Homeಸಿನಿಮಾಕ್ರೀಡೆಫೇಸ್ ಬುಕ್‍ನಲ್ಲಿ ಫೇಮಸ್ ಆಗಿರುವ ಕ್ರೀಡಾಪಟು, ಸಿನಿಮಾ ನಟರು ಮತ್ತು ರಾಜಕರಾಣಿಗಳು

ಫೇಸ್ ಬುಕ್‍ನಲ್ಲಿ ಫೇಮಸ್ ಆಗಿರುವ ಕ್ರೀಡಾಪಟು, ಸಿನಿಮಾ ನಟರು ಮತ್ತು ರಾಜಕರಾಣಿಗಳು

ಕೆಲವು ರಾಜಕಾರಣಿಗಳು ದುಡ್ಡು ಕೊಟ್ಟು ಕೆಲವು ಪೇಜ್‍ಗಳನ್ನು ಖರೀದಿಸಿ ನಂತರ ಅವರ ಹೆಸರಾಗಿ ಮಾರ್ಪಡಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ನಾಯಕರಿಗಿರುವ ಫಾಲೋವರ್ಸ್‍ಗಳ ಸಂಖ್ಯೆಯು ಅವರು ಸಮಾಜದಲ್ಲಿ ಬೀರುವ ಪ್ರಭಾವವನ್ನು ಸಹ ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಫೇಸ್ ಬುಕ್‍ನಲ್ಲಿ ಯಾವ ಯಾವ ಸ್ಟಾರ್‍ಗೆ ಎಷ್ಟೆಷ್ಟು ಜನ ಫಾಲೋವರ್ಸ್ ಇದ್ದಾರೆ ಎಂದು ಗೊತ್ತಾದರೆ ನೀವು ಬೆಚ್ಚಿ ಬೀಳುತ್ತೀರಿ.. ಇನ್ನೇಕೆ ತಡ ನೋಡಿಬಿಡಿ. ಕ್ರೀಡೆ, ಸಿನಿಮಾ ಮತ್ತು ರಾಜಕೀಯ ಸೆಲೆಬ್ರೆಟಿಗಳನ್ನು ನೋಡೋಣ.

ಯುವಜನರ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಯ್ಲಿಗೆ ಫೇಸ್ ಬುಕ್ ನಲ್ಲಿ 3 ಕೋಟಿ 71 ಲಕ್ಷ ಬೆಂಬಲಿಗರಿದ್ದರೆ, ಸಚಿನ್ ತೆಂಡೂಲ್ಕರ್‍ಗೆ 2 ಕೋಟಿ 84 ಲಕ್ಷ ಜನ ಫಾಲೋವರ್ಸ್ ಇದ್ದಾರೆ. ಮಹೇಂದ್ರ ಸಿಂಗ್ ಧೋನಿ ಪೇಜ್‍ಗೆ 2 ಕೋಟಿ 4 ಲಕ್ಷ ಲೈಕ್ಸ್ ಇವೆ. ಯುವರಾಜ್ ಸಿಂಗ್‍ಗೆ 1ಕೋಟಿ 45 ಲಕ್ಷ, ವೀರೇಂದರ್ ಸೆಹ್ವಾಗ್‍ಗೆ 1ಕೋಟಿ 43 ಲಕ್ಷ, ರೋಹಿತ್ ಶರ್ಮಾಗೆ 1ಕೋಟಿ 9 ಲಕ್ಷ ಬೆಂಬಲಿಗರಿದ್ದಾರೆ. ಇನ್ನು ಭಾರತದ ಟೆನಿಸ್ ತಾರೆ ಸಾನಿಯ ಮಿರ್ಜಾಗೆ 1ಕೋಟಿ 24 ಲಕ್ಷ ಫಾಲೋವರ್ಸ್ ಇದ್ದರೆ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‍ಗೆ 78ಲಕ್ಷ ಲೈಕ್ಸ್ ಇವೆ.

ಸಿನಿಮಾ ತಾರೆಯರಲ್ಲಿ ಪ್ರಿಯಾಂಕ ಚೋಪ್ರಾಗೆ ಬರೋಬ್ಬರಿ 4ಕೋಟಿ ಫಾಲೋವರ್ಸ್ ಇದ್ದಾರೆ. ಇನ್ನುಳಿದಂತೆ ಸಲ್ಮಾನ್ ಖಾನ್ ಗೆ 3ಕೋಟಿ, 63ಲಕ್ಷ, ದೀಪಿಕಾ ಪಡುಕೋಣೆಗೆ 3ಕೋಟಿ, 42 ಲಕ್ಷ, ಅಮಿತಾಬ್ ಬಚ್ಚನ್‍ಗೆ 3ಕೋಟಿ 2 ಲಕ್ಷ, ಶಾರುಕ್ ಖಾನ್‍ಗೆ 2ಕೋಟಿ 94 ಲಕ್ಷ, ಶ್ರೇಯಾ ಘೋಷಾಲ್‍ಗೆ 2ಕೋಟಿ 77 ಲಕ್ಷ, ಮಾಧುರಿ ದಿಕ್ಷಿತ್‍ಗೆ 2ಕೋಟಿ 57 ಲಕ್ಷ, ಅಮಿರ್ ಖಾನ್‍ಗೆ 1ಕೋಟಿ 55 ಲಕ್ಷ, ಕತ್ರಿನಾ ಕೈಫ್‍ಗೆ 1ಕೋಟಿ 41 ಲಕ್ಷ ಫ್ಯಾನ್ಸ್ ಇದ್ದಾರೆ.

