Homeಸಿನಿಮಾಸಿನಿ ಸುದ್ದಿಸಾಮಾಜಿಕ ದುರಂತದ ವಿಡಂಬನೆಯಸಿನಿಕಾರ ಪೀಟರ್ ಬಾಷೋ.

ಸಾಮಾಜಿಕ ದುರಂತದ ವಿಡಂಬನೆಯಸಿನಿಕಾರ ಪೀಟರ್ ಬಾಷೋ.

- Advertisement -
- Advertisement -

ರಾಜಶೇಖರ್ ಅಕ್ಕಿ |

ರಷಿಯಾದ ಒಂದು ಗ್ರಾಮ, ಆಗತಾನೆ ಕ್ರಾಂತಿಯಾಗಿದೆ. ಮಹಾಯುದ್ಧದ ಪರಿಣಾಮಗಳು ಇನ್ನೂ ಕಾಣಿಸಿಕೊಳ್ಳುತ್ತಿವೆ. ಅಂತಹದ್ದರಲ್ಲಿ ಒಂದು ಗೂಡ್ಸ್ ರೈಲಿನಿಂದ ಪರಾನ್ಯಾ ಎನ್ನುವ ಹೆಣ್ಣುಮಗಳು ಬಂದಿಳಿಯುತ್ತಾಳೆ. ಗೋಣಿಚೀಲವನ್ನೇ ಉಡುಪಾಗಿ ಧರಿಸಿದ ಅವಳು ಮಾನಸಿಕವಾಗಿ ಅಸ್ವಸ್ಥ ಎನ್ನುವುದು ಅವಳ ವರ್ತನೆಗಳಿಂದ ಸ್ಪಷ್ಟವಾಗುತ್ತದೆ. ಜೋಕ್ರ್ಯಾ ಎನ್ನುವ ವ್ಯಕ್ತಿ ತನ್ನ ಕುದುರೆಯನ್ನು ಕಳೆದುಕೊಂಡು, ಹೊಸ ಸೋಷಲಿಸ್ಟ್ ಆಳ್ವಕೆಗೆ ಹೊಂದಿಕೊಳ್ಳದೇ ಸ್ಥಳೀಯ ಕೆಫೆಯಲ್ಲಿ ಕಾಲಹರಣ ಮಾಡುತ್ತಿರುತ್ತಾನೆ. ಪರಾನ್ಯಾ ಹೇಗೋ ಆ ಹಳ್ಳಿಯವಳಾಗುತ್ತಾಳೆ. ಅಲ್ಲಿಯ ಪಡ್ಡೆ ಹುಡುಗರಿಗೆ ಅವಳನ್ನು ಪೀಡಿಸುವುದೇ ಒಂದು ಕೆಲಸ. ಒಂದು ದಿನ ಕಿರುಕುಳದಿಂದ ಪಾರಾಗಲು ಓಡುತ್ತ ಹೋಗಿ ಸ್ಟ್ಯಾಲಿನ್‍ನ ಪ್ರತಿಮೆಯೊಂದರ ಪಕ್ಕಕ್ಕೆ ನಿಂತುಕೊಳ್ಳುತ್ತಾಳೆ. ಜನರ ಒಂದು ಗುಂಪೇ ಬಂದು ತಮಾಷೆ ನೋಡುತ್ತಿದೆ. ಅಷ್ಟರಲ್ಲಿ ಪುಟ್ಟಹುಡುಗಿಯೊಬ್ಬಳು ಅವಳನ್ನು ‘ಸ್ಟಾಲಿನ್‍ನ ಹೆಂಡತಿ’ ಎಂದು ಕರೆದುಬಿಡುತ್ತಾಳೆ. ಅಲ್ಲಿಂದ ಪ್ರಾರಂಭವಾಗುವುದು ಅವಳ ನರಕಯಾತನೆ. ಅಧಿಕಾರಿಗಳು ಅವಳೊಬ್ಬ ಗೂಢಚಾರಿ ಎನ್ನುವ ಸಂಶಯದ ಮೇಲೆ ಬಂಧಿಸಿ ಚಿತ್ರಹಿಂಸೆ ನೀಡುತ್ತಾರೆ. ಆದರೆ ಅವಳಿಂದ ಯಾವ ಮಾಹಿತಿಯೂ ಹೊರಬರುವುದಿಲ್ಲ ಆಗ ಅವಳನ್ನು ಬಿಡುಗಡೆ ಮಾಡಿ, ಅವಳ ಚಲನವಲನಗಳಿಂದ ಮಾಹಿತಿ ಸಿಗಬಹುದು ಎನ್ನುವ ಲೆಕ್ಕಾಚಾರದ ಮೇಲೆ ಅವಳ ಮೇಲೆ ಕಣ್ಣಿಟ್ಟಿರುತ್ತಾರೆ. ಹಿತ್ರಹಿಂಸೆಯನ್ನು ಅನುಭವಿಸಿದ ಪರಾನ್ಯಾಳ ಮಾನಸಿಕ ಸ್ಥಿಮಿತ ಇನ್ನಷ್ಟು ಹದಗೆಟ್ಟಿ, ತನಗೆ ಚಿತ್ರಹಿಂಸೆ ನೀಡಿದಾಗ ಪದೇ ಪದೇ ಕೇಳಿದ ಪದಗಳಾದ ‘ಗೂಢಚಾರ’ ‘ದೇಶದ್ರೋಹಿ’ ಎಂದು ಕಂಡಕಂಡವರನ್ನು ನೋಡಿ ಕರೆಯತೊಡಗುತ್ತಾಳೆ. ಅವಳು ಹೆಸರಿಸಿದ ವ್ಯಕ್ತಿಗಳನ್ನು ಪೊಲೀಸರು ಬಂಧಿಸತೊಡಗಿದಾಗ ಇಡೀ ಊರೇ ಪ್ರಕ್ಷುಬ್ದಗೊಳ್ಳುತ್ತದೆ. ಆಗ ಏನಾದರೂ ಮಾಡಲೇಬೇಕು ಎನ್ನುವ ಸ್ಥಿತಿಗೆ ಬಂದುನಿಂತ ಊರಲ್ಲಿ ಜೋಕ್ರ್ಯಾ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಬಲ್ಲ.

