Homeಸಿನಿಮಾಸಿನಿ ಸುದ್ದಿಗೇಮ್ ಆಫ್ ಥ್ರೋನ್ಸ್ ಮತ್ತು ಪೀಟರ್ ಡಿಂಕ್ಲೇಜ್

ಗೇಮ್ ಆಫ್ ಥ್ರೋನ್ಸ್ ಮತ್ತು ಪೀಟರ್ ಡಿಂಕ್ಲೇಜ್

- Advertisement -
- Advertisement -

ರಾಜಶೇಖರ್ ಅಕ್ಕಿ |

ಈ ವಾರದ ಸಿನಿಯಾನದಲ್ಲಿ ಯಾವುದೇ ನಿರ್ದೇಶಕರ ಅಥವಾ ಸಿನೆಮಾದ ಬಗ್ಗೆ ಇರದೇ ಒಂದು ಟಿವಿ ಸಿರೀಸ್ ಬಗ್ಗೆ ಬರೆಯುತ್ತಿದ್ದೇನೆ. ಇದು ಗೇಮ್ ಆಫ್ ಥ್ರೋನ್ಸ್ ಎನ್ನುವ ಧಾರಾವಾಹಿ.
ಬೆಂಕಿಯನ್ನು ಉಗುಳುವ ದೈತ್ಯ ಡ್ರಾಗನ್‍ಗಳು, ದಶಕಗಳ ಕಾಲ ಮುಂದುವರೆಯುವ ಬೇಸಿಗೆ, ಒಂದು ಜೀವಮಾನದಷ್ಟು ಸಮಯ ಮುಂದುವರೆಯಬಲ್ಲ ಚಳಿಗಾಲ, ಸತ್ತ ಮೇಲೆ ಜೀವ ಪಡೆದುಕೊಂಡು ಮನುಷ್ಯರನ್ನು ಕೊಲ್ಲುವ ನೈಟ್‍ವಾಕರ್‍ಗಳು, ಈ ವೈಟ್‍ವಾಕರ್‍ಗಳನ್ನು ಮತ್ತು ಇತರೆ ಪ್ರದೇಶಗಳನ್ನು ಬೇರ್ಪಡಿಸಲು ನಿರ್ಮಿಸುವ ಒಂದು ಮಹಾನ್ ಗೋಡೆ, ಏಳು ಕಿಂಗ್‍ಡಮ್‍ಗಳು, ಅನೇಕ ರಾಜರು, ರಾಜಕುಮಾರರು, ರಾಜಕುಮಾರಿಯರು ಮತ್ತು ಅವೆಲ್ಲವುಗಳನ್ನು ಆಳುವ ಒಂದು ಐರನ್ ಥ್ರೋನ್ (ಕಬ್ಬಿಣದ ಸಿಂಹಾಸನ) ಮತ್ತು ಅದಕ್ಕಾಗಿ ನಡೆಯುವ ಸಮರಗಳು.
