Homeಅಂಕಣಗಳುಗೆದ್ದ ನಂತರವೇ ಗಡ್ಡಮೀಸೆ ಬೋಳಿಸೋದಾಗಿ ಟೋಫನ್‍ತಲೆ ಮೇಲೆ ಆಣೆ

ಗೆದ್ದ ನಂತರವೇ ಗಡ್ಡಮೀಸೆ ಬೋಳಿಸೋದಾಗಿ ಟೋಫನ್‍ತಲೆ ಮೇಲೆ ಆಣೆ

- Advertisement -
- Advertisement -

ಆಘಾತವಾಣಿ |

ನಮಸ್ಕಾರ, ಆಘಾತವಾಣಿಗೆ ಸ್ವಾಗತ, ಇದೀಗ ಮುಖ್ಯಾಂಶಗಳು. ಓದುತ್ತಿರೋರು ಅಟ್ಯಾಕ್ ಹನ್ಮಂತು

ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಳೆದ ಒಂದು ತಿಂಗಳಿನಿಂದ ಉರಿಬಿಸಿಲಿನಲ್ಲಿ ಓತ್ಲಾ ಹೊಡೆಯುತ್ತಿದ್ದ ‘ವಿಜೇಂದ್ರ ಸನ್ನಾಫ್ ಯಡ್ರಪ್ಪ’ನವರಿಗೆ ಚಾಮರಾಜಪೇಟೆಯ ‘ಹೇ ಶವ ಕೃಪ’ದ ವಯೋವೃದ್ಧರು ಟಿಕೆಟ್ ನಿರಾಕರಿಸಿದ್ದಾರೆ. ತನ್ನ ‘ಅಧಿಕೃತ’ ಮಗನಿಗೇ ಟಿಕೆಟ್ ಢಮಾರ್ ಅನ್ನಿಸಿದ ಈ ಬೆಳವಣಿಗೆಯಿಂದ ನೊಂದ ಯಡೂರಪ್ಪನವರು ಸೋಪಕ್ಕನ ಹಳೇ ಸೀರೆಯೊಂದನ್ನು ಎತ್ತಿಕೊಂಡು ಫ್ಯಾನಿಗೆಸೆದು ನೇಣು ಹಾಕಿಕೊಳ್ಳಲು ಇನ್ನೂ ಯತ್ನಿಸಿಲ್ಲ ಎಂಬ ಸಾಕಿಂಗ್ ನ್ಯೂಸ್ ಹೊರಬಿದ್ದಿದೆ.
< < < <
ಸಂವಿಧಾನ ಬದಲಿಸೋಕೇ ನಾವು ಅಲ್ಲಾಡಿಸಿಕೊಂಡು ಇಲ್ಲೀತನಕ ಬಂದಿದ್ದೇವೆ ಎಂದು ಮಿಯಾಂವ್ ಎಂದಿದ್ದ ಬಿಜೆಪಿಯ ‘ಅನಾಥಕುಮಾರ್ ಹೆಗಡೆ’ಯವರು ಇದ್ದಕ್ಕಿದ್ದಂತೆ ಮಂಗಮಾಯವಾಗಿ ಹೋಗಿದ್ದಾರೆ. ಮೊನ್ನೆ ತಾನೇ ಬಿಜೆಪಿ ನಾಯಕನ ಲಾರಿಯೊಂದು ತಮ್ಮ ಬೆಂಗಾವಲು ವಾಹನಕ್ಕೆ ಗುದ್ದಿದ್ದರಿಂದ ಆಮಶಂಕೆ ಬೇಧಿಯಾಗಿ ಸುಸ್ತಾಗಿದ್ದ ಅನಾಥಕುಮಾರ್.. ಹೋದಲ್ಲಿ ಬಂದಲ್ಲಿ ಕಯ ಕಯ ಎಂದು ನರಳಾಡುತ್ತ ಜನರಿಂದ ಕಪುಕ್ ತುಪುಕ್ ಎಂದು ಉಗಿಸಿಕೊಂಡು ಚರ್ಮದ ಅಲರ್ಜಿಯಿಂದಲೂ ಬಳಲುತ್ತಿದ್ದರು. ಜನರ ಉಗುಳಿನಿಂದ ಇನ್ಫೆಕ್ಷನ್ ಆಗಿರಬಹುದಾದ ಸಾಧ್ಯತೆಯಿದ್ದುದರಿಂದ ಇದಕ್ಕೆ ಚಿಕಿತ್ಸೆ ಪಡೆಯಲು ಅನಾಥಕುಮಾರ್, ನೈಜೀರಿಯಾ ದೇಶಕ್ಕೆ ಅಳುತ್ತ ನಡೆದುಕೊಂಡೇ ಹೋಗಿದ್ದಾರೆ ಎಂಬ ಗುಮಾನಿಗಳು ವ್ಯಕ್ತವಾಗಿವೆ.
