Homeಪ್ರಪಂಚಬ್ರೆಜಿಲ್ ಆಳುವ ವರ್ಗ ಮತ್ತು ಪ್ರಜಾತಂತ್ರ

ಬ್ರೆಜಿಲ್ ಆಳುವ ವರ್ಗ ಮತ್ತು ಪ್ರಜಾತಂತ್ರ

- Advertisement -
- Advertisement -

ಭರತ್ ಹೆಬ್ಬಾಳ್ |

2012ರ ಸೆಪ್ಟೆಂಬರ್ ತಿಂಗಳಲ್ಲಿ ‘ಭ್ರಷ್ಟಾಚಾರದ ವಿರುದ್ದ ಭಾರತ’ ಹೋರಾಟದ ಮುಂಚೂಣಿಯಲ್ಲಿದ್ದ ಪ್ರಶಾಂತ್ ಭೂಷಣ್ ಮತ್ತು ಅರವಿಂದ್ ಕೇಜ್ರಿವಾಲ್ ಅವರುಗಳು ಕಾಂಗ್ರೆಸ್ ಮತ್ತು ರಾಬರ್ಟ್ ವಾದ್ರಾ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ್ದು ನಿಮಗೆ ನೆನಪಿರಬಹುದು. ಆಗ ವಾದ್ರಾ ಇವರೆಲ್ಲ ‘ಬಾಳೆಹಣ್ಣು ಗಣತಂತ್ರದ ಮಾವಿನ ಪ್ರಜೆಗಳು’ ಎಂದು ಪ್ರತಿಕ್ರಿಯಿಸಿದ್ದರು. ರಾಜಕೀಯ ಶಬ್ದಕೋಶದಲ್ಲಿ ಬನಾನಾ ರಿಪಬ್ಲಿಕ್ (ಬಾಳೆಹಣ್ಣಿನ ಗಣತಂತ್ರ) ಎಂದರೆ ಒಂದು ಸೀಮಿತ ಸಂಪನ್ಮೂಲದ, ಉತ್ಪನ್ನದ ರಫ್ತಿನ (ಬಾಳೆ ಹಣ್ಣು ಅಥವಾ ಅದಿರು) ಮೇಲೆ ಅವಲಂಬಿತವಾಗಿರುವ, ರಾಜಕೀಯವಾಗಿ ಅಸ್ಥಿರವಾದ ದೇಶ ಎಂಬ ಅರ್ಥವನ್ನು ಕೊಡುತ್ತದೆ. ಸಾಮಾನ್ಯವಾಗಿ, ಬಾಳೆಹಣ್ಣಿನ ಗಣರಾಜ್ಯವು ಅತ್ಯಂತ ಶ್ರೇಣೀಕೃತ ಸಾಮಾಜಿಕ ವರ್ಗಗಳ ಸಮಾಜವನ್ನು ಹೊಂದಿರುತ್ತದೆ (ಒಂದು ಕಡೆ ದೊಡ್ಡ ಬಡ ಕಾರ್ಮಿಕ ವರ್ಗ, ಮತ್ತೊಂದು ಕಡೆ ಉದ್ದಿಮೆಪತಿಗಳು, ರಾಜಕಾರಣ ಮತ್ತು ಸೈನ್ಯದ ಗಣ್ಯರನ್ನು ಹೊಂದಿರುವ ಆಳುವ-ವರ್ಗದ ಪ್ರಭುತ್ವ).

ಈ ಪದವನ್ನು ಮೊದಲ ಬಾರಿಗೆ 1901 ರಲ್ಲಿ ಓ ಹೆನ್ರಿ ಎಂಬ ಅಮೆರಿಕಾದ ಬರಹಗಾರ ದಕ್ಷಿಣ ಅಮೆರಿಕಾದ ದೇಶಗಳನ್ನು ತನ್ನ ವಸಾಹುತುಶಾಹಿ ವಿಸ್ತರಣೆಯಿಂದ ಕೊಳ್ಳೆ ಹೊಡೆಯುತ್ತಿದ್ದ ಮತ್ತು ಲಾಭಕ್ಕಾಗಿ ದೇಶಗಳನ್ನೇ ಆಸ್ಥಿರಗೊಳಿಸುತ್ತಿದ್ದ ಅಮೆರಿಕಾದ ಯುನೈಟೆಡ್ ಫ್ರೂಟ್ ಕಂಪನಿ ಬಗ್ಗೆ ಬರೆಯುತ್ತಾ ಬಳಸುತ್ತಾರೆ. ಅಮೆರಿಕಾದ ಸಾಮ್ರಾಜ್ಯಶಾಹಿ ವಿಸ್ತರಣೆಗಾಗಿ ಈ ಇಂತಹ ಕಂಪನಿಗಳು ಮಾಡಿದ ಹತ್ಯಾಕಾಂಡಗಳು ಬಹಳಷ್ಟಿವೆ. ದಕ್ಷಿಣ ಅಮೆರಿಕ ಖಂಡದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಇತಿಹಾಸ ಇದನ್ನೇ ಸೂಚಿಸುತ್ತದೆ.

