Homeಸಿನಿಮಾಸಿನಿ ಸುದ್ದಿಗೇಮ್ ಆಫ್ ಥ್ರೋನ್ಸ್ ಮತ್ತು ಪೀಟರ್ ಡಿಂಕ್ಲೇಜ್

ಗೇಮ್ ಆಫ್ ಥ್ರೋನ್ಸ್ ಮತ್ತು ಪೀಟರ್ ಡಿಂಕ್ಲೇಜ್

- Advertisement -
- Advertisement -

ರಾಜಶೇಖರ್ ಅಕ್ಕಿ |

ಈ ವಾರದ ಸಿನಿಯಾನದಲ್ಲಿ ಯಾವುದೇ ನಿರ್ದೇಶಕರ ಅಥವಾ ಸಿನೆಮಾದ ಬಗ್ಗೆ ಇರದೇ ಒಂದು ಟಿವಿ ಸಿರೀಸ್ ಬಗ್ಗೆ ಬರೆಯುತ್ತಿದ್ದೇನೆ. ಇದು ಗೇಮ್ ಆಫ್ ಥ್ರೋನ್ಸ್ ಎನ್ನುವ ಧಾರಾವಾಹಿ.
ಬೆಂಕಿಯನ್ನು ಉಗುಳುವ ದೈತ್ಯ ಡ್ರಾಗನ್‍ಗಳು, ದಶಕಗಳ ಕಾಲ ಮುಂದುವರೆಯುವ ಬೇಸಿಗೆ, ಒಂದು ಜೀವಮಾನದಷ್ಟು ಸಮಯ ಮುಂದುವರೆಯಬಲ್ಲ ಚಳಿಗಾಲ, ಸತ್ತ ಮೇಲೆ ಜೀವ ಪಡೆದುಕೊಂಡು ಮನುಷ್ಯರನ್ನು ಕೊಲ್ಲುವ ನೈಟ್‍ವಾಕರ್‍ಗಳು, ಈ ವೈಟ್‍ವಾಕರ್‍ಗಳನ್ನು ಮತ್ತು ಇತರೆ ಪ್ರದೇಶಗಳನ್ನು ಬೇರ್ಪಡಿಸಲು ನಿರ್ಮಿಸುವ ಒಂದು ಮಹಾನ್ ಗೋಡೆ, ಏಳು ಕಿಂಗ್‍ಡಮ್‍ಗಳು, ಅನೇಕ ರಾಜರು, ರಾಜಕುಮಾರರು, ರಾಜಕುಮಾರಿಯರು ಮತ್ತು ಅವೆಲ್ಲವುಗಳನ್ನು ಆಳುವ ಒಂದು ಐರನ್ ಥ್ರೋನ್ (ಕಬ್ಬಿಣದ ಸಿಂಹಾಸನ) ಮತ್ತು ಅದಕ್ಕಾಗಿ ನಡೆಯುವ ಸಮರಗಳು.
ಜಾರ್ಜ್ ಆರ್ ಆರ್ ಮಾರ್ಟಿನ್ ಎನ್ನುವ ಲೇಖಕರು ಬರೆದ ‘ದಿ ಸಾಂಗ್ ಆಫ್ ಐಸ್ ಅಂಡ್ ಫೈರ್’ ಎನ್ನುವ ಕಾದಂಬರಿಗಳ ಸರಣಿಯ ಕಿರುಪರೆದಯ ಅಳವಣಿಕೆ. ಜಾರ್ಜ್ ಮಾರ್ಟಿನ್ ಅವರ ಮುಂದೆ ತಮ್ಮ ಕಾದಂಬರಿಗಳನ್ನು ಒಂದು ಸಿನೆಮಾ ಮಾಡಬೇಕೆಂದು ಅನೇಕ ಪ್ರಸ್ತಾಪಗಳಿದ್ದವು. ಆದರೆ ಒಂದು ಸಿನೆಮಾದ ಅವಧಿ 2 ಗಂಟೆ. ಎರಡು ಗಂಟೆಯೊಳಗೆ ಇಂತಹ ಬೃಹತ್ ಗಾತ್ರದ ಕೃತಿಯನ್ನು ಅಳವಡಿಸಿಕೊಳ್ಳಲಾಗದು ಎಂದು ಅವರಿಗೆ ಗೊತ್ತಿತ್ತು. ಹಾಗಾಗಿ ಡೇವಿಡ್ ಬೆನಿಆಫ್ ಮತ್ತು ಡಿ.