Homeಅಂಕಣಗಳುಈ ಐದು ವರ್ಷದಲ್ಲಿ ಮೋದಿಯವರು ಸಾಧಿಸಿದ್ದೇನು?

ಈ ಐದು ವರ್ಷದಲ್ಲಿ ಮೋದಿಯವರು ಸಾಧಿಸಿದ್ದೇನು?

- Advertisement -
- Advertisement -

ಹೆಚ್.ಎಸ್‍.ದೊರೆಸ್ವಾಮಿ |

2019ರ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಭಾರತೀಯ ಜನತಾ ಪಕ್ಷ ಎಲ್ಲಾ ಪಕ್ಷಗಳಿಗಿಂತ ಹೆಚ್ಚಿನ ಹಣವನ್ನು ಕಾರ್ಪೊರೇಟ್ ಕಂಪನಿಗಳಿಂದ ಪಡೆದಿದೆ. ಅವರು ಅಷ್ಟು ಹಣ ಬಿಟ್ಟಿ ಕೊಟ್ಟಿಲ್ಲ. ಮೋದಿ ಸರ್ಕಾರ ಅದಾನಿ, ಅಂಬಾನಿ ಮುಂತಾದ ಕಾರ್ಪೊರೇಟ್‍ಗಳ 50 ಕೋಟಿ ಸಾಲ ಮನ್ನಾ ಮಾಡಿದೆ. ಸರ್ಕಾರದ ಈ ಉಪಕಾರಕ್ಕಾಗಿ ಮೋದಿಯವರ ಪಕ್ಷಕ್ಕೆ ವಿಶೇಷ ಗಿಫ್ಟ್ ಕೊಡಮಾಡಲಾಗಿದೆ. ಮೋದಿ ಸರ್ಕಾರ ಭ್ರಷ್ಟಾಚಾರದಿಂದ ಮುಕ್ತವಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತಮ್ಮ ಚುನಾವಣಾ ಪ್ರಚಾರದ ಹ್ಯಾಂಡ್‍ಬಿಲ್‍ನಲ್ಲಿ ಹೇಳಿದ್ದಾರೆ. ಮೋದಿಯವರ ಸರ್ಕಾರದ ಭ್ರಷ್ಟಾಚಾರಕ್ಕೆ ಒಂದು ಉದಾಹರಣೆಯಾಗಿ ರಫೆಲ್ ಯುದ್ಧವಿಮಾನ ಖರೀದಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಕಛೇರಿಯಿಂದ ಒಪ್ಪಂದ ಕುದುರಿಸಿದ್ದು ಈಗ ಹೊರಬಿದ್ದಿದೆ. ಅದಕ್ಕಾಗಿ ನೇಮಕವಾಗಿದ್ದ ರಕ್ಷಣಾ ಇಲಾಖೆಯ ಸದಸ್ಯರ ನಿಯೋಗ ಅಂತಿಮಗೊಳಿಸಿದ ಕರಾರುಗಳನ್ನು ಬದಲಿಸುವ ಕೆಲಸ ಸರ್ಕಾರದಿಂದ ನಡೆದಿದೆ. ಅದನ್ನು ಪ್ರಶ್ನಿಸಿದ ರಕ್ಷಣಾ ಇಲಾಖೆಯ ನಿಯೋಗದವರು ಸರ್ಕಾರವೇ ಒಪ್ಪಂದವನ್ನು ನೇರವಾಗಿ ಒಪ್ಪಂದ ಮಾಡಿಕೊಳ್ಳಲಿ ನಮಗೆ ಮುಜುಗರ ಉಂಟುಮಾಡುವುದು ಬೇಡ ಎಂದು ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಸರ್ಕಾರ ವಿಮಾನ ನಿರ್ಮಾಣದ ಗಂಧವೇ ಇಲ್ಲದ ಅಂಬಾನಿಯನ್ನು ಒಬ್ಬ ಪಾಲುದಾರನನ್ನಾಗಿ ಮಾಡಿಕೊಂಡು ಅವರಿಗೆ 65 ಕೋಟಿ ರೂಪಾಯಿ ಲಾಭ ಅನಾಯಾಸವಾಗಿ ಮಾಡಿಕೊಡುವ ಹುನ್ನಾರ ಮಾಡಿದೆ.

