Homeಅಂಕಣಗಳುಈ ಐದು ವರ್ಷದಲ್ಲಿ ಮೋದಿಯವರು ಸಾಧಿಸಿದ್ದೇನು?

ಈ ಐದು ವರ್ಷದಲ್ಲಿ ಮೋದಿಯವರು ಸಾಧಿಸಿದ್ದೇನು?

- Advertisement -
- Advertisement -

ಹೆಚ್.ಎಸ್‍.ದೊರೆಸ್ವಾಮಿ |

2019ರ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಭಾರತೀಯ ಜನತಾ ಪಕ್ಷ ಎಲ್ಲಾ ಪಕ್ಷಗಳಿಗಿಂತ ಹೆಚ್ಚಿನ ಹಣವನ್ನು ಕಾರ್ಪೊರೇಟ್ ಕಂಪನಿಗಳಿಂದ ಪಡೆದಿದೆ. ಅವರು ಅಷ್ಟು ಹಣ ಬಿಟ್ಟಿ ಕೊಟ್ಟಿಲ್ಲ. ಮೋದಿ ಸರ್ಕಾರ ಅದಾನಿ, ಅಂಬಾನಿ ಮುಂತಾದ ಕಾರ್ಪೊರೇಟ್‍ಗಳ 50 ಕೋಟಿ ಸಾಲ ಮನ್ನಾ ಮಾಡಿದೆ. ಸರ್ಕಾರದ ಈ ಉಪಕಾರಕ್ಕಾಗಿ ಮೋದಿಯವರ ಪಕ್ಷಕ್ಕೆ ವಿಶೇಷ ಗಿಫ್ಟ್ ಕೊಡಮಾಡಲಾಗಿದೆ. ಮೋದಿ ಸರ್ಕಾರ ಭ್ರಷ್ಟಾಚಾರದಿಂದ ಮುಕ್ತವಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತಮ್ಮ ಚುನಾವಣಾ ಪ್ರಚಾರದ ಹ್ಯಾಂಡ್‍ಬಿಲ್‍ನಲ್ಲಿ ಹೇಳಿದ್ದಾರೆ. ಮೋದಿಯವರ ಸರ್ಕಾರದ ಭ್ರಷ್ಟಾಚಾರಕ್ಕೆ ಒಂದು ಉದಾಹರಣೆಯಾಗಿ ರಫೆಲ್ ಯುದ್ಧವಿಮಾನ ಖರೀದಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಕಛೇರಿಯಿಂದ ಒಪ್ಪಂದ ಕುದುರಿಸಿದ್ದು ಈಗ ಹೊರಬಿದ್ದಿದೆ. ಅದಕ್ಕಾಗಿ ನೇಮಕವಾಗಿದ್ದ ರಕ್ಷಣಾ ಇಲಾಖೆಯ ಸದಸ್ಯರ ನಿಯೋಗ ಅಂತಿಮಗೊಳಿಸಿದ ಕರಾರುಗಳನ್ನು ಬದಲಿಸುವ ಕೆಲಸ ಸರ್ಕಾರದಿಂದ ನಡೆದಿದೆ. ಅದನ್ನು ಪ್ರಶ್ನಿಸಿದ ರಕ್ಷಣಾ ಇಲಾಖೆಯ ನಿಯೋಗದವರು ಸರ್ಕಾರವೇ ಒಪ್ಪಂದವನ್ನು ನೇರವಾಗಿ ಒಪ್ಪಂದ ಮಾಡಿಕೊಳ್ಳಲಿ ನಮಗೆ ಮುಜುಗರ ಉಂಟುಮಾಡುವುದು ಬೇಡ ಎಂದು ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಸರ್ಕಾರ ವಿಮಾನ ನಿರ್ಮಾಣದ ಗಂಧವೇ ಇಲ್ಲದ ಅಂಬಾನಿಯನ್ನು ಒಬ್ಬ ಪಾಲುದಾರನನ್ನಾಗಿ ಮಾಡಿಕೊಂಡು ಅವರಿಗೆ 65 ಕೋಟಿ ರೂಪಾಯಿ ಲಾಭ ಅನಾಯಾಸವಾಗಿ ಮಾಡಿಕೊಡುವ ಹುನ್ನಾರ ಮಾಡಿದೆ.

