Homeಸಿನಿಮಾಸಿನಿ ಸುದ್ದಿಸಾಮಾಜಿಕ ದುರಂತದ ವಿಡಂಬನೆಯಸಿನಿಕಾರ ಪೀಟರ್ ಬಾಷೋ.

ಸಾಮಾಜಿಕ ದುರಂತದ ವಿಡಂಬನೆಯಸಿನಿಕಾರ ಪೀಟರ್ ಬಾಷೋ.

- Advertisement -
- Advertisement -

ರಾಜಶೇಖರ್ ಅಕ್ಕಿ |

ರಷಿಯಾದ ಒಂದು ಗ್ರಾಮ, ಆಗತಾನೆ ಕ್ರಾಂತಿಯಾಗಿದೆ. ಮಹಾಯುದ್ಧದ ಪರಿಣಾಮಗಳು ಇನ್ನೂ ಕಾಣಿಸಿಕೊಳ್ಳುತ್ತಿವೆ. ಅಂತಹದ್ದರಲ್ಲಿ ಒಂದು ಗೂಡ್ಸ್ ರೈಲಿನಿಂದ ಪರಾನ್ಯಾ ಎನ್ನುವ ಹೆಣ್ಣುಮಗಳು ಬಂದಿಳಿಯುತ್ತಾಳೆ. ಗೋಣಿಚೀಲವನ್ನೇ ಉಡುಪಾಗಿ ಧರಿಸಿದ ಅವಳು ಮಾನಸಿಕವಾಗಿ ಅಸ್ವಸ್ಥ ಎನ್ನುವುದು ಅವಳ ವರ್ತನೆಗಳಿಂದ ಸ್ಪಷ್ಟವಾಗುತ್ತದೆ. ಜೋಕ್ರ್ಯಾ ಎನ್ನುವ ವ್ಯಕ್ತಿ ತನ್ನ ಕುದುರೆಯನ್ನು ಕಳೆದುಕೊಂಡು, ಹೊಸ ಸೋಷಲಿಸ್ಟ್ ಆಳ್ವಕೆಗೆ ಹೊಂದಿಕೊಳ್ಳದೇ ಸ್ಥಳೀಯ ಕೆಫೆಯಲ್ಲಿ ಕಾಲಹರಣ ಮಾಡುತ್ತಿರುತ್ತಾನೆ. ಪರಾನ್ಯಾ ಹೇಗೋ ಆ ಹಳ್ಳಿಯವಳಾಗುತ್ತಾಳೆ. ಅಲ್ಲಿಯ ಪಡ್ಡೆ ಹುಡುಗರಿಗೆ ಅವಳನ್ನು ಪೀಡಿಸುವುದೇ ಒಂದು ಕೆಲಸ. ಒಂದು ದಿನ ಕಿರುಕುಳದಿಂದ ಪಾರಾಗಲು ಓಡುತ್ತ ಹೋಗಿ ಸ್ಟ್ಯಾಲಿನ್‍ನ ಪ್ರತಿಮೆಯೊಂದರ ಪಕ್ಕಕ್ಕೆ ನಿಂತುಕೊಳ್ಳುತ್ತಾಳೆ. ಜನರ ಒಂದು ಗುಂಪೇ ಬಂದು ತಮಾಷೆ ನೋಡುತ್ತಿದೆ. ಅಷ್ಟರಲ್ಲಿ ಪುಟ್ಟಹುಡುಗಿಯೊಬ್ಬಳು ಅವಳನ್ನು ‘ಸ್ಟಾಲಿನ್‍ನ ಹೆಂಡತಿ’ ಎಂದು ಕರೆದುಬಿಡುತ್ತಾಳೆ. ಅಲ್ಲಿಂದ ಪ್ರಾರಂಭವಾಗುವುದು ಅವಳ ನರಕಯಾತನೆ. ಅಧಿಕಾರಿಗಳು ಅವಳೊಬ್ಬ ಗೂಢಚಾರಿ ಎನ್ನುವ ಸಂಶಯದ ಮೇಲೆ ಬಂಧಿಸಿ ಚಿತ್ರಹಿಂಸೆ ನೀಡುತ್ತಾರೆ. ಆದರೆ ಅವಳಿಂದ ಯಾವ ಮಾಹಿತಿಯೂ ಹೊರಬರುವುದಿಲ್ಲ ಆಗ ಅವಳನ್ನು ಬಿಡುಗಡೆ ಮಾಡಿ, ಅವಳ ಚಲನವಲನಗಳಿಂದ ಮಾಹಿತಿ ಸಿಗಬಹುದು ಎನ್ನುವ ಲೆಕ್ಕಾಚಾರದ ಮೇಲೆ ಅವಳ ಮೇಲೆ ಕಣ್ಣಿಟ್ಟಿರುತ್ತಾರೆ. ಹಿತ್ರಹಿಂಸೆಯನ್ನು ಅನುಭವಿಸಿದ ಪರಾನ್ಯಾಳ ಮಾನಸಿಕ ಸ್ಥಿಮಿತ ಇನ್ನಷ್ಟು ಹದಗೆಟ್ಟಿ, ತನಗೆ ಚಿತ್ರಹಿಂಸೆ ನೀಡಿದಾಗ ಪದೇ ಪದೇ ಕೇಳಿದ ಪದಗಳಾದ ‘ಗೂಢಚಾರ’ ‘ದೇಶದ್ರೋಹಿ’ ಎಂದು ಕಂಡಕಂಡವರನ್ನು ನೋಡಿ ಕರೆಯತೊಡಗುತ್ತಾಳೆ. ಅವಳು ಹೆಸರಿಸಿದ ವ್ಯಕ್ತಿಗಳನ್ನು ಪೊಲೀಸರು ಬಂಧಿಸತೊಡಗಿದಾಗ ಇಡೀ ಊರೇ ಪ್ರಕ್ಷುಬ್ದಗೊಳ್ಳುತ್ತದೆ. ಆಗ ಏನಾದರೂ ಮಾಡಲೇಬೇಕು ಎನ್ನುವ ಸ್ಥಿತಿಗೆ ಬಂದುನಿಂತ ಊರಲ್ಲಿ ಜೋಕ್ರ್ಯಾ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಬಲ್ಲ.