ಯೋಗ, ಸ್ವಚ್ಛ ಭಾರತ ಎರಡೂ ಹೊಸ ಯೋಜನೆಗಳಲ್ಲ. ಕರ್ನಾಟಕದಲ್ಲಿ ಯೋಗ ತರಗತಿ ಹತ್ತಾರು ವರ್ಷ ಹಿಂದಿನಿಂದ ತರಗತಿಗಳ ಸ್ಥಾನಗಳಿಂದ ನಡೆಯುತ್ತಿವೆ. ಸ್ವಚ್ಛ ಭಾರತದ ಯೋಜನೆಯನ್ನು ಬಿಜೆಪಿಯವರಿಗೂ ಹಿಂದಿನಿಂದಲೂ ನಡೆಸುತ್ತಿದ್ದಾರೆ. ಅದನ್ನು ಪ್ರಥಮವಾಗಿ ರೂಪಿಸಿದವರು ಪ್ರೊ.ಮರುಳಸಿದ್ಧಯ್ಯನವರು. ಅದನ್ನು ಜಾರಿಗೆ ತಂದವರು ಸಚಿವ ಎಂ.ಪಿ.ಪ್ರಕಾಶ್‍ರವರು. ಇನ್ನು ಸ್ವಾವಲಂಬನೆ ಸಾಧಿಸುವ, ಅಂದರೆ ಉದ್ಯೋಗಾವಕಾಶ ಕಲ್ಪಿಸುವ ಕೆಲಸ ಕುಂಟುತ್ತಾ ಸಾಗಿದೆ. ಅದಕ್ಕಾಗಿ ಘೋಷಿಸಲಾದ ಯೋಜನೆಗಳಿಂದ ಲಾಭ ಪಡೆದವರು ಗಣನೀಯ ಸಂಖ್ಯೆಯಲ್ಲಿಲ್ಲ. ಗ್ರಾಮಗಳಲ್ಲಿ ಇರುವವರೆಲ್ಲರಿಗೂ ಉಳುಮೆಗೆ ಭೂಮಿ ಕೊಡಬೇಕು. ದುಡಿದುಕೊಂಡು ತಿನ್ನಲು ಅವಕಾಶ ಮಾಡಿಕೊಡಬೇಕು. ಇದಾಗಬೇಕಾದರೆ ಭೂ ಸುಧಾರಣೆ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕು. ಭೂ ಮಿತಿ ಶಾಸನವನ್ನು ಪುನರ್ ರೂಪಿಸಬೇಕು. ದುಡಿಯುವ ಎಲ್ಲರಿಗೂ ಕನಿಷ್ಠ 5 ಎಕರೆ ಜಮೀನು ಸಿಗಬೇಕು. ಅನ್ನ ಕಲಸಿ ಕೊಡುವುದು, ಬಡವರ ಖಾತೆಗೆ ಹಣ ಹಾಕುವುದು ಬಡತನ ನಿವಾರಣೆಗೆ ಪರಿಹಾರವಲ್ಲ. ಅದು ಓಟು ಗಿಟ್ಟಿಸಲು ಹೂಡುವ ತಂತ್ರ. ಈ ಗಿಮಿಕ್ ಬಿಟ್ಟು ಬಡವರಿಗೆ ಭೂಮಿ ಹಂಚುವ ಕೆಲಸ ಮಾಡಿದ್ದರೆ ಮೋದಿ ಅವರನ್ನು ಮೆಚ್ಚಿಕೊಳ್ಳಬಹುದಾಗಿತ್ತು.

ಉಚಿತ ಎಲ್‍ಪಿಜಿ ಸೌಲಭ್ಯವನ್ನು ಬಡವರಿಗೆ ನೀಡಿರುವುದು ಅವರ ಸಾಧನೆ ಎಂಬುದನ್ನು ಒಪ್ಪಬಹುದು. ಕೈಗೆಟುಕುವ ದರದಲ್ಲಿ ಜನೌಷಧಿ ಜನರಿಗೆ ಒದಗಿಸುವ ಅವರ ಯೋಜನೆಯೂ ಒಳ್ಳೆಯದೇ.