1964ರಿಂದ 1985ರವರೆಗೂ ಮಿಲಿಟರೀ ಸರ್ವಾಧಿಕಾರದಲ್ಲಿದ್ದ ಬ್ರೆಜಿಲ್ ಕಾನೂನಾತ್ಮಕವಾಗಿ ಗುಲಾಮಗಿರಿ ನಿರ್ಮೂಲನೆ ಮಾಡಿದ ಕೊನೆಯ ದೇಶ (1988ರಲ್ಲಿ). ತನ್ನ ದೇಶದಲ್ಲಿ ಅರ್ಧಕ್ಕಿಂತ ಜನಸಂಖ್ಯೆ ಕಪ್ಪು ಜನರಿದ್ದರೂ, ದೃಶ್ಯಮಾಧ್ಯಮದಲ್ಲಿ ಬಹುತೇಕ ಬಿಳಿಯರನ್ನೇ ತೋರಿಸುವ ದೇಶ. ಮೊದಲಿಂದಲೂ ವಸಾಹುತುಶಾಹಿ ಆಳ್ವಿಕೆಯಲ್ಲಿ ಬ್ರೆಜಿಲ್ಲನ್ನು ಬಿಳಿಯಾಗಿಸುವ ನೀತಿಗಳನ್ನು (ಯುರೋಪಿಯನ್ ಜನರನ್ನು ಬ್ರೆಜಿಲ್ ಮತ್ತಿತರ ದೇಶಗಳಿಗೆ ಕರೆತರುವುದು) ಉತ್ತೇಜಿಸಲಾಗಿತ್ತು. ಇಂತಹ ಇತಿಹಾಸದಿಂದಾಗಿ ಈಗಲೂ ಅದು ಅತ್ಯಂತ ವರ್ಣಭೇದ ಅನುಸರಿಸುವ ವ್ಯವಸ್ಥೆಯನ್ನು ಹೊಂದಿದೆ. ದಕ್ಷಿಣ ಭಾಗದಲ್ಲಿರುವ ಪ್ರದೇಶಗಳು ಬಹುತೇಕ ಬಿಳಿಯರಿಂದ ಕೂಡಿದೆ.

70ರ ದಶಕದಿಂದ ಪ್ರಪಂಚದಾದ್ಯಂತ ಆವರಿಸಿಕೊಂಡಿರುವ ನವಉದಾರೀಕರಣದ ಮೂಲ ಹುಡುಕುತ್ತಾ ಹೋದರೆ ಎಪ್ಪತ್ತರ ದಶಕದಲ್ಲಿ ಲ್ಯಾಟಿನ್ ಅಮೆರಿಕದಲ್ಲಾದ ರಾಜಕೀಯ ಬೆಳವಣಿಗೆಗಳ ಆದಿಯು ಸಿಗುತ್ತದೆ. ಮಿಲಿಟರಿ ಸರ್ವಾಧಿಕಾರ ಹೋಗಿ ಪ್ರಜಾಪ್ರಭುತ್ವ ಬಂದರೂ ಕೂಡ, ಸರ್ವಾಧಿಕಾರದ ಪರಂಪರೆಯು ಹಳೆಯ ದೊಡ್ಡ ದೊಡ್ಡ ಭೂಮಾಲೀಕರು, ಸಾರ್ವಜನಿಕ ಸಂಸ್ಥೆಗಳಲ್ಲಿನ ದೊಡ್ಡ ದೊಡ್ಡ ಕುಳಗಳು, ಮಿಲಿಟರಿಯ ಪ್ರಭಾವಗಳು ರಾಜಕೀಯ ಸಂಸ್ಕೃತಿಯಲ್ಲಿ ಆವರಿಸಿಕೊಂಡಿತ್ತು. ಇದರ ಜೊತೆಗೆ ಬ್ರೆಜಿಲ್‍ನ ಮಾಧ್ಯಮ ಕೂಡ ಯಾವಾಗಲೂ ಸಿರಿವಂತರ ಪರವಾಗಿತ್ತು. ಇಂದಿಗೂ ಬಹುತೇಕ ಬ್ರೆಜಿಲ್ ಮಾಧ್ಯಮ ಖಾಸಗಿ ಹಿಡಿತದಲ್ಲಿದೆ.