ಇದು ಹಂಗೇರಿಯದ ಚಿತ್ರನಿರ್ದೇಶಕ ಪೀಟರ್ ಬಾಷೋ 1990 ರಲ್ಲಿ ನಿರ್ದೇಶಿಸಿದ ‘ಸ್ಟ್ಯಾಲಿನ್’ಸ್ ಬ್ರೈಡ್’ ಎನ್ನುವ ಚಿತ್ರದ ಸಾರಾಂಶ.

ಒಂದು ಕಛೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬಳ ನರ್ವಸ್ ಬ್ರೆಕ್‍ಡೌನ್ ಆಗಿ, ತನ್ನೆಲ್ಲ ಬಟ್ಟೆಗಳನ್ನು ಕಳಚಿ ಬೆತ್ತಲೆಯಾಗಿ ರಸ್ತೆಯಲ್ಲಿ ನಡೆಯತೊಡುತ್ತಾಳೆ. ತನ್ನಪಾಡಿಗೆ ತಾನು ಆಸ್ಪತ್ರೆಗೆ ಹೋಗುತ್ತಿದ್ದ ಯುವವೈದ್ಯನೊಬ್ಬ ಇವಳನ್ನು ನೋಡಿ ತನ್ನ ಓವರ್‍ಕೋಟನ್ನು ಅವಳಿಗೆ ಧರಿಸುತ್ತಾನೆ. ತಾನು ಮಾಡಿದ ಈ ಪುಟ್ಟ ಕ್ರಿಯೆಯಿಂದ ಆಗುವ ಪರಿಣಾಮಗಳ ಯಾವುದೇ ಅರಿವಿಲ್ಲದೇ ಆ ವೈದ್ಯ ಮುಂದೆ ಸಾಗುತ್ತಾನೆ. ಆದರೆ ಅವನು ತನ್ನ ಓವರ್‍ಕೋಟನ್ನು ಆ ಬಡಪಾಯಿ ಹೆಣ್ಣುಮಗಳಿಗೆ ಕೊಟ್ಟ ಸ್ಥಳ ಆ ದೇಶದ ಆಳ್ವಿಕೆಯ ವಿರುದ್ಧ ಪ್ರತಿಭಟನೆ ಮಾಡುವವರ ತಾಣ. ಯುವವೈದ್ಯನ ಈ ಒಂದು ಪುಟ್ಟ ಕ್ರಿಯೆಯನ್ನೂ ಪ್ರತಿಭಟನೆಯ ಸಂಕೇತವೆಂದೇ ಅರ್ಥೈಸಿಕೊಳ್ಳುವ ಅಲ್ಲಿಯ ಅಧಿಕಾರಿಗಳು ಆ ವೈದ್ಯನನ್ನು ಬಂಧಿಸಿ, ತನಿಖೆಗೆ ಒಳಪಡಿಸುತ್ತಾರೆ. ಅಲ್ಲಿಂದ ಆ ವೈದ್ಯ ತನ್ನ ಜೀವನವನ್ನು ಹೊಸದಾಗಿ ಕಂಡಿಕೊಳ್ಳಬೇಕಾಗುತ್ತದೆ.

