Homeಕರ್ನಾಟಕದಮನಿತರ ಸಿಟ್ಟಿನ ಏಕೀಕರಣ - ಅರುಣ್ ಜೋಳದಕೂಡ್ಲಿಗಿ

ದಮನಿತರ ಸಿಟ್ಟಿನ ಏಕೀಕರಣ – ಅರುಣ್ ಜೋಳದಕೂಡ್ಲಿಗಿ

- Advertisement -
- Advertisement -

`ಬಡವರ ಸಿಟ್ಟು ದವಡೆಗೆ ಮೂಲ’ ಎನ್ನುವ ಗಾದೆ, ಬಡವ ಸಿಟ್ಟಾದರೆ ಪರಿಣಾಮವನ್ನು ಆತನೆ ಎದುರಿಸಬೇಕು, ಹಾಗಾಗಿ ಬಾಯ್ಮುಚ್ಚಿರುವುದು ಲೇಸು ಎನ್ನುವಂತಿದೆ. ಅಂತೆಯೇ `ಬಡವರ ಸಿಟ್ಟು ಬಾಳ ಕೆಟ್ಟದ್ದು’ ಎನ್ನುವ ನುಡಿಗಟ್ಟೂ ಚಾಲ್ತಿಯಲ್ಲಿದೆ. ಅಸಹಾಯಕತೆ ಕಟ್ಟೆಯೊಡೆದಾಗ, ದಬ್ಬಾಳಿಕೆ ಅತಿಯಾದಾಗ ಈ ನುಡಿಗಟ್ಟು ವಿರಳವಾಗಿ ಬಳಕೆಯಾಗುತ್ತದೆ. ಆಳುವ ಶಕ್ತಿಗಳು ಮೊದಲ ನುಡಿಗಟ್ಟನ್ನು ಕಟ್ಟಿ ಜನರಲ್ಲಿ ಆತಂಕ ಹುಟ್ಟಿಸಿದರೆ, ವಿರುದ್ಧವಾಗಿ ಜನರು ಪರ್ಯಾಯ ನುಡಿಗಟ್ಟಿನಲ್ಲಿ ನಮ್ಮ ಸಿಟ್ಟಿಗೂ ಶಕ್ತಿಯಿದೆ ಎಂದು ಆಳುವವರಲ್ಲಿ ಭಯ ಹುಟ್ಟಿಸಿದ್ದಾರೆ. ಇವೆರಡೂ ರಾಜಶಾಹಿ ಮತ್ತು ಜಮೀನ್ದಾರಿ ವ್ಯವಸ್ಥೆಯಲ್ಲಿ ಜೀವ ತಳೆದವು.

ಈ ನುಡಿಗಟ್ಟುಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿಯೂ ಮಾರುವೇಷದಲ್ಲಿವೆ. ಇಲ್ಲಿಯೂ ಬಡವರ ಸಂಖ್ಯೆ ಇಳಿದಿಲ್ಲ. ಅಂತೆಯೇ ಪ್ರಜಾಪ್ರಭುತ್ವದಲ್ಲಿಯೂ `ಬಡವನ ಸಿಟ್ಟು ದವಡೆಗೆ ಮೂಲ’ ಎನ್ನುವ ಸ್ಥಿತಿ ಪೂರ್ಣ ಬದಲಾಗಿಲ್ಲ. ಆದರೆ `ಬಡವರ ಸಿಟ್ಟು ಬಾಳ ಕೆಟ್ಟದ್ದು’ ಎಂಬ ನುಡಿಗಟ್ಟಿಗೆ ಸಂವಿಧಾನಿಕ ಬಲ ಬಂದಿದೆ. ಜನರು ಮತ ಚಲಾಯಿಸಿ ಗೆಲ್ಲಿಸಿದ ಚುನಾಯಿತರು ಏನೊಂದು ಕೆಲಸ ಮಾಡದೆ ದರ್ಪ ನಡೆಸಿದವರನ್ನು ಅದೇ ಮತದಾರರರು ಮತ್ತೊಂದು ಚುನಾವಣೆಯಲ್ಲಿ ಮಣ್ಣು ಮುಕ್ಕಿಸಿದ್ದಾರೆ. ಇಲ್ಲಿ ಮತದಾರರ ಸಿಟ್ಟು ಮತ್ತು ಆಕ್ರೋಶ `ಮತಚಲಾವಣೆ’ರೂಪದಲ್ಲಿ ಏಕೀಕರಣಗೊಂಡಿದೆ.

