Homeಕರ್ನಾಟಕಹೆಬ್ಬಾರ್ ಹಿಕಮತ್ತಿನ ಹಕೀಕತ್!!

ಹೆಬ್ಬಾರ್ ಹಿಕಮತ್ತಿನ ಹಕೀಕತ್!!

- Advertisement -
- Advertisement -

| ನಹುಷ |

ಉತ್ತರ ಕನ್ನಡದ ರಾಜಕಾರಣದ ರಂಗು ಬದಲಾಗುತ್ತಿದೆ. ಕಾರಣವಿಷ್ಟೆ ಆಪರೇಷನ್ ಕಮಲಕ್ಕೆ ಬಿಕರಿಗೊಂಡು ರಾಜೀನಾಮೆ ಕೊಟ್ಟಿರುವ ಯಲ್ಲಾಪುರ-ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಒಬ್ಬರೇ ಅಲ್ಲದೆ ಮಿನಿಸ್ಟರ್ ಆರ್.ವಿ.ದೇಶ್‍ಪಾಂಡೆಯೂ ಬಿಜೆಪಿ ಸೆಳೆತಕ್ಕೆ ಸಿಲುಕಿದ್ದಾರೆಂಬ ಸುದ್ದಿ ದೊಡ್ಡ ಚರ್ಚೆಗೀಡಾಗಿ ಹೋಗಿದೆ. ಮಜಾ ಎಂದರೆ, ಕಾಂಗ್ರೆಸಲ್ಲಿದ್ದರೆ ತನ್ನ ಆಸೆಗೆಲ್ಲ ದೇಶಪಾಂಡೆ ಕಲ್ಲು ಹಾಕುತ್ತಾರೆಂಬ ಸಿಟ್ಟಿಂದ ಬಿಜೆಪಿ ಪಾಳೆಯಕ್ಕೆ ಎಂಟ್ರಿ ಹೊಡೆದಿದ್ದ ಹೆಬ್ಬಾರ್ ಅದೇ ಹಿತಶತ್ರು ದೇಶಪಾಂಡೆ ತನ್ನ ಬೆನ್ನಟ್ಟಿ ಬರುತ್ತಿರುವುದು ಕೇಳಿ ಬೆಚ್ಚಿಬಿದ್ದಿದ್ದಾರೆ!!

ಕಾಂಗ್ರೆಸ್‍ನಿಂದಲೇ ಸ್ಪರ್ಧಿಸಿ ಏದುಸಿರು ಬಿಡುತ್ತಲೇ ಗೆಲ್ಲುತ್ತಿದ್ದಂತೆಯೇ ಹೆಬ್ಬಾರ್, ದೇಶಪಾಂಡೆಗೆ ಸೆಡ್ಡು ಹೊಡೆದು ಮಂತ್ರಿಗಿರಿಗೆ ಲಾಬಿ ಮಾಡಿದರು. ಮತ್ತೊಂದೆಡೆ ಬಿಜೆಪಿಯವರಿಂದ ಆಪರೇಷನ್ ಮಾಡಿಸಿಕೊಳ್ಳಲು ಪ್ರಯತ್ನಿಸಿದರು. ಯಡ್ಡಿ ಮಗ ಹೆಬ್ಬಾರ್ ಹೆಂಡತಿಯೊಂದಿಗೆ ಲೇವಾದೇವಿ ವ್ಯವಹಾರಕ್ಕಿಳಿದ ಆಡಿಯೋ ಕೂಡ ಆಗ ಹೊರಬಂದಿತ್ತು. ಹೆಬ್ಬಾರ್ ಪರಿವಾರ ಮಾನ ಹರಾಜಾದರೂ ಇದೇ ಸಾಹಸ ಎಂಬಂತೆ ಬೀಗಿದರು. ಮಂತ್ರಿಗಿರಿಗಾಗಿ ಕಾಂಗ್ರೆಸ್ ಹೈಕಮಾಂಡನ್ನು ಬ್ಲಾಕ್‍ಮೇಲ್ ಮಾಡುತ್ತಲೇ ಇದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷತೆ ಕೊಟ್ಟರೂ ಬೇಡವೆನ್ನಲಿಲ್ಲ ಈ ಆಸೆಬುರುಕ!!