ಯೋಗ, ಸ್ವಚ್ಛ ಭಾರತ ಎರಡೂ ಹೊಸ ಯೋಜನೆಗಳಲ್ಲ. ಕರ್ನಾಟಕದಲ್ಲಿ ಯೋಗ ತರಗತಿ ಹತ್ತಾರು ವರ್ಷ ಹಿಂದಿನಿಂದ ತರಗತಿಗಳ ಸ್ಥಾನಗಳಿಂದ ನಡೆಯುತ್ತಿವೆ. ಸ್ವಚ್ಛ ಭಾರತದ ಯೋಜನೆಯನ್ನು ಬಿಜೆಪಿಯವರಿಗೂ ಹಿಂದಿನಿಂದಲೂ ನಡೆಸುತ್ತಿದ್ದಾರೆ. ಅದನ್ನು ಪ್ರಥಮವಾಗಿ ರೂಪಿಸಿದವರು ಪ್ರೊ.ಮರುಳಸಿದ್ಧಯ್ಯನವರು. ಅದನ್ನು ಜಾರಿಗೆ ತಂದವರು ಸಚಿವ ಎಂ.ಪಿ.ಪ್ರಕಾಶ್‍ರವರು. ಇನ್ನು ಸ್ವಾವಲಂಬನೆ ಸಾಧಿಸುವ, ಅಂದರೆ ಉದ್ಯೋಗಾವಕಾಶ ಕಲ್ಪಿಸುವ ಕೆಲಸ ಕುಂಟುತ್ತಾ ಸಾಗಿದೆ. ಅದಕ್ಕಾಗಿ ಘೋಷಿಸಲಾದ ಯೋಜನೆಗಳಿಂದ ಲಾಭ ಪಡೆದವರು ಗಣನೀಯ ಸಂಖ್ಯೆಯಲ್ಲಿಲ್ಲ. ಗ್ರಾಮಗಳಲ್ಲಿ ಇರುವವರೆಲ್ಲರಿಗೂ ಉಳುಮೆಗೆ ಭೂಮಿ ಕೊಡಬೇಕು. ದುಡಿದುಕೊಂಡು ತಿನ್ನಲು ಅವಕಾಶ ಮಾಡಿಕೊಡಬೇಕು. ಇದಾಗಬೇಕಾದರೆ ಭೂ ಸುಧಾರಣೆ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕು. ಭೂ ಮಿತಿ ಶಾಸನವನ್ನು ಪುನರ್ ರೂಪಿಸಬೇಕು. ದುಡಿಯುವ ಎಲ್ಲರಿಗೂ ಕನಿಷ್ಠ 5 ಎಕರೆ ಜಮೀನು ಸಿಗಬೇಕು. ಅನ್ನ ಕಲಸಿ ಕೊಡುವುದು, ಬಡವರ ಖಾತೆಗೆ ಹಣ ಹಾಕುವುದು ಬಡತನ ನಿವಾರಣೆಗೆ ಪರಿಹಾರವಲ್ಲ. ಅದು ಓಟು ಗಿಟ್ಟಿಸಲು ಹೂಡುವ ತಂತ್ರ. ಈ ಗಿಮಿಕ್ ಬಿಟ್ಟು ಬಡವರಿಗೆ ಭೂಮಿ ಹಂಚುವ ಕೆಲಸ ಮಾಡಿದ್ದರೆ ಮೋದಿ ಅವರನ್ನು ಮೆಚ್ಚಿಕೊಳ್ಳಬಹುದಾಗಿತ್ತು.