< < < <
ಈಗಾಗಲೇ ತಮ್ಮ ಎರಡೂ ಕಾಲನ್ನು ಸ್ಮಶಾನದ ಗುಂಡಿಗೆ ಇಳಿಬಿಟ್ಟಿರುವ ಬೊಚ್ಚುಬಾಯಿ ತಾತ ‘ಅಸಾರಾಂ ಬಾಪು’ ಅವರು ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ಅತ್ಯಾಚಾರದ ಕೇಸಿನಲ್ಲಿ ಕಳೆದ 5 ವರ್ಷಗಳಿಂದ ಜೈಲಿನಲ್ಲಿ ಶೌಚಾಲಯ ಸ್ವಚ್ಛ ಮಾಡುತ್ತ ಸಜೆಬಂಧಿಯಾಗಿದ್ದುದು ತಮಗೆಲ್ಲರಿಗೂ ತಿಳಿದಿದೆ. ಇದೀಗ ಈ ಅತ್ಯಾಚಾರದ ಕುರಿತಂತೆ ಕೋರ್ಟ್ ತೀರ್ಪು ಪ್ರಕಟವಾಗಿದ್ದು, ತಾತ ಅಸಾರಾಂ ಬಾಪು ತಪ್ಪಿತಸ್ಥ ಎಂದು ಸಾಬೀತಾಗಿದೆ. ಈ ಬಗ್ಗೆ ತೀರ್ಪು ಕೊಡುವಾಗ ರೊಚ್ಚಿಗೆದ್ದ ತೀರ್ಪುಗಾರರು.. ಈ ರೇಪಿಸ್ಟ್ ಮುದುಕನಿಗೆ ಸಾಯುವತನಕ ಪಕೋಡಮ್ಯಾನ್ ಫ್ರಾಡೇಂದ್ರನ ಎಲ್ಲ ಭಾಷಣಗಳನ್ನೂ ಕೇಳುವ ಮತ್ತು ನೋಡುವ ಭಯಾನಕ ಶಿಕ್ಷೆಯನ್ನು ಇನ್ನೂ ವಿಧಿಸಿಲ್ಲ ಎಂದು ವರದಿಯಾಗಿದೆ.
< < < <
ಈ ನಡುವೆ ಗುಜರಾತಿನ ತಮ್ಮ ಅಧಿಕೃತ ಹೆಂಡಿರು ಮಕ್ಕಳನ್ನು ಮರೆತು ಕರ್ನಾಟಕದ ತುಂಬೆಲ್ಲ ಅಂಡಲೆಯುತ್ತಿರುವ ಅಮಿತ್ ಬೋಡಪ್ಪನವರು ಬಿಜೆಪಿ ಪಾರ್ಟಿಗೂ ಮತ್ತು ಗಣಿರೆಡ್ಡಿಗೂ ಯಾವುದೇ ‘ವಿವಾಹೇತರ ಅಕ್ರಮ ಸಂಬಂಧ’ವಿಲ್ಲ ಎಂದು ಹೇಳಿದ್ದರು. ಆದರೂ ಸಹ ಬೋಡಪ್ಪನ ಮಾತಿಗೆ ಹಳೇಮೆಟ್ಟಿನಷ್ಟೂ ಬೆಲೆ ಕೊಡದ ಯಡೂರಪ್ಪನವರು ಗಣಿರೆಡ್ಡಿಯನ್ನು ಕಂಕುಳಲ್ಲಿ ಎತ್ತಿಕೊಂಡು ಕರ್ನಾಟಕದ ಮನೆಮನೆಯಲ್ಲಿ ಓಟಿನ ತಿರುಪೆ ಎತ್ತಲು ಮುಂದಾಗಿದ್ದಾರೆ. ಈ ಬಗ್ಗೆ ಸುದ್ದಿ ತಿಳಿದ ಅಮಿತ್ ಬೋಡಪ್ಪನವರು ಸಿಟ್ಟಿಗೆದ್ದು ಯಡೂರಪ್ಪನ ಮಗನ ಎಲೆಕ್ಷನ್ ಟಿಕೇಟಿಗೆ ಬಗನಿಗೂಟ ಹೆಟ್ಟಿದ್ದಾರೆಂದು ಬಲ್ಲ ಮೂಲಗಳಿಂದ ಇನ್ನೂ ತಿಳಿದು ಬಂದಿಲ್ಲ.
