Homeಪ್ರಪಂಚಸರ್ವಾಧಿಕಾರಿ ಘಟಸರ್ಪಗಳು: ಅಳಿಸಲೂ, ಉಳಿಸಲೂ ನೂರೆಂಟು ನೆಪ

ಸರ್ವಾಧಿಕಾರಿ ಘಟಸರ್ಪಗಳು: ಅಳಿಸಲೂ, ಉಳಿಸಲೂ ನೂರೆಂಟು ನೆಪ

- Advertisement -
- Advertisement -

ನಿಖಿಲ್ ಕೋಲ್ಪೆ |

ಹಲವಾರು ದೇಶಗಳಲ್ಲಿ ಸರ್ವಾಧಿಕಾರಿ ಆಡಳಿತಗಳು ಜನರನ್ನು ಹಿಂಡಿ ಹಿಪ್ಪೆ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಬಂಡವಾಳಶಾಹಿ ಸಿರಿವಂತ ರಾಷ್ಟ್ರಗಳು ಕೆಲವು ಕಡೆ ಕುರುಡುಗಣ್ಣು ಬೀರಿದರೆ, ಕೆಲವು ದೇಶಗಳಲ್ಲಿ ಮಿಲಿಟರಿ ಮಧ್ಯ ಪ್ರವೇಶ ಮಾಡಿ ಕೈಗೊಂಬೆ ಸರಕಾರಗಳನ್ನು ಸ್ಥಾಪಿಸಿದೆ ಇಲ್ಲವೇ ಅವುಗಳಲ್ಲಿ ಅರಾಜಕತೆಯನ್ನು ಪೋಷಿಸಿವೆ. ಇದಕ್ಕೆ ಇರುವ ಮಾನದಂಡವೇನು?

ಸೋವಿಯತ್ ಒಕ್ಕೂಟವು ಪ್ರಬಲವಾಗಿದ್ದಾಗ ಇದ್ದ ಮಾನದಂಡ ಒಂದೇ! ಅದೆಂದರೆ, ಕಮ್ಯೂನಿಸ್ಟ್ ಸರಕಾರಗಳು, ಎಡ ಚಿಂತನೆಯ ಸರಕಾರಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು. ಇದ್ದಲ್ಲಿ ಅವುಗಳನ್ನು ಉರುಳಿಸಲು ಪ್ರಚೋದನೆ ಮತ್ತು ಬೆಂಬಲ ನೀಡುವುದು.

ಸಂಪತ್ತಿನ ನಿಯಂತ್ರಣಕ್ಕಾಗಿ ಮತ್ತು ಸ್ವಹಿತಾಸಕ್ತಿಯ ರಕ್ಷಣೆಗಾಗಿ ನೇರ ಮಿಲಿಟರಿ ಕಾರ್ಯಾಚರಣೆ ನಡೆಸುವ ಬಂಡವಾಳಶಾಹಿ ತನಗೆ ಲಾಭವಿಲ್ಲದ ಕಡೆಗಳಲ್ಲಿ ಎಂತಹ ದಮನಕಾರಿ ಸರಕಾರಗಳಿದ್ದರೂ ಕಣ್ಣುಮುಚ್ಚಿ ಕುಳಿತಿದೆ. ಯುಎಸ್‌ಎಯಂತಹ ದೇಶ ಮತ್ತು ದೊಡ್ಡಣ್ಣನ ತಮ್ಮಂದಿರಂತೆ ವರ್ತಿಸುವ ನ್ಯಾಟೋ ದೇಶಗಳು ಮಧ್ಯ ಪ್ರವೇಶ ಮಾಡದ ದೇಶಗಳೇ ಬಹುತೇಕ ಇಲ್ಲ ಎನ್ನಬಹುದು.