1965ರ ಮಿಲಿಟರಿ ಆಡಳಿತದಲ್ಲಿ ಹುಟ್ಟಿಕೊಂಡ ಗ್ಲೋಬೋ ಎನ್ನುವ ಒಂದು ಮಾಧ್ಯಮ ಸಂಸ್ಥೆಯು ಅಲ್ಲಿನ ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆ. ಇದು ಆ ದೇಶದ ಅತ್ಯಂತ ದೊಡ್ಡ ಶ್ರೀಮಂತ ಮನೆತನದ ಮಾಲೀಕತ್ವದಲ್ಲಿದೆ. ದೇಶದ ಅರ್ಧದಷ್ಟು ಜನ ಗ್ಲೋಬೋ ವೀಕ್ಷಿಸುತ್ತಾರೆ (9 ಕೋಟಿಗೂ ಮೇಲೂ). ಭಾರತದ ಮಾಧ್ಯಮಗಳ ಅರ್ನಾಬ್ ಗೋಸ್ವಾಮಿ, ಸುಧಿರ್ ಚೌದರೀ, ರಜತ್ ಶರ್ಮ, ರೋಹಿತ್ ಸರ್ದಾನರಂಥ ಪತ್ರಕರ್ತರು ಸರ್ವಾಧಿಕಾರದ ತುತ್ತೂರಿಯನ್ನು ಇನ್ನೂ ಚೆನ್ನಾಗಿ ಹೇಗೆ ಊದಬೇಕು ಎಂಬ ಪಾಠವನ್ನು ಇವರಿಂದ ಕಲಿಯಬಹುದು ಎಂದರೆ, ಅದು ಇನ್ನೂ ಹೇಗಿರಬೇಕು ಊಹಿಸಿಕೊಳ್ಳಿ. ಬ್ರೆಜಿಲ್‍ನ ಎರಡನೇ ಅತಿದೊಡ್ಡ ಮಾಧ್ಯಮ ಸಂಸ್ಥೆ ‘ಬಾಂಡೆರಸ್ಟೆಸ್’ ಧಾರ್ಮಿಕ ಸಂಸ್ಥೆಯ ಒಡೆತನದಲ್ಲಿದೆ. ಬ್ರೆಜಿಲ್ ದೇಶ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಕ್ರೈಸ್ತ ಧರ್ಮೀಯರಿರುವ ಕ್ಯಾಥೊಲಿಕ್ ದೇಶ. ಮಿಲಿಟರಿ ಜೊತೆ ಇವೂ ಕೂಡ ಬ್ರೆಜಿಲ್‍ನ ಸ್ಥಾಪಿತ ಹಿತಾಸಕ್ತಿ ಕಾಯುವ ಸಾಂಪ್ರದಾಯಿಕ ಪ್ರತಿಗಾಮಿ ಶಕ್ತಿಗಳು.