ಇದು ಹಂಗೇರಿಯದ ಚಿತ್ರನಿರ್ದೇಶಕ ಪೀಟರ್ ಬಾಷೋ 1990 ರಲ್ಲಿ ನಿರ್ದೇಶಿಸಿದ ‘ಸ್ಟ್ಯಾಲಿನ್’ಸ್ ಬ್ರೈಡ್’ ಎನ್ನುವ ಚಿತ್ರದ ಸಾರಾಂಶ.

ಒಂದು ಕಛೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬಳ ನರ್ವಸ್ ಬ್ರೆಕ್‍ಡೌನ್ ಆಗಿ, ತನ್ನೆಲ್ಲ ಬಟ್ಟೆಗಳನ್ನು ಕಳಚಿ ಬೆತ್ತಲೆಯಾಗಿ ರಸ್ತೆಯಲ್ಲಿ ನಡೆಯತೊಡುತ್ತಾಳೆ. ತನ್ನಪಾಡಿಗೆ ತಾನು ಆಸ್ಪತ್ರೆಗೆ ಹೋಗುತ್ತಿದ್ದ ಯುವವೈದ್ಯನೊಬ್ಬ ಇವಳನ್ನು ನೋಡಿ ತನ್ನ ಓವರ್‍ಕೋಟನ್ನು ಅವಳಿಗೆ ಧರಿಸುತ್ತಾನೆ. ತಾನು ಮಾಡಿದ ಈ ಪುಟ್ಟ ಕ್ರಿಯೆಯಿಂದ ಆಗುವ ಪರಿಣಾಮಗಳ ಯಾವುದೇ ಅರಿವಿಲ್ಲದೇ ಆ ವೈದ್ಯ ಮುಂದೆ ಸಾಗುತ್ತಾನೆ. ಆದರೆ ಅವನು ತನ್ನ ಓವರ್‍ಕೋಟನ್ನು ಆ ಬಡಪಾಯಿ ಹೆಣ್ಣುಮಗಳಿಗೆ ಕೊಟ್ಟ ಸ್ಥಳ ಆ ದೇಶದ ಆಳ್ವಿಕೆಯ ವಿರುದ್ಧ ಪ್ರತಿಭಟನೆ ಮಾಡುವವರ ತಾಣ. ಯುವವೈದ್ಯನ ಈ ಒಂದು ಪುಟ್ಟ ಕ್ರಿಯೆಯನ್ನೂ ಪ್ರತಿಭಟನೆಯ ಸಂಕೇತವೆಂದೇ ಅರ್ಥೈಸಿಕೊಳ್ಳುವ ಅಲ್ಲಿಯ ಅಧಿಕಾರಿಗಳು ಆ ವೈದ್ಯನನ್ನು ಬಂಧಿಸಿ, ತನಿಖೆಗೆ ಒಳಪಡಿಸುತ್ತಾರೆ. ಅಲ್ಲಿಂದ ಆ ವೈದ್ಯ ತನ್ನ ಜೀವನವನ್ನು ಹೊಸದಾಗಿ ಕಂಡಿಕೊಳ್ಳಬೇಕಾಗುತ್ತದೆ.