ಬಿ. ವೈಸ್ ಎನ್ನುವ ನಿರ್ಮಾಪಕ/ಲೇಖಕರು ಒಂದು ಧಾರವಾಹಿಯನ್ನಾಗಿ ನಿರ್ಮಿಸುವ ಪ್ರಸ್ತಾಪ ಇಟ್ಟಾಗ ಮಾರ್ಟಿನ್ ಸಂತೋಷದಿಂದಲೇ ಒಪ್ಪಿಕೊಂಡರು. ಅದರರ್ಥ ನೂರಾರು ಗಂಟೆಗಳ ಅವಧಿಯ ಬೃಹತ್ ಸಿನೆಮಾ ಟಿವಿ ಪರದೆಯ ಮೇಲೆ! (ಹೆಚ್ಚಿನ ಜನರು ತಮ್ಮ ಕಂಪೂಟರ್ ಪರದೆಯ ಮೇಲೆಯೇ ನೋಡಿದ್ದು ಬೇರೆ ಮಾತು).
ಗೇಮ್ ಆಫ್ ಥ್ರೋನ್ಸ್ ನೋಡುತ್ತಿದ್ದರೆ ಇದನ್ನು ನೋಡಲು ಚಿಕ್ಕ ಪರದೆಯಲ್ಲ, ಬೆಳ್ಳಿ ಪರದೆಯೂ ಸಾಲದು ಎಂದು ಅನಿಸಿದರೆ ಆಶ್ಚರ್ಯವಲ್ಲ.
ಗೇಮ್ ಆಫ್ ಥ್ರೋನ್ಸ್ ಎಂದರೆ ಮೊದಲು ಕಣ್ಸೆಳೆಯುವುದು ಅದರ ಗಾತ್ರ, ಬೃಹತ್ ಪ್ರಮಾಣ. ಕೆಲವು ಅಂಕಿ ಅಂಶಗಳನ್ನು ಗಮನಿಸೋಣ.
ಬಜೆಟ್ – ಒಂದು ಎಪಿಸೋಡಿನ ಖರ್ಚು 10 ಮಿಲಿಯನ್ ಡಾಲರ್‍ಗಳು ಅಂದರೆ ಸರಿಸುಮಾರು 70 ಕೋಟಿ ರೂಪಾಯಿಗಳು. ಇಂತಹ 73 ಎಪಿಸೋಡುಗಳು. ಒಟ್ಟಾರೆ ಬಜೆಟ್ಟಿನ ಲೆಕ್ಕ ನೀವೇ ಹಾಕಿ. (ಎಹ್‍ಬಿಓ ಬಜೆಟ್ಟಿನ ಅಧೀಕೃತ ಅಂಕಿಅಂಶಗಳನ್ನು ಬಿಡುಗಡೆ ಪಡಿಸಿಲ್ಲ)
ವೀಕ್ಷಕರು – ಬರೀ ಅಮೇರಿಕದಲ್ಲಿ, ಮೊದಲ ಸರಣಿಯ ಮೊದಲ ಎಪಿಸೋಡ್ ನೋಡಿದ್ದು 22 ಲಕ್ಷ ಜನರಾದರೆ 7ನೇ ಸರಣಿಯ ಕೊನೆಯ ಎಪಿಸೋಡ್ ನೋಡಿದ್ದು 1 ಕೋಟಿ 20 ಲಕ್ಷ ಜನರು. 8 ನೇ ಸರಣಿ ಬಿಡುಗಡೆಯಾದ ಒಂದೇ ದಿನದಲ್ಲಿ ಮೊದಲ ಎಪಿಸೋಡನ್ನು 1 ಕೋಟಿ 74 ಲಕ್ಷ ಜನರು ನೋಡಿದ್ದಾರೆಂದು ಎಹ್‍ಬಿಓ ಹೇಳಿಕೊಂಡಿದೆ. 7ನೇ ಸರಣಿಯ ಕೊನೆಯ ಎಪಿಸೋಡನ್ನು 14 ಕೋಟಿ 33 ಲಕ್ಷ ಸಲ ಡೌನಲೋಡ್ ಮಾಡಲಾಗಿದೆ!
