Homeಪ್ರಪಂಚಬ್ರೆಜಿಲ್ ಆಳುವ ವರ್ಗ ಮತ್ತು ಪ್ರಜಾತಂತ್ರ

ಬ್ರೆಜಿಲ್ ಆಳುವ ವರ್ಗ ಮತ್ತು ಪ್ರಜಾತಂತ್ರ

- Advertisement -
- Advertisement -

ಭರತ್ ಹೆಬ್ಬಾಳ್ |

2012ರ ಸೆಪ್ಟೆಂಬರ್ ತಿಂಗಳಲ್ಲಿ ‘ಭ್ರಷ್ಟಾಚಾರದ ವಿರುದ್ದ ಭಾರತ’ ಹೋರಾಟದ ಮುಂಚೂಣಿಯಲ್ಲಿದ್ದ ಪ್ರಶಾಂತ್ ಭೂಷಣ್ ಮತ್ತು ಅರವಿಂದ್ ಕೇಜ್ರಿವಾಲ್ ಅವರುಗಳು ಕಾಂಗ್ರೆಸ್ ಮತ್ತು ರಾಬರ್ಟ್ ವಾದ್ರಾ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ್ದು ನಿಮಗೆ ನೆನಪಿರಬಹುದು. ಆಗ ವಾದ್ರಾ ಇವರೆಲ್ಲ ‘ಬಾಳೆಹಣ್ಣು ಗಣತಂತ್ರದ ಮಾವಿನ ಪ್ರಜೆಗಳು’ ಎಂದು ಪ್ರತಿಕ್ರಿಯಿಸಿದ್ದರು. ರಾಜಕೀಯ ಶಬ್ದಕೋಶದಲ್ಲಿ ಬನಾನಾ ರಿಪಬ್ಲಿಕ್ (ಬಾಳೆಹಣ್ಣಿನ ಗಣತಂತ್ರ) ಎಂದರೆ ಒಂದು ಸೀಮಿತ ಸಂಪನ್ಮೂಲದ, ಉತ್ಪನ್ನದ ರಫ್ತಿನ (ಬಾಳೆ ಹಣ್ಣು ಅಥವಾ ಅದಿರು) ಮೇಲೆ ಅವಲಂಬಿತವಾಗಿರುವ, ರಾಜಕೀಯವಾಗಿ ಅಸ್ಥಿರವಾದ ದೇಶ ಎಂಬ ಅರ್ಥವನ್ನು ಕೊಡುತ್ತದೆ. ಸಾಮಾನ್ಯವಾಗಿ, ಬಾಳೆಹಣ್ಣಿನ ಗಣರಾಜ್ಯವು ಅತ್ಯಂತ ಶ್ರೇಣೀಕೃತ ಸಾಮಾಜಿಕ ವರ್ಗಗಳ ಸಮಾಜವನ್ನು ಹೊಂದಿರುತ್ತದೆ (ಒಂದು ಕಡೆ ದೊಡ್ಡ ಬಡ ಕಾರ್ಮಿಕ ವರ್ಗ, ಮತ್ತೊಂದು ಕಡೆ ಉದ್ದಿಮೆಪತಿಗಳು, ರಾಜಕಾರಣ ಮತ್ತು ಸೈನ್ಯದ ಗಣ್ಯರನ್ನು ಹೊಂದಿರುವ ಆಳುವ-ವರ್ಗದ ಪ್ರಭುತ್ವ).

ಈ ಪದವನ್ನು ಮೊದಲ ಬಾರಿಗೆ 1901 ರಲ್ಲಿ ಓ ಹೆನ್ರಿ ಎಂಬ ಅಮೆರಿಕಾದ ಬರಹಗಾರ ದಕ್ಷಿಣ ಅಮೆರಿಕಾದ ದೇಶಗಳನ್ನು ತನ್ನ ವಸಾಹುತುಶಾಹಿ ವಿಸ್ತರಣೆಯಿಂದ ಕೊಳ್ಳೆ ಹೊಡೆಯುತ್ತಿದ್ದ ಮತ್ತು ಲಾಭಕ್ಕಾಗಿ ದೇಶಗಳನ್ನೇ ಆಸ್ಥಿರಗೊಳಿಸುತ್ತಿದ್ದ ಅಮೆರಿಕಾದ ಯುನೈಟೆಡ್ ಫ್ರೂಟ್ ಕಂಪನಿ ಬಗ್ಗೆ ಬರೆಯುತ್ತಾ ಬಳಸುತ್ತಾರೆ. ಅಮೆರಿಕಾದ ಸಾಮ್ರಾಜ್ಯಶಾಹಿ ವಿಸ್ತರಣೆಗಾಗಿ ಈ ಇಂತಹ ಕಂಪನಿಗಳು ಮಾಡಿದ ಹತ್ಯಾಕಾಂಡಗಳು ಬಹಳಷ್ಟಿವೆ. ದಕ್ಷಿಣ ಅಮೆರಿಕ ಖಂಡದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಇತಿಹಾಸ ಇದನ್ನೇ ಸೂಚಿಸುತ್ತದೆ.