ರಾಜಕೀಯ ವ್ಯಕ್ತಿಗಳಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಫೇಸ್ ಬುಕ್ ನಲ್ಲಿ 4 ಕೋಟಿ 39 ಲಕ್ಷ ಫಾಲೋವರ್ಸ್ ಇದ್ದಾರೆ. ಅಮಿತ್ ಶಾಗೆ 1ಕೋಟಿ 44 ಲಕ್ಷ, ದೇವೇಂದ್ರ ಫಡ್ನಾವಿಸ್ 92 ಲಕ್ಷ, ಅರವಿಂದ್ ಕೇಜ್ರಿವಾಲ್‍ಗೆ 71 ಲಕ್ಷ, ಗೌತಮ್ ಗಂಭೀರ್ 69 ಲಕ್ಷ, ಅಖಿಲೇಶ್ ಯಾದವ್ 68 ಲಕ್ಷ, ರಾಜ್‍ನಾಥ್ ಸಿಂಗ್ 68 ಲಕ್ಷ, ಕಮಲ್ ಹಾಸನ್ 35 ಲಕ್ಷ, ಮಮತಾ ಬ್ಯಾನರ್ಜಿ 30 ಲಕ್ಷ, ರಾಹುಲ್ ಗಾಂಧಿ 28 ಲಕ್ಷ, ಅಸಾದ್ದೀನ್ ಒವೈಸಿಗೆ 26 ಲಕ್ಷ, ಎಂ.ಕೆ ಸ್ಟ್ಯಾಲಿನ್ 20 ಲಕ್ಷ, ಚಂದ್ರಬಾಬು ನಾಯ್ಡು 18 ಲಕ್ಷ, ಜಗನ್ ಮೋಹನ್ ರೆಡ್ಡಿ 17 ಲಕ್ಷ, ನವೀನ್ ಪಟ್ನಾಯಕ್ 14 ಲಕ್ಷ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ.

ಕರ್ನಾಟಕಕ್ಕೆ ಬರುವುದಾದರೆ ಪ್ರಕಾಶ್ ರಾಜ್‍ರವರಿಗೆ 44 ಲಕ್ಷ, ಯಡಿಯೂರಪ್ಪನವರಿಗೆ 17 ಲಕ್ಷ, ರಮ್ಯ ದಿವ್ಯ ಸ್ಪಂದನರವರಿಗೆ 15 ಲಕ್ಷ, ಡಿ.ಕೆ ಶಿವಕುಮಾರ್‍ಗೆ 5 ಲಕ್ಷ, ಎಚ್.ಡಿ ಕುಮಾರಸ್ವಾಮಿರವರಿಗೆ 2 ಲಕ್ಷ, ಸಿದ್ದರಾಮಯ್ಯನವರಿಗೆ 2 ಲಕ್ಷ, ಎಚ್.ಡಿ ದೇವೇಗೌಡರಿಗೆ 1 ಲಕ್ಷ ಅಭಿಮಾನಿಗಳಿದ್ದಾರೆ.

ಸಿನಿಮಾ ನಟರಲ್ಲಿ ಹರಿಪ್ರಿಯಾಗೆ 21 ಲಕ್ಷ, ದರ್ಶನ್ ತೂಗುದೀಪ್‍ಗೆ 12 ಲಕ್ಷ, ರಾಧಿಕ ಪಂಡಿತ್‍ಗೆ 9 ಲಕ್ಷ, ಯಶ್‍ಗೆ 7ಲಕ್ಷ, ಪುನೀತ್ ರಾಜ್‍ಕುಮಾರ್‍ರವರಿಗೆ 7 ಲಕ್ಷ, ಸುದೀಪ್‍ರವರ ಫ್ಯಾನ್ಸ್ ಅಸೋಷಿಯೇಷನ್ ಪೇಜ್ ಗೆ 14 ಲಕ್ಷ ಫಾಲೋವರ್ಸ್ ಇದ್ದಾರೆ.

ಇದರಲ್ಲಿ ಕೆಲವು ರಾಜಕಾರಣಿಗಳು ದುಡ್ಡು ಕೊಟ್ಟು ಕೆಲವು ಪೇಜ್‍ಗಳನ್ನು ಖರೀದಿಸಿ ನಂತರ ಅವರ ಹೆಸರಾಗಿ ಮಾರ್ಪಡಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಮತ್ತೆ ಕೆಲವು ರಾಜಕಾರಣಿಗಳು ಸಾಕಷ್ಟು ದುಡ್ಡು ಖರ್ಚು ಮಾಡಿ ತಮ್ಮ ಪೇಜ್ ಅನ್ನು ಪ್ರಮೋಷನ್ ಮಾಡಿಸಿರುತ್ತಾರೆ. ಹಾಗೆಯೇ ಟ್ವಿಟ್ಟರ್‍ನಲ್ಲಿ ನರೇಂದ್ರ ಮೋದಿಯವರನ್ನು ಫಾಲೋ ಮಾಡುತ್ತಿರುವವರಲ್ಲಿ ಶೇ.60 ರಷ್ಟ್ಟು ಫೇಕ್ ಅಕೌಂಟ್‍ಗಳೇ ಇವೆ ನ್ಯೂಇಂಡಿಯನ್ ಎಕ್ಸ್‍ಪ್ರೆಸ್, ಡೈಲಿಯೊ, ಎಸ್.ಬಿ.ಎಸ್ ಮುಂತಾದ ನಿಯತಕಾಲಿಕಗಳು ವರದಿ ಮಾಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...