ಇನ್ನೂ ಕೆಲವು ಅಂಕಿಅಂಶಗಳು – ಗೇಮ್ ಆಫ್ ಥ್ರೋನ್ಸ್‍ನಲ್ಲಿ ಬಳಸಾದ ಕಿರಿಯ ಕಲಾವಿದರು (ಎಕ್ಸ್ಟ್ರಾಸ್) 1 ಒಂದು ಲಕ್ಷ 5 ಸಾವಿರ. ಈ ಧಾರವಾಹಿ ಪ್ರಸಾರವಾಗುತ್ತಿರುವುದು 170 ದೇಶಗಳಲ್ಲಿ.
ಗೇಮ್ ಆಫ್ ಥ್ರೋನ್ಸ್ ಹಿಂಸೆಯ, ಯುದ್ಧಗಳ ಧಾರವಾಹಿ. ಈ ಕಥೆಯಲ್ಲಿ ಬರುವ ಮುಖ್ಯಪಾತ್ರಗಳ ಸಾವುಗಳು ದಂಗುಪಡಿಸುತ್ತವೆ. ಮೊದಲನೇ ಸರಣಿಯಲ್ಲಿ 59 ಸಾವುಗಳನ್ನು ಕಂಡಿದ್ದರೆ, 7ನೇ ಸರಣಿಯಲ್ಲಿ ಕಂಡುಬಂದ ಸಾವುಗಳು 549!
ಯಾವುದೋ ಒಂದು ಭವ್ಯವಾದ ಪ್ರಾಚೀನ ಕಾಲಕ್ಕೆ ಕರೆದುಕೊಂಡುಹೋಗುವ ಗೇಮ್ ಆಫ್ ಥ್ರೋನ್ಸ್‍ನಲ್ಲಿ ನಗ್ನತೆ, ಹಿಂಸೆ ಅದರಲ್ಲೂ ಮಹಿಳೆಯರ ಮೇಲಾಗುವ ಹಿಂಸೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರಮುಖ ಪಾತ್ರವೆಂದು ಪರಿಗಣಿಸಿ ನಾವು ಯಾರನ್ನು ತೀವ್ರವಾದ ಆಸಕ್ತಿಯಿಂದ ನೋಡುತ್ತಿರತ್ತೇವೆ ಆ ಪಾತ್ರಗಳು ಸಾವು ವೀಕ್ಷಕರನ್ನು ದಂಗುಬಡಿಸುತ್ತವೆ. ಪ್ರಮುಖ ಪಾತ್ರಗಳೆಲ್ಲರೂ ಸೇರಿ ಒಂದು ಮದುವೆಯ ಸಮಾರಂಭಕ್ಕೆ ಹೋದಾಗ ಅಲ್ಲಿ ಆಗುವ ಹತ್ಯಾಕಾಂಡ, ಇವರೇ ಪ್ರಮುಖ ಪಾತ್ರಗಳು ಅಂದುಕೊಂಡವರೆಲ್ಲರ ಕೊಲೆಗಳು, ಯಾವುದೇ ದಾರವಾಹಿ ಅಥವಾ ಸಿನೆಮಾದ ಇತಿಹಾಸದಲ್ಲೇ ನೋಡಿರಲಿಕ್ಕಿಲ್ಲ. ಇದರಲ್ಲಿ ಬರುವ ಆಳುವ ಕುಟುಂಬಗಳು ಎಷ್ಟು ಪ್ರಸಿದ್ಧವಾಗಿವೆಯೆಂದರೆ, ಕಾಲೇಜುಗಳಲ್ಲಿಯ ಅನೇಕ ವಿದ್ಯಾರ್ಥಿಗಳ ಗುಂಪುಗಳು ತಮ್ಮನ್ನು ತಾವು ಒಂದೊಂದು ರಾಜಕುಟುಂಬಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ.
ಗೇಮ್ ಆಫ್ ಥ್ರೋನ್ಸ್ ಈ ಸರಣಿಯಲ್ಲಿ ಅಭಿನಯಿಸಿದ ನಟರಿಂದಲೂ ಪ್ರಸಿದ್ಧಿ ಗಳಿಸಿದೆ. ಮೂಲ ಪುಸ್ತಕದಲ್ಲಿ 2103 ಪಾತ್ರಗಳಿದ್ದರೆ, ಅವತರಣಿಕೆಯಲ್ಲಿ ಕಿರಿಯ ಕಲಾವಿದರನ್ನು ಬಿಟ್ಟು 553 (ಹೆಸರಿರುವ) ಪಾತ್ರಗಳು ಬರುತ್ತವೆ ಎಂದು ಒಬ್ಬ ನೋಡುಗ ಲೆಕ್ಕ ಹಾಕಿದ್ದಾರೆ. ಅದರಲ್ಲಿ ನೂರಾರು ನಟರು ಗಮನ ಸೆಳೆದರೂ, ಒಬ್ಬ ನಟ ಮಾತ್ರ ಎದ್ದು ಕಾಣುತ್ತಾನೆ. ಪೀಟರ್ ಡಿಂಕ್ಲಿಜ್, ಲ್ಯಾನಿಸ್ಟರ್ ರಾಜಕುಟುಂಬದ ಸದಸ್ಯನಾಗಿರುವ ಕುಬ್ಜನ ಪಾತ್ರವನ್ನು ಇವರು ನಿರ್ವಹಿಸಿದ್ದಾರೆ ನಾಲ್ಕೂಕಾಲು ಅಡಿ ಎತ್ತರವಿರುವ ಈ ನಟ ಈಗ ವಿಶ್ವವಿಖ್ಯಾತಿ ಪಡೆದ ನಟರಾಗಿದ್ದಾರೆ. ತನ್ನ ಕುಬ್ಜತೆಯಿಂದ ಕೀಳರಿಮೆ ಅನುಭವಿಸಿಯೇ ಬೆಳೆದ ಪೀಟರ್, ತಾನು ನಟನಾಗಬೇಕೆನ್ನುವ ಕನಸನ್ನು ಸಾಕಾರಗೊಳಿಸಲು ಹರಸಾಹಸ ಪಟ್ಟವರು. ಚಿಕ್ಕಂದಿನಿಂದಲೇ ನಾಟಕದಲ್ಲಿ ಭಾಗವಹಿಸುತ್ತಿದ್ದ ಪೀಟರ್, ಕುಬ್ಜರನ್ನು ಹಾಸ್ಯಕ್ಕಾಗಿ ಬಳಸುವ ಪಾತ್ರಗಳನ್ನು ಮಾಡಲು ನಿರಾಕರಿಸಿದರು. 