< < < <
ಇದೀಗ ಬಂದ ಸುದ್ದಿ. ಈ ಚುನಾವಣೆಯಲ್ಲಿ ಗೆದ್ದ ನಂತರವೇ ಗಡ್ಡಮೀಸೆ ಬೋಳಿಸುತ್ತೇನೆಂದು ಗಣಿರೆಡ್ಡಿಯ ಟೋಫನ್‍ತಲೆ ಮೇಲೆ ಆಣೆ ಮಡಗಿರುವ ‘ಸ್ತ್ರೀರಾಮುಲು’ ಇದ್ದಕ್ಕಿದ್ದಂತೆ ದೈವಭಕ್ತರಾಗಿದ್ದಾರೆ. ತಮ್ಮ ಮನೆಗೇ ಪೂಜಾರಿಗಳನ್ನು ಕರೆಸಿಕೊಂಡು ಗೋಪೂಜೆಯನ್ನು ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಹಸುವಿಗೆ ಅರಿಶಿಣ ಕುಂಕುಮ ಹಚ್ಚಲು ಹೇಳಿದ ಪೂಜಾರಿಯ ಮಾತು ಮುಗಿಯುವ ಮೊದಲೇ ಅರಿಶಿಣ ಕುಂಕುಮದ ಪಾತ್ರೆಯೆತ್ತಿಕೊಂಡ ಸ್ತ್ರೀರಾಮುಲು ಗೋಡೆಗೆ ಎನಾಮೆಲ್ ಪೇಂಟ್ ಬಳಿದಂತೆ ಹಸುವಿಗೆ ಬಳಿದಿದ್ದಾರೆ. ಪೂಜೆಯ ನಂತರ ಈ ಅನಿರೀಕ್ಷಿತ ಕುಂಕುಮದ ದಾಳಿಯಿಂದ ಬೆಚ್ಚಿಬಿದ್ದ ಹಸುವು ಸ್ತ್ರೀರಾಮುಲು ಮನೆಯಿದ್ದ ವಿರುದ್ಧ ದಿಕ್ಕಿಗೆ ಓಡಿಹೋಗಿದ್ದು ಇಷ್ಟೊತ್ತಿಗೆ ಬಹುಶಃ ರಾಜಸ್ಥಾನ ತಲುಪಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
< < < <
ಬಿಜೆಪಿ ಪಕ್ಷದ ಅನಧಿಕೃತ ಕಾನ್ಸ್‍ಟೇಬಲ್‍ಗಳಂತೆ ಕೋಮುಗಲಭೆಗಳು, ಬಂದ್, ಪ್ರತಿಭಟನೆಗಳಲ್ಲಿ ಗುಂಪುಗುಂಪಾಗಿ ಧುಮುಕಿ ಜೈಲುಪಾಲಾಗುತ್ತಿದ್ದ ‘ಪಿಲ್ಲವ ಸಮುದಾಯದ’ ವೀರಸೈನಿಕರಿಗೆ ಈ ಬಾರಿ ಬಿಜೆಪಿ ಪಂಗನಾಮ ಎಳೆದಿದೆ. ‘ಪಿಲ್ಲವ ಸಮುದಾಯದ’ ಯಾವೊಬ್ಬ ಗಂಡಸೂ ಮನೆಯಲ್ಲಿ ಇರಲು ಬಿಡದೆ, ಎಲ್ಲರನ್ನೂ ಸಾಮೂಹಿಕವಾಗಿ ಜೈಲಿಗೆ ಸೇರಿಸಿ ಗಿನ್ನೆಸ್ ದಾಖಲೆ ಬರೆಯಲು ಯತ್ನಿಸುತ್ತಿರುವ ಬಿಜೆಪಿಯ ಕೃಶಕಾಯ ಎದೆಯ ಮೇಲೆ ‘ಪಿಲ್ಲವರು’ ಕಾಲೆತ್ತಿ ಮಡಗಿದ್ದಾರೆ. ಯೂಸ್ ಮಾಡಿ ಬಿಸಾಕಲು ನಮ್ಮನ್ನೇನು ಕಾಂಡೋಮ್ ಎಂದುಕೊಂಡಿದ್ದೀರ ಎಂದು ರೊಚ್ಚಿಗೆದ್ದಿರುವ ‘ಪಿಲ್ಲವರ’ ಆಕ್ರೋಶದ ಹಿಂದೆ ಸಮುದಾಯಕ್ಕೆ ಟಿಕೆಟ್ ನಿರಾಕರಿಸಿದ ಬಿಜೆಪಿಯ ದೌಲತ್ತಿದೆ ಎಂಬುದು ತಿಳಿದುಬಂದಿದೆ.
