Homeಸಿನಿಮಾಕ್ರೀಡೆಫೇಸ್ ಬುಕ್‍ನಲ್ಲಿ ಫೇಮಸ್ ಆಗಿರುವ ಕ್ರೀಡಾಪಟು, ಸಿನಿಮಾ ನಟರು ಮತ್ತು ರಾಜಕರಾಣಿಗಳು

ಫೇಸ್ ಬುಕ್‍ನಲ್ಲಿ ಫೇಮಸ್ ಆಗಿರುವ ಕ್ರೀಡಾಪಟು, ಸಿನಿಮಾ ನಟರು ಮತ್ತು ರಾಜಕರಾಣಿಗಳು

ಕೆಲವು ರಾಜಕಾರಣಿಗಳು ದುಡ್ಡು ಕೊಟ್ಟು ಕೆಲವು ಪೇಜ್‍ಗಳನ್ನು ಖರೀದಿಸಿ ನಂತರ ಅವರ ಹೆಸರಾಗಿ ಮಾರ್ಪಡಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ನಾಯಕರಿಗಿರುವ ಫಾಲೋವರ್ಸ್‍ಗಳ ಸಂಖ್ಯೆಯು ಅವರು ಸಮಾಜದಲ್ಲಿ ಬೀರುವ ಪ್ರಭಾವವನ್ನು ಸಹ ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಫೇಸ್ ಬುಕ್‍ನಲ್ಲಿ ಯಾವ ಯಾವ ಸ್ಟಾರ್‍ಗೆ ಎಷ್ಟೆಷ್ಟು ಜನ ಫಾಲೋವರ್ಸ್ ಇದ್ದಾರೆ ಎಂದು ಗೊತ್ತಾದರೆ ನೀವು ಬೆಚ್ಚಿ ಬೀಳುತ್ತೀರಿ.. ಇನ್ನೇಕೆ ತಡ ನೋಡಿಬಿಡಿ. ಕ್ರೀಡೆ, ಸಿನಿಮಾ ಮತ್ತು ರಾಜಕೀಯ ಸೆಲೆಬ್ರೆಟಿಗಳನ್ನು ನೋಡೋಣ.

ಯುವಜನರ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಯ್ಲಿಗೆ ಫೇಸ್ ಬುಕ್ ನಲ್ಲಿ 3 ಕೋಟಿ 71 ಲಕ್ಷ ಬೆಂಬಲಿಗರಿದ್ದರೆ, ಸಚಿನ್ ತೆಂಡೂಲ್ಕರ್‍ಗೆ 2 ಕೋಟಿ 84 ಲಕ್ಷ ಜನ ಫಾಲೋವರ್ಸ್ ಇದ್ದಾರೆ. ಮಹೇಂದ್ರ ಸಿಂಗ್ ಧೋನಿ ಪೇಜ್‍ಗೆ 2 ಕೋಟಿ 4 ಲಕ್ಷ ಲೈಕ್ಸ್ ಇವೆ. ಯುವರಾಜ್ ಸಿಂಗ್‍ಗೆ 1ಕೋಟಿ 45 ಲಕ್ಷ, ವೀರೇಂದರ್ ಸೆಹ್ವಾಗ್‍ಗೆ 1ಕೋಟಿ 43 ಲಕ್ಷ, ರೋಹಿತ್ ಶರ್ಮಾಗೆ 1ಕೋಟಿ 9 ಲಕ್ಷ ಬೆಂಬಲಿಗರಿದ್ದಾರೆ. ಇನ್ನು ಭಾರತದ ಟೆನಿಸ್ ತಾರೆ ಸಾನಿಯ ಮಿರ್ಜಾಗೆ 1ಕೋಟಿ 24 ಲಕ್ಷ ಫಾಲೋವರ್ಸ್ ಇದ್ದರೆ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‍ಗೆ 78ಲಕ್ಷ ಲೈಕ್ಸ್ ಇವೆ.