1964ರಿಂದ 1985ರವರೆಗೂ ಮಿಲಿಟರೀ ಸರ್ವಾಧಿಕಾರದಲ್ಲಿದ್ದ ಬ್ರೆಜಿಲ್ ಕಾನೂನಾತ್ಮಕವಾಗಿ ಗುಲಾಮಗಿರಿ ನಿರ್ಮೂಲನೆ ಮಾಡಿದ ಕೊನೆಯ ದೇಶ (1988ರಲ್ಲಿ). ತನ್ನ ದೇಶದಲ್ಲಿ ಅರ್ಧಕ್ಕಿಂತ ಜನಸಂಖ್ಯೆ ಕಪ್ಪು ಜನರಿದ್ದರೂ, ದೃಶ್ಯಮಾಧ್ಯಮದಲ್ಲಿ ಬಹುತೇಕ ಬಿಳಿಯರನ್ನೇ ತೋರಿಸುವ ದೇಶ. ಮೊದಲಿಂದಲೂ ವಸಾಹುತುಶಾಹಿ ಆಳ್ವಿಕೆಯಲ್ಲಿ ಬ್ರೆಜಿಲ್ಲನ್ನು ಬಿಳಿಯಾಗಿಸುವ ನೀತಿಗಳನ್ನು (ಯುರೋಪಿಯನ್ ಜನರನ್ನು ಬ್ರೆಜಿಲ್ ಮತ್ತಿತರ ದೇಶಗಳಿಗೆ ಕರೆತರುವುದು) ಉತ್ತೇಜಿಸಲಾಗಿತ್ತು. ಇಂತಹ ಇತಿಹಾಸದಿಂದಾಗಿ ಈಗಲೂ ಅದು ಅತ್ಯಂತ ವರ್ಣಭೇದ ಅನುಸರಿಸುವ ವ್ಯವಸ್ಥೆಯನ್ನು ಹೊಂದಿದೆ. ದಕ್ಷಿಣ ಭಾಗದಲ್ಲಿರುವ ಪ್ರದೇಶಗಳು ಬಹುತೇಕ ಬಿಳಿಯರಿಂದ ಕೂಡಿದೆ.

70ರ ದಶಕದಿಂದ ಪ್ರಪಂಚದಾದ್ಯಂತ ಆವರಿಸಿಕೊಂಡಿರುವ ನವಉದಾರೀಕರಣದ ಮೂಲ ಹುಡುಕುತ್ತಾ ಹೋದರೆ ಎಪ್ಪತ್ತರ ದಶಕದಲ್ಲಿ ಲ್ಯಾಟಿನ್ ಅಮೆರಿಕದಲ್ಲಾದ ರಾಜಕೀಯ ಬೆಳವಣಿಗೆಗಳ ಆದಿಯು ಸಿಗುತ್ತದೆ. ಮಿಲಿಟರಿ ಸರ್ವಾಧಿಕಾರ ಹೋಗಿ ಪ್ರಜಾಪ್ರಭುತ್ವ ಬಂದರೂ ಕೂಡ, ಸರ್ವಾಧಿಕಾರದ ಪರಂಪರೆಯು ಹಳೆಯ ದೊಡ್ಡ ದೊಡ್ಡ ಭೂಮಾಲೀಕರು, ಸಾರ್ವಜನಿಕ ಸಂಸ್ಥೆಗಳಲ್ಲಿನ ದೊಡ್ಡ ದೊಡ್ಡ ಕುಳಗಳು, ಮಿಲಿಟರಿಯ ಪ್ರಭಾವಗಳು ರಾಜಕೀಯ ಸಂಸ್ಕೃತಿಯಲ್ಲಿ ಆವರಿಸಿಕೊಂಡಿತ್ತು. ಇದರ ಜೊತೆಗೆ ಬ್ರೆಜಿಲ್‍ನ ಮಾಧ್ಯಮ ಕೂಡ ಯಾವಾಗಲೂ ಸಿರಿವಂತರ ಪರವಾಗಿತ್ತು. ಇಂದಿಗೂ ಬಹುತೇಕ ಬ್ರೆಜಿಲ್ ಮಾಧ್ಯಮ ಖಾಸಗಿ ಹಿಡಿತದಲ್ಲಿದೆ.

1965ರ ಮಿಲಿಟರಿ ಆಡಳಿತದಲ್ಲಿ ಹುಟ್ಟಿಕೊಂಡ ಗ್ಲೋಬೋ ಎನ್ನುವ ಒಂದು ಮಾಧ್ಯಮ ಸಂಸ್ಥೆಯು ಅಲ್ಲಿನ ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆ. ಇದು ಆ ದೇಶದ ಅತ್ಯಂತ ದೊಡ್ಡ ಶ್ರೀಮಂತ ಮನೆತನದ ಮಾಲೀಕತ್ವದಲ್ಲಿದೆ. ದೇಶದ ಅರ್ಧದಷ್ಟು ಜನ ಗ್ಲೋಬೋ ವೀಕ್ಷಿಸುತ್ತಾರೆ (9 ಕೋಟಿಗೂ ಮೇಲೂ). ಭಾರತದ ಮಾಧ್ಯಮಗಳ ಅರ್ನಾಬ್ ಗೋಸ್ವಾಮಿ, ಸುಧಿರ್ ಚೌದರೀ, ರಜತ್ ಶರ್ಮ, ರೋಹಿತ್ ಸರ್ದಾನರಂಥ ಪತ್ರಕರ್ತರು ಸರ್ವಾಧಿಕಾರದ ತುತ್ತೂರಿಯನ್ನು ಇನ್ನೂ ಚೆನ್ನಾಗಿ ಹೇಗೆ ಊದಬೇಕು ಎಂಬ ಪಾಠವನ್ನು ಇವರಿಂದ ಕಲಿಯಬಹುದು ಎಂದರೆ, ಅದು ಇನ್ನೂ ಹೇಗಿರಬೇಕು ಊಹಿಸಿಕೊಳ್ಳಿ. ಬ್ರೆಜಿಲ್‍ನ ಎರಡನೇ ಅತಿದೊಡ್ಡ ಮಾಧ್ಯಮ ಸಂಸ್ಥೆ ‘ಬಾಂಡೆರಸ್ಟೆಸ್’ ಧಾರ್ಮಿಕ ಸಂಸ್ಥೆಯ ಒಡೆತನದಲ್ಲಿದೆ. ಬ್ರೆಜಿಲ್ ದೇಶ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಕ್ರೈಸ್ತ ಧರ್ಮೀಯರಿರುವ ಕ್ಯಾಥೊಲಿಕ್ ದೇಶ. ಮಿಲಿಟರಿ ಜೊತೆ ಇವೂ ಕೂಡ ಬ್ರೆಜಿಲ್‍ನ ಸ್ಥಾಪಿತ ಹಿತಾಸಕ್ತಿ ಕಾಯುವ ಸಾಂಪ್ರದಾಯಿಕ ಪ್ರತಿಗಾಮಿ ಶಕ್ತಿಗಳು.