< < < <
ಅತ್ತಾಗೂ ಇಲ್ಲ, ಇತ್ತಾಗೂ ಇಲ್ಲದ ಉಪರಾಷ್ಟ್ರಪತಿ ‘ಪೆಂಕಯ್ಯ ನಾಯ್ಡು’ ಅವರು ‘ಭಾರತದಲ್ಲಿ ಮಹಿಳೆಯರ ಮೇಲೆ ಗೌರವ ಕಡಿಮೆಯಾಗಲು ಬ್ರಿಟಿಷರೇ ಕಾರಣ’ ಎಂದು ಹೇಳಿದ್ದಾರೆ. ಬ್ರಿಟಿಷರು ಬರುವುದಕ್ಕೂ ಮೊದಲು ಭಾರತ ದೇಶದಲ್ಲಿ ವಿಧವೆಯರನ್ನು ಗಂಡನ ಚಿತೆಯೊಳಗೆ ತಳ್ಳಿ ಸುಟ್ಟುಹಾಕುವ ಅದ್ಭುತ ಸತಿಸಹಗಮನ ಪದ್ಧತಿ, ದೇವರ ಹೆಸರಿನಲ್ಲಿ ದಲಿತ ಮಹಿಳೆಯರನ್ನು ವೇಶ್ಯಾವಾಟಿಕೆಗೆ ನೂಕುತ್ತಿದ್ದ ದೇವದಾಸಿ ಪದ್ಧತಿಯಂತಹ ಅತ್ಯದ್ಭುತ ಪದ್ಧತಿಗಳಿದ್ದವು. ಬ್ರಿಟಿಷರು ಬಂದು ಇವೆಲ್ಲ ಅತ್ಯುತ್ತಮ ಪದ್ಧತಿಗಳನ್ನು ನಿಲ್ಲಿಸಿ ಮಹಿಳೆಯರಿಗೆ ಅಗೌರವ ಉಂಟು ಮಾಡಿದರೆಂದು ಪೆಂಕಯ್ಯನವರು ಇನ್ನೂ ಹೇಳಿಲ್ಲವೆಂದು ಬಲ್ಲ ಮೂಲಗಳು ಹೇಳಿವೆ.
< < < <
ನೋಟ್ ಬ್ಯಾನ್ ಮೂಲಕ ಲಕ್ಷಾಂತರ ಕೋಟಿ ಕಪ್ಪುಹಣವನ್ನು ಹೊರತೆಗೆಯಲು ಯತ್ನಿಸಿ ಅಂಡುಸುಟ್ಟ ಬೆಕ್ಕಿನಂತಾಗಿರುವ ಪಕೋಡೇಂದ್ರರ ಅಧ್ವಾನಗಳಿಗೆ ಇಂದಿಗೂ ಸಹ ಭಾರತದ ಎಟಿಎಂಗಳಲ್ಲಿ ಹಣವಿಲ್ಲದಂತಾಗಿದೆ. ಇದನ್ನು ಸರಿಪಡಿಸಲು ಎಟಿಎಂಗಳಲ್ಲಿ ಖೋಟಾನೋಟುಗಳನ್ನು ತುಂಬಿ ಜನರ ಹಣೆಗೆ ಪಂಗನಾಮ ಎಳೆಯುವ ಪ್ರಯತ್ನ ಉತ್ತರ ಭಾರತದಿಂದ ವರದಿಯಾಗಿದೆ. ಬರೇಲಿಯ ಎಟಿಎಂಗಳಲ್ಲಿ ಹಣ ಪಡೆಯಲು ಹೋದ ಜನರ ಕೈಗೆ ಖೋಟಾನೋಟುಗಳು ತುಪತುಪನೆ ಉದುರಿದ್ದು, ಜನರು ಪಕೋಡೇಂದ್ರನ ನೋಟ್‍ಬ್ಯಾನ್ ಸಾಹಸವೇ ಇವೆಲ್ಲ ಕಾಮಿಡಿಗಳಿಗೆ ಕಾರಣವೆಂದು ಪಕೋಡೇಂದ್ರನ ಮೇಲೆ ಮಾಟಮಂತ್ರ ಮಾಡಿಸಿಯಾದರೂ ಸರಿ ದೇಶದಿಂದ ಓಡಿಸಬೇಕೆಂದು ಕೇರಳದ ಮಾಂತ್ರಿಕರನ್ನು ಹುಡುಕುತ್ತಿದ್ದಾರೆ ಎಂಬ ಘನಘೋರ ಸತ್ಯ ಇನ್ನೂ ಬಯಲಾಗಿಲ್ಲ.
