Homeಕರ್ನಾಟಕದಮನಿತರ ಸಿಟ್ಟಿನ ಏಕೀಕರಣ - ಅರುಣ್ ಜೋಳದಕೂಡ್ಲಿಗಿ

ದಮನಿತರ ಸಿಟ್ಟಿನ ಏಕೀಕರಣ – ಅರುಣ್ ಜೋಳದಕೂಡ್ಲಿಗಿ

- Advertisement -
- Advertisement -

`ಬಡವರ ಸಿಟ್ಟು ದವಡೆಗೆ ಮೂಲ’ ಎನ್ನುವ ಗಾದೆ, ಬಡವ ಸಿಟ್ಟಾದರೆ ಪರಿಣಾಮವನ್ನು ಆತನೆ ಎದುರಿಸಬೇಕು, ಹಾಗಾಗಿ ಬಾಯ್ಮುಚ್ಚಿರುವುದು ಲೇಸು ಎನ್ನುವಂತಿದೆ. ಅಂತೆಯೇ `ಬಡವರ ಸಿಟ್ಟು ಬಾಳ ಕೆಟ್ಟದ್ದು’ ಎನ್ನುವ ನುಡಿಗಟ್ಟೂ ಚಾಲ್ತಿಯಲ್ಲಿದೆ. ಅಸಹಾಯಕತೆ ಕಟ್ಟೆಯೊಡೆದಾಗ, ದಬ್ಬಾಳಿಕೆ ಅತಿಯಾದಾಗ ಈ ನುಡಿಗಟ್ಟು ವಿರಳವಾಗಿ ಬಳಕೆಯಾಗುತ್ತದೆ. ಆಳುವ ಶಕ್ತಿಗಳು ಮೊದಲ ನುಡಿಗಟ್ಟನ್ನು ಕಟ್ಟಿ ಜನರಲ್ಲಿ ಆತಂಕ ಹುಟ್ಟಿಸಿದರೆ, ವಿರುದ್ಧವಾಗಿ ಜನರು ಪರ್ಯಾಯ ನುಡಿಗಟ್ಟಿನಲ್ಲಿ ನಮ್ಮ ಸಿಟ್ಟಿಗೂ ಶಕ್ತಿಯಿದೆ ಎಂದು ಆಳುವವರಲ್ಲಿ ಭಯ ಹುಟ್ಟಿಸಿದ್ದಾರೆ. ಇವೆರಡೂ ರಾಜಶಾಹಿ ಮತ್ತು ಜಮೀನ್ದಾರಿ ವ್ಯವಸ್ಥೆಯಲ್ಲಿ ಜೀವ ತಳೆದವು.

ಈ ನುಡಿಗಟ್ಟುಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿಯೂ ಮಾರುವೇಷದಲ್ಲಿವೆ. ಇಲ್ಲಿಯೂ ಬಡವರ ಸಂಖ್ಯೆ ಇಳಿದಿಲ್ಲ. ಅಂತೆಯೇ ಪ್ರಜಾಪ್ರಭುತ್ವದಲ್ಲಿಯೂ `ಬಡವನ ಸಿಟ್ಟು ದವಡೆಗೆ ಮೂಲ’ ಎನ್ನುವ ಸ್ಥಿತಿ ಪೂರ್ಣ ಬದಲಾಗಿಲ್ಲ. ಆದರೆ `ಬಡವರ ಸಿಟ್ಟು ಬಾಳ ಕೆಟ್ಟದ್ದು’ ಎಂಬ ನುಡಿಗಟ್ಟಿಗೆ ಸಂವಿಧಾನಿಕ ಬಲ ಬಂದಿದೆ. ಜನರು ಮತ ಚಲಾಯಿಸಿ ಗೆಲ್ಲಿಸಿದ ಚುನಾಯಿತರು ಏನೊಂದು ಕೆಲಸ ಮಾಡದೆ ದರ್ಪ ನಡೆಸಿದವರನ್ನು ಅದೇ ಮತದಾರರರು ಮತ್ತೊಂದು ಚುನಾವಣೆಯಲ್ಲಿ ಮಣ್ಣು ಮುಕ್ಕಿಸಿದ್ದಾರೆ. ಇಲ್ಲಿ ಮತದಾರರ ಸಿಟ್ಟು ಮತ್ತು ಆಕ್ರೋಶ `ಮತಚಲಾವಣೆ’ರೂಪದಲ್ಲಿ ಏಕೀಕರಣಗೊಂಡಿದೆ.