ಆದರೆ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು. ಈ 5 ವರ್ಷದ ಅವರ ಅಧಿಕಾರದ ಅವಧಿಯಲ್ಲಿ 10 ಕೋಟಿ ಉದ್ಯೋಗಗಳು ಸೃಷ್ಠಿಯಾಗಬೇಕಾಗಿತ್ತು. ಉದ್ಯೋಗ ಸೃಷ್ಟಿಸುವ ರೀತಿ ಘೋಷಣೆಯಾಗಿ ಬೆಳೆಯಿತು. ಗುಡಿಸುವ ಕೆಲಸಕ್ಕೆ ಅರ್ಜಿ ಕರೆದರೆ ಒಂದು ಲಕ್ಷ ಅರ್ಜಿಗಳು ಬರುತ್ತವೆ. ಅದರಲ್ಲಿ 2ರಿಂದ 3 ಸಾವಿರ ಜನ ಪದವೀಧರರು, ಸ್ನಾತಕೋತ್ತರ ಪದವೀಧರರೂ ಇರುತ್ತಾರೆ. ಅಂದರೆ ಓದಿದವರಿಗೂ, ಓದದವರಿಗೂ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂಬುದು ಉತ್ಪ್ರೇಕ್ಷೆಯಲ್ಲ.

ಸ್ವಾತಂತ್ರ್ಯ ಬಂದು 72 ವರ್ಷಗಳೇ ಕಳೆದರೂ ಬಡತನವನ್ನೂ ನೀಗುವ ಕೆಲಸ ನಡೆದೇ ಇಲ್ಲ. ಬಡವರ ಓಟನ್ನು ಕಿತ್ತುಕೊಂಡು ಅಧಿಕಾರಕ್ಕೆ ಬರುತ್ತೀರಿ, ಅವರ ಬಗೆಗೆ ಲೋಕಸಭೆ ಸದಸ್ಯರಾಗುವವರಿಗೆ ಕಿಂಚಿತ್ತೂ ಕಾಳಜಿಯಿಲ್ಲ. ಬಡತನದ ಸಂಪೂರ್ಣ ನಿವಾರಣೆಗೆ ಸರ್ಕಾರ ಮತ್ತು ಪಾರ್ಲಿಮೆಂಟ್ ಸದಸ್ಯರು ಒಂದು ಪರಿಣಾಮಕಾರಿ ಕಾನೂನನ್ನು ತರುವುದರಲ್ಲಿ ವಿಫಲರಾಗಿದ್ದಾರೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲೂ ಅದರ ಪ್ರಸ್ತಾಪ ಇರುವುದಿಲ್ಲ. ಶ್ರೀಮಂತರನ್ನು ಓಲೈಸುವ ಪಕ್ಷ ಭಾರತೀಯ ಜನತಾ ಪಕ್ಷ. ಸಮಾನತೆಯನ್ನು ಸಾಧಿಸುವ ವಿಚಾರ ಅವರಿಗೆ ಬೇಕಾಗಿಲ್ಲ. ಅವರು Statusquoists. ಅಸಮಾನತೆಯ ಸಮಾಜದ ನಿರ್ಮಾಣವೇ ಅವರ ಗುರಿ, ದೊಡ್ಡ ಜಮೀನ್ದಾರರು, ಪಟ್ಟಭದ್ರ ಹಿತಾಸಕ್ತಿಗಳು, ಕಾರ್ಪೊರೇಟ್ ಸಂಸ್ಥೆಗಳ ಮಾಲೀಕರು ಅರೆಸ್ಸೆಸ್ ಮತ್ತು ಬಿಜೆಪಿಯ ಬೆನ್ನೆಲುಬು. ಈ ಕಠೋರ ಮನೋಭಾವದ ಭಾಜಪಕ್ಕೆ ಮತ ನೀಡಬೇಕೇ?.