< < < <
ಇದೆಲ್ಲದರ ನಡುವೆ ಕುಖ್ಯಾತ ನಟ ‘ಸಾಯಿಗುಮಾರ್’ ಅವರಿಗೆ ಬಿಜೆಪಿ ಪಕ್ಷವು ಟಿಕೇಟನ್ನು ಕೊಟ್ಟಿದ್ದು, ಇದಕ್ಕೆ ಕಾರಣವೇನೆಂದು ಕೆದಕಿದಾಗ ಆಘಾತಕಾರಿ ವಿಷಯಗಳು ಹೊರಬಂದಿವೆ. ಟಿಕೇಟ್ ಕೇಳಲು ಕೈಯಲ್ಲಿ ಲಾಂಗ್ ಹಿಡಿದು ಸೀದ ‘ಹಾರೆಸ್ಸೆಸ್’ ಮುದುಕರ ಕೊಂಪೆಗೆ ನುಗ್ಗಿದ್ದ ಸಾಯಿಗುಮಾರ್ ಅವರು ಅಲ್ಲಿದ್ದ ಮಿಟುಕಲಾಡಿ ಮುದುಕರ ಸೊಂಟದ ಮೇಲೆ ಲಾಂಗ್ ಇಟ್ಟು, ಟಿಕೇಟ್ ಕೊಡ್ತೀರೋ, ಇಲ್ಲಾ ಸೊಂಟ ಕುಯ್ಯಲೋ ಎಂದು ಆವಾಜ್ ಹಾಕಿದ್ದರಂತೆ. ಐಟಂ ಉಳಿದರೆ ಸಾಕೆಂದು ಹಾರೆಸ್ಸೆಸ್ ಮುದುಕರು ಸಾಯಿಗುಮಾರ್‍ಗೆ ಟಿಕೇಟ್ ಕೊಟ್ಟು, ‘ವದಲೇರಾ ದೊಂಗ ನಾ ಕೊಡಕಾ’ ಎಂದು ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆಂದು ಇನ್ನೂ ತಿಳಿದುಬಂದಿಲ್ಲ.
< < < <
ಭಾರತೀಯ ಜನ ಪಕ್ಷದ ಒನ್ ಅಂಡ್ ಓನ್ಲಿ ಗಂಡಸಾಗಿರುವ ಸೋಪಕ್ಕನವರು ಈ ಸಲ ಟಿಕೇಟ್ ಸಿಗದೆ ಅಬ್ಬೇಪಾರಿಯಂತಾಗಿ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ. ‘ಯಾಕೆ ಸೋಪ, ಏನಾಯ್ತು ನಿಂಗೆ, ಯಾಕೆ ಹೀಗೆ ತಲೆಕೆದರಿಕೊಂಡು ಕುಂತಿದ್ದೀಯ’ ಎಂದು ಸಮಾಧಾನಪಡಿಸಲು ಹೋದ ಯಡ್ರಪ್ಪನವರ ತೊಡೆಗೆ ಸೋಪಕ್ಕನವರು ಬಲವಾಗಿ ಅಗಿದಿರುವ ಸಿಸಿಟಿವಿ ದೃಶ್ಯಗಳು ನಮಗೆ ಲಭ್ಯವಾಗಿವೆ. ಕನಿಷ್ಟ ಪಕ್ಷ 250 ಗ್ರಾಂನಷ್ಟು ಮಾಂಸವನ್ನು ಕಿತ್ತಿರುವ ಸೋಪಕ್ಕನವರು ನಂತರ ಯಡ್ರಪ್ಪನವರ ಕುತ್ತಿಗೆಗೆ ಬಾಯಿ ಹಾಕಲು ಯತ್ನಿಸಿದ್ದಾರೆ. ಆಗ ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್‍ಗಳು ಸೋಪನ ಕಪ್ಪಾಳಕ್ಕೆ ಚಟೇರ್-ಪಟೇರ್ ಎಂದು ಬಡಿದು ಯಡ್ರಪ್ಪನವರ ಪ್ರಾಣವನ್ನು ಕಾಪಾಡಿದ್ದಾರೆಂದು ಇನ್ನೇನು ನಮಗೆ ಸುದ್ದಿ ಲಭಿಸಲಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮುಂದಿನ ವಾರ ಸಿಗೋಣ. ಟೇಕ್ ಕೇರ್ ಬೈ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....