Homeಅಂಕಣಗಳುನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ

ನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..

ರಾಜ್ಯದ ಹೈಯರ್ ಎಜುಕೇಷನ್ ಮಿನಿಸ್ಟರ್ ‘ಜಟ್ಟಿ ದೆವ್ವೇಗೌಡ’ರ ಕಡೆಯಿಂದ ಕಾಲೇಜು ಸ್ಟೂಡೆಂಟುಗಳಿಗೆ ಬಿಸಿಬಿಸಿ ಸುದ್ದಿಯೊಂದು ಲಭ್ಯವಾಗಿದ್ದು, ಶಿಕ್ಷಣ ಮಂತ್ರಿಯ ಹೊಸ ಹೇಳಿಕೆಗೆ ಹುಡುಗ ಹುಡುಗಿಯರು ಕೆಂಡಾಮಂಡಲರಾಗಿದ್ದಾರೆ. ಆದರೆ ಈ ಮಂತ್ರಿಯ ಹೇಳಿಕೆ ಬ್ಲೂಜೆಪಿ ವಯೋವೃದ್ಧರಿಗೆ ರೋಮಾಂಚನ ಉಂಟುಮಾಡಿದೆ. ‘ಕಾಲೇಜಲ್ಲಿ ಓದೋ ಹುಡುಗ ಹುಡುಗೀರು ಲವ್ವುಗಿವ್ವು ಮಾಡ್ಬೇಡಿ, ಪಾರ್ಕು ಥೇಟ್ರು ಸುತ್ತಬೇಡಿ, ನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ’ ಅಂತ ಜಟ್ಟಿ ದೆವ್ವೇಗೌಡರು ಫತ್ವಾ ಹೊರಡಿಸಿದ್ದಾರೆ. ಇದರಿಂದ ಕನಲಿ ಕೆಂಡವಾಗಿರೋ ಕಾಲೇಜು ಯುವಕ ಯುವತಿಯರು “ನಾವು ಲವ್ವಾದ್ರೂ ಮಾಡ್ಕೋತೀವಿ, ಡವ್ವಾದ್ರು ಮಾಡ್ಕೋತೀವಿ, ಮೊದಲು ತಾವು ವಯಸ್ಕರ ಶಿಕ್ಷಣ ಶಾಲೆಗೆ ಸೇರ್ಕೊಂಡು ಹೈಸ್ಕೂಲ್ ಪಾಸಾಗೋದು ನೋಡಿ, ಎಸೆಸೆಲ್ಸಿಯೂ ಪಾಸಾಗದ ಟಪಾಸ್ ಗಿರಾಕಿಗಳು ನಮಗೆ ಬುದ್ದಿವಾದ ಹೇಳೋ ಅವಶ್ಯಕತೆ ಇಲ್ಲ, ಇನ್ನೊಂದ್ಸಲ ಅದು ಮಾಡ್ಬೇಡಿ, ಇದು ಮಾಡ್ಬೇಡಿ ಅಂತ ನಮಗೆ ರೂಲ್ಸ್ ಮಾಡೋಕೆ ಬಂದ್ರೆ ಭಾಷಣ ಮಾಡ್ತಿರೋ ಸ್ಟೇಜಲ್ಲೇ ನಿಮ್ಮ ಪೈಜಾಮ ಎಳೆದು ಅರೆಬೆತ್ತಲೆ ನಿಲ್ಲಿಸ್ತೀವಿ“ ಎಂದು ಇನ್ನೂ ಹೇಳಿಲ್ಲವೆಂದು ವರದಿಯಾಗಿದೆ.