ಜಾರ್ಜ್ ಆರ್ ಆರ್ ಮಾರ್ಟಿನ್ ಎನ್ನುವ ಲೇಖಕರು ಬರೆದ ‘ದಿ ಸಾಂಗ್ ಆಫ್ ಐಸ್ ಅಂಡ್ ಫೈರ್’ ಎನ್ನುವ ಕಾದಂಬರಿಗಳ ಸರಣಿಯ ಕಿರುಪರೆದಯ ಅಳವಣಿಕೆ. ಜಾರ್ಜ್ ಮಾರ್ಟಿನ್ ಅವರ ಮುಂದೆ ತಮ್ಮ ಕಾದಂಬರಿಗಳನ್ನು ಒಂದು ಸಿನೆಮಾ ಮಾಡಬೇಕೆಂದು ಅನೇಕ ಪ್ರಸ್ತಾಪಗಳಿದ್ದವು. ಆದರೆ ಒಂದು ಸಿನೆಮಾದ ಅವಧಿ 2 ಗಂಟೆ. ಎರಡು ಗಂಟೆಯೊಳಗೆ ಇಂತಹ ಬೃಹತ್ ಗಾತ್ರದ ಕೃತಿಯನ್ನು ಅಳವಡಿಸಿಕೊಳ್ಳಲಾಗದು ಎಂದು ಅವರಿಗೆ ಗೊತ್ತಿತ್ತು. ಹಾಗಾಗಿ ಡೇವಿಡ್ ಬೆನಿಆಫ್ ಮತ್ತು ಡಿ.ಬಿ. ವೈಸ್ ಎನ್ನುವ ನಿರ್ಮಾಪಕ/ಲೇಖಕರು ಒಂದು ಧಾರವಾಹಿಯನ್ನಾಗಿ ನಿರ್ಮಿಸುವ ಪ್ರಸ್ತಾಪ ಇಟ್ಟಾಗ ಮಾರ್ಟಿನ್ ಸಂತೋಷದಿಂದಲೇ ಒಪ್ಪಿಕೊಂಡರು. ಅದರರ್ಥ ನೂರಾರು ಗಂಟೆಗಳ ಅವಧಿಯ ಬೃಹತ್ ಸಿನೆಮಾ ಟಿವಿ ಪರದೆಯ ಮೇಲೆ! (ಹೆಚ್ಚಿನ ಜನರು ತಮ್ಮ ಕಂಪೂಟರ್ ಪರದೆಯ ಮೇಲೆಯೇ ನೋಡಿದ್ದು ಬೇರೆ ಮಾತು).
ಗೇಮ್ ಆಫ್ ಥ್ರೋನ್ಸ್ ನೋಡುತ್ತಿದ್ದರೆ ಇದನ್ನು ನೋಡಲು ಚಿಕ್ಕ ಪರದೆಯಲ್ಲ, ಬೆಳ್ಳಿ ಪರದೆಯೂ ಸಾಲದು ಎಂದು ಅನಿಸಿದರೆ ಆಶ್ಚರ್ಯವಲ್ಲ.
ಗೇಮ್ ಆಫ್ ಥ್ರೋನ್ಸ್ ಎಂದರೆ ಮೊದಲು ಕಣ್ಸೆಳೆಯುವುದು ಅದರ ಗಾತ್ರ, ಬೃಹತ್ ಪ್ರಮಾಣ. ಕೆಲವು ಅಂಕಿ ಅಂಶಗಳನ್ನು ಗಮನಿಸೋಣ.
ಬಜೆಟ್ – ಒಂದು ಎಪಿಸೋಡಿನ ಖರ್ಚು 10 ಮಿಲಿಯನ್ ಡಾಲರ್‍ಗಳು ಅಂದರೆ ಸರಿಸುಮಾರು 70 ಕೋಟಿ ರೂಪಾಯಿಗಳು. ಇಂತಹ 73 ಎಪಿಸೋಡುಗಳು. ಒಟ್ಟಾರೆ ಬಜೆಟ್ಟಿನ ಲೆಕ್ಕ ನೀವೇ ಹಾಕಿ. (ಎಹ್‍ಬಿಓ ಬಜೆಟ್ಟಿನ ಅಧೀಕೃತ ಅಂಕಿಅಂಶಗಳನ್ನು ಬಿಡುಗಡೆ ಪಡಿಸಿಲ್ಲ)
ವೀಕ್ಷಕರು – ಬರೀ ಅಮೇರಿಕದಲ್ಲಿ, ಮೊದಲ ಸರಣಿಯ ಮೊದಲ ಎಪಿಸೋಡ್ ನೋಡಿದ್ದು 22 ಲಕ್ಷ ಜನರಾದರೆ 7ನೇ ಸರಣಿಯ ಕೊನೆಯ ಎಪಿಸೋಡ್ ನೋಡಿದ್ದು 1 ಕೋಟಿ 20 ಲಕ್ಷ ಜನರು. 8 ನೇ ಸರಣಿ ಬಿಡುಗಡೆಯಾದ ಒಂದೇ ದಿನದಲ್ಲಿ ಮೊದಲ ಎಪಿಸೋಡನ್ನು 1 ಕೋಟಿ 74 ಲಕ್ಷ ಜನರು ನೋಡಿದ್ದಾರೆಂದು ಎಹ್‍ಬಿಓ ಹೇಳಿಕೊಂಡಿದೆ. 7ನೇ ಸರಣಿಯ ಕೊನೆಯ ಎಪಿಸೋಡನ್ನು 14 ಕೋಟಿ 33 ಲಕ್ಷ ಸಲ ಡೌನಲೋಡ್ ಮಾಡಲಾಗಿದೆ!