ಉಚಿತ ಎಲ್‍ಪಿಜಿ ಸೌಲಭ್ಯವನ್ನು ಬಡವರಿಗೆ ನೀಡಿರುವುದು ಅವರ ಸಾಧನೆ ಎಂಬುದನ್ನು ಒಪ್ಪಬಹುದು. ಕೈಗೆಟುಕುವ ದರದಲ್ಲಿ ಜನೌಷಧಿ ಜನರಿಗೆ ಒದಗಿಸುವ ಅವರ ಯೋಜನೆಯೂ ಒಳ್ಳೆಯದೇ.

ಆದರೆ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು. ಈ 5 ವರ್ಷದ ಅವರ ಅಧಿಕಾರದ ಅವಧಿಯಲ್ಲಿ 10 ಕೋಟಿ ಉದ್ಯೋಗಗಳು ಸೃಷ್ಠಿಯಾಗಬೇಕಾಗಿತ್ತು. ಉದ್ಯೋಗ ಸೃಷ್ಟಿಸುವ ರೀತಿ ಘೋಷಣೆಯಾಗಿ ಬೆಳೆಯಿತು. ಗುಡಿಸುವ ಕೆಲಸಕ್ಕೆ ಅರ್ಜಿ ಕರೆದರೆ ಒಂದು ಲಕ್ಷ ಅರ್ಜಿಗಳು ಬರುತ್ತವೆ. ಅದರಲ್ಲಿ 2ರಿಂದ 3 ಸಾವಿರ ಜನ ಪದವೀಧರರು, ಸ್ನಾತಕೋತ್ತರ ಪದವೀಧರರೂ ಇರುತ್ತಾರೆ. ಅಂದರೆ ಓದಿದವರಿಗೂ, ಓದದವರಿಗೂ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂಬುದು ಉತ್ಪ್ರೇಕ್ಷೆಯಲ್ಲ.

ಸ್ವಾತಂತ್ರ್ಯ ಬಂದು 72 ವರ್ಷಗಳೇ ಕಳೆದರೂ ಬಡತನವನ್ನೂ ನೀಗುವ ಕೆಲಸ ನಡೆದೇ ಇಲ್ಲ. ಬಡವರ ಓಟನ್ನು ಕಿತ್ತುಕೊಂಡು ಅಧಿಕಾರಕ್ಕೆ ಬರುತ್ತೀರಿ, ಅವರ ಬಗೆಗೆ ಲೋಕಸಭೆ ಸದಸ್ಯರಾಗುವವರಿಗೆ ಕಿಂಚಿತ್ತೂ ಕಾಳಜಿಯಿಲ್ಲ. ಬಡತನದ ಸಂಪೂರ್ಣ ನಿವಾರಣೆಗೆ ಸರ್ಕಾರ ಮತ್ತು ಪಾರ್ಲಿಮೆಂಟ್ ಸದಸ್ಯರು ಒಂದು ಪರಿಣಾಮಕಾರಿ ಕಾನೂನನ್ನು ತರುವುದರಲ್ಲಿ ವಿಫಲರಾಗಿದ್ದಾರೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲೂ ಅದರ ಪ್ರಸ್ತಾಪ ಇರುವುದಿಲ್ಲ. ಶ್ರೀಮಂತರನ್ನು ಓಲೈಸುವ ಪಕ್ಷ ಭಾರತೀಯ ಜನತಾ ಪಕ್ಷ. ಸಮಾನತೆಯನ್ನು ಸಾಧಿಸುವ ವಿಚಾರ ಅವರಿಗೆ ಬೇಕಾಗಿಲ್ಲ. ಅವರು Statusquoists. ಅಸಮಾನತೆಯ ಸಮಾಜದ ನಿರ್ಮಾಣವೇ ಅವರ ಗುರಿ, ದೊಡ್ಡ ಜಮೀನ್ದಾರರು, ಪಟ್ಟಭದ್ರ ಹಿತಾಸಕ್ತಿಗಳು, ಕಾರ್ಪೊರೇಟ್ ಸಂಸ್ಥೆಗಳ ಮಾಲೀಕರು ಅರೆಸ್ಸೆಸ್ ಮತ್ತು ಬಿಜೆಪಿಯ ಬೆನ್ನೆಲುಬು. ಈ ಕಠೋರ ಮನೋಭಾವದ ಭಾಜಪಕ್ಕೆ ಮತ ನೀಡಬೇಕೇ?.

