂ ಕಟ್ಟುವ ಕಲ್ಮನೆ ಕಾಮೇಗೌಡ, ಆ ಕಾಲಕ್ಕೆ ಕ್ರಾಂತಿ ಮಾಡಿದ ಅಮ್ಮೆಂಬಳ ಆನಂದ, ಜನಪದ ನಿಧಿ ಗುಲ್ಬರ್ಗದ ಶಂಕ್ರಮ್ಮ ಇಂತಹ ಇತಿಹಾಸಗಳನ್ನ ಕೆದಕಿದರೆ ಸಾಕು, ಸಾರ್ಥಕ ಬದುಕೊಂದು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಹೊಸ ತಲೆಮಾರಿಗೆ ಇವರ ಬದುಕು ಸ್ಪೂರ್ತಿ ನೀಡಬಲ್ಲದು. ಇವರ ಪ್ರತಿಭೆ ಪ್ರಭಾವ ಬೀರಬಹುದು. ಇದಾವುದನ್ನು ಗ್ರಹಿಸದೆ ಕೇವಲ ಅವರ ಹೆಸರುಗಳನ್ನಷ್ಟೇ ಪ್ರಕಟಿಸಿ ಕೈತೊಳೆದುಕೊಂಡ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಸತ್ತು ಎಷ್ಟೋ ವರ್ಷಗಳಾಗಿವೆಯಂತಲ್ಲಾ. ವಿಶೇಷವೆಂದರೆ, ಸಾಂಸ್ಕೃತಿಕವಾಗಿ ಸತ್ತಂತಿರುವ ಈ ಮಾಧ್ಯಮಗಳ ವಿಷಯದಲ್ಲಿ ಜನರೂ ಕೂಡ ನಿರ್ಲಕ್ಷ್ಯದಿಂದಿದ್ದಾರಂತಲ್ಲಾ, ಥೂತ್ತೇರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...