ಇನ್ನೂ ಕೆಲವು ಅಂಕಿಅಂಶಗಳು – ಗೇಮ್ ಆಫ್ ಥ್ರೋನ್ಸ್‍ನಲ್ಲಿ ಬಳಸಾದ ಕಿರಿಯ ಕಲಾವಿದರು (ಎಕ್ಸ್ಟ್ರಾಸ್) 1 ಒಂದು ಲಕ್ಷ 5 ಸಾವಿರ. ಈ ಧಾರವಾಹಿ ಪ್ರಸಾರವಾಗುತ್ತಿರುವುದು 170 ದೇಶಗಳಲ್ಲಿ.
ಗೇಮ್ ಆಫ್ ಥ್ರೋನ್ಸ್ ಹಿಂಸೆಯ, ಯುದ್ಧಗಳ ಧಾರವಾಹಿ. ಈ ಕಥೆಯಲ್ಲಿ ಬರುವ ಮುಖ್ಯಪಾತ್ರಗಳ ಸಾವುಗಳು ದಂಗುಪಡಿಸುತ್ತವೆ. ಮೊದಲನೇ ಸರಣಿಯಲ್ಲಿ 59 ಸಾವುಗಳನ್ನು ಕಂಡಿದ್ದರೆ, 7ನೇ ಸರಣಿಯಲ್ಲಿ ಕಂಡುಬಂದ ಸಾವುಗಳು 549!
ಯಾವುದೋ ಒಂದು ಭವ್ಯವಾದ ಪ್ರಾಚೀನ ಕಾಲಕ್ಕೆ ಕರೆದುಕೊಂಡುಹೋಗುವ ಗೇಮ್ ಆಫ್ ಥ್ರೋನ್ಸ್‍ನಲ್ಲಿ ನಗ್ನತೆ, ಹಿಂಸೆ ಅದರಲ್ಲೂ ಮಹಿಳೆಯರ ಮೇಲಾಗುವ ಹಿಂಸೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರಮುಖ ಪಾತ್ರವೆಂದು ಪರಿಗಣಿಸಿ ನಾವು ಯಾರನ್ನು ತೀವ್ರವಾದ ಆಸಕ್ತಿಯಿಂದ ನೋಡುತ್ತಿರತ್ತೇವೆ ಆ ಪಾತ್ರಗಳು ಸಾವು ವೀಕ್ಷಕರನ್ನು ದಂಗುಬಡಿಸುತ್ತವೆ. ಪ್ರಮುಖ ಪಾತ್ರಗಳೆಲ್ಲರೂ ಸೇರಿ ಒಂದು ಮದುವೆಯ ಸಮಾರಂಭಕ್ಕೆ ಹೋದಾಗ ಅಲ್ಲಿ ಆಗುವ ಹತ್ಯಾಕಾಂಡ, ಇವರೇ ಪ್ರಮುಖ ಪಾತ್ರಗಳು ಅಂದುಕೊಂಡವರೆಲ್ಲರ ಕೊಲೆಗಳು, ಯಾವುದೇ ದಾರವಾಹಿ ಅಥವಾ ಸಿನೆಮಾದ ಇತಿಹಾಸದಲ್ಲೇ ನೋಡಿರಲಿಕ್ಕಿಲ್ಲ. ಇದರಲ್ಲಿ ಬರುವ ಆಳುವ ಕುಟುಂಬಗಳು ಎಷ್ಟು ಪ್ರಸಿದ್ಧವಾಗಿವೆಯೆಂದರೆ, ಕಾಲೇಜುಗಳಲ್ಲಿಯ ಅನೇಕ ವಿದ್ಯಾರ್ಥಿಗಳ ಗುಂಪುಗಳು ತಮ್ಮನ್ನು ತಾವು ಒಂದೊಂದು ರಾಜಕುಟುಂಬಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ.