ಸುಮ್ಮನೇ ಪ್ರಪಂಚದ ಕೆಲವು ದೇಶಗಳನ್ನು ಹೆಸರಿಸಿದರೂ ಸಾಕು ಅಲ್ಲಿ ದೊಡ್ಡಣ್ಣನ ಮಧ್ಯಪ್ರವೇಶ ನಡೆದಿದೆ; ಸರ್ವಾಧಿಕಾರಗಳಿಗೆ ಪ್ರಜಾಪ್ರಭುತ್ವದ ರಕ್ಷಕರೆನ್ನುವ ರಾಷ್ಟ್ರಗಳು ಬೆಂಬಲ ನೀಡಿವೆ. ಉದಾಹರಣೆಗೆ ಮಧ್ಯ ಅಮೇರಿಕಾದ ನಿಕರಾಗುವ, ಹೊಂಡುರಾಸ್, ಪನಾಮಾ, ಗ್ವಾಟೆಮಾಲಾ, ಮೆಕ್ಸಿಕೋ, ಎಲ್ ಸಾಲ್ವದೋರ್, ಲ್ಯಾಟಿನ್ ಅಮೇರಿಕಾದ ಚಿಲಿ, ಅರ್ಜೆಂಟೀನಾ, ಕ್ಯೂಬಾ, ಗ್ರೆನೆಡಾ, ಪೆರು, ಬೊಲಿವಿಯಾ, ವೆನಿಜ್ಯುವೆಲಾ… ಆಫ್ರಿಕಾ ಅಂಗೋಲ, ಕಾಂಗೋ, ನಮೀಬಿಯಾ, ಮೊಜಾಂಬಿಕ್, ಈಜಿಪ್ಟ್, ಲಿಬಿಯಾ… ಏಷ್ಯಾದ ವಿಯೆಟ್ನಾಂ, ಕಾಂಬೋಡಿಯ, ಫಿಲಿಪೈನ್ಸ್, ಫಿಜಿ, ಸಿರಿಯಾ, ಯೆಮೆನ್, ಇರಾನ್, ಇರಾಕ್, ಅಫ್ಘಾನಿಸ್ತಾನ… ಯುರೋಪಿನ ಯುಗೋಸ್ಲಾವಿಯಾ, ಜೆಕೋಸ್ಲಾವಾಕಿಯಾ…. ಹೀಗೆ ಯಾವುದೇ ದೇಶದ ಮಟ್ಟಿಗೆ ನೋಡಿದರೂ ಈ ಮಾತು ಸತ್ಯ.

ತನಗೆ ಲಾಭವಿಲ್ಲದ ದೇಶಗಳಲ್ಲಿ ನಡೆದ ರಕ್ತಪಾತಗಳಿಗೆ ಕುರುಡು ಕಿವುಡಾಗಿರುವುದಕ್ಕೆ ಉದಾಹರಣೆಯಾಗಿ ಉಗಾಂಡದ ಇದಿ ಅಮೀನನಂತಹ ನರರಾಕ್ಷಸನನ್ನು ಸಹಿಸಿಕೊಂಡು ಕುಳಿತದ್ದನ್ನು ನೆನಪಿಸಬಹುದು. ನಂತರದ ಉದಾಹರಣೆ ಬೇಕೆಂದರೆ ರುವಾಂಡದ ಹುಟು-ತುತ್ಸಿ ಬುಡಕಟ್ಟುಗಳ ಸಂಘರ್ಷದಲ್ಲಿ ಯುಎಸ್‌ಎ ಮತ್ತು ನ್ಯಾಟೋ ದೇಶಗಳ ಪಾತ್ರವನ್ನು ನೋಡಬಹುದು. ಹಿಂದೆ ಅಲ್ಲಿ ಅಲ್ಪಸಂಖ್ಯಾತ ತುತ್ಸಿಗಳ ಆಡಳಿತವಿತ್ತು. ನಂತರ ಹಲವಾರು ವರ್ಷಗಳ ಸಂಘರ್ಷದ ಬಳಿಕ ಬಹುಸಂಖ್ಯಾತ ಹುಟುಗಳ ಕೈಮೇಲಾಯಿತು. ನೆಪಮಾತ್ರಕ್ಕೆ ನ್ಯಾಟೋ ಒಂದು ಶಾಂತಿಪಾಲನಾ ಪಡೆ ಕಳಿಸಿತು. ಬಡದೇಶವಾದ ರುವಾಂಡದಲ್ಲಿ ಏನೇ ನಡೆದರೂ ಅದಕ್ಕೇನು ದೊಡ್ಡ ಆಸಕ್ತಿ ಇರಲಿಲ್ಲ. ತೊಂಬತ್ತರ ದಶಕದ ಮಧ್ಯ ಭಾಗದಲ್ಲಿ ಹುಟುಗಳು ಯೋಜಿತ ರೀತಿಯಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ತುತ್ಸಿಗಳ ಹತ್ಯಾಕಾಂಡ ನಡೆಸಿದರು. ಒಂದೇ ವಾರದಲ್ಲಿ ಹೆಂಗಸರು ಮಕ್ಕಳೆನ್ನದೆ ಸುಮಾರು ಹತ್ತು ಲಕ್ಷದಷ್ಟು ತುತ್ಸಿಗಳನ್ನು ಹಾದಿಬೀದಿಗಳಲ್ಲಿ ಮಚ್ಚುಗಳಿಂದ ಕೊಚ್ಚಿ ಕೊಲ್ಲಲಾಯಿತು. ಇಂತಹ ಹತ್ಯಾಕಾಂಡದ ಪೂರ್ವಸೂಚನೆ ಇದ್ದರೂ ನ್ಯಾಟೋ ಆಗಲೀ ವಿಶ್ವಸಂಸ್ಥೆಯಾಗಲೀ ಏನೂ ಮಾಡದೆ ಮೂಲ ಪ್ರೇಕ್ಷಕರಂತೆ ಕುಳಿತವು. ಯಾವ ಪ್ರಜಾಪ್ರಭುತ್ವದ ಆತ್ಮಸಾಕ್ಷಿಯೂ ಕಲಕಲಿಲ್ಲ! ನಾಝಿಗಳ ಬಳಿಕ ಇಷ್ಟು ದೊಡ್ಡ ಹತ್ಯಾಕಾಂಡ ಬೇರೆ ನಡೆದಿಲ್ಲ! ಈ ಘಟನೆ ಹೆಚ್ಚಿನ ಪ್ರಚಾರಕ್ಕೂ ಬರಲಿಲ್ಲ. ‘ಹೊಟೇಲ್ ರುವಾಂಡ’ ಎಂಬ ಚಿತ್ರದಲ್ಲಿ ಇದರ ಕ್ರೂರ ಚಿತ್ರಣ ಸಿಗುತ್ತದೆ. ಅದರಂತೆ ವಜ್ರಗಳಿಗಾಗಿ ಸಿಯರಾ ಲಿಯೋನ್‌ನಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ಲಿಯೊನಾರ್ಡೊ ಡಿ ಕ್ಯಾಪ್ರಿಯೋ ನಟಿಸಿರುವ ‘ಬ್ಲಡ್ ಡೈಮಂಡ್’ ಚಿತ್ರದಲ್ಲಿ ನೋಡಬಹುದು.