ಹಳ್ಳಿಗಳಲ್ಲಿ ದುಡಿಯಲು ಆಸಕ್ತಿಯುಳ್ಳ ಎಲ್ಲ ಭೂ ಹೀನ ರೈತರಿಗೆ ಮತ್ತು ರೈತ ಕಾರ್ಮಿಕರಿಗೆ ತಲಾ 5 ಎಕರೆ ಜಮೀನು ನೀಡುವ ಮೂಲಕ ಗ್ರಾಮೀಣ ಬಡತನ ನೀಗಬೇಕು. ಅದರಂತೆಯೇ ಪಟ್ಟಣ ಮತ್ತು ತಾಲ್ಲೂಕು ಕೇಂದ್ರದಲ್ಲಿರುವ ಬಡವರ ಬಡತನ ನೀಗಲು ಬಿಜೆಪಿ ಯಾವ ಕಾರ್ಯಕ್ರಮವನ್ನೂ ಹಾಕಿಕೊಂಡಿಲ್ಲ. ಹಳ್ಳಿಗಳಲ್ಲಿ ದುಡಿದುಕೊಂಡು ತಿನ್ನುವ ಸಲುವಾಗಿ ಭೂಮಿ ಹಂಚುವ ರೀತಿಯಲ್ಲಿ ನಗರ ಪ್ರದೇಶಗಳಲ್ಲಿ ಪ್ರತಿಮನೆಯೂ ಒಂದು ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ ಕೇಂದ್ರವಾಗಬೇಕು. ಆಗ ಜನರು ಸ್ವಾವಲಂಬಿಗಳಾಗುತ್ತಾರೆ.

ಜವಹರಲಾಲ್ ನೆಹ್ರು ಪ್ರಧಾನಿಯಾಗಿದ್ದಾಗ ಈ ಪ್ರಯೋಗ ಪಂಜಾಬಿನಲ್ಲಿ ನಡೆಯಿತು. ಆಗ ಕೈರಾನ್ ಎಂಬುವವರು ಪಂಜಾಬಿನ ಮುಖ್ಯಮಂತ್ರಿ ಆಗಿದ್ದರು. ಅವರು ಪಂಜಾಬನ್ನು ಗೃಹ ಕೈಗಾರಿಕೆಗಳ, ಗುಡಿ ಕೈಗಾರಿಕೆಗಳ ಆಗರ ಮಾಡಲು ಸಂಕಲ್ಪ ಮಾಡಿದರು. ಆ ಕೆಲಸದಲ್ಲಿ ಅವರು ಗೆಲುವನ್ನೂ ಸಂಪಾದಿಸಿದರು. ಬಡತನದ ಖಾಯಂ ನಿವಾರಣೆಗೆ ಬುನಾದಿಯನ್ನು ಹಾಕಿದರು. ಆದರೆ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದರೆಂಬ ಅಪವಾದಕ್ಕೆ ತುತ್ತಾಗಿದ್ದರು. ಅದಕ್ಕಾಗಿ ಅವರ ಕೊಲೆಯಾಯಿತು. ಆದರೆ ಬಡತನ ನಿವಾರಣೆಗೆ ಅವರು ಕೈಗೊಂಡ ಕ್ರಮಗಳ ಬಗೆಗೆ ಪಂಜಾಬಿನ ಜನತೆ ಇಂದಿಗೂ ಕೈರಾನ್‍ರನ್ನು ನೆನೆಯುತ್ತಾರೆ.

ಪಂಜಾಬಿನಲ್ಲಿ ನಡೆದ ಈ ಪ್ರಯೋಗ ಭಾರತದಾದ್ಯಂತ ಪಸರಿಸಬೇಕು. ಈ ಕುರಿತು ಭಾಜಪ ಪ್ರಣಾಳಿಕೆಯಲ್ಲಿ ಪ್ರಸ್ತಾಪವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋವಿಡ್-19 ಲಸಿಕೆ ಮತ್ತು ಯುವ ವಯಸ್ಕರ ಹಠಾತ್ ಸಾವುಗಳ ನಡುವೆ ಯಾವುದೇ ವೈಜ್ಞಾನಿಕ ಸಂಬಂಧ ಕಂಡುಬಂದಿಲ್ಲ: ಏಮ್ಸ್ ಅಧ್ಯಯನ

ನವದೆಹಲಿ: ದೆಹಲಿಯ ಏಮ್ಸ್‌ನಲ್ಲಿ ನಡೆಸಿದ ಒಂದು ವರ್ಷದ ಸಮಗ್ರ, ಶವಪರೀಕ್ಷೆ ಆಧಾರಿತ ವೀಕ್ಷಣಾ ಅಧ್ಯಯನವು, ಯುವ ವಯಸ್ಕರಲ್ಲಿ ಕೋವಿಡ್-19 ಲಸಿಕೆಯನ್ನು ಹಠಾತ್ ಸಾವುಗಳೊಂದಿಗೆ ಸಂಪರ್ಕಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ, ಇದು ಕೋವಿಡ್ ಲಸಿಕೆಗಳ...