ಸಿನಿಮಾ ತಾರೆಯರಲ್ಲಿ ಪ್ರಿಯಾಂಕ ಚೋಪ್ರಾಗೆ ಬರೋಬ್ಬರಿ 4ಕೋಟಿ ಫಾಲೋವರ್ಸ್ ಇದ್ದಾರೆ. ಇನ್ನುಳಿದಂತೆ ಸಲ್ಮಾನ್ ಖಾನ್ ಗೆ 3ಕೋಟಿ, 63ಲಕ್ಷ, ದೀಪಿಕಾ ಪಡುಕೋಣೆಗೆ 3ಕೋಟಿ, 42 ಲಕ್ಷ, ಅಮಿತಾಬ್ ಬಚ್ಚನ್‍ಗೆ 3ಕೋಟಿ 2 ಲಕ್ಷ, ಶಾರುಕ್ ಖಾನ್‍ಗೆ 2ಕೋಟಿ 94 ಲಕ್ಷ, ಶ್ರೇಯಾ ಘೋಷಾಲ್‍ಗೆ 2ಕೋಟಿ 77 ಲಕ್ಷ, ಮಾಧುರಿ ದಿಕ್ಷಿತ್‍ಗೆ 2ಕೋಟಿ 57 ಲಕ್ಷ, ಅಮಿರ್ ಖಾನ್‍ಗೆ 1ಕೋಟಿ 55 ಲಕ್ಷ, ಕತ್ರಿನಾ ಕೈಫ್‍ಗೆ 1ಕೋಟಿ 41 ಲಕ್ಷ ಫ್ಯಾನ್ಸ್ ಇದ್ದಾರೆ.

ರಾಜಕೀಯ ವ್ಯಕ್ತಿಗಳಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಫೇಸ್ ಬುಕ್ ನಲ್ಲಿ 4 ಕೋಟಿ 39 ಲಕ್ಷ ಫಾಲೋವರ್ಸ್ ಇದ್ದಾರೆ. ಅಮಿತ್ ಶಾಗೆ 1ಕೋಟಿ 44 ಲಕ್ಷ, ದೇವೇಂದ್ರ ಫಡ್ನಾವಿಸ್ 92 ಲಕ್ಷ, ಅರವಿಂದ್ ಕೇಜ್ರಿವಾಲ್‍ಗೆ 71 ಲಕ್ಷ, ಗೌತಮ್ ಗಂಭೀರ್ 69 ಲಕ್ಷ, ಅಖಿಲೇಶ್ ಯಾದವ್ 68 ಲಕ್ಷ, ರಾಜ್‍ನಾಥ್ ಸಿಂಗ್ 68 ಲಕ್ಷ, ಕಮಲ್ ಹಾಸನ್ 35 ಲಕ್ಷ, ಮಮತಾ ಬ್ಯಾನರ್ಜಿ 30 ಲಕ್ಷ, ರಾಹುಲ್ ಗಾಂಧಿ 28 ಲಕ್ಷ, ಅಸಾದ್ದೀನ್ ಒವೈಸಿಗೆ 26 ಲಕ್ಷ, ಎಂ.ಕೆ ಸ್ಟ್ಯಾಲಿನ್ 20 ಲಕ್ಷ, ಚಂದ್ರಬಾಬು ನಾಯ್ಡು 18 ಲಕ್ಷ, ಜಗನ್ ಮೋಹನ್ ರೆಡ್ಡಿ 17 ಲಕ್ಷ, ನವೀನ್ ಪಟ್ನಾಯಕ್ 14 ಲಕ್ಷ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ.

ಕರ್ನಾಟಕಕ್ಕೆ ಬರುವುದಾದರೆ ಪ್ರಕಾಶ್ ರಾಜ್‍ರವರಿಗೆ 44 ಲಕ್ಷ, ಯಡಿಯೂರಪ್ಪನವರಿಗೆ 17 ಲಕ್ಷ, ರಮ್ಯ ದಿವ್ಯ ಸ್ಪಂದನರವರಿಗೆ 15 ಲಕ್ಷ, ಡಿ.ಕೆ ಶಿವಕುಮಾರ್‍ಗೆ 5 ಲಕ್ಷ, ಎಚ್.ಡಿ ಕುಮಾರಸ್ವಾಮಿರವರಿಗೆ 2 ಲಕ್ಷ, ಸಿದ್ದರಾಮಯ್ಯನವರಿಗೆ 2 ಲಕ್ಷ, ಎಚ್.ಡಿ ದೇವೇಗೌಡರಿಗೆ 1 ಲಕ್ಷ ಅಭಿಮಾನಿಗಳಿದ್ದಾರೆ.