ಕೇವಲ ಒಂದು ಸಾವಿರದ ನಾಲ್ಕುನೂರು ಮತಗಳಂತರದಿಂದ ಬಚಾವಾಗಿರುವ ಹೆಬ್ಬಾರ್‍ಗೆ ಮತ್ತೆ ಅದೇ ಕಾಂಗ್ರೆಸ್‍ನಿಂದ ಗೆಲ್ಲುತ್ತೇನೆಂಬ ಧೈರ್ಯ ಉಳಿದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಳ್ಳಾರಿಯ ಕಬ್ಬಿಣದ ಅದಿರು ಕದ್ದು ವಿದೇಶಕ್ಕೆ ರಪ್ತು ಮಾಡಿದ ಕೇಸಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಹೆಬ್ಬಾರ್ ಹಾಗೂ ಆತನ ಕುಲೋದ್ಧಾರಕ ವಿವೇಕ್ ಹೆಬ್ಬಾರ್ ಆ ಕುಣಿಕೆಯಿಂದ ಪಾರಾಗಲು ಬಲಾಢ್ಯ ಬಿಜೆಪಿ ಸೇರುವುದು ಅನಿವಾರ್ಯವಾಗಿದೆ. ಒಂದು ಕಾಲದಲ್ಲಿ ಪ್ರಾಥಮಿಕ ಶಿಕ್ಷಣವೂ ಮುಗಿಸಲಾಗದೆ ಲಾರಿ ಡ್ರೈವರಿಕೆ ಮಾಡಿಕೊಂಡಿದ್ದ ಹೆಬ್ಬಾರ್ ಇವತ್ತು ಕೋಟಿ-ಕೋಟಿ ತೂಗುವ ಅದಿರು ಉದ್ಯಮಿಯಾಗಿ, ರಾಜ್ಯ ಸರ್ಕಾರವನ್ನೇ ಉರುಳಿಸುವ ಪ್ರಭಲ ಶಾಸಕ ಸಾಹೇಬನಾಗಿ ಬೆಳೆದಿರುವುದು ಪ್ರಜಾಪ್ರಭುತ್ವದ ದುರಂತವೇ ಸರಿ!

ಹೆಬ್ಬಾರ್‍ಗೆ ಬಿಜೆಪಿ “ಸಂಸ್ಕೃತಿ” ಹೊಸತೇನೂ ಅಲ್ಲ. 1990ರ ದಶಕದ ಅಂತ್ಯದಲ್ಲಿ ಆತ ಜಿಲ್ಲಾ ಬಿಜೆಪಿ ಅಧ್ಯಕ್ಷತೆ ನಿಭಾಯಿಸಿದ್ದ. ಆದರೆ ಬಿಜೆಪಿಯಲ್ಲಿ ಆತನಿಗೆ ಕಾಗೇರಿ ಮಾಣಿ, ಅನಂತ್ಮಾಣಿ ಜತೆ ಏಗಲಾಗಲಿಲ್ಲ. ಸಂಸದ ಅನಂತ್ಮಾಣಿ ಶಿರಸಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲೇ ಈ ಹೆಬ್ಬಾರ್‍ಗೆ ಅಂದು ಕೆನ್‍ಕೆನ್ನೆಗೆ ಬಾರಿಸಿದ್ದ. ತಾನು ಬಿಜೆಪಿಯಲ್ಲಿನ್ನೂ ಬಚಾವಾಗಲಾರೆನೆಂದು ಅರಿತ ಹೆಬ್ಬಾರ್ ಕಾಂಗ್ರೆಸ್‍ನ ಪವರ್‍ಫುಲ್ ನಾಯಕಿಯಾಗಿದ್ದ ಮ್ಯಾಗಿಯ ಸೆರಗು ಹಿಡಿದು ಕಾಂಗ್ರೆಸ್‍ಗೆ ನುಸುಳಿದ್ದ. ಬಂದವನೇ ಡಬಲ್‍ಗೇಮ್ ಶುರುಹಚ್ಚಿಕೊಂಡಿದ್ದ. ಹಗಲು ಮ್ಯಾಗಿ ಬಿಡಾರದಲ್ಲಿದ್ದರೆ ರಾತ್ರಿ ದೇಶ್‍ಪಾಂಡೆ ಕ್ಯಾಂಪಿನಲ್ಲಿ ಕಾಣಿಸುತ್ತಿದ್ದ. ಇದರಿಂದ ಕೆರಳಿದ ದೇಶಪಾಂಡೆ ಆತನ ಬಾಲ ಕಟ್ ಮಾಡಲು ಮುಂದಾದರು. ಮ್ಯಾಗಿ ಕಾಂಗ್ರೆಸಲ್ಲಿ ಕಾವು ಕಳಕೊಳ್ಳುತ್ತಿದ್ದಂತೆಯೇ ಹೆಬ್ಬಾರ್ ದೇಶಪಾಂಡೆಗೆ ಆಹಾರವಾಗಿ ಹೋದ!!
ಕಳೆದ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಹೆಬ್ಬಾರ್ ಎದುರು ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಎಸ್.ಪಾಟೀಲ್ ತಲೆ ಕಂಡರೆ ಸಂಸದ ಮಾಣಿಗೆ ಆಗದು. ಹಾಗಾಗಿ ಆತ ಹಳೆ ವೈರತ್ವ ಮರೆತು ಸ್ವ-ಜಾತಿಯ ಹೆಬ್ಬಾರ್‍ಗೆ ಸಹಕರಿಸಿದ್ದ. ಈ ಹವ್ಯಕ ಹಿತಾಸಕ್ತಿಯ ರಾಜಕಾರಣದಲ್ಲಿ ಸ್ವರ್ಣವಲ್ಲಿ ಸ್ವಾಮಿಯ “ಮಂತ್ರಾಕ್ಷತೆ”ಯೂ ಕೆಲಸ ಮಾಡಿತ್ತು.