ದೀರ್ಘಕಾಲದ ಆಳ್ವಿಕೆಯ ಮದವೇರಿ ಜಿಡ್ಡುಗಟ್ಟಿದ ಕಾಂಗ್ರೆಸ್ ವಿರುದ್ಧದ ಬಹುಸಂಖ್ಯಾತ ಯುವ ಸಮುದಾಯದ ಸಿಟ್ಟು ಏಕೀಕರಣಗೊಂಡ ಫಲವೆ, ಕಳೆದ 2014 ರ ಚುನಾವಣೆಯಲ್ಲಿ ಭಾಜಪ ಬಹುಮತ ಪಡೆದು ನರೇಂದ್ರ ಮೋದಿಯವರು ಪ್ರಧಾನಿಯಾದರು. ಇದೀಗ ಮತ್ತೊಂದು ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ. ಈ 5 ವರ್ಷದ ಮೋದಿಯವರ ಆಡಳಿತದಲ್ಲಿನ ನೋಟುರದ್ಧತಿ, ಜಿಎಸ್‍ಟಿ, ಕೈಗೆಟುಕದಂತಾದ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ, ಸಾರ್ವಜನಿಕ ಸಂಸ್ಥೆಗಳ ದಮನ, ಪರಿಶಿಷ್ಟರ ಸೌಲಭ್ಯಗಳ ಕಡೆಗಣನೆ, ಕಾರ್ಪೋರೇಟರುಗಳ ಪರವಾದ ಆಳ್ವಿಕೆ, ರೈತ ಸಮುದಾಯದ ನಿರ್ಲಕ್ಷ್ಯ, ಹೆಚ್ಚಿದ ರೈತರ ಆತ್ಮಹತ್ಯೆ, ದಲಿತ ಆದಿವಾಸಿಗಳ ದಮನ, ಸಂವಿಧಾನ ಬದಲಾಯಿಸುವ ಧೋರಣೆ, ನಿರುದ್ಯೋಗ ಹೆಚ್ಚಳ ಮೊದಲಾದ ಸಂಗತಿಗಳೂ ಜನಸಾಮಾನ್ಯರ ಆಕ್ರೋಶವನ್ನು ಹೆಚ್ಚಿಸಲಿಲ್ಲವೇ? ದೆಹಲಿಗೆ ತೆರಳಿದ ಎಡಪಕ್ಷಗಳು ಆಯೋಜಿಸಿದ ರೈತ ಸಮುದಾಯದ ಬೃಹತ್ ರ್ಯಾಲಿಗಳು ಈ ಆಕ್ರೋಶವನ್ನು ಕಾಣಿಸಿಯೂ ಇದು ಮತ ಚಲಾವಣೆಯಾಗಿ ಏಕೆ ಬದಲಾಗಲಿಲ್ಲ ಎನ್ನುವ ಪ್ರಶ್ನೆಗಳು ಸಹಜವಾಗಿ ಕಾಡುತ್ತವೆ. ಬಹುಶಃ ಈ ಬಗೆಯ ದಮನಿತರ ಸಿಟ್ಟು ಆಕ್ರೋಶಗಳು ಈ ಬಾರಿಯ ಮತಚಲಾವಣೆಯಲ್ಲಿ ಏಕೀಕರಣಗೊಳ್ಳಬೇಕಿತ್ತು, ಆದರೂ ಏಕೀಕರಣಗೊಳ್ಳಲಿಲ್ಲವೇ ? ಅಥವಾ ಇವಿಎಂ ಮಿಷನ್ನಿನ ಪವಾಡ ಈ ಪ್ರಶ್ನೆಯ ದಾರಿಯನ್ನೂ ತಪ್ಪಿಸುತ್ತಿದೆಯೇ?