ಹಳ್ಳಿಗಳಲ್ಲಿ ದುಡಿಯಲು ಆಸಕ್ತಿಯುಳ್ಳ ಎಲ್ಲ ಭೂ ಹೀನ ರೈತರಿಗೆ ಮತ್ತು ರೈತ ಕಾರ್ಮಿಕರಿಗೆ ತಲಾ 5 ಎಕರೆ ಜಮೀನು ನೀಡುವ ಮೂಲಕ ಗ್ರಾಮೀಣ ಬಡತನ ನೀಗಬೇಕು. ಅದರಂತೆಯೇ ಪಟ್ಟಣ ಮತ್ತು ತಾಲ್ಲೂಕು ಕೇಂದ್ರದಲ್ಲಿರುವ ಬಡವರ ಬಡತನ ನೀಗಲು ಬಿಜೆಪಿ ಯಾವ ಕಾರ್ಯಕ್ರಮವನ್ನೂ ಹಾಕಿಕೊಂಡಿಲ್ಲ. ಹಳ್ಳಿಗಳಲ್ಲಿ ದುಡಿದುಕೊಂಡು ತಿನ್ನುವ ಸಲುವಾಗಿ ಭೂಮಿ ಹಂಚುವ ರೀತಿಯಲ್ಲಿ ನಗರ ಪ್ರದೇಶಗಳಲ್ಲಿ ಪ್ರತಿಮನೆಯೂ ಒಂದು ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ ಕೇಂದ್ರವಾಗಬೇಕು. ಆಗ ಜನರು ಸ್ವಾವಲಂಬಿಗಳಾಗುತ್ತಾರೆ.

ಜವಹರಲಾಲ್ ನೆಹ್ರು ಪ್ರಧಾನಿಯಾಗಿದ್ದಾಗ ಈ ಪ್ರಯೋಗ ಪಂಜಾಬಿನಲ್ಲಿ ನಡೆಯಿತು. ಆಗ ಕೈರಾನ್ ಎಂಬುವವರು ಪಂಜಾಬಿನ ಮುಖ್ಯಮಂತ್ರಿ ಆಗಿದ್ದರು. ಅವರು ಪಂಜಾಬನ್ನು ಗೃಹ ಕೈಗಾರಿಕೆಗಳ, ಗುಡಿ ಕೈಗಾರಿಕೆಗಳ ಆಗರ ಮಾಡಲು ಸಂಕಲ್ಪ ಮಾಡಿದರು. ಆ ಕೆಲಸದಲ್ಲಿ ಅವರು ಗೆಲುವನ್ನೂ ಸಂಪಾದಿಸಿದರು. ಬಡತನದ ಖಾಯಂ ನಿವಾರಣೆಗೆ ಬುನಾದಿಯನ್ನು ಹಾಕಿದರು. ಆದರೆ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದರೆಂಬ ಅಪವಾದಕ್ಕೆ ತುತ್ತಾಗಿದ್ದರು. ಅದಕ್ಕಾಗಿ ಅವರ ಕೊಲೆಯಾಯಿತು. ಆದರೆ ಬಡತನ ನಿವಾರಣೆಗೆ ಅವರು ಕೈಗೊಂಡ ಕ್ರಮಗಳ ಬಗೆಗೆ ಪಂಜಾಬಿನ ಜನತೆ ಇಂದಿಗೂ ಕೈರಾನ್‍ರನ್ನು ನೆನೆಯುತ್ತಾರೆ.

ಪಂಜಾಬಿನಲ್ಲಿ ನಡೆದ ಈ ಪ್ರಯೋಗ ಭಾರತದಾದ್ಯಂತ ಪಸರಿಸಬೇಕು. ಈ ಕುರಿತು ಭಾಜಪ ಪ್ರಣಾಳಿಕೆಯಲ್ಲಿ ಪ್ರಸ್ತಾಪವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...