2003 ರಲ್ಲಿ ‘ದಿ ಸ್ಟೇಷನ್ ಏಜೆಂಟ್’ ಎನ್ನುವ ಚಿತ್ರದಲ್ಲಿ ಇವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. ಕುಬ್ಜರ ಪಾತ್ರಗಳೆಂದರೆ, ಹಾಸ್ಯಕ್ಕಾಗಿ ಅಥವಾ ತುಂಬಾ ವಿವೇಕದ ಮನುಷ್ಯನಾಗಿಯೋ ಮತ್ತು ಲೈಂಗಿಕತೆ ಇಲ್ಲದ, ರೋಮಾಂಟಿಕ್ ಆಗದ, ತನ್ನ ಕುಬ್ಜತೆಯನ್ನು ಹೊರತುಪಡಿಸಿ ಯಾವುದೇ ದೋಷಗಳಿಲ್ಲದ ಪಾತ್ರಗಳು. ಅಂತಹದ್ದರಲ್ಲಿ ಸ್ಟೇಷನ್ ಏಜೆಂಟ್ ಎನ್ನುವ ಚಿತ್ರ ಅವರನ್ನು ಒಬ್ಬ ಸಾಮಾನ್ಯ ಮನುಷ್ಯನಾಗಿ ತೋರಿಸಿತು. 2006ರಲ್ಲಿ ಸಿಡ್ನಿ ಲುಮೆಟ್(ಸಿನಿಯಾನ 2 ನೋಡಿ) ಅವರ ‘ಫೈಂಡ್ ಮಿ ಗಿಲ್ಟಿ’ ಚಿತ್ರದಲ್ಲಿ ಮತ್ತೊಮ್ಮೆ ಗಮನಸೆಳೆದ ಪೀಟರ್ ಡಿಂಕ್ಲಿಜ್, ಡೆತ್ ಎಟ್ ಎ ಫೂನರಲ್, ಅಂಡರ್‍ಡಾಗ್, ಪೆನೆಲೊಪ್, ನಾರ್ಣಿಯಾ ಮುಂತಾದ ಚಿತ್ರಗಳಲ್ಲಿ ಅಭಿನಿಯಿಸಿದರು. ಆದರೆ ಗೇಮ್ ಆಫ್ ಥ್ರೋನ್‍ನ ಟಿರಿಯನ್ ಲ್ಯಾನಿಸ್ಟರ್‍ನ ಪಾತ್ರವು ಇವರ ಅಭಿನಯ ಸಾಮಥ್ರ್ಯವನ್ನೆಲ್ಲೆ ಒರಗೆ ಹಚ್ಚಿದೆ.
ಎಪ್ರಿಲ್ 14 ರಂದು ಗೇಮ್ ಆಫ್ ಥ್ರೋನ್‍ನ ಕೊನೆಯ ಸರಣಿಯ ಮೊದಲ ಎಪಿಸೋಡ್ ವೀಕ್ಷಕರಿಗೆ ಲಭ್ಯವಾಯಿತು. ಈ ಸರಣಿಯಲ್ಲಿ 6 ಎಪಿಸೋಡ್‍ಗಳಿವೆ. ಮೇ 19ರಂದು ಪ್ರಸಾರವಾಗಲಿರುವ ಕೊನೆಯ ಎಪಿಸೋಡಿನಿಂದ ಗೇಮ್ ಆಫ್ ಥ್ರೋನ್ ಮುಕ್ತಾಯವಾಗಲಿದೆ. ಕೋಟ್ಯಾಂತರ ನೋಡುಗರನ್ನು ಒಂದು ಫ್ಯಾಂಟಸಿ ಲೋಕಕ್ಕೆ ಕೊಂಡೊಯ್ಯುವ ಗೇಮ್ ಆಫ್ ಥ್ರೋನ್ ಬಗ್ಗೆಯೇ ಎಲ್ಲೆಡೆ ಚರ್ಚೆಯಾಗಲಿದ್ದು, ವಿಶ್ವದ ನೋಡುಗರು ಕಂಡ ಅತಿ ದೊಡ್ಡ ಶೋ ಎನ್ನುವುದನ್ನು ಯಾರೂ ಅಲ್ಲಗೆಳೆಯಲಾರರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

​ಚನ್ನರಾಯಪಟ್ಟಣ ರೈತರಿಗೆ ಅಂತಿಮ ವಿಜಯ; ​ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ತಿಳಿಸಿದ ‘ಹೋರಾಟ ಸಮಿತಿ’

​ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಭೂ ಹೋರಾಟ ಕೊನೆಗೂ ಸುಖಾಂತ್ಯವಾಗಿದೆ. ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಜೊತೆಗೆ ರಾಜ್ಯದ ಹತ್ತಾರು ಜನಪರ ಸಂಘಟನೆಗಳು ನಡೆಸಿದ ಸುದೀರ್ಘ ಹೋರಾಟ...

ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಬಗ್ಗೆ ತುಟಿ ಬಿಚ್ಚದ ಸರ್ಕಾರ; ‘ಬೆಳಗಾವಿ ಚಲೋ’ ಹೋರಾಟಕ್ಕೆ ಕರೆ

ಗುರುವಾರ (ಡಿ.4) ನಡೆದ ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಮೀಸಲಾತಿ ಬಗ್ಗೆ ತುಟಿ ಬಿಚ್ಚದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, 'ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ' 'ಬೆಳಗಾವಿ ಚಲೋ'...

ಅಖಂಡ ಕರ್ನಾಟಕದ ಪ್ರದೇಶಗಳನ್ನು ಸಾಂಸ್ಕೃತಿಕವಾಗಿ ವಿಲೀನಗೊಳಿಸಲು ಇದು ಸಕಾಲ: ಡಾ.ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಮತ್ತು ನೆರೆ ರಾಜ್ಯಗಳ ಅಚ್ಚ ಕನ್ನಡ ಪ್ರದೇಶಗಳ ನಡುವಿನ ಭೌತಿಕ ಗಡಿಗಳು ಇದ್ದಂತೆ ಇದ್ದರೂ ಸಾಂಸ್ಕೃತಿಕವಾಗಿ ಹೇರಲಾಗುತ್ತಿರುವ ಗಡಿಗಳನ್ನು ಅಪ್ರಸ್ತುತವಾಗಿಸುವುದು ಸಾಧ್ಯವಿದೆ. ಇಂತಹ ಪ್ರದೇಶಗಳೊಂದಿಗೆ ಕರ್ನಾಟಕದ ಭಾವನಾತ್ಮಕ ಸಂಬಂಧದ ವಿಸ್ತರಣೆಗೆ ಇದು...

ಅರುಂಧತಿ ರಾಯ್ ಅವರ ಪುಸ್ತಕದ ಮುಖಪುಟ ವಿರೋಧಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಖ್ಯಾತ ಲೇಖಕಿ ಅರುಂಧತಿ ರಾಯ್ ಅವರ 'ಮದರ್ ಮೇರಿ ಕಮ್ಸ್ ಟು ಮಿ' ಪುಸ್ತಕದ ಮುಖಪುಟ ಚಿತ್ರದ ಪ್ರಸಾರದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ. ಏಕೆಂದರೆ, ಲೇಖಕರು ಧೂಮಪಾನವನ್ನು...

ರೋಹಿಂಗ್ಯಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸಿಐಜೆ ಸೂರ್ಯಕಾಂತ್ ಅವರಿಗೆ ಮಾಜಿ ನ್ಯಾಯಾದೀಶರು, ವಕೀಲರು, ಶಿಕ್ಷಣ ತಜ್ಞರಿಂದ ಮುಕ್ತ ಪತ್ರ

ರೋಹಿಂಗ್ಯಾಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮಾಜಿ ನ್ಯಾಯಾಧೀಶರು, ವಕೀಲರು ಮತ್ತು ಶಿಕ್ಷಣ ತಜ್ಞರು ಸೂರ್ಯಕಾಂತ್ ಅವರಿಗೆ ಮುಕ್ತ ಪತ್ರ ಬರೆದಿದ್ದಾರೆ.  ಕಿರುಕುಳದಿಂದ ಪಲಾಯನ ಮಾಡಿದ...