ದೀರ್ಘಕಾಲದ ಆಳ್ವಿಕೆಯ ಮದವೇರಿ ಜಿಡ್ಡುಗಟ್ಟಿದ ಕಾಂಗ್ರೆಸ್ ವಿರುದ್ಧದ ಬಹುಸಂಖ್ಯಾತ ಯುವ ಸಮುದಾಯದ ಸಿಟ್ಟು ಏಕೀಕರಣಗೊಂಡ ಫಲವೆ, ಕಳೆದ 2014 ರ ಚುನಾವಣೆಯಲ್ಲಿ ಭಾಜಪ ಬಹುಮತ ಪಡೆದು ನರೇಂದ್ರ ಮೋದಿಯವರು ಪ್ರಧಾನಿಯಾದರು. ಇದೀಗ ಮತ್ತೊಂದು ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ. ಈ 5 ವರ್ಷದ ಮೋದಿಯವರ ಆಡಳಿತದಲ್ಲಿನ ನೋಟುರದ್ಧತಿ, ಜಿಎಸ್‍ಟಿ, ಕೈಗೆಟುಕದಂತಾದ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ, ಸಾರ್ವಜನಿಕ ಸಂಸ್ಥೆಗಳ ದಮನ, ಪರಿಶಿಷ್ಟರ ಸೌಲಭ್ಯಗಳ ಕಡೆಗಣನೆ, ಕಾರ್ಪೋರೇಟರುಗಳ ಪರವಾದ ಆಳ್ವಿಕೆ, ರೈತ ಸಮುದಾಯದ ನಿರ್ಲಕ್ಷ್ಯ, ಹೆಚ್ಚಿದ ರೈತರ ಆತ್ಮಹತ್ಯೆ, ದಲಿತ ಆದಿವಾಸಿಗಳ ದಮನ, ಸಂವಿಧಾನ ಬದಲಾಯಿಸುವ ಧೋರಣೆ, ನಿರುದ್ಯೋಗ ಹೆಚ್ಚಳ ಮೊದಲಾದ ಸಂಗತಿಗಳೂ ಜನಸಾಮಾನ್ಯರ ಆಕ್ರೋಶವನ್ನು ಹೆಚ್ಚಿಸಲಿಲ್ಲವೇ? ದೆಹಲಿಗೆ ತೆರಳಿದ ಎಡಪಕ್ಷಗಳು ಆಯೋಜಿಸಿದ ರೈತ ಸಮುದಾಯದ ಬೃಹತ್ ರ್ಯಾಲಿಗಳು ಈ ಆಕ್ರೋಶವನ್ನು ಕಾಣಿಸಿಯೂ ಇದು ಮತ ಚಲಾವಣೆಯಾಗಿ ಏಕೆ ಬದಲಾಗಲಿಲ್ಲ ಎನ್ನುವ ಪ್ರಶ್ನೆಗಳು ಸಹಜವಾಗಿ ಕಾಡುತ್ತವೆ. ಬಹುಶಃ ಈ ಬಗೆಯ ದಮನಿತರ ಸಿಟ್ಟು ಆಕ್ರೋಶಗಳು ಈ ಬಾರಿಯ ಮತಚಲಾವಣೆಯಲ್ಲಿ ಏಕೀಕರಣಗೊಳ್ಳಬೇಕಿತ್ತು, ಆದರೂ ಏಕೀಕರಣಗೊಳ್ಳಲಿಲ್ಲವೇ ? ಅಥವಾ ಇವಿಎಂ ಮಿಷನ್ನಿನ ಪವಾಡ ಈ ಪ್ರಶ್ನೆಯ ದಾರಿಯನ್ನೂ ತಪ್ಪಿಸುತ್ತಿದೆಯೇ?