ಅದರೆ, ತನಗೆ ಲಾಭ ಇರುವ ಕಡೆ ಬಂಡವಾಳಶಾಹಿಗಳು ಹೇಗೆ ಮಧ್ಯಪ್ರವೇಶ ಮಾಡುತ್ತಾರೆ ಎಂಬುದನ್ನು ತೈಲಸಂಪನ್ನ ರಾಷ್ಟ್ರಗಳಲ್ಲಿ ನೋಡಬಹುದು. ದಶಕಗಳ ಹಿಂದೆ ಇರಾನಿನ ಲೋಲುಪ ಸರ್ವಾಧಿಕಾರಿ ಶಾನನ್ನು ಪಾಶ್ಚಾತ್ಯರು ತೈಲಕ್ಕಾಗಿ ಬೆಂಬಲಿಸಿದ್ದರು. ಆಗ ಪ್ರಜಾಪ್ರಭುತ್ವ ಅವರಿಗೆ ಮುಖ್ಯವೆನಿಸಲಿಲ್ಲ. ನಂತರ ಅಯಾತೊಲ್ಲಾ ಖೊಮೇನಿ ನೇತೃತ್ವದಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆದಾಗ ಮಾತ್ರ ಅದು ನೆನಪಿಗೆ ಬಂತು. ಇದು ಮುಂದೆ ಇರಾಕ್, ಲಿಬಿಯಾ, ಈಜಿಪ್ಟ್, ಯೆಮೆನ್, ಆಫಘಾನಿಸ್ತಾನ ಮುಂತಾದ ದೇಶಗಳಲ್ಲಿ ಮರುಕಳಿಸಿತು. ಇರಾನ್- ಇರಾಕ್ ಯುದ್ಧದಲ್ಲಿ ಯುಎಸ್‌ಎಯ ಪಾತ್ರವೇನು ಎಂಬುದು ಎಲ್ಲರಿಗೂ ಗೊತ್ತು. ಕಾರಣ ಅಥವಾ ನೆಪ ಪ್ರಜಾಪ್ರಭುತ್ವವೂ ಅಲ್ಲ ಸರ್ವಾಧಿಕಾರವೂ ಅಲ್ಲ. ಬದಲಾಗಿ ತೈಲ ಸಂಪತ್ತು.