ಎಲ್ಲಾ ಕಾಲಕ್ಕೂ ಪ್ರಜಾಪ್ರಭುತ್ವ ಸರಕಾರಗಳು ದಮನಿತರ ಸಿಟ್ಟು ಮತ್ತು ಆಕ್ರೋಶವನ್ನು ನಿರಸನಗೊಳಿಸಿ ಒಟ್ಟಾಗಬಹುದಾದ ದಮನಿತರನ್ನು ತುಂಡಾಗಿಸಿ ಶಕ್ತಿ ಕುಂದಿಸಿದ್ದಿದೆ. ಇಂದಿರಾಗಾಂಧಿಯ ಗರೀಬಿ ಹಟಾವೋ ಯೋಜನೆಗಳು ದಮನಿತರ ಸಿಟ್ಟನ್ನು ದೊಡ್ಡಮಟ್ಟದಲ್ಲಿ ನಿರಸನಗೊಳಿಸಿದವು. ಇಂದೂ ಕೂಡ ದಮನಿತರ ಸಿಟ್ಟು ಒಟ್ಟಾಗಿ ಸ್ಫೋಟಟಗೊಳ್ಳದಂತೆ ನಾನಾರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಇಂದಿರಾ ಕಾಲಕ್ಕೂ ಈಗಿನ ಸಂದರ್ಭಕ್ಕೂ ಇರುವ ಮುಖ್ಯ ವ್ಯತ್ಯಾಸವೆಂದರೆ ಕೆಲವಾದರೂ ಆಮೂಲಾಗ್ರ ಬದಲಾವಣೆಯ, ಮತ್ತೆ ಕೆಲವು ತಾತ್ಕಾಲಿಕವಾಗಿಯಾದರೂ ಸಮಸ್ಯೆಗಳನ್ನು ಬಗೆಹರಿಸಿ ಜನರ ಸಿಟ್ಟನ್ನು ಮುದುಡಿಸಲಾಗುತ್ತಿತ್ತು. ಆಗ ಬಂದ ಬಹುಪಾಲು ಯೋಜನೆಗಳು ಬೇರೆ ಬೇರೆ ಹೆಸರನ್ನು ಅಂಟಿಸಿಕೊಂಡು ಇಂದಿಗೂ ಚಾಲ್ತಿಯಲ್ಲಿವೆ. ಆದರೆ ಇಂದು ಒಟ್ಟಾಗಬಹುದಾದ ಜನರ ಸಿಟ್ಟು ಆಕ್ರೋಶವನ್ನು ತಾತ್ಕಾಲಿಕ ಯೋಜನೆಗಳೂ ಇಲ್ಲದಂತೆ ಜನರನ್ನು ವಿಭಜಿಸಿ ನಿಶಕ್ತಗೊಳಿಸಲಾಗುತ್ತಿದೆ. ಮುಖ್ಯವಾಗಿ ಜನರ ಸಿಟ್ಟನ್ನು ನಿರಸನಗೊಳಿಸಲು ಆಡಳಿತ ಸರಕಾರದ ಬಗೆಗೆ ಜನಪರವೆಂಬ ಸುಳ್ಳುಗಳ ಉತ್ಪಾದನೆ ಅವ್ಯಾಹತವಾಗಿ ನಡೆದಿದೆ. ಇದನ್ನು ವಿಶೇಷವಾಗಿ ದೃಶ್ಯಮಾಧ್ಯಮಗಳು ಜನರಲ್ಲಿ ಬಿತ್ತುತ್ತಿವೆ.

ಹಾಗಾಗಿ ಇಂದು ಜನರ ಸಿಟ್ಟನ್ನು ಕಡಿಮೆಗೊಳಿಸುವ ಲಕ್ಷಾಂತರ ಕ್ಷುಲ್ಲಕ ಸಂಗತಿಗಳ ಉತ್ಪಾದನೆ ಕ್ಷಣಕ್ಷಣವೂ ನಡೆಯುತ್ತಿದೆ. ಇದರಿಂದಾಗಿಯೇ ದೇಶಕ್ಕೆ ಮಾರಕವಾಗುವ ವಿದ್ಯಮಾನಗಳು ಘಟಿಸಿದಾಗಲೂ ಇಡೀ ದೇಶದಲ್ಲಿ ಆಕ್ರೋಶ ಭುಗಿಲೇಳುತ್ತದೆಂದು ಎದುರು ನೋಡುವಾಗಲೆ, ಏನೂ ನಡೆದೇ ಇಲ್ಲವೆಂಬಂತೆ ವಿದ್ಯಮಾನಗಳು ಕಣ್ಮರೆಯಾಗುತ್ತವೆ. ಇದೀಗ ಕೇಂದ್ರೀಕರಣವಾಗಬೇಕಾದ ಜನರ ಸಮಸ್ಯೆಗಳನ್ನು ವಿಕೇಂದ್ರೀಕರಣ ಮಾಡಲಾಗುತ್ತಿದೆ. ದೇಶದಾದ್ಯಂತ ನಿರುದ್ಯೋಗಿ ಯುವಜನರ ಸಿಟ್ಟು ಶೇಖರಣೆಗೊಳ್ಳುತ್ತಿದೆ. ಇಂತಹ ಬಹುಪಾಲು ಯುವಕರ ತಲೆಯಲ್ಲಿ ಧರ್ಮದ ಅಫೀಮು ತುಂಬಿ ಕಾಲಾಳುಗಳಂತೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಬಳಸಿಕೊಳ್ಳುತ್ತಿವೆ. ಕೋಮುವಾದಿ ಶಕ್ತಿಗಳು ಅನ್ಯ ಕೋಮಿನ ಬಗೆಗೆ ಸಿಟ್ಟನ್ನು ಉತ್ಪಾದಿಸಿ ಅಂತಹ ಉತ್ಪಾದಿತ ಸಿಟ್ಟಿನ ಏಕೀಕರಣದಿಂದ ಕೋಮುಗಲಭೆಯಂತಹ ಹಿಂಸೆಯ ನಡೆಗಳು ಸಾಧ್ಯವಾಗುತ್ತವೆ.