ಎಲ್ಲಾ ಕಾಲಕ್ಕೂ ಪ್ರಜಾಪ್ರಭುತ್ವ ಸರಕಾರಗಳು ದಮನಿತರ ಸಿಟ್ಟು ಮತ್ತು ಆಕ್ರೋಶವನ್ನು ನಿರಸನಗೊಳಿಸಿ ಒಟ್ಟಾಗಬಹುದಾದ ದಮನಿತರನ್ನು ತುಂಡಾಗಿಸಿ ಶಕ್ತಿ ಕುಂದಿಸಿದ್ದಿದೆ. ಇಂದಿರಾಗಾಂಧಿಯ ಗರೀಬಿ ಹಟಾವೋ ಯೋಜನೆಗಳು ದಮನಿತರ ಸಿಟ್ಟನ್ನು ದೊಡ್ಡಮಟ್ಟದಲ್ಲಿ ನಿರಸನಗೊಳಿಸಿದವು. ಇಂದೂ ಕೂಡ ದಮನಿತರ ಸಿಟ್ಟು ಒಟ್ಟಾಗಿ ಸ್ಫೋಟಟಗೊಳ್ಳದಂತೆ ನಾನಾರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಇಂದಿರಾ ಕಾಲಕ್ಕೂ ಈಗಿನ ಸಂದರ್ಭಕ್ಕೂ ಇರುವ ಮುಖ್ಯ ವ್ಯತ್ಯಾಸವೆಂದರೆ ಕೆಲವಾದರೂ ಆಮೂಲಾಗ್ರ ಬದಲಾವಣೆಯ, ಮತ್ತೆ ಕೆಲವು ತಾತ್ಕಾಲಿಕವಾಗಿಯಾದರೂ ಸಮಸ್ಯೆಗಳನ್ನು ಬಗೆಹರಿಸಿ ಜನರ ಸಿಟ್ಟನ್ನು ಮುದುಡಿಸಲಾಗುತ್ತಿತ್ತು. ಆಗ ಬಂದ ಬಹುಪಾಲು ಯೋಜನೆಗಳು ಬೇರೆ ಬೇರೆ ಹೆಸರನ್ನು ಅಂಟಿಸಿಕೊಂಡು ಇಂದಿಗೂ ಚಾಲ್ತಿಯಲ್ಲಿವೆ. ಆದರೆ ಇಂದು ಒಟ್ಟಾಗಬಹುದಾದ ಜನರ ಸಿಟ್ಟು ಆಕ್ರೋಶವನ್ನು ತಾತ್ಕಾಲಿಕ ಯೋಜನೆಗಳೂ ಇಲ್ಲದಂತೆ ಜನರನ್ನು ವಿಭಜಿಸಿ ನಿಶಕ್ತಗೊಳಿಸಲಾಗುತ್ತಿದೆ. ಮುಖ್ಯವಾಗಿ ಜನರ ಸಿಟ್ಟನ್ನು ನಿರಸನಗೊಳಿಸಲು ಆಡಳಿತ ಸರಕಾರದ ಬಗೆಗೆ ಜನಪರವೆಂಬ ಸುಳ್ಳುಗಳ ಉತ್ಪಾದನೆ ಅವ್ಯಾಹತವಾಗಿ ನಡೆದಿದೆ. ಇದನ್ನು ವಿಶೇಷವಾಗಿ ದೃಶ್ಯಮಾಧ್ಯಮಗಳು ಜನರಲ್ಲಿ ಬಿತ್ತುತ್ತಿವೆ.

ಹಾಗಾಗಿ ಇಂದು ಜನರ ಸಿಟ್ಟನ್ನು ಕಡಿಮೆಗೊಳಿಸುವ ಲಕ್ಷಾಂತರ ಕ್ಷುಲ್ಲಕ ಸಂಗತಿಗಳ ಉತ್ಪಾದನೆ ಕ್ಷಣಕ್ಷಣವೂ ನಡೆಯುತ್ತಿದೆ. ಇದರಿಂದಾಗಿಯೇ ದೇಶಕ್ಕೆ ಮಾರಕವಾಗುವ ವಿದ್ಯಮಾನಗಳು ಘಟಿಸಿದಾಗಲೂ ಇಡೀ ದೇಶದಲ್ಲಿ ಆಕ್ರೋಶ ಭುಗಿಲೇಳುತ್ತದೆಂದು ಎದುರು ನೋಡುವಾಗಲೆ, ಏನೂ ನಡೆದೇ ಇಲ್ಲವೆಂಬಂತೆ ವಿದ್ಯಮಾನಗಳು ಕಣ್ಮರೆಯಾಗುತ್ತವೆ. ಇದೀಗ ಕೇಂದ್ರೀಕರಣವಾಗಬೇಕಾದ ಜನರ ಸಮಸ್ಯೆಗಳನ್ನು ವಿಕೇಂದ್ರೀಕರಣ ಮಾಡಲಾಗುತ್ತಿದೆ. ದೇಶದಾದ್ಯಂತ ನಿರುದ್ಯೋಗಿ ಯುವಜನರ ಸಿಟ್ಟು ಶೇಖರಣೆಗೊಳ್ಳುತ್ತಿದೆ. ಇಂತಹ ಬಹುಪಾಲು ಯುವಕರ ತಲೆಯಲ್ಲಿ ಧರ್ಮದ ಅಫೀಮು ತುಂಬಿ ಕಾಲಾಳುಗಳಂತೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಬಳಸಿಕೊಳ್ಳುತ್ತಿವೆ. ಕೋಮುವಾದಿ ಶಕ್ತಿಗಳು ಅನ್ಯ ಕೋಮಿನ ಬಗೆಗೆ ಸಿಟ್ಟನ್ನು ಉತ್ಪಾದಿಸಿ ಅಂತಹ ಉತ್ಪಾದಿತ ಸಿಟ್ಟಿನ ಏಕೀಕರಣದಿಂದ ಕೋಮುಗಲಭೆಯಂತಹ ಹಿಂಸೆಯ ನಡೆಗಳು ಸಾಧ್ಯವಾಗುತ್ತವೆ.