ಸಿನಿಮಾ ನಟರಲ್ಲಿ ಹರಿಪ್ರಿಯಾಗೆ 21 ಲಕ್ಷ, ದರ್ಶನ್ ತೂಗುದೀಪ್‍ಗೆ 12 ಲಕ್ಷ, ರಾಧಿಕ ಪಂಡಿತ್‍ಗೆ 9 ಲಕ್ಷ, ಯಶ್‍ಗೆ 7ಲಕ್ಷ, ಪುನೀತ್ ರಾಜ್‍ಕುಮಾರ್‍ರವರಿಗೆ 7 ಲಕ್ಷ, ಸುದೀಪ್‍ರವರ ಫ್ಯಾನ್ಸ್ ಅಸೋಷಿಯೇಷನ್ ಪೇಜ್ ಗೆ 14 ಲಕ್ಷ ಫಾಲೋವರ್ಸ್ ಇದ್ದಾರೆ.

ಇದರಲ್ಲಿ ಕೆಲವು ರಾಜಕಾರಣಿಗಳು ದುಡ್ಡು ಕೊಟ್ಟು ಕೆಲವು ಪೇಜ್‍ಗಳನ್ನು ಖರೀದಿಸಿ ನಂತರ ಅವರ ಹೆಸರಾಗಿ ಮಾರ್ಪಡಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಮತ್ತೆ ಕೆಲವು ರಾಜಕಾರಣಿಗಳು ಸಾಕಷ್ಟು ದುಡ್ಡು ಖರ್ಚು ಮಾಡಿ ತಮ್ಮ ಪೇಜ್ ಅನ್ನು ಪ್ರಮೋಷನ್ ಮಾಡಿಸಿರುತ್ತಾರೆ. ಹಾಗೆಯೇ ಟ್ವಿಟ್ಟರ್‍ನಲ್ಲಿ ನರೇಂದ್ರ ಮೋದಿಯವರನ್ನು ಫಾಲೋ ಮಾಡುತ್ತಿರುವವರಲ್ಲಿ ಶೇ.60 ರಷ್ಟ್ಟು ಫೇಕ್ ಅಕೌಂಟ್‍ಗಳೇ ಇವೆ ನ್ಯೂಇಂಡಿಯನ್ ಎಕ್ಸ್‍ಪ್ರೆಸ್, ಡೈಲಿಯೊ, ಎಸ್.ಬಿ.ಎಸ್ ಮುಂತಾದ ನಿಯತಕಾಲಿಕಗಳು ವರದಿ ಮಾಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ”: ಟಿಎಂಸಿ ಬಂಡುಕೋರರಿಗೆ ಮಹುವಾ ಮೊಯಿತ್ರಾ ನೇರ ಸವಾಲು

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ನೀಡಲು ಮುಂದಾಗಿರುವ ಸ್ವಪಕ್ಷದ ಬಂಡಾಯ ಸಂಸದರ ವಿರುದ್ಧ ಟಿಎಂಸಿ ಸಂಸದೆ...

ಪಶ್ಚಿಮ ಬಂಗಾಳದ ಸೋಲಿನ ಬಳಿಕ ‘ಇಂಡಿಯಾದ ಆಸರೆ’ ಬಯಸಿದ ಮಮತಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ‘ಇಂಡಿಯಾ’ (INDIA) ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಏಕೆ? ದೀರ್ಘಕಾಲದವರೆಗೆ...

ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಡಿಲೀಟ್‌ ಆದವರಿಗೆ ಪಡಿತರ ಪ್ರಯೋಜನಗಳಿಲ್ಲ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರಿಗೆ ಈಗ ಎರಡು ಹೊಡೆತ ಎದುರಾಗಿದೆ. ರಾಜ್ಯ ಸರ್ಕಾರವು ಈಗ ಅವರ ಪಡಿತರ ಚೀಟಿಗಳನ್ನು ಸಹ ನಿಷ್ಕ್ರಿಯಗೊಳಿಸಲು...