ಬಿಜೆಪಿ ಜನ ನಾಟಕೀಯರು, ದೇಶದ್ರೋಹಿಗಳು; ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಮಲ್ಲಿಕಾರ್ಜುನ ಖರ್ಗೆ

"ಬಿಜೆಪಿಯವರು 'ಗದ್ದಾರ್‌ಗಳು' (ದೇಶದ್ರೋಹಿಗಳು) ಮತ್ತು 'ಡ್ರಮೆಬಾಜ್' (ನಾಟಕೀಯದಲ್ಲಿ ತೊಡಗಿಸಿಕೊಳ್ಳುವವರು). ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟಿದ್ದಾರೆ.  ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ವೋಟ್ ಚೋರಿ ಕುರಿತ...

ಆಸ್ಟ್ರೇಲಿಯಾ | ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಗುಂಡಿನ ದಾಳಿ : 12 ಜನರು ಸಾವು

ಭಾನುವಾರ (ಡಿ.14) ಆಸ್ಟ್ರೇಲಿಯಾದ ಸಿಡ್ನಿ ನಗರದ ಪ್ರಸಿದ್ಧ ಬೋಂಡಿ ಬೀಚ್‌ನಲ್ಲಿ ಆಯೋಜಿಸಿದ್ದ ಯಹೂದಿ ಸಮುದಾಯದ 'ಹನುಕ್ಕಾ' ಕಾರ್ಯಕ್ರಮದಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ....

ಕೋಲ್ಕತ್ತಾದಲ್ಲಿ ನಡೆದ ಅವ್ಯವಸ್ಥೆ: ‘ಮೆಸ್ಸಿ ಭಾರತ ಪ್ರವಾಸ 2025’ರ ಪ್ರಮುಖ ಆಯೋಜಕರಿಗೆ 14 ದಿನಗಳ ಕಸ್ಟಡಿ

ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದ ಅವ್ಯವಸ್ಥೆ ಉಂಟಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಲಿಯೋನೆಲ್ ಮೆಸ್ಸಿ ಅವರ ಇಂಡಿಯಾ ಟೂರ್ 2025 ರ ಪ್ರಮುಖ ಆಯೋಜಕರನ್ನು ವಶಕ್ಕೆ ಪಡೆದಿದ್ದಾರೆ.  ಈ ಘಟನೆಯು ಪ್ರತಿಭಟನೆಗಳಿಗೆ...

ಹೆಡ್ಗೆವಾರ್ ಸ್ಮಾರಕ ಭೇಟಿ ತಪ್ಪಿಸಿಕೊಂಡ ಅಜಿತ್ ಪವಾರ್ : ನಮ್ಮದು ಅಂಬೇಡ್ಕರ್, ಫುಲೆ ಸಿದ್ಧಾಂತ ಎಂದ ಎನ್‌ಸಿಪಿ ವಕ್ತಾರ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಭಾನುವಾರ (ಡಿ.14) ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಸ್ಮಾರಕ ಭೇಟಿ ಕಾರ್ಯಕ್ರಮದಿಂದ ತಪ್ಪಿಸಿಕೊಂಡಿದ್ದು, ಅವರ ಪಕ್ಷ ಎನ್‌ಸಿಪಿ ರಾಜ್ಯದ ಅಭಿವೃದ್ಧಿಗಾಗಿ ಮಹಾಯುತಿ ಮೈತ್ರಿಕೂಟಕ್ಕೆ ಸೇರಿರುವುದಾಗಿ ಒತ್ತಿ...