ಈ ರೀತಿಯಾಗಿ ದೊಡ್ಡಣ್ಣನ ಮೂಗು ತೂರಿಸುವ ಕೆಲಸವೇ ಜಾಗತಿಕ ಭಯೋತ್ಪಾದನೆಗೆ ಮೂಲಕಾರಣ ಎಂದು ಎಲ್ಲರಿಗೂ ಗೊತ್ತು. ಈಗ ಶ್ರೀಮಂತ ದೇಶವಾಗಿರುವ ಸೌದಿ ಅರೇಬಿಯಾದಲ್ಲಿ ತೈಲ ಪತ್ತೆಯಾಗುವ ತನಕ ಅದು ಬಡ ರಾಷ್ಟ್ರವೇ ಆಗಿತ್ತು. ಯುಎಇ ಕತೆಯೂ ಅಷ್ಟೇ. ಆಗ ಲಾಭಕ್ಕಾಗಿ ತನ್ನ ತಂvಜ್ಞಾನದ ಬಲ ಉಪಯೋಗಿಸಿದ ಯುಎಸ್‌ಎ ಅಲ್ಲಿ ಬಹುರಾಷ್ಟ್ರೀಯ ಕಂಪೆನಿ ‘ಅರ್ಮಾಕೋ’ವನ್ನು ಸ್ಥಾಪಿಸಿತು. ಇಂತಹ ವ್ಯಾಪಾರಿ ಹಿತಾಸಕ್ತಿಗಳೇ ಪ್ರಜಾಪ್ರಭುತ್ವ ಇರಲಿ, ಸರ್ವಾಧಿಕಾರ ಇರಲಿ, ರಾಜಸತ್ತೆಯೇ ಇರಲಿ ಎಲ್ಲಾ ಪ್ರಭುತ್ವಗಳನ್ನು ಬಂಡವಾಳಶಾಹಿಯೇ ನಿಯಂತ್ರಿಸುತ್ತಾ ಬಂದಿದೆ. ಇದೇ ಸ್ವಯಂಘೋಷಿತ ಪ್ರಜಾಪ್ರಭುತ್ವದ ಕಾವಲುನಾಯಿಗಳು ಕೊಲ್ಲಿ ರಾಷ್ಟ್ರಗಳಲ್ಲಿ ರಾಜಸತ್ತೆಗಳನ್ನು ಬೆಂಬಲಿಸುತ್ತಾ ಬಂದಿಲ್ಲವೇ. ಇಂತಹ ಸಂಘರ್ಷಗಳ ಕಾರಣದಿಂದಲೇ ಸೌದಿ ಸಂಜಾತ ಒಸಾಮಾ ಬಿನ್ ಲಾದೆನ್‌ನಂತಹ ಸರ್ವಾಧಿಕಾರಿ ಭಯೋತ್ಪಾದಕನ ಹುಟ್ಟಿಗೆ ಕಾರಣವಾಯಿತು ಎಂಬುದು ಸತ್ಯವಲ್ಲವೇ?

ಲಿಬಿಯಾದ ಸರ್ವಾಧಿಕಾರಿ ಮುಹಮ್ಮದ್ ಗದ್ದಾಫಿ, ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಇವರನ್ನು ಅಷ್ಟೇ ಏಕೆ, ವೆನೆಜುವೆಲಾದಂತಹ ತೈಲ ಸಂಪನ್ನ ರಾಷ್ಟ್ರವನ್ನೇ ಕೊಂದವರು ಯಾರು? ಪ್ತಾಲೆಸ್ತೀನ್ ಸಮಸ್ಯೆಗಳಿಗೆ ಕಾರಣರು ಯಾರು? ಇಸ್ರೇಲಿನಂತಹ ದೇಶಗಳನ್ನು ಬೆಂಬಲಿಸುತ್ತಾ ಬಂದಿರುವವರು ಯಾರು? ಇಸ್ರೇಲಿನಂತೆಯೇ ಕಾಶ್ಮೀರದ ಸಮಸ್ಯೆಯನ್ನು ಸೃಷ್ಟಿಸಿದವರು ಯಾರು? ತಾವೇ ಭಯೋತ್ಪಾದಕ ಎಂದು ಕರೆದ ಪ್ಯಾಲೆಸ್ತೀನ್ ಲಿಬರೇಷನ್ ಆರ್ಗನೈಸೇಶನ್ ನಾಯಕ ಯಾಸರ್ ಅರಾಫತ್ ಅವರಿಗೆ ಮತ್ತು ಇಸ್ರೇಲ್ ವಿದೇಶ ಮಂತ್ರಿಯಾಗಿದ್ದ ಇಸಾಕ್ ರಬಿನ್ ಅವರಿಗೆ ನೋಬೆಲ್ ಪ್ರಶಸ್ತಿ ಕೊಟ್ಟವರು ಯಾರು?