ಗೇಮ್ ಆಫ್ ಥ್ರೋನ್ಸ್ ಈ ಸರಣಿಯಲ್ಲಿ ಅಭಿನಯಿಸಿದ ನಟರಿಂದಲೂ ಪ್ರಸಿದ್ಧಿ ಗಳಿಸಿದೆ. ಮೂಲ ಪುಸ್ತಕದಲ್ಲಿ 2103 ಪಾತ್ರಗಳಿದ್ದರೆ, ಅವತರಣಿಕೆಯಲ್ಲಿ ಕಿರಿಯ ಕಲಾವಿದರನ್ನು ಬಿಟ್ಟು 553 (ಹೆಸರಿರುವ) ಪಾತ್ರಗಳು ಬರುತ್ತವೆ ಎಂದು ಒಬ್ಬ ನೋಡುಗ ಲೆಕ್ಕ ಹಾಕಿದ್ದಾರೆ. ಅದರಲ್ಲಿ ನೂರಾರು ನಟರು ಗಮನ ಸೆಳೆದರೂ, ಒಬ್ಬ ನಟ ಮಾತ್ರ ಎದ್ದು ಕಾಣುತ್ತಾನೆ. ಪೀಟರ್ ಡಿಂಕ್ಲಿಜ್, ಲ್ಯಾನಿಸ್ಟರ್ ರಾಜಕುಟುಂಬದ ಸದಸ್ಯನಾಗಿರುವ ಕುಬ್ಜನ ಪಾತ್ರವನ್ನು ಇವರು ನಿರ್ವಹಿಸಿದ್ದಾರೆ ನಾಲ್ಕೂಕಾಲು ಅಡಿ ಎತ್ತರವಿರುವ ಈ ನಟ ಈಗ ವಿಶ್ವವಿಖ್ಯಾತಿ ಪಡೆದ ನಟರಾಗಿದ್ದಾರೆ. ತನ್ನ ಕುಬ್ಜತೆಯಿಂದ ಕೀಳರಿಮೆ ಅನುಭವಿಸಿಯೇ ಬೆಳೆದ ಪೀಟರ್, ತಾನು ನಟನಾಗಬೇಕೆನ್ನುವ ಕನಸನ್ನು ಸಾಕಾರಗೊಳಿಸಲು ಹರಸಾಹಸ ಪಟ್ಟವರು. ಚಿಕ್ಕಂದಿನಿಂದಲೇ ನಾಟಕದಲ್ಲಿ ಭಾಗವಹಿಸುತ್ತಿದ್ದ ಪೀಟರ್, ಕುಬ್ಜರನ್ನು ಹಾಸ್ಯಕ್ಕಾಗಿ ಬಳಸುವ ಪಾತ್ರಗಳನ್ನು ಮಾಡಲು ನಿರಾಕರಿಸಿದರು. 2003 ರಲ್ಲಿ ‘ದಿ ಸ್ಟೇಷನ್ ಏಜೆಂಟ್’ ಎನ್ನುವ ಚಿತ್ರದಲ್ಲಿ ಇವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. ಕುಬ್ಜರ ಪಾತ್ರಗಳೆಂದರೆ, ಹಾಸ್ಯಕ್ಕಾಗಿ ಅಥವಾ ತುಂಬಾ ವಿವೇಕದ ಮನುಷ್ಯನಾಗಿಯೋ ಮತ್ತು ಲೈಂಗಿಕತೆ ಇಲ್ಲದ, ರೋಮಾಂಟಿಕ್ ಆಗದ, ತನ್ನ ಕುಬ್ಜತೆಯನ್ನು ಹೊರತುಪಡಿಸಿ ಯಾವುದೇ ದೋಷಗಳಿಲ್ಲದ ಪಾತ್ರಗಳು. ಅಂತಹದ್ದರಲ್ಲಿ ಸ್ಟೇಷನ್ ಏಜೆಂಟ್ ಎನ್ನುವ ಚಿತ್ರ ಅವರನ್ನು ಒಬ್ಬ ಸಾಮಾನ್ಯ ಮನುಷ್ಯನಾಗಿ ತೋರಿಸಿತು. 2006ರಲ್ಲಿ ಸಿಡ್ನಿ ಲುಮೆಟ್(ಸಿನಿಯಾನ 2 ನೋಡಿ) ಅವರ ‘ಫೈಂಡ್ ಮಿ ಗಿಲ್ಟಿ’ ಚಿತ್ರದಲ್ಲಿ ಮತ್ತೊಮ್ಮೆ ಗಮನಸೆಳೆದ ಪೀಟರ್ ಡಿಂಕ್ಲಿಜ್, ಡೆತ್ ಎಟ್ ಎ ಫೂನರಲ್, ಅಂಡರ್‍ಡಾಗ್, ಪೆನೆಲೊಪ್, ನಾರ್ಣಿಯಾ ಮುಂತಾದ ಚಿತ್ರಗಳಲ್ಲಿ ಅಭಿನಿಯಿಸಿದರು. ಆದರೆ ಗೇಮ್ ಆಫ್ ಥ್ರೋನ್‍ನ ಟಿರಿಯನ್ ಲ್ಯಾನಿಸ್ಟರ್‍ನ ಪಾತ್ರವು ಇವರ ಅಭಿನಯ ಸಾಮಥ್ರ್ಯವನ್ನೆಲ್ಲೆ ಒರಗೆ ಹಚ್ಚಿದೆ.
ಎಪ್ರಿಲ್ 14 ರಂದು ಗೇಮ್ ಆಫ್ ಥ್ರೋನ್‍ನ ಕೊನೆಯ ಸರಣಿಯ ಮೊದಲ ಎಪಿಸೋಡ್ ವೀಕ್ಷಕರಿಗೆ ಲಭ್ಯವಾಯಿತು. ಈ ಸರಣಿಯಲ್ಲಿ 6 ಎಪಿಸೋಡ್‍ಗಳಿವೆ. ಮೇ 19ರಂದು ಪ್ರಸಾರವಾಗಲಿರುವ ಕೊನೆಯ ಎಪಿಸೋಡಿನಿಂದ ಗೇಮ್ ಆಫ್ ಥ್ರೋನ್ ಮುಕ್ತಾಯವಾಗಲಿದೆ. ಕೋಟ್ಯಾಂತರ ನೋಡುಗರನ್ನು ಒಂದು ಫ್ಯಾಂಟಸಿ ಲೋಕಕ್ಕೆ ಕೊಂಡೊಯ್ಯುವ ಗೇಮ್ ಆಫ್ ಥ್ರೋನ್ ಬಗ್ಗೆಯೇ ಎಲ್ಲೆಡೆ ಚರ್ಚೆಯಾಗಲಿದ್ದು, ವಿಶ್ವದ ನೋಡುಗರು ಕಂಡ ಅತಿ ದೊಡ್ಡ ಶೋ ಎನ್ನುವುದನ್ನು ಯಾರೂ ಅಲ್ಲಗೆಳೆಯಲಾರರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...