ಎಲ್ಲೆಲ್ಲಿ ಶೋಷಿತರ ಸಿಟ್ಟು ಆಕ್ರೋಶ ಒಟ್ಟಾಗಿ ಸ್ಫೋಟಗೊಂಡಿದೆಯೋ ಅಲ್ಲೆಲ್ಲಾ ಕ್ರಾಂತಿ ಮೊಳಗಿದೆ. ಬದಲಾವಣೆ ಸಾಧ್ಯವಾಗಿದೆ. ಜನರ ಸಿಟ್ಟನ್ನು ಏಕೀಕರಿಸುವ ಯೋಚನೆ ಇಂದು ನಿನ್ನೆಯದಲ್ಲ, ಕಾರ್ಲ್‍ಮಾರ್ಕ್ಸ್ ಒಳಗೊಂಡಂತೆ ಅಂಬೇಡ್ಕರ್ ಗಾಂಧಿ ಲೋಹಿಯಾ ಪೆರಿಯಾರ್‍ತನಕ ಭಿನ್ನ ನೆಲೆಗಳಲ್ಲಿ ದಮನಿತರ ಸಿಟ್ಟು ಆಕ್ರೋಶದ ಏಕೀಕರಣದ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಬ್ರಿಟಿಷರ ವಿರುದ್ಧದ ಜನರ ಸಿಟ್ಟನ್ನು ಗಾಂಧಿ ಏಕೀಕರಣ ಮಾಡಿದ್ದರ ಫಲವೇ ಸ್ವಾತಂತ್ರ್ಯ ಹೋರಾಟ.

ಹೀಗೆ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರು ತಳೆಯುವ ಸಣ್ಣಪುಟ್ಟ ಸಿಟ್ಟು ಒಟ್ಟಾಗಿ ಚಳವಳಿಯ ಸಾಗರವಾಗಬೇಕಿದೆ. ಈ ಹೊತ್ತಿನ ಮಹಾಘಟಬಂಧನ್, ಜನಾಂದೋಲನಗಳ ಮಹಾಮೈತ್ರಿ, ದಲಿತ ಸಂಘಟನೆಗಳ ಒಕ್ಕೂಟದಂತಹ ಜನಚಳವಳಿಗಳನ್ನು ಒಟ್ಟಾಗಿಸುವ ಪ್ರಯತ್ನಗಳು ಈ ಕಾರಣಕ್ಕೆ ಒಂದಾಗಲೆತ್ನಿಸುತ್ತಿವೆ. ಆದರೆ ಕಾಲಕಾಲಕ್ಕೆ ಹೀಗೆ ಜನ ಸಾಮಾನ್ಯರ ಸಿಟ್ಟನ್ನು ಒಟ್ಟಾಗದಂತೆ ಮೇಲ್ಜಾತಿ ಮತ್ತು ಮೇಲ್ವರ್ಗಗಳನ್ನೊಳಗೊಂಡ ಪ್ರಭುತ್ವ ಛಿದ್ರಗೊಳಿಸುತ್ತಲೇ ಬಂದಿದೆ. ವಾಸ್ತವವಾಗಿ ವರ್ತಮಾನದ ಭಾರತದಲ್ಲಿ ಜನಸಾಮಾನ್ಯರಲ್ಲಿ ಹುಟ್ಟುತ್ತಿರುವ ಸಿಟ್ಟು ಆಕ್ರೋಶದ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ ಈ ಸಿಟ್ಟು ಏಕೀಕರಣಗೊಂಡು ಬದಲಾವಣೆಗೆ ಬೇಕಾಗುವ ದೊಡ್ಡ ಶಕ್ತಿಯಾಗುವ ಸಾಮಥ್ರ್ಯ ಕುಗ್ಗುತ್ತಿದೆ. ಇದೊಂದು ವೈರುಧ್ಯದ ಚಲನೆ. ಮತ್ತೊಂದೆಡೆ ಕಾರ್ಪೋರೇಟ್ ಶಕ್ತಿಗಳು ಜನರನ್ನು ಗಿರಾಕಿಗಳನ್ನಾಗಿ ಏಕೀಕರಣಗೊಳಿಸಿ ಮಾರುಕಟ್ಟೆಯ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿವೆ. ಇದಕ್ಕೆ ಪ್ರಭುತ್ವವೂ ಜೊತೆಯಾಗಿದೆ. ಇದು ಸದ್ಯಕ್ಕೆ ಪ್ರತಿ ಭಾರತೀಯ ಪ್ರಜೆಯೂ ಯೋಚಿಸಬೇಕಾದ ಸಂಗತಿ.