ದೆಹಲಿಗೆ ಬರುವ ನಮ್ಮ ವಾಹನಗಳನ್ನು ಬಿಜೆಪಿ ಸರ್ಕಾರ ತಡೆಯುತ್ತಿದೆ : ಡಿಕೆಶಿ

ದೆಹಲಿ ಬರುತ್ತಿರುವ ನಮ್ಮವರ ವಾಹನಗಳನ್ನು ಬಿಜೆಪಿ ಸರ್ಕಾರ ತಡೆಯುತ್ತಿದೆ ಎಂಬ ಮಾಹಿತಿ ಬಂದಿದೆ. ಈ ಬಿಜೆಪಿಯವರಿಗೆ ಯಾಕಿಷ್ಟು ಆತಂಕ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯ ರಾಮ್‌ಲೀಲಾ...

ಹೊಸೂರು ವಿಮಾನ ನಿಲ್ದಾಣ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಿಂದ 2,900 ಎಕರೆ ಸ್ವಾಧೀನ ಸಾಧ್ಯತೆ

ಚೆನ್ನೈ: ಬೆಂಗಳೂರಿಗೆ ಬಹಳ ಹತ್ತಿರದಲ್ಲಿರುವ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ನಗರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಲ್ಲಿ ಸರ್ಕಾರಿ ಸ್ವಾಮ್ಯದ 800 ಎಕರೆ ಸೇರಿದಂತೆ ಸುಮಾರು 3,000...

ಸೋನಮ್ ವಾಂಗ್‌ಚುಕ್ ಸಂಸ್ಥೆ ಅನುಕರಣೀಯ ಕೆಲಸ ಮಾಡುತ್ತಿದೆ, ಯುಜಿಸಿ ಮಾನ್ಯತೆ ನೀಡಬೇಕು ಎಂದ ಸಂಸದೀಯ ಸಮಿತಿ

ಲಡಾಖ್‌ನ ಶಿಕ್ಷಣ ತಜ್ಞ ಹಾಗೂ ಹೋರಾಟಗಾರ ಸೋನಮ್ ವಾಂಗ್‌ಚುಕ್ ಸ್ಥಾಪಿಸಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (ಹೆಚ್‌ಐಎಎಲ್‌) 'ಅನುಕರಣೀಯ' ಕೆಲಸ ಮಾಡುತ್ತಿದೆ. ಹಾಗಾಗಿ, ಆ ಸಂಸ್ಥೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯುಜಿಸಿ) ಮಾನ್ಯತೆ...

ಮುಸ್ಲಿಂ ಎಂದು ಪರಿಶೀಲಿಸಿ ಗುಂಪುಹಲ್ಲೆ: ತೀವ್ರ ದಾಳಿಗೆ ಒಳಗಾಗಿದ್ದ 50 ವರ್ಷದ ಬಟ್ಟೆ ವ್ಯಾಪಾರಿ  ಸಾವು

ನವಾಡಾ ಜಿಲ್ಲೆಯ ರೋಹ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ಗುಂಪು ಹಲ್ಲೆಯಲ್ಲಿ ಕ್ರೂರವಾಗಿ ಹಲ್ಲೆಗೊಳಗಾಗಿದ್ದ 50 ವರ್ಷದ ಬಟ್ಟೆ ವ್ಯಾಪಾರಿ ಮೊಹಮ್ಮದ್ ಅಥರ್ ಹುಸೇನ್ ಶುಕ್ರವಾರ ತಡರಾತ್ರಿ ಬಿಹಾರ್ಷರೀಫ್ ಸದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿಸೆಂಬರ್...

ಅಮೆರಿಕಾದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ: 2 ಸಾವು, 8 ಜನರಿಗೆ ತೀವ್ರ ಗಾಯಗಳಾಗಿವೆ

ಅಮೆರಿಕಾದ ರೊಡ್ ಐಲ್ಯಂಡ್ ರಾಜ್ಯದ ಪ್ರೊವಿಡೆನ್ಸ್ ನಗರದಲ್ಲಿರುವ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಸಮಯದಲ್ಲಿ ಎಂಜಿನಿಯರಿಂಗ್ ಕಟ್ಟಡದಲ್ಲಿ ಗುಂಡಿನ ದಾಳಿ ನಡೆದಿದೆ, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಡಿಸೆಂಬರ್ 13ರ,...