ಇದು ಪೀಟರ್ ಬಾಷೋ ಅವರ ‘ಬನಾನಾ ಸ್ಕಿನ್ ವಾಲ್ಟ್ಜ್’ (1987) ಚಿತ್ರದ ಸಾರಾಂಶ.

1928ರಲ್ಲಿ ಆಗಿನ ಚೆಕೊಸ್ಲೋವೇಕಿಯಾದಲ್ಲಿ ಹುಟ್ಟಿದ ಪೀಟರ್ ಬಾಷೋ, ಹಂಗರಿಯಾದ ಸಿನೆಮಾ ಮತ್ತು ನಾಟಕದ ಶಾಲೆಯಲ್ಲಿ ಪದವಿ ಪಡೆದುಕೊಂಡರು. ಎರಡನೇ ಮಹಾಯುದ್ಧದಲ್ಲಿ ಆದ ಸಾವು ನೋವುಗಳು, ಮಹಾಯುದ್ಧದ ನಂತರ ಹಂಗರಿ ದೇಶ ರಷಿಯಾದ ಸೆಟಲೈಟ್ ಸ್ಟೇಟ್ ಆಗಿ ಮುಂದುವರೆದದ್ದು, ಹೊಸ ಸಮಾಜವಾದಿ ವ್ಯವಸ್ಥೆಯ ಕಟ್ಟುನಿಟ್ಟುಗಳಿಗೆ ಸಾಕ್ಷಿಯಾಗಿದ್ದ ಪೀಟರ್ ಬಾಷೊ ಜೀವನದುದ್ದಕ್ಕೂ ಹೆಚ್ಚಾಗಿ ರಾಜಕೀಯ ಸಿನೆಮಾಗಳನ್ನೇ ಮಾಡಿದರು. 1969 ರಲ್ಲಿ ಅವರು ಮಾಡಿದ ಚಿತ್ರ ‘ದಿ ವಿಟ್ನೆಸ್’ನಲ್ಲಿ ಹಂಗರಿಯ ಕಮ್ಯುನಿಸ್ಟ್ ಕ್ರಾಂತಿಯಲ್ಲಿ ಭಾಗವಹಿಸಿದ್ದ ಒಬ್ಬ ವ್ಯಕ್ತಿ ತನ್ನ ಊರಿನ ಚರಂಡಿ, ನೀರಿನ ಹರಿವುಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾನೆ. ಅವನು ತನ್ನ ಮನೆಯಲ್ಲಿ ಅಡುಗೆಗಾಗಿ ಹಂದಿಯೊಂದನ್ನು ಕೊಯ್ಯುತ್ತಾನೆ. ಹಂಗರಿಯಲ್ಲಿ ಆಗ ಅದು ನಿಷಿದ್ಧ. ಯಾರಿಗೂ ಗೊತ್ತಾಗಬಾರದು ಎಂದು ಎಷ್ಟೇ ಲಕ್ಷ ವಹಿಸಿದ್ದರೂ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅವನನ್ನು ಬಂಧಿಸಿದ ನಂತರ ಶಿಕ್ಷೆಯಾಗುವ ಬದಲು ಬೇರೊಂದು ಊರಲ್ಲಿ ಉನ್ನತ ಕೆಲಸಕ್ಕೆ ನೇಮಿಸಲಾಗುತ್ತದೆ. ಏಕೆ ಎಂದು ಅವನಿಗೆ ತಿಳಿಯದು, ಒಂದು ಸಲ ನ್ಯಾಯಧೀಶನ ಮುಂದೆ ಬಂದು ನಿಲ್ಲಬೇಕಾದಲ್ಲಿ ತನ್ನ ಎಲ್ಲ ಸತ್ಯಗಳನ್ನು ಹೇಳಿಬಿಡುತ್ತಾನೆ. ಅದರಿಂದ ಅವನಿಗೆ ಮರಣದಂಡನೆ