ಎಲ್ಲೆಲ್ಲಿ ಶೋಷಿತರ ಸಿಟ್ಟು ಆಕ್ರೋಶ ಒಟ್ಟಾಗಿ ಸ್ಫೋಟಗೊಂಡಿದೆಯೋ ಅಲ್ಲೆಲ್ಲಾ ಕ್ರಾಂತಿ ಮೊಳಗಿದೆ. ಬದಲಾವಣೆ ಸಾಧ್ಯವಾಗಿದೆ. ಜನರ ಸಿಟ್ಟನ್ನು ಏಕೀಕರಿಸುವ ಯೋಚನೆ ಇಂದು ನಿನ್ನೆಯದಲ್ಲ, ಕಾರ್ಲ್‍ಮಾರ್ಕ್ಸ್ ಒಳಗೊಂಡಂತೆ ಅಂಬೇಡ್ಕರ್ ಗಾಂಧಿ ಲೋಹಿಯಾ ಪೆರಿಯಾರ್‍ತನಕ ಭಿನ್ನ ನೆಲೆಗಳಲ್ಲಿ ದಮನಿತರ ಸಿಟ್ಟು ಆಕ್ರೋಶದ ಏಕೀಕರಣದ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಬ್ರಿಟಿಷರ ವಿರುದ್ಧದ ಜನರ ಸಿಟ್ಟನ್ನು ಗಾಂಧಿ ಏಕೀಕರಣ ಮಾಡಿದ್ದರ ಫಲವೇ ಸ್ವಾತಂತ್ರ್ಯ ಹೋರಾಟ.

ಹೀಗೆ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರು ತಳೆಯುವ ಸಣ್ಣಪುಟ್ಟ ಸಿಟ್ಟು ಒಟ್ಟಾಗಿ ಚಳವಳಿಯ ಸಾಗರವಾಗಬೇಕಿದೆ. ಈ ಹೊತ್ತಿನ ಮಹಾಘಟಬಂಧನ್, ಜನಾಂದೋಲನಗಳ ಮಹಾಮೈತ್ರಿ, ದಲಿತ ಸಂಘಟನೆಗಳ ಒಕ್ಕೂಟದಂತಹ ಜನಚಳವಳಿಗಳನ್ನು ಒಟ್ಟಾಗಿಸುವ ಪ್ರಯತ್ನಗಳು ಈ ಕಾರಣಕ್ಕೆ ಒಂದಾಗಲೆತ್ನಿಸುತ್ತಿವೆ. ಆದರೆ ಕಾಲಕಾಲಕ್ಕೆ ಹೀಗೆ ಜನ ಸಾಮಾನ್ಯರ ಸಿಟ್ಟನ್ನು ಒಟ್ಟಾಗದಂತೆ ಮೇಲ್ಜಾತಿ ಮತ್ತು ಮೇಲ್ವರ್ಗಗಳನ್ನೊಳಗೊಂಡ ಪ್ರಭುತ್ವ ಛಿದ್ರಗೊಳಿಸುತ್ತಲೇ ಬಂದಿದೆ. ವಾಸ್ತವವಾಗಿ ವರ್ತಮಾನದ ಭಾರತದಲ್ಲಿ ಜನಸಾಮಾನ್ಯರಲ್ಲಿ ಹುಟ್ಟುತ್ತಿರುವ ಸಿಟ್ಟು ಆಕ್ರೋಶದ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ ಈ ಸಿಟ್ಟು ಏಕೀಕರಣಗೊಂಡು ಬದಲಾವಣೆಗೆ ಬೇಕಾಗುವ ದೊಡ್ಡ ಶಕ್ತಿಯಾಗುವ ಸಾಮಥ್ರ್ಯ ಕುಗ್ಗುತ್ತಿದೆ. ಇದೊಂದು ವೈರುಧ್ಯದ ಚಲನೆ. ಮತ್ತೊಂದೆಡೆ ಕಾರ್ಪೋರೇಟ್ ಶಕ್ತಿಗಳು ಜನರನ್ನು ಗಿರಾಕಿಗಳನ್ನಾಗಿ ಏಕೀಕರಣಗೊಳಿಸಿ ಮಾರುಕಟ್ಟೆಯ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿವೆ. ಇದಕ್ಕೆ ಪ್ರಭುತ್ವವೂ ಜೊತೆಯಾಗಿದೆ. ಇದು ಸದ್ಯಕ್ಕೆ ಪ್ರತಿ ಭಾರತೀಯ ಪ್ರಜೆಯೂ ಯೋಚಿಸಬೇಕಾದ ಸಂಗತಿ.