ಇವೆಲ್ಲವನ್ನೂ ಃಃಃ ಲಾಬಿ ಎಂದು ಕರೆಯುತ್ತಾರೆ. ಈ ಲಾಬಿಗೆ ಬ್ರೆಜಿಲ್ ಕಾಂಗ್ರೆಸ್ ಮತ್ತು ಸೆನೆಟ್ನಲ್ಲಿ 40% ಸಂಖ್ಯಾಬಲವಿದೆ. ಮೊದಲನೆಯದು ಬೀಫ್ ಲಾಬಿ, ಇದರಲ್ಲಿ ಸಾವಿರಾರು ಅಥವಾ ಲಕ್ಷ ಲಕ್ಷ ಎಕರೆಗಟ್ಟಲೆ ಹೊಂದಿರುವ ಭೂಮಾಲೀಕರು ಬರುತ್ತಾರೆ. ಇವರು ದನದ ಮಾಂಸ ರಫ್ತು ಮಾಡುವ ವ್ಯವಹಾರದ ಜೊತೆಗೆ ಸೋಯಾ ಬೀನ್, ಕಬ್ಬು(ಸಕ್ಕರೆ), ಆರೆಂಜ್, ಬಾಳೆಹಣ್ಣು, ಕಾಫೀ ರಫ್ತು ಮಾಡುವ ಗುಂಪಾಗಿದ್ದಾರೆ. ಚುನಾವಣೆಗೂ ಮುಂಚೆ ಬೊಲ್ಸಾನರೋ ಅಮೆಜಾನ್ ಕಾಡುಗಳನ್ನು ಕಡಿದು ಈ ವ್ಯವಹಾರದ ವಿಸ್ತರಣೆ ಮಾಡುವುದಕ್ಕೆ ಸಂಪೂರ್ಣ ಬೆಂಬಲ ಕೊಡುವುದಾಗಿ ಹೇಳಿದ್ದ. ಇನ್ನು ಎರಡನೆಯ ಬಿ, ಬುಲೆಟ್ ಲಾಬಿಯಲ್ಲಿ ಸ್ವತಹಃ ಬೊಲ್ಸಾನರೋ ದೊಡ್ಡ ನಾಯಕ. ಇವನ ಪ್ರಕಾರ ಇವನು ಕೂಡ ಪಾಲ್ಗೊಂಡಿದ್ದ ಮಿಲಿಟರಿ ಸರ್ವಾಧಿಕಾರದಲ್ಲಿ ಚಿತ್ರಹಿಂಸೆಯ ಜೊತೆಗೆ ಕಡಿಮೆ ಜನರನ್ನು ಸಾಯಿಸಿದ್ದು ದೊಡ್ಡ ತಪ್ಪು. ಇನ್ನೂ 30 ಸಾವಿರ ಜನರನ್ನು ಸಾಯಿಸಬೇಕಿತ್ತೆಂದು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದ. ಇವನ ಜೊತೆ ಇನ್ನೂ ಹಲವು ಮಿಲಿಟರಿ ಅಧಿಕಾರಿಗಳು ಕಾರ್ಮಿಕ ಪಕ್ಷದ ಅಧಿಕಾರದಲ್ಲಿ ಸ್ಥಾಪಿಸಿದ್ದ ‘ಸರ್ವಾಧಿಕಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಾದ ಸತ್ಯ ಆಯೋಗ’ದ ಮುಂದೆ ವಿಚಾರಣೆಗಳನ್ನು ಎದುರುಸುತ್ತಿದ್ದಾರೆ. ಮೂರನೆಯದು ಬೈಬಲ್ ಲಾಬಿ, ಇದು ಕೂಡ ಧಾರ್ಮಿಕ ಮೂಲಭೂತವಾದ ಪ್ರತಿಪಾದಿಸುವ ಒಂದು ಗುಂಪು.

ಇವರೆಲ್ಲರ ಜೊತೆಗೆ ಅಮೆರಿಕ ಬೇಹುಗಾರಿಕೆ ಸಂಸ್ಥೆಗಳ ಸಹಭಾಗಿತ್ವ ಮತ್ತು ಬ್ರೆಜಿಲ್ ನ್ಯಾಯಾಂಗ ವ್ಯವಸ್ಥೆ ಸೇರಿ ಎರಡನೇ ಬಾರಿಗೆ ನ್ಯಾಯಯುತವಾಗಿ ಚುನಾಯಿರಾತಾಗಿದ್ದ ದಿಲ್ಮ ರೌಸೆಫ್‍ರನ್ನು ಒಂದು ಹುಸಿ ಆರೋಪದಡಿ ಅಧಿಕಾರದಿಂದ ಹೊರ ಹಾಕುತ್ತಾರೆ. ಇವರ ವಿರುದ್ದ ದೋಷಾರೋಪ ಮಾಡಿದ್ದ 4 ಜನರಲ್ಲಿ ನಾಲ್ಕು ಜನವೂ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ. ದಿಲ್ಮ ಆಡಳಿತದಲ್ಲಿ ಉಪರಾಷ್ಟ್ರಪತಿಯಾಗಿದ್ದ ಮಿಚಿಯಾಲ್ ತೆಮೆರ್ ತಾವು ಕೂಡ ದಿಲ್ಮರನ್ನು ಕೆಳಗಿಳಿಸುವ ಷಡ್ಯಂತ್ರದ ಪಾತ್ರಧಾರಿಯೂ ಆಗಿದ್ದರು ಮತ್ತು ಸ್ವತಃ ಅವರೇ ಭ್ರಷ್ಟಾಚಾರದ ಆರೋಪವನ್ನು ಎದುರಿಸಿ ಅಧಿಕಾರದಿಂದ ಕೆಳೆಗಿಳಿಯಬೇಕಾಗುತ್ತದೆ.