ರಾಮಕೃಷ್ಣ ಹೆಗಡೆ ಕಾಲದಿಂದ ನಿರಂತರವಾಗಿ ಒಂದಿಲ್ಲೊಂದು ಅಧಿಕಾರ ಅನುಭವಿಸುತ್ತಿರುವ ದೇಶಪಾಂಡೆ ಈಗ ಹಣ್ಣಾಗಿದ್ದಾರೆ. ಈ ಮುದಿ ಕಾಲದಲ್ಲಿ ಎರಡು ಆಸೆ ಆತನಲ್ಲಿದೆ. ಒಂದು ತಾನು ಮುಖ್ಯಮಂತ್ರಿ ಆಗಬೇಕೆಂಬುದು. ಮತ್ತೊಂದು, ತನ್ನ ಸುಪುತ್ರ ಪ್ರಶಾಂತನನ್ನು ಎಂಪಿ ಅಥವಾ ಎಮ್ಮೆಲ್ಲೆ ಮಾಡಬೇಕೆಂಬುದು. ಬಿಜೆಪಿ ಸೇರಿದರೆ ಸಿಎಂ ಆಗುವುದು ಕಷ್ಟ. ಹಾಗೆಯೇ ಕಾಂಗ್ರೆಸಲ್ಲುಳಿದರೆ ಮಗನ ಭವಿಷ್ಯಕ್ಕೆ ಮಾರಕ. ಹೀಗಾಗಿ ದೇಶಪಾಂಡೆ ಎರಡು ದೋಣಿಯ ಮೇಲೆ ಕಾಲಿಟ್ಟು ಹೊಯ್ದಾಡುತ್ತಿದ್ದಾರೆ. ಈಗೀಗ ಕಾಂಗ್ರೆಸಲ್ಲೂ ದೇಶಪಾಂಡೆಗೆ ಅಂಥ ಪ್ರಾಮುಖ್ಯತೆ ಸಿಗುತ್ತಿಲ್ಲ. ಆದರೂ ತಾನೇನಾದರೂ ರಾಜಿ ಅಭ್ಯರ್ಥಿಯಾಗಿ ಸಮ್ಮಿಶ್ರದ ಸಿಎಂ ಆಗಬಹುದೆಂಬ ಯೋಚನೆಯಿಂದ ದೇಶಪಾಂಡೆ ಗಡಿಬಿಡಿಗೆ ಬಿದ್ದಿದ್ದಾರೆ. ದೇವೇಗೌಡರ ಮನೆಗೆ ಹೋಗಿ ಗಂಟೆಗಟ್ಟಲೆ ಮಾತಾಡುತ್ತಿದ್ದಾರೆ. ಅತ್ತ ಕಾಂಗ್ರೆಸ್ ಹೈಕಮಾಂಡ್‍ಗೆ ತನ್ನನ್ನು ಸಿಎಂ ಕ್ಯಾಂಡಿಡೇಟ್ ಮಾಡಿದರೆ ಓಡಿಹೋಗಿರುವ ಶಾಸಕರಲ್ಲಿ ಕೆಲವರನ್ನಾದರೂ ಖರೀದಿಸಿ ತರುತ್ತೇನೆಂದು ಭರವಸೆ ಕೊಡುತ್ತಿದ್ದಾರೆ.
ಈ ನೈಚ್ಯಾನುಸಂಧಾನದಲ್ಲಿ ಸೋತರೆ ದೇಶಪಾಂಡೆಗೆ ಮಗನ ಭವಿಷ್ಯ ಮುಖ್ಯವಾಗುತ್ತಿದೆ. ಅಂದರೆ ಆತ ಬಿಜೆಪಿ ಪಾಲಾಗುವುದು ಪಕ್ಕಾ. ಅಮಿತ್ ಶಾ ಈಚೆಗೆ ಗೋವಾಕ್ಕೆ ಬಂದಾಗ ದೇಶಪಾಂಡೆ ರಹಸ್ಯವಾಗಿ ಸಂಧಿಸಿ ಬಂದಿದ್ದಾರೆ. ಸಮ್ಮಿಶ್ರ ಸರ್ಕಾರ ಪತನವಾಗುತ್ತಲೇ ಆತ ಬಿಜೆಪಿಗೆ ಅಧಿಕೃತವಾಗಿ ಪ್ರವೇಶ ಪಡೆಯುತ್ತಾರೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಮಂತ್ರಿಯಾಗುವ ಯೋಗದ ದೇಶಪಾಂಡೆ ಈ ಬಾರಿ ಬಿಜೆಪಿಯಲ್ಲಿ ಮಂತ್ರಿಗಿರಿ ಕೇಳುತ್ತಿಲ್ಲ. ಬದಲಿಗೆ ತನ್ನ ಮಗ ಪ್ರಶಾಂತನಿಗೆ ಎಂಪಿ ಅಥವಾ ಹಳಿಯಾಳದ ಎಮ್ಮೆಲ್ಲೆ ಟಿಕೆಟ್ ಕೇಸರಿ ಪಕ್ಷದಿಂದ ಬಯಸುತ್ತಿದ್ದಾರೆ. ಹಳಿಯಾಳದಲ್ಲಿ ಬಗಲಲ್ಲಿರುವವ ದುಷ್ಮನ್-ಎಮ್ಮೆಲ್ಲೆ ಎಸ್.ಎಲ್.ಘೋಟನೇಕರ್ ತಿರುಗಿ ಬಿದ್ದರೆ ಬಿಜೆಪಿಯಿಂದಲೂ ತನ್ನ ಮಗ ಗೆಲುವು ಕಷ್ಟವೆಂಬ ಲೆಕ್ಕಾಚಾರವೂ ಆತ ಹಾಕಿದ್ದಾರೆ. ಬಹುಸಂಖ್ಯಾತ ಮರಾಠ ಸಮಾಜದ ಘೋಟನೇಕರ್ ತನ್ನ ಮಗನನ್ನು ಹಳಿಯಾಳದ ಭಾವಿ ಎಮ್ಮೆಲ್ಲೆ ಎಂದೇ ದೃಢವಾಗಿ ನಂಬಿದ್ದಾರೆ. ಹೀಗಾಗಿ ದೇಶಪಾಂಡೆ ತನ್ನ ಬೀಗ, ಪ್ರಶಾಂತನಿಗೆ ಹೆಣ್ಣುಕೊಟ್ಟು ಮಾವ ಮುಂಬೈನ ಪ್ರಭಾವಿ ರಾಜಕಾರಣಿ ಪ್ರಫುಲ್ ಪಟೇಲ್ ಬಲವೂ ಸೇರಿಸಿಕೊಂಡು ಮಗನಿಗೆ ಎಂಪಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ದೇಶಪಾಂಡೆ ಬಿಜೆಪಿ ಸೇರಿದರೆ ಏನಾಗುತ್ತದೆ? ಆತನ ಮಗನ ಭವಿಷ್ಯ ಬೆಳಗುತ್ತದೆ. ಶಿವರಾಮ ಹೆಬ್ಬಾರನ ಗ್ರಹಚಾರ ಮತ್ತೆ ಕೆಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...