******

ABP ನ್ಯೂಸ್ ಚಾನೆಲ್ ಇತ್ತೀಚೆಗೊಂದು ಕುಟುಕು ಕಾರ್ಯಾಚರಣೆ ನಡೆಸಿ ಗೋರಕ್ಷಕರ ಹೆಸರಿನಲ್ಲಿ ಕೊಲೆ ದರೋಡೆ ಮಾಡುತ್ತ ಹಫ್ತಾ ವಸೂಲಿ ದಂಧೆ ನಡೆಸುತ್ತಿದ್ದ ಹೋಪ್ಲೆಸ್ ಹೇತ್ಲಾಂಡಿಗಳನ್ನು ಜನರ ಮುಂದೆ ಬೆತ್ತಲು ಮಾಡಿದೆ. ಮನೆಯಲ್ಲಿ ಹೆಂಡ್ತಿಮಕ್ಕಳಿಗೆ ಎರಡೊತ್ತಿನ ಅನ್ನ ಹಾಕಲು ಯೋಗ್ಯತೆಯಿಲ್ಲದ ಚಿಳ್ಳೆಪಿಳ್ಳೆಗಳೆಲ್ಲ ಗಂಟಲಿಗೊಂದು ಬಾವುಟ ಹೆಟ್ಟಿಕೊಂಡು “ಜೈ ಶ್ರೀ ಮಾಮ್” ಎನ್ನುತ್ತ ಹಸು ದನ ಸಾಕಿದವರ ಮೇಲೆ ಬಿದ್ದು ಸಾಯ ಹೊಡೆದು ಕೊಂದು ಜೈಲು ಸೇರುತ್ತಿವೆ. ಇಂಥದ್ದೇ ಹೀನಾಯ ಸಾಹಸದಲ್ಲಿ ಇಬ್ಬರನ್ನು ಕೊಂದು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದ ಎರಡು ಹೇತ್ಲಾಂಡಿ ವೀರರನ್ನು ಓಆಖಿಗಿ ರಹಸ್ಯ ಕ್ಯಾಮೆರಾದೆದುರು ಬಾಯಿ ಬಿಡಿಸಿದೆ. ಇವರು ಕೋರ್ಟಿನಲ್ಲಿ ‘ನಮಗೇನೂ ಗೊತ್ತಿಲ್ಲ, ಆ ಕೊಲೆಗಳು ನಡೆದ ದಿನ ನಾವು “ಅಂತರರಾಷ್ಟ್ರೀಯ ಗೋಮೂತ್ರ ಸೇವಕರ ದಿನಾಚರಣೆ”ಯಲ್ಲಿ ಭಾಗವಹಿಸಿ ಬಕೇಟಿನಲ್ಲಿ ಗೋಮೂತ್ರ ಕುಡಿಯುತ್ತಿದ್ದೆವು, ಈ ಕೊಲೆಗೂ ನಮಗೂ ಸಂಬಂಧವಿಲ್ಲ’ ಎಂದಿದ್ದರು. ಜಾಮೀನು ಪಡೆದು ಹೊರಬಂದ ಕೂಡಲೆ ಇದ್ದಕ್ಕಿದ್ದಂತೆ ಗಂಡಸರಾದ ಈ ಕೊಲೆಗಡುಕರು ಓಆಖಿಗಿ ರಹಸ್ಯ ಕ್ಯಾಮೆರಾದೆದುರು ಆ ಕೊಲೆಗಳನ್ನು ಮಾಡಿದ್ದು ನಾವೇ, ನಮ್ ಸಪೋರ್ಟಿಗೆ ಪಿಳ್ಳಜುಟ್ಟು ಪಾರ್ಟಿಯವ್ರು ಇದ್ದಾರೆ, ಇನ್ನೊಂದೆರಡು ಕೊಲೆ ಮಾಡಿ ನೀವು ಸಾಯೋಮಟ ಜೈಲಿಗೆ ಹೋಗಿ, ನಿಮ್ಮ ಮನೆಮಂದಿ ಬಾಯಿಗೆ ಮಣ್ಣು ಹಾಕೋ ಜವಾಬ್ದಾರಿ ನಮ್ದು ಅಂತ ಪಿಳ್ಳಜುಟ್ಟು ಪಾರ್ಟಿಯ ಪುಟಗೋಸಿಗಳು ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ. ತಮ್ಮ ಮನೆಮಕ್ಕಳನ್ನು ಹೈಯರ್ ಎಜುಕೇಷನ್ನಿಗೆ ಹೊರದೇಶಕ್ಕೆ ಕಳಿಸಿ ಅವರ ಬಾಳು ಬಂಗಾರ ಮಾಡುವ ಈ ಪಿಳ್ಳಜುಟ್ಟು ಪುಟಗೋಸಿಗಳು, ತಳ ಸಮುದಾಯದ ಜನರ ಬದುಕಿನ ಮೇಲೆ ಚಪ್ಪಡಿಕಲ್ಲು ಎಳೆದು ಅದರ ಮೇಲೆ ಬಾಳೆಎಲೆ ಹಾಸಿಕೊಂಡು ಪಾಯಸ ನೆಕ್ಕಿಕೊಂಡು ಕುಳಿತುಬಿಡುತ್ತಾರೆಂಬುದು ಬಡ ಸಮುದಾಯಗಳಿಗೆ ಇನ್ನೂ ಅರಿವಾಗಿಲ್ಲವೆಂಬ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ‘ಗ್ಯಾಂಗ್ಸ್ ಆಫ್ ವಾಸ್ಸೆಪುರ್’ ಎಂಬ ಚಿತ್ರ ತೆಗೆದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಈ ಭಡವ ರಾಸ್ಕಲ್‍ಗಳ ಬಗ್ಗೆ “ ಗ್ಯಾಂಗ್ಸ್ ಆಫ್ ಗಂಜಳಾಪುರ್” ಎಂಬ ಚಿತ್ರ ತೆಗೆಯಲಿದ್ದಾರೆಂದು ನಂಬಲನರ್ಹ ಮೂಲಗಳು ತಿಳಿಸಿವೆ.

******

‘ಹಾಳೂರಿಗೆ ಉಳಿದೋನೆ ಐಲುಗಿರಾಕಿ’ ಎನ್ನೋ ಗಾದೆಗೆ ಕರೆಕ್ಟಾಗಿ ಫಿಟ್ ಆಗುವ ‘ಅನಂತ್ ಗಮಾಡ್ ಹೆಗಡೆ’ ಹೋದಲ್ಲಿ ಬಂದಲ್ಲೆಲ್ಲ ಕಯ್ಯಯ್ಯೋ ಕಯ್ಯಯ್ಯೋ ಅನ್ನುತ್ತ ಅತ್ತ ಪಕ್ಷದಿಂದಲೂ, ಇತ್ತ ಜನರಿಂದಲೂ ಸಮಪ್ರಮಾಣದಲ್ಲಿ ಉಗಿಸಿಕೊಂಡು ತಿರುಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿದೆ. ಹೊಸಾ ವಿಷ್ಯ ಏನಪ್ಪ ಅಂತಂದ್ರೆ.. “ ಬ್ಲೂಜೆಪಿ”ಯವ್ರು ಹುಲಿ ಇದ್ದಂಗೆ ಮಿಕ್ಕಿದೋರೆಲ್ಲ ಜಿಂಕೆ ಪಂಕೆ ಇದ್ದಂಗೆ, ನಮ್ದು ಹಂಗೈತೆ-ಹಿಂಗೈತೆ, ಲೊಟ್ಟೆ-ಲೊಸಕು, ಮಣ್ಣು ಮಸಕು ಅಂತೆಲ್ಲ ಕಯ್ಯಯ್ಯೋ ಅಂದಿದೆ. ಇವೆಲ್ಲವನ್ನು ‘ಅನಿಮಲ್ ಪ್ಲಾನೆಟ್’ ಚಾನೆಲ್‍ನ ನೇರಪ್ರಸಾರದಲ್ಲಿ ನೋಡಿದದವರು ಈ ಟೈಗರ್ ಸ್ಟೋರಿಗೆ ಥರಾವರಿ ಟ್ವಿಸ್ಟುಗಳನ್ನು ಕೊಡುತ್ತಿದ್ದಾರೆ. ಬ್ಲೂಜೆಪಿಯವರು ಟೈಗರ್‍ಗಳಾದರೆ ಮೊದಲು ಬಟ್ಟೆ ಬಿಚ್ಚಿ ಬರೇಬೆತ್ತಲೆ ಓಡಾಡಬೇಕು, ಯಾಕಂದ್ರೆ ಟೈಗರ್‍ಗಳು ಬಟ್ಟೆ ಹಾಕ್ಕಳಲ್ಲ ಅಂತ ಒಬ್ರು ಅಂದಿದ್ದಾರೆ. ತೊಡೆ ಸಂದಿಯಿಂದ ಮೂರಡಿ ಬಾಲ ನೇತಾಡ್ತಿದ್ರೆ ಮಾತ್ರ ಅದು ಟೈಗರ್ ಅನಿಸಿಕೊಳ್ತದೆ, ಆದ್ರಿಂದ ಗಮಾಡ್ ಹೆಗಡೆಗೂ ಒಂದು ಬಾಲ ಸಿಗಿಸಿ ಅದನ್ನವನು ಲಳ ಲಳ ಅಲ್ಲಾಡಿಸಿಕೊಂಡು ಓಡಾಡಬೇಕು, ಅವಾಗಷ್ಟೇ ಟೈಗರ್ ಅಂತ ಕನ್ಸಿಡರ್ ಮಾಡಬಹುದೆಂದು ಮತ್ತೊಬ್ಬರು ಅಂದಿದ್ದಾರೆ. ಇಲ್ಲ, ಇಲ್ಲ, ಟೈಗರ್‍ಗಳು ಹಸಿವಾದರೆ ಪುದೀನ ಕೊತ್ತಂಬರಿ ಸೊಪ್ಪು ತಿನ್ನೋದಿಲ್ಲ, ಅವಕ್ಕೆ ಹಸೀಮಾಂಸವೇ ಆಗಬೇಕು, ಆದ್ದರಿಂದ ಅನಂತ್ ಗಮಾಡ್ ಹೆಗಡೆ ಪಕ್ಷದೋರು ಊರಲ್ಲಿರೋ ಕೋಳಿ ಅಂಗಡಿ, ಮಟನ್ ಅಂಗಡಿಗಳಿಗೆ ಹುಲಿಗಳಂತೆ ಮಂಡಿ ಕೈಗಳನ್ನು ನೆಲಕ್ಕೂರಿ ನಾಲಿಗೆ ಹೊರಚಾಚಿ ನಡೆದುಕೊಂಡು ಹೋಗಿ ಅಲ್ಲಿ ವೇಸ್ಟ್ ಎಂದು ಎಸೆಯುವ ತ್ಯಾಜ್ಯಮಾಂಸವನ್ನು ಕಸದಡಬ್ಬಿಗೆ ಬಾಯಿ ಹಾಕಿ ಕಚಪಚನೆ ತಿನ್ನಬೇಕು, ಆಗಷ್ಟೇ ಇವರೆಲ್ಲ ಹುಲಿಗಳಾಗಲು ಸಾಧ್ಯ ಎಂದು ಜನರು ತರಾವರಿ ಐಡಿಯಾಗಳನ್ನು ಅನಂತ್ ಗಮಾಡ್ ಹೆಗಡೆಗೆ ಕೊಡುತ್ತಿದ್ದಾರೆ. ಅಗಣಿ ಹಾಕೋಕೆ ಹೋಗಿ ಇನ್ನೇನೋ ಸಿಗಿಸಿಕೊಂಡಂತಾಯ್ತಲ್ಲ ಎಂದು ಗಾಬರಿಯಾಗಿರೋ ಗಮಾರ್ ಹೆಗಡೆ ತನ್ನ ರಷ್ಯನ್ ಹೇರ್ ಸ್ಟೈಲ್ ತಲೆಗೂದಲಿಗೆ ಕೇಸರಿ ಕಲರ್ ಹೊಡೆಸಿಕೊಳ್ಳಲು ಕಟಿಂಗ್ ಶಾಪ್‍ಗೆ ಹೋದವರು ಇನ್ನೂ ಮನೆಗೆ ವಾಪಸಾಗಿಲ್ಲ ಎಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...