ವಿಧಿಸಬೇಕೆಂದು ತೀರ್ಪು ಬರುತ್ತದೆ ಆದರೆ ಮರಣೆದಂಡನೆ ಜಾರಿಗೊಳ್ಳಬೇಕಾದ ಸಮಯದಲ್ಲಿಯೇ ರಾಜಕೀಯ ಪರಿಸ್ಥಿತಿ ಬದಲಾಯಿಸುತ್ತವೆ. ‘ದಿ ವಿಟ್ನೆಸ್’ ಎನ್ನುವ ಈ ಚಿತ್ರವನ್ನು ಆ ದೇಶದ ಸರಕಾರವೇ ನಿರ್ಮಿಸಿತ್ತು ಆದರೆ ಬಿಡುಗಡೆಯ ಮುಂಚೆಯೇ ಚಿತ್ರವನ್ನು ನಿಷೇಧಿಸಿತು. ಈ ಚಿತ್ರ ವಿದೇಶಗಳಲ್ಲಿ ಬಿಡುಗಡೆಯಾಗಿ ಪ್ರಸಿದ್ಧಿ ಮಾಡಿದ ನಂತರವೇ ಹಂಗೇರಿಯ ಕಮ್ಯನಿಸ್ಟ್ ಸರಕಾರ ನಿಷೇಧವನ್ನು ವಾಪಸ್ ತೆಗೆದುಕೊಂಡಿತು. ಬಾಷೋ ಅವರ ಚಿತ್ರಗಳಲ್ಲಿ ಕಮ್ಯನಿಸ್ಟ್ ಆಡಳಿತದ ಕೊರತೆಗಳನ್ನು ಪ್ರಶ್ನಿಸುತ್ತಾರೆಯೇ ಹೊರತು ಕಮ್ಯೂನಿಸಂ ಅನ್ನು ಅಲ್ಲ. ಹಾಗೂ ಅವರೆಲ್ಲ ಚಿತ್ರಗಳು ಎಷ್ಟೇ ಗಂಭೀರ ವಿಷಯಗಳನ್ನೆತ್ತಿಕೊಂಡರೂ ಚಿತ್ರದುದ್ದಕ್ಕೂ ಹಾಸ್ಯ, ದುರಂತದ ವಿಡಂಬನೆಯೇ ಎದ್ದುಕಾಣುತ್ತವೆ. ಕಮ್ಯನಿಸಂ ಬಗ್ಗೆ, ಅದರ ಇತಿಹಾಸದ ಬಗ್ಗೆ ಅನೇಕ ಅಧ್ಯಯನಗಳು ನಮಗೆ ಲಭ್ಯವಿವೆ ಆದರೆ ಕ್ರಾಂತಿಯ ನಂತರ ಅಲ್ಲಿಯ ಸಬ್‍ಆಲ್ಟರ್ನ್ ಇತಿಹಾಸದ ಬಗ್ಗೆ ತಿಳಿಯಬೇಕಾದರೆ ನಾವು ಸಾಹಿತ್ಯ, ಸಿನೆಮಾಗಳನ್ನೇ ನೆಚ್ಚಬೇಕಾಗುತ್ತದೆ. ಆ ನಿಟ್ಟಿನಲ್ಲಿ ಪೀಟರ್ ಬಾಷೋ ಮಹತ್ವದ ಚಿತ್ರ ಬರಹಗಾರ ಮತ್ತು ನಿರ್ದೇಶಕ.

ಸಿನೆಮಾ ನಿರ್ದೇಶನದ ಕೌಶಲ್ಯದ ಪ್ರಶ್ನೆ ಬಂದಾಗಲೂ ಪೀಟರ್ ಬಾಷೋ ನಂತಹ ನಿರ್ದೇಶಕರು ಗೆಲ್ಲುತ್ತಾರೆ ಎಂದು ನನಗನಿಸುತ್ತದೆ. ಏಕೆಂದರೆ ಅವರ ಚಿತ್ರಗಳಲ್ಲಿ ನಮಗೆ ಕಾಣಿಸುವುದು, ಮನಕ್ಕೆ ತಟ್ಟುವುದು ಆಯಾ ಕಥೆಗಳು, ಪಾತ್ರಗಳು, ಪಾತ್ರಗಳು ನೋವು ನಲಿವು ಅದರೊಂದಿಗೆ ಆಯಾ ಸಾಮಾಜಿಕ ಪರಿಸರದ ಚಿತ್ರಣ ಮತ್ತು ಅವರು ಕೇಳುವ ಪ್ರಶ್ನೆಗಳೇ ಹೊರತು ಎಲ್ಲಿಯೂ ನಮಗೆ ನಿರ್ದೇಶಕÀ ಅಥವಾ ಛಾಯಗ್ರಹಕÀ ಕಾಣಿಸಿಕೊಳ್ಳುವುದಿಲ್ಲ. ಒಂದು ಉತ್ತಮ ಚಿತ್ರದ ಕರುಹು ಇದೇ ತಾನೇ?

ವಿಶ್ವದ ಅಂಡರ್‍ರೇಟೆಡ್ ನಿರ್ದೇಶಕರಲ್ಲಿ ಒಬ್ಬರು ಎನ್ನಲಾಗುವ ಪೀಟರ್ ಬಾಷೋ ತಮ್ಮ ಚಲನಚಿತ್ರ ನಿರ್ದೇಶನದ ಸುಧೀರ್ಘ ಜೀವನವನ್ನು ಮುಗಿಸಿ 2009ರಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ತೀರಿಕೊಂಡರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...