ಇವೆಲ್ಲವನ್ನೂ ಃಃಃ ಲಾಬಿ ಎಂದು ಕರೆಯುತ್ತಾರೆ. ಈ ಲಾಬಿಗೆ ಬ್ರೆಜಿಲ್ ಕಾಂಗ್ರೆಸ್ ಮತ್ತು ಸೆನೆಟ್ನಲ್ಲಿ 40% ಸಂಖ್ಯಾಬಲವಿದೆ. ಮೊದಲನೆಯದು ಬೀಫ್ ಲಾಬಿ, ಇದರಲ್ಲಿ ಸಾವಿರಾರು ಅಥವಾ ಲಕ್ಷ ಲಕ್ಷ ಎಕರೆಗಟ್ಟಲೆ ಹೊಂದಿರುವ ಭೂಮಾಲೀಕರು ಬರುತ್ತಾರೆ. ಇವರು ದನದ ಮಾಂಸ ರಫ್ತು ಮಾಡುವ ವ್ಯವಹಾರದ ಜೊತೆಗೆ ಸೋಯಾ ಬೀನ್, ಕಬ್ಬು(ಸಕ್ಕರೆ), ಆರೆಂಜ್, ಬಾಳೆಹಣ್ಣು, ಕಾಫೀ ರಫ್ತು ಮಾಡುವ ಗುಂಪಾಗಿದ್ದಾರೆ. ಚುನಾವಣೆಗೂ ಮುಂಚೆ ಬೊಲ್ಸಾನರೋ ಅಮೆಜಾನ್ ಕಾಡುಗಳನ್ನು ಕಡಿದು ಈ ವ್ಯವಹಾರದ ವಿಸ್ತರಣೆ ಮಾಡುವುದಕ್ಕೆ ಸಂಪೂರ್ಣ ಬೆಂಬಲ ಕೊಡುವುದಾಗಿ ಹೇಳಿದ್ದ. ಇನ್ನು ಎರಡನೆಯ ಬಿ, ಬುಲೆಟ್ ಲಾಬಿಯಲ್ಲಿ ಸ್ವತಹಃ ಬೊಲ್ಸಾನರೋ ದೊಡ್ಡ ನಾಯಕ. ಇವನ ಪ್ರಕಾರ ಇವನು ಕೂಡ ಪಾಲ್ಗೊಂಡಿದ್ದ ಮಿಲಿಟರಿ ಸರ್ವಾಧಿಕಾರದಲ್ಲಿ ಚಿತ್ರಹಿಂಸೆಯ ಜೊತೆಗೆ ಕಡಿಮೆ ಜನರನ್ನು ಸಾಯಿಸಿದ್ದು ದೊಡ್ಡ ತಪ್ಪು. ಇನ್ನೂ 30 ಸಾವಿರ ಜನರನ್ನು ಸಾಯಿಸಬೇಕಿತ್ತೆಂದು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದ. ಇವನ ಜೊತೆ ಇನ್ನೂ ಹಲವು ಮಿಲಿಟರಿ ಅಧಿಕಾರಿಗಳು ಕಾರ್ಮಿಕ ಪಕ್ಷದ ಅಧಿಕಾರದಲ್ಲಿ ಸ್ಥಾಪಿಸಿದ್ದ ‘ಸರ್ವಾಧಿಕಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಾದ ಸತ್ಯ ಆಯೋಗ’ದ ಮುಂದೆ ವಿಚಾರಣೆಗಳನ್ನು ಎದುರುಸುತ್ತಿದ್ದಾರೆ. ಮೂರನೆಯದು ಬೈಬಲ್ ಲಾಬಿ, ಇದು ಕೂಡ ಧಾರ್ಮಿಕ ಮೂಲಭೂತವಾದ ಪ್ರತಿಪಾದಿಸುವ ಒಂದು ಗುಂಪು.

ಇವರೆಲ್ಲರ ಜೊತೆಗೆ ಅಮೆರಿಕ ಬೇಹುಗಾರಿಕೆ ಸಂಸ್ಥೆಗಳ ಸಹಭಾಗಿತ್ವ ಮತ್ತು ಬ್ರೆಜಿಲ್ ನ್ಯಾಯಾಂಗ ವ್ಯವಸ್ಥೆ ಸೇರಿ ಎರಡನೇ ಬಾರಿಗೆ ನ್ಯಾಯಯುತವಾಗಿ ಚುನಾಯಿರಾತಾಗಿದ್ದ ದಿಲ್ಮ ರೌಸೆಫ್‍ರನ್ನು ಒಂದು ಹುಸಿ ಆರೋಪದಡಿ ಅಧಿಕಾರದಿಂದ ಹೊರ ಹಾಕುತ್ತಾರೆ. ಇವರ ವಿರುದ್ದ ದೋಷಾರೋಪ ಮಾಡಿದ್ದ 4 ಜನರಲ್ಲಿ ನಾಲ್ಕು ಜನವೂ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ. ದಿಲ್ಮ ಆಡಳಿತದಲ್ಲಿ ಉಪರಾಷ್ಟ್ರಪತಿಯಾಗಿದ್ದ ಮಿಚಿಯಾಲ್ ತೆಮೆರ್ ತಾವು ಕೂಡ ದಿಲ್ಮರನ್ನು ಕೆಳಗಿಳಿಸುವ ಷಡ್ಯಂತ್ರದ ಪಾತ್ರಧಾರಿಯೂ ಆಗಿದ್ದರು ಮತ್ತು ಸ್ವತಃ ಅವರೇ ಭ್ರಷ್ಟಾಚಾರದ ಆರೋಪವನ್ನು ಎದುರಿಸಿ ಅಧಿಕಾರದಿಂದ ಕೆಳೆಗಿಳಿಯಬೇಕಾಗುತ್ತದೆ.

ನಂತರದ ಅಭಿಪ್ರಾಯ ಸಮೀಕ್ಷೆಯಲ್ಲಿ ಎಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದ ಲೂಲಾರನ್ನು ಕ್ಷುಲ್ಲಕ ಕಾರಣಗಳನ್ನು ಮುಂದೆ ಮಾಡಿ, ನ್ಯಾಯಾಂಗ ವ್ಯವಸ್ಥೆಯನ್ನೂ ದುರ್ಬಳಕೆ ಮಾಡಿಕೊಂಡು ಜೈಲಿಗಟ್ಟುತ್ತಾರೆ. (ಬ್ರೆಜಿಲ್ ಚುನಾವಣೆಗಳಲ್ಲಿ ಒಬ್ಬ ಅಭ್ಯರ್ಥಿ ಸತತ ಎರಡು ಬಾರಿಗೂ ಹೆಚ್ಚು ಚುನಾವಣೆಗೆ ನಿಲ್ಲುವ ಹಾಗಿಲ್ಲ, ಹಾಗಾಗಿ 2010ರ ನಂತರ ಮತ್ತೆ 2018ರಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು). ಈ ತೀರ್ಪಿಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿ ತನ್ನ ಮಾನವ ಹಕ್ಕುಗಳ ಸಮಿತಿಯ ವತಿಯಿಂದ ಲೂಲಾರನ್ನು ಚುನಾವಣೆಯಿಂದ ಅನರ್ಹಗೊಳಿಸಬಾರದು ಮತ್ತು ವಿಚಾರಣೆ ನಡೆಯುವವರೆಗೂ ಅವರು ಚುನಾವಣೆಯಲ್ಲಿ ನಿಲ್ಲಬಹುದೆಂದು ಹೇಳಿಕೆ ನೀಡಿತ್ತು. ಈ ಚುನಾವಣೆ ಎಷ್ಟು ಆಳುವ ವರ್ಗದ ಪರವಾಗಿತ್ತೆಂದರೆ ತಮ್ಮ ಅಭ್ಯರ್ಥಿ ಗೆಲ್ಲಲು, ಇವರ ವಿರುದ್ಧ ಇದ್ದ ಗೆಲ್ಲುವ ಅಭ್ಯರ್ಥಿಯನ್ನು ಹೇಗಾದರೂ ಮುಗಿಸಬೇಕಿತ್ತು. ಬ್ರೆಜಿಲ್ ಚುನಾವಣೆಯಲ್ಲಿ ಆದದ್ದು ಅದೇ. ಇಲ್ಲಿ ಭಾರತದಲ್ಲಿ ಸರ್ವಾಧಿಕಾರದ ಹೆಜ್ಜೆಗಳು ದೊಡ್ಡ ದೊಡ್ಡದಾಗುತ್ತಿದ್ದಂತೆ ಇಲ್ಲೂ ಕೂಡ ಪ್ರತಿಪಕ್ಷದ ನಾಯಕರುಗಳನ್ನು ಜೈಲಿಗಟ್ಟಿದರೂ ಅದು ಆಶ್ಚರ್ಯವಲ್ಲ. ಈಗಾಗಲೇ ಇದನ್ನು ಕೆಲವು ನಾಯಕರುಗಳ ಮೇಲೆ ಅದನ್ನು ಉಪಯೋಗಿಸುತ್ತಿದ್ದಾರೆ.

(ಬೊಲ್ಸಾನರೋ ಪ್ರಚಾರ, ಅದರ ಹಿಂದಿನ ಶಕ್ತಿಗಳು, ಮುಂಬರುವ ಚುನಾವಣೆಗಳ ಬಗ್ಗೆ ಕಡೆಯ ಕಂತು ಮುಂದಿನ ಸಂಚಿಕೆಯಲ್ಲಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...