ಛತ್ತೀಸ್‌ಗಢ: ‘ಎಸ್‌ಇಸಿಎಲ್‌ ಅಮೇರಾ’ ಕಲ್ಲಿದ್ದಲು ಗಣಿ ವಿಸ್ತರಣೆ ವಿರೋಧಿಸಿ ಪರ್ಸೋಡಿ ಕಲಾನ್ ಗ್ರಾಮದಲ್ಲಿ ಪ್ರತಿಭಟನೆ

ಛತ್ತೀಸ್‌ಗಢದ ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (ಎಸ್‌ಇಸಿಎಲ್‌) ಅಮೇರಾ ಕಲ್ಲಿದ್ದಲು ಗಣಿಗಾರಿಕೆ ವಿಸ್ತರಣೆ ವಿರೋಧಿಸಿ ಡಿ.3 ರಂದು ಅಂಬಿಕಾಪುರದ ಪರ್ಸೋಡಿ ಕಲಾನ್ ಗ್ರಾಮದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಮೇಲೆ ಗ್ರಾಮಸ್ಥರು...

ಗಂಟೆಗಟ್ಟಲೆ ಇಂಡಿಗೋ ವಿಮಾನ ವಿಳಂಬ: ‘ನನ್ನ ಮಗಳಿಗೆ ಸ್ಯಾನಿಟರಿ ಪ್ಯಾಡ್‌ ಕೊಡಿ..’ ಎಂದು ಬೇಡಿಕೊಂಡ ತಂದೆ

ದೇಶಾದ್ಯಂತ ಇಂಡಿಗೋ ಪ್ರಯಾಣಿಕರು ಭಾರಿ ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಏಕೆಂದರೆ, ವಿಮಾನಯಾನ ಸಂಸ್ಥೆಯ ವಿಳಂಬ ಮತ್ತು ರದ್ದತಿ ನಿರ್ಧಾರವು ಸತತ ನಾಲ್ಕನೇ ದಿನವೂ (ಡಿ. 5) ಮುಂದುವರೆದಿದೆ. ಅವ್ಯವಸ್ಥೆಯ ನಡುವೆಯೇ, ವಿಮಾನ ನಿಲ್ದಾಣದಿಂದ ಬಂದ...

ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದೆ: ಪುಟಿನ್‌ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಹೇಳಿಕೆ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ. ಶಾಂತಿಯ ಪರವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಭೇಟಿಗೆಂದು ಭಾರತಕ್ಕೆ ಆಗಮಿಸಿದ್ದು,...

ಮನೆ ಕಟ್ಟಲು, ವಾಹನ ಖರೀದಿಸಲು ಇದು ಸುಸಮಯ: ರೆಪೊ ದರ ಕಡಿತಗೊಳಿಸಿದ ಆರ್.ಬಿ.ಐ

ಡಿಸೆಂಬರ್ 05, ಶುಕ್ರವಾರದಂದು ನಡೆದ ಹಣಕಾಸು ನೀತಿ ಸಭೆಯಲ್ಲಿ (MPC) ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇಂದಿನ ಕಡಿತದ ನಂತರ, ಕೇಂದ್ರ ಬ್ಯಾಂಕ್ ಈ...

ಉತ್ತರ ಪ್ರದೇಶ| ದಲಿತ ಯುವಕನ ಮೇಲೆ ಹಲ್ಲೆ; ಬಂದೂಕು ತೋರಿಸಿ ವಿವಸ್ತ್ರಗೊಳಿಸಿದ ಗುಂಪು

ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗುಂಪೊಂದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ಗುಂಪು ದಲಿತ ಯುವಕನನ್ನು ಚಪ್ಪಲಿಯಿಂದ ಹೊಡೆದು, ಮುಷ್ಟಿ, ಕಾಲು ಮತ್ತು...