ಇದು ಪೀಟರ್ ಬಾಷೋ ಅವರ ‘ಬನಾನಾ ಸ್ಕಿನ್ ವಾಲ್ಟ್ಜ್’ (1987) ಚಿತ್ರದ ಸಾರಾಂಶ.

1928ರಲ್ಲಿ ಆಗಿನ ಚೆಕೊಸ್ಲೋವೇಕಿಯಾದಲ್ಲಿ ಹುಟ್ಟಿದ ಪೀಟರ್ ಬಾಷೋ, ಹಂಗರಿಯಾದ ಸಿನೆಮಾ ಮತ್ತು ನಾಟಕದ ಶಾಲೆಯಲ್ಲಿ ಪದವಿ ಪಡೆದುಕೊಂಡರು. ಎರಡನೇ ಮಹಾಯುದ್ಧದಲ್ಲಿ ಆದ ಸಾವು ನೋವುಗಳು, ಮಹಾಯುದ್ಧದ ನಂತರ ಹಂಗರಿ ದೇಶ ರಷಿಯಾದ ಸೆಟಲೈಟ್ ಸ್ಟೇಟ್ ಆಗಿ ಮುಂದುವರೆದದ್ದು, ಹೊಸ ಸಮಾಜವಾದಿ ವ್ಯವಸ್ಥೆಯ ಕಟ್ಟುನಿಟ್ಟುಗಳಿಗೆ ಸಾಕ್ಷಿಯಾಗಿದ್ದ ಪೀಟರ್ ಬಾಷೊ ಜೀವನದುದ್ದಕ್ಕೂ ಹೆಚ್ಚಾಗಿ ರಾಜಕೀಯ ಸಿನೆಮಾಗಳನ್ನೇ ಮಾಡಿದರು. 1969 ರಲ್ಲಿ ಅವರು ಮಾಡಿದ ಚಿತ್ರ ‘ದಿ ವಿಟ್ನೆಸ್’ನಲ್ಲಿ ಹಂಗರಿಯ ಕಮ್ಯುನಿಸ್ಟ್ ಕ್ರಾಂತಿಯಲ್ಲಿ ಭಾಗವಹಿಸಿದ್ದ ಒಬ್ಬ ವ್ಯಕ್ತಿ ತನ್ನ ಊರಿನ ಚರಂಡಿ, ನೀರಿನ ಹರಿವುಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾನೆ. ಅವನು ತನ್ನ ಮನೆಯಲ್ಲಿ ಅಡುಗೆಗಾಗಿ ಹಂದಿಯೊಂದನ್ನು ಕೊಯ್ಯುತ್ತಾನೆ. ಹಂಗರಿಯಲ್ಲಿ ಆಗ ಅದು ನಿಷಿದ್ಧ. ಯಾರಿಗೂ ಗೊತ್ತಾಗಬಾರದು ಎಂದು ಎಷ್ಟೇ ಲಕ್ಷ ವಹಿಸಿದ್ದರೂ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅವನನ್ನು ಬಂಧಿಸಿದ ನಂತರ ಶಿಕ್ಷೆಯಾಗುವ ಬದಲು ಬೇರೊಂದು ಊರಲ್ಲಿ ಉನ್ನತ ಕೆಲಸಕ್ಕೆ ನೇಮಿಸಲಾಗುತ್ತದೆ. ಏಕೆ ಎಂದು ಅವನಿಗೆ ತಿಳಿಯದು, ಒಂದು ಸಲ ನ್ಯಾಯಧೀಶನ ಮುಂದೆ ಬಂದು ನಿಲ್ಲಬೇಕಾದಲ್ಲಿ ತನ್ನ ಎಲ್ಲ ಸತ್ಯಗಳನ್ನು ಹೇಳಿಬಿಡುತ್ತಾನೆ. ಅದರಿಂದ ಅವನಿಗೆ ಮರಣದಂಡನೆ