ಕರಿಯರ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಅಧಿಕಾರ ಸ್ಥಾಪಿಸಿದ ಬಿಳಿಯ ಡಚ್ಚರ ವಿರುದ್ದ ಬಿಳಿಯ ಬ್ರಿಟಿಷರೇ ಯುದ್ಧ ನಡೆಸಿದ್ದೇಕೆ? ಆಂಗ್ಲೋ- ಬೋಯೆರ್ ವಾರ್ ಎಂದು ಕುಖ್ಯಾತವಾದ ಯುದ್ಧ ಏಕೆ ನಡೆಯಿತು? ಅಲ್ಲಿಯ ಮೂಲ ನಿವಾಸಿಗಳನ್ನೇ ಏಕೆ ಗುಲಾಮರನ್ನಾಗಿ, ಎರಡನೇ ದರ್ಜೆ ಪ್ರಜೆಗಳಾಗಿ ವರ್ಣಭೇದ ನೀತಿಯನ್ನು ಅನುಸರಿಸುತ್ತಿದ್ದವರನ್ನು ಬೆಂಬಲಿಸುತ್ತಾ, ಸಹಿಸುತ್ತಾ ಪೋಷಿಸುತ್ತಾ ಬಂದವರ‍್ಯಾರು? ನೆಲ್ಸನ್ ಮಂಡೇಲಾರನ್ನು ಅಷ್ಟು ವರ್ಷ ಜೈಲಿಗೆ ತಳ್ಳಿದವರ‍್ಯಾರು? ನಂತರ ವರ್ಣಭೇದ ನೀತಿ ತೊಲಗಿದ ಬಳಿಕ ಮಂಡೇಲಾರ ಜೊತೆಗೇ ಪಿಕ್ ಬೋಥಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದವರು ಯಾರು?

ಸರ್ವಾಧಿಕಾರಗಳು ಎಲ್ಲಾ ರೀತಿಯ ನಾಟಕಗಳನ್ನು ನಡೆಸಿಕೊಂಡು ತಮ್ಮನ್ನು ತಾವು ಪ್ರತಿಷ್ಟಾಪಿಸಿವೆ. ಎಲ್ಲವುಗಳ ಹಿಂದೆ ಇರುವ ಮತ್ತೆ ಶಕ್ತಿಗಳು ಯಾವುವು ಎಂಬುದನ್ನು ನಾವು ಗಮನಿಸಬೇಕು. ಇಷ್ಟೆಲ್ಲಾ ಒಂದು ಪೀಠಿಕೆ ಮಾತ್ರ. ಪ್ರಜಾಪ್ರಭುತ್ವದ ವೇಷದಲ್ಲೂ ಸರ್ವಾಧಿಕಾರ ಬರಬಹುದು. ಹಿಟ್ಲರ್ ಕೂಡಾ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದವನೆಂಬುದು ನಮಗೆ ನೆನಪಿರಲಿ. ಪ್ರತಿಯೊಬ್ಬ ಸರ್ವಾಧಿಕಾರಿ ಜಾತಿ, ಧರ್ಮ, ಜನಾಂಗೀಯ ದ್ವೇಷವನ್ನು ಪ್ರಚೋದಿಸಿ, ಬೆಳೆಸಿ, ಬೆಳೆದರೆಂಬುದನ್ನು ನಾವು ಗಮನಿಸಬೇಕು. ನಮ್ಮಲ್ಲಿ, ನಮ್ಮ ಭಾರತದಲ್ಲಿ ನಡೆಯುತ್ತಿದೆಯೇ? ಏನಾದರೂ ಸಾಮ್ಯವಿದೆಯೇ? ನಾವೇನಾದರೂ ಎಚ್ಚರಿಕೆ ವಹಿಸಬೇಕೆ? ವ್ಯವಸ್ಥಿತ ಸಂಚಿಗೆ ವ್ಯವಸ್ಥಿತ ಪ್ರತಿಹೋರಾಟ ಅಗತ್ಯವಿದೆಯೇ, ಇದನ್ನು ಮುಂದಿನ ಸಂಚಿಕೆಗಳಲ್ಲಿ ಸೂಕ್ಷ್ಮವಾಗಿ ಪರಿಶೀಲಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...