ಆಮೂಲಾಗ್ರವಾಗಿ ಒಟ್ಟಂದದ ಬದಲಾವಣೆಗೆ ಏಕೀಕರಣಗೊಳ್ಳಬೇಕಾದ ಸಿಟ್ಟು ಆಕ್ರೋಶಗಳು ಇಂದು ಚಿಕ್ಕಪುಟ್ಟ ಆಸೆಗಳಿಗೆ ಬಲಿಯಾಗುತ್ತಿವೆ. ಅಂತೆಯೇ ದಮನಿತರ ದೊಡ್ಡ ದೊಡ್ಡ ಕನಸುಗಳು ಚೂರುಚೂರಾಗುತ್ತಿವೆ. ಜನಸಾಮಾನ್ಯರ ಸಿಟ್ಟು ಆಕ್ರೋಶವನ್ನು ಏಕೀಕರಣ ಮಾಡಬಯಸುವ ಜೀವಪರ ಸಾಹಿತಿಗಳು, ಹೋರಾಟಗಾರರು, ಪ್ರಗತಿಪರರನ್ನು `ನಗರನಕ್ಸಲರು’ ಎನ್ನುವ ಹಣೆಪಟ್ಟಿ ಅಂಟಿಸುವ ಮೂಲಕ ಸಿಟ್ಟಿನ ಏಕೀಕರಣವನ್ನೆ ದೇಶದ್ರೋಹದ ಸಂಗತಿಯನ್ನಾಗಿಸಲಾಗಿದೆ. ಹಾಗಿದ್ದೂ, ದಮನಿತರ ಸಿಟ್ಟು ಏಕೀಕರಣಗೊಳ್ಳದೆ ಅವರ ಬದಲಾವಣೆ ಅಸಾಧ್ಯ. ಜನಸಾಮಾನ್ಯರ ದಮನದ ಅತಿರೇಕದ ತುಟ್ಟತುದಿಯಲ್ಲಿ ಸಿಟ್ಟು ಏಕೀಕರಣಗೊಳ್ಳುವುದನ್ನು ಯಾರಿಂದಲೂ ತಪ್ಪಿಸಲಾಗದು. ಇದೀಗ ಅದೊಂದೆ ಭವಿಷ್ಯದ ಭರವಸೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಆಹಾರ ಉತ್ಪಾದನೆ ಯಿಂದ ಹಿಡಿದು ಅವರು ದರಿಸುವ ಉಡುಪುಗಳನ್ನು ಮಾತ್ರವಲ್ಲ,
    ಹಾಕುವ ಚಪ್ಪಲಿ,ಅವರ ಹೇರ್ ಕಟ್,ಅವರ ಮನೆ ಬಾತ್ ರೂಮ್ ನಿಂದ ಹಿಡಿದು ಸಪ್ಟಿಕ್ ಟ್ಯಾಂಕ್, ಅವರ ಬೀದಿ ಗುಡಿಸಲೂ ಸಹ ಅವರ ಧರ್ಮದ ವರನ್ನೇ ಆಯ್ಕೆ ಮಾಡಿಕೊಳ್ಳಬೇಕು….

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...