ವಿಧಿಸಬೇಕೆಂದು ತೀರ್ಪು ಬರುತ್ತದೆ ಆದರೆ ಮರಣೆದಂಡನೆ ಜಾರಿಗೊಳ್ಳಬೇಕಾದ ಸಮಯದಲ್ಲಿಯೇ ರಾಜಕೀಯ ಪರಿಸ್ಥಿತಿ ಬದಲಾಯಿಸುತ್ತವೆ. ‘ದಿ ವಿಟ್ನೆಸ್’ ಎನ್ನುವ ಈ ಚಿತ್ರವನ್ನು ಆ ದೇಶದ ಸರಕಾರವೇ ನಿರ್ಮಿಸಿತ್ತು ಆದರೆ ಬಿಡುಗಡೆಯ ಮುಂಚೆಯೇ ಚಿತ್ರವನ್ನು ನಿಷೇಧಿಸಿತು. ಈ ಚಿತ್ರ ವಿದೇಶಗಳಲ್ಲಿ ಬಿಡುಗಡೆಯಾಗಿ ಪ್ರಸಿದ್ಧಿ ಮಾಡಿದ ನಂತರವೇ ಹಂಗೇರಿಯ ಕಮ್ಯನಿಸ್ಟ್ ಸರಕಾರ ನಿಷೇಧವನ್ನು ವಾಪಸ್ ತೆಗೆದುಕೊಂಡಿತು. ಬಾಷೋ ಅವರ ಚಿತ್ರಗಳಲ್ಲಿ ಕಮ್ಯನಿಸ್ಟ್ ಆಡಳಿತದ ಕೊರತೆಗಳನ್ನು ಪ್ರಶ್ನಿಸುತ್ತಾರೆಯೇ ಹೊರತು ಕಮ್ಯೂನಿಸಂ ಅನ್ನು ಅಲ್ಲ. ಹಾಗೂ ಅವರೆಲ್ಲ ಚಿತ್ರಗಳು ಎಷ್ಟೇ ಗಂಭೀರ ವಿಷಯಗಳನ್ನೆತ್ತಿಕೊಂಡರೂ ಚಿತ್ರದುದ್ದಕ್ಕೂ ಹಾಸ್ಯ, ದುರಂತದ ವಿಡಂಬನೆಯೇ ಎದ್ದುಕಾಣುತ್ತವೆ. ಕಮ್ಯನಿಸಂ ಬಗ್ಗೆ, ಅದರ ಇತಿಹಾಸದ ಬಗ್ಗೆ ಅನೇಕ ಅಧ್ಯಯನಗಳು ನಮಗೆ ಲಭ್ಯವಿವೆ ಆದರೆ ಕ್ರಾಂತಿಯ ನಂತರ ಅಲ್ಲಿಯ ಸಬ್‍ಆಲ್ಟರ್ನ್ ಇತಿಹಾಸದ ಬಗ್ಗೆ ತಿಳಿಯಬೇಕಾದರೆ ನಾವು ಸಾಹಿತ್ಯ, ಸಿನೆಮಾಗಳನ್ನೇ ನೆಚ್ಚಬೇಕಾಗುತ್ತದೆ. ಆ ನಿಟ್ಟಿನಲ್ಲಿ ಪೀಟರ್ ಬಾಷೋ ಮಹತ್ವದ ಚಿತ್ರ ಬರಹಗಾರ ಮತ್ತು ನಿರ್ದೇಶಕ.

ಸಿನೆಮಾ ನಿರ್ದೇಶನದ ಕೌಶಲ್ಯದ ಪ್ರಶ್ನೆ ಬಂದಾಗಲೂ ಪೀಟರ್ ಬಾಷೋ ನಂತಹ ನಿರ್ದೇಶಕರು ಗೆಲ್ಲುತ್ತಾರೆ ಎಂದು ನನಗನಿಸುತ್ತದೆ. ಏಕೆಂದರೆ ಅವರ ಚಿತ್ರಗಳಲ್ಲಿ ನಮಗೆ ಕಾಣಿಸುವುದು, ಮನಕ್ಕೆ ತಟ್ಟುವುದು ಆಯಾ ಕಥೆಗಳು, ಪಾತ್ರಗಳು, ಪಾತ್ರಗಳು ನೋವು ನಲಿವು ಅದರೊಂದಿಗೆ ಆಯಾ ಸಾಮಾಜಿಕ ಪರಿಸರದ ಚಿತ್ರಣ ಮತ್ತು ಅವರು ಕೇಳುವ ಪ್ರಶ್ನೆಗಳೇ ಹೊರತು ಎಲ್ಲಿಯೂ ನಮಗೆ ನಿರ್ದೇಶಕÀ ಅಥವಾ ಛಾಯಗ್ರಹಕÀ ಕಾಣಿಸಿಕೊಳ್ಳುವುದಿಲ್ಲ. ಒಂದು ಉತ್ತಮ ಚಿತ್ರದ ಕರುಹು ಇದೇ ತಾನೇ?

ವಿಶ್ವದ ಅಂಡರ್‍ರೇಟೆಡ್ ನಿರ್ದೇಶಕರಲ್ಲಿ ಒಬ್ಬರು ಎನ್ನಲಾಗುವ ಪೀಟರ್ ಬಾಷೋ ತಮ್ಮ ಚಲನಚಿತ್ರ ನಿರ್ದೇಶನದ ಸುಧೀರ್ಘ ಜೀವನವನ್ನು ಮುಗಿಸಿ 2009ರಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ತೀರಿಕೊಂಡರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...