ನಂತರದ ಅಭಿಪ್ರಾಯ ಸಮೀಕ್ಷೆಯಲ್ಲಿ ಎಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದ ಲೂಲಾರನ್ನು ಕ್ಷುಲ್ಲಕ ಕಾರಣಗಳನ್ನು ಮುಂದೆ ಮಾಡಿ, ನ್ಯಾಯಾಂಗ ವ್ಯವಸ್ಥೆಯನ್ನೂ ದುರ್ಬಳಕೆ ಮಾಡಿಕೊಂಡು ಜೈಲಿಗಟ್ಟುತ್ತಾರೆ. (ಬ್ರೆಜಿಲ್ ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಸತತ ಎರಡು ಬಾರಿಗೂ ಹೆಚ್ಚು ಚುನಾವಣೆಗೆ ನಿಲ್ಲುವ ಹಾಗಿಲ್ಲ, ಹಾಗಾಗಿ 2010ರ ನಂತರ ಮತ್ತೆ 2018ರಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು). ಈ ತೀರ್ಪಿಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿ ತನ್ನ ಮಾನವ ಹಕ್ಕುಗಳ ಸಮಿತಿಯ ವತಿಯಿಂದ ಲೂಲಾರನ್ನು ಚುನಾವಣೆಯಿಂದ ಅನರ್ಹಗೊಳಿಸಬಾರದು ಮತ್ತು ವಿಚಾರಣೆ ನಡೆಯುವವರೆಗೂ ಅವರು ಚುನಾವಣೆಯಲ್ಲಿ ನಿಲ್ಲಬಹುದೆಂದು ಹೇಳಿಕೆ ನೀಡಿತ್ತು. ಈ ಚುನಾವಣೆ ಎಷ್ಟು ಆಳುವ ವರ್ಗದ ಪರವಾಗಿತ್ತೆಂದರೆ ತಮ್ಮ ಅಭ್ಯರ್ಥಿ ಗೆಲ್ಲಲು, ಇವರ ವಿರುದ್ಧ ಇದ್ದ ಗೆಲ್ಲುವ ಅಭ್ಯರ್ಥಿಯನ್ನು ಹೇಗಾದರೂ ಮುಗಿಸಬೇಕಿತ್ತು. ಬ್ರೆಜಿಲ್ ಚುನಾವಣೆಯಲ್ಲಿ ಆದದ್ದು ಅದೇ. ಇಲ್ಲಿ ಭಾರತದಲ್ಲಿ ಸರ್ವಾಧಿಕಾರದ ಹೆಜ್ಜೆಗಳು ದೊಡ್ಡ ದೊಡ್ಡದಾಗುತ್ತಿದ್ದಂತೆ ಇಲ್ಲೂ ಕೂಡ ಪ್ರತಿಪಕ್ಷದ ನಾಯಕರುಗಳನ್ನು ಜೈಲಿಗಟ್ಟಿದರೂ ಅದು ಆಶ್ಚರ್ಯವಲ್ಲ. ಈಗಾಗಲೇ ಇದನ್ನು ಕೆಲವು ನಾಯಕರುಗಳ ಮೇಲೆ ಅದನ್ನು ಉಪಯೋಗಿಸುತ್ತಿದ್ದಾರೆ.

(ಬೊಲ್ಸಾನರೋ ಪ್ರಚಾರ, ಅದರ ಹಿಂದಿನ ಶಕ್ತಿಗಳು, ಮುಂಬರುವ ಚುನಾವಣೆಗಳ ಬಗ್ಗೆ ಕಡೆಯ ಕಂತು ಮುಂದಿನ ಸಂಚಿಕೆಯಲ್ಲಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...