ಇಂಡಿಯಾ ಮೈತ್ರಿಕೂಟದ ಸಭೆ: ಎಸ್‌ಐಆರ್, ಬೆಲೆ ಏರಿಕೆ, ನಿರುದ್ಯೋಗದ ಕುರಿತು ಖರ್ಗೆ ಕಳವಳ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ವಿದೇಶಾಂಗ ನೀತಿ ರಂಗಗಳಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಎದುರಿಸಲು ತನ್ನ ಒಗ್ಗಟ್ಟನ್ನು ಬಲಪಡಿಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ (ಜೂ.8) ಇಂಡಿಯಾ ಮೈತ್ರಿಕೂಟಕ್ಕೆ ಕರೆ...

ಟೆಹ್ರಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಕ್ಷಿಪಣಿ ಹಾರಿಸಿದ ಇರಾನ್

ಟೆಹ್ರಾನ್, ತಬ್ರಿಜ್ ಮತ್ತು ಇಸ್ಫಹಾನ್‌ ಮೇಲಿನ ದಾಲಿಗಳಿಗೆ ಪ್ರತೀಕಾರವಾಗಿ, ಇರಾನ್ ಸೇನೆಯು ಇಸ್ರೇಲ್‌ ಮೇಲೆ ಎರಡನೇ ತರಂಗದ ಕ್ಷಿಪಣಿಗಳನ್ನು ಹಾರಿಸಿದೆ. ದೇಶಾದ್ಯಂತ ಸೈರನ್‌ಗಳು ಮೊಳಗುತ್ತಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ ಎಂದು ಅಂತರಾಷ್ಟ್ರೀಯ...

ಭಾರತದಲ್ಲಿ ಬೆಂಕಿ ದುರಂತ ‘ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು’ NCRB ವರದಿ

ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ಹೋಟೆಲ್‌ ಒಂದರಲ್ಲಿ ನಡೆದ ಭೀಕರ ಬೆಂಕಿ ದುರಂತ (ಇದರಲ್ಲಿ 22 ಜನರು ಸಜೀವ ದಹನವಾಗಿದ್ದರು) ಇಡೀ ದೇಶವನ್ನೇ ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ವಾಣಿಜ್ಯ ಮತ್ತು...

ಈದ್ ಹಬ್ಬದ ವೇಳೆ ಮುಸ್ಲೀಮರನ್ನು ಗುರಿಯಾಗಿಸಿ 46 ದ್ವೇಷ ಅಪರಾಧಗಳು, ಮೂವರ ಹತ್ಯೆ: APCR ಆತಂಕಕಾರಿ ವರದಿ

ಇತ್ತೀಚಿನ ಬಕ್ರೀದ್ (ಈದ್ ಉಲ್-ಅಧಾ) ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಕೋಮು ಕಿರುಕುಳ, ದ್ವೇಷ ಭಾಷಣ ಹಾಗೂ ಹಿಂಸಾಚಾರದ ಘಟನೆಗಳ ಕುರಿತು 'ನಾಗರಿಕ ಹಕ್ಕುಗಳ ರಕ್ಷಣಾ ಸಂಘ'...

ಗ್ರೇಟ್ ನಿಕೋಬಾರ್ : ಕಾರ್ಪೊರೇಟ್ ಹಿತಾಸಕ್ತಿಗೆ ಬಲಿಯಾಗುತ್ತಿರುವ ಪರಿಸರ, ಆದಿವಾಸಿಗಳ ಅಸ್ತಿತ್ವ

ಬಂಗಾಳಕೊಲ್ಲಿಯಲ್ಲಿರುವ ಭಾರತದ ದಕ್ಷಿಣ ತುದಿಯ ದ್ವೀಪದ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 72 ಸಾವಿರದಿಂದ 81 ಸಾವಿರ ಕೋಟಿ ರೂಪಾಯಿ ವೆಚ್ಚದ ’ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ’ಯನ್ನು ರೂಪಿಸಿದೆ.ಈ...

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...