ಆಮೂಲಾಗ್ರವಾಗಿ ಒಟ್ಟಂದದ ಬದಲಾವಣೆಗೆ ಏಕೀಕರಣಗೊಳ್ಳಬೇಕಾದ ಸಿಟ್ಟು ಆಕ್ರೋಶಗಳು ಇಂದು ಚಿಕ್ಕಪುಟ್ಟ ಆಸೆಗಳಿಗೆ ಬಲಿಯಾಗುತ್ತಿವೆ. ಅಂತೆಯೇ ದಮನಿತರ ದೊಡ್ಡ ದೊಡ್ಡ ಕನಸುಗಳು ಚೂರುಚೂರಾಗುತ್ತಿವೆ. ಜನಸಾಮಾನ್ಯರ ಸಿಟ್ಟು ಆಕ್ರೋಶವನ್ನು ಏಕೀಕರಣ ಮಾಡಬಯಸುವ ಜೀವಪರ ಸಾಹಿತಿಗಳು, ಹೋರಾಟಗಾರರು, ಪ್ರಗತಿಪರರನ್ನು `ನಗರನಕ್ಸಲರು’ ಎನ್ನುವ ಹಣೆಪಟ್ಟಿ ಅಂಟಿಸುವ ಮೂಲಕ ಸಿಟ್ಟಿನ ಏಕೀಕರಣವನ್ನೆ ದೇಶದ್ರೋಹದ ಸಂಗತಿಯನ್ನಾಗಿಸಲಾಗಿದೆ. ಹಾಗಿದ್ದೂ, ದಮನಿತರ ಸಿಟ್ಟು ಏಕೀಕರಣಗೊಳ್ಳದೆ ಅವರ ಬದಲಾವಣೆ ಅಸಾಧ್ಯ. ಜನಸಾಮಾನ್ಯರ ದಮನದ ಅತಿರೇಕದ ತುಟ್ಟತುದಿಯಲ್ಲಿ ಸಿಟ್ಟು ಏಕೀಕರಣಗೊಳ್ಳುವುದನ್ನು ಯಾರಿಂದಲೂ ತಪ್ಪಿಸಲಾಗದು. ಇದೀಗ ಅದೊಂದೆ ಭವಿಷ್ಯದ ಭರವಸೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಆಹಾರ ಉತ್ಪಾದನೆ ಯಿಂದ ಹಿಡಿದು ಅವರು ದರಿಸುವ ಉಡುಪುಗಳನ್ನು ಮಾತ್ರವಲ್ಲ,
    ಹಾಕುವ ಚಪ್ಪಲಿ,ಅವರ ಹೇರ್ ಕಟ್,ಅವರ ಮನೆ ಬಾತ್ ರೂಮ್ ನಿಂದ ಹಿಡಿದು ಸಪ್ಟಿಕ್ ಟ್ಯಾಂಕ್, ಅವರ ಬೀದಿ ಗುಡಿಸಲೂ ಸಹ ಅವರ ಧರ್ಮದ ವರನ್ನೇ ಆಯ್ಕೆ ಮಾಡಿಕೊಳ್ಳಬೇಕು….

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....